Kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Kannada ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಅಕ್ಟೋಬರ್ 02, 2011

A Review of Book: Bipolar Identiy - Region , Nation and Kannada Language Film

A Review of Bipolar Identity - Region , Nation and Kannada Language Film - MK Raghavendra, Oxford University Press, 2011

This is probably the first book in English which analyses the Entire Kannada Cinema and make some significant conclusions applying the perspective of region and nation and their interaction with each other. Author has tried to assess the 'motifs' of the mainly 'popular' Kannada cinema although there is comparatively brief analysis about the 'Parallel'(Art) Cinema. He also seems to be determined to analyse only from the point of view of friction between region and nation, but at times he goes beyond his original intentions which is sort of breaks the monotony which one can experience while reading. The reason that the author has given more importance to the 'popular cinema' is probably because of the fact this genre of the cinema captures the pulse of the constituents of that Region and most likely to have the impact on society. Some of the main conclusions which author has tried to stress is the fact that National(Indian) identity tries to subsume the regional identity and its only proper that Region opposes it. The constituents(populace) of Kannada region tries to register the opposition to Nation State whenever the socio-political conditions are not so favourable to Kannada region, however when the region (or its people) get importance at National level, then Region tries to be loyal with nation state. Author illustrates this point with fact that how Kannada cinema reacts to Growth and Fall of Nijalingappa as national leader of INC to rationalise his conclusions.

Regions v/s Nation:-
Another important thread which Author tries to hang on is the fact that the Mysore Princely state had seen Modernity (thanks to Rajarshi Nalvadi Krishnaraja Wodeyar, Sir M. Vishweshwaraiah and Mirza Ismail) much before India started experiencing the modernity. This was registered in Kannada cinema through various Bond films and 'Kasthuri Nivasa'. 'Kasturi Nivasa' has been dealt with much detail because the author thinks that Rajkumar's role represents the Mysore Modernity(Pigeon Brand) and Rajanand's role, who raises beyond his master(Rajkumar) in the business, represents Indian Modernity(Eagle brand). In the last phase of the movie when the Rajanand tries to give back the 'bungalow' which was once owned by Rajkumar. Rajkumar rejects the offer and prefers to stay in small hut. This is definitely contest between Mysore and India and definitely Mysore(Region) tries to assert its superiority over India(Nation). In another movie Puttanna's 'Nagarahavu', one can notice the Photos of Vishweshwaraiah and Kannada cultural stalwarts in Chamaiah Master's (KS Ashwath) house who represents Mysorean Modernity whereas Photo of Nehru in College Principal's(Loknath) house. Again ultimately in the movie superiority or importance has been given to Mysorean Modernity Indian /Nehruvian Modernity is almost neglected or takes backstage. Author vindicates this point through several illustrations throughout the book.

Bengaluru's Role:-
Though the Kannada cinema industry is located in Bengaluru today, but the confused pereception about Bengaluru maintained in movies from 60's to very recent. Author thinks that its Mysore which is regarded as the true representation of Kannadigas than Bengaluru because of the 'cantonment' effect which it experienced during British rule. In fact in 'Sandhyaraaga', the joint family breaks off when it moves from village to Bengaluru. In 'pattanakke banda patniyaru', Bengaluru is almost projected as lawless space and in the end, sisters goes back to village to join their husbands after bitter experience in Bengaluru.

Kannada Language:-
Author is of the opinion is that 'Brahminical' Kannada actually raises the self esteem of Kannada in movies of 60s to 80s. 'Low Kannada' in 90s actually demeans the self Image of Kannada and Kannadigas. However, thankfully author observes that there was more passion among film makers towards 'realism' in 90s. New breed of film makers wanted to break the 'traditions' and also account of the other sections/communities of society and their dialect, which didn't get enough importance in the big screen in previous decades. Interestingly movies of 2000s' gives importance to 'Tribal'(Jogi) and Dalit(Duniya) as the protagonists and there dialectical Kannada, which is sort of oxymoron considering the onslaught of globalization during this decade. This perhaps points to the fact that, with globalisation there is increasing friction between 'natives' and 'outsiders' and natives trying to reach out to their nativity in a never before manner and scale. This of course is narrated in subtle way in this book rather than in a more pronounced manner.

Shortcomings or Limitations:-
Any kind of study of Kannada cinema cant be completed without giving importance to the role of Dr.Rajkumar and author is no different in his approach. He tries to catch on the popular perception as 'ethical super hero' of Kannada populace. Author goes on to say that Rajkumar was more popular than NTR in AP and also unlike NTR , Rajkumar never entered politics and his exit from the cinemas was gradual rather than abrupt. According to Author, throughout his career Rajkumar represented the characters which represents Regional Modernity/Mysorean Modernity or Regional/Mysorean Values except the dual role in 'Babruvahana' where he represented both Nation(Arjuna) and Region(Babruvahana). Author makes a factual error by saying that the Rajkumar never acted as 'God'(Nation) however the author has correctly recognized that he either plays roles as King(Arjuna) or Demon(Mahishasura, Hiranya Kashyapu). Rajkumar has actually acted as God "Srinivasa/Venkateshwara" in 'Shrinivasa Kalyana' and as God Shiva in 'Shiva meccida Kannappa', however he has played greater number of King/Demon roles than the 'God' roles. What is disappointing as a reader to me is that author misses three important as well as popular cinemas namely 'Kulavadhu', 'Mallammana Pawada' and 'Mayura'. Mayura especially, would have been very important in the wake of the techniques used by author to assess the motifs and milieu of Kannada Region. Also the movies like 'Gandhada Gudi' and 'Immadi pulakeshi' getting very less attention from the author also disappointing, with the former having long lasting impression of Kannada populace. The author never tries to bring in the points like upholding the Kannada culture and Language, which both the above movies vehemently tries to implicate on viewers. There are some of the factual errors in the names of Directors and moveis (V.Somashekhar's Shankar Guru whereas mentioned as K, Somashekar). Sometimes movie name is mentioned as 'Mungaru male' and sometimes 'Mungaru Maley'. There could also some other errors in the names of Directors or Movies. One can also provide the list of movies which either didn't get mentioned in the book or not dealt in detail.

Overall, the author is able to hit upon interesting findings both from viewer's and maker's perspective. There is enough matter in the book which could be useful to the movie makers, sociologists and in general to those who follow Kannada cinema.

ಭಾನುವಾರ, ಜನವರಿ 02, 2011

ಸಲ್ಮೊಱೆ(ಸಲ್ಮೊರೆ) ಅಂದ್ರೇನು?

ಸಲ್ಮೊಱೆ (ಸಲ್+ಮೊಱೆ) - ?

ನಮ್ಮ ಕಡೆ ಈ ಪದ ಬಳಕೆಯಲ್ಲಿದೆ....ಹಿಂದಿನಿಂದಲೂ, ಹೆಣ್ಣು ಮದುವೆಯಾಗುವಾಗ ಈಗಿರುವ ಸಂಬಂಧದ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ಸಂಬಂಧದವರ ಜೊತೆ ಮದುವೆಯಾಗುವ ಪ್ರಸಂಗ ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಅನಲೈಸ್ ಮಾಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.

ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂಧ/ಒಪ್ಪತಕ್ಕ ಸಂಬಂಧ ಅಂತ ಅರ್ಥ.
( Ka. moṟe a turn, time, (K.2) propriety, virtue; relationship)

’ಮೊಱೆ’ಯ ಬಳಕೆಗಳು
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.

ಬುಧವಾರ, ಜನವರಿ 03, 2007

ಕನ್ನಡ - ಇಂಗ್ಲಿಷ್ ಭಾಷಾ ಕಲಿಕೆಯ ವಿಸ್ಮಯ-ವಿಚಾರ

ಇತ್ತೀಚಿನ ಕನ್ನಡ-ಇಂಗ್ಲಿಷ್ ಕಲಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೆ ನನ್ನ ತಲೆಯಲ್ಲಿ ಎರಡು ಭಾಷೆಗಳ ಕಲಿಕೆಯ ಬಗ್ಗೆ ಕೆಲವು ವಿಚಾರಗಳು ಹಾದು ಹೋದವು. ಹುಟ್ಟಿದ ಕೆಲವು ದಿನಗಳ ನಂತರ ಮಗುವು ತನ್ನಿಂತಾನೆ ಉಚ್ಚಾರ ಮಾಡುವ ಮೊದಲ ಅಕ್ಷರ "ಅ" ಹಾಗು ಕನ್ನಡದ ಅಕ್ಷರಮಾಲೆಯಲ್ಲಿರುವ ಮೊದಲ ಅಕ್ಷರ ಕೂಡ "ಅ". ಇದರಿಂದ ಕನ್ನಡ ಭಾಷೆ ಮಗುವಿಗೆ ತುಂಬ ಸ್ವಾಭಾವಿಕವಾಗಿದೆ. ವಿದ್ಯಾಭ್ಯಾಸ ಪ್ರಾರಂಭವಾದ ಮೇಲೆ ಮಕ್ಕಳು ಮೊದಲುಸ್ವರಾಕ್ಷರಗಳ ಉಚ್ಚಾರ ಕಲಿಯುವುದರಿಂದ ಹಾಗು ಅವುಗಳ ಉಚ್ಚಾರ ಸರಳ-ಸುಲಭವಾಗಿರುವುದರಿಂದ, ಕನ್ನಡ ಮೊದಲು ಕಲಿಯಲು ಬಹಳ ಅನುಕೂಲಕರ ಹಾಗು ಮಕ್ಕಳ ಕಲಿಕೆಯ ಕ್ರಮಕ್ಕೆ ಪೂರಕ.

* ಮಕ್ಕಳು ಕನ್ನಡದಲ್ಲಿ ಮೊದಲು ಸ್ವರಾಕ್ಷಾರಗಳನ್ನು ಕಲಿಯುವುದು ನಂತರ ವ್ಯಂಜನ ತದನಂತರ ಅವರ್ಗೀಯ ವ್ಯಂಜನ, ಹಾಗಾಗಿ ಕಲಿಯುವ ಅಕ್ಷರಗಳ ಈ ಸರಣಿ ಸರಳ ಹಾಗು ಸುಲಭ ಉಚ್ಚಾರಣೆಯಿಂದ ಮೊದಲ್ಗೊಂಡು ಕಷ್ಟ ಉಚ್ಚಾರವಾಗುತ್ತ ಹೋಗುತ್ತದೆ.

* ಮೊದಲು ಸುಲಭ ಉಚ್ಚಾರ ಮಾಡಬಹುದಾದ ಸ್ವರಗಳು( ಅ, ಆ, ಇ, ಈ, ಉ, ಊ, ಋ, ೠ, ಎ, ಏ, ಐ, ಒ, ಓ, ಔ, ಅಂ, ಅಃ). ನಂತರ ಕಷ್ಟವಾದಂತಹ 'ಕ' ವರ್ಗ, 'ಚ' ವರ್ಗ, 'ಟ' ವರ್ಗ, 'ತ' ವರ್ಗ, 'ಪ' ವರ್ಗ ನಂತರ ಅವರ್ಗೀಯ ವ್ಯಂಜನ( ಯ, ರ, ಲ, ವ, ಶ, ಸ, ಹ, ಳ)

* ಇಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವರ್ಗದ ಅಕ್ಷರಗಳ ಉಚ್ಚಾರದ ಅಂತರ ಬಹಳ ಕಡಿಮೆ ಇದೆ. ಉದಾ: 'ಕ' ಮತ್ತು 'ಖ' ಎರಡು 'ಕ' ವರ್ಗಕ್ಕೆ ಸೇರಿವೆ. ಆದರೆ ಇವುಗಳ ಉಚ್ಚಾರದಲ್ಲಿರುವ ಅಂತರ ಕೇವಲ ಉಸಿರಿಗೆ ಒತ್ತು ಕೊಡುವುದು.

* 'ಕ' ವರ್ಗದ ಅಕ್ಷರಗಳು ಉಚ್ಚಾರಣೆಯ ದೃಷ್ಟಿಯಿಂದ 'ಚ' ವರ್ಗಕ್ಕಿಂತ ಸುಲಭವಾಗಿವೆ.

* ಙ, ಞ - ಈ ಅಕ್ಷರಗಳ ಉಚ್ಚಾರಣೆ ಕಠಿಣವಾಗಿದೆಯಾದರೂ ಇವು ಮೊದಲು ಕಲಿಯುವ ಪದಗಳಲ್ಲಿ ಬರುವುದಿಲ್ಲ( ಉದಾ: ಅರಸ, ಆಡು, ಇಲಿ, ಈಶ)

ಆದರೆ ಇಂಗ್ಲೀಷ್ ನಲ್ಲಿ ಮೊದಲು ಕಲಿಯುವ ಅಕ್ಷರಗಳ ಬಗ್ಗೆ ಗಮನಿಸೋಣ
ಎ, ಬಿ, ಸಿ, ಡಿ, ಇ, ಎಫ್, ಜಿ, ಹೆಚ್, ಐ, ಜೆ, ಕೆ, ಎಲ್, ಎಮ್, ಎನ್, ಒ, ಪಿ, ಕ್ಯು, ಆರ್, ಎಸ್, ಟಿ, ಯು, ವಿ, ಡಬ್ಲು, ಎಕ್ಸ್, ವೈ, ಜೆಡ್.
A, B, C, D, E, F, G, H, I, J, K, L, M, N, O, P, Q, R, S, T, U, V, W, X, Y, Z

ಈ ಅಕ್ಷರಗಳ ಸರಣಿಯಲ್ಲಿ ಬರುವ ಅಕ್ಶರಗಳ ಉಚ್ಚಾರಣೆ ಒಂದಕ್ಕಿಂತ ಒಂದು ಭಿನ್ನವಾಗಿವೆ. ಉದಾ: ಬಿ ಮತ್ತು ಸಿ ಅಕ್ಕ-ಪಕ್ಕದ ಪದಗಳು ಮತ್ತು ಇಂಗ್ಲೀಷ್ ನಲ್ಲಿಕಲಿಯುವ ೨ ಮತ್ತು ೩ ನೇ ಅಕ್ಷರ , 'ಬಿ' ಯನ್ನು ಉಚ್ಚರಿಸಲು ತುಟಿಗಳನ್ನು ಉಪಯೋಗಿಸಬೇಕು ಆದರೆ 'ಸಿ' ಯನ್ನು ಉಚ್ಚರಿಸಲು ನಾಲಿಗೆಯನ್ನು, ಆದರೆ ಕನ್ನಡದಲ್ಲಿರುವ ೨ ಮತ್ತು ೩ನೇ ಅಕ್ಷರಗಳು ಆ, ಇ ಇವೆರಡು ಗಂಟಲಿಂದಲೆ(ಅಥವಾ ಧ್ವನಿಪೆಟ್ಟಿಗೆ) ಉಚ್ಚಾರವಾಗುವ ಅಕ್ಶರಗಳು. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಗಂಟಲಿನಿಂದಉಚ್ಚರಿಸುವ ಅಕ್ಷರಗಳನ್ನು ಮೊದಲು ಮತ್ತು ವೇಗವಾಗಿ ಕಲಿಯುತ್ತಾರೆ. ಮಕ್ಕಳು ನಾಲಿಗೆ ಅಥವಾ ತುಟಿಗಳಿಂದ ಬರುವ ಅಕ್ಷರಗಳನ್ನು( ಉದಾ: ಚ, ರ, ಶ) ನಿಧಾನವಾಗಿ ಕಲಿಯುತ್ತಾರೆ, ಹೀಗಾಗಿ ಇಂಗ್ಲೀಷ ಅಕ್ಷರಗಳ ಸರಣಿ ಮಕ್ಕಳ ಕಲಿಕೆಯ ದೃಷ್ಟಿಯಿಂದ ಸ್ವಾಭಾವಿಕ ಮತ್ತು ಪೂರಕವಾಗಿಲ್ಲ.

ಕನ್ನಡದಲ್ಲಿ ಕಲಿಕಾ ಕ್ರಮ ಹೀಗಿದೆ :-
೧) ಅಕ್ಷರಮಾಲೆಗಳ ಉಚ್ಚಾರ ಮತ್ತು ಬರವಣಿಗೆ
೨) ಕಾಗುಣಿತ ಉಚ್ಚಾರ ಮತ್ತು ಬರವಣಿಗೆ
೩) ಅಕ್ಷರಗಳ ಜೋಡಣೆ ಅಥವ ಪದಗಳ ಉಚ್ಚಾರ ಮತ್ತು ಬರವಣಿಗೆ

ಇಂಗ್ಲೀಷ ಕಲಿಕಾ ಕ್ರಮ ಹೀಗಿದೆ : -
೧) ಅಕ್ಷರಮಾಲೆಗಳ ಉಚ್ಚಾರ ಮತ್ತು ಬರವಣಿಗೆ
೨) ಅಕ್ಷರಗಳ ಜೋಡಣೆ ಅಥವ ಪದಗಳ ಉಚ್ಚಾರ ಮತ್ತು ಬರವಣಿಗೆ

ಇಲ್ಲಿ ನಾವು ಗಮನಿಸಬೇಕಾದುದೇನೆಂದರೆ ಇಂಗ್ಲೀಷಿನಲ್ಲಿ "ಕಾಗುಣಿತ"ವೆಂಬ ಕಲಿಕಾ ಕ್ರಮವೇ ಇಲ್ಲ. ಇದು ಇಂಗ್ಲೀಷ ಕಲಿಕೆಯ ಕ್ರಮದಲ್ಲಿರುವ ಮುಖ್ಯವಾದ ಋಣಾತ್ಮಕ ಅಂಶ.ಪದಗಳ ಜೋಡಣೆ ಗಮನಿಸಿದರೆ ಸಿ(C) ಯು(U) ಟಿ(T) -> ಕಟ್(CUT) ಆಗುತ್ತದೆ. ಪಿ(P) ಯು(U) ಟಿ(T) -> ಪುಟ್(PUT) ಆಗುತ್ತದೆ. ಹಾಗಾಗಿ ಪದಗಳ ಜೋಡಣೆಯಲ್ಲಿ ಯಾವುದೆ (ಕಾಗುಣಿತದ) ನಿಯಮಗಳ ಪಾಲನೆಯಿಲ್ಲ ಅಂದರೆ ಯಾವುದೆ ವೈಙ್ನಾನಿಕವಾದ ವ್ಯವಸ್ಥೆಯಿಲ್ಲ. ಆದ್ದರಿಂದ ಇಂಗ್ಲೀಷ ಚಿಕ್ಕ ಮಕ್ಕಳ ಕಲಿಕೆಗೆ ಯೋಗ್ಯವಾದ ಭಾಷೆಯಾಗಿಲ್ಲ. ಕನ್ನಡ ತಕ್ಕಮಟ್ಟಿಗೆ ಕಲಿತ ನಂತರ ಇಂಗ್ಲೀಷ್ ಕಲಿಯುವುದು ಬಹಳ ಸೂಕ್ತವಾಗಿದೆ.

ಮಂಗಳವಾರ, ಡಿಸೆಂಬರ್ 26, 2006

ಬಸವಣ್ಣನವರ ವಚನಗಳ ಬಗ್ಗೆ ಒಂದು ಚಿಂತನೆ

ನಮ್ಮ ದೇಶದಲ್ಲೆ ಬಹುಶಃ ಪ್ರಥಮ ಬಾರಿಗೆ ಸಾಮಾಜಿಕ, ಧಾರ್ಮಿಕ, ತಾತ್ವಿಕ, ಸಾಹಿತ್ಯಕ ಹಾಗು ರಾಜಕೀಯವಾಗಿ ಕ್ರಾಂತಿಯನ್ನುಂಟು ಮಾಡಿದ ಮಹಾನುಭಾವ ಬಸವಣ್ಣ. ಅವರ ಬಹು ದೊಡ್ಡ ಕೊಡುಗೆಗಳಲ್ಲಿ ವಚನ ಸಾಹಿತ್ಯವೂ ಒಂದು. ಅದರ ಬಗೆಗಿನ ಚಿಂತನೆ ಹಾಗು ಜಿಙ್ನಾಸೆಗಳು ಇಲ್ಲಿ ಮೂಡಿವೆ.

"ಎನಗಿಂತ ಕಿರಿಯರಿಲ್ಲ
ಶಿವಭಕ್ತರಿಗಿಂತ ಹಿರಿಯರಿಲ್ಲ ..."

ಈ ವಚನ ಎಷ್ಟು ಸರಳವಾಗಿದೆಯೊ ಅಷ್ಟೆ ಗಹನ ವಿಚಾರವನ್ನು ಒಳಗೊಂಡಿದೆ. ನೇರವಾಗಿ ಹೇಳುವುದಾದರೆ ಇದು ಬಸವಣ್ಣನವರ ಸರಳತೆ,ವಿನಮ್ರತೆ ಹಾಗು ವಿನಯತೆಗೆ ಕೈಗನ್ನಡಿಯಂತಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶ ಬಸವಣ್ಣನವರು "ಶಿವಭಕ್ತರಿಗಿಂತ ಹಿರಿಯರಿಲ್ಲ..." ಎಂದು ಏಕೆ ಹೇಳುತ್ತಾರೆ ಶಿವನಿಗಿಂತ ಹಿರಿಯರಿಲ್ಲ ಎಂದು ಏಕೆ ಹೇಳಲಿಲ್ಲ? ಎಂಬುದು. ಅವರು ದೈವಕ್ಕಿಂತ ದೈವಭಕ್ತಿಯೇ ಹಿರಿದು, ಶುದ್ಧ ದೈವ ಭಕ್ತಿಯುಳ್ಳವನು ದೈವವನ್ನು ಮೀರಿಸಬಲ್ಲ ಎಂದು ನಂಬಿದ್ದರೆಂದು ಖಂಡಿತವಾಗಿ ಹೇಳಬಹುದು. ಈ ಮಾತನ್ನು ಬಹು ಮಟ್ಟಿನ ಆಸ್ತಿಕರು ಒಪ್ಪುತ್ತಾರೊ ತಿಳಿಯದು, ಆದರೂ ಬಸವಣ್ಣನವರ ಈ ನಿಲುವು ಹಿಂದು ಧರ್ಮದಲ್ಲಿ ಕ್ರಾಂತಿಕಾರಕ ಎಂದು ಹೇಳಬಹುದು. ಭಕ್ತಿಯು ಮುಕ್ತಿಯ ಸಾಧನವೊಂದೆ ಅಲ್ಲ ಬದುಕನ್ನು ಹಸನು ಮಾಡುವ ಶಕ್ತಿ ಹೊಂದಿದೆ ಎಂದು ಅರ್ಥ ಮಾಡಿಕೊಳ್ಳಬಹುದು.

"ಉಳ್ಳವರು ಶಿವಾಲಯ ಮಾಡುವರಯ್ಯ
ನಾನೇನ ಮಾಡಲಿ ಬಡವನಯ್ಯ

ಎನ್ನ ಕಾಲೆ ಕಂಬವು
ದೇಹವೆ ದೇಗುಲ
ಶಿರವೆ ಹೊನ್ನ ಕಳಸವಯ್ಯ

ಸ್ಥಾವರಕ್ಕಳಿವಂಟು
ಜಂಗಮಕ್ಕಳಿವಿಲ್ಲ
ಅಯ್ಯ ಕೇಳಯ್ಯ ಕೂಡಲಸಂಗಯ್ಯ"

ನೇರ ಅರ್ಥ ಇದು ಒಬ್ಬ ಬಡವನ ನಿಸ್ಸಾಹಯಕತೆಯಾಗಿ ಕಾಣಬಹುದು ಆದರೆ ಇದು 'ದೇಹ'ವನ್ನೆ 'ದೇಗುಲ'ವನ್ನಾಗಿಸುವ ಉನ್ನತ ತತ್ವಯುಕ್ತ ವಾಣಿ. ಇದು ಬಹುಶಃ ಆಗಿನ ಕಾಲದ ಅಸ್ಪೃಷ್ಯತೆ, ಜಾತೀಯತೆಯಂತಹ ಕಂದಾಚಾರಗಳ ವಿಡಂಬಣೆಯಾಗಿ ಕೂಡ ಅರ್ಥೈಸಬಹುದು. ತಮ್ಮ ತಮ್ಮ ದೇಹದಲ್ಲಿ ದೇಗುಲವನ್ನು ಕಟ್ಟಿ ಶಿರದಲ್ಲಿ ಕಳಸವನ್ನು ಪ್ರತಿಷ್ಠಾಪಿಸಿ, ದೇಹದಲ್ಲಿ ದೇಗುಲವಿಲ್ಲದೆ ಪ್ರಾಪಂಚಿಕ ದೇಗುಲಗಳನ್ನು ಸಂದರ್ಶಿಸಿದರೆ ಯಾವ ದೇವನು ಒಲಿಯುವುದಿಲ್ಲ ಎಂಬ ನಿಲುವು ಅಭೂತಪೂರ್ವವಾದುದು. ಹಾಗೆಯೆ ಚಲನಶೀಲವಾದ ದೇಹವೆಂಬ[ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ] ದೇಗುಲಕ್ಕೆ ಅಳಿವಿಲ್ಲ ಆದರೆ ಜಡವಾಗಿರುವ ಪ್ರಾಪಂಚಿಕ ದೇಗುಲಗಳು ನಾಶವಾಗುವ ಸಾಧ್ಯತೆಗಳಿವೆ. ಯಾವುದೇ ಬಾಹ್ಯ ವಸ್ತು-ಆಚರಣೆಗಳಿಗಿಂತ ಮನುಷ್ಯನ ದೇಹ-ಮನಸ್ಸುಗಳು ಭಕ್ತಿಪಥಕ್ಕೆ ಬಹು ಮುಖ್ಯ ಎಂದು ಅರ್ಥೈಸಬಹುದಾಗಿದೆ.

ಚಿತ್ರ-ಕಾವ್ಯ ೨


ಕುದುರೆಮುಖ
ಎಷ್ಟು ಸುಖ!!
ಹಸಿರಿನ ರಸದೌತಣ
ನೀಡುತ ಬಾಗಿನ
ಹರಸುತಿದೆ ಯಾತ್ರಿಕನ

ಭಾನುವಾರ, ಡಿಸೆಂಬರ್ 24, 2006

ಚಿತ್ರ-ಕಾವ್ಯ


ಮರೆಯಾದೆ ಮೋಡಗಳಲ್ಲಿ
ನೀನಿಲ್ಲದೆ ಬದುಕೆಲ್ಲಿ?
ದಿನದ ಸಾರ್ಥಕತೆ ನಿನ್ನಲ್ಲಿ
ಕಾಯುವೆವು ನಿನಗೆ ದಿನವೂ ಈ ಕೊಳದಲ್ಲಿ

ಗುಬ್ಬಚ್ಚಿ

ನಿನ್ನ ಸ್ವಚ್ಚಂದ ಹಾರಾಟ
ಅಚ್ಚಳಿಯದೆ ಉಳಿದಿದೆ ಮನದಲ್ಲಿ
ಎತ್ತ ಹೋದೆ ನೀನು
ನೆನಪಿನಂಗಳದಿಂದ ಹಾರುತ

ಚುಚ್ಚಿತೆ ನಿನಗೀ ಕಿವಿಗಿಚ್ಚಿಡುವ ಶಬ್ದ
ಉಸಿರುಗಟ್ಟಿತೆ ಹಾಳು ಹೊಗೆಯಿಂದ
ಸ್ವಾರ್ಥಿಗಳಾದವೆ ನಾವು ಕಾಳುಗಳಾಕದೆ
ಅಗಾಗ ಕಾಣುವೆ ನೀನುಗುಡ್ಡ ಬೆಟ್ಟಗಳ ಮೇಲೆ
ನನ್ನ ನೆನಪ ಹಸಿರಾಗಿಸಲು

ನೀ ಎನ್ನ ಬಾಲ್ಯದ ಸಂಕೇತ
ದೂರ ಹೋದೆಯ ಹಾರುತ
ಮರಳಿ ಬಾ ಚಿಂವಗುಡುತ
ಮುಗ್ಧವಾಗಿಸು ಮನವ, ಮುದವ ನೀಡುತ

ಆಯ್ದ ಕವನಗಳು

ಬದುಕಿನಲಿ ತುಳಿದಿಹೆನು
ಕೆಲವು ಹೆಜ್ಜೆ
ಅಗಾಗ ನೋಡುತ ಹಿಂದೆ
ನೊಂದೆ ಬೆಂದೆ
ಎದ್ದೆ ಬಿದ್ದೆ
ಆದರೂ ಗುರಿಒಂದೆ
ಸಾಗಬೇಕು ಮುಂದೆ
-------------------------------

ವಾಹನಗಳ ನಡುವೆ ಅಂತರ
ಇರಲಿ ನಿರಂತರ
ಸಂಚಾರಿ ನಿಯಮಗಳ ಸದಾಚಾರ
ಮಾಡಿ ಜೀವಗಳಿಗೆ ಉಪಕಾರ
-------------------------------

ದೂರದ ಊರಲ್ಲಿ
ಹಸಿರಿನ ಹೊಲದಲ್ಲಿ
ತಂಪಾದ ಗಾಳಿಲಿ
ತೇಲಿಹೋದೆ ನಾನನ್ನವಳ ಜೊತೆಯಲ್ಲಿ
---------------------------------

ಹುಟ್ಟಿತು ಕವಿತೆ ಅಂತರಾಳದಲಿ
ಅನುಭವಗಳು ಪ್ರತಿಫಲಿಸಿ
ಅಕ್ಷರಗಳು ಕೂಡಿ ಜೋಡಿ
ಮಾಡುತ ಮೋಡಿ

ಅನಕೃ ರವರ "ಸಂಧ್ಯಾರಾಗ" ಕಾದಂಬರಿ - ವಿಶ್ಲೇಷಣೆ

ಅನಕೃ ರವರ "ಸಂಧ್ಯಾರಾಗ" ಕಾದಂಬರಿ - ವಿಶ್ಲೇಷಣೆ
------------------------------------------
ಅನಕೃರವರು ಕತೆಯ ವೇಗವನ್ನು ನಿಭಾಯಿಸುವರಲ್ಲಿ ನಿಷ್ಣಾತರು. ಅವರ ಬಹಳ ಕಥೆಗಳು/ಕಾದಂಬರಿಗಳು ಸ್ವಾತಂತ್ರ್ಯಪೂರ್ವ ಜನಜೀವನವನ್ನು ಕಣ್ಣಿಗೆ ಕಟ್ಟುತ್ತವೆ. ಸಂಧ್ಯಾರಾಗದಲ್ಲಿ ಅವರೇ ಹೇಳಿದಂತೆ ಒಬ್ಬ ಪ್ರಾಮಾಣಿಕ ಹಾಗು ಪರಿಪೂರ್ಣ ಸಂಗೀತಗಾರನು ಆತನ ಕಲೆಯ ಸಮಷ್ಠಿಯ ಕಡೆಗೆ ಹೋಗುವ ಹಿನ್ನಲೆಯುಳ್ಳ ಒಂದು ಸಾಮಾಜಿಕ ಕಾದಂಬರಿ. ಹೇಗೆ ಸಂಗೀತಗಾರನು ತನ್ನ ತೃಪ್ತಿಗೆ ಸಂಗೀತವನ್ನು ಆಶ್ರಯಿಸುವನೊ ಹಾಗೆ ಸಂಗೀತವು ಸಂಗೀತಗಾರನನ್ನು ತನ್ನ ಬೆಳವಣಿಗೆ ಆಶ್ರಯಿಸುತ್ತದೆ.

ಕಾದಂಬರಿಯಲ್ಲಿ ಬರುವ ರಾಮಚಂದ್ರ, ಲಕ್ಷ್ಮಣ ಪಾತ್ರಗಳ ಗುಣ, ಸ್ವಭಾವಗಳ ವೈರುಧ್ಯ ಕೆಲವು ಸಲ ಅತಿಶಯವಾಗಿ ಕಾಣುತ್ತವೆ. ರಾಮಚಂದ್ರನ ಗುಣ ಸ್ವಭಾವಗಳು ವಿಲಕ್ಷಣವಾಗಿ ಕಂಡು ಬಂದರೆ ಲಕ್ಷ್ಮಣನ ಗುಣ ಸ್ವಭಾವಗಳು ವಾಸ್ತವಕ್ಕೆ ದೂರವಾಗಿದೆಯೇನೊ ಎಂದು ಭಾಸವಾಗುತ್ತದೆ. ಆದರೆ ವೆಂಕಟೇಶ ಮತ್ತು ಗೋಪಾಲನ ಪಾತ್ರಗಳು ವಾಸ್ತವತೆಗೆ ಬಹಳ ಹತ್ತಿರವಾಗಿದೆ. ಕತೆಯ ವೇಗದ ತೀವ್ರತೆ ಎಷ್ಟಿದೆ ಎಂದರೆ ಕೆಲವು ಸಲ ಪುಟಗಳನ್ನು ಓದುಗ ಎರಡು ಸಲ ತಿರುವಿ ಹಾಕಿ ಓದಬೇಕಾಗುತ್ತದೆ. ನಿಜಕ್ಕೂ ಕತೆಯು ಇಷ್ಟು ದೂರ ಸಾಗಿದೆಯೇ ಎಂಬ ಅನುಮಾನ ಬಂದರೆ ಆಶ್ಚರ್ಯವಿಲ್ಲ. ಕತೆಯು ಸಂಗೀತಪ್ರಧಾನವಾಗಿರುವುದರಿಂದ ಸಂಗೀತದ ಙ್ನಾನ ಇದ್ದವರಿಗೆ ಇದು ಹೆಚ್ಚು ಇಷ್ಟವಾದರೆ ಇತರರಿಗೆ ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವುದಕ್ಕೆ ಈ ಕಾದಂಬರಿ ಸಹಾಯಕವಾಗುತ್ತದೆ. ಒಂದೆ ಕುಟುಂಬದಿಂದ ಬಂದ ರಾಮಚಂದ್ರ, ಲಕ್ಷ್ಮಣ ಮತ್ತು ಗೋಪಾಲರ ಗುಣ, ಸ್ವಭಾವ ಮತ್ತು ಅಭಿರುಚಿಗಳು ಹೇಗೆ ಭಿನ್ನವಾಗಿರುತ್ತವೆಯೆಂದು ನಮಗೆ ಅರ್ಥವಾಗುತ್ತವೆ. ವಿದ್ಯೆಯೊಂದ್ದಿಂದರೆ ಏನೂ ಪ್ರಯೋಜನವಿಲ್ಲ ಅದರ ಜೊತೆ ಪ್ರೀತಿ, ಸಹನೆ ಮತ್ತು ಸಾಮಾಜಿಕ ಪ್ರಙ್ನೆ ಅತ್ಯಂತ ಅವಶ್ಯ ಎಂಬುದು ರಾಮ-ಲಕ್ಷ್ಮಣ ಪಾತ್ರಗಳ ಮೂಲಕ ಅನಕೃರವರು ಚಿತ್ರಿಸುವ ರೀತಿ ಮನಕ್ಕೆ ತಟ್ಟುತ್ತದೆ.

ನಮ್ಮ ಸಂಗೀತಗಾರರ ಬೇರೆ ಭಾಷೆಗಳ ವ್ಯಾಮೋಹವನ್ನು ತೊಡೆದುಹಾಕಲು ಸಂಗೀತದ ಮೂಲಕ ಕನ್ನಡ ವಚನಕಾರರ, ದಾಸರ ಪದಗಳನ್ನು ಹೇಗೆ ಜನಪ್ರಿಯಗೊಳಿಸಬಹುದು ಎಂಬುದು ಗಮನಾರ್ಹ. ಇದು ಅನಕೃರವರ ಕನ್ನಡದ ಬಗ್ಗೆ ಇರುವ ಕಾಳಜಿಗೆ ಸಾಕ್ಷಿ.

ಲಕ್ಷ್ಮಣ ಮತ್ತು ಗೋಪಾಲನ ನಡುವೆ ನಡೆಯುವ ಕಲೆಯ ಸಾರ್ಥಕತೆ ಬಗ್ಗೆ ತತ್ವಯುಕ್ತ ಸಂಭಾಷಣೆಗಳು ಅರ್ಥಪೂರ್ಣವಾಗಿವೆ. "ಸಂಗೀತ ಹುಟ್ಟಿಸುವುದು ಕ್ಷುಲ್ಲಕವಾದ ಪ್ರಾಪಂಚಿಕ ಅಶಾಂತಿಯನ್ನಲ್ಲ. ಸುಪ್ತವಾದ ಚೇತನವನ್ನು ಹೊಡೆದೆಬ್ಬಿಸುವ ಗುರುವಲ್ಲವೆ ಅದು? ಮನುಷ್ಯ ತನ್ನ ನಿದ್ರೆಯಿಂದ ಎಚ್ಚೆತ್ತು ಹೊಸ ಲೋಕಗಳನ್ನು ಜಯಿಸಬೇಕೆಂದು ಬಯಸುವುದಕ್ಕಿಂತಲೂ ಹೆಚ್ಚು ಯಾವುದು? ಜೀವನಕ್ಕಿಂದು ಬೇಕಾದದ್ದು ಜಾಗೃತಿ... ಕ್ರಾಂತಿ". ಈ ಮಾತುಗಳು ಇಂದಿಗೂ ಎಷ್ಟು ಪ್ರಸ್ತುತವಾಗಿವೆಯಲ್ಲವೆ?

ಆ ಕಾಲದ ಮೈಸೂರು ಮತ್ತು ಬೆಂಗಳೂರು ನಗರಗಳ ಜನ-ಜೀವನದ ಇಣುಕು ನೋಟ ಇಲ್ಲಿದೆ. ಶ್ರೀನಿವಾಸರಾಯ-ಮೀನಾಕ್ಷಮ್ಮನವರ ಆದರ್ಶ ದಾಂಪತ್ಯ, ಲಕ್ಷ್ಮಣ-ಜಯರ ಅದಮ್ಯ ಪ್ರೀತಿ, ಶಾಮಣ್ಣನವರ ನಿಸ್ವಾರ್ಥ, ತ್ಯಾಗ ಆದರ್ಶಪ್ರಾಯವಾಗಿವೆ. ಹಾಗೆ ಆಗಿನ ಕಾಲದ ಗ್ರಾಮೀಣ ಜನರ ಮುಗ್ಧತೆ ಮತ್ತು ಅವರ ಆತಿಥ್ಯದ ಚಿತ್ರಣ ಬಲುವಿಶಿಷ್ಠವಾಗಿದೆ.

ದೋಷ ನಿಯಂತ್ರಣ ಸಾಂಕೇತತ್ವ ( Error control coding) - Short essay in Kannada

ದೋಷ ನಿಯಂತ್ರಣ ಸಾಂಕೇತತ್ವ
-------------------------
ಮಾನವನ ಆವಿಷ್ಕಾರಗಳಲ್ಲಿ ಮಾಹಿತಿಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಿಶ್ವಸನೀಯವಾಗಿ ರವಾನಿಸುವುದು ಕ್ರಾಂತಿಕಾರಕ ಮತ್ತು ಅತ್ಯಂತ ಮಹತ್ವಪೂರ್ಣವಾದುದು. ಏಕೆಂದರೆ ಇದು ಇಂದು ಬೃಹದಾಅಕಾರವಾಗಿ ಬೆಳೆದು ನಿಂತಿರುವ ಮಾಹಿತಿ ತಂತ್ರಜ್ನಾನದ ತಳಹದಿ. ಮಾಹಿತಿಯನ್ನು ದೋಷಮುಕ್ತವಾಗಿ ರವಾನಿಸುವುದಕ್ಕೆ ಬಹು ಮಟ್ಟಿಗೆ ಕಾರಣವಾದುದು ದೋಷ ನಿಯಂತ್ರಣ ತತ್ವಗಳು. ಆಧುನಿಕ ದೋಷ ನಿಯಂತ್ರಣ ತತ್ವಗಳನ್ನು ಶತಮಾನಗಳಿಗಿಂತಲು ಹಳೆಯದಾದ ಗಣಿತದ ಸಿದ್ಧಾಂತಗಳ ತಳಹದಿಯ ಮೇಲೆ ಬೆಳೆಸಲಾಗಿದೆ. ಈ ತತ್ವಗಳ ಕೆಲಸ ನಲವತ್ತರ ದಶಕದಲ್ಲಿ ಪ್ರಾರಂಭವಾಯಿರಾದರೂ ೫೦ ರಿಂದ ೭೦ರ ದಶಕಗಳಲ್ಲಿ ಮಹತ್ವಪೂರ್ಣ ಬದಲಾವಣೆಗಳಾಯಿತು.

ಇತಿಹಾಸ
--------
೧೯೪೮ರಲ್ಲಿ ಕ್ಲಾಡ್ ಶಾನನ್ ಮಾಹಿತಿ ಸಾಮರ್ಥ್ಯ ಸಿದ್ಧಾಂತವನ್ನು ಮಂಡಿಸಿದ.
"ಮಾಹಿತಿಯ ಪ್ರಮಾಣ ಅದರ ವಾಹಿನಿಯ ಸಾಮರ್ಥ್ಯಕ್ಕಿಂತ ಕಡಿಮೆ ಇದ್ದಲ್ಲಿ, ಉಳಿದ (ಮಾಹಿತಿಯ) ಸಾಮರ್ಥ್ಯವನ್ನು ಉಪಯೋಗಿಸಿ ದೋಷ ನಿಯಂತ್ರಣ ಸಂಕೇತಗಳನ್ನು ಕಳುಹಿಸುವ ಮೂಲಕ ಸಂದೇಶದ ಸಮಗ್ರತೆಯನ್ನು ಉತ್ತಮಪಡಿಸಬಹುದು",

ಆದರೆ ಶಾನನ್, ಸಂಕೇತಗಳನ್ನು ಹೇಗೆ ಕಳುಹಿಸುವುದು ಮತ್ತು ಅದರ ಉಪಯೋಗವನ್ನು ಹೇಗೆ ಪಡೆಯುವುದು ಎಂಬುದರ ಬಗ್ಗೆ ಎನೂ ಹೇಳಲಿಲ್ಲ. ೫೦ ರ ದಶಕದ ಪೂರ್ವಾರ್ಧದಲ್ಲಿ ಮೊದಲ ಬಾರಿಗೆ ಒಂದು ಬಿಟ್( ಮಾಹಿತಿಯ ಮೂಲಮಾನ) ದೋಷ ಸರಿಪಡಿಸಬಹುದಾದ ಹ್ಯಾಮಿಂಗ್ ಸಾಂಕೇತಗಳನ್ನು ಕಂಡು ಹಿಡಿಯಲಾಯಿತು. ನಂತರ ಉತ್ತರಾರ್ಧದಲ್ಲಿ ರೀಡ್-ಸಾಲೋಮನ್ ಸಾಂಕೇತಗಳು ಜನ್ಮ ತಾಳಿದವು. ಈ ಸಂಕೇತಗಳು ಪ್ರತಿ ಬಿಟ್ ಗಳ ಮೇಲೆ ಅವಲಂಬಿಸದೆ ಇಂತಹ ಹಲವು ಬಿಟ್ ಗಳಿಂದಾದ ಚಿಹ್ನೆಗಳ ಮೇಲೆ ಅವಲಂಬಿತವಾಗಿರುತ್ತವೆ. ಹೀಗೆ ದೋಷ ನಿಯಂತ್ರಣ ತತ್ವಗಳು ಎರಡು ಕವಲಾದವು. ಒಂದು ಬಿಟ್ ಆಧಾರಿತ ಮತ್ತೊಂದು ಚಿಹ್ನೆ ಆಧಾರಿತ. ಮುಂದಿನ ದಿನಗಳಲ್ಲಿ ಈ ಸಾಂಕೇತಗಳನ್ನು ಕಾರ್ಯ ರೂಪಕ್ಕೆ ತರುವ ವಿಧಾನಗಳ ಮೇಲೆ ಸಂಶೋಧನೆಗಳು ನಡೆದವು. ಮತ್ತೊಂದು ಕಡೆ ಇದಕ್ಕೆ ಸಮನಾಂತರವಾಗಿ ೫೦ ರ ದಶಕದಲ್ಲಿ ಕನ್ವೊಲ್ಯುಶನ್ ಸಾಂಕೇತಗಳು ಮುಖ್ಯಧಾರೆಗೆ ಬಂದವು.ಇದರ ವಿಶೇಷತೆಯೇನೆಂದರೆ ಸಾಂಕೇತೀಕರಣ/ನಿಸ್ಸಾಂಕೇತೀಕರಣಗೊಳಿಸುವ ಮೊದಲು ಮಾಹಿತಿಯನ್ನು ನಿರ್ದಿಷ್ಟ ಪ್ರಮಾಣಕ್ಕೆ ರೂಪಂತಿರಿಸುವ ಅವಶ್ಯಕತೆಯಿರಲಿಲ್ಲ. ೧೯೬೨ರಲ್ಲಿ ವಿಟರ್ಬಿ ರೂಪಿಸಿದ 'ಗರಿಷ್ಥ ಸಂಭಾವ್ಯತೆ" ಎನ್ನುವ ವಿಧಾನ ಪ್ರಖ್ಯಾತಿಯನ್ನು ಪಡೆಯಿತು. ೮೦ ರ ದಶಕದಲ್ಲಿ ಮಾಹಿತಿ ಮಾರ್ಪಡಿಸುವ ಕ್ರಿಯೆಯಲ್ಲಿ ಕನ್ವೊಲ್ಯೂಶನ್ ಸಾಂಕೇತಗಳು ಉಪಯೋಗಕ್ಕೆ ಬಂದವು. ನಂತರ ಮಾಹಿತಿ ಮಾರ್ಪಡಿಸುವ ಕ್ರಿಯೆ ಮತ್ತು ದೋಷ ನಿಯಂತ್ರಣ ಸಾಂಕೇತೀಕರಣ ಕ್ರಿಯೆಗಳು ಸಂಯೋಜನೆಗೊಂಡು ಅವುಗಳಿಗಿದ್ದ ಅಂತರವು ಕನಿಷ್ಥಗೊಂಡಿತು. ಅಂದರೆ ಒಂದೆ ಬಾಣದಲ್ಲಿ ಎರಡು ಹಕ್ಕಿಗಳನ್ನು ಕೊಲ್ಲುವ ಹಾಗೆ.

ಉಪಸಂಹಾರ
--------
ಈ ದಿನಗಳಲ್ಲಿ 'ಟರ್ಬೊ' ಸಾಂಕೇತಗಳ ಮೇಲೆ ತಂತ್ರಜ್ನರು ಗಮನವನ್ನು ಕೇಂದ್ರೀಕರಿಸಿದ್ದಾರೆ ಏಕೆಂದರೆ ಟರ್ಬೊ ಸಂಕೇತಗಳು, ದೋಷ ನಿಯಂತ್ರಣ ತತ್ವಗಳಿಂದ ನಾವು ಏನನ್ನು ಸಾಧಿಸಬಹುದು ಅದರ ಸೈದ್ಧಾಂತಿಕ ಮಿತಿಗೆ ಕೊಂಡೊಯ್ಯುತ್ತವೆ ಎಂಬುದು ಅವರ ಅಂಬೋಣ.