ಬುಧವಾರ, ಮೇ 23, 2012

ಕನ್ನಡ ಲಿಪಿ ಸುದಾರಣೆಗೆ ವಿರೋದ ಸಲ್ಲದು

ಇವತ್ತಿನ ವಿಜಯಕರ್ನಾಟಕದಲ್ಲಿ ಕನ್ನಡ ಲಿಪಿ ಸುದಾರಣೆಗೆ ಮಾನ್ಯ ಚಿದಾನಂದ ಮೂರ್ತಿಯವರಿಂದ ವಿರೋದ ಬಂದಿದೆ. ಅವರ ಪ್ರಕಾರ ನುಡಿಯರಿಮೆ(ಬಾಶಾವಿಗ್ನಾನ)ಯೇ ಬೇರೆ ಲಿಪಿಯೇ ಬೇರೆ.  ನುಡಿಯರಿಮೆಯೇ ಓದು ಏತಕ್ಕಾಗಿ ಮಾಡಲಾಗುತ್ತದೆಯಂದರೆ ನುಡಿಯ ಆಳ ಅಗಲಗಳನ್ನು ಅರಿತ ಅದರಿಂದ ದೊರತ ತಿಳಿವುಗಳನ್ನು ಸಮಾಜದಲ್ಲ ಬಳಸಿಕೊಳ್ಳಲು
ಸಾದ್ಯವೇ ಎಂದು ನೋಡಬೇಕಾಗುತ್ತದೆ. ಇದರಿಂದ ಬರಹದಲ್ಲಿ ಕೆಲವು ಮಾರ್ಪುಗಳನ್ನು ತಂದು ಅದರಿಂದ ಕಲಿಕಯನ್ನು ಉತ್ತಮಪಡಿಸಲಾಗುವುದಾದರೆ ನುಡಿಯರಿಮೆಯ ತಿಳವುಗಳನ್ನು ಲಿಪಿ ಸುದಾರಣೆಗ ಏಕೆ ಬಳಸಿಕೊಳ್ಳಬಾರದು? ಕಲಿಕೆ ಮತ್ತು ಅದರಿಂದ ಕಟ್ಟಿಕೊಳ್ಳಬಹುದಾದ ಬದಕನ್ನು ಹಸನು ಮಾಡಬಹುದಾದರೆ ಲಿಪಿ ಸುದಾರಣೇ ಏಕೆ ಬೇಡ? ಹೆಚ್ಚು ಮಂದಿಯ ಕಲಿಕೆಯನ್ನು ಸುಲಬ ಮಾಡುವ ಲಿಪಿ ಸುದಾರಣೆಯಿಂದ ಆಗುವ ಒಳಿತನ್ನು ನೋಡಿದಾಗ 'ಲಿಪಿ ಸಂಸ್ಕ್ರುತಿ'ಯ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು? ಇಶ್ಹ್ಟಕ್ಕೂ ಸಂಸ್ಕ್ರುತಿಯೆಂಬುದು ನಿಂತ ನೀರಲ್ಲ ಹರಿಯುವ ಹೊಳೆ ಇದ್ದ ಹಾಗೆ.
ನುಡಿಯರಿಮೆಯನ್ನು ಓದಿ ನಾವು ಲಿಪಿಯನ್ನು ಸುದಾರಣೆ ಮಾಡಬೇಕು ಎಂದು ತಿಳಿದುಕೊಂಡಿರುವಾಗ ಅದನ್ನು ಆಚರಣೆಗೆ ತರಲು ಏಕೆ ವಿರೋದ?  ನುಡಿ ಮತ್ತು ನಡೆಯಲ್ಲಿ ಯಾಕೆ ಈ ಬೇರೆತನ.  ಬಸವಣ್ಣನವರೇ ಒಂದು ವಚನದಲ್ಲಿ ಹೇಳಿರುವಂತೆ "ನುಡಿಯೊಳಗಾಗಿ ನಡೆಯದಿದ್ದವರ ಮೆಚ್ಚನಾ ಕೂಡಲಸಂಗಮದೇವ" ಎಂದು ಹೇಳಿಲ್ಲವೆ?
ಬಾಶೆಯ ಬೆಳವಣಿಗೆಯ ದ್ರುಶ್ಟಿಕೋನದಿಂದ ನೋಡಿದರೂ- ಬಾಶೆ ಬೆಳೆಯುವುದು ಹೆಚ್ಚು ಹೆಚ್ಚು ಮಂದಿ ಆ ಬಾಶೆಯ ಬರಹವನ್ನು ಕಲಿತಾಗಲೇ ಅಲ್ಲವೆ?   ಲಿಪಿ ಸುದಾರಣೆಯಿಂದ ಕನ್ನಡ ಬರಹವು ಸುಲಬವಾಗುವುದರಿಂದ ಹೆಚ್ಚು ಹೆಚ್ಚು ಮಂದಿ ಚೆನ್ನಾಗಿ ಕನ್ನಡ ಬರಹವನ್ನು ಕಲಿಯಲು ಅನುವಾಗುತ್ತದೆ. ಇದರಿಂದ ಬಾಶೆಯ ಬೆಳವಣಿಗೆ ಕಂಡಿತ ಆಗುತ್ತದೆ.

ಒಂದು ವೇಳೆ ಲಿಪಿ ಸುದಾರಣೆ ಮಾಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದರೆ ಎಲ್ಲರು ಕನ್ನಡ ಬರಹವನ್ನು ಚೆನ್ನಾಗಿ ಕಲಿಯಲು ಆಗುವುದಿಲ್ಲ. ಆಗ ಬರಹ ಬಲ್ಲವರು ಮತ್ತು ಬರಹ ಬರದವರು ಎಂಬ ಎರಡು ಗುಂಪುಗಳಾಗಿ ಬರಹಬಲ್ಲವರ ಚಿಂತನೆ ಬರಹಬರದವರ ಚಿಂತನೆಗಿಂತ ಬೇರಾಗಿರುತ್ತದೆ. ಹಾಗಾಗಿ ಸಮಾಜದಲ್ಲಿ ಕಂದಕ ಮೂಡುತ್ತದೆ. ಹೀಗಾಗದಂತೆ ನೋಡಿಕೊಳ್ಳಲು ನಾವು ಲಿಪಿ ಸುದಾರಣೆಗೆ ತೆರೆದುಕೊಳ್ಳಬೇಕಾಗಿದೆ.