ಭಾನುವಾರ, ಡಿಸೆಂಬರ್ 28, 2008

ದಾರಿ ತಪ್ಪಿತೆ?

ಕಡಲಹಡಗಲ್ಲಿ ಕುಳಿತು
ನಾಡಗೊಡವೆ ಏತಕೆ
ಪಯಣ ದೂರದೂರಿಗೆಲ್ಲೊ
ಗುರಿಯು ತಪ್ಪಿತೆ?
ಒಂಟಿ ಕಾಲಲಿ ಕುಂಟುವ ಬಯಕೆಯ
ಸೊಂಟ ಮುರಿಯಿತೆ
ನೋವು ಬಿಕ್ಕಳಿಸಿ ನಸುನಗೆಯ
ಮೂಡಿಸಿತೆ
ಸಾವು ಪಕ್ಕದಲಿ ಸಿಕ್ಕಿಬಿಡಲು
ಚಿಂತೆ ಏತಕೆ?

ಶನಿವಾರ, ಡಿಸೆಂಬರ್ 27, 2008

ಹಾಡು ಮತ್ತು ಸಂಗೀತ

ಹಾಡು ಮತ್ತು ಸಂಗೀತ ಒಂದಕ್ಕೊಂದು ಜೊತೆಯಾಗೇ ಬರುವ ನಾವೇ ಕಂಡುಕೊಂಡ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿರುವ ಎರಡು ತೆಲೆಮೆಯ ಸರಕುಗಳು. ಆದರೆ ಇವುಗಳಲ್ಲಿ ಬೇರೆಬೇರೆಯಾಗಿ ಗುರುತಿಸಬಲ್ಲ ಹಲ ಅಂಶಗಳ ಬಗ್ಗೆ ನೋಡೋಣ.
ಹಳೇ ಕಾಲದಿಂದಲೂ ನಮ್ಮಲ್ಲಿ ಹಾಡು ಕಟ್ಟುವುದು, ಕುಣಿಯುವುದು ನಮ್ಮ ನಡಾವಳಿಯ ಒಂದು ಚೂರಾಗಿ ಬಂದಿದೆ. ಇದೇ ಈಗ ಬೆಳೆದು ಜನಪದವೆಂಬ ಹೆಮ್ಮರವಾಗಿ ನಮ್ಮ ಇಂದಿನ ಹಾಡು-ಕುಣಿತಕ್ಕೆ ತಳಪಾಯವಾಗಿ ನಿಂತಿದೆ.

"ಕುರಿತೋದದೆಯಂ ಕಾವ್ಯಪ್ರಯೋಗ ಪರಿಣತಮತಿಗಳ್’ - ಹೀಗೆಂದು ಕವಿರಾಜಮಾರ್ಗಕಾರನು ಕನ್ನಡಿಗರಿಗೆ ಹಾಡುಗಬ್ಬ, ಬಾಯಿಗಬ್ಬಗಳ ಬಗ್ಗೆ ಇರುವ ಒಲವನ್ನು ತೋರಿಸಿಕೊಟ್ಟಿದ್ದಾನೆ. ಆದರೆ ಹಾಡು ಎಂಬ ಕಲೆಯ ಬಗೆ ಉಂಟಾಗುವಾಗ, ಉಂಟಾಗುತ್ತಿರುವಾಗ ಅದು ಒಂದು ಮರುಕಳಿಕೆ(rhythm) ಹೊಂದಿಕೊಳ್ಳಬಲ್ಲ ಪದಕಂತೆಗಳಾಗಿ ಹೊರಹೊಮ್ಮುತ್ತಿದ್ದವು. ಆಗ ಈ ಶ್ರುತಿ, ತಾಳ ಇವುಗಳ ಬಗ್ಗೆ ಹಾಡು ಕಟ್ಟುವವರ ಅತವ ಹಾಡುವವರ ಅರಿವಿಲ್ಲದಂತೆ ಅವು ಹಾಡಿನೊಂದಿಗೆ ಬೆರೆತಿರುತ್ತಿದ್ದವು. ಅಂದರೆ ಆಗ 'ಇನಿ'/ಸಂಗೀತ(ನಯಗೊಳಿಸಿದ, ಒಪವೋರಣಗೊಳಿಸಿದ ಹಾಡು ಅಂತ ಇದರ ತಿರುಳಿರಬಹುದು. ಆದರೆ ಈ ತಿರುಳು ಅಶ್ಟು ಸರಿಯಾಗಿಲ್ಲವೆಂದು ಮುಂದೆ ತಿಳಿಸುವೆ) ಎನ್ನುವ ಕಲೆ ಇನ್ನು ಎಳೆಸಾಗಿ ಉಳಿದಿತ್ತು. ಅಂದರೆ ಹಾಡಿನಲ್ಲಿ ಮೊದಲು ಅದರಲ್ಲಿರುವ ಪದಗಳು ಮತ್ತು ಪದಗಳನ್ನು ಕಟ್ಟುವ ಬಗೆ, ಕಟ್ಟುವಾಗ ಹೇಗೆ ಅದನ್ನು ಮರುಕಳಿಸುವ ಬಗೆಯಲ್ಲಿ (ಲಯಬದ್ದ) ಅದನ್ನು ಹೇಳಬಹುದು/ಹಾಡಬಹುದು ಎಂಬುವುದರ ಮೇಲೆ ಹಾಡು ಕಟ್ಟುಗರು ಹಾಡುಗಳನ್ನು ಕಟ್ಟುತ್ತಿದ್ದರು ಎಂದು ಅಯ್ಬಿಲ್ಲದೆ ಹೇಳಬಹುದು. ಹಾಗದರೆ ಹಿಂದಿನಿಂದಲೂ ಹಾಡಿನಲ್ಲಿರುವ ಪದಗಳಿಗೆ( ಸಾಹಿತ್ಯಕ್ಕೆ) ಹೆಚ್ಚು ಒತ್ತೇ ಹೊರತು ಈಗಿನ ಕಾಲದ ಹಾಡಿಗೆ ಬೇಕಾದ ಶ್ರುತಿ, ತಾಳ ಇವುಗಳಲ್ಲ ಎಂದು ಹೇಳುವುದಕ್ಕೆ ಅಡ್ಡಿಯಿಲ್ಲ. ಈ ಮಾತು ಇಂದಿಗೂ ಜನರ ಬಾಯಲ್ಲಿ ನಲಿಯುವ ಹಾಡಿಗಳಿಗೂ ಹೊಂದುತ್ತದೆ ಏಕೆಂದರೆ ಒಂದು ಸಿನಿಮಾಹಾಡು ಮೇಣ್ ಅನಿಸುವಾಡು(ಬಾವಗೀತೆ) ಇವುಗಳಲ್ಲಿ ಹಾಡಿನ ಪದಗಳಿಗೇ ಹೆಚ್ಚು ಮನ್ನಣೆ ಹೊರತು ಸಂಗೀತಕ್ಕಲ್ಲ. ಸಂಗೀತವಿದ್ದರೂ ಅದು ಹಾಡಿನ ಅನಿಸು/ಪದಗಳನ್ನು ಇನ್ನು ಹೆಚ್ಚು ಮೇಲ್ಮೆಗೊಳಿಸುವಂತೆ ಮಾಡಲು ಮಾತ್ರ. ಈಗಲೂ ಹಾಡುಗಳಲ್ಲಿ ಬರುವ ಪದಗಳಲ್ಲಿ ತಪ್ಪುಗಳಾದರೆ ತಟ್ಟನೆ ಮಂದಿ ಅದನ್ನ ಎತ್ತಿ ತೋರಿಸುವರು ಆದರೆ ಶ್ರುತಿ, ತಾಳಗಳಲ್ಲಿ ತಪ್ಪುಗಳಾದರೆ ಹೆಚ್ಚು ಮಂದಿಗೆ ಆ ತಪ್ಪುಗಳನ್ನು ಎತ್ತಿ ತೋರಿಸಲಾಗುವುದಿಲ್ಲ. ಅಂದರೆ ಇಂದಿಗೂ ಹೆಚ್ಚು ಮಂದಿಯ ಮಟ್ಟಿಗೆ ಪದಗಳಿಗೆ ಹೆಚ್ಚು ಬೆಲೆ ಹೊರತು ಶ್ರುತಿ, ತಾಳಕ್ಕಲ್ಲ.
ಇಂದಿಗೂ ಜನಪದ ಹಾಡುಗಳು ಮಂದಿಯ ಮನಸ್ಸಿಗೆ ಹತ್ತಿರವಾಗಿರುವುದು ಇದಕ್ಕೋಸ್ಕರವಾಗಿಯೇ. ಹಾಡು ಕಟ್ಟುವುದು ನಮ್ಮ ಬುಡಕಟ್ಟಿಗೆ ಹೆಚ್ಚು ಪಳಗಿರುವ ಕಲೆ ಆದರೆ ಸಂಗೀತ ಹಾಡು ಕಟ್ಟುವುದಕ್ಕೆ ಹೋಲಿಸಿದರೆ ತೀರ ಇತ್ತೀಚಿನದು. ಅಂತೆ ಹೇಳುವ 'ಶಾಸ್ತ್ರೀಯ ಸಂಗೀತ'ವೆನ್ನುವುದು ಕೆಲವೇ ಮಂದಿಗೆ ಅರ್ತವಾಗುವ ಕಲೆಯಬಗೆ. ಮತ್ತು ಹಲವು ಬಾರಿ ನನಗೆ ಅದು ಕೆಲವೇ ಮಂದಿಗೋಸ್ಕರವಾಗಿಯೇ ಇದೆಯಂದೂ ನನ್ನ ಅಯ್ಬು.
ಕವಿರಾಜಮಾರ್ಗದಲ್ಲಿರುವಂತೆ ಹಾಡುಗಬ್ಬ(ಜನಪದ), ನೋಟಗಬ್ಬ(ಯಕ್ಸಗಾನ, ಬಯಲಾಟ) ಎಂಬೆರೆಡು ಕಲೆಬಗೆಗಳು ಬಹಳ ಹಿಂದಿನ ಕಾಲದಿಂದಲೂ ಬಳಕೆಗೆ ಬಂದಿದೆ.

ಕೊನೆಯದಾಗಿ, ಹಾಡುಗಬ್ಬಗಳು ಜನರಿಂದ ಜನರಿಗಾಗಿ ಜನರಿಗೋಸ್ಕರ ಹುಟ್ಟಿಕೊಂಡ ಕಲೆ. ಇದು 'ಮಂದಿಯಾಳ್ವಿಕೆ' ಯ 'ಅರಿವಿನರಿಮೆ'ಗಳ ಹುರುಪಿಗೆ ಹೊಂದುತ್ತದೆ. ಹಾಗಾಗಿ ಪದಗಳಿಗೆ ಬೆಲೆಕೊಡುವ ಕಲೆಯಬಗೆಗಳು ಬಹಳ ಕಾಲ ಬಾಳುತ್ತವೆ ಎಂದು ಹೇಳಬಹುದು.

ಸಾಲು-ಹೊತ್ತಿಗೆ

ಸಾವಿರ ಸಾವಿರ ಸಾಲುಗಳಲ್ಲಿ
ಅಮ್ಮನಕ್ಕರೆಯ ಬಣ್ಣಿಸಲಾದೀತೇ?
ಹೊಸ ಹೊತ್ತಿಗೆಗಳನ್ನು ಹೊರತಂದರೇನು
ಅರಿವಿನ ಹಸಿವ ತೀರಿಸಲಾದೀತೆ
ಆದರೂ
ಸಾಲುಗಳೂ ಬೇಕು ಹೊತ್ತಿಗೆಗಳೂ ಬೇಕು
ಸಾಗಲು ಪಯಣ ಎಲ್ಲೆಯಿಲ್ಲದೆಡೆಗೆ
ನೆಟ್ಟಿ ನೋಟವ ಇಳೆಬಾನ್ಕೂಡಿನ ಕಡೆಗೆ

ಶುಕ್ರವಾರ, ಡಿಸೆಂಬರ್ 26, 2008

ಒಂದು ಸಿನಿಮಾ ಹಾಡಿನ ತರ...ಈ ಹಾಡು

ನಿನ್ನಂದಕೆ ಸೆರೆಯಾದನೆ..!!

ನಿನ್ನಂದಕೆ ಸೆರೆಯಾದನೆ...ಎ.ಎ.ಎ
ನಿನ್ನಡತೆಗೆ ಮಾರೋದೆನೆ .ಎ.ಎ.ಎ
ಜಾಣೆ ನಿನ್ನ ಕಣ್ಣು
ಹೊಳೆಯುವ ಹೊನ್ನು
ನಿನ್ನ ಬೆಡಗು...ಹೋ.ಹೋ \ಪಲ್ಲವಿ \

ಒಲವ ಮಳೆಯಲಿ ನೆನೆದು
ಚೆಲುವ ಹೊಳೆಯಲಿ ಮಿಂದು
ಪೊರೆಯ ಕಳಚಿ ಪೊಗರು ಮೂಡಿದೆ
ನಿನ್ನ ನಲುಮೆಯ ಸಿರಿಯುಂಡು \ಚರಣ \

ಮಿಡಿವ ನಾಡಿಗೆ ನೆತ್ತರಾದೆ
ಎಳೆವ ಉಸಿರಿಗೆ ಗಾಳಿಯಾದೆ
ಬಡಿವ ಎದೆಗೆ ಸದ್ದಾದೆ
ನನ್ನೊಳೇ ಬೆರೆತೆ ನೀ \ಚರಣ\

ಗುರುವಾರ, ಡಿಸೆಂಬರ್ 25, 2008

ಬೇರೆ ದಾರಿಯಿಲ್ಲ

ಏಳುವುದಕ್ಕೆ ಎಡೆಯಿಲ್ಲ
ಎಡವುದಕ್ಕೆ ಎಲ್ಲೆಯಿಲ್ಲ
ನೆಮ್ಮದಿಯ ಕುರುಹಿಲ್ಲ
ನೇರ ನಡೆಗೆ ಬೆಲೆಯಿಲ್ಲ
ಸುಳ್ಳೇ ಮೆರೆಯುತಿದೆಯಲ್ಲ
ಸಾವೂ ಕೂಡ ದೂರದಲೆಲ್ಲೊ ಇದೆಯಲ್ಲ
ಏನೂ ಮಾಡಲಾಗುತ್ತಿಲ್ಲ

ಮೇಲಿನ ಸಾಲುಗಳು ಪೋಲಾಯಿತಲ್ಲ !! :(
ಏನಾದರೂ ಎದುರಿಸಿದೆ ಬೇರೆ ದಾರಿಯಿಲ್ಲ !

ಶಂಕರಬಟ್ಟರ ಹೊತ್ತಿಗೆಗಳು ಮತ್ತು ಕನ್ನಡ ಸೊಲ್ಲರಿಮೆ

ಇತ್ತೀಚೆಗೆ ಬೆಳಕಿಗೆ ಬಂದಿರುವ ಶಂಕರಬಟ್ಟರ ಹೊತ್ತಿಗೆಗಳು ಕನ್ನಡ ನುಡಿಹುರುಪಿಗರಲ್ಲಿ ಹೊಸ ಉಂಕುಗಳ ಅಲೆ ಎಬ್ಬಿಸಿದೆ ಎಂದು ಹೇಳಬಹುದು. ಇದುವರೆಗೆ ಕನ್ನಡದಲ್ಲಿ ಬಂದ ನುಡಿಯರಿಗರ ಸೊಲ್ಲರಿಮೆ(ವ್ಯಾಕರಣ,grammar)ಯಲ್ಲಿರುವ ಕೊರತೆಗಳು ಮತ್ತು ಗೊಂದಲಗಳನ್ನು ಎತ್ತಿಹಿಡಿಯುವಲ್ಲಿ ಡಾಡಿ.ಎನ್.ಶಂಕರಬಟ್ಟರು ಬಹಳ ಮಟ್ಟಿಗೆ ಗೆದ್ದಿದ್ದಾರೆ. ನಮ್ಮ ನುಡಿಯಲ್ಲಿರುವ ಹಲವು ತಲೆಮೆಯ ವಿಶಯಗಳು ಹಿಂದಿನ ನುಡಿಯರಿಗರಿಗೆ ತಿಳಿಯದೇ ಇರುವುದು ಅಚ್ಚರಿ ಮತ್ತು ಅವರ ಸಕ್ಕದದ(ಸಂಸ್ಕ್ರುತ) ಸೊಲ್ಲರಿಮೆಯ ಕುರುಡು-ಕುರುಡಾಗಿ ಹಿಂಬಾಲಿಸಿರುವುದು ನಾಚಿಕೆಗೇಡು. ಕನ್ನಡಿಗರ ಬಾಯಲ್ಲಿ ಪದಗಳ,ಸೊಲ್ಲುಗಳ ಒಳಯೇರ್ಪಾಡು ಆಳವಾಗಿ ತಿಳಿಯಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಬೇಕು. ಒಂದು ತಲೆಮೆಯ ವಿಶಯ ಗೊತ್ತಾಗುವುದು ಕನ್ನಡದಂತ ನುಡಿಯಲ್ಲಿ ಅದರ ಆಡುಗರ ಬಾಯಲ್ಲಿ ಅದು ಹೇಗೆ ನಲಿಯುತ್ತದೆ ಎಂಬುದರ ಮೇಲೆ ಅದರ ಸೊಲ್ಲರಿಮೆ ಉಂಟಾಗುತ್ತದೆಯೆ ಹೊರತು ಬೇರೆ ಯಾವುದೋ ನಂಟಿಲ್ಲದ ನುಡಿ(ಸಕ್ಕದ)ಯಿಂದಲ್ಲ. ಕನ್ನಡದಂತ ನುಡಿ ಎಲ್ಲ ವರ್ಗದವರ ಮಾತಿನಲ್ಲಿ ಹೆಚ್ಚು ಪಳಗಿದ ನುಡಿ ಆದರೆ ಸಕ್ಕದ ಹಾಗಲ್ಲ ಅದು ಹೆಚ್ಚು ಮೇಲ್ವರ್ಗದವರ ಬರಹದಲ್ಲಿ( ಮಾತಿನಲ್ಲಿ ಕಡಿಮೆ)ದ್ದ ನುಡಿ. ಮತ್ತು ಅದರ ಸೊಲ್ಲರಿಮೆ ಪಾಣಿನಿ ಎಂಬ ನುಡಿಯರಿಗನ ಕಟ್ಟಳೆಯ ಮೇಲೆ. ಕನ್ನಡ ಜನರಿಂದ ಜನಪರವಾದ ನುಡಿ ಆದರೆ ಸಕ್ಕದ ಒಬ್ಬ ಸೊಲ್ಲರಿಗನ ಕಟ್ಟಳೆಯ ಮೇಲೆ ನಿಂತ ನುಡಿ. ಇದರಲ್ಲಿ ಯಾವುದು ಹೆಚ್ಚು-ಕಡಿಮೆಯಿಲ್ಲ ಆದರೆ ಹಲವರು ಕನ್ನಡದ ಮೇಲೆ ಸಕ್ಕದದ ಸೊಲ್ಲರಿಮೆಯೆಂಬ 'ಗದಾ ಪ್ರಹಾರ' ಮಾಡುತ್ತಿದ್ದಾರೆ. ಮತ್ತು ಸಕ್ಕದದ ಪದಗಳು ಮತ್ತು ಸೊಲ್ಲರಿಮೆ ಮಾತಿನಲ್ಲಿ ಬಳಸದ ಕನ್ನಡವನ್ನು ಕೀಳು ಎಂಬ ತಪ್ಪು ಅರಿವನ್ನು ಹೊಂದಿದ್ದಾರೆ.

ಕನ್ನಡಿಗರ ಏಳಿಗೆ ದಿಟವಾದ ಕನ್ನಡದ ಏಳಿಗೆಯಿಂದ ಹೊರತು ಸಕ್ಕದದ ಏಳಿಗೆಯಿಂದಲ್ಲ. ಇದನ್ನು ನಾವು ಅರಿಯಬೇಕಿದೆ.

ಬುಧವಾರ, ಡಿಸೆಂಬರ್ 24, 2008

ಬಾಳಿಗೊಂದು ತಿರುಳು

ನಿನ್ನ ಬರುವಿಕೆಯ ಗುಂಗಲ್ಲೇ

ಕಾದು ಬಸವಳಿದೆ ನಾನಿಲ್ಲೇ

ದಟ್ಟ ಇರುಳು ಸುತ್ತೆಲ್ಲ

ಹಗಲುಗನಸು ದಿನವೆಲ್ಲ

ಸಾಗಬೇಕಿದೆ ಬದುಕಿನ ಸೆಲೆ

ಬಾಳಿಗೊಂದು ತಿರುಳು ನಿನ್ನಿಂದಲೆ

ಮಂಗಳವಾರ, ಡಿಸೆಂಬರ್ 23, 2008

ಹಣೆಬರಹ

ಅವಿತು ಕುಳಿತ ಹಣೆಯಬರಹವೆ
ನಿನ್ನ ಮರೆಯಬಾರದೆಂದು
ಆಗಾಗ ನೋವ-ನಲಿವ ಇಣುಕಿಸುವೆ
ಕೆಲವರು ನಿನ್ನ ತಿದ್ದಿ
ಮುಂದೆ ಬಂದು ಆದರು ಮುತ್ಸದ್ದಿ
ತಿದ್ದಲಾರದೆ, ನಿನ್ನ ಮೀರದೆ
ಕಾಲು ಹಿಡಿದರು ಕೆಳಗೆ ಬಿದ್ದಿ
ನೀನು ಏನೇ ಬಗೆದರೂ
ಕೆಚ್ಚೆದೆಗಾರರು ಮೊಗಸದೆ ಬಿಡರು
ನಿನ್ನ ಮೆಟ್ಟಿ ಮುಂದೆ ಬಂದೆ ಬರುವರು

ಸೋಮವಾರ, ಡಿಸೆಂಬರ್ 22, 2008

ಒಡಲು-ಒಡವೆ

ಒಡವೆಗಳ ಗೊಡವೆ
ನಿಂಗೇಕೆ ಚೆಲುವೆ
ಒಡಲಲ್ಲಿ ಒಲುಮೆಯ ಚೆಲುವು
ಒಡನೆಯೆ ಒಡರಿಸುತಿರೆ
ಮನಸುಗಾರರು ನಿನ್ನ ಕಯ್ಸೆರೆ
ನಡೆ ನಿನ್ನ ಮೀರಿ ಮೇರೆ
ಹೆಣ್ತನಕ್ಕೆ ನೀ ಮಾದರಿಯಾಗಿರೆ

ನಡೆ = character, conduct

ಕದ್ದೆ-ಒದ್ದೆ-ಗೆದ್ದೆ

ಬರಲು ನೀನು ಕಣ್ಮುಂದೆ
ನಾನು ಹೋದೆ ನೆನಪ ಹಿಂದೆ

ನನಗೆ ತಿಳಿಯದೆ ನನ್ನೇ ಕದ್ದೆ
ಬಿದ್ದೆ ನಾ ಬಿದ್ದೆ ಬಿದ್ದೆ
ಒಲವಿನ ಒಳಗೆ ನಾ ಒದ್ದೆ ಒದ್ದೆ
ಗೆದ್ದೆ ನೀ ಗೆದ್ದೆ ಗೆದ್ದೆ
ನಲುಮೆಯಿಂದಲೀ ನೀ ಎನ್ನ ಗೆದ್ದೆ

ಶನಿವಾರ, ಡಿಸೆಂಬರ್ 13, 2008

ನಮ್ಮ ನುಡಿ ಚೆನ್ನುಡಿ

ಎರಡಕ್ಕರದ ಅಮ್ಮ
ಕಾಯುವಳು ಎಡಬಿಡದೆ ಎಮ್ಮ
ಎರಡಕ್ಕರದ ನಮ್ಮ ನುಡಿ
ಬದುಕ ಹಸನು ಮಾಡುವ ಕುಡಿ
ಕಲಿ-ನಲಿ ಏನೇ ಆಗಲಿ ಇರಲಿ ನಮ್ಮ ನುಡಿ
ಹಾಡು-ಪಾಡೇ ಆಗಲಿ ಮೊದಲಿರಲಿ ಸವಿನುಡಿ
ಉಸಿರು-ಉಸಿರಲಿ ಬೆಸೆಯಲಿ ನಮ್ಮೀ ಚೆನ್ನುಡಿ

ಶುಕ್ರವಾರ, ಡಿಸೆಂಬರ್ 12, 2008

ಬುಡದೆನ್ನುಡಿ / ಮೂಲದ್ರಾವಿಡದ ಬಗ್ಗೆ

ನನ್ನ ನಲುಮೆಯ ಗೆಳೆಯರೊಬ್ಬರು ಬೇರುದೆನ್ನುಡಿ ಬರೀ ಪರಿಕಲ್ಪನೆ ಅದಕ್ಕೆ ಅಶ್ಟು ತಲೆಮೆ/ಮಹತ್ವ ಕೊಡಬೇಕಾಗಿಲ್ಲ ಅಂತ ಹೇಳಿದ್ದಾರೆ, ಅದಕ್ಕೆ ನಾನು ಈ ಮರುಲಿ/ಉತ್ತರ ಬರೆಯಬೇಕಾಯಿತು.

ನೀವು ಬುಡದೆನ್ನುಡಿ ಬರೀ ಪರಿಕಲ್ಪನೆಯಶ್ಟೆ ಅಂತ ಹೇಳಿದ್ದೀರಿ. ಇದಕ್ಕೆ ನನ್ನಕೊಂಕಿದೆ. ಬುಡದೆನ್ನುಡಿ ಬರೀ ಪರಿಕಲ್ಪನೆಯಲ್ಲದೆ ಅದು ಒಪ್ಪತಕ್ಕಂತಹ ಮತ್ತು ದಿಟಕ್ಕೆ ಹತ್ತಿರವಾದ ಪರಿಕಲ್ಪನೆ(reasonably realistic assumption) ಎಂದು ನಾನು ಹೇಳುತ್ತೇನೆ. ಯಾಕಂದರೆ ಶಂಕರಬಟ್ಟರು ತಮ್ಮ ಹೊತ್ತಿಗೆಯಲ್ಲಿ ಇದರ ಬಗ್ಗೆ ತಿಳಿಯಾಗಿ ಹೇಳಿದ್ದಾರೆ. ಒಂದು ಬುಡಕಟ್ಟಿನ ಮಂದಿ ಈ ನುಡಿಯನ್ನು ಆಡುತ್ತಿದ್ದಿರಬೇಕು, ಆ ಬುಡಕಟ್ಟಿನ ಮಂದಿ ಬೇರೆ ತಾವಿಗೆ/ಜಾಗಕ್ಕೆ ಹೋದಾಗ (ಗುಳೆ ಹೋದಾಗ) ಅವರ ನುಡಿಯಲ್ಲಿ ಕೆಲವು ಮಾರ್ಪುಗಳಾದವು ಯಾಕಂದರೆ ಅವರು ತಮ್ಮ ಬೇರು ನೆಲದ ನಂಟನ್ನು ಕಡಿದುಕೊಂಡಿರಬಹುದು. ಇದಕ್ಕೆ ಇಂದಿಗೂ ಇರುವ ನೀಲಿಬೆಟ್ಟ(ಊಟಿ)ಗಳಲ್ಲಿ ಆಡುವ 'ಬಡಗ'ನುಡಿಯೇ ಒಂದು ಒಳ್ಳೆಯ ಮಾದರಿ.ಈ ಬಡಗ ನುಡಿ ಆಡುವ ಮಂದಿ ಒಂದು ಹೊತ್ತಿನಲ್ಲಿ ಮಯ್ಸೂರಿನಲ್ಲೇ ಇದ್ದರು. ಕೆಲವು ಓಸುಗರಗಳಿಂದ ಅವರು ಮಯ್ಸೂರು ಬಿಟ್ಟು ಊಟಿಗೆ ಹೋಗಿ ನೆಲಸಿದರು ಮತ್ತು ಅದು ಬೆಟ್ಟ-ಗುಡ್ಡವಾದ್ದರಿಂದ ಅವರಿಗೆ ಮಯ್ಸೂರಿನ ನಂಟು ಕಡಿದು ಅವರ ನುಡಿಯಲ್ಲಿಮಾರ್ಪುಗಳಾಗಿ 'ಬಡಗ' ನುಡಿಯಾಯಿತು ಅಂತ ನುಡಿಯರಿಗರು ಹೇಳುತ್ತಾರೆ. ಇದೇ ರೀತಿ ಬೇರುದೆನ್ನುಡಿಯಿಂದ ಕನ್ನಡ, ತುಳು, ತಮಿಳು ....ಹೀಗೆ ಹೊತ್ತಿಂದ ಹೊತ್ತಿಗೆ ಇವು ಬೇರೆ ಸೊಂತ ನುಡಿಯಾಗಿ ಮಾರ್ಪಟ್ಟವು ಎಂದು ಹೇಳುವುದರಲ್ಲಿ ಎಳ್ಳಶ್ಟು ಅಯ್ಬು/ಸಂಶಯ ಬೇಡ.
ಅವೊತ್ತಿನಲ್ಲಿ ಸಕ್ಕದದಲ್ಲಿ ಆದಶ್ಟು ಬರಹಗಳು ಬೇರುದೆನ್ನುಡಿಯಲ್ಲಿ ಬಂದಿಲ್ಲವಾದ್ದರಿಂದ ಕೆಲವರು(ನೀವು ಕೂಡ) ಬೇರುದೆನ್ನುಡಿ ಬರೀ 'ಪರಿಕಲ್ಪನೆ' ಎನ್ನುವುದುಂಟು. ಆದರೆ ಈ ಪರಿಕಲ್ಪನೆಯನ್ನು ಅಲ್ಲಗಳೆಯಲು ಆಗುವುದಿಲ್ಲ/ಆಗಿಲ್ಲ ಮತ್ತು ಈಪರಿಕಲ್ಪನೆಯನ್ನು ನಾವು ಕಡೆಗಣಿಸಲಾಗುವುದಿಲ್ಲ/ಆಗಿಲ್ಲ.

ಗುರುವಾರ, ಡಿಸೆಂಬರ್ 11, 2008

ಬಾವಿನೀರು

ಕೊಳದ ನೀರು ಕಯ್ಗೆಟುಗುದಲ್ಲದೆ
ಬಾವಿಯ ನೀರು ಕಯ್ಗೆಟುಗುವುದೇ
ಮಯ್ಯನ್ನು ರಾಟೆಯಂತೆ ತಿರುಗಿಸಿ
ಮನಸ್ಸನ್ನು ಹಗ್ಗದ್ದಂತ ಕಟ್ಟಿ
ಬಕುತಿಯೆಂಬ ಬಿಂದಿಗೆಗೆ ನಿನ್ನ
ತುಂಬಿದರೆ ಮೆಚ್ಚೆಯಾ ನೀ ಬರತೇಶ

ದುಡಿ ದುಡಿ ದುಡಿ

ದುಡಿ ದುಡಿ ದುಡಿ
ಗೊಡ್ಡು ಹಿಡಿಯುವವರೆಗೂ
ಸಡ್ಡು ಹೊಡೆಯುವ ಕೆಚ್ಚಿರುವವರೆಗೂ
ದುಡ್ಡು ಕೂಡುವವರೆಗೂ
ಕೂಡಿಟ್ಟ ದುಡ್ಡೇ ನೆರವಿಗೂ
ದುಡಿಮೆ ನಿಂತು ಸಾಯುವವರೆಗೂ !

ನನ್ನಲ್ಲಿ ನಾನಿರಲಿಲ್ಲ

ನಾನಲ್ಲಿದ್ದರೂ ಅಲ್ಲಿರಲಿಲ್ಲ
ಎಲ್ಲೊ ಹೋಗಿತ್ತೊ ಮನಸು
ಕಾಣುತ್ತಿತ್ತೇನೊ ಕನಸು, ಗೊತ್ತಿಲ್ಲ!!
ಹೊರಗೆಲ್ಲ ಬರೀ ಸುಳ್ಳು
ಒಳಗಿನ ಸುಳಿವು ತಿಳಿಯಲಿಲ್ಲ
ನನ್ನಲ್ಲಿ ನಾನಿರಲಿಲ್ಲ, ಹೀಗೆ ಬದುಕೆಲ್ಲ

ಕಣ್ಣಂಚಿನ ಮಿಂಚು

ಕಣ್ಣಂಚಿನ ಮಿಂಚಾಗಿ ಬಂದೆ
ಕಣ್ಣಿಂದ ಬರುವ ಹನಿಯಾಗದಿರು
ಕಣ್ಣಲ್ಲಿ ಕಣ್ಣಿಟ್ಟು ಕಾಯುವೆ ನಿನ್ನ
ಓ ನಲುಮೆಯ ನಲ್ಲೆ
ನೀನಿಲ್ಲದ ಈ ಬಾಳೊಲ್ಲೆ
ನೀ ನಗುತಿರು ನನ್ನ ಸಾಲುಗಳಲ್ಲೆ

ಬುಧವಾರ, ಡಿಸೆಂಬರ್ 10, 2008

ಮುಗಿಯದ ಸಾಲುಗಳು

ಒಮ್ಮೊಮ್ಮೆ ಎಶ್ಟು ಮೊಗಸಿದರೂ ಸಾಲುಗಳು
ಬರುವುದೇ ಇಲ್ಲ
ಬಂದರೂ ನೆಱೆಗೊಳ್ಳುವುದಿಲ್ಲ
ನೆಱೆಗೊಂಡರೂ ತಿರುಳು ಒಪ್ಪವಾಗುವುದಿಲ್ಲ
ಅದಕ್ಕೆ ಹಲವು ಸಾಲುಗಳು
ಮುಗಿಯದೆ ಅರೆ-ಬರೆಯಾಗಿ ಬೀದಿಮಕ್ಕಳಂತೆ
ನಿಂತಿರುತ್ತವೆ ಯಾರಿಗೂ ಬೇಡವಾಗಿ

ನೆಱೆ= ಪೂರ್ಣ= complete
ಮೊಗಸು= ಪ್ರಯತ್ನ= try

ತಿಂಗಳ ಬೆಳಕು

ಕಂಗಳ ಒಳಗೆ ತಿಂಗಳ ಬೆಳಕು
ನಲ್ಲೆಯ ಒಲವು ಬದುಕಿಗೆ ಬೇಕು
ನೋವುಗಳ ಬಲು ದೂರ ನೂಕು
ಸವಿನೆನಪುಗಳು ಬದುಕಲು ಸಾಕು
ಬಾಳಿದು ನಿಂದು ನೀನೆ ಮುಕ್ಕು !! :)

ಶನಿವಾರ, ಆಗಸ್ಟ್ 23, 2008

'ಮಾತಿನ ಒಳಗುಟ್ಟು' ಹೊತ್ತಿಗೆ ಬಗ್ಗೆ

ಹೊತ್ತಿಗೆ : ಮಾತಿನ ಒಳಗುಟ್ಟು
ಬರೆದವರು : ಡಿ.ಎನ್.ಶಂಕರಬಟ್
ಹೊರಪಡಿಸುಗರು: ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ
ಇತ್ತೀಚೆಗೆ 'ಮಾತಿನ ಒಳಗುಟ್ಟು' ಹೊತ್ತಿಗೆ ಎಡಬಿಡದೆ ಓದಿ ಮುಗಿಸಿದೆ. ಓದುವಾಗ ಎಲ್ಲೂ ಬಿಟ್ಟುವೋಗಿದಂತೆ ಅನ್ನಿಸಲಿಲ್ಲ. ಒಂದೇ ಉಸಿರಿಗೆ ಓದಿ ಮುಗಿಸಿದೆ. ಈವೊತ್ತಿಗೆಯಲ್ಲಿ ಹಲವು ತಲೆಮೆಯ ವಿಶಯಗಳ ಬಗ್ಗೆ ಅರಿಮೆಯು ಓದುಗನಿಗೆ ಸಿಗುತ್ತದೆ. ಮಾತಿನ ಒಳಗುಟ್ಟನ್ನು ಅರಿತುಕೊಳ್ಳಲು ನಾವು ಎಂಜಿನಿಯರಿಂಗ್ನಲ್ಲಿ ಓದಿರುವುದಕ್ಕಿಂತ ಹೆಚ್ಚು ಓದಿ ಹಲವು ವಿಶಯಗಳ ಬಗ್ಗೆ ಆರಯ್ಯು ಮಾಡಬೇಕಾಗುತ್ತದೆ.
ಶಂಕರಬಟ್ಟರು ಈವೊತ್ತಿಗೆಯಲ್ಲಿ ಮಾತನಾಡಿರುವ ಅಂಶಗಳು:
ಮಾತಿನ ಕಸುವು, ಮಿದುಳಿನ ಮಾತು, ಮಕ್ಕಳು ಮಾತನಾಡುವ/ಕಲಿಯುವ ಬಗೆ, ಮಾತಿನ ಬಗ್ಗೆ ತಪ್ಪು ಅನಿಸಿಕೆಗಳು. ಮಾತು ಹೊರಡುವ ಬಗೆ, ಸನ್ನೆ ನುಡಿಗಳು ಹುಟ್ಟುವ ಬಗೆ. ಮಾತು ಜಾಗಕ್ಕೆ ತಕ್ಕಂತೆ ಬದಲಾಗುವ ತೆರ.

ಇದರಲ್ಲಿ ನಂಗೆ ಇಸ್ಟವಾದುದು ಮಕ್ಕಳು ಮಾತನಾಡುವ/ಕಲಿಯುವ ಬಗೆ ಮತ್ತು ಮಿದುಳಿನ ಮಾತು.
ಮಕ್ಕಳು ತಮ್ಮ ಸುತ್ತಮುತ್ತ ಆಡುವ ನುಡಿಯನ್ನ(ಮೊದಲ ನುಡಿ) ಯಾರು ಹೇಳಿ ಕೊಡದಿದ್ದರೂ ತನ್ನಿಂತಾನೆ ಕಲಿಯುವ ಬಗೆ ದಿಟವಾಗಲು ಅಚ್ಚರಿ. ಮಕ್ಕಳು ದಿಟವಾಗಲು ೧೮ ತಿಂಗಳು ತಾಯಿಯ ಬಸಿರಿನಲ್ಲಿರಬೇಕಂತೆ. ಆದರೆ ಮನುಸ್ಯರ ಮಿದುಳು ಬೆಳೆಯುವಿಕೆಯಿಂದ ಅದು ೯ ತಿಂಗಳಿಗೆ ಆಚೆ ಬರಬೇಕಾಗುತ್ತದೆ. ಮನುಸ್ಯನಿಗೂ ಪ್ರಾಣಿಗಳಿಗೂ ಇರುವ ಮುಕ್ಯ ಬೇರೆತನ ಅಂದರೆ ನಮ್ಮ ಮಿದುಳು ಹೆಚ್ಚು ಬಲಿತಿರುವುದು/ಬೆಳೆದಿರುವುದು. ಈ ಮಕ್ಕಳಿಗೆ(ಕಿವುಡ ಮಕ್ಕಳನ್ನು ಬಿಟ್ಟು) ಯಾರು ಏನು ಹೇಳಿಕೊಟ್ಟರೂ ಅದು ಅವರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲವಂತೆ. ಅವರು ತಮ್ಮ ಪಾಡಿಗೆ ಒಂದೊಂದೆ ಮಾತಿನ ಮೆಟ್ಟಿಲುಗಳನ್ನ ಏರುತ್ತಾವೋಗುತ್ತಾರಂತೆ. ಆದರೆ ಈ 'ಪೂರ್ತಿ ಕಿವುಡ ಮಕ್ಕಳು' ಬೇರೆ ಮಕ್ಕಳಂತೆ ಮಾತು ಕಲಿಯಲಾರವು ಯಾಕಂದ್ರೆ ಅವಕ್ಕೆ ಯಾವ ನುಡಿಯು ಕಿವಿಗೆ ಬೀಳುವುದಿಲ್ಲ. ಆದರೆ ಅರೆಕಿವುಡ ಮಕ್ಕಳಿಗೆ ಮಸಿನ್ ಹಾಕಿದ್ರೆ ಆವು ಇತರೆ ಮಕ್ಕಳಂತೆ ಮಾತನ್ನ ೨-೩ ವರುಸದಲ್ಲಿ ಕಲಿಯಬಲ್ಲವು. ಆದರೆ ಪೂರ್ತಿ ಕಿವುಡ ಮಕ್ಕಳಿಗೆ 'ಸನ್ನೆ ನುಡಿ'ಯೇ ಗತಿ. ಈ ಸನ್ನೆ ನುಡಿ ಬೆಳೆಯುವುದು ಕೂಡ ಆ ಕಿವುಡು ಮಗು ಇತರೆ ಕಿವುಡು ಮಕ್ಕಳೊಂದಿಗೆ ಬೆರೆತಾಗ ಮಾತ್ರ. ಇಲ್ಲಂದ್ರೆ ಅವಕ್ಕೆ ಬದುಕಿನುದ್ದಕ್ಕೂ ಮಾತು ಹೊರಡಿಸಲಾಗುವುದಿಲ್ಲವಂತೆ. ಈ ಕಿವುಡು 'ಸನ್ನೆ ನುಡಿ' ಹುಟ್ಟುವುದು ಕೂಡ ಒಂದು ಅಚ್ಚರಿಯೇ. ಅಮೇಲೆ ಅಮೆರಿಕಾದಲ್ಲೆ ಒಂದು ಸನ್ನೆ ನುಡಿಯಾದರೆ ಆಪ್ರಿಕಾದಲ್ಲೆ ಒಂದು ಸನ್ನೆನುಡಿಯಿದೆಯಂತೆ.
.....ಮುಂದುವರೆಯುವುದು

ಶನಿವಾರ, ಜುಲೈ 26, 2008

ಅಣ್ಣೆಗನ್ನಡದ ಒರೆಗಳು

ಹಲಸಿಗ - doctor
ಬಾೞ್ದಲೆ - ಪ್ರಾಣ
ಹಯ್ - ಮಗು, ಶಿಶು ಹಯ್ಕಳು - ಮಕ್ಕಳು
ಹಮ್ಮು - ಗರ್ವ
ಹದಿಟೆ - ಪ್ರತಿಶ್ಟೆ
ಸೇದು - pull
ಹೂದಿಂಗಳು - ವಸಂತ ಮಾಸ
ಸಡ್ಡಕ - ಹೆಂಡತಿಯ ಸೋದರಿಯ ಗಂಡ
ವಾರಡಿ - ಓರೆ, ಓರಡಿ , ಬಾಗಿರುವುದು
ವಾಡಿಕೆ - ರೂಡಿ
ಮೊೞ್ಗು = ಬಾಗು,
ಬಗ್ಗುಮಗಿಲ್ - ಮೊಗಳ್, ಗೋಡೆ
ಬೀೞಕ್ಕರ - ವ್ಯಂಜನ
ಬೀಕಲ್ - ಅಂತಿಮ
ಬಿಸಿಗಣ್ಣಣುಗ - ವೀರಬದ್ರ
ಕಬ್ಬುವಿಲ್ಲ - ಮನ್ಮತಬಿಲ್ಲುಂ
ಬೆಱಗು - ಅತ್ಯಾಶ್ಚರ್ಯ
ಬಿಜ್ಜೆವೆಣ್ - ಸರಸ್ವತಿ
ಬಿಕ್ಕು - ದೀರ್ಗಶ್ವಾಸ
ಕೊಪ್ಪರ - ಹೆಗಲ ಕೊನೆ
ಕುಮ್ಬಿಡು - ನಮಸ್ಕರಿಸು
ಕುರ್ಚಿ - ಒಂದು ಅಂಗ ಕಡಿಯಲ್ಪಟ್ಟವನು, ಮಾದರಿ ಮೂಗುರ್ಚಿ = ಮೂಗು ತುಂಡಾದವನು
ಕುಲಿ - ಕೊಲ್ಲುವವನು (killer)
ಕುಸುರಿ - ಚಾತುರ್ಯ
ತಂಗದಿರ - ಚಂದ್ರ
ಕುಳಿರ್ವೆಟ್ಟ - ಹಿಮಾಲಯ
ಕುಳಿರ್ವೆಟ್ಟಣುಗಿ - ಗಿರಿಜೆ
ಕುಳೆರ್ವೆಳಗ - ಹಿಮಾಂಶು
ಕೆತ್ತು - ನಡುಗು
ಕೆೞವ - ಮುದುಕ
ಕೊತ್ತಿ - ಬೆಕ್ಕು , ಮಾರ್ಜಾಲ
ಅರಚಿಕೊಳ್ಳುವಿಕೆ - ಹರಾಜು, auction
ಅದ್ದಿಗ - ಅದ್ಯಕ್ಶ

