ಒನ್(ದು)+ಪತ್ತು = ಒಂಬತ್ತು (ಅಂದರೆ ೧೦ಕ್ಕೆ ೧ ಕಡಿಮೆ. ಕೆಲವರು ತಪ್ಪಾಗಿ ’ಒಂಭತ್ತು’ ಎಂದು ಉಲಿಯುತ್ತಾರೆ. !!)
’ಒನ್’ ಪದದಲ್ಲಿರುವ ’ನ್’ ಮೂಗಿಲಿಯಾಗಿರುವುದರಿಂದ ’ಪತ್ತು’ ಪದದಲ್ಲಿರುವ ’ಪ’ -> ’ಬ’ ಆಗುತ್ತದೆ. ಇದು ಕನ್ನಡದ ಕಟ್ಟಳೆ.
ಪತ್ತು +ಒಂದು(10+1) = ಪತ್+ಒಂದು=> ಪನ್+ಒಂದು= ಪನ್ನೊಂದು (ಪತ್ ಪದದಲ್ಲಿ ’ತ’ಕಾರಕ್ಕೆ ’ನ’ಕಾರ ಆದೇಶವಾಗಿ ಬಂದು ’ಪನ್’ ಅಂತಾಗಿದೆ).
ಒಂದು ವೇಳೆ ಅಲ್ಲಿ ಮೂಗುಲಿ ಇಲ್ಲದಿದ್ದರೆ ಅದು ’ಪ್’->’ವ್’ ಆಗುತ್ತದೆ. ಎತ್ತುಗೆಗೆ: ಬೆರೆಸಿದ+ಪೋಲ್= ಬೆರೆಸಿದವೋಲ್
ಗುರುವಾರ, ಫೆಬ್ರವರಿ 10, 2011
ಕನ್ನಡದ ಕಟ್ಟಳೆಯ ಪ್ರಕಾರ ಎಲ್ಲೆಲ್ಲಿ ’ೞ’ ಬರಬೇಕು?
ಉತ್ತರ: ಅದರ ಮುಂದೆ ’ಲ್’ಕಾರ ಇದ್ದರೆ ಅಲ್ಲೆಲ್ಲ ’ೞ’ಕಾರ ಬರುತ್ತೆ.
ಎತ್ತುಗೆಗಾಗಿ:-
ಅೞಲ್ =cry
ಕೞಲ್, ಕೞಲೆ( anklet)
ಕೞಲ್ = buttermilk
ಕೞಲ್ = two or three of the upper joints of a sugar-cane that are insipid.
ಕೊೞಲ್ = flute
ತೊೞಲ್ = go around, suffering
ನೆೞಲ್ = ನೆರಳು,shade
ಪೊೞಲ್ = ಹೊಳಲು, town,city
ಬೞಲ್ = ಸುಸ್ತು, tired
ಬಿೞಿಲ್ = ಒಂದು ಗಿಡದ ಹೆಸರು
ಬೀೞಲ್ = ಊಡೆ = root that grows downwards from the branches of a banyan and other trees, pendent root; ūḍe pendent root of a banyan tree
ಉೞಲ್(ಉೞುವಿಕೆ)
ಏೞಲ್(ಏಳಿಗೆ)
ಮೞಲ್(ಮೞ್ಗಣ್) the eyes to become dim
ಆದರೆ ಇದಕ್ಕೆ ಹೊರತಾದ ಪದಗಳು ಇವೆ:
ಅಳಿಲ್
ಮಳಲ್
References: ಎಮನೊ ಮತ್ತು ಬರೊಅವರ ದ್ರಾವಿಡ ನುಡಿಗಂಟು (http://dsal.uchicago.edu/cgi-bin/philologic/search3advanced?dbname=burrow&query=bir%CC%A4al&matchtype=exact&display=utf8)
ಎತ್ತುಗೆಗಾಗಿ:-
ಅೞಲ್ =cry
ಕೞಲ್, ಕೞಲೆ( anklet)
ಕೞಲ್ = buttermilk
ಕೞಲ್ = two or three of the upper joints of a sugar-cane that are insipid.
ಕೊೞಲ್ = flute
ತೊೞಲ್ = go around, suffering
ನೆೞಲ್ = ನೆರಳು,shade
ಪೊೞಲ್ = ಹೊಳಲು, town,city
ಬೞಲ್ = ಸುಸ್ತು, tired
ಬಿೞಿಲ್ = ಒಂದು ಗಿಡದ ಹೆಸರು
ಬೀೞಲ್ = ಊಡೆ = root that grows downwards from the branches of a banyan and other trees, pendent root; ūḍe pendent root of a banyan tree
ಉೞಲ್(ಉೞುವಿಕೆ)
ಏೞಲ್(ಏಳಿಗೆ)
ಮೞಲ್(ಮೞ್ಗಣ್) the eyes to become dim
ಆದರೆ ಇದಕ್ಕೆ ಹೊರತಾದ ಪದಗಳು ಇವೆ:
ಅಳಿಲ್
ಮಳಲ್
References: ಎಮನೊ ಮತ್ತು ಬರೊಅವರ ದ್ರಾವಿಡ ನುಡಿಗಂಟು (http://dsal.uchicago.edu/cgi-bin/philologic/search3advanced?dbname=burrow&query=bir%CC%A4al&matchtype=exact&display=utf8)
ಬುಧವಾರ, ಫೆಬ್ರವರಿ 09, 2011
ಮೊಗೇರ/ಮೊಗವೀರ ಅಂದರೆ ಏನು?
ಮೊಗೆ = ನೀರನ್ನು ಒಂದು ಹಿಡಿಯಲ್ಲಿ/ಚೆಂಬಿನಲ್ಲಿ ಕೊಳದಿಂದಲೊ, ಹೊಳೆಯಿಂದಲೊ, ಕಡಲಿನಿಂದಲೊ ತೆಗೆದುಕೊಳ್ಳುವುದು.
ಎಮನೊ ಮತ್ತು ಬರೊ ನುಡಿಗಂಟಿನಿಂದ:-
Ka. moge to take water with a vessel out of a pond, tank or stream for one's use, ladle out (any fluid with a small vessel out of a larger one), scoop, bale; n. state of (water) being sufficient to be taken (out of a pond, etc.);
ಹೀಗೆ ಮೊಗೆದು ಮೀನನ್ನು ಹಿಡಿಯಬಹುದು. ಹಾಗಾಗಿ ಮೀನುಗಾರರಿಗೆ ಮೊಗೆಯುವವರು=>ಮೊಗೆಯರು => ಮೊಗೇರರು ಎಂಬ ಹೆಸರು ಬಂದಿದೆ. ಮೊಗೇರ/ಮೊಗವೀರ ಎಂಬ ಜಾತಿಯು ಕರ್ನಾಟಕದ ಕರಾವಳಿಯಲ್ಲಿದೆ.
ಎಮನೊ ಮತ್ತು ಬರೊ ನುಡಿಗಂಟಿನಿಂದ:-
Ka. moge to take water with a vessel out of a pond, tank or stream for one's use, ladle out (any fluid with a small vessel out of a larger one), scoop, bale; n. state of (water) being sufficient to be taken (out of a pond, etc.);
ಹೀಗೆ ಮೊಗೆದು ಮೀನನ್ನು ಹಿಡಿಯಬಹುದು. ಹಾಗಾಗಿ ಮೀನುಗಾರರಿಗೆ ಮೊಗೆಯುವವರು=>ಮೊಗೆಯರು => ಮೊಗೇರರು ಎಂಬ ಹೆಸರು ಬಂದಿದೆ. ಮೊಗೇರ/ಮೊಗವೀರ ಎಂಬ ಜಾತಿಯು ಕರ್ನಾಟಕದ ಕರಾವಳಿಯಲ್ಲಿದೆ.
ಮುಂಬಯ್ ಅಂದರೆ ಏನು?
ಮುನ್+ ಪಾಯ್ = ಮುಂಬಾಯ್ = ಮುಂಬಯ್
ಪಾಯ್= ಹಾಯ್ = ತೇಲ್ (sail), ಬಳಕೆ : ಹಾಯಿದೋಣಿ
ತೇಲುವುದಕ್ಕೆ ಮುಂಚೆ ಸಿಗುವ ತಾವು(ಜಾಗ) -ಮುಂಬಯ್
ಪಾಯ್= ಹಾಯ್ = ತೇಲ್ (sail), ಬಳಕೆ : ಹಾಯಿದೋಣಿ
ತೇಲುವುದಕ್ಕೆ ಮುಂಚೆ ಸಿಗುವ ತಾವು(ಜಾಗ) -ಮುಂಬಯ್
ಬರ್ತನ ಪದಗೊಳ್
ಬರ್ತನ ಪದಗೊಳ್!
ಕಾಪಿ ಕನ್ನಡ ಕಯ್ಯಿಡದೋಳ್
ಅಂದ್ರೆ ಬರ್ತಂಗ್ ಪ್ರಾಣ
ಲೋಟಾನ್ ಎತ್ತ್ ಕುಡ್ಬುಟ್ಟಂದ್ರೆ
ತಕ್ಕೊ! ಪದಗೊಳ್ ಬಾಣ :)
---
ರತ್ನನ ಪದಗಳ್ ಒಂದು ಪದ್ಯದ ಅಣುಕುಪದ್ಯEdit
ಕಾಪಿ ಕನ್ನಡ ಕಯ್ಯಿಡದೋಳ್
ಅಂದ್ರೆ ಬರ್ತಂಗ್ ಪ್ರಾಣ
ಲೋಟಾನ್ ಎತ್ತ್ ಕುಡ್ಬುಟ್ಟಂದ್ರೆ
ತಕ್ಕೊ! ಪದಗೊಳ್ ಬಾಣ :)
---
ರತ್ನನ ಪದಗಳ್ ಒಂದು ಪದ್ಯದ ಅಣುಕುಪದ್ಯEdit
ಹೊಳಲು ಅಂತ ಯಾಕೆ ಬಂತು?
ಪೊಳಲ್ = ಹೊಳಲ್ = ಪುರ( city)= ನಗರ, ಇದನ್ನ ಈ ರೀತಿ ಪೊೞೆ+ಅಲ್=>ಪೊೞೆಯಲ್=>ಹೊಳೆಯಲ್(ಹೊಸಗನ್ನಡ)=> ಹೊಳಲ್ ಅಂದ್ರೆ ಹೊಳೆ ಹತ್ರ, ಹೊಳೆಯಲ್ಲಿ, ಮೊದಲೆಲ್ಲ ಹೊಳೆಯ ದಡದಲ್ಲಿ/ಹತ್ತಿರ ನಗರಗಳು ಹುಟ್ಟಿಕೊಳ್ಳುತ್ತಿದ್ದವು. ಯಾಕಂದರೆ ಹೊಳೆಯ ನೀರಿಂದನೇ ಬದುಕು/ದುಡಿಮೆ/ನಡಾವಳಿ ನಡೀತಾ ಇತ್ತು. ಎತ್ತುಗೆಗೆ ನೈಲ್,ಗಂಗೆ,ಕಾವೇರಿ(ಶ್ರೀರಂಗಪಟ್ಟಣ)
ಇನ್ನೊಂದು ವಿಶೇಶ ಅಂದ್ರೆ ಚಾಲುಕ್ಯರು ಬಾದಾಮಿಯಲ್ಲಿ ಕಲ್ಗುಡಿ, ಕೋಟೆಗಳನ್ನು ಕಟ್ಟಿಸಿದರೂ ಪಟ್ಟ ಮಾಡ್ಕೊಳ್ಳಕೆ ಕಿಸುವೊಳಲಿಗೆ(ಪಟ್ಟದ ಕಲ್ಲಿಗೆ) ಬರಬೇಕಾಗಿತ್ತು ಯಾಕಂದ್ರೆ ಅಲ್ಲೇ ಮಲಪ್ರಬೆ(?)ಹರಿಯೋದು. ಹಾಗಾಗಿ ಬಾದಾಮಿ ಎಂದು ಹೊಳಲಾಗಲಿಲ್ಲ. ಕಿಸುವೊಳಲು ಹೊಳಲಾಗಿಯೇ ಉಳಿಯಿತು.
ದ್ರಾವಿಡ ನುಡಿಗಂಟಿನಿಂದ
Ka. por̤e river
Ka. por̤al town, city.
ಇನ್ನೊಂದು ವಿಶೇಶ ಅಂದ್ರೆ ಚಾಲುಕ್ಯರು ಬಾದಾಮಿಯಲ್ಲಿ ಕಲ್ಗುಡಿ, ಕೋಟೆಗಳನ್ನು ಕಟ್ಟಿಸಿದರೂ ಪಟ್ಟ ಮಾಡ್ಕೊಳ್ಳಕೆ ಕಿಸುವೊಳಲಿಗೆ(ಪಟ್ಟದ ಕಲ್ಲಿಗೆ) ಬರಬೇಕಾಗಿತ್ತು ಯಾಕಂದ್ರೆ ಅಲ್ಲೇ ಮಲಪ್ರಬೆ(?)ಹರಿಯೋದು. ಹಾಗಾಗಿ ಬಾದಾಮಿ ಎಂದು ಹೊಳಲಾಗಲಿಲ್ಲ. ಕಿಸುವೊಳಲು ಹೊಳಲಾಗಿಯೇ ಉಳಿಯಿತು.
ದ್ರಾವಿಡ ನುಡಿಗಂಟಿನಿಂದ
Ka. por̤e river
Ka. por̤al town, city.
ಮಂಗಳವಾರ, ಜನವರಿ 04, 2011
’ಕೊಂಕಣ’ ಕನ್ನಡದ ಪದವೇ?
ಇತ್ತೀಚೆಗೆ ಗೋವಾದ ಮಂತ್ರಿಯೊಬ್ಬರು ಕಾರವಾರದ ಕೆಲವು ಬಾಗಗಳನ್ನ ಗೋವಾಗೆ ಸೇರಿಸ್ಬೇಕು ಅಂತ ಹೇಳಿಕೆ ಕೊಟ್ಟಿದ್ರು.
ಆದರೆ ’ಗೋವೆ’ಯೇ ಕನ್ನಡದ ಹೆಸರು ಆಗಿರುವಾಗ ಅದನ್ನ ಕರ್ನಾಟಕಕ್ಕೆ ಸೇರಿಸ್ಬೇಕು ಅಂತ ನಾವು ಹೇಳ್ಬೋದು...
ಹೇಗೆ?
ಕನ್ನಡದಲ್ಲಿ(ಮತ್ತು ಇತರ ದ್ರಾವಿಡ ನುಡಿಗಳಲ್ಲಿ) ಕೊಂಕ, ಕೊಂಕು, ಕೊಕ್ಕೆ, ಕೊಂಡ(ಕುಂದ) ಎಂಬ ಪದಗಳಿವೆ. ಅದರಲ್ಲಿ ಕೊಂಕ ಅನ್ನುವ ಪದಕ್ಕೆ ವಕ್ರ, ಡೊಂಕ ಅಂತಲೂ ಕೊಂಡ/ಕುಂದ ಅನ್ನುವ ಪದಕ್ಕೆ ಬೆಟ್ಟ ಅನ್ನುವ ಅರ್ಥಗಳುವೆ.
Ka. kokki, kokke crookedness, perverseness, a crook, bend, hook; kogga, kokkari, koṅga, koṅgari crookedness; koṅki a hook, fish-hook, angle; koṅku to be bent, get crooked, curved, distorted, deformed, or curled, become perverse, untrue, etc.; n. (also koṅgu) state of being bent, crooked, etc.; koṅkisu to make crooked
Ka. koṇḍa,kunda hill, mountain
ನಮ್ಮ ತೆಂಕುಭಾರತದ ಪಡುವಲ ತೀರದುದ್ದಕ್ಕೂ ಇರುವ ಅಂಕು ಡೊಂಕಾದ ಬೆಟ್ಟಗಳ ಉದ್ದ ಸಾಲಿನಲ್ಲಿರುವ ನಾಡೇ ’ಕೊಂಕ್’ಣ. ತೆಂಕಲ್, ಬಡಗಲ್, ಪಡುವಲ್, ಮೂಡಲ್ ಇವುಗಳು ತೆಂಕಣ, ಬಡಗಣ, ಪಡುವಣ, ಮೂಡಣ ಆದ ಹಾಗೆ ಕೊಂಕಲ್ -> ಕೊಂಕಣ ಆಗಿರಬಹುದು.
ಕೊಂಕಣ (ಸಂಸ್ಕೃತೀಕರಿಸಿದರೆ)-> ಕೋಂಕಣ (ಕೊರಲಿಸದ -> ಕೊರಲಿಸಿದ)-> ಗೋಂಕಣ (ಪ್ರಾಕ್ರುತದಲ್ಲಾಗುವ ಮೊಟಕಿಸುವಿಕೆ)--> ಗೋಂ -> ಗೋಮ್ -> ಗೋಮೆ(ಮ->ವ) -> ಗೋವೆ -> ಗೋವಾ
ಇನ್ನು ಕರ್ನಾಟಕದ ಉತ್ತರಕನ್ನಡದಲ್ಲಿರುವ ಗೋಕರ್ಣದಲ್ಲಿರುವ ’ರ’ಕಾರ ತೆಗೆದುಹಾಕಿದರೆ ಗೋಕಣ - ಇದಕ್ಕು ಮೇಲೆ ಹೇಳಿರುವ ’ಪದವುಟ್ಟು’ ಒಪ್ಪುತ್ತದೆ.
[ ಸೇಡಿಯಾಪು ಕ್ರುಶ್ಣಬಟ್ಟರವರ ’ಶಬ್ದಾರ್ಥಕೋಶ’ ದಿಂದ ಇಲ್ಲಿ ಕೆಲವು ಅಂಶಗಳನ್ನು ಹಾಕಿದ್ದೇನೆ.]
ಆದರೆ ’ಗೋವೆ’ಯೇ ಕನ್ನಡದ ಹೆಸರು ಆಗಿರುವಾಗ ಅದನ್ನ ಕರ್ನಾಟಕಕ್ಕೆ ಸೇರಿಸ್ಬೇಕು ಅಂತ ನಾವು ಹೇಳ್ಬೋದು...
ಹೇಗೆ?
ಕನ್ನಡದಲ್ಲಿ(ಮತ್ತು ಇತರ ದ್ರಾವಿಡ ನುಡಿಗಳಲ್ಲಿ) ಕೊಂಕ, ಕೊಂಕು, ಕೊಕ್ಕೆ, ಕೊಂಡ(ಕುಂದ) ಎಂಬ ಪದಗಳಿವೆ. ಅದರಲ್ಲಿ ಕೊಂಕ ಅನ್ನುವ ಪದಕ್ಕೆ ವಕ್ರ, ಡೊಂಕ ಅಂತಲೂ ಕೊಂಡ/ಕುಂದ ಅನ್ನುವ ಪದಕ್ಕೆ ಬೆಟ್ಟ ಅನ್ನುವ ಅರ್ಥಗಳುವೆ.
Ka. kokki, kokke crookedness, perverseness, a crook, bend, hook; kogga, kokkari, koṅga, koṅgari crookedness; koṅki a hook, fish-hook, angle; koṅku to be bent, get crooked, curved, distorted, deformed, or curled, become perverse, untrue, etc.; n. (also koṅgu) state of being bent, crooked, etc.; koṅkisu to make crooked
Ka. koṇḍa,kunda hill, mountain
ನಮ್ಮ ತೆಂಕುಭಾರತದ ಪಡುವಲ ತೀರದುದ್ದಕ್ಕೂ ಇರುವ ಅಂಕು ಡೊಂಕಾದ ಬೆಟ್ಟಗಳ ಉದ್ದ ಸಾಲಿನಲ್ಲಿರುವ ನಾಡೇ ’ಕೊಂಕ್’ಣ. ತೆಂಕಲ್, ಬಡಗಲ್, ಪಡುವಲ್, ಮೂಡಲ್ ಇವುಗಳು ತೆಂಕಣ, ಬಡಗಣ, ಪಡುವಣ, ಮೂಡಣ ಆದ ಹಾಗೆ ಕೊಂಕಲ್ -> ಕೊಂಕಣ ಆಗಿರಬಹುದು.
ಕೊಂಕಣ (ಸಂಸ್ಕೃತೀಕರಿಸಿದರೆ)-> ಕೋಂಕಣ (ಕೊರಲಿಸದ -> ಕೊರಲಿಸಿದ)-> ಗೋಂಕಣ (ಪ್ರಾಕ್ರುತದಲ್ಲಾಗುವ ಮೊಟಕಿಸುವಿಕೆ)--> ಗೋಂ -> ಗೋಮ್ -> ಗೋಮೆ(ಮ->ವ) -> ಗೋವೆ -> ಗೋವಾ
ಇನ್ನು ಕರ್ನಾಟಕದ ಉತ್ತರಕನ್ನಡದಲ್ಲಿರುವ ಗೋಕರ್ಣದಲ್ಲಿರುವ ’ರ’ಕಾರ ತೆಗೆದುಹಾಕಿದರೆ ಗೋಕಣ - ಇದಕ್ಕು ಮೇಲೆ ಹೇಳಿರುವ ’ಪದವುಟ್ಟು’ ಒಪ್ಪುತ್ತದೆ.
[ ಸೇಡಿಯಾಪು ಕ್ರುಶ್ಣಬಟ್ಟರವರ ’ಶಬ್ದಾರ್ಥಕೋಶ’ ದಿಂದ ಇಲ್ಲಿ ಕೆಲವು ಅಂಶಗಳನ್ನು ಹಾಕಿದ್ದೇನೆ.]
ಭಾನುವಾರ, ಜನವರಿ 02, 2011
ಸಲ್ಮೊಱೆ(ಸಲ್ಮೊರೆ) ಅಂದ್ರೇನು?
ಸಲ್ಮೊಱೆ (ಸಲ್+ಮೊಱೆ) - ?
ನಮ್ಮ ಕಡೆ ಈ ಪದ ಬಳಕೆಯಲ್ಲಿದೆ....ಹಿಂದಿನಿಂದಲೂ, ಹೆಣ್ಣು ಮದುವೆಯಾಗುವಾಗ ಈಗಿರುವ ಸಂಬಂಧದ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ಸಂಬಂಧದವರ ಜೊತೆ ಮದುವೆಯಾಗುವ ಪ್ರಸಂಗ ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಅನಲೈಸ್ ಮಾಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.
ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂಧ/ಒಪ್ಪತಕ್ಕ ಸಂಬಂಧ ಅಂತ ಅರ್ಥ.
( Ka. moṟe a turn, time, (K.2) propriety, virtue; relationship)
’ಮೊಱೆ’ಯ ಬಳಕೆಗಳು
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.
ನಮ್ಮ ಕಡೆ ಈ ಪದ ಬಳಕೆಯಲ್ಲಿದೆ....ಹಿಂದಿನಿಂದಲೂ, ಹೆಣ್ಣು ಮದುವೆಯಾಗುವಾಗ ಈಗಿರುವ ಸಂಬಂಧದ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ಸಂಬಂಧದವರ ಜೊತೆ ಮದುವೆಯಾಗುವ ಪ್ರಸಂಗ ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಅನಲೈಸ್ ಮಾಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.
ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂಧ/ಒಪ್ಪತಕ್ಕ ಸಂಬಂಧ ಅಂತ ಅರ್ಥ.
( Ka. moṟe a turn, time, (K.2) propriety, virtue; relationship)
’ಮೊಱೆ’ಯ ಬಳಕೆಗಳು
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.
ಕನ್ನಡ-ತುಳು
ಕನ್ನಡ ತುಳು ಮತ್ತು ತಮಿಳಿನಲ್ಲಿ (ಱ್ ಅಕ್ಕರ ಕೊನೆಯಲ್ಲಿ ಬರುವಾಗ)ಆಗುವ ಬದಲಾವಣೆಗಳು.
ಕನ್ನಡ - ತಮಿಳು - ತುಳು
-------------------------------------------------
ಒನ್ದು - ಒನ್ಱು - ಒಂಜಿ
ಮೂಱು - ಮೂನ್ಱು - ಮೂಜಿ
ಆಱು - ಆಱು - ಆಜಿ
ತೊಱೆ -ತುಱೈ - ತುದೆ
ನೂಱು - ನೂಱು - ನೂದು
ಮಱೆ - ಮಱ - ಮದೆ
ತಮಿಳಿನಲ್ಲಿ ’ಱ್’ ಇದ್ದ ಕಡೆ ಹೆಚ್ಚು ಕಡೆ ಕನ್ನಡದಲ್ಲೂ ಹಾಗೆ ಇದೆ. ಆದರೆ ಕೆಲವು ಕಡೆ ತುಳುವಿನ ತರ ’ದ್’ ಬಂದಿದೆ. ಆದರೆ ತುಳುವಿನಲ್ಲಿ ’ಱ್’ ಕಾರದ ಬದಲು ’ದ್’ ಇಲ್ಲವೆ ’ಜ್’ ಬರುತ್ತದೆ.
’ಒನ್-ಱು’ ಕನ್ನಡದಲ್ಲಿ ’ಒಱು’(ಮೂಱು ತರ) ಆಗಬೇಕಿತ್ತು ಆದರೆ ಒನ್-ದು ಆಗಿರುವುದು ತುಳಿವಿನ ನಿಯಮ ಪಾಲಿಸಿದಂತೆ ಇದೆ. ಆದ್ದರಿಂದ ತುಳುವಿನ ಒರೆಕಟ್ಟುಗಳನ್ನು ನಾವು ಹೆಚ್ಚು ಆಳವಾಗಿ ಓದಬೇಕಾಗಿದೆ. ಇದರಿಂದ ಕನ್ನಡದ ಹಲವು ಒರೆಕಟ್ಟುವಿಕೆಗಳ ಒಳಗುಟ್ಟುಗಳು ಬಯಲಾಗಬಹುದು
ಕನ್ನಡ - ತಮಿಳು - ತುಳು
-------------------------------------------------
ಒನ್ದು - ಒನ್ಱು - ಒಂಜಿ
ಮೂಱು - ಮೂನ್ಱು - ಮೂಜಿ
ಆಱು - ಆಱು - ಆಜಿ
ತೊಱೆ -ತುಱೈ - ತುದೆ
ನೂಱು - ನೂಱು - ನೂದು
ಮಱೆ - ಮಱ - ಮದೆ
ತಮಿಳಿನಲ್ಲಿ ’ಱ್’ ಇದ್ದ ಕಡೆ ಹೆಚ್ಚು ಕಡೆ ಕನ್ನಡದಲ್ಲೂ ಹಾಗೆ ಇದೆ. ಆದರೆ ಕೆಲವು ಕಡೆ ತುಳುವಿನ ತರ ’ದ್’ ಬಂದಿದೆ. ಆದರೆ ತುಳುವಿನಲ್ಲಿ ’ಱ್’ ಕಾರದ ಬದಲು ’ದ್’ ಇಲ್ಲವೆ ’ಜ್’ ಬರುತ್ತದೆ.
’ಒನ್-ಱು’ ಕನ್ನಡದಲ್ಲಿ ’ಒಱು’(ಮೂಱು ತರ) ಆಗಬೇಕಿತ್ತು ಆದರೆ ಒನ್-ದು ಆಗಿರುವುದು ತುಳಿವಿನ ನಿಯಮ ಪಾಲಿಸಿದಂತೆ ಇದೆ. ಆದ್ದರಿಂದ ತುಳುವಿನ ಒರೆಕಟ್ಟುಗಳನ್ನು ನಾವು ಹೆಚ್ಚು ಆಳವಾಗಿ ಓದಬೇಕಾಗಿದೆ. ಇದರಿಂದ ಕನ್ನಡದ ಹಲವು ಒರೆಕಟ್ಟುವಿಕೆಗಳ ಒಳಗುಟ್ಟುಗಳು ಬಯಲಾಗಬಹುದು
ಭಾನುವಾರ, ಡಿಸೆಂಬರ್ 26, 2010
ಆಂಜನೇಯನ /ಅಂಜಿನಯ್ಯನ ಕತೆ
ಇತ್ತೀಚೆಗೆ ನಾನು ಕಂಡುಕೊಂಡ ಒಂದು ಸಂಗತಿ:=
ಕೇಳ್ವೆ: ’ಆಂಜನೇಯ’ನ ವ್ಯುತ್ಪತ್ತಿ ಹೇಗೆ ಹೇಳುವುದು?
ಉತ್ತರ: ಆಂಜನೇಯ ಅನ್ನುವುದು ಕರ್ನಾಟಕದಲ್ಲಿ ಹೆಚ್ಚು ಕೇಳಿ ಬರುವ ಪದ. ಬೇರೆ ಕಡೆ ಬಜರಂಗ ಬಲಿ, ಹನುಮಾನ್ ಅಂತೆಲ್ಲ ಹೇಳ್ತಾರೆ... ಆದರೆ ಕರ್ನಾಟಕದಲ್ಲಿ ಆಂಜನೇಯನೇ ಯಾಕೆ? ಸಂಸ್ಕ್ರುತದ ಪ್ರಕಾರ anjaneya (p. 038) [ âñganeya ] m. son of Añganâ, Ha numat.
(http://dsal.uchicago.edu/cgi-bin/romadict.pl?query=anjaneya&display=simple&table=macdonell)
ಇದಕ್ಕೆ ಕನ್ನಡದ ವ್ಯುತ್ಪತ್ತಿ ಹೇಳಬಹುದು:-
ನಮ್ಮ ಕನ್ನಡಿಗರಲ್ಲಿ (ನಾನು ಚಿಕ್ಕಂದಿನಲ್ಲಿ ಕಂಡ ಹಾಗೆಯೇ) ಇರುವ ಒಂದು ನಂಬಿಕೆ ಇದೆ (ಮೂಡ ನಂಬಿಕೆ ಅಂತ ಕೆಲವರ ಅನ್ನಬಹುದು....ಇರಲಿ) ...ಮಕ್ಕಳಿಗೆ ಹುಶಾರ ತಪ್ಪಿದ್ರೆ(ಜ್ವರ ಬಂದರೆ) ’ಓಹ್ ಅವನು ಹೆದರಿಕೊಂಡಿದ್ದಾನೆ ಮೈಸೂರಿನಲ್ಲಿರುವ ಕೋಟೆ ಆಂಜನೇಯನಗುಡಿಗೆ ಕರ್ಕಂಡ್ ಹೋಗಿ ಎಲ್ಲಾ ಸರಿಯಾಗುತ್ತೆ’ ಅಂತ ಹಿರಿಯರು ಅದರಲ್ಲೂ ಹೆಂಗಸರು ಅಂತಿದ್ರು...ಹೀಗೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಈ ರೀತಿಯ ನಂಬಿಕೆ ಇದೆ/ಇರಬಹ್ದು. ಅಂದರೆ ’ಅಂಜಿಕೆ’/’ಅಂಜು’ - ಇದನ್ನು ಹೋಗಲಾಡಿಸುವನೇ ಅಂಜಿನ+ ಅಯ್ಯ = ಅಂಜಿನಯ್ಯ ಈಗ ಇದನ್ನೇ ಸಕ್ಕದಿಸಿದರೆ ’ಆಂಜನೇಯ’ ಆಗಿರಬಹುದು ಅಂತ ನನ್ನ ಎಣಿಕೆ.
ಹಾಗೆಯೇ ಶಿವನಿಗೆ ...ನಂಜಿನ ಅಯ್ಯ => ನಂಜಯ್ಯ ( ನಂಜುಂಡೇಶ್ವರ) ಅಂತಾರೆ ..ನಂಜನಗೂಡಿನಲ್ಲಿ ನಂಜಯ್ಯನ ಗುಡಿ ಇದೆ.
ಕೊಸರು: ಈಗಲೂ ಬೆಂಗಳೂರಿನಲ್ಲಿ ’ಗಾಳಿ’ ಆಂಜನೇಯನ ಗುಡಿ ಇದೆ.
ಕೇಳ್ವೆ: ’ಆಂಜನೇಯ’ನ ವ್ಯುತ್ಪತ್ತಿ ಹೇಗೆ ಹೇಳುವುದು?
ಉತ್ತರ: ಆಂಜನೇಯ ಅನ್ನುವುದು ಕರ್ನಾಟಕದಲ್ಲಿ ಹೆಚ್ಚು ಕೇಳಿ ಬರುವ ಪದ. ಬೇರೆ ಕಡೆ ಬಜರಂಗ ಬಲಿ, ಹನುಮಾನ್ ಅಂತೆಲ್ಲ ಹೇಳ್ತಾರೆ... ಆದರೆ ಕರ್ನಾಟಕದಲ್ಲಿ ಆಂಜನೇಯನೇ ಯಾಕೆ? ಸಂಸ್ಕ್ರುತದ ಪ್ರಕಾರ anjaneya (p. 038) [ âñganeya ] m. son of Añganâ, Ha numat.
(http://dsal.uchicago.edu/cgi-bin/romadict.pl?query=anjaneya&display=simple&table=macdonell)
ಇದಕ್ಕೆ ಕನ್ನಡದ ವ್ಯುತ್ಪತ್ತಿ ಹೇಳಬಹುದು:-
ನಮ್ಮ ಕನ್ನಡಿಗರಲ್ಲಿ (ನಾನು ಚಿಕ್ಕಂದಿನಲ್ಲಿ ಕಂಡ ಹಾಗೆಯೇ) ಇರುವ ಒಂದು ನಂಬಿಕೆ ಇದೆ (ಮೂಡ ನಂಬಿಕೆ ಅಂತ ಕೆಲವರ ಅನ್ನಬಹುದು....ಇರಲಿ) ...ಮಕ್ಕಳಿಗೆ ಹುಶಾರ ತಪ್ಪಿದ್ರೆ(ಜ್ವರ ಬಂದರೆ) ’ಓಹ್ ಅವನು ಹೆದರಿಕೊಂಡಿದ್ದಾನೆ ಮೈಸೂರಿನಲ್ಲಿರುವ ಕೋಟೆ ಆಂಜನೇಯನಗುಡಿಗೆ ಕರ್ಕಂಡ್ ಹೋಗಿ ಎಲ್ಲಾ ಸರಿಯಾಗುತ್ತೆ’ ಅಂತ ಹಿರಿಯರು ಅದರಲ್ಲೂ ಹೆಂಗಸರು ಅಂತಿದ್ರು...ಹೀಗೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಈ ರೀತಿಯ ನಂಬಿಕೆ ಇದೆ/ಇರಬಹ್ದು. ಅಂದರೆ ’ಅಂಜಿಕೆ’/’ಅಂಜು’ - ಇದನ್ನು ಹೋಗಲಾಡಿಸುವನೇ ಅಂಜಿನ+ ಅಯ್ಯ = ಅಂಜಿನಯ್ಯ ಈಗ ಇದನ್ನೇ ಸಕ್ಕದಿಸಿದರೆ ’ಆಂಜನೇಯ’ ಆಗಿರಬಹುದು ಅಂತ ನನ್ನ ಎಣಿಕೆ.
ಹಾಗೆಯೇ ಶಿವನಿಗೆ ...ನಂಜಿನ ಅಯ್ಯ => ನಂಜಯ್ಯ ( ನಂಜುಂಡೇಶ್ವರ) ಅಂತಾರೆ ..ನಂಜನಗೂಡಿನಲ್ಲಿ ನಂಜಯ್ಯನ ಗುಡಿ ಇದೆ.
ಕೊಸರು: ಈಗಲೂ ಬೆಂಗಳೂರಿನಲ್ಲಿ ’ಗಾಳಿ’ ಆಂಜನೇಯನ ಗುಡಿ ಇದೆ.
ಶನಿವಾರ, ಡಿಸೆಂಬರ್ 25, 2010
ಕಂನಡ
ಶಂ.ಬಾ.ಜೋಶಿಯವರು ಕನ್ನಡ ಪದದ ಬಗ್ಗೆ ಮಾತಾಡುತ್ತ....ಕನ್ನರು,ಕಣ್ಣರು ನುಡಿ ಕಂನುಡಿ, ನಾಡು ಕಂನಾಡು/ಕಂನಡ ಅಂತ ಹೇಳಿದ್ದಾರೆ. ಅಲ್ಲದೆ ಕಂನಡ ಎಂಬುದನ್ನ ಹೆಚ್ಚು ಸರಿಯಾಗಿ ತಮಿಳಿನಲ್ಲಿ ಬರೆಯಬಹುದು ಯಾಕಂದರೆ ತಮಿಳಿನಲ್ಲಿ ’ಣ’, ’ನ’ ನಡುವೆ ಇರುವ್ ಇನ್ನೊಂದ್ ’ನ’(கன்னட) ಕಾರ ಇದೆ. ಇಲ್ಲಿ ’ண்’ ಎಂಬ ’ನ’ಕಾರ ’ಕಂನಡ’ದಲ್ಲಿರುವ ’ಂ’ಗಿಂತ ಸೊಲ್ಪ ಬೇರೆ ತರದ ಉಲಿಕೆEdit
Hamsanandi ! - ಮೇಲಿನ ಟಿಪ್ಪಣಿಯಲ್ಲಿ ಹಲವು ತಪ್ಪುಗಳಿವೆ, ಮತ್ತು ಕನ್ನಡ ಅನ್ನುವ ಪದವನ್ನು ತಮಿಳು ಲಿಪಿಯಲ್ಲಿ (ಕನ್ನಡಕ್ಕಿಂತ) ಸರಿಯಾಗಿ ಬರೆಯಬಹುದು (ಅದು ಸರಿಯೇ ಇದ್ದರೆ, ನನಗೆ ಸರಿ ಕಂಡಿಲ್ಲ), ಎಂದು ತಿಳಿಸಿ ಹೇಳುತ್ತಿಲ್ಲ.
೧) ತಮಿಳಿನಲ್ಲಿ ಎರಡು ’ನ’ ಕಾರಗಳು ಬರವಣಿಗೆಯಲ್ಲಿದ್ದರೂ, ಅವುಗಳ ಉಚ್ಚಾರಣೆಯಲ್ಲಿ ಯಾವ ಬದಲಾವಣೆಯೂ ಇಲ್ಲ.
೨) ಈ ಎರಡು ’ನ’ ಕಾರಗಳು (ன ಮತ್ತು ந ) ಇವೆರಡೂ, ಒಂದು ಪದದಲ್ಲಿ ನ-ಕಾರ ಎಲ್ಲಿ ಬಂದಿದೆ ಅನ್ನುವುದರ ಮೇಲೆ ನಿಂತಿರುತ್ತವೆ. (ಹಿಂದೆ ಇದಕ್ಕೆ ಬೇರೆ ಕಾರಣಗಳಿದ್ದಿರಬಹುದು, ಉಚ್ಚಾರವೂ ಬೇರೆಯಾಗೇ ಇದ್ದಿರಬಹುದು - ಆದರೆ ಇಂದಿನ ತಮಿಳಿನಲ್ಲಿ ಇಲ್ಲ); ಪದವೊಂದರ ಮೊದಲು ಬರುವ ನ-ಕಾರವು ಯಾವಾಗಲೂ ந ಆಗಿದ್ದು, ನಡುವೆ ಬರುವ ನ ಕಾರಗಳು ன ಮತ್ತು ந ಈ ಎರಡೂ ಆಗಿರಬಹುದು (ಹೆಚ್ಚಾಗಿ ன ಬರುತ್ತೆ). ಯಾವ ಕಡೆ ந, ಯಾವ ಕಡೆ ன ಅನ್ನುವುದು ಸುಮಾರು ರೂಢಿಯಿಂದ ಬರುತ್ತೆ. ಉದಾ: ನಂದನಂ -> ನನ್ದನಮ್ ಈ ಪದವನ್ನ ತಮಿಳಿನಲ್ಲಿ நந்தனம் ಹೀಗೆ ಬರೆಯಲಾಗುತ್ತೆ.
೩) ண் ಅನ್ನುವುದು ನ ಕಾರವೇ ಅಲ್ಲ, ಣ ಕಾರ.
ಇನ್ನೊಂದು ಸಂಗತಿ ಎಂದರೆ ತಮಿಳಿನ ಕೆಲವು ಒಳನುಡಿಗಳಲ್ಲಿ, ಆರ್ಕಾಟು, ಚೆನ್ನೈ ಮೊದಲಾದ ಉತ್ತರ ಭಾಗಗಳಲ್ಲಿ (ನನ್ನ ಅನುಭವಕ್ಕೆ ಬಂದಂತೆ) ನ ಮತ್ತು ಣ ಕಾರಗಳನ್ನ ಒಮ್ಮೊಮ್ಮೆ ಅದಲು ಬದಲಿಸಿ ಹೇಳುವುದೂ (ಉದಾ: ಮನ್ನನ್ <-> ಮಣ್ಣನ್, ಕಣ್ಣನ್ <--> ಕನ್ನನ್ ) ಮತ್ತು ಅದರ ಕಾಗುಣಿತವನ್ನು ಹೇಳುವಾಗ ಅದನ್ನು ಹೆಸರಿಸಲು ಮೂರು ಸುಳಿ ನ, ಎರಡು ಸುಳಿ ನ ಎಂದು ಹೇಳುವುದುಂಟು.
Bharath Kumar - ಹಂಸಾನಂದಿ....ನನಗೆ ನೆನಪಿದ್ದಶ್ಟು ಇಲ್ಲಿ ಹಾಕಿದ್ದೇನೆ...ನಿಮ್ಮ ಕಮೆಂಟ್ ನೋಡಿದ ಮೇಲೆ ಗೊಂದಲವಾಗಿದೆ.ಇವತ್ ಮತ್ತೆ ಶಂ.ಬಾ..ಹೊತ್ತಗೆ ನೋಡಿ ಅಲ್ಲಿರುವುದನ್ನು ಇಲ್ಲಿ ಹಾಕುತ್ತೇನೆ
Bharath Kumar - ಚಾ.ನಗದರಲ್ಲೂ ...’ನ’ಕಾರಕ್ಕೆ ’ಣ’ಕಾರ ಬಳಸ್ತಾರೆ.... ಬನ್ನಿ ಬದಲು ಬಣ್ಣಿ.....ಪುನ(ಪುನಃ) ಬದಲು ’ಪುಣವಿ’( ಅಂದ್ರೆ ಮತ್ತೆ),
Bharath Kumar - @hamsanandi....ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೮ನೇ ಪುಟದಲ್ಲಿ ಹೀಗಿದೆ.
"...ನ ಮತ್ತು ಣ ಗಳೆರಡಕ್ಕೊ ತಮ್ಮ ಹಕ್ಕನ್ನು ಹೇಳಲು ಅವಕಾಶವಿರುವ ಬೇರೊಂದು ಅಕ್ಶರವು ಮೊದಲು ಆ ಸ್ಥಳದಲ್ಲಿರಬೇಕು. ಹಾಗಾದರೆ ಆ ಅಕ್ಶರವು ಯಾವುದು? ತಮಿಳಿನ ನೆರವಿನಿಂದ ಇದನ್ನು ಗೊತ್ತುಪಡಿಸಬಹುದಾಗಿದೆ. ತಮಿಳಿನಲ್ಲಿ ನ ಮತ್ತು ಣ ಗಳ ಹೊರತು ಇನ್ನೂ ಒಂದು ಅನುನಾಸಿಕಾಕ್ಶರವುಂಟು. ಅವರು ಅದನ್ನು ன ಹೀಗೆ ಬರೆದು ತೋರಿಸುವರು. ಇದನ್ನು ಹೇಗೆ ಉಚ್ಚರಿಸುವರೆಂದು ಕೇಳಲು ಉಭಯಭಾಷಾವಿಶಾರದರಾದ ಪ್ರೊ. ಚೆನ್ನಕೇಶವ ಅಯ್ಯಂಗಾರ್ಯರು ನಕಾರದಂತೆ ಎಂದು ತಿಳಿಸಿದರು. ಸ್ಪಶ್ಟವಾಗಿ ಅಲ್ಲದ್ದಿದ್ದರೂ ன ದ ಒಲವು ಣ ಕಾರದ ಕಡೆಗೂ ಕೆಲಮಟ್ಟಿಗೆ ಇರಬೇಕೆಂದು ಸಂದೇಹ. ನನಗೆ ಇನ್ನು ಇದೇ ಸಂದೇಹ. ಉಚ್ಚಾರದಲ್ಲಿ ಹೆಚ್ಚು ಕಡಿಮೆ ಇಲ್ಲದಿದ್ದರೆ ನ-ಣಗಳಿರುವಾಗ ಮತ್ತೆ ன் ಕಾರದ ಅವಶ್ಯಕವೇನು? ನ ಮತ್ತು ಣ ಕಾರಗಳಿಂದ ತೋರಿಸಲು ಆಗದ ಆವುದೊ ಒಂದು ವಿಶಿಷ್ಟ ಉಚ್ಚಾರವನ್ನು ಸೂಚಿಸುವುದಕ್ಕಾಗಿಯೆ ன் ಕಾರವು ತಲೆದೋರಿರಬೇಕಲ್ಲವೆ? ಹಳೆಗನ್ನಡದ ಱ ಮತ್ತು ೞ ಕಣ್ಮರೆಯಾದಂತೆ ಇಂದು ನ,ಣ ಮತ್ತು ன ಕಾರಗಳಿಲ್ಲಿದ್ದ ಸೂಕ್ಶ್ಮ ಉಚ್ಚಾರ ಬೇಧವು ಮರೆತುಹೋಗರಬೇಕು.
Bharath Kumar - ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೯ನೇ ಪುಟದಲ್ಲಿ ಹೀಗಿದೆ
"..ತಮಿಳಿನಲ್ಲಿಯ ன் ಅವರ್ಗೀಯ ನ ಕಾರವು ಶಬ್ದದ ಆದಿಯಲ್ಲಿ ಬರುವುದಿಲ್ಲ. ಆದುದರಿಂದ ಕನ್ನಡದೊಳಗಿನ ಬಿಂದುವಂತೆ(ಂ) ತಮಿಳ ನಕಾರದ ಉಚ್ಚಾರವೂ ಇರಬೇಕೆಂದನಿಸುತ್ತಿದೆ. ಏಕೆಂದರೆ, ಬಿಂದುವು ಶಬ್ದದ ಆರಂಬದಲ್ಲಿ ಬರುವುದೇ ಸಾಧ್ಯವಿಲ್ಲ. ಇನ್ನೂ ಒಂದು ವಿಶೇಶ. ಹಲವೆಡೆಗಳಲ್ಲಿ ತಮಿಳಿನಲ್ಲಿಯೂ ಶಬ್ದದ ಕೊನೆಗೆ ’ನ್’ ಎಂಬುದು ಯಾವುದೊಂದು ಅಕ್ಶರಕ್ಕೆ ಆದೇಶವಾಗಿ ಬರುವುದುಂಟು. ಆದುದರಿಂದ, ಕಂನಡ-ಕಂನಾಡು ಇದರೊಳಗಿನ ಪೂರ್ವಪದವಾದ ಕನ್-ಕನ್ನ ಎಂಬ ಜನಾಂಗವಾಚಕ ಶಬ್ದದ ಕೊನೆಯ ಅಕ್ಶರವು ಯಾವುದಾದರೂ ಒಂದು ಅಕ್ಶರಕ್ಕೆ ಆದೇಶವಾಗಿ ಬಂದಿರಬಹುದೆ? "
ಅವರ ಪ್ರಕಾರ ಸದ್ಯಕ್ಕೆ ’ಕನ್ನಡ’ ತಪ್ಪು ...ಆದರೆ ಕಂನಡ = கன்னட ಎರಡೂ ಸರಿ
ಕನ್ನಡದ "ಂ’ = ತಮಿಳಿನ ன்
Hamsanandi ! - ಮೇಲಿನ ಟಿಪ್ಪಣಿಯಲ್ಲಿ ಹಲವು ತಪ್ಪುಗಳಿವೆ, ಮತ್ತು ಕನ್ನಡ ಅನ್ನುವ ಪದವನ್ನು ತಮಿಳು ಲಿಪಿಯಲ್ಲಿ (ಕನ್ನಡಕ್ಕಿಂತ) ಸರಿಯಾಗಿ ಬರೆಯಬಹುದು (ಅದು ಸರಿಯೇ ಇದ್ದರೆ, ನನಗೆ ಸರಿ ಕಂಡಿಲ್ಲ), ಎಂದು ತಿಳಿಸಿ ಹೇಳುತ್ತಿಲ್ಲ.
೧) ತಮಿಳಿನಲ್ಲಿ ಎರಡು ’ನ’ ಕಾರಗಳು ಬರವಣಿಗೆಯಲ್ಲಿದ್ದರೂ, ಅವುಗಳ ಉಚ್ಚಾರಣೆಯಲ್ಲಿ ಯಾವ ಬದಲಾವಣೆಯೂ ಇಲ್ಲ.
೨) ಈ ಎರಡು ’ನ’ ಕಾರಗಳು (ன ಮತ್ತು ந ) ಇವೆರಡೂ, ಒಂದು ಪದದಲ್ಲಿ ನ-ಕಾರ ಎಲ್ಲಿ ಬಂದಿದೆ ಅನ್ನುವುದರ ಮೇಲೆ ನಿಂತಿರುತ್ತವೆ. (ಹಿಂದೆ ಇದಕ್ಕೆ ಬೇರೆ ಕಾರಣಗಳಿದ್ದಿರಬಹುದು, ಉಚ್ಚಾರವೂ ಬೇರೆಯಾಗೇ ಇದ್ದಿರಬಹುದು - ಆದರೆ ಇಂದಿನ ತಮಿಳಿನಲ್ಲಿ ಇಲ್ಲ); ಪದವೊಂದರ ಮೊದಲು ಬರುವ ನ-ಕಾರವು ಯಾವಾಗಲೂ ந ಆಗಿದ್ದು, ನಡುವೆ ಬರುವ ನ ಕಾರಗಳು ன ಮತ್ತು ந ಈ ಎರಡೂ ಆಗಿರಬಹುದು (ಹೆಚ್ಚಾಗಿ ன ಬರುತ್ತೆ). ಯಾವ ಕಡೆ ந, ಯಾವ ಕಡೆ ன ಅನ್ನುವುದು ಸುಮಾರು ರೂಢಿಯಿಂದ ಬರುತ್ತೆ. ಉದಾ: ನಂದನಂ -> ನನ್ದನಮ್ ಈ ಪದವನ್ನ ತಮಿಳಿನಲ್ಲಿ நந்தனம் ಹೀಗೆ ಬರೆಯಲಾಗುತ್ತೆ.
೩) ண் ಅನ್ನುವುದು ನ ಕಾರವೇ ಅಲ್ಲ, ಣ ಕಾರ.
ಇನ್ನೊಂದು ಸಂಗತಿ ಎಂದರೆ ತಮಿಳಿನ ಕೆಲವು ಒಳನುಡಿಗಳಲ್ಲಿ, ಆರ್ಕಾಟು, ಚೆನ್ನೈ ಮೊದಲಾದ ಉತ್ತರ ಭಾಗಗಳಲ್ಲಿ (ನನ್ನ ಅನುಭವಕ್ಕೆ ಬಂದಂತೆ) ನ ಮತ್ತು ಣ ಕಾರಗಳನ್ನ ಒಮ್ಮೊಮ್ಮೆ ಅದಲು ಬದಲಿಸಿ ಹೇಳುವುದೂ (ಉದಾ: ಮನ್ನನ್ <-> ಮಣ್ಣನ್, ಕಣ್ಣನ್ <--> ಕನ್ನನ್ ) ಮತ್ತು ಅದರ ಕಾಗುಣಿತವನ್ನು ಹೇಳುವಾಗ ಅದನ್ನು ಹೆಸರಿಸಲು ಮೂರು ಸುಳಿ ನ, ಎರಡು ಸುಳಿ ನ ಎಂದು ಹೇಳುವುದುಂಟು.
Bharath Kumar - ಹಂಸಾನಂದಿ....ನನಗೆ ನೆನಪಿದ್ದಶ್ಟು ಇಲ್ಲಿ ಹಾಕಿದ್ದೇನೆ...ನಿಮ್ಮ ಕಮೆಂಟ್ ನೋಡಿದ ಮೇಲೆ ಗೊಂದಲವಾಗಿದೆ.ಇವತ್ ಮತ್ತೆ ಶಂ.ಬಾ..ಹೊತ್ತಗೆ ನೋಡಿ ಅಲ್ಲಿರುವುದನ್ನು ಇಲ್ಲಿ ಹಾಕುತ್ತೇನೆ
Bharath Kumar - ಚಾ.ನಗದರಲ್ಲೂ ...’ನ’ಕಾರಕ್ಕೆ ’ಣ’ಕಾರ ಬಳಸ್ತಾರೆ.... ಬನ್ನಿ ಬದಲು ಬಣ್ಣಿ.....ಪುನ(ಪುನಃ) ಬದಲು ’ಪುಣವಿ’( ಅಂದ್ರೆ ಮತ್ತೆ),
Bharath Kumar - @hamsanandi....ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೮ನೇ ಪುಟದಲ್ಲಿ ಹೀಗಿದೆ.
"...ನ ಮತ್ತು ಣ ಗಳೆರಡಕ್ಕೊ ತಮ್ಮ ಹಕ್ಕನ್ನು ಹೇಳಲು ಅವಕಾಶವಿರುವ ಬೇರೊಂದು ಅಕ್ಶರವು ಮೊದಲು ಆ ಸ್ಥಳದಲ್ಲಿರಬೇಕು. ಹಾಗಾದರೆ ಆ ಅಕ್ಶರವು ಯಾವುದು? ತಮಿಳಿನ ನೆರವಿನಿಂದ ಇದನ್ನು ಗೊತ್ತುಪಡಿಸಬಹುದಾಗಿದೆ. ತಮಿಳಿನಲ್ಲಿ ನ ಮತ್ತು ಣ ಗಳ ಹೊರತು ಇನ್ನೂ ಒಂದು ಅನುನಾಸಿಕಾಕ್ಶರವುಂಟು. ಅವರು ಅದನ್ನು ன ಹೀಗೆ ಬರೆದು ತೋರಿಸುವರು. ಇದನ್ನು ಹೇಗೆ ಉಚ್ಚರಿಸುವರೆಂದು ಕೇಳಲು ಉಭಯಭಾಷಾವಿಶಾರದರಾದ ಪ್ರೊ. ಚೆನ್ನಕೇಶವ ಅಯ್ಯಂಗಾರ್ಯರು ನಕಾರದಂತೆ ಎಂದು ತಿಳಿಸಿದರು. ಸ್ಪಶ್ಟವಾಗಿ ಅಲ್ಲದ್ದಿದ್ದರೂ ன ದ ಒಲವು ಣ ಕಾರದ ಕಡೆಗೂ ಕೆಲಮಟ್ಟಿಗೆ ಇರಬೇಕೆಂದು ಸಂದೇಹ. ನನಗೆ ಇನ್ನು ಇದೇ ಸಂದೇಹ. ಉಚ್ಚಾರದಲ್ಲಿ ಹೆಚ್ಚು ಕಡಿಮೆ ಇಲ್ಲದಿದ್ದರೆ ನ-ಣಗಳಿರುವಾಗ ಮತ್ತೆ ன் ಕಾರದ ಅವಶ್ಯಕವೇನು? ನ ಮತ್ತು ಣ ಕಾರಗಳಿಂದ ತೋರಿಸಲು ಆಗದ ಆವುದೊ ಒಂದು ವಿಶಿಷ್ಟ ಉಚ್ಚಾರವನ್ನು ಸೂಚಿಸುವುದಕ್ಕಾಗಿಯೆ ன் ಕಾರವು ತಲೆದೋರಿರಬೇಕಲ್ಲವೆ? ಹಳೆಗನ್ನಡದ ಱ ಮತ್ತು ೞ ಕಣ್ಮರೆಯಾದಂತೆ ಇಂದು ನ,ಣ ಮತ್ತು ன ಕಾರಗಳಿಲ್ಲಿದ್ದ ಸೂಕ್ಶ್ಮ ಉಚ್ಚಾರ ಬೇಧವು ಮರೆತುಹೋಗರಬೇಕು.
Bharath Kumar - ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೯ನೇ ಪುಟದಲ್ಲಿ ಹೀಗಿದೆ
"..ತಮಿಳಿನಲ್ಲಿಯ ன் ಅವರ್ಗೀಯ ನ ಕಾರವು ಶಬ್ದದ ಆದಿಯಲ್ಲಿ ಬರುವುದಿಲ್ಲ. ಆದುದರಿಂದ ಕನ್ನಡದೊಳಗಿನ ಬಿಂದುವಂತೆ(ಂ) ತಮಿಳ ನಕಾರದ ಉಚ್ಚಾರವೂ ಇರಬೇಕೆಂದನಿಸುತ್ತಿದೆ. ಏಕೆಂದರೆ, ಬಿಂದುವು ಶಬ್ದದ ಆರಂಬದಲ್ಲಿ ಬರುವುದೇ ಸಾಧ್ಯವಿಲ್ಲ. ಇನ್ನೂ ಒಂದು ವಿಶೇಶ. ಹಲವೆಡೆಗಳಲ್ಲಿ ತಮಿಳಿನಲ್ಲಿಯೂ ಶಬ್ದದ ಕೊನೆಗೆ ’ನ್’ ಎಂಬುದು ಯಾವುದೊಂದು ಅಕ್ಶರಕ್ಕೆ ಆದೇಶವಾಗಿ ಬರುವುದುಂಟು. ಆದುದರಿಂದ, ಕಂನಡ-ಕಂನಾಡು ಇದರೊಳಗಿನ ಪೂರ್ವಪದವಾದ ಕನ್-ಕನ್ನ ಎಂಬ ಜನಾಂಗವಾಚಕ ಶಬ್ದದ ಕೊನೆಯ ಅಕ್ಶರವು ಯಾವುದಾದರೂ ಒಂದು ಅಕ್ಶರಕ್ಕೆ ಆದೇಶವಾಗಿ ಬಂದಿರಬಹುದೆ? "
ಅವರ ಪ್ರಕಾರ ಸದ್ಯಕ್ಕೆ ’ಕನ್ನಡ’ ತಪ್ಪು ...ಆದರೆ ಕಂನಡ = கன்னட ಎರಡೂ ಸರಿ
ಕನ್ನಡದ "ಂ’ = ತಮಿಳಿನ ன்
ಶಿವ ರಹಸ್ಯ
ಈಗ ತಾನೆ ಶಂ.ಬಾ. ಜೋಶಿಯವರು ಬರೆದಿರುವ ’ಶಿವ ರಹಸ್ಯ’ ಹೊತ್ತಗೆ ಓದಿ ಮುಗಿಸಿದೆ. ಕೆಲವು ಗಮನಿಕೆಗಳು
೧. ಶಿವ = ಶಿಂವ = ಶಿನ್ ವ , ಶಿನ್ ಎಂಬುದು ದ್ರಾವಿಡ ನುಡಿಗಳಲ್ಲಿ ( ಅದರಲ್ಲೊ ಕನ್ನಡದಲ್ಲಿ) ಚಿನ್, ಚೆನ್, ಕೆನ್ ಎಂಬುದರ ಇನ್ನೊಂದು ರೂಪ. ಶಿವ ಅಂದರೆ ಕೆಂಪು, ಚೆನ್ನು, ಒಳ್ಳೇದು, ಬೆಳಗು, ಮಂಗಲಕರ, ಅದಕ್ಕೆ ನಮ್ಮಲ್ಲಿ ಕೆಂಪಣ್ಣ, ಕೆಂಪೇಗೌಡ, ಕೆಂಚಣ್ಣ , ಚಿನ್ನಪ್ಪ, ಚಿನ್ನಸ್ವಾಮಿ, ಚೆನ್ನಪ್ಪ, ಚೆನ್ನಯ್ಯ, ಕೆಂಪಯ್ಯ ಅಂತ ಹೆಸರು ಇಟ್ಕೊತಾರೆ.
೨. ಅದಕ್ಕೆ rudhira (p. 252) [ rudh-irá ] a. red, bloody (AV.1); ವೇದಗಳಲ್ಲಿ ಕೂಡ ಶಿವನನ್ನು ರುದ್ರ (ರುಧಿರ=ಕೆಂಪು) ಅಂತ ಕರೆದಿರುವುದು ಅದಕ್ಕೆ.
೨. ನಾವು ಬಳಸುವ ’ಚೆನ್’ ನಲ್ಲಿ ಹಲವು ಅರಿತಗಳು ಅಡಗಿವೆ. (All meanings are +ve)
ಅ. ಏನ್ ಚೆನ್ನಾಗಿದ್ದೀರ ? ( ಹದುಳವಾಗಿದ್ದೀರ)
ಬ. ಏನ್ ಮದ್ವೆಯಲ್ಲ ಚೆನ್ನಾಗಿ ನಡೀತಾ? ( ಅಂದರ ಮಂಗಲವಾಗಿ ನಡೆಯಿತಾ)
ಕ. ಏನ್ ಚೆನ್ನಾಗಿದಾಳ್ ನೋಡು? ಅಂದರೆ ( ಕೆಂಪಾಗಿ, beautiful ಅಂತ)
೩. ಶಿನ್+ಧೂರ = ಸಿಂದೂರ (ಹೆಂಗಸರು ಹಣೆಯಲ್ಲಿ ಹಾಕಿಕೊಳ್ಳವ ಕುಂಕುಮ=ಕೆನ್+ಕೆನ್)
೧. ಶಿವ = ಶಿಂವ = ಶಿನ್ ವ , ಶಿನ್ ಎಂಬುದು ದ್ರಾವಿಡ ನುಡಿಗಳಲ್ಲಿ ( ಅದರಲ್ಲೊ ಕನ್ನಡದಲ್ಲಿ) ಚಿನ್, ಚೆನ್, ಕೆನ್ ಎಂಬುದರ ಇನ್ನೊಂದು ರೂಪ. ಶಿವ ಅಂದರೆ ಕೆಂಪು, ಚೆನ್ನು, ಒಳ್ಳೇದು, ಬೆಳಗು, ಮಂಗಲಕರ, ಅದಕ್ಕೆ ನಮ್ಮಲ್ಲಿ ಕೆಂಪಣ್ಣ, ಕೆಂಪೇಗೌಡ, ಕೆಂಚಣ್ಣ , ಚಿನ್ನಪ್ಪ, ಚಿನ್ನಸ್ವಾಮಿ, ಚೆನ್ನಪ್ಪ, ಚೆನ್ನಯ್ಯ, ಕೆಂಪಯ್ಯ ಅಂತ ಹೆಸರು ಇಟ್ಕೊತಾರೆ.
೨. ಅದಕ್ಕೆ rudhira (p. 252) [ rudh-irá ] a. red, bloody (AV.1); ವೇದಗಳಲ್ಲಿ ಕೂಡ ಶಿವನನ್ನು ರುದ್ರ (ರುಧಿರ=ಕೆಂಪು) ಅಂತ ಕರೆದಿರುವುದು ಅದಕ್ಕೆ.
೨. ನಾವು ಬಳಸುವ ’ಚೆನ್’ ನಲ್ಲಿ ಹಲವು ಅರಿತಗಳು ಅಡಗಿವೆ. (All meanings are +ve)
ಅ. ಏನ್ ಚೆನ್ನಾಗಿದ್ದೀರ ? ( ಹದುಳವಾಗಿದ್ದೀರ)
ಬ. ಏನ್ ಮದ್ವೆಯಲ್ಲ ಚೆನ್ನಾಗಿ ನಡೀತಾ? ( ಅಂದರ ಮಂಗಲವಾಗಿ ನಡೆಯಿತಾ)
ಕ. ಏನ್ ಚೆನ್ನಾಗಿದಾಳ್ ನೋಡು? ಅಂದರೆ ( ಕೆಂಪಾಗಿ, beautiful ಅಂತ)
೩. ಶಿನ್+ಧೂರ = ಸಿಂದೂರ (ಹೆಂಗಸರು ಹಣೆಯಲ್ಲಿ ಹಾಕಿಕೊಳ್ಳವ ಕುಂಕುಮ=ಕೆನ್+ಕೆನ್)
ಭಾನುವಾರ, ಜೂನ್ 20, 2010
ಕನ್ನಡದ ಓದು ಮತ್ತು ತಿಂಡಿ

ನೆನ್ನೆಯ ದಿನ ತುಂಬ ನಲಿವಿನಿಂದ ಕಳೆದೆ, ಯಾಕಂದ್ರೆ ಬಹಳ ದಿನಗಳಿಂದ ತಕಬೇಕು ಅಂದ್ಕೊಂಡಿದ್ದ ಹೊತ್ತಿಗೆಯನ್ನು ತಕೊಂಡಿದ್ದಾಯಿತು, ಸಪ್ನ ಹೊತ್ತಿಗೆಮನೆಗೆ ಹೋಗಿ ’ಕನ್ನಡ ವ್ಯಾಕರಣ ಯಾಕೆ ಬೇಕು?" ಎಂಬ ಹೊತ್ತಿಗೆ ತಗೆದುಕೊಂಡು ಓದಕ್ಕೆ ಸುರು ಮಾಡಿದ್ದಾಯಿತು. ಈ ಹೊತ್ತಿಗೆ, ದೊಡ್ಡವರು ಚಿಕ್ಕವರು ಕನ್ನಡ ವ್ಯಾಕರಣ ತಿಳಿಯುವುದರಿಂದ ಆಗುವ ಬಳಕೆಗಳೇನು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಅಲ್ಲದೆ ಯಾವ ತರ ಮಕ್ಕಳಿಗೆ ವ್ಯಾಕರಣ ಕಲಿಸಿದರೆ ಹೆಚ್ಚು ಅನುಕೂಲ ಇವೆಲ್ಲದರ ಬಗ್ಗೆ ಹೊತ್ತಿಗೆಯಲ್ಲಿ ಹೇಳಲ್ಲಾಗಿದೆ. ಕನ್ನಡದ ಮಟ್ಟಿಗೆ ಈ ಹೊತ್ತಿಗೆ ಹೊಸ ತರನಾದದ್ದು ಅನ್ನಬಹುದು.

ಹಾಗೆ ಬರುತ್ತಿರುವಾಗ ನ.ರಾ.ಕಾಲೋನಿಯ ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರವೆ ಇರುವ ಶ್ರೀ ಗುರು ಕೊಟ್ಟೊರೇಶ್ವರ ದಾವಣಗೆರೆ ಬೆಣ್ಣೆ ದೋಸೆ ತಿನ್-ಮನೆಗೆ ಹೋಗಿ ಪಡ್ಡು, ಗಿರ್ಮಿಟ್ ಇವುಗಳಿಂದ ನಾಲಿಗೆಯನ್ನು ತಣಿಸಿಕೊಂಡಿದ್ದು ಆಯಿತು. ಇದಲ್ಲದೆ ಅಲ್ಲಿ ಬೆಣ್ಣೆ ದೋಸೆ, ನರ್ಗೀಸ್, ಮಸಾಲೆ ಚಹ, ಮೆಣ್ಸಿನ್ ಕಾಯ್ ಬಜ್ಜಿ ಹಾಗು ಇತರೆ ಬಡಗು ಕರ್ನಾಟಕದ ತಿನಿಸುಗಳು ಸಿಗುತ್ತವೆ.

ಅಲ್ಲಿಂದ ನ.ರಾ.ಕಾಲೋನಿ ಹತ್ತಿರದಲ್ಲೆ ಇರುವ ರಾಮ ಮಂದಿರದ ಹತ್ತಿರವಿರುವ ’ಶ್ರೀನಿವಾಸ ಕಾಪಿ ಸಪ್ಲಯ್ಸ್’ನಲ್ಲಿ ಹಸನಾದ ’ರಾಗಿ ಹುರಿ ಹಿಟ್ಟು’ ತೆಗೆದುಕೊಂಡು ಬಂದು ಬೆಲ್ಲ, ಏಲಕ್ಕಿ ಮತ್ತು ಹಾಲಿನ ಜೊತೆ ಕಲಸಿ.. ಉಂಡೆ ಮಾಡಿ ತಿಂದಾಗ ಹೆನ್ನಲಿವೇ ನಲಿವು.
ಒಟ್ಟಿನಲ್ಲಿ ಕನ್ನಡದ ಓದು, ತಿನಿಸುಗಳು ನನ್ನ ನೆನ್ನೆಯನ್ನು ಸಿರಿವಂತಗೊಳಿಸಿದವು.
ಹೆಸರು ಗೊತ್ತಿಲ್ಲದ ಹೂವು
ಶನಿವಾರ, ಜೂನ್ 12, 2010
ಮೆಂತ್ಯದ ಪಯಿರು
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)








