ಬುಧವಾರ, ಜನವರಿ 23, 2013

ಕನ್ನಡ, ಇರ್ನುಡಿತನ ಮತ್ತು ಕೂಡಣ

ಇತ್ತೀಚಿನ ದಿನಗಳಲ್ಲಿ ಮಂದಿಯ ಇರ್ನುಡಿತನದಲ್ಲಿರುವ  ಹೆಚ್ಚುಗಾರಿಕೆಯ ಬಗ್ಗೆ ಮಾತನಾಡಲಾಗುತ್ತಿದೆ ಯಾಕಂದರೆ ಇರ್ನುಡಿತನದಿಂದ ಮಂದಿಯ ಅರಿವಿನ ಮತ್ತು ಕಲಿಯುವ ಚಳಕಗಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ ಎಂಬುದನ್ನು ಅರಕೆಗಳ ಮೂಲಕ ತೋರಿಸಿಕೊಡಲಾಗಿದೆ. ಹಾಗಾಗಿ ಇರ್ನುಡಿತನವು ಕಲಿಯುವ ಮಕ್ಕಳಿಗೆ ಒಳ್ಳೆಯದು ಎಂದು ತೀರ್ಮಾನಿಸಲಾಗಿದೆ. ಮಿಂಬಲೆಯಲ್ಲಿ ಹುಡುಕಿದರೆ ಇದರ ಬಗ್ಗೆ ಹೆಚ್ಚಿನ ತಿಳಿವು ಸಿಗುತ್ತದೆ.

      ಆದರೆ ದಿಟವಾಗಲೂ ಯಾವುದೇ ಒಂದು ಕೂಡಣದಲ್ಲಿ ಸಂಪೂರ್ಣವಾಗಿ ಇರ್ನುಡಿತನದ ಪರಿಸರವು ಇರುವುದಿಲ್ಲ. ಒಂದು ಕೂಡಣದಲ್ಲಿ ಅಂದರೆ ಕನ್ನಡದಂತಹ(ಕರ್ನಾಟಕದಂತಹ) ಕೂಡಣದಲ್ಲಿ ಎಲ್ಲರೂ ಇರ್ನುಡಿಗರಾಗಿರುವುದಿಲ್ಲ. ಹಾಗೆ ಎಲ್ಲರೂ ಇರ್ನುಡಿಗರಾಗಬೇಕೆಂದು ನಾವು ಬಯಸುವುದು ಕೂಡ ತಪ್ಪಾಗುತ್ತದೆ ಯಾಕಂದರೆ ಯಾರೇ ಆದರೂ ಇರ್ನುಡಿಗರಾಗಬೇಕಾದರೆ ಎರಡನೇ ನುಡಿಯ ಪರಿಸರ ಬೇಕಾಗುತ್ತದೆ. ಎಲ್ಲರಿಗೂ ಇರ್ನುಡಿಯ ಪರಿಸರ ಇರುವುದಿಲ್ಲ. ಒಂದು ಊಹೆಯ ಪ್ರಕಾರ ಕನ್ನಡದಲ್ಲಿ ಇರ್ನುಡಿತನವು ಹೀಗೆ ಇರಬಹುದು.

ಕನ್ನಡದ ಕೂಡಣ

ಚಿತ್ರದಲ್ಲಿ ಕಾಣುವಂತೆ ಕನ್ನಡದ ಕೂಡಣವನ್ನು ಎರಡು ಪದರಗಳಲ್ಲಿ ತೋರಿಸಲಾಗಿದೆ. ಹೊರಪದರದಲ್ಲಿ ಇರ್ನುಡಿತನವಿದೆ ಅಂದರೆ ಕನ್ನಡಿಗರಲ್ಲಿ ಕೆಲವು ಮಂದಿ ಮಾತ್ರ ಕನ್ನಡ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ನುಡಿಚಳಕವನ್ನು ಹೊಂದಿದ್ದಾರೆ. ಆದರೆ ಹಲವು ಮಂದಿ ಇನ್ನು ಒರ್ನುಡಿಗರಾಗಿಯೇ ಉಳಿದಿದ್ದಾರೆ. ಇಲ್ಲಿ ಒರ್ನುಡಿಗರ(ಕನ್ನಡವೊಂದನ್ನೇ ಓದಿ, ಬರೆದು, ಮಾತನಾಡಬಲ್ಲವರು) ಮತ್ತು ಇರ್ನುಡಿಗರ(ಕನ್ನಡ ಮತ್ತು ಇಂಗ್ಲಿಶ್ ಎರಡನ್ನೂ ಓದಿ, ಬರೆದು, ಮಾತನಾಡಬಲ್ಲವರು)ಎಣಿಕೆ ಎಶ್ಟೆಶ್ಟಿದೆ ಎಂದು ನಿಶ್ಚಿತವಾಗಿ ಹೇಳಲಾಗದಿದ್ದರೂ  ಒರ್ನುಡಿಗರ ಎಣಿಕೆ ಇರ್ನುಡಿಗರ ಎಣಿಕೆಗಿಂತ ತುಂಬ ಹೆಚ್ಚಿದೆ ಎಂದು ನಿಶ್ಚಿತವಾಗಿ ಹೇಳಬಹುದು. ಕನ್ನಡದ ಕೂಡಣದಲ್ಲಿ ಇನ್ನು ಹಲವು ನುಡಿಗಳು (ತುಳು, ಕೊಂಕಣಿ ಇತರೆ) ಇದ್ದರೂ ಕರ್ನಾಟಕದಲ್ಲಿ ಕಲಿಕೆಯ ಒಯ್ಯುಗೆಯಾಗಿ ಹೆಚ್ಚಾಗಿ ಕನ್ನಡ ಮತ್ತು ಅದನ್ನು ಬಿಟ್ಟರೆ ಇಂಗ್ಲಿಶ್ ನುಡಿಯನ್ನು ಬಳಸಲಾಗುತ್ತಿದೆ. ಹಾಗಾಗಿ ಈ ಬರಹದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡು ನುಡಿಗಳನ್ನು ಮಾತ್ರ ಪರಿಗಣಿಸಲಾಗಿದೆ. 
        ಮೇಲೆ ತೋರಿಸಿದಂತೆ ಕನ್ನಡದ ಕೂಡಣದಲ್ಲಿ ಇರ್ನುಡಿತನದ ಒತ್ತರ ಕಡಿಮೆ ಇರುವಾಗ ಹೆಚ್ಚಿನ ಕನ್ನಡಿಗರ (ಒರ್ನುಡಿಗರ) ಅರಿಮೆ ಮತ್ತು ಚಳಕಗಳು ಮೇಲ್ಮೆಯನ್ನು ಪಡೆಯಲಾರದು ಎಂದು ಹೇಳುವವರು ಇದ್ದಾರೆ. ಅದು ದಿಟವಾದರೆ ಕನ್ನಡದ ಕೂಡಣವನ್ನು ಒಮ್ಮಿಂದೊಮ್ಮೆಗೆ ಇರ್ನುಡಿತನದೆಡೆಗೆ ಕೊಂಡೊಯ್ಯಬೇಕೆ? ಇದಕ್ಕೆ ಬಗೆಹರಿಕೆಗಳೇನು?  ಎಂಬ ಕೇಳ್ವಿಯು ನಮ್ಮ ಮುಂದೆ ಬರುತ್ತದೆ.
       ಎಲ್ಲ ಕಡೆಗಳಿಂದ ಅಳೆದು, ತೂಗಿ ನೋಡಿದರೂ ಎಲ್ಲ ಕನ್ನಡಿಗರು ಸಂಪೂರ್ಣವಾಗಿ ಒರ್ನುಡಿಗರಾಗಿಯೇ ಉಳಿಯಬೇಕಾಗಿಲ್ಲ ಇಲ್ಲವೆ ಎಲ್ಲರೂ ಇರ್ನುಡಿಗರಾಗಬೇಕಾಗಿಯೂ ಇಲ್ಲ ಯಾಕಂದರೆ ಎರಡೂ ಕೂಡ ವಿರುದ್ದ ದಿಕ್ಕಿನಲ್ಲಿ ವಿಪರೀತ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುತ್ತವೆಯತ್ತ ಹೊರತು ಒಂದು ಸಮನ್ವಯ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲ. ಈ ಸಮನ್ವಯ ಸ್ತಿತಿಯಿಂದ ಮಾತ್ರ ಕೂಡಣದ ಏಳಿಗೆ ಸಾದ್ಯ ಎಂಬುದನ್ನು ಇಲ್ಲಿ ಮನಗಾಣಬಹುದಾಗಿದೆ.
       ಹಾಗಾದರೆ ಇಂತಹ ಸಮನ್ವಯ ಸ್ತಿತಿಯತ್ತ ಕನ್ನಡದ ಕೂಡಣವನ್ನು ಕೊಂಡೂಯ್ಯುವುದು ಹೇಗೆ? - ಇದಕ್ಕೆ ಉತ್ತರ ಹೀಗಿದೆ- ಕನ್ನಡದ ಕೂಡಣವನ್ನು ಒಂದು ಸಮನ್ವಯ ಸ್ತಿತಿಯತ್ತ ಕೊಂಡೊಯ್ಯಲು ಒರ್ನುಡಿಗರ ಏಳಿಗೆಗೆ ಬೇಕಾದ ಎಲ್ಲ ಅರಿಮೆಗಳು ಕನ್ನಡದಲ್ಲಿಯೇ ದೊರಯುವಂತಾಗಬೇಕು ಯಾಕಂದರೆ ಒರ್ನುಡಿಗರ ಕಲಿಕೆಯು ಕನ್ನಡದಲ್ಲಿಯೇ ಆಗುತ್ತಿರುತ್ತದೆ. ಒರ್ನುಡಿಗರಿಗೆ ಕನ್ನಡದಲ್ಲಿ ಕಲಿಕೆ ಆದರೇನೆ ಅವರ ಕಲಿಕೆ ಚೆನ್ನಾಗಿ ನಡೆಯಬಲ್ಲುದು. ಕನ್ನಡದಲ್ಲೇ ಎಲ್ಲ ಅರಿಮೆಗಳು ದೊರೆಯಬೇಕಾದರೆ ಇರ್ನುಡಿಗರ ಮೇಲೆ ಕೆಲವು ಹೊಣೆಗಾರಿಕೆಗಳು ಬೀಳುತ್ತವೆ. ಇರ್ನುಡಿಗರು ತಮ್ಮ ಚಳಕಗಳನ್ನು ಬಳಸಿಕೊಂಡು ಇಂಗ್ಲಿಶಿನಲ್ಲಿರುವ ಎಲ್ಲ ಅರಿಮೆಗಳನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಇದನ್ನು ಒರ್ನುಡಿಗರು ಬಳಸಿಕೊಂಡು ತಮ್ಮ ಅರಿವನ್ನು ಮತ್ತು ಮಾಡುಗತನವನ್ನು ಹೆಚ್ಚಿಸಿಕೊಂಡು ಅದನ್ನು ಕಲಿಕೆಯಲ್ಲಿ ಮತ್ತು ದುಡಿಮೆಯಲ್ಲಿ ಬಳಸಿಕೊಳ್ಳಬಹುದು. ಇದಲ್ಲದೆ ಒರ್ನುಡಿಗರು ತಮ್ಮ ಕಲಿಕೆಯಲ್ಲಿ ಇಲ್ಲವೆ ದುಡಿಮೆಯಲ್ಲಿ ಪಡೆದ ’ಕಂಡುಕೊಳ್ಳುವಿಕೆ’ಗಳನ್ನು ಪ್ರಪಂಚಕ್ಕೆ ಮುಟ್ಟಿಸಲು ಇರ್ನುಡಿಗರ ನೆರವನ್ನು ಪಡೆದುಕೊಳ್ಳಬಹುದು. ಹೀಗೆ ಅವರು ತಮ್ಮ ಒರ್ನುಡಿತನವನ್ನು ಉಳಿಸಿಕೊಂಡು  ಇರ್ನುಡಿತನದ ಇಲ್ಲದಿರುವ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇದು ಚೆನ್ನಾಗಿ ನಡೆಯಲು ಇರ್ನುಡಿಗರ ಮತ್ತು ಒರ್ನುಡಿಗರ ನಡುವೆ ಪಾಲುದಾರಿಕೆ ಏರ್ಪಡಬೇಕಾಗುತ್ತದೆ. ಸರ್ಕಾರದವರು ಇಲ್ಲವೆ ಕಾಸಗಿ ಸಂಗ/ಸಂಸ್ತೆಗಳು ಈ ಪಾಲುದಾರಿಕೆ ಏರ್ಪಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಪಾಲುದಾರಿಕೆಯು ಕನ್ನಡದ ಕೂಡಣದ ಒಳಗೆಯೇ ನಡೆಯುವುದರಿಂದ ಇದು ಪರಿಣಾಮಕಾರಿಯಾಗಬಲ್ಲುದು ಯಾಕಂದರೆ ಕನ್ನಡದ ಕೂಡಣದ ಒಳಗೆಯೇ ಒಗ್ಗಟ್ಟನ್ನು ಸಾದಿಸುವುದು ಅಶ್ಟು ಕಶ್ಟವಲ್ಲ. ಕನ್ನಡದ ಕೂಡಣವನ್ನು ಹಿಡಿದಿಟ್ಟಿರುವುದು ’ಕನ್ನಡ’ ನುಡಿಯೇ ಅಲ್ಲವೆ?
      ಒರ್ನುಡಿತನವೂ ಬೇಕು , ಇರ್ನುಡಿತನವೂ ಬೇಕು ಆದರೆ ಒರ್ನುಡಿತನಕ್ಕೆ ಇಂಬು ಕೊಡುವಂತೆ ಇರ್ನುಡಿತನ ಇರಬೇಕೇ ಹೊರತು ಒರ್ನುಡಿತನವನ್ನು ನುಂಗಿಹಾಕುವ ಇರ್ನುಡಿತನವು ಕಂಡಿತ ಕನ್ನಡದ ಕೂಡಣಕ್ಕೆ ಬೇಡ ಅಂದರೆ ಕನ್ನಡವನ್ನು ನುಂಗಿ ಹಾಕುವಶ್ಟರ ಮಟ್ಟಿಗೆ ಇಂಗ್ಲಿಶಿನ ಅವಶ್ಯಕತೆ ಕನ್ನಡದ ಕೂಡಣಕ್ಕಿಲ್ಲ.

ಪದಪಟ್ಟಿ
ಒರ್ನುಡಿತನ - Monolingualism
ಇರ್ನುಡಿತನ - Bilingualism
ಒಯ್ಯುಗೆ      - Medium
ಮಿಂಬಲೆ     - Internet
ಕೂಡಣ      - Society

ಶುಕ್ರವಾರ, ಜನವರಿ 18, 2013

’ವ್’ ಮುಚ್ಚುಲಿಯ ಬೀಳುವಿಕೆ


ಆಡುಗನ್ನಡದಲ್ಲಿ ’ವ’ ಇಂದ ಸುರುವಾಗುವ ಪದಗಳಲ್ಲಿ ಒಂದು ಉಲಿಯೊಲವನ್ನು ಗಮನಿಸಿಬಹುದು. ಇಲ್ಲಿ ’ವ’ಇಂದ ಸುರುವಾಗುವ ಕೆಲವು ಪದಗಳನ್ನು ಕೊಡಲಾಗಿದೆ.

ಬರಹಗನ್ನಡ  ಆಡುಗನ್ನಡ              ಬಿಡಿಸಿಕೆ
ವಿರೋದ         ಇರೋದ              ವ್+ಇ           (’ವ್’ ಬೀಳುವಿಕೆ ಆಗಿದೆ)
 ವೀರ             ಈರ                   ವ್+ಈ             (’ವ್’ ಬೀಳುವಿಕೆ ಆಗಿದೆ)
 ವೆಟ್ಟೆ             ಎಟ್ಟೆ(ಯೆಟ್ಟೆ)            ವ್+ಎ           ( ’ವ್’ ಬೀಳುವಿಕೆ ಆಗಿದೆ)
(Heat)     
 ವೆಂಕಟ         ಎಂಕಟ(ಯಂಕಟ)       ವ್+ಎ         (’ವ್’ ಬೀಳುವಿಕೆ ಆಗಿದೆ)
ವೇಶ             ಏಸ(ಯಾಸ)            ವ್+ಏ           (’ವ್’ ಬೀಳುವಿಕೆ ಆಗಿದೆ)

ಈ ಮೇಲಿನ ಪದಗಳಲ್ಲಿನ ಬಿಡಿಸಿಕೆ ನೋಡಿದಾಗ ’ವ್’ ಎಂಬ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ ಸೇರಿ ವಿ, ವೀ, ವೆ, ವೇ ಎಂಬ ’ಉಲಿಕಂತೆ’ಗಳುಂಟಾಗಿದೆ. ಹಾಗಾಗಿ ’ವ್’ಬೀಳುವಿಕೆಗೂ ಮತ್ತು ಅದರ ಮುಂದಿರುವ ತೆರೆಯುಲಿಗೂ ನಂಟಿದೆ ಎಂದು ಹೇಳಬಹುದು.

ಉಲಿಯೊಲವಿನ ಹೇಳಿಕೆ: 
       "ಯಾವಾಗ ’ವ್’ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ(ಇ, ಈ, ಎ, ಏ) ಸೇರಿಕೆಯಾಗುವುದೋ ಆಗ ಆಡುಗನ್ನಡದಲ್ಲಿ ’ವ್’ ಮುಚ್ಚುಲಿಯು ಬಿದ್ದು ಹೋಗುತ್ತದೆ’

ಬರಹಗನ್ನಡ     ಆಡುಗನ್ನಡ           ಬಿಡಿಸಿಕೆ
೧ ವರಸೆ           ವರಸೆ                  ವ್+ಅ        (’ವ್’ ಬೀಳುವಿಕೆ ಆಗಿಲ್ಲ)
೨ ವಾಲು           ಓಲು                   ವ್+ಆ        (’ವ್’ ಬೀಳುವಿಕೆ ಆಗಿಲ್ಲ)
೩ ವೊಲ್           ಒಲ್                   ವ್+ಒ        (’ವ್’ ಬೀಳುವಿಕೆ ಆಗಿಲ್ಲ)
೪ ವೋಮ         ಓಮ                   ವ್+ಓ        (’ವ್’ ಬೀಳುವಿಕೆ ಆಗಿಲ್ಲ)
 (weed)

ಮೇಲಿನ ’ವ್’ ಎಂಬ ಮುಚ್ಚುಲಿಯು ’ವ್’ ಗುಂಪಿನ ತೆರೆಯುಲಿಗಳೊಂದಿಗೆ(ಅ,ಆ,ಒ,ಓ) ಸೇರಿಕೆಯಾಗಿ ಉಲಿಕಂತೆಗಳುಂಟಾಗಿವೆ.

೩, ೪ ರಲ್ಲಿ  ವೊ->ಒ, ವೋ->ಓ ಎಂಬ ಎತ್ತುಗೆಯನ್ನು ನೋಡಿದಾಗ ಅಲ್ಲಿ ’ವ್’ಮುಚ್ಚುಲಿಯ ಬೀಳುವಿಕೆಯಾಗಿರುವಂತೆ ಕಂಡರೂ ಅಲ್ಲಿ ದಿಟವಾಗಲೂ ಬೀಳುವಿಕೆಯಾಗಿಲ್ಲ. ಬದಲಾಗಿ  ಒ ಮತ್ತು ಓ ’ವ್’ ಗುಂಪಿನ ತೆರೆಯುಲಿಗಳೇ ಆಗಿರುವುದರಿಂದ ಒಂದರ ಬದಲು ಬೇರೊಂದು(ಒ<->ವ, ಓ<->ವೋ(ವಾ)) ಬದಲಾಗುವುದು ಇತರ ಕನ್ನಡದ ಪದಗಳಲ್ಲೂ ಕಾಣಬಹುದು

ಓಟ <->ವಾಟ
ಒತ್ತು <->ವತ್ತು (ವೊತ್ತು)
ಓಲೆ <->ವಾಲೆ

ತಿರುಳು:  ಕನ್ನಡ ಉಲಿಯೊಲವನ್ನು ಗುರುತಿಸುವ ಮತ್ತು ಅದರ ಬಗ್ಗೆ ಬಿಡಿನೋಟಗಳನ್ನು ಬರೆದಿಡಬೇಕಾಗಿದೆ. ಅಂತಹ ಮೊಗಸಿನಲ್ಲಿ ಈ ಮೇಲಿನ ’ವ್’ ಮುಚ್ಚುಲಿಯ ಬೀಳುವಿಕೆಯನ್ನು ವಿವರಿಸಲಾಗಿದೆ.

ಬುಧವಾರ, ಅಕ್ಟೋಬರ್ 24, 2012

ಹೊಸಗನ್ನಡದಲ್ಲಿ ಮೂಗುಲಿಯ ಬೀಳುವಿಕೆ

ಯಾವುದೆ ಪದದಲ್ಲಿ ಎರಡನೇ ಮುಚ್ಚುಲಿಯಾಗಿ ಮೂಗುಲಿ ಬಂದಿದ್ದರೆ ಮತ್ತು ಅದಕ್ಕೆ ಮುನ್ನ ಉದ್ದ ತೆರೆಯುಲಿ ಇದ್ದರೆ ಆಗ ಹೊಸಗನ್ನಡದಲ್ಲಿ ಆ ಮೂಗುಲಿ ಬಿದ್ದು ಹೋಗಿದೆ. ಅಂದರೆ ’ಮುಉತೆಮೂಮುತೆ’ ಮಾದರಿಯ ಪದಗಳಲ್ಲಿ ಮೂಗುಲಿ ಬಿದ್ದು ಹೋಗಿದೆ. ಅಂದರೆ ಅದು ’ಮುಉತೆಮುತೆಮಾದರಿಯ ಪದವಾಗಿ ಮಾರ್ಪಾಡಾಗಿದೆ

ಮು= ಮುಚ್ಚುಲಿ(ವ್ಯಂಜನ, consonant)
ಉತೆ = ಉದ್ದ ತೆರೆಯುಲಿ(ದೀರ್ಗ ಸ್ವರ, long vowel)
ಮೂ= ಮೂಗುಲಿ (ಅನುನಾಸಿಕ, nasal)

ಎತ್ತುಗೆಗಳು:-
ಮುಉತೆಮೂಮುತೆ                     => ಮುಉತೆಮುತೆ
೧. ಸೋಂಕು = ಸ್+ಓ+೦+ಕ್+ಉ => ಸೋಕು
೨. ನಾಂಟು = ನ್+ಆ+ಣ್+ಟ್+ಉ => ನಾಟು
೩. ನಾಂಚು = ನ್+ಆ+ಣ್+ಚ್+ಉ => ನಾಚು
೪. ನಾಂದು = ನ್+ಆ+ನ್+ದ್+ಉ => ನಾದು
೫. ನೂಂಕು = ನ್+ಊ+೦+ಕ್+ಉ => ನೂಕು
೬. ದಾಂಟು = ದ್+ಆ+ಣ್+ಟ್+ಉ => ದಾಟು
೭. ದೂಂಟು = ದ್+ಊ+ಣ್+ಟ್+ಉ=> ದೂಟು , ದೂಡು
೮. ಮೀಂಟು = ಮ್+ಈ+ಣ್+ಟ್+ಉ=> ಮೀಟು
೯. ಮೂಂಗ = ಮ್+ಊ+೦+ಗ್+ಅ => ಮೂಗ
೧೦. ತಾಂಗು = ತ್+ಆ+೦+ಗ್+ಉ => ತಾಗು

ಆದರೆ ಮೂಗುಲಿಯನ್ನು ಬಿಡುವ ಮಾರ್ಪಾಡಿಗೆ ಒಳಗಾಗದ ಪದಗಳು ಹೊಸಗನ್ನಡದಲ್ಲಿ ಅಶ್ಟು ದಿನಬಳಕೆಗೆ ಬರದೇ ಹೋಯಿತು.

ಎತ್ತುಗೆಗೆ:

೧. ನೋಂಪು(ವ್ರತ) = ನ್+ಓ+ಮ್+ಪ್+ಉ.... ಹೆಚ್ಚು ಬಳಕೆಯಲ್ಲಿದ್ದರೆ ಇದೂ ಕೂಡ ನೋಪು ಆಗುತ್ತಿತ್ತೇನೊ ?!
೨. ಮಾಂಜು(heal) = ಮ್+ಆ+೦+ಜ್+ಉ
೩. ಪಾಂಗು (manner, form, shape, likeness)
೪. ಪಾಂಬೆ, ಪಾಣ್ಬೆ (ಕುಣಿತಗಾರ್ತಿ)

ಬುಧವಾರ, ಅಕ್ಟೋಬರ್ 17, 2012

ಲಿಪಿ ಸುದಾರಣೆಯ ಗುರಿಗಳು ಮತ್ತು ಜಾರಿಗೆ ತರುವುದು

ಲಿಪಿ ಸುದಾರಣೆಯ ಗುರಿಗಳು :-

೧. ಮಹಾಪ್ರಾಣವನ್ನು ಇಲ್ಲಗೊಳಿಸುವುದಲ್ಲ. ಬದಲಾಗಿ ಕನ್ನಡ ಸಮಾಜದಲ್ಲಿ ಬಿತ್ತಲಾದ ಮಹಾಪ್ರಾಣದ ಬಗೆಗಿನ 'ಸುಳ್ಳು ಮೇಲರಿಮೆ'ಯನ್ನು ಹೋಗಲಾಡಿಸುವುದು. ಅದಕ್ಕಾಗಿ ಹೆಚ್ಚು ಹೆಚ್ಚು ಬರಹಗಳು ಮಹಾಪ್ರಾಣವಿಲ್ಲದೇ ಬರಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಮಂದಿಯು ಮಹಾಪ್ರಾಣ ಇಲ್ಲದೆ ಬರೆಯಬೇಕಾಗಿದೆ. ಏಕೆ ಹಾಗೆ ಬರೆಯಬೇಕು ಎಂಬುದರ ಬಗ್ಗೆ ಈಗಾಗಲೆ ಶಂಕರಬಟ್ಟರ ಹೊತ್ತಿಗೆಗಳಲ್ಲಿ ಮತ್ತು ಈ ಮಿಂಬರಹದಲ್ಲೂ ಕೂಡ ಹೇಳಲಾಗಿದೆ. 
 
೨. (೧) ರಲ್ಲಿ ಹೇಳಿರುವುದು ಷ, ವಿಸರ್ಗ(ಃ) ಗಳಿಗೂ ಒಪ್ಪುವುದು 
 
೩. ೧ ಮತ್ತು ೨ ಮಾಡುವುದರಿಂದ ೯೦% ಕನ್ನಡಿಗರಲ್ಲಿ ನಾವು ಕೀಳರಿಮೆಯನ್ನು ಹೋಗಲಾಡಿಸಬಹುದು. ಅಲ್ಲದೆ ಇವರನ್ನು ಹೆಚ್ಚು ಹೆಚ್ಚು ಬರಹದೆಡೆಗೆ ಸೆಳೆಯಬಹುದು. ಬರಹದ ಕಡೆಗೆ ಸೆಳೆದಾಗ ಅವರೇ ಮುಂದೆ ಚಿಂತನೆಯನ್ನು ಮಾಡಬಲ್ಲವರಾಗುತ್ತಾರೆ. ಚಿಂತನೆಯಿಂದ ಅವರು ತಮ್ಮ ಏಳಿಗೆಯ ದಾರಿಯನ್ನು ಕಂಡುಕೊಳ್ಳಬಲ್ಲರು. ಲಿಪಿಸುದಾರಣೆಯಿಂದ ಬರಹ ಗೊತ್ತಿಲ್ಲದವರ ಇಲ್ಲವೆ ಬರಹದಿಂದ ದೂರವುಳಿದವರ ಇಲ್ಲವೆ ಬರಹವನ್ನು ಚೆನ್ನಾಗಿ ತಿಳಿಯದವರಲ್ಲಿ ಒಂದು ದೊಡ್ಡ ಮಟ್ಟದ ಮಾರ್ಪಾಡು ಅಗಬಲ್ಲುದು ಎಂಬುದೇ ಇಲ್ಲಿ ಮುಕ್ಯ ಗುರಿ. ಹಲಜನರ ಏಳಿಗೆಯೇ ಮಂದಿಯಾಳ್ವಿಕೆಯ ಮುಕ್ಯ ಗುರಿ.
 
ಲಿಪಿಸುದಾರಣೆಯನ್ನು ಜಾರಿಗೆ ತರುವುದರ ಬಗ್ಗೆ:-
 
೧.ಲಿಪಿಸುದಾರಣೆಗೆ ತರುವುದು ತುಂಬ ಸುಲಬವಾಗಿದೆ ಯಾಕಂದರೆ ಇಲ್ಲಿ ಆಗಬೇಕಿರುವುದು ಬರಿಗೆಗಳನ್ನು ಬಿಡಬೇಕಾಗಿರುವುದು. ಇಲ್ಲಿ ಹೊಸದಾಗಿ ಕಲಿಯುವುದು ಏನೂ ಇಲ್ಲ. ಆಗಬೇಕಿರುವುದೆಲ್ಲ ಬರೀ ಬರಿಗೆಗಳನ್ನು ಬರಹದಿಂದ ಬಿಡಬೇಕಾಗಿರುವುದು. 
 
೨.  ಕೆಲವರಲ್ಲಿ ಲಿಪಿಸುದಾರಣೆಯನ್ನು ಬಿಟ್ಟು ಪದಕಟ್ಟಣೆಯನ್ನು ಮಾಡಬಹುದು ಎಂಬ ನಿಲುವು ಇದೆ. ಪದಕಟ್ಟಣೆ ಆಗಬೇಕಾಗಿರುವುದು ಅರಿಮೆಯ ಪದಗಳಿಗೆ ಮತ್ತು ಯಾವುದೇ ಹೊರನುಡಿಯ ಪದವಿರಲಿ ಈಗಾಗಲೆ ಕನ್ನಡಿಗರ ನಾಲಿಗೆಯು ಅದನ್ನು ಕನ್ನಡಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಹೊಸಗಾಲದ ಅರಿಮೆಯ ನೆಲೆಯಲ್ಲಿ ಪದಕಟ್ಟಣೆ ಇಲ್ಲವೆ ಕನ್ನಡದ್ದೇ ಆದ ಪದಗಳನ್ನು ಉಂಟು ಮಾಡುವ ಕೆಲಸ ಕೆಲವೇ ಕನ್ನಡಿಗರಿಂದ ಅಗಬೇಕಾಗಿದೆ. ಇದರಲ್ಲಿ ಎಲ್ಲ ಕನ್ನಡಿಗರೂ ಕೊಡುಗೆಯನ್ನು ನೀಡಲಾರರು. ಉಳಿದ ಕನ್ನಡಿಗರು ಆ ಪದಗಳ ಬಳಕೆದಾರರು ಆಗಲು ಮಾತ್ರ ಸಾದ್ಯ ಆದರೆ ಲಿಪಿಸುದಾರಣೆ ಎಂಬುದು ಎಲ್ಲ ಕನ್ನಡಿಗರನ್ನು ನೇರವಾಗಿ ತಲುಪುವುದು. 'ಹೊಸಬರಹ'ದಲ್ಲಿ ಬರೆಯುವಾಗ ಹೆಚ್ಚು ಮಂದಿಗೆ ಒಂದು ತೆರನಾದ ಸರಪಳಿಯಿಂದ ಬಿಡಿಸಿದಂತೆ ಆಗುವುದು. ಹಾಗಾಗಿ, ಹೆಚ್ಚಿನ ಮಂದಿಯ ಒಳಿತನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇಲ್ಲಿ ಲಿಪಿಸುದಾರಣೆಯೇ ಮುಕ್ಯವಾಗಿ ಮತ್ತು ಬೇಗ ನಡೆಯಬೇಕಿರುವ ಕೆಲಸ ಎಂದು ನಮಗೆ ತಿಳಿಯುತ್ತದೆ. 

ಲಿಪಿ ಸುದಾರಣೆ ಎಂಬುದು ಸೊಲ್ಲರಿಮೆ ಇಲ್ಲವೆ ನುಡಿಯರಿಮೆಯಿಂದ ಬಂದ ಕಂಡುಕೊಳ್ಳುವಿಕೆಯಲ್ಲ, ಬದಲಾಗಿ ಕೂಡಣದರಿಮೆ( Sociology)ಯಿಂದ ದೊರೆತ ಕಂಡುಕೊಳ್ಳುವಿಕೆ. ಹಾಗಾಗಿ ಕೂಡಣವು (ಸಮಾಜವು) ಲಿಪಿ ಸುದಾರಣೆಯನ್ನು ಒಪ್ಪಿದರೆ ಆ ಕೂಡಣಕ್ಕೇ ಒಳಿತು.

ಶುಕ್ರವಾರ, ಅಕ್ಟೋಬರ್ 12, 2012

ಹಿಂಗೇರಿಯ ಹುಡುಗರ ಹಾಡು


ಇದು ಇಂಗ್ಲಿಶಿನ ಹಿಂಗೇರಿಯ ಹುಡುಗರ(Backstreet boys) ಹಾಡು. ಇದರ ಬೇರು ಇಂಗ್ಲಿಶ್ ಹಾಡು ಇಲ್ಲಿದೆ

ಒಂಟಿತನವೆಂದರೆ ಏನಂತ ತೋರೆನಗೆ
   ಒಡೆದ ಗುಂಡಿಗೆಗೆ ಹಲವು ಒರೆಗಳು
     ಈ ಕೆನ್ನೊಲವಿನಲ್ಲಿ ನೋಡಲಾರೆ
             ಉಸಿರಾಡಲಾರೆ
ಬಾ ನನ್ನೊಂದಿಗೆ ನಡೆ, ನೋಡೋಣ
ಇರುಳಿನ ಸೊಡರುಗಳು ಬಲುಬೇಗನೆ
  ಅಗುವವೇ ನೇಸರನ ಕದಿರುಗಳು
            ನನ್ನ ತಣಿಸಲು
ನಿನ್ನೆಲ್ಲ ಬಯಕೆಗಳು ಈಡೇರುವವು
       ಅಂತ ಅವು ಹೇಳುತಿವೆ

ಒಂಟಿತನವೆಂದರೆ ಏನಂತ ಹೇಳು ನನಗೆ
    ಈ ಅನಿಸಿನಲ್ಲೇ ನಡೆಯಲೇ?
 ನೀನಿರುವೆಡೆ ನಾನೇಕೆ ಇರಲಾರೆ
 ಎನ್ನೆದೆಯಲೇನೊ ಕಳೆದುಹೋಗಿದೆ.

ಕೊನೆಗೊಳ್ಳದೀ ಬದುಕು ಸಾಗುತ್ತಿರುವುದು
ಕಲ್ಲುಗಳ ಕಣ್ಣು ಗಮನಿಸುತ್ತಿದೆ ತಿರುವುಗಳ
ಎವೆಯಿಕ್ಕದ ನೋಡುತ್ತಿದೆ ಹೇಳದೆ ಏನನ್ನೂ
ಕೊನೆಯಿಲ್ಲದ ಒಲವಿಗೆ ತಪ್ಪರಿವಿನ ದಾರಿಗಳು
            ಅಂಕೆಯಿಲ್ಲ ಈ ಬಾಳಿಗೆ
        ನೀ ಎನ್ನ ಜೊತೆಗಿರುವಿಯಾ?
    ನಿನ್ನೆಲ್ಲ ಬಯಕೆಗಳು ಈಡೇರುವವು
           ಅಂತ ಅವು ಹೇಳುತಿವೆ

ಎನ್ನ ತನ್ಮೆಯೆದೆ ಮಯ್ ಒಪ್ಪಿಸಲು
       ಎಲ್ಲಿಗೂ ಓಡಲಾರೆ
   ಹೋಗುವುದಕ್ಕೆ ಊರಿಲ್ಲ
ನಿನಗೆ ತಿಳಿಯದ ನಾನ್ ಹೇಗೆ
          ಅನುಬವಿಸಲಿ

ಎನ್ನೆದೆಯಿಂದ ಕಳೆದುಹೋದೆ ಎಲ್ಲಿಗೆ
    ಅಲ್ಲಿಗೇಕೆ ಬರಲಾರೆ ನಾನು

ಮಂಗಳವಾರ, ಅಕ್ಟೋಬರ್ 09, 2012

ಲಿಪಿ ಸುದಾರಣೆ ಮತ್ತು ಕೂಡಣದಲ್ಲಿ ಸಾಟಿತನ (equality in Society)

                                     
ಹಿರಿಯ ನುಡಿಯರಿಗರಾದ ಡಾ| ಡಿ.ಎನ್.ಶಂಕರಬಟ್ಟರ ’ಕನ್ನಡ ಲಿಪಿ ಸುದಾರಣೆ’ಯ ಬಗ್ಗೆ ಚರ್ಚೆಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ನುಡಿಯರಿಮೆಯ,ಸೊಲ್ಲರಿಮೆಯ ಮತ್ತು ಕೂಡಣದರಿಮೆಯ ಹಲವು ಕಾರಣಗಳನ್ನು ಕೊಟ್ಟು ಅವರು ಈಗಿರುವ ಕನ್ನಡದ ಲಿಪಿಯಲ್ಲಿರುವ ಮಹಾಪ್ರಾಣಗಳು, ಐ, ಔ, ವಿಸರ್ಗ(ಅಃ) ಮತ್ತು ಷ ಎಂಬ ಬರಿಗೆಗಳು ಬೇಕಾಗಿಲ್ಲವೆಂದು, ಅವನ್ನು ಕಯ್ಬಿಡುವುದೇ ಕನ್ನಡಕ್ಕೆ ಸರಿಯಾದ ದಾರಿ ಎಂದು ಹೇಳಿದ್ದಾರೆ. ಕೂಡಣದರಿಮೆಯ(sociology) ಕಣ್ಣಿನಿಂದ ನೋಡಿದರೆ ಇದು ಇನ್ನು ಹೆಚ್ಚು ಹೆಚ್ಚು ಸರಿಯೆನಿಸುತ್ತದೆ ಯಾಕಂದರೆ ಹೆಚ್ಚಿನ ಮಂದಿಯ ನಾಲಿಗೆಯಲ್ಲಿ ಈ ಮೇಲಿನ ಬರಿಗೆಗಳು ಬರುವುದೇ ಇಲ್ಲ. ಮಂದಿಯಾಳ್ವಿಕೆಯ ಪರ್ವಕಾಲದಲ್ಲಿರುವಾಗ ಹೆಚ್ಚಿನ ಮಂದಿಗೆ ತಕ್ಕಂತೆ ಕೂಡಣದಲ್ಲಿ ಕಲಿಕೆ, ಕೆಲಸ ಮತ್ತು ಕಟ್ಟಲೆಗಳು ಎಂಬ ಇನ್ನಿತರ ಏರ್ಪಾಟುಗಳು ಇರಬೇಕು. ಇದರಲ್ಲಿ ಬಲು ಮುಕ್ಯವಾದುದೇ ಕಲಿಕೆ. ಕಲಿಕೆ ಅಂದರೆ ನುಡಿಗಿರುವ ಬರಹವನ್ನು ಕಲಿಯುವುದು ಮತ್ತು ಆ ಬರಹದ ಮೂಲಕ ಅರಿಮೆಗಳನ್ನು ಪಡೆಯುವುದು. ಈ ಅರಿಮೆಗಳೇ ಮುಂದೆ ಮಂದಿಯ ದುಡಿಮೆಯಲ್ಲಿ ಬಳಕೆಗೆ ಬರುತ್ತದೆ. ದುಡಿಮೆಯಿಂದ ಏಳಿಗೆ ಹೊಂದಬೇಕಾದರೆ ಕಲಿಕೆಯು ಚೆನ್ನಾಗಿ ನಡೆದಿರಬೇಕು.

         ಬಾರತದ ಅರುಬರಹದ(constitution) ಮೊದಲಲ್ಲೇ ಇರುವ ಮುಕ್ಯ ಅಂಶಗಳಲ್ಲಿ ಕೂಡಣದ ಸಾಟಿತನವೂ(social equality; The preamble of India constitution contains the phrase: “Equality- social political and economic) ಒಂದು. ಕೂಡಣದಲ್ಲಿ ಸಾಟಿತನವಿದ್ದರೆ ಅದು ಆಳ್ಮೆ(politics) ಮತ್ತು ಹಣಕಾಸಿನ(economic) ನೆಲೆಗಳಲ್ಲಿ ಸಾಟಿತನ ಮೂಡುವುದಕ್ಕೆ ನೆರವಾಗುತ್ತದೆ. ಹಾಗಾಗಿ ಕೂಡಣದಲ್ಲಿಯ ಸಾಟಿತನವೇ ತಳಮಟ್ಟದ ಸಾಟಿತನ ಎಂದು ಹೇಳಲಡ್ಡಿಯಿಲ್ಲ. ಹಾಗಾದರೆ ಕೂಡಣದಲ್ಲಿ ಸಾಟಿತನವನ್ನು ತರುವುದು ಹೇಗೆ ಎಂಬ ಕೇಳ್ವಿ ಬರುವುದು ಸಹಜ. ಕೂಡಣದಲ್ಲಿ ಸಾಟಿತನ ಮೊಳಕೆಯಲ್ಲಿಯೇ ಬರುವಂತೆ ಮಾಡುವುದರಲ್ಲಿ ಮುಕ್ಯವಾದುದು ಕಲಿಕೆ ಇಲ್ಲವೆ ಕಲಿಕೆಯೇರ್ಪಾಟು. ಯಾವ ನಾಡಿನ ಕಲಿಕೆಯೇರ್ಪಾಟಿನಲ್ಲಿ ಎಲ್ಲ ಮಕ್ಕಳಿಗೆ ಒಂದೇ ತೆರನಾದ ಮತ್ತು ಒಂದೇ ಮಟ್ಟದ ಅಂದರೆ ಮೇಲುಕೀಳು ಇಲ್ಲದ ಕಲಿಕೆಯೇರ್ಪಾಟಿಗೆ ಅವಕಾಶವಿರುತ್ತದೆಯೋ ಅಲ್ಲಿ ತಾನಾಗಿಯೇ ಸಾಟಿತನ ಮೂಡುತ್ತದೆ. ಕಲಿಕೆ ಮಾಡಲು ಬರುವ ಮಕ್ಕಳು ಬೇರೆ ಬೇರೆ ಕೂಡಣದ, ಹಣಕಾಸಿನ ಹಿನ್ನಲೆಯಿಂದ ಬಂದವರಾಗಿರುತ್ತಾರೆ. ಬೇರೆ ಬೇರೆ ಪರಿಸರದಲ್ಲಿ ಬೆಳೆದ ಮಕ್ಕಳು ಬೆರೆಯುವ ತಾಣವೇ ಕಲಿಕೆಮನೆ (school). ಇಂತಹ ಕಲಿಕೆಮನೆಗಳಲ್ಲಿ ಎಲ್ಲ ಬಗೆಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯೇರ್ಪಾಟು ರೂಪಿಸಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಹೇಗಿರುತ್ತದೆ, ಅವರ ಒಳನುಡಿಯು(dialect) ಎಂತಹುದು, ಅವರ ಒಳನುಡಿಗೂ ಬರಹದ ನುಡಿಗೂ(written Language) ಎಂತಹ ನಂಟುಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತಿದ್ದರೆ ಮಕ್ಕಳ ಕಲಿಕೆಯು ಚೆನ್ನಾಗಿಯು ಮತ್ತು ಬೇಗನೆ ಆಗುತ್ತದೆ, ಮಕ್ಕಳಲ್ಲಿ ಕುರಿಪು(concept)ಗಳನ್ನು ಹಿಡಿಯುವ ಮತ್ತು ಅದನ್ನು ಅರಿತುಕೊಳ್ಳುವ ಅಳವು ಹೆಚ್ಚುತ್ತದೆ. ಹಾಗಾದರೆ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತೆ ಮಾಡುವ ಬಗೆ ಹೇಗೆ ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ. ಇದಕ್ಕೆ ನುಡಿಯರಿಮೆಯ ಇಲ್ಲವೆ ಸೊಲ್ಲರಿಮೆಯ ಮೊರೆ ಹೋಗಬೇಕಾಗುತ್ತದೆ. ಈ ಅರಿಮೆಗಳಿಂದ ದೊರೆಯುವ ಕಂಡುಕೊಳ್ಳುವಿಕೆಗಳನ್ನು ಕಲಿಕೆಯಲ್ಲಿ ಮತ್ತು ಕಲಿಕೆಮನೆಗಳಲ್ಲಿ ಒರೆಗೆ ಹಚ್ಚಬಹುದು. ಹೀಗೆ ಒರೆಗೆ ಹಚ್ಚಿದಾಗ ಮಕ್ಕಳ ಕಲಿಕೆಯ ಮೇಲಾಗುವ ಒಳ್ಳೆಯ ಪರಿಣಾಮಗಳನ್ನು ಗಮನಿಸಬಹುದು. ಇಂತಹ ಒಂದು ಕಂಡುಕೊಳ್ಳುವಿಕೆಯೇ ’ಲಿಪಿ ಸುದಾರಣೆ’.

         ಲಿಪಿ ಸುದಾರಣೆ ಮಾಡುವುದರಿಂದ ಕೂಡಣದಲ್ಲಿರುವ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ. ಹೆಚ್ಚಿನ ಮಂದಿಯ ಓದಿನಲ್ಲಿ(reading) ಇರದ ಬರಿಗೆಗಳನ್ನು (ಯಾವ ಬರಿಗೆಗಳು ಎಂಬುದನ್ನು ಮೇಲೆ ತಿಳಿಸಲಾಗಿದೆ) ಕಯ್ಬಿಡುವುದರಿಂದ ಕಲಿಕೆಯು ಸುಲಬಗೊಳ್ಳುತ್ತದೆ. ಮಕ್ಕಳು ಬೇಡದಿರುವ ಈ ಬರಿಗೆಗಳನ್ನು ಕಲಿಯುವ ಬದಲು ಆ ಹೊತ್ತನ್ನು ಕುರಿಪು(concept or subject) ಗಳನ್ನು ಕಲಿಯಲು ಬಳಸಿಕೊಳ್ಳಬಹುದು. ಕಲಿಕೆಯ ಬೇರುಮಟ್ಟದ ಗುರಿಯೇ ಕುರಿಪುಗಳನ್ನು ಇಲ್ಲವೆ ಅರಿಮೆಗಳನ್ನು ತಿಳಿದುಕೊಳ್ಳುವುದು. ಬರಹವೆಂಬುದು ಅರಿಮೆಯನ್ನು ಪಡೆಯಲು ಸಾದನವಶ್ಟೆ ಹಾಗಾಗಿ ಬರಹವನ್ನು ಕಲಿತುಕೊಳ್ಳಲು ಹೆಚ್ಚು ಹೊತ್ತನ್ನು ಕಳೆದಶ್ಟು ಕಲಿಕೆಯು ಕುಂಟಿತವಾಗುವುದು. ಇದರಿಂದ ತಿಳಿಯುವುದೇನೆಂದರೆ ಆದಶ್ಟು ಬರಹ(ಲಿಪಿ)ವೆಂಬುದು ಸುಲಬವಾಗಿದ್ದರೆ ಒಳ್ಳೆಯದು.

         ಲಿಪಿಸುದಾರಣೆ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೇರಿಸುವುದರಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ಅದರಲ್ಲೂ ಸಂಸ್ಕ್ರುತದ ಇಲ್ಲವೆ ಇಂಗ್ಲಿಶ್ ಪರಿಸರವನ್ನು ಹೊಂದಿರದ ಮಕ್ಕಳಿಗೆ ಲಿಪಿಸುದಾರಣೆ ಎಂಬುದು ಒಂದು ವರದಾನವಂತಿದೆ. ಇಂದಿಗೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಕ್ಕಳು ಕನ್ನಡದ ಒಯ್ಯುಗೆ(medium)ಯಲ್ಲಿಯೇ ಓದುತ್ತಿದ್ದಾರೆ. ಅಂದರೆ ಈ ಲಿಪಿಸುದಾರಣೆ ತರುವುದರಿಂದ ಹೆಚ್ಚಿನ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೆತ್ತಬಹುದು. ಲಿಪಿ ಸುದಾರಣೆ ತರುವುದರಿಂದ ಎಲ್ಲ ಮಕ್ಕಳಿಗೂ ಅರಿಮೆಯನ್ನು ಪಡೆಯುವಲ್ಲಿ ಸಮಾನ ಅವಕಾಶವನ್ನು ಕೊಟ್ಟಂತಾಗುತ್ತದೆ. ಈಗಿರುವ ಸಿಕ್ಕಲುಬರಹವು ಆಗ ತಡೆಗೋಡೆಯಾಗಿ ನಿಲ್ಲುವುದಿಲ್ಲ. ಎಲ್ಲರಿಗೂ ಅರಿಮೆಯನ್ನು ಪಡೆಯುವ ಸಮಾನ ಅವಕಾಶವನ್ನು ನೀಡುವುದೇ ಮಂದಿಯಾಳ್ವಿಕೆಯ ಇಲ್ಲವೆ ಅರುಬರಹದ ಗುರಿಗಳಲ್ಲಿ ಮುಕ್ಯವಾದುದು. ಮಂದಿಯಾಳ್ವಿಕೆಯ ಏರ್ಪಾಟೂಗಳು ಹೆಚ್ಚು ಹೆಚ್ಚು ಬರಹದ ಮೇಲೆ ನಿಂತಿರುವ ಕಾರಣದಿಂದ, ಬರಹ ಗೊತ್ತಿಲದವರಿಗೆ ಬದುಕುವುದೇ ಕಶ್ಟವಾಗುವ ಈ ಹೊಸಗಾಲದಲ್ಲಿ ಲಿಪಿ ಸುದಾರಣೆ ಮಾಡುವುದರಿಂದ ನಿಕ್ಕಿಯಾಗಿ ಕೂಡಣದಲ್ಲಿ ಸಾಟಿತನವನ್ನು ತರಬಹುದು, ಆಗಲೆ ಮಂದಿಯಾಳ್ವಿಕೆಗೂ ಒಂದು ಬೆಲೆ ಬರುವುದು.

ಹೊಸ ಪದಗಳ ಪಟ್ಟಿ:-
ಕೂಡಣ - Society
ನುಡಿಯರಿಮೆ - Linguistics
ಸೊಲ್ಲರಿಮೆ - Grammar
ಕೂಡಣದರಿಮೆ - Sociology
ಅರುಬರಹ - Written Constitution(of a Nation)
ಒಯ್ಯುಗೆ - Medium
ಮಂದಿಯಾಳ್ವಿಕೆ - Democracy
ಆಳ್ಮೆ - Politics
ಹಣಕಾಸು - Economics
ಒಳನುಡಿ - Dialect
ಬರಹದ ನುಡಿ - Written Language
ಕುರಿಪು - Concept /Subject.
ಕಲಿಕೆಮನೆ - School 

Photo Courtesy: UWIC

ಭಾನುವಾರ, ಅಕ್ಟೋಬರ್ 07, 2012

ಮಂಟೇಸ್ವಾಮಿ ಕತೆ ಮತ್ತು ಕರ್ನಾಟಕದ ಒಗ್ಗಟ್ಟು

ಕರ್ನಾಟಕ ಜಾನಪದದ ತವರೂರು ಎಂಬುದನ್ನು ಎಲ್ಲರು ಬಲ್ಲವರೇ. ಈ ಜಾನಪದದಲ್ಲಿ ನಡೆಸುವ ಹುಡುಕಾಟಗಳು ಕರ್ನಾಟಕದ ದಿಟವಾದ ನಡವಳಿಯನ್ನು ಮತ್ತು ಕರ್ನಾಟಕದ ಹಲಮಂದಿಯ ಬದುಕಿನ ಬಗೆಯನ್ನು ಅರಿಯಲು ನೆರವೀಯಬಲ್ಲುದು. ತೆಂಕು ಕರ್ನಾಟಕದಲ್ಲಿ ಹೆಚ್ಚು ಮಂದಿಯೊಲವು ಗಳಿಸಿರುವುದು ಮಲೆಯ ಮಾದಪ್ಪ ಮತ್ತು ಮಂಟೇಸ್ವಾಮಿ ಎಂಬ ಜನಪದ ದೇವರುಗಳು. ಇವರಿಬ್ಬರು ಬುಡಕಟ್ಟಿನ ಜನಗಳು ಇರುವ ತಾವಿನಲ್ಲೇ ನೆಲೆಯೂರಿದರು ಎಂಬುದು ಗಮನಿಸಬೇಕಾದುದು. ಈ ಮಂಟೇಸ್ವಾಮಿಯವರ ಬಗ್ಗೆ ಹಲವು ಹೊತ್ತಿಗೆಗಳನ್ನು ಓದುತ್ತಿದ್ದಾಗ ಮಂಟೇಸ್ವಾಮಿಯವರು ದೂರದ ಬೀದರಿನ ಕಲ್ಯಾಣದಿಂದ ಬಂದವರೆಂದೂ ಮತ್ತು ಮಂಡ್ಯ, ಮಯ್ಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ದಲಿತರು, ಉಪ್ಪಾಲಿಗರು, ಗವ್ಡರು, ಲಿಂಗಾಯತರು ಮತ್ತು ಅರಸುಗಳು ಮೊದಲಾಂತೆ ಎಲ್ಲ ಜಾತಿಯ ಜನರ ಒಲವನ್ನು ಗಳಿಸಿ ’ದರೆಗೆ ದೊಡ್ಡವರು’ ಆದರು ಎಂಬುದು ತಿಳಿಯುತ್ತದೆ. 
       ಇಶ್ಟಾದರೂ ಮಂಟೇಸ್ವಾಮಿ ಜನಪದರ ಎಣಿಕೆಯ(ಊಹೆಯ) ದೇವನೊ ಇಲ್ಲವೊ ಹಿನ್ನಡವಳಿಯಲ್ಲಿ ದಿಟವಾಗಿ ಹಾದು ಬಂದವನೊ ಎಂಬುದನ್ನು ನಿಕ್ಕಿಯಾಗಿ ಯಾರು ಹೇಳುವುದಿಲ್ಲ. ಆದರೆ ಕೆಲವರು ಈತನ ಕಾಲ ೧೬ನೇ ನೂರೇಡು ಇರಬಹುದೆಂದು ಹೇಳಿದ್ದಾರೆ. ಅದು ದಿಟವೊ ಅಲ್ಲವೊ ಅದು ಇಲ್ಲಿ ಮುಕ್ಯವಲ್ಲ ಯಾಕಂದರೆ ಅದು ಬರೀ ಜನಪದೀಯವಾಗಿದ್ದರೂ ತೆಂಕು ಕರ್ನಾಟಕದಲ್ಲಿ ಮಂಟೇಸ್ವಾಮಿಯ ಕತೆ ಹೇಳುವವರಿಗೆ ಅಂದರೆ ನೀಲಗಾರರಿಗೆ(ನೀಲಗಾರರು ಇಂತಹ ಒಂದು ಬುಡಕಟ್ಟಿನವರು - ಇವರ ಕೆಲಸವೇ ಮಂಟೇಸ್ವಾಮಿ ಕತೆಯನ್ನು ಹಾಡುವುದು) ದೂರದ ಕಲ್ಯಾಣದ ಬಗ್ಗೆ ಹೇಗೆ ಗೊತ್ತಿತ್ತು? ಅದೂ ಅಲ್ಲದೆ ಅಶ್ಟು ದೂರದ ಕಲ್ಯಾಣವನ್ನೇ ಏಕೆ ಆಯ್ದುಕೊಂಡರು ಎಂಬುದು ಒಂದು ಗಳಿಗೆ ಸೋಜಿಗದಂತೆ ತೋರುವುದು. ಆದರೆ ಕಲ್ಯಾಣ ಎಂಬುದು ಬರೀ ಒಂದು ಊರಾಗಿ ಕನ್ನಡಿಗರಲ್ಲಿ ಉಳಿದಿಲ್ಲ ಅದೊಂದು ಸಿಡಿದೇಳುವಿಕೆಯ ನಡುವಣ( centre of Revolution)ವೆಂದೇ ಕನ್ನಡದ ಕೂಡಣದಲ್ಲಿ ಅಚ್ಚೊತ್ತಾಗಿದೆ. ಹಾಗಾಗಿ ಈ ಕನ್ನಡ ನೆಲದಲ್ಲಿ ತುಳಿತಕ್ಕೊಳಗಾದವರು ಎಲ್ಲೆ ಇರಲಿ ಅವರಿಗೆ ಕಲ್ಯಾಣ ಒಂದು ಬಯಕೆಬೆಟ್ಟವಾಗಿ ಕಾಣುತ್ತದೆ. ಕಲ್ಯಾಣ ಎಂದರೆ ಬಸವಣ್ಣ, ಕಲ್ಯಾಣ ಎಂದರೆ ಶರಣರು, ಕಲ್ಯಾಣ ಎಂದರೆ ವಚನ ಚಳುವಳಿ ಎಂಬುದು ಕನ್ನಡ ನಾಡಿನ ಮಂದಿಬಗೆಯಲ್ಲಿ ಅಚ್ಚೊತ್ತಿದೆ. ಹಾಗಾಗಿ ಇಲ್ಲಿ ಜನಪದೀಯರಿಗೆ ಕಲ್ಯಾಣದೊಂದಿಗೆ ತಳುಕು ಹಾಕಿಕೊಳ್ಳುವ ಕಡುಬಯಕೆ ಕಾಡುತ್ತದೆ. ಆ ಕಡುಬಯಕೆಯ ಕಡಲಿನಿಂದ ಎದ್ದು ಬಂದ ಹೊಸ ಅಲೆಯೇ ಈ ಮಂಟೇಸ್ವಾಮಿ ಎಂಬ ಜನಪದ ದೇವರು. 
        ಚಿಕ್ಕದಾಗಿ ಹೇಳುವುದಾದರೆ ಮಂಟೇಸ್ವಾಮಿ ಮತ್ತು ಅಲ್ಲಮಪ್ರಬು ಕಲ್ಯಾಣಕ್ಕೆ ಹೋಗಿ ಅಲ್ಲಿ ಬಸವಣ್ಣನ ’ಇಶ್ಟಲಿಂಗ’ ಚಳುವಳಿಯಲ್ಲಿರುವ ಪೊಳ್ಳುತನ ಇಲ್ಲವೆ ಇಶ್ಟಲಿಂಗವೂ ಕದಲಿಕೆಯನ್ನು(ಜಂಗಮತನವನ್ನು) ಕಳೆದುಕೊಳ್ಳುತ್ತಿರುವ ಒಂದು ಆಚರಣೆ ಎಂದು ಎಚ್ಚರಿಸುವುದೇ ಈ ಕತೆಯ ಒಂದು ಮುಕ್ಯ ಅಂಶ. ಕರ್ನಾಟಕದ ಒಗ್ಗಟ್ಟಿನ ಕಣ್ಣಿನಿಂದ ಮಂಟೇಸ್ವಾಮಿಯ ಕತೆಯನ್ನು ನೋಡಿದಾಗ ಇದು ತೆಂಕು ಕರ್ನಾಟಕದ ಜನಪದಕ್ಕೂ ಮತ್ತು ಇವತ್ತಿನ ಬಡಗು ಕರ್ನಾಟಕದ ತುತ್ತತುದಿಯಲ್ಲಿರುವ ಕಲ್ಯಾಣಕ್ಕೂ ಇರುವ ನಂಟನ್ನು ಎತ್ತಿ ಹಿಡಿಯುತ್ತದೆ. ತೆಂಕು ಕರ್ನಾಟಕದ ತುದಿಯಲ್ಲಿರುವ ಮಂಡ್ಯ/ಚಾಮರಾಜನಗದಲ್ಲಿರುವ ಜನಪದ ಹಾಡುಗಾರನಿಗೆ ಬಡಗು ಕರ್ನಾಟಕದ ಕಲ್ಯಾಣದ ಬಗ್ಗೆ ಅಶ್ಟು ಮಾಹಿತಿ ತಿಳಿದದ್ದಾದರೂ ಹೇಗೆ? ಅದೂ ಆ ಕಾಲದಲ್ಲಿ ಅಂದರೆ ಅರುಹು ಮತ್ತು ಸಾರಿಗೆ ಅಶ್ಟು ಬೆಳೆದಿಲ್ಲದ ಆ ಕಾಲದಲ್ಲಿ. ಅದಕ್ಕೇ ಕಾರಣವೇ ಕನ್ನಡ ನುಡಿ ಅಂದರೆ ಕನ್ನಡ ನುಡಿಯಲ್ಲಿ ಹೇಳಲಾದ ’ವಚನಗಳು’(ಆಮೇಲೆ ಇದನ್ನು ಬರಹ ರೂಪಕ್ಕೆ ಇಳಿಸಲಾಯಿತು)ಎಂದರ್ತ. ಹೇಗೆ ಕೂಡಣದ(ಸಮಾಜದ) ಕಟ್ಟ ಕಡೆಯ ಆಳಿಗೂ ವಚನಗಳು ಮುಟ್ಟಿತ್ತು ಎಂಬುದನ್ನು ಇದು ತೋರಿಸುತ್ತದೆ. ಅಲ್ಲದೆ ಈ ಕನ್ನಡದ ವಚನಗಳು ದೂರದ ಬೀದರಿನ ಕಲ್ಯಾಣವನ್ನು ಮತ್ತು ಚಾಮರಾಜನಗರದ ಕೊಳ್ಳೇಗಾಲವನ್ನು ಹತ್ತಿರ ತರುವ ಇಲ್ಲವೆ ಬೆಸೆಯುವ ಕೆಲಸವನ್ನು ಮಾಡಿತು ಎಂಬುದನ್ನು ಇದರಿಂದ ತಿಳಿಯಬಹುದು. ಹೇಗೆ ಒಂದು ನುಡಿಯು, ನೆಲದಳತೆಯಲ್ಲಿ ದೂರ ದೂರ ಇದ್ದ ಊರುಗಳನ್ನು ಮತ್ತು ಆ ಊರುಗಳ ಜನರನ್ನು ನಡವಳಿಯ ನೆಲೆಯಲಿ ಒಂದುಗೂಡಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ನುಡಿಗೂ ಮತ್ತು ನಡವಳಿಗೂ ಒಂದಕ್ಕೊಂದು ಬಿಡಿಸಿಕೊಳ್ಳಲಾರದಶ್ಟು ಹೆಣೆದುಕೊಂಡಿವೆ ಎಂಬ ಈ ಮಾತನ್ನು ಮಂಟೇಸ್ವಾಮಿಯ ಕತೆಯು ಒತ್ತಿ ಒತ್ತಿ ಹೇಳಿ ನಮಗೆ ಮನದಟ್ಟು ಮಾಡಿಸುತ್ತದೆ.

ಗುರುವಾರ, ಸೆಪ್ಟೆಂಬರ್ 20, 2012

Number plates, Majority and Democracy


                                                  (Photo Courtesy: Hariprasad Holla)
There was a discussion about the Kannada Number Plates for the vehicles in Karnataka.There were some arguments against it and for it. This made me to think further and deeper.

     Today by and large we see 'English only' number plates in Karnataka and very few Kannada only number plates and very very few Kannada and English number plates. However Kannada is the majority Language of Karnataka and English is understood by only small number of people. There was an argument that Kannada number plates doesn't make practical sense. However the question is, for whome it impractical is unanswered; for what percentage of people its impractical its unanswered.
All over the world we have democracy built *primarily* based on welfare of Majority. One of the fundamental philosohpical principle of true democracy is to facilitate
'maximum comfort for maximum number of people'.
     This should be guiding force for any nation or state in pursuit of true democracy. So coming back to Karnataka, Kannada is the preferred language of the majority of the people in Karnataka, becuase people feel comfort in that langauge. Similarly Tamil in Tamil Nadu and Telugu in Andhra Pradesh and so on. So if we say we are true democracy we can't dismember/ignore/discount the majority and impose minority language on the majority.
     Kannadigas living in Karnataka are the natives(permanent)of this state and the majority of them who are born here, who grow up here and who die here. Minority immigrants will definitely miss one of these that is to say either they wouldn't be born here or they wouldn't grow here or they wouldn't die here. So, It does a lot of practical sense to build the system, be it political, economical for the natives i.e Kannadigas in Karnataka , Tamils in Tamil Naadu and Telugus in Andhra Pradesh and so on. It would be foolish/impractical if we try to build the systems for the minority immigrants because there is always an element of 'uncertainity' attached with immigrants. So one cannot waste the systems on minority immigrants. So more practical scenario would be for the immigrants to mingle with majority natives. Its only in the best interest of immigrants ot learn the language of natives because immigrants are in minority for the foreseeable future in Karnataka.

    It would be disastrous to see a Kannadigas becoming minority in Karnataka and Tamils becoming minority in Tamil Naadu and so on. It defeats the whole purpose of the carving out 'Linguistic States' during the formation fo Indian Nation. The idea behind carving out the Linguistic States would be not just to preserve the Linguistic, Cultural diversity of India but also even strengthen it because that is only the way to go forward. That is the true democracy. That is only the way to uphold the true humanity and humanitarian values.

   Not allowing Kannada Number(name) Plates in Karnataka, Not allowing Tamil number(name) plates in Tamil Nadu and Not allowing Telugu number(name) plates in Andhra Pradesh is truely 'Undemoratic' and it is fundamentally against the spirit and intentions of democracy and democratic values. 

ಶನಿವಾರ, ಸೆಪ್ಟೆಂಬರ್ 15, 2012

ಆಡುನುಡಿಯ ಬೇರ್ಮೆಗಳು

ಈ ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ, ಮಳವಳ್ಳಿ, ಮದ್ದೂರು ತಾಲ್ಲೂಕಿನ ಹಳ್ಳಿಗಳಲ್ಲಿ ಪದದ ಕೊನೆಯಲ್ಲಿ ಬರುವ "ಳ’ ಕಾರ ಬಿದ್ದು ಹೋಗಿದೆ.

ತಿಂಗಳು => ತಿಂಗ ( ಇತ್ತೀಚೆಗೆ ಕಂಡುಕೊಂಡಿದ್ದು ಇದೇ ರೀತಿ ದೂರದ ’ಕೊಡಗು ನುಡಿಯಲ್ಲೂ ತಿಂಗ ಅನ್ನುತ್ತಾರೆ ಅಂತ DED ನೋಡಿದ ಮೇಲೆ ತಿಳಿಯಿತು - Koḍ. tiŋga month.)

ಅವಳು => ಅವ ( ಹಾಗಾಗಿ ಅವನು ಎಂಬುದು ’ಅಂವ’/ಅಮ ಆಗುತ್ತದೆ)
ಬಂದಳು => ಬಂದ ( ಹಾಗಾಗಿ ಬಂದನು ಎಂಬುದು ಬಂದಂ, ಇಲ್ಲಿ ’ದಂ’ ಒಂದು ದ+ವಿಚಿತ್ರ ಮೂಗುಲಿ)
ಮಗಳು => ಮಗ ( ಹಾಗಾಗಿ ಮಗ ಎಂಬುದು ಮಗಂ, ಇಲ್ಲಿ ’ಗಂ’ ಎಂಬುದು ಗ+ವಿಚಿತ್ರ ಮೂಗುಲಿ)
ಹೋದಳು => ವಾದ ( ಹಾಗಾಗಿ ಹೋದನು ಎಂಬುದು ವಾದಂ, ಇಲ್ಲಿ ’ದಂ’ ಎಂಬುದು ದ+ವಿಚಿತ್ರ ಮೂಗುಲಿ)

ಆದರೆ ಇದು ಕೆಲವು ಕಡೆ ಆಗಿಲ್ಲ. ಅಂದರೆ ’ಳ’ಕಾರದ ಮುಂಚೆ ’ರ’ಕಾರ ಬಂದಿದ್ದರೆ ಅಲ್ಲಿ ’ರ’ಕಾರವು ಬಿದ್ದು ಹೋಗಿ ಇಮ್ಮಡಿ "ಳ"ಕಾರವಾಗಿದೆ

ಹೊರಳು => ವೊಳ್ಳು/ಒಳ್ಳು ( ಹೊರಳು ನಾಮಪದ (<ದೇ. ಪೊರಳು) ತಿರುವು, ಬಾಗು ಬದಲಾವಣೆ ಒಂದು ಬಗೆಯ ತಿರುಗುವ ಯಂತ್ರ)
ನೆರಳು => ನೆಳ್ಳು
ಕರಳು => ಕಳ್ಳು
ಉರುಳು => ಉಳ್ಳು
ತರಳು => ತಳ್ಳು
ಅರಳು => ಅಳ್ಳು/ಅಳ್
ಬೆರಳು => ಬೆಳ್ಳು

ಭಾನುವಾರ, ಸೆಪ್ಟೆಂಬರ್ 02, 2012

ಆಟದ ಒರೆಗಳು

ಚಿಕ್ಕವರಿದ್ದಾಗ ಹಲವು ಆಟಗಳನ್ನು ಆಡುತ್ತಿದ್ದಾಗ ಬಳಸುತ್ತಿದ್ದ ಒರೆಗಳು:-

೧. ಪೇಂದ (< ಪೇರಿಸಿಂದ) - ಸಮತಟ್ಟಾದ ನೆಲದ(ಮಣ್ಣಿನ) ಮೇಲೆ ಒಂದು ನಾಲ್ವದಿ ಆಕಾರದಲ್ಲಿ ಒಂದು ’ಪೇಂದ’ವನ್ನು ಬರೆದು ಅದರ ನಡುವಿನಲ್ಲಿ ಪೇರಿಸಿದ ಹಾಗೆ ಗೋಲಿಗಳನ್ನು ಇರಿಸಿಬೇಕು. ಇವೆಲ್ಲ ಸೇರಿ ಒಟ್ಟಿನಲ್ಲಿ ಅದನ್ನು ’ಪೇಂದ’ ಎನ್ನಲಾಗುತ್ತದೆ. ಪಾಪೆ ನೋಡಿ.

೨. ತೀಕು - ಗೋಲಿ ಆಟದಲ್ಲಿ ಸೋತವರು ಒಂದು ಕಯ್ಯನ್ನು ಬೆನ್ನ ಮೇಲೆ ಹಾಕಿ ಇನ್ನೊಂದು ಕಯ್ಯನ್ನು ಮುಶ್ಟಿಯಂತೆ ಮಾಡಿ ನೆಲದ ಮೇಲಿರುವ ಗೋಲಿಯನ್ನು ತೀಡಬೇಕು/ತಳ್ಳಬೇಕು.ಇದನ್ನೇ ’ತೀಕು’/ತೀಕಿಸುವುದು ಎನ್ನುತ್ತಾರೆ.

೩. ತುದಾಂಡಲ್(< ತುಪ್+ದಾಂಡಲ್??) - ದಾಂಡ್ಲನ್ನು ಕೆಳಗೆ ಹಾಕಿ ಅಳೆಯುವಾಗ ಹೇಳುವ ಒರೆ.

೪. ಉಡೀಸ್(< ಉಡಾಯಿಸು= ಹಾರಿಸು= ಚದುರಿಸು) - ಬಳಕೆ : ಕಾಲಿ ಪೇಂದ ಉಡೀಸ್ !!!! - ಮೇಲೆ ಹೇಳಿದ ಪೇಂದದಲ್ಲಿ ಇರುವ ಗೋಲಿಗಳನ್ನು ಚದುರಿಸಿ ಆ ನಾಲ್ವದಿಯ ಆಚೆಗೆ ಅಟ್ಟಿಸಿದಾಗ ಹೇಳುವ ಒರೆ.

೫. ಗಿಲ್ಲಿ(<ಕಿರುಲಿ) = ಚಿನ್ನಿ (<ಚಿಕ್ಕ) - ಬಳಕೆ: ಗಿಲ್ಲಿ-ದಾಂಡು ಆಡೋಣ ಬಾ

೬. ಗುನ್ನ (<ಗುಳಿ) - ಬಳಕೆ: ಅವನ ಬುಗುರಿಗೆ ಚೆನ್ನಾಗಿ ಗುನ್ನ ಹೊಡೆದೆವು

೭. ಇಂತಿ ( < ಹಿಂತಿ= ಹಿಂದಿರುವ ಗೋಲಿ) - ಬಳಕೆ: ವೊಡೆ ಇಂತಿ !

೮. ಮುಂತಿ( < ಮುಂತಿ= ಮುಂದಿರುವ ಗೋಲಿ) - ಬಳಕೆ: ವೊಡೆ ಮುಂತಿ!

ಬುಧವಾರ, ಆಗಸ್ಟ್ 15, 2012

ಕನ್ನಡದ ತೆರೆಯುಲಿಗಳ ಗುಂಪಿಸುವಿಕೆ


ಕನ್ನಡದ ತೆರೆಯುಲಿಗಳನ್ನು ಹೀಗೆ ಗುಂಪಿಸಬಹುದು:-
ಗುಂಪು: ಇ, ಎ(ಗಿಡ್ಡ); ಈ, ಏ (ಉದ್ದ)
ಗುಂಪು : ಅ, ಉ, ಒ(ಗಿಡ್ಡ); ಆ, ಊ, ಓ(ಉದ್ದ)

ಹೀಗೆ ಗುಂಪಿಸಲು ದೂಸರೇನೆಂದರೆ ಸೇರಿಕೆಯಾಗುವಾಗ ಅವುಗಳಗಿರುವ ಗುಣ.

ಯ ಗುಂಪು:-
ಸೇರಿಕೆಯಾಗುವೆಡೆ ಇ,ಎ ತೆರೆಯುಲಿಗಳು ’’ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ಬಂಡಿ+ಅಲ್ಲಿ = ಬಂಡಿಲ್ಲಿ (ಬಂಡಿವಲ್ಲಿ ಆಗಲ್ಲ) - ಇಲ್ಲಿ ’ಬಂಡಿ’ ಎಂಬುದನ್ನು ’ಬಂಡ್+ಇ’ ಎಂದು ಬಿಡಿಸಿದಾಗ ಅಲ್ಲಿರುವ ’ಇ’ ಕಾರ ಕಾಣಿಸುತ್ತದೆ.
ಬಂಡೆ+ಅನ್ನು = ಬಂಡೆನ್ನು ( ಬಂಡೆವನ್ನು ಆಗಲ್ಲ) - ಇಲ್ಲಿ ’ಬಂಡೆ’ ಎಂಬುದನ್ನು ’ಬಂಡ್+ಎ’ ಎಂದು ಬಿಡಿಸಿದಾಗ ಅಲ್ಲಿರುವ ’ಎ’ಕಾರ ಕಾಣಿಸುತ್ತದೆ.

ವ ಗುಂಪು:-
ಸೇರಿಕೆಯಾಗುವೆಡೆ ಅ,ಉ ತೆರೆಯುಲಿಗಳು ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ದನ+ಅನ್ನು = ದನವನ್ನು (ದನಯನ್ನು ಆಗಲ್ಲ) - ಇಲ್ಲಿ ದನಎಂಬುದನ್ನು ದನ್+ಎಂದು ಬಿಡಿಸಿದಾಗ ಅಲ್ಲಿರುವ ಕಾರ ಕಾಣಿಸುತ್ತದೆ.
ಕರು+ಅನ್ನು = ಕರುವನ್ನು (ಕರುಯನ್ನು ಆಗಲ್ಲ) - ಇಲ್ಲಿ ಬಂಡೆಎಂಬುದನ್ನು ಕರ್+ಎಂದು ಬಿಡಿಸಿದಾಗ ಅಲ್ಲಿರುವ ಕಾರ ಕಾಣಿಸುತ್ತದೆ.
ಕನ್ನಡದಲ್ಲಿ ಉದ್ದ ತೆರೆಯುಲಿಗಳಿಂದ ಕೊನೆಯಾಗುವ ಪದಗಳು ಕಡಿಮೆ ಎನ್ನಬಹುದು. ಇದ್ದರು ಅವುಗಳೊಂದಿಗೆ ಬೇರೆ ಪದಗಳು ಸೇರಿಕೆಯಾಗದೆ ಹಾಗೆ ಉಳಿಯುತ್ತವೆ. ಅದಕ್ಕಾಗಿ ಇಲ್ಲಿ ಅಂತಹ ಎತ್ತುಗೆಗಳನ್ನು ಕೊಟ್ಟಿಲ್ಲ/ಕೊಡಲಾಗುವುದಿಲ್ಲ.

ಇನ್ನೊ ಒ ಇಲ್ಲವೆ ಓ ಕಾರದಲ್ಲಿ ಕೊನೆಗೊಳ್ಳುವ ಪದಗಳು ಕಡಿಮೆ. ಆದರೆ ನಾವು ಆಡುನುಡಿಯ ಒಲವನ್ನು ಇಲ್ಲಿ ಗಮನಿಸಬಹುದು. ’ಒ’ ಇಲ್ಲವೆ ’ಓ’ಕಾರಗಳು ಕೂಡ ಆಡುಮಾತಿನಲ್ಲಿ ’ವ’ಕಾರಕ್ಕೆ ಮಾರ್ಪಾಟಾಗುವ ಒಲವನ್ನು ತೋರಿಸುತ್ತವೆ.
ಒತ್ತು <-> ವತ್ತು
ಒಪ್ಪು <-> ವಪ್ಪು
ಒರಟ <-> ವರಟ
ಓಲಗ <-> ವಾಲಗ
ಓಟ <-> ವಾಟ
ಓಲೆ <-> ವಾಲೆ

ಶುಕ್ರವಾರ, ಆಗಸ್ಟ್ 10, 2012

ಎರಡನೇ ಉಲಿಕಂತೆಯ ತೆರೆಯುಲಿಯ ಬಗ್ಗೆ



ಕನ್ನಡದ ಮೂರು ಬರಿಗೆಗಳ/ಉಲಿಕಂತೆಗಳ ಪದಗಳಲ್ಲಿ ಎರಡನೆ ಉಲಿಕಂತೆಯಲ್ಲಿರುವ ತೆರೆಯುಲಿಯು ಅಶ್ಟು ಮುಕ್ಯವಲ್ಲ ಅಂದರೆ

ಬಟ್ಟಲು = ಬಟ್ಟಿಲು ( ಟ್+ಟ್+ಇ)
ಮೆಟ್ಟಿಲು = ಮೆಟ್ಟಲು ( ಟ್+ಟ್+ಇ)
ಬಾಗಿಲು = ಬಾಗಲು ( ಗ್+ಇ)

ಕಾರಣ: ದಿಟವಾಗಲೂ ಈ ಎರಡನೇ ಬರಿಗೆ/ಉಲಿಕಂತೆಯಲ್ಲಿರುವ ತೆರೆಯುಲಿಯನ್ನು ನಾವು ಆಡುಮಾತಿನಲ್ಲಿ ಉಲಿಯುವುದೇ ಇಲ್ಲ.

ಬಟ್-ಲು = ಬಟ್ಲು
ಬಾಗ್-ಲು =ಬಾಗ್ಲು
ಊದ್-ಲು = ಊದ್ಲು

ಕೆಲವು ಕಡೆ ಎರಡನೇ ಉಲಿಕಂತೆಯನ್ನೇ(ತೆರೆಯುಲಿ+ಮುಚ್ಚುಲಿ) ಉಲಿಯುವುದೇ ಇಲ್ಲ.

'ರ್+ಅ' ಬಿದ್ದುಹೋಗಿದೆ.

ನೆರಳು = ನೆಳ್ಳು
ಹೊರಳು = ವೊಳ್ಳು
ನರಳು = ನಳ್ಳು
ಕರುಳು = ಕಳ್ಳು

ಹೀಗೆ ಇನ್ನು ಬೇರೆ ಬೇರೆ ಎತ್ತುಗೆಗಳು
ಮೆಂತೆಯ => ಮೆಂತ್ಯ

ತಿರುಳು:-
ಎರಡನೇ ಉಲಿಕಂತೆಯ ತೆರೆಯುಲಿಯೇ ಮಾತಿನಲ್ಲಿ ಬಿದ್ದು ಹೋಗುವಾಗ ಯಾವ ತೆರೆಯುಲಿ
ಅಲ್ಲಿ ಇದ್ದರೇನು? ಹಾಗಾಗಿಯೇ ಎರಡನೇ ಉಲಿಕಂತೆಯಲ್ಲಿರುವ ತೆರೆಯುಲಿ ಅಶ್ಟು ಅರಿದು ಅಲ್ಲ.

ಗಮನಿಸಿ: ಕೆಲವು ಕಡೆ ಮುಚ್ಚುಲಿಯು ಮಾತಿನಲ್ಲಿ ಬಿದ್ದು ಹೋಗುತ್ತದೆ

ಭಾನುವಾರ, ಆಗಸ್ಟ್ 05, 2012

ಕಲಿಕೆಯ ಕೇಳ್ವಿಗಳು

ಇತ್ತೀಚಿನ ದಿನಗಳಲ್ಲಿ ’ಕಲಿಕೆ’ಯ ಇಲ್ಲವೆ 'ಕಲಿಕೆಯೇರ್ಪಾಡು' ಎಂಬ ವಿಶಯ ಬಂದಾಗ ಹಲವು ಮಂದಿ ಕೇಳುತ್ತಿರುವ ಕೇಳ್ವಿಗಳಲ್ಲಿ ಮೊದಲ ಎರಡು

೧.ಕಲಿಮನೆಗಳಲ್ಲಿ ಏನನ್ನು ಕಲಿಸಬೇಕು ?
೨.ಕಲಿಮನೆಗಳಲ್ಲಿ ಯಾವ ಒಯ್ಯುಗೆಯಲ್ಲಿ(ಮಾದ್ಯಮ) ಕಲಿಸಬೇಕು?

ಕೆಲವರು ಮೊದಲ ಕೇಳ್ವಿ ತುಂಬ ಅರಿದಾದುದು(ಮುಕ್ಯವಾದುದು) ಎಂದು ನಂಬಿದ್ದಾರೆ. ಅಂತಹವರಿಗೆ ಎರಡನೇ ಕೇಳ್ವಿಯೂ ಇದೆ ಆದರೆ ಅದರ ಬಗ್ಗೆ ಅಶ್ಟು ಆಸಕ್ತಿ-ಹುರುಪಾಗಲಿ ಅವರಿಗೆ ಇದ್ದಂತೆ ಕಾಣುವುದಿಲ್ಲ. ಮೊದಲ ಕೇಳ್ವಿಯ ಬಗ್ಗೆ ತುಂಬ ತಲೆ ಕೆಡಿಸಿಕೊಂಡಂತೆ ಇದೆ. ಆದರೆ ದಿಟವಾಗಲೂ ಅವೆರಡು ಬೇರೆ ಬೇರೆಯಾಗಿ ನೋಡಬೇಕಾದ ಕೇಳ್ವಿಗಳಲ್ಲ. ಅವೆರಡೂ ಒಂದಕ್ಕೊಂದು ಬೆಸೆದುಕೊಂಡೇ ಇದೆ. ಯಾಕಂದರೆ ನಾವು ಏನನ್ನು ಮೊದಮೊದಲು ಕಲಿಸಬಹುದು ಎಂಬುದು ಯಾವ ನುಡಿಯಲ್ಲಿ(ಮಾದ್ಯಮದಲ್ಲಿ) ಕಲಿಸುತ್ತೇವೆ ಎಂಬುದರ ಮೇಲೆ ನಿಂತಿದೆ. ನೆಲದ ಅರಿಗರೆಲ್ಲ ’ತಾಯ್ನುಡಿಯಲ್ಲೇ ಕಲಿಕೆ’ ಆದರೆ ಒಳ್ಳೆಯದು; ಅದರಿಂದ ಮಗುವಿಗೆ ’ತಾನಗಿಯೇ ಬಂದ ಸಲೆ’(natural advantage)ಯನ್ನು ಚೆನ್ನಾಗಿ ಬಳಸಿಕೊಂಡು ಬದುಕಿನಲ್ಲಿ ಮುಂದೆ ಬರಬಹುದು ಎಂದು ಹೇಳಿದ್ದಾರೆ.

ಕಲಿಯುವು ಮಗುವು ಕನ್ನಡವನ್ನು ಓದಲು ಬರೆಯಲು ಕಲಿತ ಮೇಲೆ ಅದರಿಂದ ದೊರೆತ ಅಳವನ್ನು ಬಳಸಿಕೊಂಡು ತನ್ನ ಸುತ್ತಲಿನ ಪರಿಸರವನ್ನು ಗಮನಿಸಲು ಅನುವಾಗುವಂತೆ ಕಲಿಕೆಯು ಇರಬೇಕಾಗುತ್ತದೆ. ಅಂದರೆ ಗಮನಿಕೆಯಿಂದ ದೊರೆತ ಅರಿವನ್ನು ಒರೆಗೆ ಹಚ್ಚುವ ಹಾಗೆ ಕಲಿಕೆಯಿದ್ದರೆ ಕಲಿತ್ತದ್ದು ತಲೆಗೆ ಹತ್ತುತ್ತದೆ. ಇದರಿಂದ ಅರಿವಿನ ಆಳವನ್ನು ಹಿಗ್ಗಿಸಿಕೊಳ್ಳಲು ಬರುತ್ತದೆ.
ಎತ್ತುಗೆಗೆ: ಮಯ್ಸೂರಿನಲ್ಲಿ ಓದುತ್ತಿರುವ ಮಗುವು ಮೊದಲ ೭ ತರಗತಿಗಳಲ್ಲಿ/ಏಡುಗಳಲ್ಲಿ ಮಯ್ಸೂರಿನ ಕೂಡಣದ, ಸೊಮ್ಮಿನ ಮತ್ತು ಹಿನ್ನಡವಳಿಯ ಪರಿಚಯವಾಗುವಂತೆ ಓದುಗೆಗಳು ಇರಬೇಕು. ಇದರಿಂದ ಓದಿದುದನ್ನು ಪಳಗಿಕೆಯ ಗಾಣೆ ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡಬಹುದು.

ಹೀಗೆ ಮಕ್ಕಳಿಗೆ ಎಲ್ಲವನ್ನು ಕನ್ನಡದಲ್ಲಿ ಕಲಿಯುವ ಏರ್ಪಾಟಾದಾಗ, ಇದಕ್ಕೆ ಹೊಂದುವ ಕಲಿಸುವ ಹೊಲುಬುಗಳನ್ನು ಕಂಡುಕೊಂಡಾಗ ’ಓದುಗೆ’ಗಳು ಕೂಡ ಅದಕ್ಕೆ ತಕ್ಕಂತೆ ತಾನಾಗಿಯೇ ಹೊಂದಿಕೊಳ್ಳುತ್ತವೆ. ಈಗಿನ ಓದುಗೆಗಳಲ್ಲಿರುವ ಕೆಲಸಕ್ಕೆ ಬಾರದಿರುವ ಪುರುಳುಗಳು(ವಿಶಯಗಳು) ಅಂದರೆ ಕನ್ನಡ ಸಮಾಜಕ್ಕೆ ತೀರ ದೂರವಿರುವ/ನಂಟಿರದ ಪುರುಳುಗಳು ಓದುಗೆಗಳಲ್ಲಿ ಉಳಿಯುವುದಿಲ್ಲ ಯಾಕಂದರೆ ದಿಟವಾದ ಕಲಿಕೆಗೆ ಇವುಗಳಿಂದ ಯಾವ ಬಳಕೆಯಿಲ್ಲ. ಹಾಗಾಗಿ ಕಲಿಕೆಯ ಹೊಲದಲ್ಲಿ ಅರಿದಾದ ಮಾರ್ಪಾಟುಗಳು ಆಗಿ ಕಲಿಕೆ ಎಂಬುದು ಎತ್ತರದ ಹೊರೆಯಾಗದೆ ಇನ್ನು ಹತ್ತಿರವಾಗುತ್ತದೆ. ಈ ಹತ್ತಿರವಾಗಿಸುವಿಕೆಯೇ ಕಲಿಕೆಯಲ್ಲಿ ಇಂದು ಆಗಬೇಕಾಗಿರುವುದು. ಈ ಹತ್ತಿರವಾಗಿಸುವಿಕೆಯಿಂದಲೇ ಮಕ್ಕಳು ತಮ್ಮ ಸುತ್ತಲಿನ ಕೂಡಣಕ್ಕೆ ಒಗ್ಗಿಕೊಳ್ಳುವುದು. ಕೂಡಣಕ್ಕೆ ಒಗ್ಗಿಕೊಂಡ ಮಕ್ಕಳು ಮುಂದೆ ಆ ಕೂಡಣಕ್ಕೆ ಆಸ್ತಿಯಾಗಬಲ್ಲರು ಮತ್ತು ಆ ಕೂಡಣಕ್ಕೆ ಕೊಡುಗೆಗಳನ್ನು ನೀಡಬಲ್ಲರು.

ಶುಕ್ರವಾರ, ಜುಲೈ 27, 2012

ಕನ್ನಡಿಗರು ಯಾಕೆ ಗರ ಮತ್ತು ಅರಿಲುಗಳಿಗೆ(ನಕ್ಶತ್ರ) ಹೆಸರಿಡಲಿಲ್ಲ?

ಹಿಂದೊಮ್ಮೆ ಪಂಡಿತರೊಬ್ಬರು ’ಕನ್ನಡಿಗರೇಕೆ ಗ್ರಹ ಮತ್ತು ನಕ್ಶತ್ರಗಳಿಗೆ ಹೆಸರು ಕೊಡಲಿಲ್ಲ?" ಎಂದು ಕೇಳ್ವಿ ಎಸೆದಿದ್ದರು. ಅದಕ್ಕೆ ಸೂಕ್ತವಾದ ಮಾರುಲಿಯನ್ನು ನಾನು ಅರಸುತ್ತಲೇ ಇದ್ದೆ. ಹಾಗೆ ಎಡೆಬಿಡದ ಪದಗಳ ಅರಕೆ ಮಾಡುವಾಗ ಕೆಲವು ಗಮನಿಕೆಗಳು ಮತ್ತು ಅದರಿಂದ ದೊರೆತ ತೀರ್ಮೆಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ.
ಕನ್ನಡದಲ್ಲಿ ’ನನ್’ ಎಂಬ ಪದಬೇರಿದೆ. ಅದರಿಂದ ಪದಗಳು ಯಾವುವು ಎಂಬುದನ್ನ ನೋಡೋಣ:-

ನನ್ + ಪು = ನಂಬು , ನಂಬು+ಇಕೆ = ನಂಬಿಕೆ (belief)
ನನ್+ ನಿ = ನನ್ನಿ (truth)
ನನ್+ಟ = ನಂಟ (relative)
ನಣ್+ಪು = ನಣ್ಪು (friendship)

ನಂಟರು ಎಂಬುದಕ್ಕೆ ನಾವು ಆಡುಮಾತಿನಲ್ಲಿ ’ಹತ್ತಿರ’ದವರು ಎಂದೂ ಕರೆಯುತ್ತೇವೆ. ಹತ್ತಿರದವರೇ ನಮಗೆ ಆಪ್ತರು,ಒಲವಿಗರು ಮತ್ತು ನೋವು-ನಲಿವಿನಲ್ಲಿ ಜೊತೆಯಿರುವವರು. ಅಂದರೆ ’ನಂಬಿಕೆ’ಗೆ ಪಾತ್ರರಾದವರು. ಈ ಮೇಲಿನ ಎಲ್ಲ ಪದಗಳಲ್ಲೂ ನನ್/ನಣ್ ಎಂಬುದು ’near' ಎಂಬ ಬೇರು ಹುರುಳೇ ಆಗಿದೆ. ಅಂದರೆ ಕನ್ನಡದಲ್ಲಿ ಮೊದಲಿನಿಂದಲೂ ’ಹತ್ತಿರ’ ಎಂಬುದನ್ನು ’ದಿಟ’(truth) ಎಂಬುದಕ್ಕೆ ತಳುಕು ಹಾಕುವ ಇಲ್ಲವೆ ಬೆಸೆಯುವ ಒಂದು ಸಂಪ್ರದಾಯ ಇದೆ. ಅದಕ್ಕೇ ಇರಬೇಕು ದೂರದಲ್ಲಿರುವ ವಸ್ತು ವಿಶಯಗಳು ಹಿಂದಿನ ಕನ್ನಡಿಗರನ್ನು ಅಶ್ಟು ಕಾಡಲಿಲ್ಲ. ಬಹುಶಹ ಅದರ ಬಗ್ಗೆ ಅವರಿಗೆ ನಂಬಿಕೆ ಇರಲಿಲ್ಲ. ಹಾಗಾಗಿ ದೂರದಲ್ಲಿರುವ ವಸ್ತುಗಳಾದ ಗ್ರಹ, ಅರಿಲುಗಳ ಗೋಜಿಗೆ ಕನ್ನಡಿಗರು ಹೋಗಲಿಲ್ಲ. ನಂಬಿಕೆಯೇ ಇಲ್ಲದ ವಸ್ತು-ವಿಶಯಗಳ ಬಗ್ಗೆ ಮಾತಾಡಿ/ಉಂಕಿಸಿ ಬಳಕೆಯೇನು? ಹಾಗಾಗಿ ದೂರದಲ್ಲಿ ಎಲ್ಲೋ ಇರುವ ಗ್ರಹ ಮತ್ತು ಅರಿಲುಗಳಿಗೆ ಹೆಸರು ಕೊಡುವುದಕ್ಕಿಂತ ಆಗ ತಲೆಮೆಯೆ ವಿಶಯಗಳು ಅವರಿಗೆ ಹೇರಳವಾಗಿದ್ದವು ಎಂಬುದು ನನ್ನ ಎಣಿಕೆ.
ಇಲ್ಲಿ ಇನ್ನೊಂದು ವಿಶಯ ತಿಳಿಯುವುದೇನೆಂದರೆ ಹೇಗೆ ನಮ್ಮ ಪದದ ಹುಟ್ಟುಗಳು/ಗುಟ್ಟುಗಳು ನಮ್ಮ ಅರಿಮೆಯ ಹೊನಲನ್ನು ಹರಿಯುವ ಬಗೆಯನ್ನು ತೀರ್ಮಾನಿಸುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಹಾಗಾಗಿ ನಮ್ಮ ಪದಗಳು ನಮ್ಮ ಹಿನ್ನಡವಳಿಗೆ ಕಯ್ ಹಿಡಿದಂತೆ. ಅದಕ್ಕಾಗಿಯೇ ಪದಗಳಲ್ಲಿರುವ ಒಳಗುಟ್ಟನ್ನು ಅರಿಯುವ ಬಗೆ(ಮನಸ್ಸು) ಮತ್ತು ಮೊಗಸು ಎರಡೂ ಮಾಡಬೇಕಾಗಿದೆ.

ಬುಧವಾರ, ಜೂನ್ 27, 2012

ಕನ್ನಡ ಮಾತಿಗೆ ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ, ಇಂಗ್ಲಿಶೂ ಅನಿವಾರ್ಯವಲ್ಲ

ಯು. ಆರ್. ಅನಂತ ಮೂರ್ತಿಯವರು ಹೇಳಿರುವುದು ಪ್ರಜಾವಾಣಿಯಲ್ಲಿ ಮೇಲಿನ ಬರಹ ಹೊರಬಂದಿದೆ. ಅದಕ್ಕೆ ಇದಿರುಬರಹವಿದು. ಅನಂತಮೂರ್ತಿಯವರ ಕೆಲವು ಹೇಳಿಕೆಗಳು ಗೊಂದಲದಿಂದ ಕೂಡಿದೆ.

ಮೊದಲಿಗೆ,

"ಒಂದು ಕಾಲದಲ್ಲಿ ಕನ್ನಡ ಬಾಶೆಗೆ ಸಂಸ್ಕ್ರುತ ಅನಿವಾರ್ಯ ಆಗಿತ್ತು. ಈಗ ಕನ್ನಡಕ್ಕೆ ಇಂಗ್ಲಿಶ್ ಅನಿವಾರ್ಯ ಬಾಶೆ ಅನಿಸಿದೆ."

ಇಲ್ಲಿ ಅನಂತಮೂರ್ತಿ(ಅ.ಮೂ)ಯವರು ಕನ್ನಡದ ’ಬರಹ’ದ ಬಗ್ಗೆ ಮಾತಾಡಿತ್ತಿರುವರೊ ಇಲ್ಲವೆ ’ಮಾತಿ’ನ ಬಗೆಗೊ ಎಂಬುದು ತಿಳಿಯಾಗಿಲ್ಲ. ಇರಲಿ; ಒಂದು ವೇಳೆ ಅವರು ಕನ್ನಡ ಮಾತಿನ ಬಗ್ಗೆ ಆಗಿದ್ದರೆ ಅವರ ನಿಲುವು ತಪ್ಪೆಂದು ಹೇಳಬೇಕಾಗುತ್ತದೆ. ಯಾಕಂದರೆ ಸಹಜವಾಗಿ ಯಾವುದೇ ಎರಡು ನುಡಿಗಳು ಒಟ್ಟಿಗೆ ಬಂದಾಗ ಹೇಗೆ ’ಕೊಡುಕೊಳು’ ಆಗುತ್ತದೆಯೋ ಹಾಗೆಯೇ ಕನ್ನಡ ಮತ್ತು ಸಂಸ್ಕ್ರುತದ ನಡುವೆ ಕೊಡುಕೊಳು ಆಗಿದೆ. ಅದರಂತೆಯೇ ಕನ್ನಡದಲ್ಲಿ ಸಂಸ್ಕ್ರುತದ ಕೆಲವು ಎರವಲು ಪದಗಳು ಸೇರಿಕೊಂಡಿವೆ. ಹಾಗೆಯೇ ಕನ್ನಡದಿಂದ ಸಂಸ್ಕ್ರುತಕ್ಕೂ ಕೆಲವು ಪದಗಳು ಹೋಗಿವೆ.ಎತ್ತುಗೆಗೆ: ಮೀನು.

ಇದನ್ನೇ ಮುಂದಿಟ್ಟುಕೊಂಡು ಕನ್ನಡಕ್ಕೆ ಮಾತಿಗೆ ಸಂಸ್ಕ್ರುತ ಬಾಶೆ ಅನಿವಾರ್ಯವಾಗಿತ್ತು ಅಂತ ಹೇಳುವುದು ಸರಿಯಲ್ಲ.
ಒಂದು ವೇಳೆ ಅ.ಮೂ ರವರು ಕನ್ನಡದ ಬರಹದ ಬಗ್ಗೆ ಮಾತನಾಡಿದ್ದರೆ ಅವರ ಈ ಮಾತು ಸರಿ ಎಂದು ಒಪ್ಪಿಕೊಳ್ಳಬಹುದು. ಆದರೆ ಅದನ್ನು ಹೀಗೆ ಎತ್ತಿ ಹೇಳುವುದು ಬೇಕಾಗಿರಲಿಲ್ಲ ಯಾಕಂದರೆ ತೀರ ಇತ್ತೀಚೆನವರೆಗೂ ’ಕನ್ನಡ ಬರಹ’ ಎಲ್ಲ ಕನ್ನಡ ಮಂದಿಯನ್ನು ತಲುಪಿರಲಿಲ್ಲ ಇಲ್ಲವೆ ಇನ್ನೂ ತಲುಪಿಲ್ಲ. ಯಾವ ವಸ್ತು( ಕನ್ನಡ ಬರಹ) ಹೆಚ್ಚಿನ ಕನ್ನಡ ಮಂದಿಯನ್ನು ತಲುಪಿಯೇ ಇಲ್ಲವೊ ಅದನ್ನು ಚರ್ಚೆ ಮಾಡಿ ಏನು ಬಳಕೆ? ’ಕನ್ನಡ ಬರಹ’ ಎನ್ನುವುದು ಮೇಲ್ವರ್ಗದವರ ಸೊತ್ತಾಗಿ ಇತ್ತು ಇನ್ನೂ ಇದೆ. ಕೆಲವು ಸಂಸ್ಕ್ರುತ ಬಲ್ಲವರು ಉಂಟು ಮಾಡಿದ ’ಕನ್ನಡ ಬರಹ’ವನ್ನು ಎತ್ತುಗೆಯನ್ನಾಗಿ ಮಾಡಿಕೊಂಡು ನಿಲುವನ್ನು ಮುಂದಿಡುವುದು ಎಶ್ಟು ಸರಿ? ಈ ರೀತಿಯ ಕನ್ನಡದ (ಮಾತು ಮತ್ತು ಬರಹ) ಬಗೆಗಿನ ಸೀಳುನೋಟಗಳು ನಮ್ಮನ್ನು ದಿಕ್ಕು ತಪ್ಪಿಸುತ್ತವೆ. ಅಲ್ಲದೆ ತಪ್ಪು ತಪ್ಪಾದ ನಿಲುವುಗಳತ್ತ ನಮ್ಮನ್ನು ಕೊಂಡೊಯುತ್ತವೆ.

ಎಂದಿಗೂ ಕನ್ನಡಕ್ಕೆ ( ಅಂದರೆ ಮಾತಿಗೆ...ಯಾಕಂದರೆ ಮಾತೇ ಇಲ್ಲಿ ಮೊದಲು ಮತ್ತು ಮುಕ್ಯ) ಸಂಸ್ಕ್ರುತ ಅನಿವಾರ್ಯವಾಗಿರಲಿಲ್ಲ. ಇಂಗ್ಲಿಶ್ ಕೂಡ ಅನಿವಾರ್ಯಾಗಿಲ್ಲ/ಅನಿವಾರ್ಯವಾಗೊಲ್ಲ. ಇದು ’ಬರಹ’ ಹುಟ್ಟಿಸಿರುವ ಒಂದು ಬ್ರಮೆಯಲ್ಲದೇ ಬೇರೇನಲ್ಲ.

"ನಾಡಿನ ಎಲ್ಲ ಮಕ್ಕಳು ಸರ್ಕಾರಿ ಶಾಲೆಗಲಲ್ಲಿ ಕಲಿಯುವಂತಹ ವ್ಯವಸ್ತೆ ನಿರ್ಮಾಣವಾಗಬೇಕು"

ಇದು ಒಂದು ತಿಳಿಹೇಳುವಿಕೆಯ ಮಾತಿನಂತೆ ಇದೆ. ಆದರೂ ಅ.ಮೂ.ರವರ ಒಳ್ಳೆಯ ಗುರಿ ಇಟ್ಟುಕೊಂಡು ಈ ಮಾತು ಹೇಳಿದ್ದಾರೆ. ಆದರೆ ಮಾನವ ಕಟ್ಟಿರುವ ’ಸರ್ಕಾರ’ ಎಂಬ ಏರ್ಪಾಟಿನಲ್ಲಿ ಕೆಲಸಗಳು ತುಂಬಾ ಮೆಲ್ಲಗೆ ನಡೆಯುತ್ತದೆ. ಅ.ಮೂ.ರವರ ಮಾತನ್ನು ಎಸಕಕ್ಕೆ ತರುವುದು ಅಶ್ಟು ಸುಲಬದ ಮಾತಲ್ಲ. ಹಾಗಾಗಿ ಇಂತಹ ಮಾತುಗಳು ಪೋಲಾಗಿ
ಗಾಳಿಯಲ್ಲಿ ತೇಲುತ್ತವೆಯಶ್ಟೆ. ಹಾಗಾದರೆ ಇದಕ್ಕೆ ಬಗೆಹರಿಕೆ ಏನು? ಅಂತ ಕೇಳ್ವಿ ನಮ್ಮ ಮುಂದೆ ಬರುತ್ತದೆ.
ಎಸಕಬಲ್ಲ(practicable) ಆಯ್ಕೆ ಯಾವುದೆಂದರೆ ಸರ್ಕಾರದ ಕಲಿಮನೆಗಳ ಜೊತೆಜೊತೆಗೆ ಕನ್ನಡ ಒಯ್ಯುಗೆಯಲ್ಲಿ ಮೇಲ್ಮಟ್ಟದ ಕಾಸಗಿ ಕಲಿಮನೆಗಳನ್ನು ಕಟ್ಟುವುದು. ಈಗ ಇಂಗ್ಲಿಶ್ ಒಯ್ಯುಗೆ ಬೇಕೆಂದು ಹಪಹಪಿಸುತ್ತಿರುವವರನ್ನು ಕನ್ನಡದ ಒಯ್ಯುಗೆಯೆಡೆಗೆ ಕೊಂಡೊಯ್ಯುವಶ್ಟು ಒಳ್ಳೆ ಕಲಿಮನೆಗಳನ್ನು ಕಟ್ಟಿದರೆ ಕಾಸಗಿ ಕಲಿಮನೆಗಳಿಗೆ ಮಂದಿ ಕಣ್ಣೆತ್ತಿಯೂ ನೋಡುವುದಿಲ್ಲ. ಇದಕ್ಕೆ ಕನ್ನಡದ ಬರಹವನ್ನು ನಲ್ಬರಹಕ್ಕೆ ಮೊಟಕುಗೊಳಿಸದೆ ಅರಿಮೆಯ ಬರಹವನ್ನಾಗಿ ಮಾರ್ಪಡಿಸಬೇಕು. ಅಂದರೆ ಕನ್ನಡದಲ್ಲೇ ಹೊಸಗಾಲದ ಅರಿಮೆಗಳು ಸಿಗುವಂತಾಗಬೇಕು. ಹಾಗೆ ಆಗಬೇಕಾದರೆ ಕನ್ನಡದ್ದೇ ಆದ ಪದಗಳು ಬೇಕು. ಈ ಪದಗಳಿಂದಾದ ಓದುಗೆಗಳು ಬೇಕು. ಇಂತಹ ಒಂದು ಕಲಿಕೆಯೇರ್ಪಾಡಿನಿಂದ ಹೊರಬರುವವರು ಮುಂದೆ ಕನ್ನಡದಲ್ಲೇ ಹೊಸ ಹೊಸ ಅರಿಮೆಗಳನ್ನು ಹುಟ್ಟಿಸಬಲ್ಲರು. ಈ ಅರಿಮೆಗಳಿಂದನೇ ಕನ್ನಡಿಗರು ಏಳಿಗೆಯೆಡೆಗೆ ನಡೆಯಬಲ್ಲರು. ಹೆರವರ ಜೊತೆ ಸಾಟಿಯಾಗಿ ನಿಲ್ಲಬಲ್ಲರು.

ಭಾನುವಾರ, ಜೂನ್ 24, 2012

ಚಿದಾನಂದ ಮೂರ್ತಿಯವರ ಬರಹಕ್ಕೆ ಇದಿರುಬರಹ


ಹಿರಿಯರಾದ ಚಿದಾನಂದ ಮೂರ್ತಿಗಳು ಹಲವು ವಿಶಯಗಳನ್ನು ತಮ್ಮ ಬರಹದಲ್ಲಿ ಮುಂದಿಟ್ಟಿದ್ದಾರೆ. ಅವುಗಳಲ್ಲಿ ಹಲವು ಪೊಳ್ಳುತನದಿಂದ ಕೂಡಿರುವುದರಿಂದ ಇದರ ಬಗ್ಗೆ ಮರುನುಡಿಯಬೇಕಾಗಿದೆ.

೧. ಇಂಗ್ಲಿಶ್ ಸ್ಪೆಲ್ಲಿಂಗ್ ತೊಡಕಿದೆ. ಕನ್ನಡದಲ್ಲೂ ಇರಲಿ. ತಪ್ಪೇನು?
ಇಂಗ್ಲಿಶ್ ಎಂದಿಗೂ ಒಂದು ಪೊನೆಟಿಕ್ (ಉಲಿಕೆಗೆ ಅನುಗುಣವಾಗಿ) ನುಡಿಯಾಗಿರಲಿಲ್ಲ ಹಾಗಾಗಿ ಇಂಗ್ಲಿಶಿನಲ್ಲಿ ಹೇರಳ ಸ್ಪೆಲ್ಲಿಂಗ್ ತೊಡಕುಗಳು ಉಂಟಾಗಿವೆ. ಆದರೆ ಕನ್ನಡದಲ್ಲಿ ಅಂತಹ ದೊಡ್ಡ ಮಟ್ಟದ ಸ್ಪೆಲ್ಲಿಂಗ್ ತೊಡಕಿಲ್ಲ ಯಾಕಂದರೆ ಆ ತೊಡಕು ಇರುವುದು ಸಂಸ್ಕ್ರುತದಿಂದ ಎರವಲು ಪಡೆದ ಪದಗಳಿಗೆ ಮಾತ್ರ. ಆದರೆ ಇಂದಿನ ಕನ್ನಡ ಬರಹಗಳಲ್ಲಿ ಹೆಚ್ಚೆಚ್ಚು ಸಂಸ್ಕ್ರುತದ ಪದಗಳು ಕಾಲಿಡುತ್ತಿರುವುದರಿಂದ ಈ ಸ್ಪೆಲ್ಲಿಂಗ್ ತೊಡಕು ದೊಡ್ಡದಾಗಿ ಕಾಣಿಸುತ್ತದೆ. ಹಾಗಾಗಿ ಡಿ.ಎನ್. ಶಂಕರಬಟ್ಟರು ಈ ಎರಡು ಹೊಳಹುಗಳನ್ನು ಸೂಚಿಸಿದ್ದಾರೆ.

     ಅ) ಕನ್ನಡ ಬರಹಗಳಲ್ಲಿ ಸಂಸ್ಕ್ರುತದ ಪದಗಳ ಬಳಕೆಯನ್ನು ತಗ್ಗಿಸುವುದು.
     ಆ) ಈಗಿರುವ ಕನ್ನಡ ಬರಹದಲ್ಲಿರುವ ಬೇಡದಿರುವ ಕೆಲವು ಬರಿಗೆಗಳನ್ನು ಕನ್ನಡ ಬರಹಮಾಲೆಯಿಂಡ ಕಯ್ ಬಿಡುವುದು.

ಈ ಬರಿಗೆಗಳನ್ನು ಕಯ್ ಬಿಡುವ ಕೆಲಸವನ್ನು ಮಾಡಿದವರಲ್ಲಿ ಶಂಕರಬಟ್ಟರು ಮೊದಲಿಗರೇನಲ್ಲ.. ನಡುಗನ್ನಡದ ಕವಿ ಹರಿಹರ ಮೊದಲು ’ೞ’ ಮತ್ತು ’ಱ’ ಗಳನ್ನು ಕಯ್ ಬಿಟ್ಟು ಬರೆಯಲು ತೊಡಗಿ ಆಮೇಲೆ ಹೆಚ್ಚಿನವರು ಅವನ ದಾರಿಯನ್ನೇ ಪಾಲಿಸಿದರು. ಹಾಗಾಗಿ ಹೊಸಗನ್ನಡದಲ್ಲಿ ನಾವು ’ೞ’, ಮತ್ತು ’ಱ್’ ಗಳನ್ನು ಉಳಿಸಿಕೊಂಡಿಲ್ಲ. ಎಶ್ಟೊ ಕನ್ನಡಿಗರಿಗೆ ಈ ಬರಿಗೆಗಳ ಪರಿಚಯವೂ ಇಲ್ಲ. ಹಾಗಾಗಿ ಅಂತಹ ದೊಡ್ಡದಾದ ಆಬಾಸವಾಗಲಿ ಆಗುತ್ತಿದೆ ಎಂದು ಯಾರು ಹೇಳುತ್ತಿಲ್ಲ. ಹಳೆಗನ್ನಡವನ್ನು ಓದುವ ಕೆಲವೇ ಕೆಲವರು ’ಱ’ ಮತ್ತು ’ೞ’ ಗಳನ್ನು ತಿಳಿದುಕೊಂಡು ಓದುತ್ತಿದ್ದಾರೆ. ಮಹಾಪ್ರಾಣವನ್ನು ನಾವು ಇದೇ ರೀತಿ ಇರಿಸಬಹುದು. ಎಲ್ಲರೂ ಹೇಗೆ ಱ, ೞ ಹೇಗೆ ಕಲಿಯುತ್ತಿಲ್ಲವೊ ಹಾಗೆ ಎಲ್ಲರೂ ಮಹಾಪ್ರಾಣವನ್ನು ಕಲಿಯಬೇಕಾಗಿಲ್ಲ. ಇದಲ್ಲದೆ ಮಾತಿಗೆ ತಕ್ಕಂತೆ ತಮ್ಮ ಲಿಪಿಯನ್ನು ಅಣಿಗೊಳಿಸಿಕೊಂಡಿರುವ ಪಿನ್ನಿಶ್ ನುಡಿಯ ಬಗ್ಗೆ ಚಿ.ಮೂರವರು ತಿಳಿದುಕೊಂಡಿಲ್ಲ ಅಂತ ಕಾಣಿಸುತ್ತೆ. ಇದನ್ನು ಶಂಕರಬಟ್ಟರು ತಮ್ಮ ಹೊತ್ತಗೆಗಳಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂಗ್ಲಿಶಿನಂತೆ ಎಲ್ಲ ಪದಗಳಿಗೆ ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳವ ಗೊಡವೆ ಪಿನ್ನಿಶ್ ನುಡಿಯಲ್ಲಿ ಇಲ್ಲ. ಹಾಗಾಗಿ ಪಿನ್ನಿಶ್ ನುಡಿಯಲ್ಲಿ ಅವರು ಜಗತ್ತಿನಲ್ಲೇ ಮೇಲ್ಮಟ್ಟದ ಕಲಿಕೆಯೇರ್ಪಾಟನ್ನು ಕಟ್ಟಿದ್ದಾರೆ.

೨. ಮಹಾಪ್ರಾಣಗಳನ್ನು ಬಿಟ್ಟರೆ ಆಬಾಸವಾಗುತ್ತದೆ
ಚಿದಾನಂದ ಮೂರ್ತಿಯವರು ಬೇಕೆಂದೇ ಹಲವು ವಿಶಯಗಳನ್ನು ಮುಚ್ಚಿಟ್ಟಿದ್ದಾರೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಿಗೆಮಾಲೆಯನ್ನು ಹಳೆಗನ್ನಡ/ನಡುಗನ್ನಡದ ಕವಿಗಳು ಪಾಲಿಸಿದ್ದಾರೆ.
ಎತ್ತುಗೆಗೆ:
     ಅ) ಕವಿರಾಜಮಾರ್ಗದಲಿ ’ದೋಸಮಿನಿತೆಂದು..." ಎಂಬ ಪದ್ಯವಿದೆ. ಗಮನಿಸಿ ಇದರಲ್ಲಿ ’ದೋಸ’ ಎಂದೇ ಬಳಸಲಾಗಿದೆಯೇ ಹೊರತು ’ದೋಷ’ ಎಂದು ಬಳಸಲಾಗಿಲ್ಲ. ’ಋಷಿ’ ಎಂದು ಈಗ ಬರೆಯಲಾಗುತ್ತಿರುವ ಪದವನ್ನು ಹಳೆಗನ್ನಡಲ್ಲಿ ’ರಿಸಿ’ ಎಂದೇ ಬರೆಯಲಾಗಿತ್ತಿತ್ತು, ಹಾಗಂತ ಕವಿರಾಜಮಾರ್ಗ ಇಲ್ಲವೆ ಇತರೆ ಓದುವಾಗ ಮಾನ್ಯ ಚಿದಾನಂದ ಮೂರ್ತಿಗಳಿಗೆ ಆಬಾಸವಾಗಲಿಲ್ಲವೇನೊ?

    ಆ) ಆಂಡಯ್ಯನ ’ಕಬ್ಬಿಗರ ಕಾವ’ದ ಬಗ್ಗೆ ಹೊಸಗನ್ನಡದಲ್ಲಿ ಸೀಳುನೋಟದ ಹಲವು .ಕ್ರುತಿಗಳು ಬಂದಿದೆ. ಆದರೆ 'ಕಬ್ಬಿಗರ ಕಾವ'ದಲ್ಲಿ ಎಲ್ಲೂ ಮಹಾಪ್ರಾಣಗಳನ್ನು ಬಳಸಿಲ್ಲ. ’ಘೋಷಣೆ’ ಯನ್ನು ’ಗೋಸಣೆ’ ಎಂದೇ ಆಂಡಯ್ಯನು ಬರೆದಿರುವುದು. ಈ ರೀತಿ ಬರೆಯುವುದು ಕನ್ನಡದ ಹಿರಿಮೆಯನ್ನು ಎತ್ತಿ ಹಿಡಿಯುವ ಮತ್ತು ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡವನ್ನಾಗಿ ಮಾಡುವ ಮೊಗಸೇ ಆಗಿತ್ತು. ಹೀಗೆ ಆಂಡಯನನ್ನು ಓದುವಾಗ ಆಗದ ಆಬಾಸ ಈಗ ಏಕೆ ಆಗುತ್ತದೆ? ಚಿದಾನಂದ ಮೂರ್ತಿಯವರೇ ಇದಕ್ಕೆ ಉತ್ತರಕೊಡಬೇಕು. ಒಂದು ವೇಳೆ ಚಿದಾನಂದ ಮೂರ್ತಿಯವರಿಗೆ ಆಬಾಸವಾದರೂ ಎಲ್ಲ ಕನ್ನಡಿಗರಿಗೂ ಅದೇ ರೀತಿ ಆಬಾಸವಾಗುತ್ತದೆ ಎಂದು ಚಿದಾನಂದ ಮೂರ್ತಿಯವರು ಹೇಗೆ ಹೇಳುತ್ತಾರೆ?

ಇಶ್ಟಕ್ಕೂ ಮಹಾಪ್ರಾಣವಿರುವ ಒಂದೇ ಒಂದು ಕನ್ನಡದ್ದೇ ಆದ ಪದವನ್ನು ಚಿದಾನಂದ ಮೂರ್ತಿಯವರು ತೋರಿಸಿಕೊಡಲಿ.

೩. ಕನ್ನಡದಲ್ಲಿ ಉತ್ತಮ ಚಿಂತನೆ, ಬಾವನೆಗಳನ್ನು ವ್ಯಕ್ತ ಪಡಿಸಲಾರೆವು
ಯಾವುದೇ ಒಂದು ನುಡಿಗೆ ಅದರೇ ಆದ ಸೊಗಡು, ಹಿನ್ನಡವಳಿ ಇರುತ್ತದೆ. ಸಂಸ್ಕ್ರುತದಲ್ಲಿ ಹೊರತರುವ ಅನಿಸುಗಳು, ಉಂಕುಗಳು ಕನ್ನಡದಲ್ಲೂ ಇರಬೇಕೆನ್ನುವ ಒತ್ತಾಯವೇತಕ್ಕೆ? ಹಾಗೆ ಕನ್ನಡದಲ್ಲಿ ಹೊರತರುಬಹುದಾದ ವಿಶಯಗಳು ಸಂಸ್ಕ್ರುತದಲ್ಲಿ ತರಲಾಗುವುದಿಲ್ಲ. ’ಒಂದು’, ಎರಡು ಅಂತ ಸಂಸ್ಕ್ರುತದಲ್ಲಿ ಬರೆಯಲು ಆಗುವುದೇ ಇಲ್ಲ. ಅವನ್ನು ’ಓಂದು’ ಮತ್ತು ’ಏರಡು’ ಅಂತಲೇ ಸಂಸ್ಕ್ರುತದಲ್ಲಿ ಬರೆಯಬೇಕಾಗುತ್ತದೆ. ಇದನ್ನೇ ಮುಂದಿಟ್ಟುಕೊಂಡು ಸಂಸ್ಕ್ರುತದಲ್ಲಿ ಇಂತಹ ಸರಳ ವಿಶಯಗಳಾದ ಎಣಿಕೆಯನ್ನು ವ್ಯಕ್ತ ಪಡಿಸಲಾಗುವುದಿಲ್ಲ ಎಂದು ಹೇಳಲಾಗುತ್ತದೆಯೆ? ಆದ್ದರಿಂದ ಚಿದಾನಂದಮೂರ್ತಿಯವರು ಹೇಳುತ್ತಿರುವ ’ಕನ್ನಡದಲ್ಲಿ ಉತ್ತಮ ಭಾವನೆ ಮತ್ತು ಚಿಂತನೆಗಳನ್ನು ವ್ಯಕ್ತ ಪಡಿಸಲಾರೆವು’ ಎಂಬ ಮಾತಿನಲ್ಲಿ ಹುರುಳಿಲ್ಲ.

೪. ಸಂಸ್ಕ್ರುತದ ಮಂತ್ರಗಳನ್ನು ಸಂಸ್ಕ್ರುತದಲ್ಲಿರುವಂತೆ ನಾವು ಉಲಿಯದಿದ್ದರೂ ಬರೆಯಬೇಕು
ಚಿದಾನಂದ ಮೂರ್ತಿಯವರು ಹೇಳಿರುವ ಎಲ್ಲ ಮಂತ್ರಗಳು ಸಂಸ್ಕ್ರುತದ್ದವು ಕನ್ನಡದ್ದಲ್ಲ. ಇವನ್ನು ಹೆಚ್ಚು ಕನ್ನಡ ಮಂದಿಯೂ ತಮ್ಮ ದಿನಬಳಕೆಯಲ್ಲಿ ಬಳಸುವುದಿಲ್ಲ. ಕೆಲವರು ಬಳಸುತ್ತಿರುವವರು ಅದು ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಓದುವುದಿಲ್ಲ ಇಲ್ಲವೆ ಉಲಿಯುವುದಿಲ್ಲ. ಆದರೂ ಒತ್ತಾಯಪೂರ್ವಕವಾಗಿ ಸಂಸ್ಕ್ರುತದಲ್ಲಿ ಹೇಗಿದಿಯೋ ಹಾಗೆ ಅದನ್ನ ಉಳಿಸಿಕೊಳ್ಳಬೇಕೆಂದು ಇವತ್ತಿನ ಕನ್ನಡ ಬರಹ ಬಲವಂತ ಪಡಿಸುತ್ತಿದೆ. ವಿಸರ್ಗದ ಬದಲಾಗಿ ’ಹ’ಕಾರವನ್ನೇ ಕನ್ನಡಿಗರು ಉಲಿಯುವುದು. ಕಿವಿಗೆ ’ಹ’ಕಾರ ಕೇಳಿದರೂ ಕಣ್ಣಿಗೆ ವಿಸರ್ಗವೇ ಏಕೆ ಕಾಣಿಸಬೇಕು? ಇನ್ನು ವಿಸರ್ಗವನ್ನು ಬಿಡುವುದರಿಂದ ಕನ್ನಡದ್ದೇ ಆದ ಪದಗಳಿಗೆ ಯಾವುದೇ ತೊಂದರೆಯಿಲ್ಲ.

೫. ಅಚ್ಚಗನ್ನಡದ ಪದಗಳ ಹುಟ್ಟು ವ್ಯರ್ತ ಕೆಲಸ ಎಂಬ ಉಪದೇಶ:
ಬರಿಗೆ, ಅರಿಮೆ ಮತ್ತು ಉಲಿಕೆ ಎಂಬ ಪದಗಳು ಉಂಟು ಮಾಡುವುದು ಬೇಕಾಗಿಲ್ಲ ಮತ್ತು ಇವು ಸಂಸ್ಕ್ರುತಕ್ಕಿಂತ ಕಟಿಣ ಎಂಬ ತಮ್ಮ ಅನಿಸಿಕೆಯನ್ನು ಅದೇಶವೆಂಬಂತೆ ಯಾವುದೇ ಕಾರಣ ಕೊಡದೇ ಹೊರಡಿಸಿದ್ದಾರೆ. ಎಲ್ಲರಿಗೂ ಸಾಮಾನ್ಯವಾಗಿ ಅರ್ತವಾಗುವ ಪದಗಳಾದ ಬರೆ, ಅರಿ ಮತ್ತು ಉಲಿ ಎಂಬ ಪದಗಳಿಂದ ಈ ಪದಗಳನ್ನು ಉಂಟುಮಾಡಲಾಗಿದೆ. ಕನ್ನಡಿಗರಿಗೆ ಕನ್ನಡಕ್ಕಿಂತ ಸಂಸ್ಕ್ರುತವೇ ಸುಲಬ ಎನ್ನುವ ಚಿ.ಮೂ ಅವರ ಮಾತನ್ನು ಯಾರಾದರೂ ಒಪ್ಪಲಾಗುತ್ತದೆಯೇ? ಆರಂಬಕಾರನಿಗೆ ಹೊಲ ಉಳುವುದು ಕಶ್ಟವೆ? ಕೋಗಿಲೆಗೆ ಇನಿದನಿ ಉಲಿಯುವುದು ಕಶ್ಟವೆ? ಹೂವಿಗೆ ಅರಳುವುದು ಕಶ್ಟವೆ? ಇದನ್ನು ಚಿ.ಮೂ ಅವರು ಕೊಂಚ ಯೋಚಿಸಲಿ. ಈ ರೀತಿ ಕನ್ನಡದಲ್ಲಿ ಪದವನ್ನು ಉಂಟು ಮಾಡದೇ ಸುಮ್ಮನೆ ’ಕನ್ನಡ! ಕನ್ನಡ!’ ಅಂತ ಬಡಿದುಕೊಳ್ಳುವುದರಲ್ಲಿ ಏನಿದೆ? ಚಿ.ಮೂ.ರವರು ಇಶ್ಟೊಂದು ಕನ್ನಡದ ಬಗೆಗಿನ ಅರಕೆಗಳನ್ನು ಮಾಡಿದ್ದು ಏತಕ್ಕೆ?

೬. ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲ
ಅವರ ಬರಹದ ತಲೆಬರಹದಲ್ಲಿ ಒಟ್ಟು ೬ ಪದಗಳಿವೆ ಅದರಲ್ಲಿ ೪ ಪದಗಳು(ಲಿಪಿ, ಸಂಸ್ಕರಣೆ,ಅನಗತ್ಯ,ಅಸಾಧ್ಯ) ಸಂಸ್ಕ್ರುತದ್ದು ಇನ್ನುಳಿದ ೨ ಕನ್ನಡದ್ದು ( ಕನ್ನಡ, ಮತ್ತು). ಅದನ್ನು ಹೀಗೆ ಬರೆಯಬಹುದಿತ್ತು ’ಕನ್ನಡ ಬರಹದಲ್ಲಿ ಮಾರ್ಪು ಬೇಕಾಗಿಲ್ಲ ಮತ್ತು ಆಗುವುದೂ ಇಲ್ಲ’. ಹೀಗೆ ಎಗ್ಗಿಲ್ಲದೆ ಸಂಸ್ಕ್ರುತದ ಎರವಲು ಪದಗಳನ್ನು ತಮ್ಮ ಬರಹದುದ್ದಕ್ಕೂ ಬಳಸಿರುವ ಚಿ.ಮೂ ಅವರು ’ಕನ್ನಡ ಅತೀ ಎನಿಸುವಶ್ಟು ಸಂಸ್ಕ್ರುತದ ಎರವಲು ಪಡೆದಿಲ್ಲಎಂದು ಹೇಗೆ ಹೇಳುತ್ತಾರೆ?

೭. ಕನ್ನಡಿಗರೆಲ್ಲರೂ ಈಗಿರುವ ಲಿಪಿ ಒಪ್ಪಿಕೊಂಡಿದ್ದಾರೆ.
ಮತ್ತೆ ಇವರು ಕನ್ನಡಿಗರಿಗೆ ಯಾವುದೇ ಕಾರಣ ಕೊಡದೇ ತಮ್ಮ ಆದೇಶವನ್ನು ಹೊರಡಿಸುತ್ತಿದ್ದಾರೆ. ಕೆಲವರು, ಅಂದರೆ ಸಂಸ್ಕ್ರುತ ಲಾಬಿಗಳು ಒಪ್ಪಿಕೊಂಡು ಹೇರಲಾದ ಲಿಪಿ ವ್ಯವಸ್ತೆಯನ್ನು ಸಾಮಾನ್ಯರು ಒಪ್ಪಿಕೊಂಡಿದ್ದಾರೆ ಎಂದು ಒಬ್ಬದಿಯ(one-sided) ಮಾತುಗಳನ್ನು ಚಿ.ಮೂರವರು ಮುಂದಿಟ್ಟಿದ್ದಾರೆ. ಆದರೆ ಈಗಲೂ ಕನ್ನಡ ಬರಹದಲ್ಲಿ ಆಗುತ್ತಿರುವ ’ತಪ್ಪು’ಗಳು ಅಂದರೆ ಸಂಸ್ಕ್ರುತದ ಪ್ರಕಾರ ಮಹಪ್ರಾಣ ಇರುವ ಕಡೆ ’ಮಹಾಪ್ರಾಣ’ ಇಲ್ಲದಿರುವುದು. ಮಹಾಪ್ರಾಣ ಇಲ್ಲದಿರುವ ಕಡೆ ಮಹಾಪ್ರಾಣ ಇರುವುದು ಗೊಂದಲವನ್ನು ಉಂಟುಮಾಡಿದೆ. ಈ ತರ ಕನ್ನಡಿಗರು ಮಹಾಪ್ರಾಣವನ್ನು ಒಪ್ಪದಿರುವಿಕೆಯನ್ನು ತೋರಿಸುತ್ತಲೇ ಇದ್ದಾರೆ.

ಕನ್ನಡ ಬರಹದಲ್ಲಿ ಹೆರನುಡಿಗಳನ್ನು ಉಲ್ಲೇಕ ಮಾಡುವುದು ತೀರ ವಿರಳ. ಅದಕ್ಕೋಸ್ಕರ ಕನ್ನಡಬರಹದಲ್ಲಿ ಮಹಾಪ್ರಾಣಗಳನ್ನು ಉಳಿಸಿಕೊಳ್ಳಬೇಕು ಎನ್ನುವುದು ಎಶ್ಟು ಸರಿ. ನಮಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳುವುದು ವಾಡಿಕೆಯೇ ಹೊರತು ಹೆರವರಿಗೆ ಬೇಕಾದ ಹಾಗೆ ನಮ್ಮ ಮನೆಯನ್ನು ಕಟ್ಟಿಕೊಳ್ಳಲಾದೀತೆ?

ಕೊನೆಗೆ ಯಾವುದೇ ಅರಿಮೆಯ ಓಸುಗರಗಳನ್ನು ಕೊಡದೇ ’ಲಿಪಿ ಸುದಾರಣೆಯನ್ನು ಗಂಬೀರವಾಗಿ ಗಮನಿಸಬೇಕಾಗಿಲ್ಲ’ ಎಂದು ಹೇಳಿದ್ದಾರೆ. ಈಗಾಗಲೇ ಕನ್ನಡ ಬರಿಗೆ ಮಾಲೆಯು ಹಳೆಗನ್ನಡದಿಂದ ಹೊಸಗನ್ನಡಕ್ಕೆ ಮಾರ್ಪಾಗುತ್ತ ಬಂದಿದೆ. ಈ ಮಾರ್ಪಾಗುತ್ತಿರುವುದು ಕನ್ನಡಕ್ಕಿರುವ ಜೀವಂತಿಕೆಯನ್ನು ತೋರಿಸುತ್ತದೆ. ಹಾಗಾಗಿ ಹೊಸಗಾಲದ ಬೇಕು/ಬೇಡಗಳಿಗೆ ತಕ್ಕಂತೆ ಕನ್ನಡ ಬರಿಗೆಮಾಲೆಯನ್ನು ಅಣಿಗೊಳಿಸಿ ಹೊಸ ದಾರಿಯನ್ನು ತುಳಿಯುವ ಕನ್ನಡದ ಪರಂಪರೆಯನ್ನು ನಾವು ಮುಂದುವರೆಸಬೇಕಾಗಿದೆ. ಡಿ.ಎನ್. ಶಂಕರಬಟ್ಟರು ಹೇಳಿರುವ ಬರಹ ಮಾರ್ಪುಗಳನ್ನು ಅಳವಡಿಸಿದರೆ ಹೆಚ್ಚು ಕನ್ನಡಿಗರಿಗೆ ಬಳಕೆಯೇ ಹೊರತು ತೊಂದರೆಯಿಲ್ಲ ಎಂದು ದಾರಾಳವಾಗಿ ಮೇಲೆ ತಿಳಿಸಿದ ಕಾರಣಗಳಿಂದ ದಾರಳವಾಗಿ ನಾನು ಹೇಳಬಯಸುತ್ತೇನೆ.

ಬುಧವಾರ, ಜೂನ್ 13, 2012

'ಕನ್ನಡ ಮಾದ್ಯಮ' ಅನ್ನವೇ ಹೊರತು ಉಪ್ಪಿನಕಾಯಿಯಲ್ಲ

ಮಾನ್ಯರೆ,
  ಇತ್ತೀಚೆಗೆ ಸರಕಾರ ಇಂಗ್ಲಿಶ್ ಮಾದ್ಯಮದ ಕುರಿತು ತೆಗೆದುಕೊಂಡಿರುವ ನಿಲುವು ವೈಜ್ನಾನಿಕವಾಗಿ ಸರಿಯಾದುದಲ್ಲ. ದೂರದೃಶ್ಟಿಯಿಲ್ಲದೆ ತೆಗೆದುಕೊಂಡಿರುವ ನಿಲುವು ಇದಾಗಿದೆ. ಒಂದು ನಾಡಿನ ಕಲಿಕೆಯೇರ್ಪಾಡು ಕಟ್ಟುವಲ್ಲಿ ಅದನ್ನ ಕಟ್ಟುವವರ ದೂರದರ್ಶಿತ್ವ ಬಹು ಮುಖ್ಯ ಪಾತ್ರ ವಹಿಸುತ್ತದೆ. ಏಕೆಂದರೆ ಕಲಿಕೆಯೆಂಬುದನ್ನು ಪರಿಣಾಮಕಾರಿಯಾಗಿ ಮಾಡುವುದು ಅಶ್ಟು ಸುಲಬದ ಮಾತಲ್ಲ. ಇದಕ್ಕೆ ಹಲವು ಹಮ್ಮುಗೆಗಳನ್ನು ತಳಪಾಯದಿಂದ ಮಾಡಬೇಕಾಗುತ್ತದೆ. ಅದಕ್ಕಾಗಿ ಕಲಿಕೆಯರಿಗರು , ನುಡಿಯರಿಗರು ಮತ್ತು ಹಿರಿಯ ಚಿಂತಕರು ಕೂತು ಚರ್ಚೆ ನಡೆಸಬೇಕಾಗುತ್ತದೆ.ಆಂದಮೇಲೆ ಕಲಿಕೆಯರಿಗರು ಮತ್ತು ನುಡಿಯರಿಗರು ಈ ಕಲಿಕೆಯ ಮಾಧ್ಯಮನುಡಿಯ ಬಗ್ಗೆ ಏನು ಹೇಳುತ್ತಾರೆಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.  ಜಗತ್ತಿನ ಎಲ್ಲ ಕಲಿಕೆಯರಿಗರು ಒಕ್ಕೊರಲಿನಲ್ಲಿ 'ತಾಯ್ನುಡಿಯಲ್ಲೇ(ಅದಕ್ಕೆ ಹತ್ತಿರವಿರುವ ಪರಿಸರದ ನುಡಿಯಲ್ಲೇ) ಕಲಿಕೆ' ನಡೆದರೆ ಆ ಮಕ್ಕಳ ಕಲಿಕೆ ಚೆನ್ನಾಗಿರುತ್ತದೆ ಮತ್ತು ಮುಂದೆ ಅವರು ಬದುಕಿನಲ್ಲಿ ಹೆಚ್ಚಿನದನ್ನು ಸಾದಿಸಬಹುದೆಂದು ಹೇಳುತ್ತಾರೆ. ಹೇಗೆ ನಾವು ಭೌತವಿಜ್ನಾನದ ವಿಶಯವನ್ನು ತಿಳಿದುಕೊಳ್ಳಲು ಭೌತವಿಜ್ನಾನಿಯ ನೆರವು ಪಡೆಯುತ್ತೇವೆಯೋ ಹಾಗೆ ಇಲ್ಲಿ ಕಲಿಕೆಯರಿಗರ(ಶಿಕ್ಶಣ ತಜ್ನರ) ಅಭಿಪ್ರಾಯ ಕೇಳಬೇಕಾಗುತ್ತದೆ ಯಾಕಂದರೆ ಅವರು ಈ ವಿಶಯದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿರುತ್ತಾರೆ ಮತ್ತು ಅದನ್ನು ಆಳವಾಗಿ ಅಭ್ಯಸಿಸಿರುತ್ತಾರೆ. ಇಂತಹ ಒಂದು ಸಿ.ಆರ್. ಚಂದ್ರಶೇಕರ್ ಅವರ ಬರಹ ಇತ್ತೀಚೆಗೆ ’ಸುಧಾ’ದಲ್ಲಿ ಪ್ರಕಟವಾಗಿತ್ತು.

ಬಡವರು, ದಲಿತರು ಇಂಗ್ಲಿಶ್ ಮಾಧ್ಯಮ ಕೇಳುತ್ತಿದ್ದಾರೆಅಶ್ಟೇ ಏಕೆ, ಪ್ರತಿ ಸಾಮಾನ್ಯ ಮನುಶ್ಯನಿಗೂ ತಾನು ಕೋಟಿ ಕೋಟಿ ಸಂಪಾದನೆ ಮಾಡಬೇಕು ಎಂಬ ಆಸೆ ಇರುತ್ತದೆ. ಅದಕ್ಕಾಗಿ ಬಡವರು ಇಂಗ್ಲಿಶ್ ಮಾಧ್ಯಮ ಕೇಳುವುದು ತಪ್ಪಾ? ಅವರು ಮುಂದೆ ಬರಬಾರದೆ ಎಂಬ ಪ್ರಶ್ನೆಗಳನ್ನು ಇಂದು ಮುಂದಿಡಲಾಗುತ್ತಿದೆ.  ಅದಕ್ಕೆ ಉತ್ತರ ಇಶ್ಟೆ. ಎಲ್ಲರೂ ಮುಂದೆ ಬರಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲರೂ ಕೋಟಿ ಕೋಟಿ ಹಣ ಸಂಪಾದನೆ ಮಾಡಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಹಣ ಸಂಪಾದನೆಗೆ ನಾವು ಕಾನೂನುಬಾಹಿರ, ಅವೈಜ್ನಾನಿಕ  ಮತ್ತು ಅನೈತಿಕ ದಾರಿ ಹಿಡಿಯುವುದು ಎಶ್ಟು ತಪ್ಪೊ ಹಾಗೆ ಬಡವರು ಮತ್ತು ಇಂಗ್ಲಿಶ್ ಪರಿಸರದಲ್ಲಿ ಇಲ್ಲದವರು(ಹೆಚ್ಚಿನ ಕನ್ನಡಿಗರು) ಇಂಗ್ಲಿಶ್ ಮಾದ್ಯಮವೆಂಬ 'ಅಡ್ಡದಾರಿ' ಹಿಡಿಯುವುದು ಅಶ್ಟೆ ತಪ್ಪು. ಯಾಕಂದರೆ ಪರಿಸರದಲ್ಲಿಲ್ಲದ ನುಡಿಯಲ್ಲಿ ಕಲಿಕೆ ಎಂದಿಗೂ ಏಳಿಗೆಯೆಡೆಗೆ ಕೊಂಡೂಯ್ಯುವುದಿಲ್ಲ ಎಂಬ ಮಾತು ಸೂರ್ಯನ ಬೆಳಕಿನಶ್ಟೆ ದಿಟ.  ಆಗ ತಾನೆ ಹುಟ್ಟಿದ ಮಗುವಿಗೆ  'ಎದೆಹಾಲು' ಹೇಗೆ ಮುಖ್ಯವೋ ಹಾಗೆಯೇ ಕಲಿಕೆಗೆ ಹೋಗುವ ಮಗುವಿಗೆ ತಾಯ್ನುಡಿಯೆಂಬ ಎದೆಹಾಲು ಅಶ್ಟೆ ಮುಖ್ಯ. ಯಾಕೆ ನಾವು ಆಗ ತಾನೆ ಹುಟ್ಟಿದ ಮಗುವಿಗೆ ಪಿಜ್ಜಾ, ಬರ್ಗರ್ ಎಲ್ಲವನ್ನು ತಂದುಕೊಡುವುದಿಲ್ಲ. ಇವನ್ನು ಕೊಟ್ಟರೆ ಆಧುನಿಕತೆ/ಮುಂದುವರೆದಿರುವಿಕೆಯನ್ನು ಮಗುವಿಗೆ ಮೈಗೂಡಿಸದಂತಾವುದಿಲ್ಲವೆ? ಎಂಬ ಪ್ರಶ್ನೆ ಎಶ್ಟು ಅವೈಜ್ನಾನಿಕವೊ ಅಶ್ಟೆ
ಅವೈಜ್ನಾನಿಕ ಈ ಕನ್ನಡಿಗರ ಕಲಿಕೆಯಲ್ಲಿ ಇಂಗ್ಲಿಶ್ ಮಾದ್ಯಮವೆಂಬ ಪಿಜ್ಜ/ಬರ್ಗರ್.

ಕೆಲವು ಸಾಹಿತಿಗಳು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಕಳುಹಿಸುತ್ತಿಲ್ಲ..ಯಾಕೆ?:-ಈ ಮೇಲಿನ ಕೇಳ್ವಿಯನ್ನು ಮುಖ್ಯಮಂತ್ರಿಯವರು ಮೊದಲಾಗಿ ಎಲ್ಲರೂ ಕೇಳುತ್ತಿದ್ದಾರೆ. ಕೆಲವು ಬೆರೆಳೆಣಿಕೆಯ ಸಾಹಿತಿಗಳು ತಮ್ಮ ಮಕ್ಕಳನ್ನು'ಕನ್ನಡ ಮಾಧ್ಯಮ'ಕ್ಕೆ ಕಳುಹಿಸಿದಿದ್ದರೇನಂತೆ? 'ತಾಯ್ನುಡಿಯಲ್ಲೇ ಕಲಿಕೆಯು ಉತ್ತಮ' ಎಂಬ ದಿಟವನ್ನು ಅಳಿಸಲಾಗುವುದೇ ? ಒಬ್ಬ ಹೆಸರುವಾಸಿಯಾದ ವೈದ್ಯರನ್ನು ಒಬ್ಬ 'ಸಿಗರೇಟ್ ಸೇದುಗ'ಎಂದು ಕಾರಣ ಕೊಟ್ಟು ಅವರ ಮಾತುಗಳು/ಸಲಹೆಗಳನ್ನು ಅಲ್ಲಗಳೆಯಲಾಗುವುದೇ? ಮೊದಲು ನಾವು ಅರಿಗರು ಏನು ಹೇಳುತ್ತಿದ್ದಾರೆ ಎಂಬುದರ ಗಮನ ಕಡೆ ಹರಿಸಬೇಕೇ ಹೊರತು ಅವರ ವೈಯಕ್ತಿಕ ಚಟುವಟಿಕೆಗಳ ಕಡೆ ಅಲ್ಲ.

ಬರೀ ಬಡವರೇ ಯಾಕೆ ಕನ್ನಡ ಮಾಧ್ಯಮದಲ್ಲಿ ಓದಿ ಕನ್ನಡ ಉಳಿಸಬೇಕು?
.ಕನ್ನಡಿಗ ಯಾರೇ ಆಗಿರಲಿ ಬಡವನಾಗಿರಲಿ, ದಲಿತನಾಗಿರಲಿ ಮತ್ತು ಸಿರಿವಂತನಾಗಿರಲಿ ತಾನು 'ಕನ್ನಡ ಮಾಧ್ಯಮ'ದಲ್ಲಿ ಓದಿ ಕನ್ನಡ ಉಳಿಸುತ್ತೇನೆಂದು ಅಂದುಕೊಳ್ಳುವುದು ದೊಡ್ಡ ತಪ್ಪು. ಬದಲಾಗಿ ಕನ್ನಡ ಮಾಧ್ಯಮವು ಯಾವುದೇ ಕನ್ನಡಿಗನಿಗೆ ವಿಶಯವನ್ನು ಚೆನ್ನಾಗಿ ತಿಳಿಸಿಕೊಡುತ್ತದೆ. ಇದರಿಂದ ಕನ್ನಡಿಗರಿಗೇ ಹೆಚ್ಚು ಉಪಯೋಗವೇ ಹೊರತು ಕನ್ನಡಕ್ಕಲ್ಲ(The prime beneficiary is Kannadiga not Kannada). ಕನ್ನಡಿಗರಿಗೆ 'ಕನ್ನಡ' ಒಂದು ಉತ್ತಮ ಕಲಿಕೆಯ ಸಾಧನವಶ್ಟೆ.  ಆ ಸಾಧನವನ್ನು ಬಳಸಿಕೊಂಡವರು ಹೆಚ್ಚಿನದನ್ನು ಸಾಧಿಸಬಹುದು. ಇಲ್ಲವಾದರೆ ಕನ್ನಡಿಗರಿಗೇನೆ ನಶ್ಟ ಹೊರತು ಕನ್ನಡಕ್ಕಲ್ಲ.
ಕನ್ನಡಿಗರೇ ಕನ್ನಡ ಮಾದ್ಯಮದಲ್ಲಿ ಓದದೇ ಮೇಲೆ ಕನ್ನಡವನ್ನು ಯಾತಕ್ಕೋಸ್ಕರ ಉಳಿಸಿಕೊಳ್ಳಬೇಕು? ಉಪ್ಪಿನಕಾಯಿ ಹಾಕಿಕೊಂಡು ನೆಕ್ಕುವುದಕ್ಕಾ?  'ಕನ್ನಡ ಉಳಿಸುವುದು' ಎನ್ನುವುದಕ್ಕೆ ಏನಾದರೂ ಅರ್ತ ಇದಿಯ?

'ಇಂಗ್ಲಿಶ್' ಏಳಿಗೆಯ ಶಾಶ್ವತ  ಕುರುಹಲ್ಲ ..ಯಾಕೆ?ಇಂದು ಇಂಗ್ಲಿಶಿನಲ್ಲಿ ಹಲವು ಅರಿಮೆಗಳು ಹುಟ್ಟುತ್ತಿರುವುದರಿಂದ 'ಇಂಗ್ಲಿಶ್' ಅರಿಮೆಯ,ಏಳಿಗೆಯ ಕುರುಹು ಎಂದು ಎಲ್ಲರು ಭಾವಿಸಿರುವಂತಿದೆ. ಆದರೆ ೨೦ ವರ್ಶಗಳ ನಂತರ  ಈ ಸ್ಥಿತಿ ಹೀಗೆ ಇರುತ್ತದೆ ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಇಂಗ್ಲಿಶಿನ ಜಾಗಕ್ಕೆ 'ಚೈನೀಸ್' ಬಂದು ಕೂತುಕೊಳ್ಳಬಹುದು. ಆಗ ನಮ್ಮ ಸರ್ಕಾರ 'ಚೈನೀಸ್' ಮಾಧ್ಯಮಕ್ಕೆ ಮಣೆ ಹಾಕುತ್ತೇನೊ?! ಈ ರೀತಿಯ ರಿಯಾಕ್ಟಿವ್ ಕಲಿಕೆಯೇರ್ಪಾಡುಗಳು ನಮ್ಮನ್ನು ದಿಕ್ಕುಗೆಡಿಸುತ್ತದೆಯೇ ಹೊರತು ಏಳಿಗೆಯೆಡೆಗೆ ಕೊಂಡೊಯ್ಯುವುದಿಲ್ಲ.

ಯಾವುದೇ ನೋಟದಿಂದ ನೋಡಿದರೂ 'ತಾಯ್ನುಡಿಯಲ್ಲೇ ಕಲಿಕೆಯೇ ಉತ್ತಮ' ಎಂಬುದರಲ್ಲಿ ಎರಡು ಮಾತಿಲ್ಲ. ಈ ದಿಟವನ್ನು ಅರಿತು ಸರಕಾರ ಕರ್ನಾಟಕದಲ್ಲಿ ದೂರಾಲೋಚನೆಯ ಮತ್ತು ಮೇಲ್ಮಟ್ಟದ ಕಲಿಕೆಯೇರ್ಪಾಡು ಕಟ್ಟಿದರೆ ಒಳಿತು.
ಕಲಿಕೆಯೆಂಬ ಊಟದಲ್ಲಿ ಕನ್ನಡವು ಅನ್ನವೇ ಹೊರತು ಕೊಳೆಸಿದ ಉಪ್ಪಿನಕಾಯಿಯಲ್ಲ. ಅನ್ನ ತಿಂದೇ ಹೊಟ್ಟೆ ಹೊರೆಸುಕೊಳ್ಳಬೇಕೇ ಹೊರತು ಬರೀ ಉಪ್ಪಿನಕಾಯಿ ತಿನ್ನಕ್ಕಾಗಲ್ಲ ಎಂಬುದನ್ನು ನಾವು ಅರ್ತ ಮಾಡಿಕೊಂಡರೆ ಸಾಕು.

ಬುಧವಾರ, ಮೇ 23, 2012

ಕನ್ನಡ ಲಿಪಿ ಸುದಾರಣೆಗೆ ವಿರೋದ ಸಲ್ಲದು

ಇವತ್ತಿನ ವಿಜಯಕರ್ನಾಟಕದಲ್ಲಿ ಕನ್ನಡ ಲಿಪಿ ಸುದಾರಣೆಗೆ ಮಾನ್ಯ ಚಿದಾನಂದ ಮೂರ್ತಿಯವರಿಂದ ವಿರೋದ ಬಂದಿದೆ. ಅವರ ಪ್ರಕಾರ ನುಡಿಯರಿಮೆ(ಬಾಶಾವಿಗ್ನಾನ)ಯೇ ಬೇರೆ ಲಿಪಿಯೇ ಬೇರೆ.  ನುಡಿಯರಿಮೆಯೇ ಓದು ಏತಕ್ಕಾಗಿ ಮಾಡಲಾಗುತ್ತದೆಯಂದರೆ ನುಡಿಯ ಆಳ ಅಗಲಗಳನ್ನು ಅರಿತ ಅದರಿಂದ ದೊರತ ತಿಳಿವುಗಳನ್ನು ಸಮಾಜದಲ್ಲ ಬಳಸಿಕೊಳ್ಳಲು
ಸಾದ್ಯವೇ ಎಂದು ನೋಡಬೇಕಾಗುತ್ತದೆ. ಇದರಿಂದ ಬರಹದಲ್ಲಿ ಕೆಲವು ಮಾರ್ಪುಗಳನ್ನು ತಂದು ಅದರಿಂದ ಕಲಿಕಯನ್ನು ಉತ್ತಮಪಡಿಸಲಾಗುವುದಾದರೆ ನುಡಿಯರಿಮೆಯ ತಿಳವುಗಳನ್ನು ಲಿಪಿ ಸುದಾರಣೆಗ ಏಕೆ ಬಳಸಿಕೊಳ್ಳಬಾರದು? ಕಲಿಕೆ ಮತ್ತು ಅದರಿಂದ ಕಟ್ಟಿಕೊಳ್ಳಬಹುದಾದ ಬದಕನ್ನು ಹಸನು ಮಾಡಬಹುದಾದರೆ ಲಿಪಿ ಸುದಾರಣೇ ಏಕೆ ಬೇಡ? ಹೆಚ್ಚು ಮಂದಿಯ ಕಲಿಕೆಯನ್ನು ಸುಲಬ ಮಾಡುವ ಲಿಪಿ ಸುದಾರಣೆಯಿಂದ ಆಗುವ ಒಳಿತನ್ನು ನೋಡಿದಾಗ 'ಲಿಪಿ ಸಂಸ್ಕ್ರುತಿ'ಯ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಬೇಕು? ಇಶ್ಹ್ಟಕ್ಕೂ ಸಂಸ್ಕ್ರುತಿಯೆಂಬುದು ನಿಂತ ನೀರಲ್ಲ ಹರಿಯುವ ಹೊಳೆ ಇದ್ದ ಹಾಗೆ.
ನುಡಿಯರಿಮೆಯನ್ನು ಓದಿ ನಾವು ಲಿಪಿಯನ್ನು ಸುದಾರಣೆ ಮಾಡಬೇಕು ಎಂದು ತಿಳಿದುಕೊಂಡಿರುವಾಗ ಅದನ್ನು ಆಚರಣೆಗೆ ತರಲು ಏಕೆ ವಿರೋದ?  ನುಡಿ ಮತ್ತು ನಡೆಯಲ್ಲಿ ಯಾಕೆ ಈ ಬೇರೆತನ.  ಬಸವಣ್ಣನವರೇ ಒಂದು ವಚನದಲ್ಲಿ ಹೇಳಿರುವಂತೆ "ನುಡಿಯೊಳಗಾಗಿ ನಡೆಯದಿದ್ದವರ ಮೆಚ್ಚನಾ ಕೂಡಲಸಂಗಮದೇವ" ಎಂದು ಹೇಳಿಲ್ಲವೆ?
ಬಾಶೆಯ ಬೆಳವಣಿಗೆಯ ದ್ರುಶ್ಟಿಕೋನದಿಂದ ನೋಡಿದರೂ- ಬಾಶೆ ಬೆಳೆಯುವುದು ಹೆಚ್ಚು ಹೆಚ್ಚು ಮಂದಿ ಆ ಬಾಶೆಯ ಬರಹವನ್ನು ಕಲಿತಾಗಲೇ ಅಲ್ಲವೆ?   ಲಿಪಿ ಸುದಾರಣೆಯಿಂದ ಕನ್ನಡ ಬರಹವು ಸುಲಬವಾಗುವುದರಿಂದ ಹೆಚ್ಚು ಹೆಚ್ಚು ಮಂದಿ ಚೆನ್ನಾಗಿ ಕನ್ನಡ ಬರಹವನ್ನು ಕಲಿಯಲು ಅನುವಾಗುತ್ತದೆ. ಇದರಿಂದ ಬಾಶೆಯ ಬೆಳವಣಿಗೆ ಕಂಡಿತ ಆಗುತ್ತದೆ.

ಒಂದು ವೇಳೆ ಲಿಪಿ ಸುದಾರಣೆ ಮಾಡದಿದ್ದರೆ ಏನಾಗುತ್ತದೆ ಎಂದು ಯೋಚಿಸಿದರೆ ಎಲ್ಲರು ಕನ್ನಡ ಬರಹವನ್ನು ಚೆನ್ನಾಗಿ ಕಲಿಯಲು ಆಗುವುದಿಲ್ಲ. ಆಗ ಬರಹ ಬಲ್ಲವರು ಮತ್ತು ಬರಹ ಬರದವರು ಎಂಬ ಎರಡು ಗುಂಪುಗಳಾಗಿ ಬರಹಬಲ್ಲವರ ಚಿಂತನೆ ಬರಹಬರದವರ ಚಿಂತನೆಗಿಂತ ಬೇರಾಗಿರುತ್ತದೆ. ಹಾಗಾಗಿ ಸಮಾಜದಲ್ಲಿ ಕಂದಕ ಮೂಡುತ್ತದೆ. ಹೀಗಾಗದಂತೆ ನೋಡಿಕೊಳ್ಳಲು ನಾವು ಲಿಪಿ ಸುದಾರಣೆಗೆ ತೆರೆದುಕೊಳ್ಳಬೇಕಾಗಿದೆ.

ಶನಿವಾರ, ಏಪ್ರಿಲ್ 14, 2012

'ದಶಮುಕ’ ಚೆನ್ನಾಗಿದೆ


ಇವತ್ ’ದಶಮುಕ’ ಸಿನಿಮಾ ನೋಡಿದೆ. ಸಿನಿಮಾ ತುಂಬ ಚೆನ್ನಾಗಿದೆ.



ಏನ್ ಚೆನ್ನಾಗಿದೆ:-



೧. ಕತೆ , ಅನಂತನಾಗ್ ಮತ್ತು ಅವಿನಾಶ್ ಅವರ ನಟನೆ



೨. ರವಿಚಂದ್ರನ್ ತಾವು ತೆಗೆದುಕೊಂಡಿರುವ ಪಾತ್ರದಿಂದ ನಿಮಗೆ ಅಚ್ಚರಿ ಮೂಡಿಸುತ್ತಾರೆ.



೩. ಅನಂತ್ ನಾಗ್- ಅಚ್ಯುತ್ ಅವರು ಅಲ್ಲಲ್ಲ್ ಕಚಗುಳಿ ಇಡುತ್ತಾರೆ....



೪. ಚೇತನ್ ಮತ್ತು ಅವರ ಒಡನಟಿ ಅಲ್ಲಲ್ಲಿ ಮನಕ್ಕೆ ತಂಪನ್ನೀಯುತ್ತಾರೆ.



೫. ಮಾತುಗಳು(ಸೂಳುನುಡಿ- dialogue) ಕಚಗುಳಿ ಕೊಡುವದಲ್ಲದೆ ಲಾಜಿಕ್ಕನ್ನು ಎತ್ತಿ ಹಿಡಿಯುತ್ತಾ ಹೋಗುತ್ತದೆ.



೬. ಎಲ್ಲರಿಗೂ ಅವರಿಗೆ ಒಗ್ಗುವ ಪಾತ್ರವನ್ನು ಕೊಡಲಾಗಿದೆ. ಹಾಗಾಗಿ ಸೀನುಗಳು ಸರಾಗವಾಗಿ ಸಾಗುತ್ತವೆ.



೭. ಅಶ್ಟೊಂದು ಪಾತ್ರಗಳನ್ನು ಒಂದು ಕೋಣೆಯಲ್ಲಿ ಕೂಡಿಹಾಕಿ ತೂಗಿಸಿಕೊಂಡು ಹೋಗುವುದು ಸುಲಬವಲ್ಲ.. ಹಾಗಾಗಿ ನಿರ್ದೇಶಕರು ಒಳ್ಳೆ ಕೆಲಸ ಮಾಡಿದ್ದಾರೆ ಅಂತ ದಾರಾಳ್ವಾಗಿ ಹೇಳಬಹುದು.