ಕವಿರಾಜಮಾರ್ಗದಲ್ಲಿ ಮಾತಱಿವಂ, ನಿಪುಣಂ, ಜಾಣಂ ಮತ್ತು ಬಲ್ಲಂ

[ಸಂಪದದಲ್ಲಿ ಬರೆದದ್ದು]


ಕುಱಿತಂತು ಪೆಱರ ಬಗೆಯಂತೆಱೆದಿರೆ ಪೆಱರ್ಗಱಿಪಲಾರ್ಪವಂಮಾತಱಿವಂಕಿಱಿದಱೊಳೆ ಪಿರಿದುಮರ್ತಮನಱಿಪಲ್ ನೆಱೆವಾತನಾತನಿಂದಂನಿಪುಣಂ

ತಿರುಳು: ಮೇಲೆ ತಿಳಿಸಿದ ಬೇರೆಯವರ(ಕಬ್ಬಿಗರ) ಬಗೆಯನ್ನ(ಕಬ್ಬದ,ಮಾತಿನ) ಬಿಡಿಸಿ ಮತ್ತೆ ಬೇರೆಯವರಿಗೆ ಅರುಹಲಾಗುವವನು ಮಾತಱಿವಂ(ನ್)/ವಾಗ್ಮಿ(speaker) ಕಡಿಮೆ ಪದಗಳನ್ನು ಬಳಸಿ ಅದರಲ್ಲಿ ಹಿರಿದಾದ ವಸ್ತು,ವಿಶಯವನ್ನ ತುಂಬಿ ಅರುಹಲಾಗುವವನು ನಿಪುಣಂ(ನ್)


ನುಡಿಯಂ ಛಂದದೊಳೊಂದಿರೆತೊಡರ್ಚಲಱಿವಾತನಾತನಿಂದಂ ಜಾಣಂತಡೆಯದೆ ಮಹಾದ್ವಕ್ರುತಿಗಳನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ


ತಿರುಳು: ನುಡಿಯೊಳಗೆ ಚಂದಸ್ಸನ್ನು ಹೊಂದಿಸಿ(ತೊಡರ್ಸಿ) ಬರೆಯಲು ಅಱಿತವನು ಜಾಣಂ(ನ್), ಕೂಡಲೆ ಹೆಗ್ಗಬ್ಬಗಳನ್ನು ಹುಟ್ಟಿಸು(ಒಡರಿಸು)ವವನು ಎಲ್ಲರಿಗಿಂತ ಬಲ್ಲಂ(ನ್)/ಪಂಡಿತ

ಮಡಿವ ಬಯಕೆ ಮತ್ತು ಕನಸು

[ಸಂಪದದಲ್ಲಿ ಬರೆದದ್ದು]

ಮಡಿಯಲೆಳೆಸುವ ಮನದ ಬಯಕೆಯು
ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ
ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು
ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು

ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

[ಸಂಪದದಲ್ಲಿ ಬರೆದದ್ದು, ಈ ಬರಹ ಡಾ ಡಿ.ಎನ್.ಶಂಕರಬಟ್ಟರ 'ಹೊಸಬರಹ'ದಲ್ಲಿದೆ]

ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ.
ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ ಮಾದಪ್ಪ. ಒಕ್ಕಲಿಗರು, ಲಿಂಗಾಯಿತರು, ಉಪ್ಪಾಲಿಗರು, ಕುರುಬರು,ಹಾಲುಮತದವರು ಮತ್ತು ದಲಿತರು ಹೀಗೆ ಎಲ್ಲ ಜಾತಿಗಳ ಜನರು ಈ ಮಾದಪ್ಪನ ಒಕ್ಕಲು. ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ,ಕೊಳ್ಳೆಗಾಲ, ಹನೂರುಗಾಣೆ ಹೋಗಿ ಮಲಯ್ ಮಾದಪ್ಪನ ಬೆಟ್ಟವನ್ನ ತಲುಪಬಹುದು. ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕನ್ನಡಿಗರು 'ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎನ್ನುವುದು ಅಕ್ಕರಕ್ಕರವೂ ದಿಟ ಅನ್ನುವುದು ಮಾದಪ್ಪನ ಮೇಲೆ ಕಟ್ಟಿರುವ ಜನಪದ ಹಾಡುಗಳು(ಕಂಸಾಳೆ ಹಾಡುಗಳು) ಕೇಳಿದರೆ ನಮಗೆ ಅರಿವಾಗುತ್ತದೆ. ಯಾಕಂದ್ರೆ ಈ ಪದಗಳನ್ನು ಕಟ್ಟಿರುವವರು ಹೆಚ್ಚೇನು ಓದಿದವರಲ್ಲ ಅತವ ಬೇರೆ ಹಳೆಗನ್ನಡ/ನಡುಗನ್ನಡ ಕಬ್ಬಿಗರಂತೆ ಸಕ್ಕದ, ಪಾಗದಗಳನ್ನು ಕಲಿತವರೂ ಅಲ್ಲ. ಹಾಗಾಗಿ ಈ ಜನಪದ ಹಾಡುಗಳಲ್ಲಿ ನಮಗೆ ದಿಟವಾದ ಕನ್ನಡದ ಸೊಗಡು ಕಾಣಲು ಸಿಗ್ತದೆ.
ಡಾ. ಕೇಶವನ್ ಪ್ರಸಾದ್ ಎಂಬುವರು ಸಂಪಾದಿಸಿರುವ 'ಮಲಯ್ ಮಾದೇಶ್ವರ'ಎಂಬ ಹೊತ್ತಿಗೆಯ ಮುನ್ನುಡಿಯಲ್ಲಿ ಡಾ.ಚಂದ್ರಶೇಕರ ಕಂಬಾರರು "ಮಾದೇಶ್ವರ ಕಾವ್ಯವನ್ನು ಬುಡಕಟ್ಟು ಕಬ್ಬಕ್ಕೆ ಸೇರಿಸಿ ಅದರಿಂದ ಕನ್ನಡ ನಡಾವಳಿ/ಸಂಸ್ಕ್ರುತಿಯನ್ನು ಹುಡುಕುವ ಕೆಲಸಕ್ಕೆ ನಾವು ಕಯ್ ಹಾಕಿದ್ದೇವೆ. ಕಾಡು ಮತ್ತು ನಾಡಿನ ಹತ್ತಾರು ಜನವರ್ಗಗಳು ಪೂಜಿಸುವ ದೇವರು ಮತ್ತು ಆ ದೇವರ ಮೇಲೆ ಕಟ್ಟಿರುವ ಪದಗಳು ನೂರಾರು. ಇದುವರಗೆ ಕಡೆಣಿಕೆಗೆ ಗುರಿಯಾದ ಈ ಬುಡಕಟ್ಟಿನ ಸಂಸ್ಕ್ರುತಿ ಕೂಡ ಸಿರಿವಂತ ಎಂಬುದನ್ನು, ಮತ್ತು ಅದು ನಮ್ಮ ಹಿರಿಯರ ನುಡಿಯನ್ನು,ಅರಿವನ್ನು ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ ಎಂಬುದನ್ನು ನಾವು ತಿಳಿಯುತ್ತೇವೆ." ಎಂದಿದ್ದಾರೆ.
ಇದು 'ಪಿನ್ ಲಾಂಡಿನ ಬಾಯಿಗಬ್ಬದಶ್ಟೆ ದೊಡ್ಡದು' ಎಂಬುದು ಹಾ.ಮಾ.ನಾಯಕರ ಮಾತು. " ಈ ಹಿರಿಗಬ್ಬದಲ್ಲಿ ಬರುವ ಒಳ್ಳೆ ವಿಶಯಗಳು ಎಲ್ಲ ಕಾಲಕ್ಕೂ ಒಪ್ಪುವಂತದು ಹಾಗು ಅಲ್ಲಿನ ಪರಿಸರದ ಬಗ್ಗೆ ಅರಿವು, ಸಾಮಾಜಿಕ ತಿಳುವಳಿಕೆ ಹಾಗು ಮನಸ್ಸಿನ ಹರಹುಗಳು ಇಂದಿಗೂ ಒಪ್ಪುವಂತವು. ಓರ್ವ, ಕೆಟ್ಟ ವೆವಸ್ತೆಯನ್ನು ಇದಿರಿಸಿ ಒಟ್ಟಾರೆ ಸಾಮಾಜಿಕ ಅರಿವನ್ನು ತೋರಿಸಿ ವಸ್ತು-ಸ್ತಿತಿಯ ಅರಿವುಂಟು ಮಾಡುತ್ತಾನೆ' ಎನ್ನುತ್ತಾರೆ ಕೇಶವನ್ ಪ್ರಸಾದ್ ಅವರು.
ಇಲ್ಲಿ ಇನ್ನೊಂದು ಮುಕ್ಯವಾದ ಅಂಶ. ಮಾದೇಶ್ವರ, ಜುಂಜಪ್ಪ, ಮಯ್ಲಾರ ಮತ್ತು ಮಂಟೇಸಾಮಿಯಂತ ಶರಣರು ಕೆಳವರ್ಗದವರ ಇರುವಿಕೆಯನ್ನು ಮತ್ತೆ ಬಲಪಡಿಸುವ ಮತ್ತು ತಮ್ಮದೇ ಆದ ಸಂಸ್ಕ್ರುತಿಯನ್ನು ಕಟ್ಟುವ ಉದ್ದೇಶ ಇವರದಾಗಿತ್ತು ಅನ್ನಿಸ್ತದೆ. ಬೇಡರು, ಕಾಡು ಕುರುಬರು, ಸೋಲಿಗರೆಂಬ ಬುಡಕಟ್ಟು ಮಂದಿಯೆ ಮಾದಪ್ಪನ ಸೇವಕರು. ಅವರ ಉದ್ದೇಶಕ್ಕೆ ದುಡಿದವ ಮಾದೇಶ್ವರ.ಮಲಯ್ ಮಾದೇಶ್ವರ ನ ಮೇಲೆ ಕಟ್ಟಿರುವ ಪದಗಳನ್ನೆಲ್ಲ ಕೂಡಿಸಿದರೆ ಅದು ರಾಮಾಯಣ, ಮಾಬಾರತದಂತೆ ಒಂದು ಹಿರಿಗಬ್ಬ ಎನಿಸಿಕೊಳ್ಳುವದರಲ್ಲಿ ಎರಡು ಮಾತಿಲ್ಲ. ಅದನ್ನು oral epic ಎಂದೇ ಅರಯ್ಯುಗಾರರು ಹೇಳುತ್ತಾರೆ.
ಇನ್ನೊಂದು ನಿಬ್ಬರದ ಸಂಗತಿಯಂದರೆ ಈ ಮಾದಪ್ಪನ ಬೆಟ್ಟಕ್ಕೆ ಗಡಿಯಲ್ಲಿರುವ ತಮಿಳುನಾಡಿನ ಮಂದಿಯೂ ಬರುತ್ತಾರೆ. ಆದರೆ ತಮಿಳಿನಲ್ಲಿ ಮಾದಪ್ಪನ ಬಗ್ಗೆ ಪದಗಳು/ಕಬ್ಬಗಳು ಸಿಕ್ಕಿರುವುದು ತೀರ ಕಡಿಮೆ. ಹಾಗಾದರೆ ಮಾದಪ್ಪನ ಬೆಟ್ಟಕ್ಕೆ ಈಗಲು ತಮಿಳುನಾಡಿನಿಂದ ಬರುವವರು ಒಂದಾನೊಂದು ಕಾಲದಲ್ಲಿ ಕನ್ನಡದವರೇ ಆಗಿರಬೇಕು. ಹಾಗಾಗಿ ಕನ್ನಡ ಜನರು ಮತ್ತು ಕನ್ನಡ ನಾಡು ಕಾವೇರಿಯಿಂದ ಆಚೆಗೂ ಹರಡಿದ್ದಿರಬಹುದು(ಕವಿರಾಜಮಾರ್ಗಕಾರನು ಕನ್ನಡ ನಾಡಿನ ತೆಂಕಣದ ಎಲ್ಲೆಯನ್ನು ಸರಿಯಾಗಿ ಗುರುತ್ಸಿಲ್ಲ ಎಂಬ ವಾದಕ್ಕೆ ಇನ್ನಶ್ಟು ಬಲ ಬರುತ್ತದೆ - ಈ ವಾದದ ಬಗ್ಗೆ ಒಂದು ಹೊತ್ತಿಗೆಯನ್ನು ನಾನು 'ಅಂಕಿತ'ದಲ್ಲಿ ನೋಡಿದೆ).
ಡಿಎಲ್ ಅಯ್ ನಲ್ಲಿ ಮಾದಪ್ಪನ ಬಗ್ಗೆ ಹೊತ್ತಿಗೆಯಿದೆ.http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107
ಈ ಹೊತ್ತಿಗೆಯ ಪುಟ ೧೨ ರಲ್ಲಿ ಹೀಗಿದೆ. "..ಸೇಲಂ ಜಿಲ್ಲೆಯ ಕೆಲವು ಊರುಗಳನ್ನು ಸುತ್ತಿ ಕೇಳಲಾಗಿ ಮಾದಪ್ಪನ ಬಗ್ಗೆ ಕತೆ ಹೇಳುವವರು ಯಾರೂ ಇಲ್ಲ ಎಂಬ ಉತ್ತರ ದೊರೆಯಿತು. ಆದರೆ ದರ್ಮಪುರಿಯ ಕೆಲವು ಪ್ರದೇಶಗಳಲ್ಲಿ ಮಾದಪ್ಪನ ಹಾಡು ಹಾಡುವ ಕೆಲವು ಬಕುತರಿದ್ದಾರೆ ಎಂಬುದು ತಿಳಿಯಿತು. ಉಡುಕು ವಾದ್ಯವನ್ನು ಬಳಸಿಕೊಂಡು ಕನ್ನಡದವರೇ ತಮಿಳು ನಾಡಿಗೆ ಸೇರಿಕೊಂಡು ತಮಿಳಿನಲ್ಲಿ ಪದ್ಯ ಕಟ್ಟಿ ತಮ್ಮದೇ ಆದ ದಾಟಿಯಲ್ಲಿ ಹಾಡುವರೆಂದೆನಿಸುತ್ತದೆ. ಏನೇ ಇರಲಿ ತಮಿಳಿನ ಜನಪದ ಸಾಹಿತ್ಯದಲ್ಲಿ ಮಾದೇಶ್ವರರ ಕತೆಗಳಿಲ್ಲ ಎಂಬುದು ನಿಕ್ಕುವವಾಯಿತು...".
ಕೊ.ಕೊ: ಈಗ 'ಸಯ್ಕೊ' ಸಿನಿಮಾದ ರಗು ದೀಕ್ಸಿತ್ ರವರ ಹಾಡು 'ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಇವರ ಕರುಣದಿ ಕಾಯೋ ಮಾದೇಸ್ವರ' ಸಿಕ್ಕಾಪಟ್ಟೆ ಹಿಟ್ ಆಗಿದೆ.