ಮಂಗಳವಾರ, ನವೆಂಬರ್ 22, 2016

Kannada has its own grammar

[One of my old article published by The NewsMinute has been reproduced here since some people complained about the font problem]

Recently, there was an article on News Minute titled "Need of the hour: Synergy between Sanskrit and regional languages" (http://www.thenewsminute.com/lives/654). Author of the above said article seems mesmerised by Sanskrit and has put forward arguments that are biased towards Sanskrit. The author seems to lack knowledge of modern day Kannada writers, and the grammatical differences between Kannada and Sanskrit. This lack of knowledge might have lead him to un-scientific and unrealistic conclusions.

Actually, in Kannada, the littérateurs both qualitatively and quantitatively have risen after independence, U R Ananth Murthy, P Lankesh, D R Nagaraj to name a few. Post-1947, there have been many literary movements like Navya and Bandaaya (revolutionary) in Kannada.

Coming to the Grammar, author does not seem to possess any idea of what Kannada Grammar is and what modern day linguistics has to say about it. We must understand that Kannada belongs to Dravidian Family of languages whereas Sanskrit belongs to Indo-Aryan Family of Languages. Mere set of the borrowed words doesn’t prove that Kannada has originated from Sanskrit. Kannada differs significantly from Sanskrit in various grammatical behaviours. 

Firstly, Sanskrit does not have 'Lopa Sandhi (ಲೋಪ ಸಂಧಿ). The author has attempted to force-fit poorva roopa sandhi (ಪೂರ್ವ ರೂಪ ಸಂಧಿ) into Lopa Sandhi. On the contrary, Sanskrit has 'Savarna deergha Sandhi'(ಸವರ್ಣ ದೀರ್ಘ ಸಂಧಿ) wherein two short vowels (,,) combine to give rise to long vowel (, , ).
For example,
        गुरु+उपदॆश् -> गुरूपदॆश्
       ಗುರು+ಉಪದೇಶ -> ಗುರೂಪದೇಶ
It is worth noting here, the vowel 'u' at the end of word 'Guru' and 'u' at the beginning of word 'upadesha' give rise to 'long u' in the combined word guru*padesha where u* is 'long u' 

Whereas in Kannada
        ಕಲ್ಲು + ಉಪ್ಪು => ಕಲ್ಲುಪ್ಪು ,  here ‘u’ in kallu is dropped whereas ‘u’ in uppu is retained. Its important to note that there is no long vowel in the resultant word.

While describing Aadesha Sandhi, author seems to have deliberately tried to mask the differences between Kannada and Sanskrit.

Let us examine the example that author had taken:
ತಲೆ+ಕೆಟ್ಟು = ತಲೆಗೆಟ್ಟು , In this Kannada word, 'ka' in the second word is replaced with 'ga' after Sandhi
ವಾಕ್+ಈಶ = ವಾಗೀಶ್, In this Sanskrit word, 'ka' in the first word is replaced with 'ga' after Sandhi.

Its important to note that this is a fundamental difference between Sanskrit and Kannada, with respect to Aadesha Sandhi. Apart from this difference, in Sanskrit, replacement of consonants is regular and strict whereas in Kannada it can't even be considered as a rule and it is irregular. 

To illustrate this opoint, let us take an example
   ಆನೆ+ಕಾಲು = ಆನೆಕಾಲು,  Here 'ka' is retained even after Sandhi, indicating that Aadesha Sandhi is not strictly followed in Kannada.

While talking about Aagama Sandhi, author has misquoted the examples. In fact, examples that the author has provided are actually demonstrate the 'lopa sandhi' and not aagama sandhi as author seems to have claimed.
   ಮುಳ್ಳು+ಆಗಿ = ಮುಳ್ಳಾಗಿ , Here 'u' in ಮುಳ್ಳು is dropped, 'aa' in ಆಗಿ is retained after Sandhi,
   ಕಲ್ಲು+ಆಟ   = ಕಲ್ಲಾಟ,  Here 'u' in ಕಲ್ಲು is dropped, 'aa' ಆಟ is retained after Sandhi. 

For more detailed study on Kannada Sandhis and how it differs with respect to Sanskrit, I would recommend 'Kannada needs its own Grammar’ (ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ), a book written in Kannada, by renowned linguist Dr. D N Shankara Bhat (Chapter 2, Page No. 27)

Regarding Samaasa (ಸಮಾಸ), linguistic research has shown that there is no samaasa in Kannada. In other words, the samaasa concept doesn't suit the behaviour of formation of combined words in Kannada. Kannada only has 'jODu pada' (meaning joined words). The behaviour of words which are getting joined cannot be explained using the Sanskrit Samaaasa because in Kannada the second word always gets the importance. Also, even adjectives can combine with a noun to form a 'jODu pada' in Kannada, whereas there is no adjective at all in Sanskrit. For more understanding on samaasa, I would recommend 'Kannada needs its own Grammar’ (ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ) by Dr. D N Shankara Bhat (Chapter 5, Page No. 96)

Regarding Case (ವಿಭಕ್ತಿ), author is wrong about Panchami Vibhakti (ಪಂಚಮಿ ವಿಭಕ್ತಿ). Author taking an un-scientific view in this regard could be the result of trying to force-fit the grammatical properties of Sanskrit on Kannada. Sediyaapu Krishna Bhat and Dr. D N Shankara Bhat, both renowned Kannada linguists have shown beyond doubt that Panchami Vibhakti (ಪಂಚಮಿ ವಿಭಕ್ತಿ) doesn't exist in Kannada. 

Learning Sanskrit will only improve one's Sanskrit skills, and it will in no-way help master the Dravidian Languages like Kannada or Telugu. In order to master them, the Dravidian languages need to be studied in depth on their own. Otherwise, one will end up confusing Sanskrit grammar with Kannada's and come to wrong conclusions. Kannada grammar must be studied without any bias from Sanskrit or English because Kannada has its own distinct grammar.


ಗುರುವಾರ, ಅಕ್ಟೋಬರ್ 27, 2016

ಕನ್ನಡದ್ದೇ ಆದ ಅಳತೆಯ ಪದಗಳು

 ಇತ್ತೀಚಿನವರೆಗೂ ಅಂದರೆ ೧೦೦-೨೦೦ ವರುಶಗಳ ಕೆಳಗೆ ಬಳಸಲಾಗುತ್ತಿತ್ತು. ಕೆಲವನ್ನು ಇನ್ನೂ ಬಳಸಲಾಗುತ್ತಿದೆ.
ಉದ್ದ(ಹೂವು, ಬಟ್ಟೆ)-Length: ಮೊಳ, ಮಾರು ( 'ಅಡಿ' ಕನ್ನಡದ್ದೇ ಪದ ಆದರೂ ಅದು ಇಂಗ್ಲಿಶಿನ ಪೀಟ್ ಎಂಬುದರ ನುಡಿಮಾರು)
ದೂರ -Distance: ಹರದಾರಿ
ತೂಕ(ಬೆಳೆಗಳ)- Weight: ಕಂಡುಗ, ಹೇರು, ಕೊಳಗ, ಬಳಗ, ಸೇರು, ಪಾವು, ಚಟಾಕು
ಹೊತ್ತು- Time : ಎವೆಯಿಕ್ಕು (ನಾವು ಕಟ್ಟಿದ್ದು - ಎವೆಹೊತ್ತು)
ನೆಲವನ್ನು ಅಳೆಯುವ ಎಕರೆ/ಗುಂಟೆ ಎಂಬ ಅಳತೆಗಳು ಆಗ ಇರಲಿಲ್ಲ. ಆಗ ಎಕರೆ ಬದಲು ಕಂಡುಗ/ಸೇರುಗಳನ್ನೇ ಬಳಸುತ್ತಿದ್ದರು.
ಎತ್ತುಗೆಗೆ:
೧. ನನ್ನ ಹತ್ತಿರ ೧೦ ಕಂಡುಗ ರಾಗಿ ಬೆಳೆಯುವಶ್ಟು ನೆಲ/ಜಮೀನು ಇದೆ
೨. ಅವನ ಹತ್ತಿರ ೫೦ ಸೇರು ರಾಗಿ ಬಿತ್ತುವಶ್ಟು ನೆಲ/ಜಮೀನು ಇದೆ.

ಬೆಡಗು-ಬೆರಗು-ಬಯಲು

ಒಲವು ಬಯಲಾದೊಡೆ ಬೆಡಗು ಕಾಣಿರಯ್ಯ
ಬೆಡಗಿನಲ್ಲೊಂದು ಬೆಳಕ ಕಂಡೆನಯ್ಯ
ಒಳವು ಬಯಲಾದೊಡೆ ಬೆರಗು ಕಾಣಿರಯ್ಯ
ಬೆರಗಿನಲ್ಲಿ ಕರಗಿಹೋದೆನಯ್ಯ
ಬಯಲು ಬಯಲಾದೊಡೆ ಬಯಲೇ ಕಾಣಿರಯ್ಯ
ಬೆಡಗು ಬೆರಗು ಬಯಲೊಳಗಣದಿಂದ ಬಂದೊಡೆ ನೀವೇ ಅಯ್ಯ ಮತ್ತಿತಾಳಯ್ಯ

ಸೋಮವಾರ, ಅಕ್ಟೋಬರ್ 10, 2016

ಕೊಡಗಿನ 'ಚಾಯ್' ಮತ್ತು ಕನ್ನಡದ 'ಗಾಡಿ'

ಕೊಡಗು ನುಡಿಯ 'ಚಾಯ್' ಗೂ ಕನ್ನಡದ 'ಗಾಡಿ'ಗೂ ನಂಟಿದೆ ಎಂದು ನನಗೆ ಅನ್ನಿಸುತ್ತಿದೆ. ದ್ರಾವಿಡಿಯನ್ ಎಟಿಮಲಾಜಿಕಲ್ ಪದನೆರಕೆಯಲ್ಲಿ ಈ ಎರಡು ಪದಗಳನ್ನು ನಂಟಿಸಿಲ್ಲ. ಅದು ಬಿಟ್ಟುಹೋಗಿರಬಹುದು.
Koḍ. ca·y beauty; ca·ylï well (adv.); ca·yka·rë handsome man; fem. ca·ykarati. ? DED 2457

'ಗಾಡಿ' ಎಂಬ ಪದದಿಂದ ಉಂಟಾದ 'ಗಾಡಿಕಾರ'(ಕೊಡಗು: ಚಾಯ್ಕಾರೆ) ಮತ್ತು 'ಗಾಡಿಕಾರ್ತಿಯರ್'(ಕೊಡಗು:ಚಾಯ್ಕಾರತಿ) ಎಂಬ ಪದಗಳನ್ನು ನಾವು ಆಂಡಯ್ಯನ 'ಕಬ್ಬಿಗರ ಕಾವನ್' ಲ್ಲಿ ನೋಡಬಹುದು

ಜಿ.ವಿ.ಯವರ ನಿಗಂಟಿನಿಂದ
    ಗಾಡಿ ಹೆಸರುಪದ  (ದೇ) ೧ ಚೆಲುವು, ಸೊಬಗು, ಅಂದ ೨ ಚೆಲುವೆ, ಸುಂದರಿ

ಅರಿಮೆ-ಅರಿವು, ಜಾಣ್ಮೆ-ಬದುಕು

ಅರಿಮೆ ಎಂಬುದು ಒಪ್ಪ ಓರಣಿಸಿದ ಅರಿವು,ಜಾಣ್ಮೆ ಎಂಬುದು ಒಪ್ಪ ಓರಣಿಸಿದ ಬದುಕು.
                                                    -ಇಮಾನ್ಯುಯೆಲ್ ಕಂಟ್

ಕನ್ನಡಕ್ಕೆ ಕನ್ನಡವೇ ಸಾಟಿ

ಸಕ್ಕದವಿಲ್ಲದೆ ಕನ್ನಡ ತಲೆಯೆತ್ತಬಲ್ಲುದು
ಸಕ್ಕದವನು ಮೊದಲು ತುರುಕಿ ಬಳಿಕ
"ಸಕ್ಕದವನ್ನು ಕಿತ್ತುಹಾಕಿ!" ಎಂದು ಕೆಣಕುವವರು ನೀವೇ ಅಯ್ಯ
ನಿಮ್ಮ ನಿಮ್ಮ ಮಯ್ಯ ಸರಿಪಡಿಸಿಕೊಳ್ಳಿ
ನಿಮ್ಮ ನಿಮ್ಮ ಬಗೆಯ ಸರಿಪಡಿಸಿಕೊಳ್ಳಿ
ಕನ್ನಡಕ್ಕೆ ಕನ್ನಡವೇ ಸಾಟಿಯೆಂಬ ದಿಟವ ಅರಿಯಿರಯ್ಯ ಮತ್ತಿತಾಳಯ್ಯ

ಆಡಳಿತ ವಿಕೇಂದ್ರೀಕರಣವೇ ಮದ್ದು


ಹೊಸ ಮಕ್ಕಳ ಹಾಡು - ಗೊಂಟುಗಳನ್ನು ಕಲಿಸುವುದಕ್ಕೆ ಬರೆದದ್ದು


[ಇದನ್ನು ಹೇಳುವಾಗ ಮೆಲ್ಲಗೆ ರಾಗವಾಗಿ ಹಾಡತಕ್ಕದ್ದು]
ಬಾ ಬಾ ಮಂಗಣ್ಣ
ಮೂಲೆ ಕಲಿಯಲು ಬಾರಣ್ಣ ||
ಮುಂದಕ್ಕೆ ನೋಡು ಬಡಗಣ
ಹಿಂದಕ್ಕೆ ನೋಡು ತೆಂಕಣ
ಬಾ ಬಾ ಮಂಗಣ್ಣ.....
ಬಲಕ್ಕೆ ನೋಡು ಮೂಡಣ
ಎಡಕ್ಕೆ ನೋಡು ಪಡುವಣ
ಬಾ ಬಾ ಮಂಗಣ್ಣ
ಮೂಲೆ ಕಲಿಯಲು ಬಾರಣ್ಣ

ಕೂಳೆ ಮಯ್ - ಪದ ಬಳಕೆ

ಯಾವುದೇ ಬಟ್ಟೆಯನ್ನು (ಹೊಲೆದಿರುವ) 'inside out' ಮಾಡುವುದಕ್ಕೆ ನಾವು ’ಕೂಳೆ ಮಯ್’ ಅಂತಿವಿ
ಬಳಕೆ:-
೧. ಏ...ಬನಿಯನ್ ಕೂಳೆ ಮಯ್ ಮಾಡಿ ಹಾಕ್ಕೊಂಡಿದಿಯ!.... ಸರಿಯಾಗಿ ಹಾಕ್ಕೊ.
೨. ಇದನ್ನು ಕೂಳೆ ಮಯ್ ಮಾಡಿ ಹೊಲೆಯಿರಿ

ಹೆತ್ತಮಕ್ಕಳ್

ಹತ್ತಿ ಮರವ ಕಿತ್ತ ಹಣ್ಣನು
ಕಚ್ಚಿ ತಿನದಿದ್ದೊಡೆ
ಎತ್ತಿ ಮುದ್ದಾಡಲ್ ಮನೆಯೊಳ್
ಹೆತ್ತ ಮಕ್ಕಳ್ ಇಲದಿದ್ದೊಡೆ
ಮತ್ತೆಂತಯ್ಯ ನನ್ನ ಕಾಣ್ಕೆ ಮತ್ತಿತಾಳಯ್ಯ
ಎತ್ತೆತ್ತಲ್ ನಿನ್ನ ಕಾಣದಿದ್ದೊಡೆ

ತಮಿಳುನಾಡಿನ ಬಸ್ಸುಗಳಲ್ಲಿ ತಮಿಳು ನುಡಿಹಮ್ಮುಗೆ




ಇತ್ತೀಚೆಗೆ ತಮಿಳು ನಾಡಿನ ಮಂದಿಬಂಡಿಗಳಲ್ಲಿ ಸುತ್ತಾಟ ನಡೆಸಿದಾಗ ಅಲ್ಲಿ ’ತಮಿಳು ನುಡಿ ಹಮ್ಮುಗೆ’ ಚನ್ನಾಗಿ ನಡೆಸಿದ್ದಾರೆಂಬುದನ್ನು ಗಮನಿಸಿದೆ. ಅಂದರೆ
೧. ಹೆಚ್ಚು ಹೆಚ್ಚು ತಮಿಳಿನದ್ದೇ ಆದ ಸುಳುವಾದ ಪದಗಳನ್ನು ಬಳಸಿದ್ದಾರೆ.
೨. ಸಂಸ್ಕ್ರುತ ಮೂಲದ ಪದಗಳನ್ನು ತಮಿಳಿಗೆ ಹೊಂದುವ ತರದಲ್ಲಿ ’ತದ್ಬವ’ ಮಾಡಿಕೊಂಡು ಬಳಸಿದ್ದಾರೆ
ಕೆಲವು ಬಳಕೆಗಳನ್ನು ತಿಟ್ಟದಲ್ಲಿ ಸೆರೆಹಿಡಿದಿದ್ದೇನೆ. ಅವು ತಮಿಳು ಲಿಪಿಯಲ್ಲಿರುವುದರಿಂದ ಕನ್ನಡ ಲಿಪಿಯಲ್ಲಿ ಇಲ್ಲಿ ಕೊಟ್ಟಿದ್ದೇನೆ. ಅಲ್ಲದೆ ಅದರ ಕನ್ನಡ ನುಡಿಮಾರನ್ನು ಕೂಡ ಕೊಡುತ್ತಿದ್ದೇನೆ.
ಇದರಿಂದ ನಮ್ಮ ಕನ್ನಡ ನಾಡಿನ ಸಾರಿಗೆಯವರು ಕೊಂಚ ಎಚ್ಚತ್ತುಕೊಂಡು ಕನ್ನಡದ್ದೇ ಆದ ಪದಗಳನ್ನು ಬಳಸಲಿ ಎಂಬ ಕಳಕಳಿಯಿಂದ.
೧. ಮುದಲುದವಿಪ್ಪೆಟ್ಟಿ - ತಮಿಳು
ಮೊದಲಾರಯ್ಕೆ ಪೆಟ್ಟಿಗೆ - ಕನ್ನಡ
First Aid Box ಎಂಬುದಕ್ಕೆ ಅವರು ಬಳಸಿದ್ದಾರೆ. ಇದಕ್ಕೆ ಕನ್ನಡದಲ್ಲಿ ಈಗ ’ಪ್ರಥಮ ಚಿಕಿತ್ಸಾ ಪೆಟ್ಟಿಗೆ’ ಎಂದು ಬಳಸುತ್ತಿದ್ದಾರೆ. ಆದರೆ ಅದರ ಬದಲು ಸುಳುವಾದ ’ಮೊದಲಾರಯ್ಕೆ ಪೆಟ್ಟಿಗೆ’ ಎಂದು ಬಳಸಬಹುದು
೨.ಪಡಿಯಿಲ್ ನಿನ್ರು ಪಯಣಂ ಸೆಯ್ಯಾದೀರ‍್ಕಳ್ - ತಮಿಳು
ಮೆಟ್ಟಿಲಲ್ಲಿ ನಿಂತು ಪಯಣ(ವನ್ನು) ಮಾಡಬಾರದು - ಕನ್ನಡ
ಇದರಲ್ಲಿ ಸಂಸ್ಕ್ರುತದ ’ಪ್ರಯಾಣ’ ಎಂಬುದರ ಬದಲು ’ಪಯಣಂ’ ಎಂಬ ತದ್ಬವವನ್ನು ಬಳಸಿರುವುದನ್ನು ಗಮನಿಸಬಹುದು
೩. ಪೇರುಂದು ನಿನ್ರ ಪಿನ್ ಇರಂಕವುಮ್ - ತಮಿಳು
ಮಂದಿಬಂಡಿ ನಿಂತ ಮೇಲೆ ಇಳಿಯುವುದು/ಇಳಿಯಬೇಕು - ಕನ್ನಡ
’ಬಸ್’ ಎಂಬುದಕ್ಕೂ ’ಪೇರುಂದು’ ( ದೊಡ್ಡಬಂಡಿ) ಎಂಬ ತಮಿಳಿನದ್ದೇ ಆದ ಪದವನ್ನು ಉಂಟು ಮಾಡಿರುವುದನ್ನು ಗಮನಿಸಬಹುದು.

ಎರೆಯ-ಎರತಿ

ಶ್ರೀಮಾನ್, ಶ್ರೀಮತಿ ಬದಲು ಕನ್ನಡದ್ದೇ ಆದ ಎರೆಯ, ಎರತಿ ಬಳಸಬಹುದು.

ಹುರುಳು - eṟeya master, king, husband; eṟati a mistress

ಬಳಕೆ:-

೧. ತಮ್ಮ ಬರವನ್ನು ಎದುರುನೋಡುವವರು,
      ಎರತಿ ಮತ್ತು ಎರೆಯ _______


೨. ಇಲ್ಲಿ ನೆರೆದಿರುವ ಎಲ್ಲ ಎರತಿ ಮತ್ತು ಎರೆಯರೆಲ್ಲರಿಗು ತುಳಿಲ್

ಎರಡು ವಿಶಯಗಳು

'ನಮ್ಮ ಮೆಟ್ರೊ'ದಲ್ಲಿ ಇಂದು ಕಂಡಿದ್ದು. ನಾವು ಹೇಳುತ್ತಾ ಬಂದಿರುವ ಎರಡು ವಿಶಯಗಳನ್ನು 'ಸರಿ' ಎಂದು ಇದು ಎತ್ತಿ ತೋರಿಸುತ್ತಿದೆ.
೧. ಮಹಾಪ್ರಾಣದ ತೊಂದರೆ - ಇಲ್ಲಿ 'ಆದ್ಯತೆ' ಎಂಬುದನ್ನು 'ಆಧ್ಯತೆ' ಎಂದು ಬರೆಯಲಾಗಿದೆ. ಸಂಸ್ಕ್ರುತದ ಮೂಲ ಪದದಲ್ಲೇ ಮಹಾಪ್ರಾಣ ಇಲ್ಲ.
೨. Priority Seating ಗೆ ಸಂಸ್ಕ್ರುತದ 'ಆಧ್ಯತೆಯ ಆಸನ' ಎಂಬುದರ ಬದಲಾಗಿ ಎಲ್ಲರಿಗೂ ತಿಳಿಯುವ ಹಾಗೆ 'ಮೀಸಲು ಸೀಟು' ಇಲ್ಲವೆ 'ಮೀಸಲು ಕೂರ್ಕೆ' ಎಂದು ಮಾಡಬಹುದಿತ್ತು
ಮೊದಲನೆಯದು, ಕನ್ನಡಕ್ಕೆ ಬೇಡವಾದ ಮಹಾಪ್ರಾಣವನ್ನು ಕಯ್ಬಿಡುವುದು
ಎರಡನೆಯದು, ಕನ್ನಡದ್ದೇ ಆದ/ ಸುಳುವಾದ ಪದಗಳನ್ನು ಬಳಸುವುದು
ಇಶ್ಟೇ

ಬದುಕು - ಪದ ಬಳಕೆ

ಬದುಕು - ಇದನ್ನು 'ವಸ್ತು'/'ಆಸ್ತಿ' ಎಂಬ ಹುರುಳಿನಲ್ಲಿ ಬಳಸುವ ವಾಡಿಕೆ ನಮ್ಮ ಮಂಡ್ಯ-ಮಯ್ಸೂರಿನ ಹಳ್ಳಿಗಳಲ್ಲಿ ಬಳಕೆಯಲ್ಲಿದೆ.
೧. ನಮ್ ಮನೆ ಬದುಕು -ತಾಡ! ವೊಯ್ತುದೆ ಬತ್ತದೆ ಅನ್ನಂಗಿಲ್ಲ..ಎಂಗ್ ಬಿಸಾಕ್ ಅವ್ನೆ ನೋಡು...ವಸಿ ಗ್ಯಾನ ಇದ್ದದ
ಆದರೆ ಬರಹಗನ್ನಡದಲ್ಲಿ ಈ ಪದ ಹುಡುಕಿದರೂ ಸಿಗುವುದಿಲ್ಲ. ನಾವು ಈಗ ಇದನ್ನು ಬಳಸ ಹೋದರೆ 'ಸಂಸ್ಕ್ರುತದ ವಸ್ತು ಎಂಬ ಪದವನ್ನು ತೆಗೆದುಹಾಕಿ ಬದುಕು ಎಂಬ ಪದವನ್ನು ಬಳಸುತ್ತಿದ್ದೀರಿ..ಸಂಸ್ಕ್ರುತ ವಿರೋದಿ' ಎಂದು ಬೊಬ್ಬೆ ಹೊಡೆಯುತ್ತಾರೆ!!
ಇದರಿಂದಲಾದರೂ ತಿಳಿಯುವುದಿಲ್ಲವೆ? ಬರಹಗನ್ನಡ ಹೇಗೆ ಮಾತಿನಿಂದ ದೂರ ಹೋಗುತ್ತಿದೆ ಎಂಬುದು.

ಪಸ್ - ಪದ ಬಳಕೆ

ಮಯ್ಸೂರು-ಮಂಡ್ಯ ಕಡೆ 'ಪಸ್ಕಂಡದೆ' ಅಂದರೆ 'ಸವೆದು ಸವೆದು ಹರಿದು ಹೋಗಿದೆ' ಅಂತ ಹುರುಳಿದೆ.
ಎತ್ತುಗೆಗೆ:
೧. ನಿನ್ ಶರ್ಟಿನ ಮೊಳಸಂದೆ ತಂವು ಪಸ್ಕಂಡದೆ
೨. ಏನ್ ಇಂಗ್ ಪಸ್ಕಂಡದೆ ? ನೋಡ್ನಿಲ್ವ?

ಪದನೆರಕೆಯಲ್ಲಿ ಸಿಗದ ಪದಗಳು -ವದಗು

ಮಂಡ್ಯದಲ್ಲಿ 'ಓಡು' ಎಂಬುದಕ್ಕೆ 'ಒದಗು/ವದಗು' ( ವದೀಕ - ಹಿಂಬೊತ್ತಿನ ರೂಪ)ಬಳಸಲಾಗುತ್ತದೆ. ಆದರೆ ಇದನ್ನು ನಾನು ಯಾವ ಪದನೆರಕೆಯಲ್ಲೂ ಕಂಡಿಲ್ಲ.
೧. 'ವದೀಕ/ಒದೀಕ ಬಂದೆ' (ಓಡಿಕೊಂಡು ಬಂದೆ)
೨. 'ಒದಗು!! ಒದಗು!! ವೊಲ್ದೊಳಿಕೆ ಮರಿ ನುಕ್ಕಂಡವೆ' (ಓಡು! ಓಡು! ಹೊಲದೊಳಗೆ ಮರಿಗಳು ನುಗ್ಗಿಕೊಂಡಿವೆ)

ಹೀಗೊಂದು ಪೇಚಾಟ

ಮಯ್ಸೂರಿನ ಒಂದು ತಿಂಡಿಮನೆಯಲ್ಲಿ ಟೀ ತಗೊಂಡು ಹೀರುತ್ತಾ ಆಚೆ ಬಂದೆ. ಅಲ್ಲಿ ಇನ್ನು ಮೂರು ಮಂದಿ ಕೆಲವು ಹಾಳೆಗಳನ್ನು ಹಿಡಿದುಕೊಂಡು ಮಾತಾಡುತ್ತಿದ್ದರು. ಅದು ಯಾವುದೊ ಒರೆತದ 'ಕೇಳ್ವಿ ಹಾಳೆ' ಅಂತ ನನಗೆ ಅನ್ನಿಸಿತು.
ಕೊಂಚ ಹೊತ್ತಿನಲ್ಲೇ ಅವರು ಹಯ್ ಸ್ಕೂಲಿನ ಕಲಿಸುಗರು ಎಂಬುದು ತಿಳಿಯಿತು. ಹುರುಪು ತಾಳಲಾರದೆ ನಾನು ಹಾಳೆಗಳನ್ನು ಅವರಿಂದ ಕೇಳಿ ಪಡೆದು ಕಣ್ಣಾಡಿಸಿದೆ. ಅದು ಹತ್ತನೆಯ ತರಗತಿಯ ಕೇಳ್ವಿಹಾಳೆ ಎಂಬುದು ತಿಳಿಯಿತು.
ಅದರ ತಲೆಬರಹದಲ್ಲಿದ್ದ 'ಸಂಕಲನಾತ್ಮಕ ಮೌಲ್ಯಮಾಪನ' ಸಾಲನ್ನು ನೋಡಿ ಏನೂ ತಿಳಿಯದೆ ಪೇಚಿಗೆ ಸಿಲುಕಿದೆ. ತಡೆಯಲಾರದೆ ಆ ಮೂರು ಮಂದಿಯ ಕಡೆ ತಿರುಗಿ-
"ಏನ್ ಸಾರ್, ಇದು ಸಂಕಲನಾತ್ಮಕ ಮೌಲ್ಯಮಾಪನ ಅಂದ್ರೆ ..ಇದುವರೆಗೂ ನಾನು ಕೇಳೇ ಇಲ್ಲ" ಅಂದೆ.
ಆ ಮೂವರಲ್ಲಿ ಇಬ್ಬರು ಮುಕ-ಮುಕ ನೋಡಿಕೊಂಡರು. ಕೊಂಚ ಹೊತ್ತು ಅವರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ. ನನ್ನ ಹಾಗೆ ಅವರು ಪೇಚಿಗೆ ಸಿಲುಕಿಕೊಂಡರು ಅಂತ ನನಗೆ ಅನ್ನಿಸಿತು.
ಆ ಇಬ್ಬರು ಮೂರನೆಯವರನ್ನು ಕೇಳಿದರು ..ಆಗ ಆ ಮೂರನೆಯವರು-
"ಅದೇ ಸಾರ್, ಇಂಗ್ಲಿಶಲ್ಲಿ Summative Evaluation ಅಂತ ಹೇಳ್ತಿವಲ್ಲ..ಅದೇ"
ತುಂಬ ಪೇಚಿಗೆ ಸಿಲುಕಿದ್ದ ನನಗೆ ಕೊಂಚ ಉಸಿರಾಡಿದಂತಾಯಿತು.
ಇಂಗ್ಲಿಶ್ ಪದಗಳಿಗೆ ಸಂಸ್ಕ್ರುತ ಪದವನ್ನು ಕಟ್ಟಿ ಕನ್ನಡಕ್ಕೆ ತಂದಿದ್ದೇವೆ ಅಂತ ತಪ್ಪು ತಿಳಿವಳಿಕೆಯಲ್ಲಿ ತೇಲುತ್ತಾ..ಕನ್ನಡವನ್ನು ಕನ್ನಡಿಗರಿಂದ ಇನ್ನಶ್ಟು ದೂರ ಮಾಡುತ್ತ... ನಮ್ಮ ನಾಲಿಗೆ, ಮೆದುಳುಗಳನ್ನು ನಾವೇ ಕತ್ತರಿಸಿಕೊಳ್ಳುತ್ತಾ ಇದ್ದೀವೆ ಅಂತ ಅನ್ನಿಸಿತು.
ಅಶ್ಟು ಹೊತ್ತಿಗೆ ಟೀ ಮುಗಿದಿತ್ತು... ಹೊಟ್ಟೆಯಲ್ಲಿ ಬೇವಸವಾಯಿತು.

ಕಾಡಾರಂಬ ಮತ್ತು ನೀರಾರಂಬ

ನಂಜನಗೂಡಿನ ಹತ್ತಿರ ಇರುವ ಸುತ್ತೂರಿನಲ್ಲಿ ೧೫೮೬ ರಲ್ಲಿ ಕೆತ್ತಲಾಗಿದೆ ಎಂದು ಹೇಳಲಾದ ಈ ಕಲ್ಬರಹದಲ್ಲಿ 'ಕಾಡಾರಂಬ' ಮತ್ತು 'ನೀರಾರಂಬ' ಎಂಬ ಪದಗಳನ್ನು ಬಳಸಲಾಗಿದೆ.
ಕಾಡಾರಂಬ - Dry cultivation
ನೀರಾರಂಬ - Wet cultivation
ಅಂದರೆ ೧೬ನೇ ನೂರೇಡಿನ ಬರಹಗಳಲ್ಲೂ 'ವ್ಯವಸಾಯ', 'ಕೃಷಿ' ಎಂಬ ಸಂಸ್ಕ್ರುತ ಪದಗಳು ಬಳಕೆಯಲ್ಲಿರಲಿಲ್ಲ. ಅಂದಿಗೂ 'ಆರಂಬ' ಎಂಬ ಪದವೇ ಮಾತಿನಲ್ಲೂ ಬರಹದಲ್ಲೂ ಬಳಕೆಯಲ್ಲಿದ್ದಿರಬೇಕು


ಕಾರು ಮತ್ತು ಹಯನು

ಮಯ್ಸೂರು-ನಂಜನಗೂಡು-ಮಳವಳ್ಳಿ-ನರಸೀಪುರ-ಚಾಮರಜನಗರದ ಊರುಗಳಲ್ಲಿ ಸಿಕ್ಕಿರುವ ೧೫ ಮತ್ತು ೧೬ ನೇ ನೂರೇಡಿನ(ಅಂದರೆ ಕನ್ನಂಬಾಡಿ ಮತ್ತು ಕಬಿನಿ ಕಟ್ಟೆಗಳನ್ನು ಕಟ್ಟುವ ಮೊದಲೇ) ಕಲ್ಬರಹಗಳಲ್ಲಿ ಬತ್ತದ ಎರಡು ಬೆಳೆಯ ಬಗ್ಗೆ ಹೇಳಲಾಗಿದೆ. ಕಾರ್ ಬತ್ತ ಮತ್ತು ಹಯ್ನ್ ಬತ್ತ
೧. ಕಾರ್ ಬತ್ತ - ಹೆಸರು ಹೇಳುವಂತೆ ಮುಂಗಾರಿನ (ಮುನ್+ಕಾರ್) ಮಳೆಯ ಹುಯ್ಯುವ ಕಾಲದಲ್ಲಿ ಬೆಳೆಯುವ ಬತ್ತ (ಕಾರ್ತಿಕ ತಿಂಗಳಿ ಕಯ್ಯಿಗೆ ಬರುವ ಬೆಳೆ)
೨. ಹಯ್ನ್/ಅಯ್ನ್ ಬತ್ತ - ಮುಂಗಾರು ಮಳೆ ಇಲ್ಲದ ಹೊತ್ತಿನಲ್ಲಿ ಅಂದರೆ ಹಯ್ನ್/ಹಯಿನು ( < ಸಂ. ಪಯಸ್) ನೀರನ್ನು ಅಂದರೆ ಕೆರೆಯ ನೀರನ್ನು ಬಳಸಿಕೊಂಡು ಬೆಳೆಯುವ ಬತ್ತ (ವಯ್ಶಾಕ ತಿಂಗಳಿಗೆ ಕಯ್ಯಿಗೆ ಬರುವ ಬೆಳೆ)
ಅಂದರೆ ಸುಮಾರು ೧೫ನೇ ನೂರೇಡಿನಲ್ಲೇ ಕಾವೇರಿ-ಕಪಿಲೆಯ ಕಣಿವೆಯ ಈ ನಾಡಿನಲ್ಲಿ ಎರಡು ಬತ್ತದ ಬೆಳೆಯನ್ನು ತೆಗೆಯುತ್ತಿದ್ದರು ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು.

ಹಂಗಿಸು - ಇದರ ಬಗ್ಗೆ

ಹಂಗಿಸು/ಅಂಗಿಸು - ಇದ ಮಯ್ಸೂರು-ಮಂಡ್ಯದಲ್ಲಿ ಬಳಕೆಯಲ್ಲಿದೆ
೧. ಯಾಕ್ ಅಂಗ್ (ಹಂ)ಅಂಗಿಸ್ತಿಯ?
೨. ಹಂಗಿಸಿದರೂ ಮಂಗತನ ಬಿಡಲಿಲ್ಲ
೩. ಬೆಳೆ (i.e First crop or Kaaru Crop) ಹೊಗಳಿಸಿ ಉಣ್ಣಬೇಕು; ಹಯನು(i.e second crop) ಹಂಗಿಸಿ ಉಣ್ಣಬೇಕು
ಹಂಗಿಸು ಎಸಕಪದ
(ದೇ) ಮೂದಲಿಸು, ಹೀಯಾಳಿಸು, ಕೀಳಾಗಿ ಕಾಣು

ಶನಿವಾರ, ಸೆಪ್ಟೆಂಬರ್ 17, 2016

ಒಳ್ಳೆಯ ಬಾಳಾಟ ಎಂದರೇನು? ಹೇಗೆ?


 [ಈ ಬರಹದಲ್ಲಿ ಬರುವ ಬ್ರಾಹ್ಮಣ, ಶೂದ್ರ, ವೈಶ್ಯ ಮತ್ತು ಕ್ಶತ್ರಿಯ ಎಂಬ ಪದಗಳು ಯಾವುದೇ ವ್ಯಕ್ತಿ ಇಲ್ಲವೆ ಮಂದಿಗೆ ತಗುಲಿಹಾಕಿಕೊಂಡಿಲ್ಲ ಬದಲಾಗಿ ಅವುಗಳೆಲ್ಲವನ್ನು ಬೇರೆ ತೆರದಲ್ಲಿ ಇಲ್ಲಿ ನೋಡಲಾಗಿದೆ ಅಂದರೆ ಅವುಗಳನ್ನು ’ಕುರಿಪು’ಗಳು (concepts) ಎಂದು ಬಗೆದು ಈ ಬರಹವನ್ನು ಮಾಡಲಾಗಿದೆ]

ಅಡಿಮಟ್ಟದಲ್ಲಿ ಎಲ್ಲ ಮಾನವರು ಮಯ್(body) ಮತ್ತು ಮನಸ್ಸನ್ನು(mind) ಹೊಂದಿದವರಾಗಿದ್ದಾರೆಂದು ನಮಗೆಲ್ಲ ತಿಳಿದಿರುವ ವಿಶಯ. ನಾವು ನಮ್ಮ ಮಯ್ಯನ್ನು ಹದುಳವಾಗಿ ಇಟ್ಟುಕೊಳ್ಳಲು ಇಲ್ಲವೆ ಹಸಿವನ್ನು ನೀಗಿಕೊಳ್ಳಲು ನಮ್ಮ ನಮ್ಮ ಮಟ್ಟಿಗೆ ತಿಂಡಿ/ಊಟವನ್ನು ಮಾಡುತ್ತೇವೆ. ಹಾಗೆಯೇ ಮನಸ್ಸನ್ನು ಅಂಕೆಯಲ್ಲಿಟ್ಟುಕೊಳ್ಳಲು ಕೂಡಣದ ಮಟ್ಟದಲ್ಲಿ ಕೆಲವು ಕಟ್ಟುಪಾಡುಗಳನ್ನು ಹಾಕಿಕೊಂಡು ಬದುಕು ನಡೆಸಿಕೊಂಡು ಬಂದಿದ್ದೇವೆ. ನಮ್ಮ ಸುತ್ತ ಇರುವ ಗಿಡ, ಮರ,ಕಾಡು, ಹೊಳೆ, ಗಾಳಿ, ಬೆಟ್ಟ, ಬೆಳೆ, ಕಾಳು, ಉಸುರಿಗಳು ಮತ್ತಿತರೆ ಬದುಕುಗಳು ನಮ್ಮನ್ನು ನೇರವಾಗಿ ಇಲ್ಲವೆ ನೇರವಲ್ಲದ ತರದಲ್ಲಿ ನಮ್ಮ ಊಟ-ತಿಂಡಿ, ನಡವಳಿಕೆ, ನಂಬಿಕೆಗಳ ಮೇಲೆ ತಮ್ಮ ಒತ್ತನ್ನು ಬೀರುತ್ತಾ ಬಂದಿವೆ. ಇತ್ತೀಚೆಗೆ, ಅಂದರೆ ೨೦-೩೦ ವರುಶಗಳಲ್ಲಿ ಕೂಡಣದ, ಹಣಕಾಸಿನ, ನಂಬಿಕೆಗಳ ಹೀಗೆ ಹತ್ತು ಹಲವು ವಲಯಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಕೆಲವರು ಈ ಬದಲಾವಣೆಗಳ ಪರವಿದ್ದರೆ ಇನ್ನು ಕೆಲವರು ಈ ಬದಲಾವಣೆಗಳ ಇದಿರಾಗಿ ನಿಂತಿದ್ದಾರೆ. ಹೆಚ್ಚಿನವರು ಈ ಬದಲಾವಣೆಗಳನ್ನು ಅರೆಬರೆ ತಿಳಿದುಕೊಂಡು ತೀರ ಗೋಜಿಗೆ ಹೋಗದೆ ಬರುವುದನ್ನು ಒಪ್ಪಿಕೊಂಡು ಹೊತ್ತನ್ನು ದೂಡುತ್ತಿದ್ದಾರೆ. ಈ ಬದಲಾವಣೆಗಳನ್ನು ಅರಿತುಕೊಳ್ಳಲು ಮತ್ತು ಅವುಗಳ ಮುಂದಿನ ಜಾಡನ್ನು ಪತ್ತೆ ಹಚ್ಚಲು ನಮಗೆ ಕೆಲವು ಕುರಿಪುಗಳ ನೆರವು ಬೇಕಾಗುತ್ತದೆ.  ಅಂತಹ ಕುರಿಪುಗಳ ಮೂಲಕ ಹೊಸನೋಟವನ್ನು ಮತ್ತು ಹೊಳಹುಗಳನ್ನು ನೀಡುವುದೇ ಈ ಬರಹದ ಮುಕ್ಯ ಗುರಿಯಾಗಿದೆ.

ಮೊದಲೇ ಹೇಳಿದಂತೆ ಬುಡಮಟ್ಟದಲ್ಲಿ ನಮಗಿರುವುದು ಮಯ್ ಮತ್ತು ಮನಸ್ಸು. ಅಂದರೆ ನಾವೆಲ್ಲರೂ ನಮ್ಮೊಳಗೆ ನಾವು ಶೂದ್ರ(body) ಮತ್ತು ಬ್ರಾಹ್ಮಣ(mind) ಎಂಬ ಕುರಿಪುಗಳನ್ನು ಒಳಗೊಂಡಿದ್ದೇವೆ. ನಮ್ಮ ಬದುಕನ್ನು ಚೆನ್ನಾಗಿ ನಡೆಸಲು ನಮಗೆ ಮಯ್ ಮತ್ತು ಮನಸ್ಸುಗಳೆರಡೂ ಬೇಕಾಗಿದೆಯಲ್ಲದೆ ಅವುಗಳನ್ನು ಚೆನ್ನಾಗಿ ಬಳಸಿಕೊಳ್ಳಬೇಕಾಗುತ್ತದೆ. ಆದರೆ ಇಲ್ಲಿ ಒಂದು ತನ್ನೆದುರ‍್ತನವಿದೆ. ಅದೇನೆಂದರೆ ಒಂದಕ್ಕೆ ಗಮನ ಕೊಡಲು ಹೋದರೆ ಇಲ್ಲವೆ ಬಳಸಿಕೊಂಡರೆ ಇನ್ನೊಂದನ್ನು ಚನ್ನಾಗಿ ಬಳಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಆ ನಿಟ್ಟಿನಲ್ಲಿ ಇವುಗಳ ಬೇಕುಗಳು ಒಂದಕ್ಕೊಂದು ಇದಿರಾಗಿವೆ. ಎತ್ತುಗೆಗೆ, ನಾವು ಗುದ್ದಲಿ ತೆಗೆದುಕೊಂಡು ಹಳ್ಳವನ್ನು ತೋಡುವಾಗ ನಮಗೆ ಬೇರೆ ಚಿಂತನೆಗಳನ್ನು ನಡೆಸಲಾಗುವುದಿಲ್ಲ. ಅಂದರೆ ನಮ್ಮ ಮಯ್ಯನ್ನು ಹೆಚ್ಚು ಹೆಚ್ಚು ಬಳಸಿದಂತೆ, ದುಡಿಸಿಕೊಂಡಂತೆ ನಮ್ಮ ಮನಸ್ಸನ್ನು ಹೆಚ್ಚು ಹೆಚ್ಚು ಬಳಸಲಾಗುವುದಿಲ್ಲ. ಅಂದರೆ ದುಡಿಮೆಯನ್ನು ಮಾಡದೇ ನಮಗೆ ’ಹೇಳುವ’ವನೊಬ್ಬ ಬೇಕಾಗುತ್ತಾನೆ.  ಆ ಕಡೆಯಿಂದ ನೋಡಿದರೂ ಅಶ್ಟೆ, ಅಂದರೆ ನಾವು ಆಳವಾದ ಚಿಂತನೆಗಳನ್ನು ಗಮನವಿಟ್ಟು ಮಾಡಬೇಕಾಗಿ ಬಂದಾಗ ಯಾರೂ ಇಲ್ಲದೆ ಇರುವ ಒಂದು ಕಡೆ ಕುಳಿತು ಮಯ್ಯನ್ನು ಹೆಚ್ಚು ದುಡಿಸಿಕೊಳ್ಳದೇ ಇರಬೇಕಾಗುತ್ತದೆ. ಅಂದರೆ ನಮ್ಮೊಳಗಿರುವ ಶೂದ್ರ ಮತ್ತು ಬ್ರಾಹ್ಮಣಗಳೆಂಬ ಕುರಿಪುಗಳು ಅವುಗಳ ಬಳಕೆಯ ನೆಲೆಯಲ್ಲಿ ಒಂದಕ್ಕೊಂದು ಎದುರಾಗಿವೆ.

ಹಾಗಾದರೆ ನಾವು ಏನು ಮಾಡಬೇಕು? ಬರೀ ಮಯ್ಯನ್ನೇ ಬಳಸಿದರೆ ಮನಸ್ಸಿನ ಇಲ್ಲವೆ ಚಿಂತನೆಯ ಕಸುವನ್ನು ಚೆನ್ನಾಗಿ ಬಳಸಿಕೊಳ್ಳಲಾಗುವುದಿಲ್ಲ. ಇಲ್ಲವೆ ಮಯ್ಯನ್ನು ಬಳಸದೇ ಬರೀ ಮನಸ್ಸನ್ನು ಬಳಸುತ್ತಿದ್ದರೆ ನಮ್ಮ ಮಯ್ ಜಡ್ಡು ಹಿಡಿದು ಬೇನೆಗಳ ತುತ್ತಾಗುತ್ತದೆ. ನಾವು ದಿನಕ್ಕೆ ಒಂದು ಗಂಟೆ ನಡೆಯುವಶ್ಟಾದರೂ ಶೂದ್ರತನವನ್ನು ಉಳಿಸಿಕೊಳ್ಳಬೇಕಾಗುತ್ತದೆ ಎಂದು ಮಾಂಜುಗರು ಸಲಹೆ ನೀಡುತ್ತಾರೆ.  ತನ್ನೇಳಿಗೆ, ಮಯ್ಯೇಳಿಗೆ ಅಲ್ಲದೆ ಮತ್ತಿನ್ನಾವ ಕೋನದಿಂದ ನೋಡಿದರೂ ನಾವು ನಮ್ಮಲ್ಲಿರುವ ಶೂದ್ರ ಮತ್ತು ಬ್ರಾಹ್ಮಣ ಪರಿಚೆಗಳನ್ನು ಹದವಾಗಿ ಬೆರೆಸಿ ಜಾಣತನದಿಂದ ಅದನ್ನು ಬಳಸಿಕೊಳ್ಳಬೇಕಾಗುತ್ತದೆ.  ಇವೆರಡನ್ನು ಸರಿದೂಗಿಸುಕೊಂಡು ಹೋಗುವುದರಲ್ಲೇ ಇರುವುದು ಒಳ್ಳೆ ಬಾಳಾಟ ನಡೆಸುವ ಗುಟ್ಟು/ಜಾಣ್ಮೆ.

ಆದರೆ ಈಗ ನಡೆಯುತ್ತಿರುವುದೇ ಬೇರೆ. ಇತ್ತೀಚಿನ ೨೦-೩೦ ಏಡುಗಳಲ್ಲಿ ನಮ್ಮ ಮಯ್ಯ ಬಳಕೆ ತೀರ ಕಡಿಮೆಯಾಗಿದೆ ಅಲ್ಲದೆ ಮನಸ್ಸಿನ ಬಳಕೆ ಹೆಚ್ಚಾಗಿ ಹಲವು ಎಡವಟ್ಟುಗಳಿಗೆ ದಾರಿಮಾಡಿಕೊಟ್ಟಿದ್ದೇವೆ. ನಾವು ಹೇಗೆ ನಮ್ಮ ಸರಕೊಲವನ್ನು(materialism) ಇಲ್ಲವೆ ತೆವಲನ್ನು ತೀರಿಸಿಕೊಳ್ಳಬಹುದೆಂಬುದರ ಬಗ್ಗೆ ಹೆಚ್ಚು ಹೆಚ್ಚು ಚಿಂತನೆಯನ್ನು ನಡೆಸುತ್ತಿದ್ದೇವೆ. ಅಂದರೆ ನಮ್ಮಲ್ಲಿ ನಾವು ’ವೈಶ್ಯ’ (ಮಾರಾಟ, ವ್ಯಾಪಾರ, commerce) ಎಂಬ ಹೊಸ ಕುರಿಪನ್ನು ಬರಮಾಡಿಕೊಂಡಿದ್ದೇವೆ. ಈ ವೈಶ್ಯತನಕ್ಕೆ ಇಂಬುಕೊಡಲು ಇಲ್ಲವೆ ಅದನ್ನು ಕಾಪಾಡಿಕೊಂಡು ಹೋಗಲು ’ಕ್ಶತ್ರಿಯ’(ಆಳ್ಮೆ, ರಾಜಕೀಯ, politics) ಎಂಬ ಇನ್ನೊಂದು ಕುರಿಪನ್ನು ಸಾಕುತ್ತಿದ್ದೇವೆ. ಹೆಚ್ಚು ಹೆಚ್ಚು ಮಾರಾಟದಿಂದ ನಾವು ಸರಕುಗಳಿಗೆ ತೊತ್ತಾಗಿ ಸರಕುಗಳಲ್ಲಿ ’ದೈವತ್ವ’ವನ್ನು ಕಾಣಲು ಹೊರಟಿದ್ದೇವೆ. ಮಾರುಕಟ್ಟೆಯೇ ನೆಮ್ಮು, ಸರಕುಗಳೇ ದೇವರುಗಳು ಯಾಕಂದರೆ ಸರಕುಗಳಿಂದ ನಮಗೆ ಬೇಕಾದ ನಲಿವನ್ನು ಪಡೆದುಕೊಳ್ಳಬಹುದು ಎಂದು ನಾವು ನಂಬತೊಡಗಿದ್ದೇವೆ. ಮಾರುಕಟ್ಟೆಯಲ್ಲೇ ನಮ್ಮ ಎಲ್ಲ ತೊಂದರೆಗಳಿಗೆ, ಬೇಕುಗಳಿಗೆ ಬಗೆಹರಿಕೆಗಳು ಸಿಗುತ್ತವೆ ಎಂದು ನಂಬತೊಡಗಿದ್ದೇವೆ.

ಹೀಗೆ, ಮಾರಾಟ(ವೈಶ್ಯ) ಮತ್ತು ಆಳ್ಮೆ(ಕ್ಶತ್ರಿಯ) ನಮ್ಮ ಇಂದಿನ ಬದುಕಿನಲ್ಲಿ ಹೆಚ್ಚುಗಾರಿಕೆಯನ್ನು ಪಡೆಯತೊಡಗಿವೆ. ಆದ್ದರಿಂದ ನಾವು ಇಲ್ಲವೆ ನಮ್ಮಲ್ಲಿ ಹೆಚ್ಚಿನವರು ನಮ್ಮಲ್ಲಿರುವ ’ಶೂದ್ರ’ ಎಂಬ ಕುರಿಪನ್ನು ಕಡೆಗೆಣಿಸಲು ಇಲ್ಲವೆ ಮರೆಯಲು ಶುರು ಮಾಡಿದ್ದೇವೆ.  ’ಶೂದ್ರ’ತನವನ್ನು ಮರೆಯುವುದು ಎಂದರೆ, ನಮ್ಮ ಮಯ್ಯಿಗೆ ಬೇಕಾದ ದುಡಿಮೆಯನ್ನು ಕೊಡದೆ ಅದು ಹಲವು ಬೇನೆಗಳ ತವರೂರಾಗುವಂತೆ ನಡೆದುಕೊಳ್ಳುವುದು ಎಂದು. ಬೇನೆಗಳನ್ನು ಸರಿಪಡಿಸಲು ಆರಯ್ಕೆ ಮತ್ತು ಮದ್ದುಗಳ ಮಾರಾಟದ ಏರ‍್ಪಾಟನ್ನು ಮಾಡಿಕೊಂಡಿದ್ದೇವೆ. ಕಯ್ಗೆ, ಕಾಲಿಗೆ, ಕರುಳಿಗೆ, ಉಗುರಿಗೆ, ತೊಗಲಿಗೆ, ಕಿವಿಗೆ ಒಬ್ಬೊಬ್ಬರಂತೆ ಮದ್ದುಗಾರರು ಇಲ್ಲವೆ ಮದ್ದುಗಳು ಇಂದು ದೊರೆಯುತ್ತಾರೆ/ತ್ತವೆ.

ಇದಲ್ಲದೆ ನಾವು ನಮ್ಮೊಳಗಿರುವ ’ಬ್ರಾಹ್ಮಣ’ ಎಂಬ ಕುರಿಪನ್ನು ಕೂಡ ಸರಿಯಾಗಿ ಬಳಸಿಕೊಳ್ಳದೆ ಹುಚ್ಚು ಹೊಳೆಯಂತೆ ಎಲ್ಲೆಂದರಂತೆ ನಮ್ಮ ಚಿಂತನೆಯನ್ನು ಹರಿಯಬಿಡುತ್ತಿದ್ದೇವೆ. ನಮ್ಮ ಚಿಂತನೆಗಳನ್ನು ಸರಿಯಾದ ತೆರದಲ್ಲಿ ಮತ್ತು ಸರಿಯಾದ ಗುರಿಯೆಡೆಗೆ ಕೊಂಡೊಯ್ಯಲು ನಮಗೆ ಆಗುತ್ತಿಲ್ಲ ಯಾಕಂದರೆ ನಾವು ಸರಕುಗಳ ಹೊಳೆಯಲ್ಲಿ ಮತ್ತು ಬಂದವರ ಹಾಗೆ ತೇಲುತ್ತಿದ್ದೇವೆ. ಹಾಗಾಗಿ ನಾವು ದಿಕ್ಕೆಟ್ಟವರಂತೆ ನಡೆದುಕೊಳ್ಳಲು ತೊಡಗಿದ್ದೇವೆ. ಸರಕುಗಳು ನಮ್ಮನ್ನು ಕುಣಿಸುತ್ತಿವೆ. ನಾವು ಅವುಗಳ ತೊತ್ತಾಗುತ್ತಿದ್ದೇವೆ.

ನಮ್ಮೊಳಗಿನ ಬ್ರಾಹ್ಮಣವನ್ನು ನಾವು ತನ್ನೇಳಿಗೆ(ಅದ್ಯಾತ್ಮ)ಗೆ ಬಳಸಿಕೊಳ್ಳಬೇಕಾಗಿತ್ತು ಆದರೆ ನಮ್ಮ ಚಿಂತನೆಗಳು ಸರಕುಗಳು ಮತ್ತು ಅವುಗಳ ಮಾರಾಟದ ಏರ‍್ಪಾಟುಗಳು ಮತ್ತು ಹೆಚ್ಚು ಹೆಚ್ಚು ಮಂದಿಯನ್ನು ಕೊಳ್ಳುಗರನ್ನಾಗಿಸುವತ್ತ ಸಾಗಿದೆ.  ಹೊಸಗಾಲದ ಅರಿಮೆ ಮತ್ತು ಚಳಕಗಳನ್ನು ಇದಕ್ಕಾಗಿ ಸಿದ್ದಪಡಿಸಲಾಗುತ್ತಿದೆ. ಕೊಳ್ಳುಬಾಕತನವು ನಮ್ಮನ್ನೇ ಕೊಳ್ಳುವ ಮಟ್ಟಕ್ಕೆ ನಾವೇ ದೂಡಿಕೊಳ್ಳುತ್ತಿದ್ದೇವೆ. ಹೀಗಿರುವಾಗ ಇದಕ್ಕೆಲ್ಲ ಪರಿಹಾರವೇನು ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ.

ಈಗಾಗಲೆ ನಮ್ಮ ಹಿರಿಯರು ಇದಕ್ಕೆ ಸರಿಯಾದ ದಾರಿಯನ್ನು ಹಾಕಿಕೊಟ್ಟು ಹೋಗಿದ್ದಾರೆ. ಆದರೆ ನಾವು ಆ ದಾರಿಯನ್ನು ತುಳಿಯದೇ ಇದ್ದುದರಿಂದ ಅಲ್ಲಿ ಗಿಡ-ಗಂಟೆ, ಮುಳ್ಳು, ಸೆತ್ತೆ-ಸೆದೆಗಳು ಬೆಳೆದುಕೊಂಡಿದೆ. ಅದನ್ನು ನಾವು ಕಿತ್ತು ಹಾಕಿ ಆ ದಾರಿಯನ್ನು ಮತ್ತೆ ಅಣಿಗೊಳಿಸಕೊಳ್ಳಬೇಕು. ಆ ದಾರಿಯನ್ನು ತುಳಿದು ತುಳಿದು ಮಟ್ಟ ಮಾಡಿ ಮುಂದೆ ಬರುವವರು ಕೂಡ ಆ ದಾರಿಗೆ ಬರಲು ಅನುವು ಮಾಡಿಕೊಡಬೇಕು. ಹಾಗಾದರೆ ಆ ದಾರಿಯೇನು?

ನಾವು ಬರಮಾಡಿಕೊಂಡಿರುವ ವೈಶ್ಯ ಮತ್ತು ಕ್ಶತ್ರಿಯ ಎಂಬ ಕುರಿಪುಗಳನ್ನು ನಾವು ಕೊಂದು ಹಾಕಬೇಕು; ಇಲ್ಲವಾದರೆ ಅವುಗಳ ಒತ್ತರವನ್ನು ತುಂಬ ಕಡಿಮೆ ಮಾಡಬೇಕು. ನಮ್ಮಲ್ಲಿರುವ ಶೂದ್ರತನಕ್ಕೆ ನಾವು ಸರಿಯಾದ ಮನ್ನಣೆ ಕೊಡಬೇಕು. ನಮ್ಮಲ್ಲಿರುವ ಶೂದ್ರತನವನ್ನು ಉಳಿಸಿಕೊಳ್ಳಬೇಕಾದರೆ ತಕ್ಕಮಟ್ಟಿಗಾದರೂ ನಾವು ಮಯ್ ದುಡಿಮೆಯನ್ನು ಮಾಡಲೇಬೇಕು. ಇದರಿಂದ ಮಾತ್ರ ನಾವು ನಮ್ಮ ಮಯ್ಯನ್ನು ಹದುಳವಾಗಿ ಇಟ್ಟುಕೊಳ್ಳಬಹುದು. ನಮ್ಮಲ್ಲಿರುವ ಬ್ರಾಹ್ಮಣತನಕ್ಕೆ ಸರಿಯಾದ ದಿಕ್ಕು ಮತ್ತು ಗುರಿಗಳನ್ನು ತೋರಬೇಕು ಅಂದರೆ ಮನಸ್ಸನ್ನು ಹೆಚ್ಚು ತನ್ನೇಳಿಗೆಯೆಡೆಗೆ ಕೊಂಡೊಯ್ಯಬೇಕು.  ತನ್ನೇಳಿಗೆಯಲ್ಲಿ ತನ್ನ ಸುತ್ತಲಿನ ಏಳಿಗೆಯನ್ನು ಒಳಗೊಳ್ಳುವಂತೆ ಮಾಡಬೇಕು. ತನ್ನೇಳಿಗೆಯಲ್ಲಿ ನೆಮ್ಮದಿಯಿದೆ; ತಣಿವಿದೆ; ತಾಳ್ಮೆಯಿದೆ. ಇದನ್ನೇ ಹನ್ನೆರಡನೇ ನೂರೇಡಿನ ಶರಣರು ಮಾಡಿ ತೋರಿಸಿದರು. ಈ ವಚನವು ಇದೇ ಚಿಂತನೆಯನ್ನು ಎತ್ತಿಹಿಡಿಯುತ್ತದೆ.
ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ  
ತನ್ನ ಬಣ್ಣಿಸಬೇಡ ಇದಿರ ಹಳಿಯಲು ಬೇಡ 
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ 
ಇದೇ ನಮ್ಮ ಕೂಡಲಸಂಗಮನೊಲಿಸುವ ಪರಿ
ಇದಲ್ಲದೆ, ಶರಣರಲ್ಲಿನ ಕಾಯಕವೇ ಕೈಲಾಸ(ದುಡಿಮೆ), ದಾಸೋಹ( ಹೆಚ್ಚಿನ ಹಣವನ್ನು/ಗಳಿಕೆಯನ್ನು ಇಲ್ಲದವರ ಬಳಕೆಗೆ ಕೊಡುವುದು), ಹೆಚ್ಚು ಗಳಿಕೆಗೆ ಆಸೆ ಪಡದಿರುವುದು, ತನ್ನೇಳಿಗೆಯ ಮಾತುಗಳನ್ನು ವಚನಗಳ ಮೂಲಕ ಕೂಡಣದಲ್ಲಿ ಹಂಚಿಕೊಳ್ಳುವುದು – ಇವೆಲ್ಲದರ ಮೂಲಕ ಎಲ್ಲರೂ ಅವರವರ ಬ್ರಾಹ್ಮಣ ಮತ್ತು ಶೂದ್ರತನಗಳ ಹದವಾದ ಬೆರಕೆಯನ್ನು ಸಾದಿಸಿವುದು. ಇದೇ ಶರಣರು ಕಂಡುಕೊಂಡ ಹೊಳಹು ಇಲ್ಲವೆ ಬಗೆಹರಿಕೆ.

ಆದರೆ, ಹೊಸಗಾಲದ ಅಳ್ಮೆ ಮತ್ತು ಮಾರಾಟಗಳು ಮತ್ತು ಅವುಗಳು ಕಟ್ಟಿಕೊಂಡಿರುವ ಏರ‍್ಪಾಟುಗಳು ಬುಡಮಟ್ಟದಲ್ಲಿ ಮನುಶ್ಯತನವನ್ನು ಅಲುಗಾಡಿಸಲು ತೊಡಗಿವೆ. ಅಲ್ಲದೆ ಈ ಏರ‍್ಪಾಟುಗಳು ಈ ನೆಲದ ತುಂಬಿರುವ ಬೇರ‍್ಮೆಯ ಮತ್ತು ಹಲತನದ ಅಳಿವಿಗೆ ಕಾರಣವಾಗಿವೆ. ಹಾಗಾಗಿ ಈ ಏರ‍್ಪಾಟುಗಳು ನಮ್ಮನ್ನು ತನ್ನೇಳಿಗೆಯ ದಾರಿಯೆಡೆಗೆ ಹೋಗಲು ಬಿಡುತ್ತಿಲ್ಲ. ಹಾಗಾದರೆ, ಈ ಏರ‍್ಪಾಟುಗಳು ಏಕೆ ಏರ‍್ಪಡುತ್ತಿವೆ? ಹೊಸಗಾಲದ ಮಾರಾಟದ ಏರ‍್ಪಾಟುಗಳು ದುರಾಸೆಯನ್ನು ಸಲಹುತ್ತದೆ. ಹೆಚ್ಚು ಹೆಚ್ಚು ಮಂದಿ ಕೊಳ್ಳುಗರಾದಶ್ಟು ಮಾರುಕಟ್ಟೆಗೆ ಇಲ್ಲವೆ ಮರಾಟಗಾರರಿಗೆ ಗಳಿಕೆ. ಹೆಚ್ಚು ಹೆಚ್ಚು ಮಂದಿ ಬಂದಾಗ ಏರ‍್ಪಾಟುಗಳು ಬೇಕಾಗುತ್ತವೆ. ಮಾರಾಟವನ್ನು ಸಲಹಲು ಮತ್ತು ಕಾಪಾಡಿಕೊಂಡು ಹೋಗಲು ಆಳ್ಮೆಯು ಇಲ್ಲವೆ ಅದರ ಏರ‍್ಪಾಟುಗಳು ಕಾಲಿಡುತ್ತವೆ. ದುರಾಸೆಯನ್ನು ತೂಗಿಸಿಕೊಂಡು ಹೋಗಲು ಈ ಏರ‍್ಪಾಟುಗಳು ತಲೆಯೆತ್ತುತ್ತವೆ. ಹಾಗಾಗಿ, ಇಂತಹ ಏರ‍್ಪಾಟುಗಳು ಮಾನವೀಯತೆಗೆ ತಕ್ಕಮೆಯನ್ನು ಇಲ್ಲವೆ ಬೆಲೆಯನ್ನು ನೀಡುವುದಿಲ್ಲ. ಇಲ್ಲಿ ಮಾನವೀಯತೆಯೆಂದರೆ ಶೂದ್ರ ಮತ್ತು ಬ್ರಾಹ್ಮಣವನ್ನು ಹದವಾದ ತೆರೆದಲ್ಲಿ ಬಳಸಿಕೊಂಡು ಹೋಗುವ ಒಂದು ಪಾಡು ಎಂದು ತಿಳಿಯಬಹುದು

ಶನಿವಾರ, ಮೇ 21, 2016

ಎತ್ತೆತ್ತಲ್...

ಹತ್ತಿ ಮರವ ಕಿತ್ತ ಹಣ್ಣನು
ಕಚ್ಚಿ ತಿನದಿದ್ದೊಡೆ
ಎತ್ತಿ ಮುದ್ದಾಡಲ್ ಮನೆಯೊಳ್
ಹೆತ್ತ ಮಕ್ಕಳ್ ಇಲದಿದ್ದೊಡೆ
ಮತ್ತೆಂತಯ್ಯ ನನ್ನ ಕಾಣ್ಕೆ ಮತ್ತಿತಾಳಯ್ಯ
ಎತ್ತೆತ್ತಲ್ ನಿನ್ನ ಕಾಣದಿದ್ದೊಡೆ

ಶನಿವಾರ, ಏಪ್ರಿಲ್ 30, 2016

’ರಾಶ್ಟ್ರೀಯತೆ’ಯ ಬಗೆಗಿನ ಚರ‍್ಚೆಗಳು - ಒಂದು ಸೀಳುನೋಟ

ಇತ್ತೀಚೆಗೆ ಕೆಲವು ಚಿಂತಕರು ’ರಾಶ್ಟ್ರೀಯತೆ’ ಎಂಬುದನ್ನು ಈ ನೆಲದ ಬೇರ‍್ಮೆ(Diversity)ಗಳಲ್ಲಿ ಹುಡುಕಲು ನೋಡುತ್ತಿದ್ದಾರೆ. ಹಾಗೆ ಮಾಡುವಾಗ ಇಂಡಿಯಾದ ನೆಲದಲ್ಲಿರುವ ಹಲವು ತೆರನಾದ ಬೇರ‍್ಮೆಗಳನ್ನು ಅವರು ಬರಹಕ್ಕಿಳಿಸುತ್ತಾ ಹೋಗುತ್ತಾರೆ. ಹೀಗೆ ಬೇರ‍್ಮೆಗಳನ್ನು ಬರಹಕ್ಕೆ ಇಳಿಸುವುದರಿಂದ ಅವುಗಳನ್ನು ಗುರುತಿಸಿದ ಹಾಗೆ ಆಗುತ್ತದೆಯೇ ಹೊರತು ’ರಾಶ್ಟ್ರೀಯತೆ’ಯನ್ನು ವಿವರಿಸಲಾಗುವುದಿಲ್ಲ. ಆದ್ದರಿಂದ ಬೇರ‍್ಮೆಗಳ ಮೂಲಕ ’ರಾಶ್ಟ್ರೀಯತೆ’ಯನ್ನು ಕಲ್ಪಿಸಿಕೊಳ್ಳುವುದು ಮಂದಿಗೆ ತೊಡಕು ತೊಡಕಾಗಿದೆ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬ ಪದಗಳನ್ನು ಒಂದರ ಬದಲು ಇನ್ನೊಂದನ್ನು ಸಲೀಸಾಗಿ ಬಳಸುವುದರಿಂದ ಚಿಂತನೆಗಳಲ್ಲಿ ಗೊಂದಲಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ರಾಶ್ಟ್ರೀಯತೆಯನ್ನು ಸರಿಯಾಗಿ ತಿಳಿದುಕೊಳ್ಳುವ ಅಗತ್ಯವಿದೆ.

ಮೊದಲನೆಯದಾಗಿ, ’ದೇಶ’ ಎಂಬುದನ್ನು ’country’ ಎಂಬುದಕ್ಕೂ, ’ರಾಶ್ಟ್ರ’ ಎಂಬುದನ್ನು ’Nation’ ಎಂಬುದಕ್ಕೂ ಬಳಸುವುದು ಸರಿ. ಅಲ್ಲದೆ ’ದೇಶ’ ಮತ್ತು ’ರಾಶ್ಟ್ರ’ ಎಂಬೆರಡು ಪದಗಳಲ್ಲಿರುವ ಬೇರೆತನವನ್ನು ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ದೇಶ ಎಂಬುದು ಆ ’ನೆಲ’ವನ್ನಶ್ಟೆ ಸೂಚಿಸುತ್ತದೆ ಆದರೆ ’ರಾಶ್ಟ್ರ’ ಅಂದರೆ ’ನೇಶನ್’ ಎಂಬುದು ಸೂಚಿಸುವುದು ನೆಲವನ್ನಲ್ಲ. ಅದರ ಗುರಿಗಳು ಬೇರೆಯೇ ಆಗಿವೆ.

ಎರಡೆನೆಯದಾಗಿ, ನೇಶನ್ ಎಂಬುದಕ್ಕೆ ಕನ್ನಡವೂ ಸೇರಿದಂತೆ ಇಂಡಿಯಾದ ಇತರೆ ನುಡಿಗಳಲ್ಲಿ ಸರಿಯಾದ ಪದವೇ ಇಲ್ಲ. ಅಂದರೆ ಈ ತಿಳುವಳಿಕೆ ಇಂಡಿಯ ದೇಶದಲ್ಲಿ/ನೆಲದಲ್ಲಿ ಹುಟ್ಟಿದ್ದಲ್ಲ; ಇದು ಹುಟ್ಟಿದ್ದು ಯೂರೋಪಿನ ನೆಲದಲ್ಲಿ. ಈ ತಿಳುವಳಿಕೆಯನ್ನು ಎರವಲು ಪಡೆದುಕೊಂಡು ಸಂಸ್ಕ್ರುತದ ’ರಾಶ್ಟ್ರ’ ಎಂಬ ಪದವನ್ನು ’ನೇಶನ್’ ಎಂಬುದಕ್ಕೆ ಸಾಟಿಯಾಗಿ ಬಳಸುವ ಪರಿಪಾಟ ಬೆಳೆದು ಬಂದಿದೆ. ಯೂರೋಪಿನಲ್ಲಿ ಹುಟ್ಟಿ ಬೆಳೆದ ಈ ನೇಶನ್ ಎಂಬುದನ್ನು ಒಂದು ನೆಮ್ಮು(religion), ಒಂದು ಜಾತಿ, ಒಂದು ನಡವಳಿ, ಒಂದು ಹಳಮೆ, ಒಂದು ನುಡಿಯನ್ನು ನೆಚ್ಚಿಕೊಂಡು ವಿವರಿಸಲು ಆಗುವುದಿಲ್ಲ. ಹಾಗೆ ವಿವರಿಸಲು ಹೋದರೆ ಇವತ್ತಿನ ಇಂಡಿಯ ಸೇರಿದಂತೆ ಹಲವು ’ನೇಶನ್’ಗಳ ಏರ್ಪಾಟುಗಳನ್ನು ಹೇಗೆ ವಿವರಿಸುತ್ತೀರಿ?
ಆದ್ದರಿಂದ ನೇಶನ್ ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಲು ನಾವು ರಬೀಂದ್ರನಾತ್ ಟಾಕೂರ್ ಅವರ ಚಿಂತನೆಗಳ ಮೊರೆ ಹೋಗಬೇಕಾಗುತ್ತದೆ. ಅವರು ತಮ್ಮ ’ನ್ಯಾಶನಾಲಿಸಮ್’[Nationalism - Rabindranath Tagore, 1917] ಎಂಬ ಹೊತ್ತಗೆಯಲ್ಲಿ ಹೀಗೆ ಹೇಳಿದ್ದಾರೆ - ’When this organization of politics and commerce, whose other name is Nation’ . ಇದರಲ್ಲಿ ನಮಗೆ ನೇಶನ್ ಎಂಬುದರ ಸರಿಯಾದ ಹುರುಳು ಸಿಗುತ್ತದೆ. ಅದೇನೆಂದರೆ ಆಳ್ಮೆ(ರಾಜಕೀಯ) ಮತ್ತು ಕೊಳುಕೊಡೆ(ವಾಣಿಜ್ಯ)ಗಳ ಒಂದು ಕೂಟಗೆಯೇ ನೇಶನ್ ಎಂಬುದನ್ನು ಇಲ್ಲಿ ಮನಗಾಣಬಹುದು. [ಇಲ್ಲಿ ’ಕೊಳುಕೊಡೆ’ ಎಂಬ ಪದವನ್ನು ಹಣಕಾಸಿನಿಂದ ನಡೆಯುವ ಸರಕುಗಳ ’ಮಾರಾಟ ಮತ್ತು ಅದರ ಏರ‍್ಪಾಟು’ ಎಂದು ತಿಳಿದುಕೊಳ್ಳಬೇಕು]

ಮೂರನೆಯದಾಗಿ, ನೇಶನ್ ಎಂಬುದರ ಗುರಿ ಈ ಎರಡು ಎಂಜಿನ್ಗಳಾದ ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಹೇಗೆ ಚೆನ್ನಾಗಿ ನಡೆಸುವುದು ಎಂಬುದೇ ಆಗಿರುತ್ತದೆ. ಇದರಲ್ಲಿ ನೇರವಾಗಿ ಮಾನವೀಯ ಅಂಶಗಳಾದ ನುಡಿ, ನಡವಳಿ ಇವುಗಳಿಗೆ ಬೆಲೆಯಿಲ್ಲ. ಇಂಡಿಯಾದಲ್ಲಿ ಈ ಎರಡು ಎಂಜಿನ್ಗಳನ್ನು ದೆಹಲಿಯ ಆಳ್ವಿಕೆಯು ತನ್ನ ಅಂಕೆಯಲ್ಲಿಟ್ಟುಕೊಂಡಿದೆ. ರಾಜ್ಯಗಳ ಆಳ್ವಿಕೆಗಳು ಅವುಗಳನ್ನು ಪಾಲನೆ ಮಾಡುವುದಕ್ಕಶ್ಟೆ ಇರುವಂತೆ ಇವೆ. ಆಳ್ಮೆ ಮತ್ತು ಹಣಕಾಸಿಗೆ ನಂಟಿರುವ ಯಾವುದೇ ಕಟ್ಟಲೆಗಳನ್ನು ಕಟ್ಟುವುದರಲ್ಲಿ ಮತ್ತು ಅವುಗಳನ್ನು ರೂಪಿಸುವಲ್ಲಿ ಹೆಚ್ಚಾಗಿ ದೆಹಲಿ (ನೇಶನ್ ಎಂಬುದರ ಕೇಂದ್ರ) ಆಳ್ವಿಕೆಯ ಕಯ್ವಾಡವಿದೆ. ಸಂವಿದಾನದ ಪ್ರಕಾರವಾಗಿ ಇಂಡಿಯ ಎಂಬುದನ್ನು ಒಂದು ಒಪ್ಪುಕೂಟವೆಂದು ಹೇಳಿದ್ದರೂ ಒಪ್ಪುಕೂಟದ ಗುಣಗಳನ್ನು ಅದು ಹೊಂದಿಲ್ಲ.ಅದರ ಬದಲು ಹೆಚ್ಚಾಗಿ ’ನೇಶನ್’ ಎಂಬುದರ ಗುಣಗಳನ್ನು ಹೊಂದಿದೆ. ಅಂದರೆ ಆಳ್ಮೆ ಮತ್ತು ಕೊಳುಕೊಡೆಗಳನ್ನು ಒಂದು ಕೇಂದ್ರ ತಾಣದಿಂದ ನಿಯಂತ್ರಿಸಲಾಗುತ್ತಿದೆ.

ಯುವ ಚಿಂತಕರಾದ ಕಿರಣ್ ಬಾಟ್ನಿಯವರು ತಮ್ಮ ’The Pyramid of Corruption’ [Kiran Batni, 2014] ಎಂಬ ಹೊತ್ತಗೆಯಲ್ಲಿ ಬ್ರಿಟಿಶರು ಬರುವುದಕ್ಕೆ ಮುಂಚೆ ’ಇಂಡಿಯ’ ಎಂಬ ನೇಶನ್ ಇರಲಿಲ್ಲ. ಬ್ರಿಟಿಶರು ತಮ್ಮ ಗಳಿಕೆಗಾಗಿ ಈ ’ಇಂಡಿಯನ್ ನೇಶನ್’ ಎಂಬುದನ್ನು ಹುಟ್ಟುಹಾಕಿದರು ಎಂದು ಹೇಳುತ್ತಾರೆ. ಈ ನೇಶನ್ ಎಂಬುದು ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುವ ಹಲವು ಕಾಯ್ದೆ-ಕಾನೂನುಗಳನ್ನು ಅವರು ಮಾಡಿದರು. ಅಲ್ಲದೆ ಈ ನೇಶನ್ ಚೆನ್ನಾಗಿ ಕೆಲಸ ಮಾಡಿದಶ್ಟು ಹೆಚ್ಚು ಗಳಿಕೆ ಬ್ರಿಟಿಶರಗೆ ಆಗುತ್ತಿತ್ತಲ್ಲದೆ ಈ ನೆಲದ ಸಾಮಾನ್ಯ ಮಂದಿಯ ಏಳಿಗೆಯಲ್ಲ. ಈಗಲೂ ಹಾಗೆಯೇ ಆಗಿದೆ; ಆದರೆ ಬ್ರಿಟಿಶರ ಜಾಗಕ್ಕೆ ದೆಹಲಿ ಆಳ್ವಿಕೆ ನಡೆಸುತ್ತಿರುವವರು ಬಂದು ಕೂತಿದ್ದಾರೆ. ದೆಹಲಿ ಆಳ್ವಿಕೆಯಲ್ಲಿ ಯಾರ ಕಯ್ ಮೇಲಾಗಿದಿಯೋ ಅವರಿಗೆ ಈ ನೇಶನ್ನಿನಿಂದ ಬಳಕೆ ಮತ್ತು ಗಳಿಕೆಗಳೆರಡೂ ಇವೆ. ಹಾಗೆ ನೋಡಿದರೆ ದೆಹಲಿಯ ಆಳ್ವಿಕೆಯಲ್ಲಿ ಕನ್ನಡಿಗರ ಪಾಲು ತುಂಬಾ ಕಡಿಮೆ.

ಆದರೆ ಈ ನೇಶನ್ ಎಂಬುದನ್ನು ಇಂಡಿಯದಂತಹ ಹಲತನವಿರುವ, ಬೇರ‍್ಮೆಯಿರುವ ನೆಲದಲ್ಲಿ ಹೇಗೆ ಉಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಅದರ ಸ್ವರೂಪವೂ ಹೇಗಿರಬೇಕು ಎಂಬುದರ ಬಗ್ಗೆ ಚರ‍್ಚೆಗಳು ನಡೆಯಬೇಕಾಗಿದೆ. ಯೂರೋಪಿನಲ್ಲಿ ನುಡಿಯನ್ನು ಮುನ್ನೆಲೆಯಲ್ಲಿರಿಸಿ ಕಟ್ಟಿರುವ ನೇಶನ್ಗಳು ನಮ್ಮ ಕಣ್ಣಿಗೆ ರಾಚುತ್ತವೆ. ಅವುಗಳಿಂದ ನಾವು ಕಲಿತುಕೊಳ್ಳಬೇಕಾದುದು ಬಹಳಶ್ಟಿದೆ. ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತ ಮುಂದೆ ಮುಂದೆ ನೋಡುತ್ತಾ ನಮ್ಮ ನಾಳೆಗಳನ್ನು ಕಟ್ಟಿಕೊಳ್ಳಬೇಕಾಗಿದೆ.

ಬುಧವಾರ, ಮಾರ್ಚ್ 09, 2016

...ಎಡೆಬಿಡದೆ

ಬರತನ್ ಎಂಬರ್ ಎನ್ನ
ಅರಿತಮನ್ ಅಗೆಯುತಿರುವೆನ್
ಇರಿತಮನ್ ಬಗೆಯಲಾರೆನ್
ಹಿರಿತನದಿಂ ಅನಿಸುಂಗಳ ಅರುಹುವೆನ್
ಸಿರಿತನಮ್ ಅರಿದಲ್ಲಮ್ ಎನಗೆ
ಒರೆತನಮ್ ಹಿರಿದೆನಗೆ ಅರಿವಿನ
ಕೊರತೆಯನ್ ನೀಗಿಸಲ್ ದೂಸರಿನ
ಒರತೆಯನ್ ಅರಸುತಿರುವೆನ್
...................ಎಡೆಬಿಡದೆ

ಶನಿವಾರ, ಫೆಬ್ರವರಿ 06, 2016

'ಕಾವ್ಯ'ದ ಬಗೆಗಿನ ವಾದ

ಸಾಹಿತಿಗಳಲ್ಲಿ ಇಲ್ಲವೆ ಸಾಹಿತ್ಯ ವಲಯದಲ್ಲಿ ಈ ಬಗೆಯ ಒಂದು ವಾದವಿದೆ:-
'ಕಾವ್ಯ' ಎಂಬುದು ಸುಲಬದಲ್ಲಿ ದಕ್ಕುವ ಹಾಗೆ ಇರಬಾರದು. ಅದನ್ನು ಅರ್ತ ಮಾಡಿಕೊಳ್ಳುವುದಕ್ಕೆ ಆ ಕಾವ್ಯದ ಓದುಗನು ಹೆಣಗಾಡಬೇಕು. ಆದ್ದರಿಂದ ಸಂಸ್ಕ್ರುತದ ಪದಗಳನ್ನು ಹೆಚ್ಚು ಹೆಚ್ಚು ಬಳಸಿದಶ್ಟು ಆ ಕಾವ್ಯವು ಕಶ್ಟವಾಗುತ್ತಾ ಹೋಗುತ್ತದೆ. ಆದ್ದರಿಂದ ಕಾವ್ಯದ 'ಕಾವ್ಯಾತ್ಮಕ' ಶಕ್ತಿಯು ಹೆಚ್ಚುತ್ತಾ ಹೋಗುತ್ತದೆ.
ಇದಕ್ಕೆ ನನ್ನ ಉತ್ತರ:-
ಈ ವಾದವನ್ನೇ ಮುಂದುವರೆಸಿ ಹೇಳುವುದಾದರೆ, ಬರೀ ಸಂಸ್ಕ್ರುತ ಪದಗಳನ್ನೇ ಬಳಸಿ ಕನ್ನಡದಲ್ಲಿ ಕಾವ್ಯವನ್ನು ಕಟ್ಟಿದರೆ ಅದನ್ನು ಅರ್ತ ಮಾಡಿಕೊಳ್ಳಲು ಕನ್ನಡಿಗರಿಗೆ ಆಗುವುದೇ ಇಲ್ಲ. ಆದ್ದರಿಂದ ಯಾವ ಕಾವ್ಯವು ಕನ್ನಡಿಗರಿಗೆ ತಿಳಿಯುವುದಿಲ್ಲವೊ/ಮುಟ್ಟುವುದಿಲ್ಲವೊ ಅದೇ 'ಕಾವ್ಯ' ಅನಿಸಿಕೊಳ್ಳುತ್ತದೆ. ಹಾಗಾಗಿ ಮೇಲಿನ ವಾದದಲ್ಲಿರುವ ವಿಪರ್ಯಾಸವನ್ನು ನಾವು ಗಮನಿಸಬಹುದು.
ಸಮಾದಾನವಾಗಿ ಹೇಳುವುದಾದರೆ, ಹವ್ದು - ಸಾಹಿತಿಗಳ ಮೇಲಿನ ವಾದದಲ್ಲಿ ಕೊಂಚ ಮಟ್ಟಿಗೆ ಹುರುಳಿದೆ. ಅಂದರೆ ಕಾವ್ಯ ಎನ್ನುವುದು ನಮ್ಮನ್ನು ಕಾಡಬೇಕು. ಅದರಲ್ಲೇನೊ ಒಂದು ವಿಶಯವು ಗುಟ್ಟಾಗಿರಬೇಕು. ಅದು ಕಶ್ಟವಾಗಿದ್ದಶ್ಟು ನಮಗೆ ಸವಾಲನ್ನು ಒಡ್ಡುತ್ತದೆ. ಆದರೆ ಇಂತಹವು ಕಾವ್ಯದ ಒಂದು ಬಗೆಯಶ್ಟೇ. ಇಂತಹ ಬಗೆಯೊಂದೇ 'ಕಾವ್ಯ'ವಲ್ಲ ಎಂಬುದನ್ನು ಗಮನಿಸಬಹುದು.
ಅಲ್ಲದೆ, ಈ ಬಗೆಯ ಕಾವ್ಯಕ್ಕೆ ಸಂಸ್ಕ್ರುತ ಪದಗಳ ಮೊರೆ ಹೋಗಬೇಕೆನ್ನುವುದು ಅಶ್ಟು ಸರಿಯಲ್ಲ. ಅದನ್ನು ನಾವು ಕನ್ನಡದ ಪದಗಳನ್ನೇ ಹೊಸ ಬಗೆಯಲ್ಲಿ ದುಡಿಸಿಕೊಳ್ಳುವ ಚಳಕಗಳನ್ನು ಕಂಡುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು.
ಕೆಲವು ಸಾಹಿತಿಗಳು ಹೇಳುವಂತೆ ಸಿನಿಮಾ ಹಾಡುಗಳಿಗೆ ಅಂತಹ 'ಕಾವ್ಯಾತ್ಮಕ' ಗುಣವಿರುವುದಿಲ್ಲ. ಹವ್ದು -ಅದು ಅಲ್ಲಿ ಬೇಕಾಗಿಲ್ಲ, ಯಾಕಂದರೆ ಅದಕ್ಕೆ 'ಸಿನಿಮಾ'ದ ಬೆಂಬಲವಿದೆ. ಅದು ಆ ಹೊತ್ತಿಗೆ ನೋಡುಗನನ್ನು ತಣಿಸಿದರೆ ಸಾಕು.
ಕಾವ್ಯದ ಎಲ್ಲ ಬಗೆಗಳೂ/ರೂಪಗಳೂ ನಮಗೆ ಬೇಕು.

ಗುರುವಾರ, ಫೆಬ್ರವರಿ 04, 2016

ನಲ್ಗೊಳದ ಮೊಗದೊಳ್...

ನಲ್ಗೊಳದ ಮೊಗದೊಳ್
ನಸುಗೆಂಪಿನ ನನೆಹಲ್ಮರೆಯ
ನುಣ್ಣಿಂಪಿನ ಬಂಡನು ನೆನೆ
ನೆನೆದು ಬಗೆ ಸೊಂಪಾಗಿರಲ್

ಕೊಳಮೊಗದ ಚೆಲುವನೀರಲಿ
ಅಲೆನಗುವು ಮೆಲ್ಲಗೇಳುತಿರಲ್
ಒಲುಮೆ ಹೆರೆಯನು ಮಾರ‍್ವೊಳೆದು
ಬಳುಕುವನು ಸುಂಯ್ಯೆಲರ್ ಬೀಸುತಿರಲ್

ಶುಕ್ರವಾರ, ಜನವರಿ 08, 2016

Palatalization of *k- to c- in Tamil



From Dravidian Etymological Dictionary. 
PDr *k- is palatalized in Tamil before front vowels (an approximate statement); Tamil, therefore, in many forms has the initial phoneme c- when the reconstructed PDr form would have k-.

From the following table, its evident that Kannada preseves Proto Dravidian's (PDr) *k- as it is whereas Tamil has switched to 'c-'



However, when 'k' is followed by pattern [front vowel][retroflex], switching to 'c-' doesn't occur in Tamil.

Kannada  Tamil   English
kēḷ            kēḷ       to ask, to hear

Here ē is front vowel
        ḷ is a retroflex