ಭಾನುವಾರ, ಆಗಸ್ಟ್ 05, 2012

ಕಲಿಕೆಯ ಕೇಳ್ವಿಗಳು

ಇತ್ತೀಚಿನ ದಿನಗಳಲ್ಲಿ ’ಕಲಿಕೆ’ಯ ಇಲ್ಲವೆ 'ಕಲಿಕೆಯೇರ್ಪಾಡು' ಎಂಬ ವಿಶಯ ಬಂದಾಗ ಹಲವು ಮಂದಿ ಕೇಳುತ್ತಿರುವ ಕೇಳ್ವಿಗಳಲ್ಲಿ ಮೊದಲ ಎರಡು

೧.ಕಲಿಮನೆಗಳಲ್ಲಿ ಏನನ್ನು ಕಲಿಸಬೇಕು ?
೨.ಕಲಿಮನೆಗಳಲ್ಲಿ ಯಾವ ಒಯ್ಯುಗೆಯಲ್ಲಿ(ಮಾದ್ಯಮ) ಕಲಿಸಬೇಕು?

ಕೆಲವರು ಮೊದಲ ಕೇಳ್ವಿ ತುಂಬ ಅರಿದಾದುದು(ಮುಕ್ಯವಾದುದು) ಎಂದು ನಂಬಿದ್ದಾರೆ. ಅಂತಹವರಿಗೆ ಎರಡನೇ ಕೇಳ್ವಿಯೂ ಇದೆ ಆದರೆ ಅದರ ಬಗ್ಗೆ ಅಶ್ಟು ಆಸಕ್ತಿ-ಹುರುಪಾಗಲಿ ಅವರಿಗೆ ಇದ್ದಂತೆ ಕಾಣುವುದಿಲ್ಲ. ಮೊದಲ ಕೇಳ್ವಿಯ ಬಗ್ಗೆ ತುಂಬ ತಲೆ ಕೆಡಿಸಿಕೊಂಡಂತೆ ಇದೆ. ಆದರೆ ದಿಟವಾಗಲೂ ಅವೆರಡು ಬೇರೆ ಬೇರೆಯಾಗಿ ನೋಡಬೇಕಾದ ಕೇಳ್ವಿಗಳಲ್ಲ. ಅವೆರಡೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಯಾಕಂದರೆ ನಾವು ಏನನ್ನು ಮೊದಮೊದಲು ಕಲಿಸಬಹುದು ಎಂಬುದು ಯಾವ ನುಡಿಯಲ್ಲಿ(ಮಾದ್ಯಮದಲ್ಲಿ) ಕಲಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ನೆಲದ ಅರಿಗರೆಲ್ಲ ’ತಾಯ್ನುಡಿಯಲ್ಲೇ ಕಲಿಕೆ’ ಆದರೆ ಒಳ್ಳೆಯದು; ಅದರಿಂದ ಮಗುವಿಗೆ ’ತಾನಗಿಯೇ ಬಂದ ಸಲೆ’(natural advantage)ಯನ್ನು ಚೆನ್ನಾಗಿ ಬಳಸಿಕೊಂಡು ಬದುಕಿನಲ್ಲಿ ಮುಂದೆ ಬರಬಹುದು ಎಂದು ಹೇಳಿದ್ದಾರೆ.

ಕಲಿಯುವು ಮಗುವು ಕನ್ನಡವನ್ನು ಓದಲು ಬರೆಯಲು ಕಲಿತ ಮೇಲೆ ಅದರಿಂದ ದೊರೆತ ಅಳವನ್ನು ಬಳಸಿಕೊಂಡು ತನ್ನ ಸುತ್ತಲಿನ ಪರಿಸರವನ್ನು ಗಮನಿಸಲು ಅನುವಾಗುವಂತೆ ಕಲಿಕೆಯು ಇರಬೇಕಾಗುತ್ತದೆ. ಅಂದರೆ ಗಮನಿಕೆಯಿಂದ ದೊರೆತ ಅರಿವನ್ನು ಒರೆಗೆ ಹಚ್ಚುವ ಹಾಗೆ ಕಲಿಕೆಯಿದ್ದರೆ ಕಲಿತ್ತದ್ದು ತಲೆಗೆ ಹತ್ತುತ್ತದೆ. ಇದರಿಂದ ಅರಿವಿನ ಆಳವನ್ನು ಹಿಗ್ಗಿಸಿಕೊಳ್ಳಲು ಬರುತ್ತದೆ.
ಎತ್ತುಗೆಗೆ: ಮಯ್ಸೂರಿನಲ್ಲಿ ಓದುತ್ತಿರುವ ಮಗುವು ಮೊದಲ ೭ ತರಗತಿಗಳಲ್ಲಿ/ಏಡುಗಳಲ್ಲಿ ಮಯ್ಸೂರಿನ ಕೂಡಣದ, ಸೊಮ್ಮಿನ ಮತ್ತು ಹಿನ್ನಡವಳಿಯ ಪರಿಚಯವಾಗುವಂತೆ ಓದುಗೆಗಳು ಇರಬೇಕು. ಇದರಿಂದ ಓದಿದುದನ್ನು ಪಳಗಿಕೆಯ ಗಾಣೆ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಬಹುದು.

ಹೀಗೆ ಮಕ್ಕಳಿಗೆ ಎಲ್ಲವನ್ನು ಕನ್ನಡದಲ್ಲಿ ಕಲಿಯುವ ಏರ್ಪಾಟಾದಾಗ, ಇದಕ್ಕೆ ಹೊಂದುವ ಕಲಿಸುವ ಹೊಲುಬುಗಳನ್ನು ಕಂಡುಕೊಂಡಾಗ ’ಓದುಗೆ’ಗಳು ಕೂಡ ಅದಕ್ಕೆ ತಕ್ಕಂತೆ ತಾನಾಗಿಯೇ ಹೊಂದಿಕೊಳ್ಳುತ್ತವೆ. ಈಗಿನ ಓದುಗೆಗಳಲ್ಲಿರುವ ಕೆಲಸಕ್ಕೆ ಬಾರದಿರುವ ಪುರುಳುಗಳು(ವಿಶಯಗಳು) ಅಂದರೆ ಕನ್ನಡ ಸಮಾಜಕ್ಕೆ ತೀರ ದೂರವಿರುವ/ನಂಟಿರದ ಪುರುಳುಗಳು ಓದುಗೆಗಳಲ್ಲಿ ಉಳಿಯುವುದಿಲ್ಲ ಯಾಕಂದರೆ ದಿಟವಾದ ಕಲಿಕೆಗೆ ಇವುಗಳಿಂದ ಯಾವ ಬಳಕೆಯಿಲ್ಲ. ಹಾಗಾಗಿ ಕಲಿಕೆಯ ಹೊಲದಲ್ಲಿ ಅರಿದಾದ ಮಾರ್ಪಾಟುಗಳು ಆಗಿ ಕಲಿಕೆ ಎಂಬುದು ಎತ್ತರದ ಹೊರೆಯಾಗದೆ ಇನ್ನು ಹತ್ತಿರವಾಗುತ್ತದೆ. ಈ ಹತ್ತಿರವಾಗಿಸುವಿಕೆಯೇ ಕಲಿಕೆಯಲ್ಲಿ ಇಂದು ಆಗಬೇಕಾಗಿರುವುದು. ಈ ಹತ್ತಿರವಾಗಿಸುವಿಕೆಯಿಂದಲೇ ಮಕ್ಕಳು ತಮ್ಮ ಸುತ್ತಲಿನ ಕೂಡಣಕ್ಕೆ ಒಗ್ಗಿಕೊಳ್ಳುವುದು. ಕೂಡಣಕ್ಕೆ ಒಗ್ಗಿಕೊಂಡ ಮಕ್ಕಳು ಮುಂದೆ ಆ ಕೂಡಣಕ್ಕೆ ಆಸ್ತಿಯಾಗಬಲ್ಲರು ಮತ್ತು ಆ ಕೂಡಣಕ್ಕೆ ಕೊಡುಗೆಗಳನ್ನು ನೀಡಬಲ್ಲರು.

ಕಾಮೆಂಟ್‌ಗಳಿಲ್ಲ: