ಶನಿವಾರ, ಮಾರ್ಚ್ 24, 2018

ದಿಟವಾದ ಅರಿವಾಳು

ನಿಜಗುಣ ಶಿವಯೋಗಿಯ 'ಅನುಬವಸಾರವು' ಎಂಬ ನೆಗಳ್ತೆಯಿಂದ:-
"ಹೊಲಗೇರಿಯೊಳು ಕಾಶಿಯೊಳು(ವಾರಣಾಸಿಯೊಳು) ಮರೆವೆಯ ಅರಿವಿನೊಳು, ತಿಳಿ ದೇಹವಳಿಯಲು ಉಚ್ಚ ನೀಚತೆಗಳ ಅಂಡಲೆ ಇಲ್ಲವು ಆತ್ಮವು ಇದನು ಇಲ್ಲಿ"
ದಿಟವಾದ ಅರಿವಾಳಿಗೆ(ಆತ್ಮನಿಗೆ), ತಾನು ಹೊಲಗೇರಿಯೊಳಿದ್ದರೂ ಕಾಶಿಯೊಳಿದ್ದರೂ ಮರೆವೆಯ ಅರಿವೆನೊಳಿದ್ದರೂ, ದೇಹವು ಅಳಿಯಲೂ, ಯಾವುದೇ ತೆರನಾದ 'ಮೇಲು-ಕೀಳು' ಎಂಬ ಪೀಡೆ/ಹಿಂಸೆ(ಇದಕ್ಕೆ #ಕನ್ನಡದ್ದೇ ಪದ ಅಂಡಲೆ) ಇರುವುದಿಲ್ಲ/ತಗುಲುವುದಿಲ್ಲ.
ಯಾಕಂಡರೆ ಅರಿವಾಳಿಗೆ ಹೊಲಗೇರಿ, ಕಾಶಿ, ಅರಿವು, ಮರೆವು, ದೇಹದ ಅಳಿವು - ಇವುಗಳ ನಡುವೆ ಯಾವುದೇ ಬೇರೆತನವಿಲ್ಲ. ದಿಟವಾದ ಅರಿವಾಳು ಎಲ್ಲವನ್ನು ಸಮಾನವಾಗಿ ಕಾಣುತ್ತಾನೆ.
#ಕನ್ನಡದ್ದೇ ಪದ ಅಂಡಲೆ

ಕಾಮೆಂಟ್‌ಗಳಿಲ್ಲ: