ಶಂಕರಬಟ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಶಂಕರಬಟ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜೂನ್ 20, 2010

ಕನ್ನಡದ ಓದು ಮತ್ತು ತಿಂಡಿ


ನೆನ್ನೆಯ ದಿನ ತುಂಬ ನಲಿವಿನಿಂದ ಕಳೆದೆ, ಯಾಕಂದ್ರೆ ಬಹಳ ದಿನಗಳಿಂದ ತಕಬೇಕು ಅಂದ್ಕೊಂಡಿದ್ದ ಹೊತ್ತಿಗೆಯನ್ನು ತಕೊಂಡಿದ್ದಾಯಿತು, ಸಪ್ನ ಹೊತ್ತಿಗೆಮನೆಗೆ ಹೋಗಿ ’ಕನ್ನಡ ವ್ಯಾಕರಣ ಯಾಕೆ ಬೇಕು?" ಎಂಬ ಹೊತ್ತಿಗೆ ತಗೆದುಕೊಂಡು ಓದಕ್ಕೆ ಸುರು ಮಾಡಿದ್ದಾಯಿತು. ಈ ಹೊತ್ತಿಗೆ, ದೊಡ್ಡವರು ಚಿಕ್ಕವರು ಕನ್ನಡ ವ್ಯಾಕರಣ ತಿಳಿಯುವುದರಿಂದ ಆಗುವ ಬಳಕೆಗಳೇನು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತದೆ. ಅಲ್ಲದೆ ಯಾವ ತರ ಮಕ್ಕಳಿಗೆ ವ್ಯಾಕರಣ ಕಲಿಸಿದರೆ ಹೆಚ್ಚು ಅನುಕೂಲ ಇವೆಲ್ಲದರ ಬಗ್ಗೆ ಹೊತ್ತಿಗೆಯಲ್ಲಿ ಹೇಳಲ್ಲಾಗಿದೆ. ಕನ್ನಡದ ಮಟ್ಟಿಗೆ ಈ ಹೊತ್ತಿಗೆ ಹೊಸ ತರನಾದದ್ದು ಅನ್ನಬಹುದು.


ಹಾಗೆ ಬರುತ್ತಿರುವಾಗ ನ.ರಾ.ಕಾಲೋನಿಯ ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರವೆ ಇರುವ ಶ್ರೀ ಗುರು ಕೊಟ್ಟೊರೇಶ್ವರ ದಾವಣಗೆರೆ ಬೆಣ್ಣೆ ದೋಸೆ ತಿನ್-ಮನೆಗೆ ಹೋಗಿ ಪಡ್ಡು, ಗಿರ್ಮಿಟ್ ಇವುಗಳಿಂದ ನಾಲಿಗೆಯನ್ನು ತಣಿಸಿಕೊಂಡಿದ್ದು ಆಯಿತು. ಇದಲ್ಲದೆ ಅಲ್ಲಿ ಬೆಣ್ಣೆ ದೋಸೆ, ನರ್ಗೀಸ್, ಮಸಾಲೆ ಚಹ, ಮೆಣ್ಸಿನ್ ಕಾಯ್ ಬಜ್ಜಿ ಹಾಗು ಇತರೆ ಬಡಗು ಕರ್ನಾಟಕದ ತಿನಿಸುಗಳು ಸಿಗುತ್ತವೆ.


ಅಲ್ಲಿಂದ ನ.ರಾ.ಕಾಲೋನಿ ಹತ್ತಿರದಲ್ಲೆ ಇರುವ ರಾಮ ಮಂದಿರದ ಹತ್ತಿರವಿರುವ ’ಶ್ರೀನಿವಾಸ ಕಾಪಿ ಸಪ್ಲಯ್ಸ್’ನಲ್ಲಿ ಹಸನಾದ ’ರಾಗಿ ಹುರಿ ಹಿಟ್ಟು’ ತೆಗೆದುಕೊಂಡು ಬಂದು ಬೆಲ್ಲ, ಏಲಕ್ಕಿ ಮತ್ತು ಹಾಲಿನ ಜೊತೆ ಕಲಸಿ.. ಉಂಡೆ ಮಾಡಿ ತಿಂದಾಗ ಹೆನ್ನಲಿವೇ ನಲಿವು.

ಒಟ್ಟಿನಲ್ಲಿ ಕನ್ನಡದ ಓದು, ತಿನಿಸುಗಳು ನನ್ನ ನೆನ್ನೆಯನ್ನು ಸಿರಿವಂತಗೊಳಿಸಿದವು.

ಗುರುವಾರ, ಡಿಸೆಂಬರ್ 25, 2008

ಶಂಕರಬಟ್ಟರ ಹೊತ್ತಿಗೆಗಳು ಮತ್ತು ಕನ್ನಡ ಸೊಲ್ಲರಿಮೆ

ಇತ್ತೀಚೆಗೆ ಬೆಳಕಿಗೆ ಬಂದಿರುವ ಶಂಕರಬಟ್ಟರ ಹೊತ್ತಿಗೆಗಳು ಕನ್ನಡ ನುಡಿಹುರುಪಿಗರಲ್ಲಿ ಹೊಸ ಉಂಕುಗಳ ಅಲೆ ಎಬ್ಬಿಸಿದೆ ಎಂದು ಹೇಳಬಹುದು. ಇದುವರೆಗೆ ಕನ್ನಡದಲ್ಲಿ ಬಂದ ನುಡಿಯರಿಗರ ಸೊಲ್ಲರಿಮೆ(ವ್ಯಾಕರಣ,grammar)ಯಲ್ಲಿರುವ ಕೊರತೆಗಳು ಮತ್ತು ಗೊಂದಲಗಳನ್ನು ಎತ್ತಿಹಿಡಿಯುವಲ್ಲಿ ಡಾಡಿ.ಎನ್.ಶಂಕರಬಟ್ಟರು ಬಹಳ ಮಟ್ಟಿಗೆ ಗೆದ್ದಿದ್ದಾರೆ. ನಮ್ಮ ನುಡಿಯಲ್ಲಿರುವ ಹಲವು ತಲೆಮೆಯ ವಿಶಯಗಳು ಹಿಂದಿನ ನುಡಿಯರಿಗರಿಗೆ ತಿಳಿಯದೇ ಇರುವುದು ಅಚ್ಚರಿ ಮತ್ತು ಅವರ ಸಕ್ಕದದ(ಸಂಸ್ಕ್ರುತ) ಸೊಲ್ಲರಿಮೆಯ ಕುರುಡು-ಕುರುಡಾಗಿ ಹಿಂಬಾಲಿಸಿರುವುದು ನಾಚಿಕೆಗೇಡು. ಕನ್ನಡಿಗರ ಬಾಯಲ್ಲಿ ಪದಗಳ,ಸೊಲ್ಲುಗಳ ಒಳಯೇರ್ಪಾಡು ಆಳವಾಗಿ ತಿಳಿಯಲು ಶಂಕರಬಟ್ಟರ ಹೊತ್ತಿಗೆಗಳನ್ನು ಓದಬೇಕು. ಒಂದು ತಲೆಮೆಯ ವಿಶಯ ಗೊತ್ತಾಗುವುದು ಕನ್ನಡದಂತ ನುಡಿಯಲ್ಲಿ ಅದರ ಆಡುಗರ ಬಾಯಲ್ಲಿ ಅದು ಹೇಗೆ ನಲಿಯುತ್ತದೆ ಎಂಬುದರ ಮೇಲೆ ಅದರ ಸೊಲ್ಲರಿಮೆ ಉಂಟಾಗುತ್ತದೆಯೆ ಹೊರತು ಬೇರೆ ಯಾವುದೋ ನಂಟಿಲ್ಲದ ನುಡಿ(ಸಕ್ಕದ)ಯಿಂದಲ್ಲ. ಕನ್ನಡದಂತ ನುಡಿ ಎಲ್ಲ ವರ್ಗದವರ ಮಾತಿನಲ್ಲಿ ಹೆಚ್ಚು ಪಳಗಿದ ನುಡಿ ಆದರೆ ಸಕ್ಕದ ಹಾಗಲ್ಲ ಅದು ಹೆಚ್ಚು ಮೇಲ್ವರ್ಗದವರ ಬರಹದಲ್ಲಿ( ಮಾತಿನಲ್ಲಿ ಕಡಿಮೆ)ದ್ದ ನುಡಿ. ಮತ್ತು ಅದರ ಸೊಲ್ಲರಿಮೆ ಪಾಣಿನಿ ಎಂಬ ನುಡಿಯರಿಗನ ಕಟ್ಟಳೆಯ ಮೇಲೆ. ಕನ್ನಡ ಜನರಿಂದ ಜನಪರವಾದ ನುಡಿ ಆದರೆ ಸಕ್ಕದ ಒಬ್ಬ ಸೊಲ್ಲರಿಗನ ಕಟ್ಟಳೆಯ ಮೇಲೆ ನಿಂತ ನುಡಿ. ಇದರಲ್ಲಿ ಯಾವುದು ಹೆಚ್ಚು-ಕಡಿಮೆಯಿಲ್ಲ ಆದರೆ ಹಲವರು ಕನ್ನಡದ ಮೇಲೆ ಸಕ್ಕದದ ಸೊಲ್ಲರಿಮೆಯೆಂಬ 'ಗದಾ ಪ್ರಹಾರ' ಮಾಡುತ್ತಿದ್ದಾರೆ. ಮತ್ತು ಸಕ್ಕದದ ಪದಗಳು ಮತ್ತು ಸೊಲ್ಲರಿಮೆ ಮಾತಿನಲ್ಲಿ ಬಳಸದ ಕನ್ನಡವನ್ನು ಕೀಳು ಎಂಬ ತಪ್ಪು ಅರಿವನ್ನು ಹೊಂದಿದ್ದಾರೆ.

ಕನ್ನಡಿಗರ ಏಳಿಗೆ ದಿಟವಾದ ಕನ್ನಡದ ಏಳಿಗೆಯಿಂದ ಹೊರತು ಸಕ್ಕದದ ಏಳಿಗೆಯಿಂದಲ್ಲ. ಇದನ್ನು ನಾವು ಅರಿಯಬೇಕಿದೆ.

ಶನಿವಾರ, ಆಗಸ್ಟ್ 23, 2008

'ಮಾತಿನ ಒಳಗುಟ್ಟು' ಹೊತ್ತಿಗೆ ಬಗ್ಗೆ

ಹೊತ್ತಿಗೆ : ಮಾತಿನ ಒಳಗುಟ್ಟು
ಬರೆದವರು : ಡಿ.ಎನ್.ಶಂಕರಬಟ್
ಹೊರಪಡಿಸುಗರು: ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ
ಇತ್ತೀಚೆಗೆ 'ಮಾತಿನ ಒಳಗುಟ್ಟು' ಹೊತ್ತಿಗೆ ಎಡಬಿಡದೆ ಓದಿ ಮುಗಿಸಿದೆ. ಓದುವಾಗ ಎಲ್ಲೂ ಬಿಟ್ಟುವೋಗಿದಂತೆ ಅನ್ನಿಸಲಿಲ್ಲ. ಒಂದೇ ಉಸಿರಿಗೆ ಓದಿ ಮುಗಿಸಿದೆ. ಈವೊತ್ತಿಗೆಯಲ್ಲಿ ಹಲವು ತಲೆಮೆಯ ವಿಶಯಗಳ ಬಗ್ಗೆ ಅರಿಮೆಯು ಓದುಗನಿಗೆ ಸಿಗುತ್ತದೆ. ಮಾತಿನ ಒಳಗುಟ್ಟನ್ನು ಅರಿತುಕೊಳ್ಳಲು ನಾವು ಎಂಜಿನಿಯರಿಂಗ್ನಲ್ಲಿ ಓದಿರುವುದಕ್ಕಿಂತ ಹೆಚ್ಚು ಓದಿ ಹಲವು ವಿಶಯಗಳ ಬಗ್ಗೆ ಆರಯ್ಯು ಮಾಡಬೇಕಾಗುತ್ತದೆ.
ಶಂಕರಬಟ್ಟರು ಈವೊತ್ತಿಗೆಯಲ್ಲಿ ಮಾತನಾಡಿರುವ ಅಂಶಗಳು:
ಮಾತಿನ ಕಸುವು, ಮಿದುಳಿನ ಮಾತು, ಮಕ್ಕಳು ಮಾತನಾಡುವ/ಕಲಿಯುವ ಬಗೆ, ಮಾತಿನ ಬಗ್ಗೆ ತಪ್ಪು ಅನಿಸಿಕೆಗಳು. ಮಾತು ಹೊರಡುವ ಬಗೆ, ಸನ್ನೆ ನುಡಿಗಳು ಹುಟ್ಟುವ ಬಗೆ. ಮಾತು ಜಾಗಕ್ಕೆ ತಕ್ಕಂತೆ ಬದಲಾಗುವ ತೆರ.

ಇದರಲ್ಲಿ ನಂಗೆ ಇಸ್ಟವಾದುದು ಮಕ್ಕಳು ಮಾತನಾಡುವ/ಕಲಿಯುವ ಬಗೆ ಮತ್ತು ಮಿದುಳಿನ ಮಾತು.
ಮಕ್ಕಳು ತಮ್ಮ ಸುತ್ತಮುತ್ತ ಆಡುವ ನುಡಿಯನ್ನ(ಮೊದಲ ನುಡಿ) ಯಾರು ಹೇಳಿ ಕೊಡದಿದ್ದರೂ ತನ್ನಿಂತಾನೆ ಕಲಿಯುವ ಬಗೆ ದಿಟವಾಗಲು ಅಚ್ಚರಿ. ಮಕ್ಕಳು ದಿಟವಾಗಲು ೧೮ ತಿಂಗಳು ತಾಯಿಯ ಬಸಿರಿನಲ್ಲಿರಬೇಕಂತೆ. ಆದರೆ ಮನುಸ್ಯರ ಮಿದುಳು ಬೆಳೆಯುವಿಕೆಯಿಂದ ಅದು ೯ ತಿಂಗಳಿಗೆ ಆಚೆ ಬರಬೇಕಾಗುತ್ತದೆ. ಮನುಸ್ಯನಿಗೂ ಪ್ರಾಣಿಗಳಿಗೂ ಇರುವ ಮುಕ್ಯ ಬೇರೆತನ ಅಂದರೆ ನಮ್ಮ ಮಿದುಳು ಹೆಚ್ಚು ಬಲಿತಿರುವುದು/ಬೆಳೆದಿರುವುದು. ಈ ಮಕ್ಕಳಿಗೆ(ಕಿವುಡ ಮಕ್ಕಳನ್ನು ಬಿಟ್ಟು) ಯಾರು ಏನು ಹೇಳಿಕೊಟ್ಟರೂ ಅದು ಅವರ ಮೇಲೆ ಯಾವ ಪರಿಣಾಮವೂ ಬೀರುವುದಿಲ್ಲವಂತೆ. ಅವರು ತಮ್ಮ ಪಾಡಿಗೆ ಒಂದೊಂದೆ ಮಾತಿನ ಮೆಟ್ಟಿಲುಗಳನ್ನ ಏರುತ್ತಾವೋಗುತ್ತಾರಂತೆ. ಆದರೆ ಈ 'ಪೂರ್ತಿ ಕಿವುಡ ಮಕ್ಕಳು' ಬೇರೆ ಮಕ್ಕಳಂತೆ ಮಾತು ಕಲಿಯಲಾರವು ಯಾಕಂದ್ರೆ ಅವಕ್ಕೆ ಯಾವ ನುಡಿಯು ಕಿವಿಗೆ ಬೀಳುವುದಿಲ್ಲ. ಆದರೆ ಅರೆಕಿವುಡ ಮಕ್ಕಳಿಗೆ ಮಸಿನ್ ಹಾಕಿದ್ರೆ ಆವು ಇತರೆ ಮಕ್ಕಳಂತೆ ಮಾತನ್ನ ೨-೩ ವರುಸದಲ್ಲಿ ಕಲಿಯಬಲ್ಲವು. ಆದರೆ ಪೂರ್ತಿ ಕಿವುಡ ಮಕ್ಕಳಿಗೆ 'ಸನ್ನೆ ನುಡಿ'ಯೇ ಗತಿ. ಈ ಸನ್ನೆ ನುಡಿ ಬೆಳೆಯುವುದು ಕೂಡ ಆ ಕಿವುಡು ಮಗು ಇತರೆ ಕಿವುಡು ಮಕ್ಕಳೊಂದಿಗೆ ಬೆರೆತಾಗ ಮಾತ್ರ. ಇಲ್ಲಂದ್ರೆ ಅವಕ್ಕೆ ಬದುಕಿನುದ್ದಕ್ಕೂ ಮಾತು ಹೊರಡಿಸಲಾಗುವುದಿಲ್ಲವಂತೆ. ಈ ಕಿವುಡು 'ಸನ್ನೆ ನುಡಿ' ಹುಟ್ಟುವುದು ಕೂಡ ಒಂದು ಅಚ್ಚರಿಯೇ. ಅಮೇಲೆ ಅಮೆರಿಕಾದಲ್ಲೆ ಒಂದು ಸನ್ನೆ ನುಡಿಯಾದರೆ ಆಪ್ರಿಕಾದಲ್ಲೆ ಒಂದು ಸನ್ನೆನುಡಿಯಿದೆಯಂತೆ.
.....ಮುಂದುವರೆಯುವುದು