ಶನಿವಾರ, ಮಾರ್ಚ್ 24, 2018

ಕೂಡಣದಲ್ಲಿ ಮಾರ್ಪಾಟು

ಶರಣರು ಬರುವ ಮುಂಚೆ ಈ ಪದಗಳಿಗೆ ಈ ಹುರುಳುಗಳಿದ್ದವು:-
೧. ಕಯ್ಲಾಸ - ಇದು ದೂರದಲ್ಲಿ ಎಲ್ಲಿಯೋ ಇರುವ ಶಿವನ ಮತ್ತು ಶಿವಗಣಗಳ ನೆಲೆ/ಬೆಟ್ಟ.
೨. ಮಾಯೆ - ಹೊನ್ನು, ಹೆಣ್ಣು ಮತ್ತು ಮಣ್ಣು - ಇವೆಲ್ಲ ಮಾಯೆಗಳು.

ಶರಣರು ಬಂದು ಈ ಪದಗಳಿಗಿದ್ದ ಹುರುಳುಗಳನ್ನೇ ಹೀಗೆ ಬದಲಾಯಿಸದರು:-
೧. ಕಯ್ಲಾಸ - ಕಯ್ಲಾಸ ದೂರದಲ್ಲಿ ಎಲ್ಲಿಯೋ ಇರುವ ಬೆಟ್ಟವಲ್ಲ. ನೀನು ಮಾಡುವ ಕಾಯಕವೇ ಕಯ್ಲಾಸ. ಕಯ್ಲಾಸ ಎಂಬುದು ನಿನ್ನ ದುಡಿಮೆಯಲ್ಲಿದೆ ಎಂದು ತೋರಿಸಿಕೊಟ್ಟರು.
೨. ಮಾಯೆ - ಹೊನ್ನು, ಹೆಣ್ಣು ಮತ್ತು ಮಣ್ಣುಗಳು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ. ಅಂದರೆ ಹೊರಗಿನವುಗಳಲ್ಲಿ ಮಾಯೆಯಿಲ್ಲ. ಬದಲಾಗಿ ಮಾಯೆಯೆಂಬುದು ನಿನ್ನ ಒಳಗೇ ಇದೆ.
ಹೀಗೆ ಈ ಪದಗಳ ಹುರುಳಿಸುವಿಕೆಯನ್ನೇ/ಅರ್ತಯ್ಸುವಿಕೆಯನ್ನೇ ಶರಣರು ಬದಲಿಸಿದರು.
ತಿರುಳು: ಕೂಡಣದ ಮಾರ್ಪಾಟುಗಳು ಬರೀ ಮೇಲ್ಮಟ್ಟದ ಮಾರ್ಪಾಟುಗಳಾಗಿರುವುದಿಲ್ಲ. ಬದಲಾಗಿ ಹೀಗೆ ಬೇರುಮಟ್ಟದಲ್ಲಿ, ಅಂದರೆ ಪದಗಳ ಹುರುಳೇ ಬದಲಾಗಿರುತ್ತವೆ. ಹೀಗೆ ಪದಗಳ ಹುರುಳುಗಳನ್ನೇ ಬೇರು ಮಟ್ಟದಲ್ಲಿ ಅಲುಗಾಡಿಸದೇ ಕೂಡಣದಲ್ಲಿ ಮಾರ್ಪಾಟುಗಳನ್ನು ತರಲಾಗುವುದಿಲ್ಲ.

ಕಾಮೆಂಟ್‌ಗಳಿಲ್ಲ: