ಮಂಗಳವಾರ, ಡಿಸೆಂಬರ್ 26, 2006

ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ

ನಮ್ಮ ದೇಶದಲ್ಲೆ ಬಹುಶಃ ಪ್ರಥಮ ಬಾರಿಗೆ ಸಾಮಾಜಿಕ, ಧಾರ್ಮಿಕ, ತಾತ್ವಿಕ, ಸಾಹಿತ್ಯಕ ಹಾಗು ರಾಜಕೀಯವಾಗಿ ಕ್ರಾಂತಿಯನ್ನುಂಟು ಮಾಡಿದ ಮಹಾನುಭಾವ ಬಸವಣ್ಣ. ಅವರ ಬಹು ದೊಡ್ಡ ಕೊಡುಗೆಗಳಲ್ಲಿ ವಚನ ಸಾಹಿತ್ಯವೂ ಒಂದು. ಅದರ ಬಗೆಗಿನ ಚಿಂತನೆ ಹಾಗು ಜಿಙ್ನಾಸೆಗಳು ಇಲ್ಲಿ ಮೂಡಿವೆ.

"ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ ..."

ಈ ವಚನ ಎಷ್ಟು ಸರಳವಾಗಿದೆಯೊ ಅಷ್ಟೆ ಗಹನ ವಿಚಾರವನ್ನು ಒಳಗೊಂಡಿದೆ. ನೇರವಾಗಿ ಹೇಳುವುದಾದರೆ ಇದು ಬಸವಣ್ಣನವರ ಸರಳತೆ,ವಿನಮ್ರತೆ ಹಾಗು ವಿನಯತೆಗೆ ಕೈಗನ್ನಡಿಯಂತಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಬಸವಣ್ಣನವರು "ಶಿವಭಕ್ತರಿಗಿಂತ ಹಿರಿಯರಿಲ್ಲ..." ಎಂದು ಏಕೆ ಹೇಳುತ್ತಾರೆ ಶಿವನಿಗಿಂತ ಹಿರಿಯರಿಲ್ಲ ಎಂದು ಏಕೆ ಹೇಳಲಿಲ್ಲ? ಎಂಬುದು. ಅವರು ದೈವಕ್ಕಿಂತ ದೈವಭಕ್ತಿಯೇ ಹಿರಿದು, ಶುದ್ಧ ದೈವ ಭಕ್ತಿಯುಳ್ಳವನು ದೈವವನ್ನು ಮೀರಿಸಬಲ್ಲ ಎಂದು ನಂಬಿದ್ದರೆಂದು ಖಂಡಿತವಾಗಿ ಹೇಳಬಹುದು. ಈ ಮಾತನ್ನು ಬಹು ಮಟ್ಟಿನ ಆಸ್ತಿಕರು ಒಪ್ಪುತ್ತಾರೊ ತಿಳಿಯದು, ಆದರೂ ಬಸವಣ್ಣನವರ ಈ ನಿಲುವು ಹಿಂದು ಧರ್ಮದಲ್ಲಿ ಕ್ರಾಂತಿಕಾರಕ ಎಂದು ಹೇಳಬಹುದು. ಭಕ್ತಿಯು ಮುಕ್ತಿಯ ಸಾಧನವೊಂದೆ ಅಲ್ಲ ಬದುಕನ್ನು ಹಸನು ಮಾಡುವ ಶಕ್ತಿ ಹೊಂದಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

"ಉಳ್ಳವರು ಶಿವಾಲಯ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯ

ಎನ್ನ ಕಾಲೆ ಕಂಬವು
ದೇಹವೆ ದೇಗುಲ
ಶಿರವೆ ಹೊನ್ನ ಕಳಸವಯ್ಯ

ಸ್ಥಾವರಕ್ಕಳಿವಂಟು
ಜಂಗಮಕ್ಕಳಿವಿಲ್ಲ
ಅಯ್ಯ ಕೇಳಯ್ಯ ಕೂಡಲಸಂಗಯ್ಯ"

ನೇರ ಅರ್ಥ ಇದು ಒಬ್ಬ ಬಡವನ ನಿಸ್ಸಾಹಯಕತೆಯಾಗಿ ಕಾಣಬಹುದು ಆದರೆ ಇದು 'ದೇಹ'ವನ್ನೆ 'ದೇಗುಲ'ವನ್ನಾಗಿಸುವ ಉನ್ನತ ತತ್ವಯುಕ್ತ ವಾಣಿ. ಇದು ಬಹುಶಃ ಆಗಿನ ಕಾಲದ ಅಸ್ಪೃಷ್ಯತೆ, ಜಾತೀಯತೆಯಂತಹ ಕಂದಾಚಾರಗಳ ವಿಡಂಬಣೆಯಾಗಿ ಕೂಡ ಅರ್ಥೈಸಬಹುದು. ತಮ್ಮ ತಮ್ಮ ದೇಹದಲ್ಲಿ ದೇಗುಲವನ್ನು ಕಟ್ಟಿ ಶಿರದಲ್ಲಿ ಕಳಸವನ್ನು ಪ್ರತಿಷ್ಠಾಪಿಸಿ, ದೇಹದಲ್ಲಿ ದೇಗುಲವಿಲ್ಲದೆ ಪ್ರಾಪಂಚಿಕ ದೇಗುಲಗಳನ್ನು ಸಂದರ್ಶಿಸಿದರೆ ಯಾವ ದೇವನು ಒಲಿಯುವುದಿಲ್ಲ ಎಂಬ ನಿಲುವು ಅಭೂತಪೂರ್ವವಾದುದು. ಹಾಗೆಯೆ ಚಲನಶೀಲವಾದ ದೇಹವೆಂಬ[ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ] ದೇಗುಲಕ್ಕೆ ಅಳಿವಿಲ್ಲ ಆದರೆ ಜಡವಾಗಿರುವ ಪ್ರಾಪಂಚಿಕ ದೇಗುಲಗಳು ನಾಶವಾಗುವ ಸಾಧ್ಯತೆಗಳಿವೆ. ಯಾವುದೇ ಬಾಹ್ಯ ವಸ್ತು-ಆಚರಣೆಗಳಿಗಿಂತ ಮನುಷ್ಯನ ದೇಹ-ಮನಸ್ಸುಗಳು ಭಕ್ತಿಪಥಕ್ಕೆ ಬಹು ಮುಖ್ಯ ಎಂದು ಅರ್ಥೈಸಬಹುದಾಗಿದೆ.

ಚಿತ್ರ-ಕಾವ್ಯ ೨


ಕುದುರೆಮುಖ
ಎಷ್ಟು ಸುಖ!!
ಹಸಿರಿನ ರಸದೌತಣ
ನೀಡುತ ಬಾಗಿನ
ಹರಸುತಿದೆ ಯಾತ್ರಿಕನ

ಸೋಮವಾರ, ಡಿಸೆಂಬರ್ 25, 2006

Janapada Jaatre


Recently i attended a wonderful function called "Janapada Jaatre" in Lalbagh near KempeGowda Tower. this is being organised by Gov. of Karnataka. i really enjoyed it.
This is a great effort not only to support and encourage the janapada artists in the state but also to re-introduce our janapada culture to the new generation which is why it is aptly called as "marali janapadakke" means 'back to Janapada'.
In every part of india, we can see folk [janapada] culture which is the true representation of local culture and traditions. Especially these Janapada poets bring variety and richness to the literature and janapada is considered as good research project for the literature students.
Karnataka is home to variety of janapada arts and one can see the glimpse of these arts in the 'Janapada Jaatre'. Be it Kamsaale( shown in fig) which is very rhythmic clapping of "Kamsaale" in parallel with physical exercises or "Veeragaase" in which artists performs rhythmic dance with swinging sword...
Another good thing is that a small booklet giving information about various janapada art will also be provided to viewers at the venue and all these are free of cost.
so it is being held over weekends in Lalbagh...go and enjoy it..

ಭಾನುವಾರ, ಡಿಸೆಂಬರ್ 24, 2006

ಚಿತ್ರ-ಕಾವ್ಯ


ಮರೆಯಾದೆ ಮೋಡಗಳಲ್ಲಿ
ನೀನಿಲ್ಲದೆ ಬದುಕೆಲ್ಲಿ?
ದಿನದ ಸಾರ್ಥಕತೆ ನಿನ್ನಲ್ಲಿ
ಕಾಯುವೆವು ನಿನಗೆ ದಿನವೂ ಈ ಕೊಳದಲ್ಲಿ

ಗುಬ್ಬಚ್ಚಿ

ನಿನ್ನ ಸ್ವಚ್ಚಂದ ಹಾರಾಟ
ಅಚ್ಚಳಿಯದೆ ಉಳಿದಿದೆ ಮನದಲ್ಲಿ
ಎತ್ತ ಹೋದೆ ನೀನು
ನೆನಪಿನಂಗಳದಿಂದ ಹಾರುತ

ಚುಚ್ಚಿತೆ ನಿನಗೀ ಕಿವಿಗಿಚ್ಚಿಡುವ ಶಬ್ದ
ಉಸಿರುಗಟ್ಟಿತೆ ಹಾಳು ಹೊಗೆಯಿಂದ
ಸ್ವಾರ್ಥಿಗಳಾದವೆ ನಾವು ಕಾಳುಗಳಾಕದೆ
ಅಗಾಗ ಕಾಣುವೆ ನೀನುಗುಡ್ಡ ಬೆಟ್ಟಗಳ ಮೇಲೆ
ನನ್ನ ನೆನಪ ಹಸಿರಾಗಿಸಲು

ನೀ ಎನ್ನ ಬಾಲ್ಯದ ಸಂಕೇತ
ದೂರ ಹೋದೆಯ ಹಾರುತ
ಮರಳಿ ಬಾ ಚಿಂವಗುಡುತ
ಮುಗ್ಧವಾಗಿಸು ಮನವ, ಮುದವ ನೀಡುತ

ಆಯ್ದ ಕವನಗಳು

ಬದುಕಿನಲಿ ತುಳಿದಿಹೆನು
ಕೆಲವು ಹೆಜ್ಜೆ
ಅಗಾಗ ನೋಡುತ ಹಿಂದೆ
ನೊಂದೆ ಬೆಂದೆ
ಎದ್ದೆ ಬಿದ್ದೆ
ಆದರೂ ಗುರಿಒಂದೆ
ಸಾಗಬೇಕು ಮುಂದೆ
-------------------------------

ವಾಹನಗಳ ನಡುವೆ ಅಂತರ
ಇರಲಿ ನಿರಂತರ
ಸಂಚಾರಿ ನಿಯಮಗಳ ಸದಾಚಾರ
ಮಾಡಿ ಜೀವಗಳಿಗೆ ಉಪಕಾರ
-------------------------------

ದೂರದ ಊರಲ್ಲಿ
ಹಸಿರಿನ ಹೊಲದಲ್ಲಿ
ತಂಪಾದ ಗಾಳಿಲಿ
ತೇಲಿಹೋದೆ ನಾನನ್ನವಳ ಜೊತೆಯಲ್ಲಿ
---------------------------------

ಹುಟ್ಟಿತು ಕವಿತೆ ಅಂತರಾಳದಲಿ
ಅನುಭವಗಳು ಪ್ರತಿಫಲಿಸಿ
ಅಕ್ಷರಗಳು ಕೂಡಿ ಜೋಡಿ
ಮಾಡುತ ಮೋಡಿ

ಅನಕೃ ರವರ "ಸಂಧ್ಯಾರಾಗ" ಕಾದಂಬರಿ - ವಿಶ್ಲೇಷಣೆ

ಅನಕೃ ರವರ "ಸಂಧ್ಯಾರಾಗ" ಕಾದಂಬರಿ - ವಿಶ್ಲೇಷಣೆ
------------------------------------------
ಅನಕೃರವರು ಕತೆಯ ವೇಗವನ್ನು ನಿಭಾಯಿಸುವರಲ್ಲಿ ನಿಷ್ಣಾತರು. ಅವರ ಬಹಳ ಕಥೆಗಳು/ಕಾದಂಬರಿಗಳು ಸ್ವಾತಂತ್ರ್ಯಪೂರ್ವ ಜನಜೀವನವನ್ನು ಕಣ್ಣಿಗೆ ಕಟ್ಟುತ್ತವೆ. ಸಂಧ್ಯಾರಾಗದಲ್ಲಿ ಅವರೇ ಹೇಳಿದಂತೆ ಒಬ್ಬ ಪ್ರಾಮಾಣಿಕ ಹಾಗು ಪರಿಪೂರ್ಣ ಸಂಗೀತಗಾರನು ಆತನ ಕಲೆಯ ಸಮಷ್ಠಿಯ ಕಡೆಗೆ ಹೋಗುವ ಹಿನ್ನಲೆಯುಳ್ಳ ಒಂದು ಸಾಮಾಜಿಕ ಕಾದಂಬರಿ. ಹೇಗೆ ಸಂಗೀತಗಾರನು ತನ್ನ ತೃಪ್ತಿಗೆ ಸಂಗೀತವನ್ನು ಆಶ್ರಯಿಸುವನೊ ಹಾಗೆ ಸಂಗೀತವು ಸಂಗೀತಗಾರನನ್ನು ತನ್ನ ಬೆಳವಣಿಗೆ ಆಶ್ರಯಿಸುತ್ತದೆ.

ಕಾದಂಬರಿಯಲ್ಲಿ ಬರುವ ರಾಮಚಂದ್ರ, ಲಕ್ಷ್ಮಣ ಪಾತ್ರಗಳ ಗುಣ, ಸ್ವಭಾವಗಳ ವೈರುಧ್ಯ ಕೆಲವು ಸಲ ಅತಿಶಯವಾಗಿ ಕಾಣುತ್ತವೆ. ರಾಮಚಂದ್ರನ ಗುಣ ಸ್ವಭಾವಗಳು ವಿಲಕ್ಷಣವಾಗಿ ಕಂಡು ಬಂದರೆ ಲಕ್ಷ್ಮಣನ ಗುಣ ಸ್ವಭಾವಗಳು ವಾಸ್ತವಕ್ಕೆ ದೂರವಾಗಿದೆಯೇನೊ ಎಂದು ಭಾಸವಾಗುತ್ತದೆ. ಆದರೆ ವೆಂಕಟೇಶ ಮತ್ತು ಗೋಪಾಲನ ಪಾತ್ರಗಳು ವಾಸ್ತವತೆಗೆ ಬಹಳ ಹತ್ತಿರವಾಗಿದೆ. ಕತೆಯ ವೇಗದ ತೀವ್ರತೆ ಎಷ್ಟಿದೆ ಎಂದರೆ ಕೆಲವು ಸಲ ಪುಟಗಳನ್ನು ಓದುಗ ಎರಡು ಸಲ ತಿರುವಿ ಹಾಕಿ ಓದಬೇಕಾಗುತ್ತದೆ. ನಿಜಕ್ಕೂ ಕತೆಯು ಇಷ್ಟು ದೂರ ಸಾಗಿದೆಯೇ ಎಂಬ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಕತೆಯು ಸಂಗೀತಪ್ರಧಾನವಾಗಿರುವುದರಿಂದ ಸಂಗೀತದ ಙ್ನಾನ ಇದ್ದವರಿಗೆ ಇದು ಹೆಚ್ಚು ಇಷ್ಟವಾದರೆ ಇತರರಿಗೆ ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವುದಕ್ಕೆ ಈ ಕಾದಂಬರಿ ಸಹಾಯಕವಾಗುತ್ತದೆ. ಒಂದೆ ಕುಟುಂಬದಿಂದ ಬಂದ ರಾಮಚಂದ್ರ, ಲಕ್ಷ್ಮಣ ಮತ್ತು ಗೋಪಾಲರ ಗುಣ, ಸ್ವಭಾವ ಮತ್ತು ಅಭಿರುಚಿಗಳು ಹೇಗೆ ಭಿನ್ನವಾಗಿರುತ್ತವೆಯೆಂದು ನಮಗೆ ಅರ್ಥವಾಗುತ್ತವೆ. ವಿದ್ಯೆಯೊಂದ್ದಿಂದರೆ ಏನೂ ಪ್ರಯೋಜನವಿಲ್ಲ ಅದರ ಜೊತೆ ಪ್ರೀತಿ, ಸಹನೆ ಮತ್ತು ಸಾಮಾಜಿಕ ಪ್ರಙ್ನೆ ಅತ್ಯಂತ ಅವಶ್ಯ ಎಂಬುದು ರಾಮ-ಲಕ್ಷ್ಮಣ ಪಾತ್ರಗಳ ಮೂಲಕ ಅನಕೃರವರು ಚಿತ್ರಿಸುವ ರೀತಿ ಮನಕ್ಕೆ ತಟ್ಟುತ್ತದೆ.

ನಮ್ಮ ಸಂಗೀತಗಾರರ ಬೇರೆ ಭಾಷೆಗಳ ವ್ಯಾಮೋಹವನ್ನು ತೊಡೆದುಹಾಕಲು ಸಂಗೀತದ ಮೂಲಕ ಕನ್ನಡ ವಚನಕಾರರ, ದಾಸರ ಪದಗಳನ್ನು ಹೇಗೆ ಜನಪ್ರಿಯಗೊಳಿಸಬಹುದು ಎಂಬುದು ಗಮನಾರ್ಹ. ಇದು ಅನಕೃರವರ ಕನ್ನಡದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.

ಲಕ್ಷ್ಮಣ ಮತ್ತು ಗೋಪಾಲನ ನಡುವೆ ನಡೆಯುವ ಕಲೆಯ ಸಾರ್ಥಕತೆ ಬಗ್ಗೆ ತತ್ವಯುಕ್ತ ಸಂಭಾಷಣೆಗಳು ಅರ್ಥಪೂರ್ಣವಾಗಿವೆ. "ಸಂಗೀತ ಹುಟ್ಟಿಸುವುದು ಕ್ಷುಲ್ಲಕವಾದ ಪ್ರಾಪಂಚಿಕ ಅಶಾಂತಿಯನ್ನಲ್ಲ. ಸುಪ್ತವಾದ ಚೇತನವನ್ನು ಹೊಡೆದೆಬ್ಬಿಸುವ ಗುರುವಲ್ಲವೆ ಅದು? ಮನುಷ್ಯ ತನ್ನ ನಿದ್ರೆಯಿಂದ ಎಚ್ಚೆತ್ತು ಹೊಸ ಲೋಕಗಳನ್ನು ಜಯಿಸಬೇಕೆಂದು ಬಯಸುವುದಕ್ಕಿಂತಲೂ ಹೆಚ್ಚು ಯಾವುದು? ಜೀವನಕ್ಕಿಂದು ಬೇಕಾದದ್ದು ಜಾಗೃತಿ... ಕ್ರಾಂತಿ". ಈ ಮಾತುಗಳು ಇಂದಿಗೂ ಎಷ್ಟು ಪ್ರಸ್ತುತವಾಗಿವೆಯಲ್ಲವೆ?

ಆ ಕಾಲದ ಮೈಸೂರು ಮತ್ತು ಬೆಂಗಳೂರು ನಗರಗಳ ಜನ-ಜೀವನದ ಇಣುಕು ನೋಟ ಇಲ್ಲಿದೆ. ಶ್ರೀನಿವಾಸರಾಯ-ಮೀನಾಕ್ಷಮ್ಮನವರ ಆದರ್ಶ ದಾಂಪತ್ಯ, ಲಕ್ಷ್ಮಣ-ಜಯರ ಅದಮ್ಯ ಪ್ರೀತಿ, ಶಾಮಣ್ಣನವರ ನಿಸ್ವಾರ್ಥ, ತ್ಯಾಗ ಆದರ್ಶಪ್ರಾಯವಾಗಿವೆ. ಹಾಗೆ ಆಗಿನ ಕಾಲದ ಗ್ರಾಮೀಣ ಜನರ ಮುಗ್ಧತೆ ಮತ್ತು ಅವರ ಆತಿಥ್ಯದ ಚಿತ್ರಣ ಬಲುವಿಶಿಷ್ಠವಾಗಿದೆ.

technology trends

one of the thing which fascinates me is the lot of technology change happening around which is affecting drastically the way we do things.

It remembers me the famous saying from the former intel chief Andy Groove that people can't ignore the technology which brings 10X change in whatever we do...just like what internet did in the last decade. Effective managers will sense the changes( 10x) in industry/company early and get themselves ready for that. this 10x thing applies to personal life also, whenver events that bring 10X change to your life. you got to be prepared for it to successfully face it and be succesful.

Some of the things which are bringing 10X change are cell phone and wireless technology. these are changing drastically the way we work, live and even how we play. Days are not far where we may say " I am working from my car/auto rickshaw!!!"

Soul

what is soul..? this question i have asked myself many times and got new meaning everytime. and i tried to summarise my understandings in the following words.

we call some as great soul and some not so great ...so what really makes the soul great? it all depends upon the contribution of that particular human being for the betterment of mankind

Soul is one which is eternal and body is something which has to perish utlimately ( this applies to those who are called "great soul").

i believe that everyone has got a soul (like a mud) and it is upto how he shapens up his soul just like beautiful idol out of mud..its upto the individual how he really 'hands' his soul.

it is the bloody body( desires excited by different organs of body) which makes the human bad or good, the soul should always keep the physical body under control to maintain "equilibrium" state int the human life.

Some people often link 'athma' with mind, but i think athma is omnipresent i.e it is existing in every cell of body. The athma should control and co-ordinate all the acitivities of the body. It should keep generating the "sathvika shakti"(divine power) whenver our body run out of...

i sincerely hope that exercise to entire body will keep this power alive and regenerate like renewable resource of energy just like sun-light.

ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada

ದೋಷ ನಿಯಂತ್ರಣ ಸಾಂಕೇತತ್ವ
-------------------------
ಮಾನವನ ಆವಿಷ್ಕಾರಗಳಲ್ಲಿ ಮಾಹಿತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಶ್ವಸನೀಯವಾಗಿ ರವಾನಿಸುವುದು ಕ್ರಾಂತಿಕಾರಕ ಮತ್ತು ಅತ್ಯಂತ ಮಹತ್ವಪೂರ್ಣವಾದುದು. ಏಕೆಂದರೆ ಇದು ಇಂದು ಬೃಹದಾಅಕಾರವಾಗಿ ಬೆಳೆದು ನಿಂತಿರುವ ಮಾಹಿತಿ ತಂತ್ರಜ್ನಾನದ ತಳಹದಿ. ಮಾಹಿತಿಯನ್ನು ದೋಷಮುಕ್ತವಾಗಿ ರವಾನಿಸುವುದಕ್ಕೆ ಬಹು ಮಟ್ಟಿಗೆ ಕಾರಣವಾದುದು ದೋಷ ನಿಯಂತ್ರಣ ತತ್ವಗಳು. ಆಧುನಿಕ ದೋಷ ನಿಯಂತ್ರಣ ತತ್ವಗಳನ್ನು ಶತಮಾನಗಳಿಗಿಂತಲು ಹಳೆಯದಾದ ಗಣಿತದ ಸಿದ್ಧಾಂತಗಳ ತಳಹದಿಯ ಮೇಲೆ ಬೆಳೆಸಲಾಗಿದೆ. ಈ ತತ್ವಗಳ ಕೆಲಸ ನಲವತ್ತರ ದಶಕದಲ್ಲಿ ಪ್ರಾರಂಭವಾಯಿರಾದರೂ ೫೦ ರಿಂದ ೭೦ರ ದಶಕಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳಾಯಿತು.

ಇತಿಹಾಸ
--------
೧೯೪೮ರಲ್ಲಿ ಕ್ಲಾಡ್ ಶಾನನ್ ಮಾಹಿತಿ ಸಾಮರ್ಥ್ಯ ಸಿದ್ಧಾಂತವನ್ನು ಮಂಡಿಸಿದ.
"ಮಾಹಿತಿಯ ಪ್ರಮಾಣ ಅದರ ವಾಹಿನಿಯ ಸಾಮರ್ಥ್ಯಕ್ಕಿಂತ ಕಡಿಮೆ ಇದ್ದಲ್ಲಿ, ಉಳಿದ (ಮಾಹಿತಿಯ) ಸಾಮರ್ಥ್ಯವನ್ನು ಉಪಯೋಗಿಸಿ ದೋಷ ನಿಯಂತ್ರಣ ಸಂಕೇತಗಳನ್ನು ಕಳುಹಿಸುವ ಮೂಲಕ ಸಂದೇಶದ ಸಮಗ್ರತೆಯನ್ನು ಉತ್ತಮಪಡಿಸಬಹುದು",

ಆದರೆ ಶಾನನ್, ಸಂಕೇತಗಳನ್ನು ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಎನೂ ಹೇಳಲಿಲ್ಲ. ೫೦ ರ ದಶಕದ ಪೂರ್ವಾರ್ಧದಲ್ಲಿ ಮೊದಲ ಬಾರಿಗೆ ಒಂದು ಬಿಟ್( ಮಾಹಿತಿಯ ಮೂಲಮಾನ) ದೋಷ ಸರಿಪಡಿಸಬಹುದಾದ ಹ್ಯಾಮಿಂಗ್ ಸಾಂಕೇತಗಳನ್ನು ಕಂಡು ಹಿಡಿಯಲಾಯಿತು. ನಂತರ ಉತ್ತರಾರ್ಧದಲ್ಲಿ ರೀಡ್-ಸಾಲೋಮನ್ ಸಾಂಕೇತಗಳು ಜನ್ಮ ತಾಳಿದವು. ಈ ಸಂಕೇತಗಳು ಪ್ರತಿ ಬಿಟ್ ಗಳ ಮೇಲೆ ಅವಲಂಬಿಸದೆ ಇಂತಹ ಹಲವು ಬಿಟ್ ಗಳಿಂದಾದ ಚಿಹ್ನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗೆ ದೋಷ ನಿಯಂತ್ರಣ ತತ್ವಗಳು ಎರಡು ಕವಲಾದವು. ಒಂದು ಬಿಟ್ ಆಧಾರಿತ ಮತ್ತೊಂದು ಚಿಹ್ನೆ ಆಧಾರಿತ. ಮುಂದಿನ ದಿನಗಳಲ್ಲಿ ಈ ಸಾಂಕೇತಗಳನ್ನು ಕಾರ್ಯ ರೂಪಕ್ಕೆ ತರುವ ವಿಧಾನಗಳ ಮೇಲೆ ಸಂಶೋಧನೆಗಳು ನಡೆದವು. ಮತ್ತೊಂದು ಕಡೆ ಇದಕ್ಕೆ ಸಮನಾಂತರವಾಗಿ ೫೦ ರ ದಶಕದಲ್ಲಿ ಕನ್ವೊಲ್ಯುಶನ್ ಸಾಂಕೇತಗಳು ಮುಖ್ಯಧಾರೆಗೆ ಬಂದವು.ಇದರ ವಿಶೇಷತೆಯೇನೆಂದರೆ ಸಾಂಕೇತೀಕರಣ/ನಿಸ್ಸಾಂಕೇತೀಕರಣಗೊಳಿಸುವ ಮೊದಲು ಮಾಹಿತಿಯನ್ನು ನಿರ್ದಿಷ್ಟ ಪ್ರಮಾಣಕ್ಕೆ ರೂಪಂತಿರಿಸುವ ಅವಶ್ಯಕತೆಯಿರಲಿಲ್ಲ. ೧೯೬೨ರಲ್ಲಿ ವಿಟರ್ಬಿ ರೂಪಿಸಿದ 'ಗರಿಷ್ಥ ಸಂಭಾವ್ಯತೆ" ಎನ್ನುವ ವಿಧಾನ ಪ್ರಖ್ಯಾತಿಯನ್ನು ಪಡೆಯಿತು. ೮೦ ರ ದಶಕದಲ್ಲಿ ಮಾಹಿತಿ ಮಾರ್ಪಡಿಸುವ ಕ್ರಿಯೆಯಲ್ಲಿ ಕನ್ವೊಲ್ಯೂಶನ್ ಸಾಂಕೇತಗಳು ಉಪಯೋಗಕ್ಕೆ ಬಂದವು. ನಂತರ ಮಾಹಿತಿ ಮಾರ್ಪಡಿಸುವ ಕ್ರಿಯೆ ಮತ್ತು ದೋಷ ನಿಯಂತ್ರಣ ಸಾಂಕೇತೀಕರಣ ಕ್ರಿಯೆಗಳು ಸಂಯೋಜನೆಗೊಂಡು ಅವುಗಳಿಗಿದ್ದ ಅಂತರವು ಕನಿಷ್ಥಗೊಂಡಿತು. ಅಂದರೆ ಒಂದೆ ಬಾಣದಲ್ಲಿ ಎರಡು ಹಕ್ಕಿಗಳನ್ನು ಕೊಲ್ಲುವ ಹಾಗೆ.

ಉಪಸಂಹಾರ
--------
ಈ ದಿನಗಳಲ್ಲಿ 'ಟರ್ಬೊ' ಸಾಂಕೇತಗಳ ಮೇಲೆ ತಂತ್ರಜ್ನರು ಗಮನವನ್ನು ಕೇಂದ್ರೀಕರಿಸಿದ್ದಾರೆ ಏಕೆಂದರೆ ಟರ್ಬೊ ಸಂಕೇತಗಳು, ದೋಷ ನಿಯಂತ್ರಣ ತತ್ವಗಳಿಂದ ನಾವು ಏನನ್ನು ಸಾಧಿಸಬಹುದು ಅದರ ಸೈದ್ಧಾಂತಿಕ ಮಿತಿಗೆ ಕೊಂಡೊಯ್ಯುತ್ತವೆ ಎಂಬುದು ಅವರ ಅಂಬೋಣ.