ಶನಿವಾರ, ಜುಲೈ 26, 2008

ಅಣ್ಣೆಗನ್ನಡದ ಒರೆಗಳು

ಹಲಸಿಗ - doctor
ಬಾೞ್ದಲೆ - ಪ್ರಾಣ
ಹಯ್ - ಮಗು, ಶಿಶು ಹಯ್ಕಳು - ಮಕ್ಕಳು
ಹಮ್ಮು - ಗರ್ವ
ಹದಿಟೆ - ಪ್ರತಿಶ್ಟೆ
ಸೇದು - pull
ಹೂದಿಂಗಳು - ವಸಂತ ಮಾಸ
ಸಡ್ಡಕ - ಹೆಂಡತಿಯ ಸೋದರಿಯ ಗಂಡ
ವಾರಡಿ - ಓರೆ, ಓರಡಿ , ಬಾಗಿರುವುದು
ವಾಡಿಕೆ - ರೂಡಿ
ಮೊೞ್ಗು = ಬಾಗು,
ಬಗ್ಗುಮಗಿಲ್ - ಮೊಗಳ್, ಗೋಡೆ
ಬೀೞಕ್ಕರ - ವ್ಯಂಜನ
ಬೀಕಲ್ - ಅಂತಿಮ
ಬಿಸಿಗಣ್ಣಣುಗ - ವೀರಬದ್ರ
ಕಬ್ಬುವಿಲ್ಲ - ಮನ್ಮತಬಿಲ್ಲುಂ
ಬೆಱಗು - ಅತ್ಯಾಶ್ಚರ್ಯ
ಬಿಜ್ಜೆವೆಣ್ - ಸರಸ್ವತಿ
ಬಿಕ್ಕು - ದೀರ್ಗಶ್ವಾಸ
ಕೊಪ್ಪರ - ಹೆಗಲ ಕೊನೆ
ಕುಮ್ಬಿಡು - ನಮಸ್ಕರಿಸು
ಕುರ್ಚಿ - ಒಂದು ಅಂಗ ಕಡಿಯಲ್ಪಟ್ಟವನು, ಮಾದರಿ ಮೂಗುರ್ಚಿ = ಮೂಗು ತುಂಡಾದವನು
ಕುಲಿ - ಕೊಲ್ಲುವವನು (killer)
ಕುಸುರಿ - ಚಾತುರ್ಯ
ತಂಗದಿರ - ಚಂದ್ರ
ಕುಳಿರ್ವೆಟ್ಟ - ಹಿಮಾಲಯ
ಕುಳಿರ್ವೆಟ್ಟಣುಗಿ - ಗಿರಿಜೆ
ಕುಳೆರ್ವೆಳಗ - ಹಿಮಾಂಶು
ಕೆತ್ತು - ನಡುಗು
ಕೆೞವ - ಮುದುಕ
ಕೊತ್ತಿ - ಬೆಕ್ಕು , ಮಾರ್ಜಾಲ
ಅರಚಿಕೊಳ್ಳುವಿಕೆ - ಹರಾಜು, auction
ಅದ್ದಿಗ - ಅದ್ಯಕ್ಶ

ಕವಿರಾಜಮಾರ್ಗದಲ್ಲಿ ಮಾತಱಿವಂ, ನಿಪುಣಂ, ಜಾಣಂ ಮತ್ತು ಬಲ್ಲಂ

[ಸಂಪದದಲ್ಲಿ ಬರೆದದ್ದು]


ಕುಱಿತಂತು ಪೆಱರ ಬಗೆಯಂತೆಱೆದಿರೆ ಪೆಱರ್ಗಱಿಪಲಾರ್ಪವಂಮಾತಱಿವಂಕಿಱಿದಱೊಳೆ ಪಿರಿದುಮರ್ತಮನಱಿಪಲ್ ನೆಱೆವಾತನಾತನಿಂದಂನಿಪುಣಂ

ತಿರುಳು: ಮೇಲೆ ತಿಳಿಸಿದ ಬೇರೆಯವರ(ಕಬ್ಬಿಗರ) ಬಗೆಯನ್ನ(ಕಬ್ಬದ,ಮಾತಿನ) ಬಿಡಿಸಿ ಮತ್ತೆ ಬೇರೆಯವರಿಗೆ ಅರುಹಲಾಗುವವನು ಮಾತಱಿವಂ(ನ್)/ವಾಗ್ಮಿ(speaker) ಕಡಿಮೆ ಪದಗಳನ್ನು ಬಳಸಿ ಅದರಲ್ಲಿ ಹಿರಿದಾದ ವಸ್ತು,ವಿಶಯವನ್ನ ತುಂಬಿ ಅರುಹಲಾಗುವವನು ನಿಪುಣಂ(ನ್)


ನುಡಿಯಂ ಛಂದದೊಳೊಂದಿರೆತೊಡರ್ಚಲಱಿವಾತನಾತನಿಂದಂ ಜಾಣಂತಡೆಯದೆ ಮಹಾದ್ವಕ್ರುತಿಗಳನೊಡರಿಸಲಾರ್ಪಾತನೆಲ್ಲರಿಂದಂ ಬಲ್ಲಂ


ತಿರುಳು: ನುಡಿಯೊಳಗೆ ಚಂದಸ್ಸನ್ನು ಹೊಂದಿಸಿ(ತೊಡರ್ಸಿ) ಬರೆಯಲು ಅಱಿತವನು ಜಾಣಂ(ನ್), ಕೂಡಲೆ ಹೆಗ್ಗಬ್ಬಗಳನ್ನು ಹುಟ್ಟಿಸು(ಒಡರಿಸು)ವವನು ಎಲ್ಲರಿಗಿಂತ ಬಲ್ಲಂ(ನ್)/ಪಂಡಿತ

ಮಡಿವ ಬಯಕೆ ಮತ್ತು ಕನಸು

[ಸಂಪದದಲ್ಲಿ ಬರೆದದ್ದು]

ಮಡಿಯಲೆಳೆಸುವ ಮನದ ಬಯಕೆಯು
ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ
ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು
ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು

ಮಲಯ್ ಮಾದಪ್ಪ, ಕವಿರಾಜಮಾರ್ಗ ಮತ್ತು ಕನ್ನಡತನ

[ಸಂಪದದಲ್ಲಿ ಬರೆದದ್ದು, ಈ ಬರಹ ಡಾ ಡಿ.ಎನ್.ಶಂಕರಬಟ್ಟರ 'ಹೊಸಬರಹ'ದಲ್ಲಿದೆ]

ಈ ಹಿಂದೆ ಕವಿರಾಜಮಾರ್ಗ ಮತ್ತು ಕಂಸಾಳೆ ಇವುಗಳ ಬಗ್ಗೆ ಇಲ್ಲಿ ಬ್ಲಾಗಿದ್ದೆ.
ನಮ್ಮ ಮಯ್ಸೂರು,ಮಂಡ್ಯ, ಚಾಮರಾಜನಗರ, ರಾಮನಗರ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚು ಮಂದಿಗಳಿಂದ ಪೂಜಿಸಿಕೊಳ್ಳುವ, ಜನಪದರ ಒಲುಮೆಯ ದೇವ ಈ ಮಾದಪ್ಪ. ಒಕ್ಕಲಿಗರು, ಲಿಂಗಾಯಿತರು, ಉಪ್ಪಾಲಿಗರು, ಕುರುಬರು,ಹಾಲುಮತದವರು ಮತ್ತು ದಲಿತರು ಹೀಗೆ ಎಲ್ಲ ಜಾತಿಗಳ ಜನರು ಈ ಮಾದಪ್ಪನ ಒಕ್ಕಲು. ಬೆಂಗಳೂರಿನಿಂದ ಮದ್ದೂರು, ಮಳವಳ್ಳಿ,ಕೊಳ್ಳೆಗಾಲ, ಹನೂರುಗಾಣೆ ಹೋಗಿ ಮಲಯ್ ಮಾದಪ್ಪನ ಬೆಟ್ಟವನ್ನ ತಲುಪಬಹುದು. ಕವಿರಾಜಮಾರ್ಗದಲ್ಲಿ ಹೇಳಿರುವಂತೆ ಕನ್ನಡಿಗರು 'ಕಾವ್ಯ ಪ್ರಯೋಗ ಪರಿಣಿತಮತಿಗಳ್' ಎನ್ನುವುದು ಅಕ್ಕರಕ್ಕರವೂ ದಿಟ ಅನ್ನುವುದು ಮಾದಪ್ಪನ ಮೇಲೆ ಕಟ್ಟಿರುವ ಜನಪದ ಹಾಡುಗಳು(ಕಂಸಾಳೆ ಹಾಡುಗಳು) ಕೇಳಿದರೆ ನಮಗೆ ಅರಿವಾಗುತ್ತದೆ. ಯಾಕಂದ್ರೆ ಈ ಪದಗಳನ್ನು ಕಟ್ಟಿರುವವರು ಹೆಚ್ಚೇನು ಓದಿದವರಲ್ಲ ಅತವ ಬೇರೆ ಹಳೆಗನ್ನಡ/ನಡುಗನ್ನಡ ಕಬ್ಬಿಗರಂತೆ ಸಕ್ಕದ, ಪಾಗದಗಳನ್ನು ಕಲಿತವರೂ ಅಲ್ಲ. ಹಾಗಾಗಿ ಈ ಜನಪದ ಹಾಡುಗಳಲ್ಲಿ ನಮಗೆ ದಿಟವಾದ ಕನ್ನಡದ ಸೊಗಡು ಕಾಣಲು ಸಿಗ್ತದೆ.
ಡಾ. ಕೇಶವನ್ ಪ್ರಸಾದ್ ಎಂಬುವರು ಸಂಪಾದಿಸಿರುವ 'ಮಲಯ್ ಮಾದೇಶ್ವರ'ಎಂಬ ಹೊತ್ತಿಗೆಯ ಮುನ್ನುಡಿಯಲ್ಲಿ ಡಾ.ಚಂದ್ರಶೇಕರ ಕಂಬಾರರು "ಮಾದೇಶ್ವರ ಕಾವ್ಯವನ್ನು ಬುಡಕಟ್ಟು ಕಬ್ಬಕ್ಕೆ ಸೇರಿಸಿ ಅದರಿಂದ ಕನ್ನಡ ನಡಾವಳಿ/ಸಂಸ್ಕ್ರುತಿಯನ್ನು ಹುಡುಕುವ ಕೆಲಸಕ್ಕೆ ನಾವು ಕಯ್ ಹಾಕಿದ್ದೇವೆ. ಕಾಡು ಮತ್ತು ನಾಡಿನ ಹತ್ತಾರು ಜನವರ್ಗಗಳು ಪೂಜಿಸುವ ದೇವರು ಮತ್ತು ಆ ದೇವರ ಮೇಲೆ ಕಟ್ಟಿರುವ ಪದಗಳು ನೂರಾರು. ಇದುವರಗೆ ಕಡೆಣಿಕೆಗೆ ಗುರಿಯಾದ ಈ ಬುಡಕಟ್ಟಿನ ಸಂಸ್ಕ್ರುತಿ ಕೂಡ ಸಿರಿವಂತ ಎಂಬುದನ್ನು, ಮತ್ತು ಅದು ನಮ್ಮ ಹಿರಿಯರ ನುಡಿಯನ್ನು,ಅರಿವನ್ನು ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಬಂದಿವೆ ಎಂಬುದನ್ನು ನಾವು ತಿಳಿಯುತ್ತೇವೆ." ಎಂದಿದ್ದಾರೆ.
ಇದು 'ಪಿನ್ ಲಾಂಡಿನ ಬಾಯಿಗಬ್ಬದಶ್ಟೆ ದೊಡ್ಡದು' ಎಂಬುದು ಹಾ.ಮಾ.ನಾಯಕರ ಮಾತು. " ಈ ಹಿರಿಗಬ್ಬದಲ್ಲಿ ಬರುವ ಒಳ್ಳೆ ವಿಶಯಗಳು ಎಲ್ಲ ಕಾಲಕ್ಕೂ ಒಪ್ಪುವಂತದು ಹಾಗು ಅಲ್ಲಿನ ಪರಿಸರದ ಬಗ್ಗೆ ಅರಿವು, ಸಾಮಾಜಿಕ ತಿಳುವಳಿಕೆ ಹಾಗು ಮನಸ್ಸಿನ ಹರಹುಗಳು ಇಂದಿಗೂ ಒಪ್ಪುವಂತವು. ಓರ್ವ, ಕೆಟ್ಟ ವೆವಸ್ತೆಯನ್ನು ಇದಿರಿಸಿ ಒಟ್ಟಾರೆ ಸಾಮಾಜಿಕ ಅರಿವನ್ನು ತೋರಿಸಿ ವಸ್ತು-ಸ್ತಿತಿಯ ಅರಿವುಂಟು ಮಾಡುತ್ತಾನೆ' ಎನ್ನುತ್ತಾರೆ ಕೇಶವನ್ ಪ್ರಸಾದ್ ಅವರು.
ಇಲ್ಲಿ ಇನ್ನೊಂದು ಮುಕ್ಯವಾದ ಅಂಶ. ಮಾದೇಶ್ವರ, ಜುಂಜಪ್ಪ, ಮಯ್ಲಾರ ಮತ್ತು ಮಂಟೇಸಾಮಿಯಂತ ಶರಣರು ಕೆಳವರ್ಗದವರ ಇರುವಿಕೆಯನ್ನು ಮತ್ತೆ ಬಲಪಡಿಸುವ ಮತ್ತು ತಮ್ಮದೇ ಆದ ಸಂಸ್ಕ್ರುತಿಯನ್ನು ಕಟ್ಟುವ ಉದ್ದೇಶ ಇವರದಾಗಿತ್ತು ಅನ್ನಿಸ್ತದೆ. ಬೇಡರು, ಕಾಡು ಕುರುಬರು, ಸೋಲಿಗರೆಂಬ ಬುಡಕಟ್ಟು ಮಂದಿಯೆ ಮಾದಪ್ಪನ ಸೇವಕರು. ಅವರ ಉದ್ದೇಶಕ್ಕೆ ದುಡಿದವ ಮಾದೇಶ್ವರ.ಮಲಯ್ ಮಾದೇಶ್ವರ ನ ಮೇಲೆ ಕಟ್ಟಿರುವ ಪದಗಳನ್ನೆಲ್ಲ ಕೂಡಿಸಿದರೆ ಅದು ರಾಮಾಯಣ, ಮಾಬಾರತದಂತೆ ಒಂದು ಹಿರಿಗಬ್ಬ ಎನಿಸಿಕೊಳ್ಳುವದರಲ್ಲಿ ಎರಡು ಮಾತಿಲ್ಲ. ಅದನ್ನು oral epic ಎಂದೇ ಅರಯ್ಯುಗಾರರು ಹೇಳುತ್ತಾರೆ.
ಇನ್ನೊಂದು ನಿಬ್ಬರದ ಸಂಗತಿಯಂದರೆ ಈ ಮಾದಪ್ಪನ ಬೆಟ್ಟಕ್ಕೆ ಗಡಿಯಲ್ಲಿರುವ ತಮಿಳುನಾಡಿನ ಮಂದಿಯೂ ಬರುತ್ತಾರೆ. ಆದರೆ ತಮಿಳಿನಲ್ಲಿ ಮಾದಪ್ಪನ ಬಗ್ಗೆ ಪದಗಳು/ಕಬ್ಬಗಳು ಸಿಕ್ಕಿರುವುದು ತೀರ ಕಡಿಮೆ. ಹಾಗಾದರೆ ಮಾದಪ್ಪನ ಬೆಟ್ಟಕ್ಕೆ ಈಗಲು ತಮಿಳುನಾಡಿನಿಂದ ಬರುವವರು ಒಂದಾನೊಂದು ಕಾಲದಲ್ಲಿ ಕನ್ನಡದವರೇ ಆಗಿರಬೇಕು. ಹಾಗಾಗಿ ಕನ್ನಡ ಜನರು ಮತ್ತು ಕನ್ನಡ ನಾಡು ಕಾವೇರಿಯಿಂದ ಆಚೆಗೂ ಹರಡಿದ್ದಿರಬಹುದು(ಕವಿರಾಜಮಾರ್ಗಕಾರನು ಕನ್ನಡ ನಾಡಿನ ತೆಂಕಣದ ಎಲ್ಲೆಯನ್ನು ಸರಿಯಾಗಿ ಗುರುತ್ಸಿಲ್ಲ ಎಂಬ ವಾದಕ್ಕೆ ಇನ್ನಶ್ಟು ಬಲ ಬರುತ್ತದೆ - ಈ ವಾದದ ಬಗ್ಗೆ ಒಂದು ಹೊತ್ತಿಗೆಯನ್ನು ನಾನು 'ಅಂಕಿತ'ದಲ್ಲಿ ನೋಡಿದೆ).
ಡಿಎಲ್ ಅಯ್ ನಲ್ಲಿ ಮಾದಪ್ಪನ ಬಗ್ಗೆ ಹೊತ್ತಿಗೆಯಿದೆ.http://www.new.dli.ernet.in/scripts/FullindexDefault.htm?path1=/data/upload/0028/112&first=1&last=395&barcode=2040100028107
ಈ ಹೊತ್ತಿಗೆಯ ಪುಟ ೧೨ ರಲ್ಲಿ ಹೀಗಿದೆ. "..ಸೇಲಂ ಜಿಲ್ಲೆಯ ಕೆಲವು ಊರುಗಳನ್ನು ಸುತ್ತಿ ಕೇಳಲಾಗಿ ಮಾದಪ್ಪನ ಬಗ್ಗೆ ಕತೆ ಹೇಳುವವರು ಯಾರೂ ಇಲ್ಲ ಎಂಬ ಉತ್ತರ ದೊರೆಯಿತು. ಆದರೆ ದರ್ಮಪುರಿಯ ಕೆಲವು ಪ್ರದೇಶಗಳಲ್ಲಿ ಮಾದಪ್ಪನ ಹಾಡು ಹಾಡುವ ಕೆಲವು ಬಕುತರಿದ್ದಾರೆ ಎಂಬುದು ತಿಳಿಯಿತು. ಉಡುಕು ವಾದ್ಯವನ್ನು ಬಳಸಿಕೊಂಡು ಕನ್ನಡದವರೇ ತಮಿಳು ನಾಡಿಗೆ ಸೇರಿಕೊಂಡು ತಮಿಳಿನಲ್ಲಿ ಪದ್ಯ ಕಟ್ಟಿ ತಮ್ಮದೇ ಆದ ದಾಟಿಯಲ್ಲಿ ಹಾಡುವರೆಂದೆನಿಸುತ್ತದೆ. ಏನೇ ಇರಲಿ ತಮಿಳಿನ ಜನಪದ ಸಾಹಿತ್ಯದಲ್ಲಿ ಮಾದೇಶ್ವರರ ಕತೆಗಳಿಲ್ಲ ಎಂಬುದು ನಿಕ್ಕುವವಾಯಿತು...".
ಕೊ.ಕೊ: ಈಗ 'ಸಯ್ಕೊ' ಸಿನಿಮಾದ ರಗು ದೀಕ್ಸಿತ್ ರವರ ಹಾಡು 'ನಿನ್ನ ಪೂಜೆಗೆ ಬಂದೆ ಮಾದೇಸ್ವರ, ಇವರ ಕರುಣದಿ ಕಾಯೋ ಮಾದೇಸ್ವರ' ಸಿಕ್ಕಾಪಟ್ಟೆ ಹಿಟ್ ಆಗಿದೆ.