ಶನಿವಾರ, ಮಾರ್ಚ್ 24, 2018

ನಿಜಗುಣ ಶಿವಯೋಗಿ ಮತ್ತು ಅನುಬವಸಾರವು

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಹತ್ತಿರ ಇರುವ, ಚಿಲುಕವಾಡಿ ಎಂಬ ಹಳ್ಳಿಯ ಗುಡ್ಡದಲ್ಲಿದ್ದ ನಿಜಗುಣ ಶಿವಯೋಗಿಯವರ 'ಅನುಬವ ಸಾರವು' ಎಂಬ ನೆಗಳ್ತೆಯಿಂದ ಒಂದು ನಲ್ಸಾಲು. ಇವರು ಇದ್ದುದು ೧೭ನೇ ನೂರೇಡು ಎಂದು ಹೇಳಲಾಗಿದೆ.
"ಮುಗಿಲ್ ಓಡೆ ಚಂದ್ರಮನ್ ಮಿಗೆ ಓಡುವಂತಿರ್ಪ್ಪ ಬಗೆಯಲ್ಲದು ಓಡದಂತು, ಅಹಮಿನಿಂ ಜೀವನಿಗೆ ವಿಕಾರವೆ ಸಹಜವಲ್ಲ"
ಹೇಗೆ ಮುಗಿಲು ಓಡುತ್ತಿದ್ದರೂ ತಿಂಗಳೇ(ಚಂದ್ರನೇ) ಓಡುತ್ತಿರುವಂತೆ ಅನಿಸುತ್ತದೆಯೋ ಆದರೆ ದಿಟವಾಗಿಯೂ ತಿಂಗಳನು ಓಡುತ್ತಿರುವುದಿಲ್ಲ. ಹಾಗೆ ಕೊಬ್ಬಿನಿಂದಾಗಿ ಮನುಶ್ಯನಲ್ಲಿ ನೋವು, ನಿರಾಸೆಗಳು ಉಂಟಾಗುತ್ತದೆಯೇ ಹೊರತು ಅದು ಸಹಜವಲ್ಲ.
#ಕನ್ನಡದ್ದೇ ಪದ 'ಮಿಗೆ' ಬಳಕೆ ನೋಡಿ

ಕಾಮೆಂಟ್‌ಗಳಿಲ್ಲ: