ಬುಧವಾರ, ಆಗಸ್ಟ್ 15, 2012

ಕನ್ನಡದ ತೆರೆಯುಲಿಗಳ ಗುಂಪಿಸುವಿಕೆ


ಕನ್ನಡದ ತೆರೆಯುಲಿಗಳನ್ನು ಹೀಗೆ ಗುಂಪಿಸಬಹುದು:-
ಗುಂಪು: ಇ, ಎ(ಗಿಡ್ಡ); ಈ, ಏ (ಉದ್ದ)
ಗುಂಪು : ಅ, ಉ, ಒ(ಗಿಡ್ಡ); ಆ, ಊ, ಓ(ಉದ್ದ)

ಹೀಗೆ ಗುಂಪಿಸಲು ದೂಸರೇನೆಂದರೆ ಸೇರಿಕೆಯಾಗುವಾಗ ಅವುಗಳಗಿರುವ ಗುಣ.

ಯ ಗುಂಪು:-
ಸೇರಿಕೆಯಾಗುವೆಡೆ ಇ,ಎ ತೆರೆಯುಲಿಗಳು ’’ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ಬಂಡಿ+ಅಲ್ಲಿ = ಬಂಡಿಲ್ಲಿ (ಬಂಡಿವಲ್ಲಿ ಆಗಲ್ಲ) - ಇಲ್ಲಿ ’ಬಂಡಿ’ ಎಂಬುದನ್ನು ’ಬಂಡ್+ಇ’ ಎಂದು ಬಿಡಿಸಿದಾಗ ಅಲ್ಲಿರುವ ’ಇ’ ಕಾರ ಕಾಣಿಸುತ್ತದೆ.
ಬಂಡೆ+ಅನ್ನು = ಬಂಡೆನ್ನು ( ಬಂಡೆವನ್ನು ಆಗಲ್ಲ) - ಇಲ್ಲಿ ’ಬಂಡೆ’ ಎಂಬುದನ್ನು ’ಬಂಡ್+ಎ’ ಎಂದು ಬಿಡಿಸಿದಾಗ ಅಲ್ಲಿರುವ ’ಎ’ಕಾರ ಕಾಣಿಸುತ್ತದೆ.

ವ ಗುಂಪು:-
ಸೇರಿಕೆಯಾಗುವೆಡೆ ಅ,ಉ ತೆರೆಯುಲಿಗಳು ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ದನ+ಅನ್ನು = ದನವನ್ನು (ದನಯನ್ನು ಆಗಲ್ಲ) - ಇಲ್ಲಿ ದನಎಂಬುದನ್ನು ದನ್+ಎಂದು ಬಿಡಿಸಿದಾಗ ಅಲ್ಲಿರುವ ಕಾರ ಕಾಣಿಸುತ್ತದೆ.
ಕರು+ಅನ್ನು = ಕರುವನ್ನು (ಕರುಯನ್ನು ಆಗಲ್ಲ) - ಇಲ್ಲಿ ಬಂಡೆಎಂಬುದನ್ನು ಕರ್+ಎಂದು ಬಿಡಿಸಿದಾಗ ಅಲ್ಲಿರುವ ಕಾರ ಕಾಣಿಸುತ್ತದೆ.
ಕನ್ನಡದಲ್ಲಿ ಉದ್ದ ತೆರೆಯುಲಿಗಳಿಂದ ಕೊನೆಯಾಗುವ ಪದಗಳು ಕಡಿಮೆ ಎನ್ನಬಹುದು. ಇದ್ದರು ಅವುಗಳೊಂದಿಗೆ ಬೇರೆ ಪದಗಳು ಸೇರಿಕೆಯಾಗದೆ ಹಾಗೆ ಉಳಿಯುತ್ತವೆ. ಅದಕ್ಕಾಗಿ ಇಲ್ಲಿ ಅಂತಹ ಎತ್ತುಗೆಗಳನ್ನು ಕೊಟ್ಟಿಲ್ಲ/ಕೊಡಲಾಗುವುದಿಲ್ಲ.

ಇನ್ನೊ ಒ ಇಲ್ಲವೆ ಓ ಕಾರದಲ್ಲಿ ಕೊನೆಗೊಳ್ಳುವ ಪದಗಳು ಕಡಿಮೆ. ಆದರೆ ನಾವು ಆಡುನುಡಿಯ ಒಲವನ್ನು ಇಲ್ಲಿ ಗಮನಿಸಬಹುದು. ’ಒ’ ಇಲ್ಲವೆ ’ಓ’ಕಾರಗಳು ಕೂಡ ಆಡುಮಾತಿನಲ್ಲಿ ’ವ’ಕಾರಕ್ಕೆ ಮಾರ್ಪಾಟಾಗುವ ಒಲವನ್ನು ತೋರಿಸುತ್ತವೆ.
ಒತ್ತು <-> ವತ್ತು
ಒಪ್ಪು <-> ವಪ್ಪು
ಒರಟ <-> ವರಟ
ಓಲಗ <-> ವಾಲಗ
ಓಟ <-> ವಾಟ
ಓಲೆ <-> ವಾಲೆ

ಶುಕ್ರವಾರ, ಆಗಸ್ಟ್ 10, 2012

ಎರಡನೇ ಉಲಿಕಂತೆಯ ತೆರೆಯುಲಿಯ ಬಗ್ಗೆ



ಕನ್ನಡದ ಮೂರು ಬರಿಗೆಗಳ/ಉಲಿಕಂತೆಗಳ ಪದಗಳಲ್ಲಿ ಎರಡನೆ ಉಲಿಕಂತೆಯಲ್ಲಿರುವ ತೆರೆಯುಲಿಯು ಅಶ್ಟು ಮುಕ್ಯವಲ್ಲ ಅಂದರೆ

ಬಟ್ಟಲು = ಬಟ್ಟಿಲು ( ಟ್+ಟ್+ಇ)
ಮೆಟ್ಟಿಲು = ಮೆಟ್ಟಲು ( ಟ್+ಟ್+ಇ)
ಬಾಗಿಲು = ಬಾಗಲು ( ಗ್+ಇ)

ಕಾರಣ: ದಿಟವಾಗಲೂ ಈ ಎರಡನೇ ಬರಿಗೆ/ಉಲಿಕಂತೆಯಲ್ಲಿರುವ ತೆರೆಯುಲಿಯನ್ನು ನಾವು ಆಡುಮಾತಿನಲ್ಲಿ ಉಲಿಯುವುದೇ ಇಲ್ಲ.

ಬಟ್-ಲು = ಬಟ್ಲು
ಬಾಗ್-ಲು =ಬಾಗ್ಲು
ಊದ್-ಲು = ಊದ್ಲು

ಕೆಲವು ಕಡೆ ಎರಡನೇ ಉಲಿಕಂತೆಯನ್ನೇ(ತೆರೆಯುಲಿ+ಮುಚ್ಚುಲಿ) ಉಲಿಯುವುದೇ ಇಲ್ಲ.

'ರ್+ಅ' ಬಿದ್ದುಹೋಗಿದೆ.

ನೆರಳು = ನೆಳ್ಳು
ಹೊರಳು = ವೊಳ್ಳು
ನರಳು = ನಳ್ಳು
ಕರುಳು = ಕಳ್ಳು

ಹೀಗೆ ಇನ್ನು ಬೇರೆ ಬೇರೆ ಎತ್ತುಗೆಗಳು
ಮೆಂತೆಯ => ಮೆಂತ್ಯ

ತಿರುಳು:-
ಎರಡನೇ ಉಲಿಕಂತೆಯ ತೆರೆಯುಲಿಯೇ ಮಾತಿನಲ್ಲಿ ಬಿದ್ದು ಹೋಗುವಾಗ ಯಾವ ತೆರೆಯುಲಿ
ಅಲ್ಲಿ ಇದ್ದರೇನು? ಹಾಗಾಗಿಯೇ ಎರಡನೇ ಉಲಿಕಂತೆಯಲ್ಲಿರುವ ತೆರೆಯುಲಿ ಅಶ್ಟು ಅರಿದು ಅಲ್ಲ.

ಗಮನಿಸಿ: ಕೆಲವು ಕಡೆ ಮುಚ್ಚುಲಿಯು ಮಾತಿನಲ್ಲಿ ಬಿದ್ದು ಹೋಗುತ್ತದೆ

ಭಾನುವಾರ, ಆಗಸ್ಟ್ 05, 2012

ಕಲಿಕೆಯ ಕೇಳ್ವಿಗಳು

ಇತ್ತೀಚಿನ ದಿನಗಳಲ್ಲಿ ’ಕಲಿಕೆ’ಯ ಇಲ್ಲವೆ 'ಕಲಿಕೆಯೇರ್ಪಾಡು' ಎಂಬ ವಿಶಯ ಬಂದಾಗ ಹಲವು ಮಂದಿ ಕೇಳುತ್ತಿರುವ ಕೇಳ್ವಿಗಳಲ್ಲಿ ಮೊದಲ ಎರಡು

೧.ಕಲಿಮನೆಗಳಲ್ಲಿ ಏನನ್ನು ಕಲಿಸಬೇಕು ?
೨.ಕಲಿಮನೆಗಳಲ್ಲಿ ಯಾವ ಒಯ್ಯುಗೆಯಲ್ಲಿ(ಮಾದ್ಯಮ) ಕಲಿಸಬೇಕು?

ಕೆಲವರು ಮೊದಲ ಕೇಳ್ವಿ ತುಂಬ ಅರಿದಾದುದು(ಮುಕ್ಯವಾದುದು) ಎಂದು ನಂಬಿದ್ದಾರೆ. ಅಂತಹವರಿಗೆ ಎರಡನೇ ಕೇಳ್ವಿಯೂ ಇದೆ ಆದರೆ ಅದರ ಬಗ್ಗೆ ಅಶ್ಟು ಆಸಕ್ತಿ-ಹುರುಪಾಗಲಿ ಅವರಿಗೆ ಇದ್ದಂತೆ ಕಾಣುವುದಿಲ್ಲ. ಮೊದಲ ಕೇಳ್ವಿಯ ಬಗ್ಗೆ ತುಂಬ ತಲೆ ಕೆಡಿಸಿಕೊಂಡಂತೆ ಇದೆ. ಆದರೆ ದಿಟವಾಗಲೂ ಅವೆರಡು ಬೇರೆ ಬೇರೆಯಾಗಿ ನೋಡಬೇಕಾದ ಕೇಳ್ವಿಗಳಲ್ಲ. ಅವೆರಡೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಯಾಕಂದರೆ ನಾವು ಏನನ್ನು ಮೊದಮೊದಲು ಕಲಿಸಬಹುದು ಎಂಬುದು ಯಾವ ನುಡಿಯಲ್ಲಿ(ಮಾದ್ಯಮದಲ್ಲಿ) ಕಲಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ನೆಲದ ಅರಿಗರೆಲ್ಲ ’ತಾಯ್ನುಡಿಯಲ್ಲೇ ಕಲಿಕೆ’ ಆದರೆ ಒಳ್ಳೆಯದು; ಅದರಿಂದ ಮಗುವಿಗೆ ’ತಾನಗಿಯೇ ಬಂದ ಸಲೆ’(natural advantage)ಯನ್ನು ಚೆನ್ನಾಗಿ ಬಳಸಿಕೊಂಡು ಬದುಕಿನಲ್ಲಿ ಮುಂದೆ ಬರಬಹುದು ಎಂದು ಹೇಳಿದ್ದಾರೆ.

ಕಲಿಯುವು ಮಗುವು ಕನ್ನಡವನ್ನು ಓದಲು ಬರೆಯಲು ಕಲಿತ ಮೇಲೆ ಅದರಿಂದ ದೊರೆತ ಅಳವನ್ನು ಬಳಸಿಕೊಂಡು ತನ್ನ ಸುತ್ತಲಿನ ಪರಿಸರವನ್ನು ಗಮನಿಸಲು ಅನುವಾಗುವಂತೆ ಕಲಿಕೆಯು ಇರಬೇಕಾಗುತ್ತದೆ. ಅಂದರೆ ಗಮನಿಕೆಯಿಂದ ದೊರೆತ ಅರಿವನ್ನು ಒರೆಗೆ ಹಚ್ಚುವ ಹಾಗೆ ಕಲಿಕೆಯಿದ್ದರೆ ಕಲಿತ್ತದ್ದು ತಲೆಗೆ ಹತ್ತುತ್ತದೆ. ಇದರಿಂದ ಅರಿವಿನ ಆಳವನ್ನು ಹಿಗ್ಗಿಸಿಕೊಳ್ಳಲು ಬರುತ್ತದೆ.
ಎತ್ತುಗೆಗೆ: ಮಯ್ಸೂರಿನಲ್ಲಿ ಓದುತ್ತಿರುವ ಮಗುವು ಮೊದಲ ೭ ತರಗತಿಗಳಲ್ಲಿ/ಏಡುಗಳಲ್ಲಿ ಮಯ್ಸೂರಿನ ಕೂಡಣದ, ಸೊಮ್ಮಿನ ಮತ್ತು ಹಿನ್ನಡವಳಿಯ ಪರಿಚಯವಾಗುವಂತೆ ಓದುಗೆಗಳು ಇರಬೇಕು. ಇದರಿಂದ ಓದಿದುದನ್ನು ಪಳಗಿಕೆಯ ಗಾಣೆ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಬಹುದು.

ಹೀಗೆ ಮಕ್ಕಳಿಗೆ ಎಲ್ಲವನ್ನು ಕನ್ನಡದಲ್ಲಿ ಕಲಿಯುವ ಏರ್ಪಾಟಾದಾಗ, ಇದಕ್ಕೆ ಹೊಂದುವ ಕಲಿಸುವ ಹೊಲುಬುಗಳನ್ನು ಕಂಡುಕೊಂಡಾಗ ’ಓದುಗೆ’ಗಳು ಕೂಡ ಅದಕ್ಕೆ ತಕ್ಕಂತೆ ತಾನಾಗಿಯೇ ಹೊಂದಿಕೊಳ್ಳುತ್ತವೆ. ಈಗಿನ ಓದುಗೆಗಳಲ್ಲಿರುವ ಕೆಲಸಕ್ಕೆ ಬಾರದಿರುವ ಪುರುಳುಗಳು(ವಿಶಯಗಳು) ಅಂದರೆ ಕನ್ನಡ ಸಮಾಜಕ್ಕೆ ತೀರ ದೂರವಿರುವ/ನಂಟಿರದ ಪುರುಳುಗಳು ಓದುಗೆಗಳಲ್ಲಿ ಉಳಿಯುವುದಿಲ್ಲ ಯಾಕಂದರೆ ದಿಟವಾದ ಕಲಿಕೆಗೆ ಇವುಗಳಿಂದ ಯಾವ ಬಳಕೆಯಿಲ್ಲ. ಹಾಗಾಗಿ ಕಲಿಕೆಯ ಹೊಲದಲ್ಲಿ ಅರಿದಾದ ಮಾರ್ಪಾಟುಗಳು ಆಗಿ ಕಲಿಕೆ ಎಂಬುದು ಎತ್ತರದ ಹೊರೆಯಾಗದೆ ಇನ್ನು ಹತ್ತಿರವಾಗುತ್ತದೆ. ಈ ಹತ್ತಿರವಾಗಿಸುವಿಕೆಯೇ ಕಲಿಕೆಯಲ್ಲಿ ಇಂದು ಆಗಬೇಕಾಗಿರುವುದು. ಈ ಹತ್ತಿರವಾಗಿಸುವಿಕೆಯಿಂದಲೇ ಮಕ್ಕಳು ತಮ್ಮ ಸುತ್ತಲಿನ ಕೂಡಣಕ್ಕೆ ಒಗ್ಗಿಕೊಳ್ಳುವುದು. ಕೂಡಣಕ್ಕೆ ಒಗ್ಗಿಕೊಂಡ ಮಕ್ಕಳು ಮುಂದೆ ಆ ಕೂಡಣಕ್ಕೆ ಆಸ್ತಿಯಾಗಬಲ್ಲರು ಮತ್ತು ಆ ಕೂಡಣಕ್ಕೆ ಕೊಡುಗೆಗಳನ್ನು ನೀಡಬಲ್ಲರು.