೮. ಕೊನೆಯಲ್ಲಿ ’ಕನ್ನಡ ನುಡಿ’ಯ ಬಗೆಗಿನ ಕಾಳಜಿ ತೋರುವ ಸಿನಿಮಾ ಹೇಗೆ ಕತೆಯನ್ನು ಕನ್ನಡತನಕ್ಕೆ ಜಾಣತನದಿಂದ ಒಗ್ಗಿಸಿದ್ದಾರೆ ಎಂಬುದು ಅರಿವಾದಾಗ ನಿಮಗೆ ಕುಶಿಯಾಗುತ್ತದೆ.



ಕೊನೆಯದಾಗಿ. ಹೇಗೆ ನಾವು ಯಾವುದೇ ವಿಶ್ಯವನ್ನು ನಮ್ಮ ಅನುಬವಗಳಿಂದ ಹೊರತಾಗಿ ನೋಡಬೇಕು ಮತ್ತು ಹಾಗೆ ನೋಡಿದಾಗ ಆ ವಿಶ್ಯಕ್ಕೆ ನ್ಯಾಯ ಒದಗಿಸಬಹುದು ಎಂಬುದು ಈ ಸಿನಿಮಾ ನೋಡಿ ಕಲಿಯಬಹುದು.ತುಂಬಾ ಚೆನ್ನಾಗಿದೆ...ಇದಕ್ಕೆ ಹಲಚುಕ್ಕಿಗಳು****** ..ನೋಡಲೇಬೇಕಾದ ಸಿನಿಮಾ. dont miss it

ಮಂಗಳವಾರ, ಫೆಬ್ರವರಿ 07, 2012

’ಪ್ರೌಡಶಾಲೆಯವರೆಗೂ ಸಂಸ್ಕೃತ ಕಡ್ಡಾಯ’-- ಬೇಕಾ ?

ಇವತ್ತಿನ ಪ್ರಜಾವಾಣಿಯಲ್ಲಿ ಪ್ರಕಟವಾಗಿರುವ ’ಪ್ರೌಡಶಾಲೆಯವರೆಗೂ ಸಂಸ್ಕೃತ ಕಡ್ಡಾಯ - ಭೈರಪ್ಪ ಆಗ್ರಹ’ ಎಂಬ ವರದಿಗೆ ಪ್ರತಿಕ್ರಿಯೆ. ಮೊದಲಿಗೆ ಭೈರಪ್ಪನವರು ಹೇಳಿರುವುದು- ’ಭಾರತದ ಜನಜೀವನದ ಭಾಷೆಯಾದ ಸಂಸ್ಕೃತವನ್ನು ಪ್ರೌಢಶಾಲೆಗಳವರೆಗೂ ಕಡ್ಡಾಯಗೊಳಿಸಬೇಕು’ . ಸಂಸ್ಕೃತ ಎಂದಿಗೂ ಜನಜೀವನದ ಭಾಷೆಯಾಗಿರಲಿಲ್ಲ ಬದಲಾಗಿ ಕನ್ನಡ, ತಮಿಳು, ತೆಲುಗು, ಪ್ರಾಕ್ರುತದಂತಹ ಬಾಶೆಗಳು ಜನಜೀವನದ ಬಾಶೆಯಾಗಿತ್ತು, ಇಂದಿಗೂ ಆಗಿವೆ ಎಂಬುದಕ್ಕೆ ಇಂದಿಗೂ ಇವು ಮಾತಿನಲ್ಲಿ ಉಳಿದಿರುವುದೇ ಕಾರಣ. ಹಾಗೆ ನೋಡಿದರೆ ಸಂಸ್ಕ್ರುತ ಒಂದು ಬಾಶೆಯೇ ಅಲ್ಲ ಅದು ಒಂದು ’ಬರಹ’ವಷ್ಟೆ ಎಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಅದು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ತಾನಾಗಿಯೇ ವರ್ಗಾವಣೆ ಆಗುವುದಿಲ್ಲ. ಆದರೆ ಕನ್ನಡದಂತಹ ನುಡಿಯನ್ನು ತಮ್ಮ ಬೆಳವಣಿಗೆಯ ಅಂಗವಾಗಿ ಮುಂದಿನ ತಲೆಮಾರಿನವರು ಪಡೆಯುತ್ತಿರುತ್ತಾರೆ. ಹೀಗಿರುವಾಗ ಸಂಸ್ಕ್ರುತವನ್ನು ಕಡ್ಡಾಯಮಾಡಬೇಕೆನ್ನುವ ದೋರಣೆ ಎಶ್ಟು ವಯ್-ಗ್ನಾನಿಕ ಎಂಬುದನ್ನು ನಾವು ಯೋಚಿಸಬೇಕಾಗುತ್ತದೆ. ಕೇವಲ ಕೆಲವರಿಗೆ ಸಂಸ್ಕ್ರುತದ ಮೇಲಿನ ಎಮೋಶನಲ್ ನಂಟು ಇರುವುದಕ್ಕೆ ಅದನ್ನು ಎಲ್ಲರಿಗೂ ಕಡ್ಡಾಯ ಮಾಡುವುದು ಎಷ್ಟು ಸರಿ?. ಕನ್ನಡಿಗರ ಏಳಿಗೆಯು ಸಂಸ್ಕ್ರುತ ಇಲ್ಲವೆ ಇಂಗ್ಲಿಶ್ ಕಲಿಯುವುದರಲ್ಲಿಲ್ಲ ಯಾಕಂದರೆ ಇವರಡೂ ಕನ್ನಡಿಗರಿಗೆ ಸ್ವಾಬಾವಿಕವಲ್ಲ.

ಅಲ್ಲದೆ ಭೈರಪ್ಪನವರು ’ಸಂಸ್ಕೃತವನ್ನು ಕನ್ನಡ ವಿರೋಧಿ ಭಾಷೆ ಎಂದು ನೋಡಲಾಗಿದೆ’ ಎಂದು ಹೇಳಿರುವುದರಲ್ಲು ತಪ್ಪು ತಿಳುವಳಿಕೆಯಿದೆ ಯಾಕಂದರೆ ಶ್ರೀವಿಜಯ, ನಯಸೇನ ಮತ್ತು ಆಂಡಯ್ಯ ಇವರೆಲ್ಲರೂ ಆಗಿನ ಕಾಲದಲ್ಲಿ ಕನ್ನಡ ಬರಹದಲ್ಲಿ ಅತೀ ಎನ್ನಿಸುವಷ್ಟು ಸಂಸ್ಕ್ರುತವನ್ನು ಬೆರಸಿರುವುದನ್ನು ಗುರುತಿಸಿ ಅದು ಸರಿಯಲ್ಲ ಎಂದು ಹೇಳಿದ್ದರೆ ಹೊರತು ಯಾರೂ ಸಂಸ್ಕ್ರುತವನ್ನು ವಿರೋದಿಸಿಲ್ಲ. ಯಾವ ಬಾಶೆಯ ಮೇಲೂ ಅನಾದರ ತೋರಿಸುವುದು ಸರಿಯಲ್ಲ; ಹಾಗಂತ ನಮ್ಮದಲ್ಲದ ಬಾಶೆಯನ್ನು ನಾವು ಹೊತ್ತುಕೊಂಡು ಮೆರೆಸಬೇಕಾಗಿಲ್ಲ. ಕನ್ನಡಿಗರು ಸಂಸ್ಕ್ರುತದ ವಿಷಯದಲ್ಲಿ ತಟಸ್ಥ ಧೋರಣೆ ತೋರುತ್ತಾ ಕನ್ನಡದ ಕಸುವನ್ನು ಹೆಚ್ಚಿಸುವ ಕಡೆ ಗಮನ ಕೊಡುವುದು ಈಗ ತುರ್ತಾಗಿ ಆಗಬೇಕಾಗಿರುವುದು ಎಂದು ಹೇಳಬಯಸುತ್ತೇನೆ.

"ಸಂಸ್ಕ್ರುತವನ್ನು ಉಳಿಸುವ ಮೂಲಕ ನಾವು ಆ ಭಾಷೆಯನ್ನು ಉದ್ದಾರ ಮಾಡುತ್ತೇವೆ ಎಂಬ ಬ್ರಮೆಗಿಂತ ಆ ಮೂಲಕ ನಮ್ಮ ಉದ್ಧಾರ ಸಾದ್ಯವಿದೆ ಎಂಬ ಅರಿವಿನೊಂದಿಗೆ ಸಂಸ್ಕ್ರುತದ ಉಳಿವಿಗೆ ಮುಂದಾಗಬೇಕು"
ಮೊದಲಿಗೆ ಭೈರಪ್ಪನವರೇ ಹೇಳಿರುವಂತೆ ದಕ್ಶಿಣ ಬಾರತದ ಬಾಸೆಗಳಿಗೆ ಸಂಸ್ಕ್ರುತ ಮೂಲವಲ್ಲ - ಹೀಗಿರುವಾಗ ನಾವು (ಕನ್ನಡಿಗರು) ಸಂಸ್ಕ್ರುತವನ್ನು ಏಕೆ ಉಳಿಸಬೇಕು? ಅದರಿಂದ ನಮ್ಮ ಉದ್ಧಾರ ಹೇಗ ಆಗುತ್ತೆ? ಬೇಕಾದರೆ ಉತ್ತರ ಬಾರತದವರು ಅದನ್ನು ಉಳಿಸಿಕೊಂದು ಉದ್ದಾರ ಹೊಂದಲಿ. ಈಗಾಗಲೆ ಉತ್ತರಾಕಂಡ ರಾಜ್ಯವು ಸಂಸ್ಕ್ರುತಕ್ಕೆ ಒತ್ತು ಕೊಟ್ಟಿದೆ. ಇಂದು ಬೆಂಗಳೂರಿನಲ್ಲಿರುವ ಹಲವು ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡುವ ಹಾಗಿಲ್ಲ. ಇಂತಹ ಪರಿಸ್ತಿತಿ ಇರುವಾಗ ನಮ್ಮ ಆದ್ಯತೆ ಕನ್ನಡವನ್ನು ಉಳಿಸಿ ಅದರಿಂದ ಏಳೆಗೆಯೆಡೆಗೆ ಹೋಗಬೇಕೇ ಹೊರತು ಸಂಸ್ಕ್ರುತದೆಡೆಗೆ ಅಲ್ಲ.

ಇವೆಲ್ಲಕ್ಕಿಂತ ಹೆಚ್ಚಾಗಿ ಒಂದು ಮಗುವು ಈಗಾಗಲೆ ಕನ್ನಡ, ಇಂಗ್ಲಿಶ್, ಹಿಂದಿ ಬಾಶೆಗಳನ್ನು ಕಲಿಯಬೇಕಾಗಿದೆ ಅದರ ಮೇಲೆ ಸಂಸ್ಕ್ರುತವನ್ನು ಕಡ್ಡಾಯ ಮಾಡಿ ಹೇರಿದರೆ ಆ ಮಕ್ಕಳ ಗತಿ ಏನು? ಯಾವುದನ್ನು ಸರಿಯಾಗಿ ಕಲಿಯಲು ಬಿಡದೆ ಮಕ್ಕಳನ್ನು ನಾವೇ ಎಡಬಿಡಂಗಿ ಮಾಡಿದಂತೆ ಆಗುವುದಿಲ್ಲವೆ?....ಇದರ ಬಗ್ಗೆ ಬೈರಪ್ಪನವರು ಕೊಂಚ ಉಂಕಿಸಲಿ !!

ಶನಿವಾರ, ಫೆಬ್ರವರಿ 04, 2012

ಕನ್ನಡದ ಒಳನುಡಿಗಳು ಮತ್ತು ಬರಹಗನ್ನಡ- ಎರಡು ಪಾಪೆಗಳು

ಗೆಳಯ ಕಿರಣ್ ಹೇಳಿದ ಮಾತನ್ನು ಪಾಪೆಗೆ ಇಳಿಸಿ ಬರಹಗನ್ನಡ ಮತ್ತು ಆಡುನುಡಿಗಳ ನಂಟು ಹೇಗಿರಬೇಕು ಎಂಬುದನ್ನು ಈ ಕೆಳಗಿನ ಪಾಪೆಗಳ ನೆರವಿನಿಂದ ತೋರಿಸಲು ಮೊಗಸಿದ್ದೇನೆ.




ಸೋಮವಾರ, ಜನವರಿ 23, 2012

ಬೈರಪ್ಪನವರೂ, ಸಂಸ್ಕ್ರುತವೂ




ಬೈರಪ್ಪನವರು ಮತ್ತೆ ಕನ್ನಡ,ಸಂಸ್ಕ್ರುತ ಮತ್ತು ಕನ್ನಡಿಗರ ಬಗ್ಗೆ ತಮ್ಮ ಅಣಿಮುತ್ತುಗಳನ್ನು ಉದುರಿಸಿದ್ದಾರೆ(ಮೇಲಿನ ಕನ್ನಡಪ್ರಬದ ವರದಿಯನ್ನು ನೋಡಿ). ಅದಕ್ಕೆ ಮತ್ತೆ ಇದರ ಬಗ್ಗೆ ಬರೆಯಲೇಬೇಕಾಗಿದೆ.

ಅಣಿಮುತ್ತುಗಳು ಹೀಗಿವೆ:-

"ಹೈಸ್ಕೂಲ್ ಪಟ್ಯದಲ್ಲಿ ಒಂದು ಬಾಶೆಯಾಗಿ ಸಂಸ್ಕ್ರುತವನ್ನು ಕಡ್ಡಾಯಗೊಳಿಸಬೇಕು"
ಮಂದಿಯಾಳ್ವಿಕೆ(democracy) ಇರುವ ನಮ್ಮ ನಾಡಿನಲ್ಲಿ ಹೀಗೆ ಕಡ್ಡಾಯವಾಗಿ ಒಂದು ಬಾಶೆಯನ್ನು ಹೇರುವುದು ಎಶ್ಟು ಸರಿ? ಅದೂ ಸಾಮಾನ್ಯ ಮಂದಿಗೆ ದೂರವಾಗಿರುವ ನುಡಿ ಮತ್ತು ಮಾತಿನಲ್ಲಿ ಬಳಕೆಯಲ್ಲಿಲ್ಲದ ನುಡಿ. ಇದರಿಂದ ಎಶ್ಟು ಮಂದಿಗೆ ಮುಂದೆ ಅವರ ಬದುಕಿನಲ್ಲಿ ಬಳೆಕೆಗೆ ಬರುತ್ತೆ. ಒಂದು ವೇಳೆ ಬಲವಂತವಾಗಿ ಹೇರಿದರೆ ಅವರು ಆ ನುಡಿಯನ್ನು( ಸಂಸ್ಕ್ರುತವನ್ನು) ಸರಿಯಾಗಿ ಕಲಿಯಬಲ್ಲರೆ? ಇದರ ಬಗೆಗಿನ ಅರಕೆಯ ಓದು( research study) ಆಗಿದಿಯೆ? ಆಗಿದ್ದರೆ ಆ ’ಸೀಳ್ನೋಟ’(analysis) ಏನು ಹೇಳುತ್ತದೆ ..ಇವುಗಳ ಬಗ್ಗೆ ಬೈರಪ್ಪನವರು ತಿಳಿದು ಈ ಮಾತುಗಳನ್ನು ಆಡಿದ್ದಾರೆಯೆ?. ಯಾವುದೇ ವಸ್ತುವನ್ನು ಇಲ್ಲವೆ ವಿಶಯವನ್ನು ಮಂದಿಯ ಮೇಲೆ ಕಡ್ಡಾಯಗೊಳಿಸುವುದು (ಆದರಲ್ಲೂ ಕ್ಲಿಶ್ಟವಾದ ಸಂಸ್ಕ್ರುತದಂತಹ ಬಾಶೆಯನ್ನು) ಮಂದಿಯಾಳ್ವಿಕೆಯ ಬಯಕೆ/ಆಶಯಗಳಿಗೆ ಹೊಂದುವುದಿಲ್ಲ.


"ಸಂಸ್ಕ್ರುತ ಬಾಶೆ ಕನ್ನಡಕ್ಕೆ ಪೂರಕ"
ಹೇಗೆ ಪೂರಕ? ಕನ್ನಡ ಒಂದು ದ್ರಾವಿಡ ನುಡಿ. ಸಂಸ್ಕ್ರುತ ಒಂದು ಇಂಡೊ-ಯೂರೋಪಿಯನ್ ನುಡಿ ಎಂದು ನುಡಿಯರಿಗರು ಸಾರಿ ಸಾರಿ ಹೇಳಿದ್ದಾರೆ. ಸಂಸ್ಕ್ರುತದಿಂದ ಪದಗಳನ್ನು ಎರವಲು ಪಡೆದುದರಿಂದ ಬೈರಪ್ಪನವರು ಈ ಮಾತನ್ನು ಹೇಳಿದ್ದರೆ ಈ ಮಾತು ಪರ್ಶಿಯನ್ ಮತ್ತು ಇಂಗ್ಲಿಶಿಗೂ ಒಪ್ಪುತ್ತದೆ.
ಮೇಲಿನ ದಾಟಿಯಲ್ಲೇ ’ಇಂಗ್ಲಿಶ್ ಬಾಶೆ ಕನ್ನಡಕ್ಕೆ ಪೂರಕ’ ಎಂದು ಇನ್ನೊಬ್ಬರು ಹೇಳಬಹುದು. ಹೀಗೆ(ಇಂಗ್ಲಿಶ್ ಬಾಶೆ ಕನ್ನಡಕ್ಕೆ ಪೂರಕ)ಹೇಳುವುದು ಎಶ್ಟು ಸುಳ್ಳೊ/ಪೊಳ್ಳೋ ಅಶ್ಟೆ ಸುಳ್ಳು/ಪೊಳ್ಳು ಸಂಸ್ಕ್ರುತ ಕನ್ನಡಕ್ಕೆ ಪೂರಕ ಎನ್ನುವ ಮಾತು.


"ಸಂಸ್ಕ್ರುತ ಅದ್ಯಯನ ಮಾಡಿದರೆ ಕನ್ನಡ ಗಟ್ಟಿಯಾಗುತ್ತದೆ"
ಇದನ್ನು ಕೇಳಿದಾಗ ನಮ್ಮ ಕಡೆಯ ಗಾದೆ/ನಾಣ್ಣುಡಿಯೊಂದು ನೆನಪಿಗೆ ಬಂತು - "ಎತ್ತಿಗೆ ಜರ ಬಂದ್ರೆ ಎಮ್ಮೆಗೆ ಬರೆ ಎಳೆದರಂತೆ’. ಸಂಸ್ಕ್ರುತದ ಅದ್ಯಯನ ಮಾಡಿದರೆ ಆ ಬಾಶೆ ಚೆನ್ನಾಗಿ ಒಲಿಯುತ್ತದೆಯೆ ಹೊರತು ಕನ್ನಡವು ಹೇಗೆ ಗಟ್ಟಿಯಾಗುತ್ತದೆ? ಬದಲಾಗಿ ಎಚ್ಚರವಹಿಸದಿದ್ದರೆ ಸಂಸ್ಕ್ರುತದ ಪ್ರಬಾವದಿಂದ ಅವರ ಕನ್ನಡವು ಹೆಚ್ಚು ಹೆಚ್ಚು ಕ್ರುತಕಗೊಳ್ಳಬಹುದು. ಸಂಸ್ಕ್ರುತದ ಎಲ್ಲ ಕಟ್ಟಲೆಗಳು ಕನ್ನಡಕ್ಕೂ ಇರಬೇಕೆನ್ನುವ ತಪ್ಪು ತಿಳಿವಳಿಕೆ ಮೂಡಬಹುದು. ಈ ಒಂದು ತಪ್ಪು ತಿಳಿವಳಿಕೆಯಿಂದಲೇ ಕನ್ನಡದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ವಿವರಿಸುವಲ್ಲಿ ಈಗಾಗಲೆ ಹಲವು ತಪ್ಪುಗಳನ್ನು ಮಾಡಲಾಗಿದೆ. ಹಾಗಾಗಿ ಸಂಸ್ಕ್ರುತ ಅದ್ಯಯನ ಮಾಡುವುದರಿಂದ ಸಂಸ್ಕ್ರುತ ಚೆನ್ನಾಗಿ ಕಲಿಯಬಹುದೇ ಹೊರತು ಅದಕ್ಕಿಂತ ತೀರ ಬೇರೆಯಾಗಿರುವ(ಹಲವು ನೆಲೆಗಳಲ್ಲಿ ಅಂದರೆ ಸೊಲ್ಲರಿಮೆ, ನುಡಿಯರಿಮೆಯ ನೆಲೆಗಳಲ್ಲಿ) ಕನ್ನಡದ ಮೇಲೆ ಹಿಡಿತ ಪಡೆಯಲಾಗದು.

"ಶುದ್ದ ಕನ್ನಡ ಬರೆಯಲು, ಮಾತನಾಡಲು ಸಂಸ್ಕ್ರುತ ನೆರವಾಗುತ್ತದೆ"
ಯಾವುದು ಶುದ್ದ ಕನ್ನಡ ಎಂಬುದನ್ನು ಅವರು ವಿವರಿಸಿಲ್ಲವಾದುದರಿಂದ ಇದರ ಬಗ್ಗೆ ಹೇಳುವುದು ಕಶ್ಟ. ಸಂಸ್ಕ್ರುತ ಬೆರೆತ ಕನ್ನಡವನ್ನೇ ಶುದ್ದ ಕನ್ನಡ ಎಂದು ಬೈರಪ್ಪನವರು ತಿಳಿದಂತಿದೆ. ಹಾಗಿದ್ದರೆ ಕನ್ನಡಿಗರ ಮಾತಿನಲ್ಲಿ ಹೆಚ್ಚು ಹೆಚ್ಚು ಹಾಸುಹೊಕ್ಕಾಗಿರುವುದು ಅಣ್ಣೆಗನ್ನಡ/ಅಚ್ಚಗನ್ನಡವೇ ಹೊರತು ’ಶುದ್ದಗನ್ನಡ’ವಲ್ಲ.
ಹೆಚ್ಚು ಮಂದಿಗೆ ಬೈರಪ್ಪನವರು ಹೇಳುವ ’ಶುದ್ದಗನ್ನಡ’ ಅಂದರೆ ಸಂಸ್ಕ್ರುತ ಬೆರೆತ ಕನ್ನಡ ಬೇಕಾಗಿಲ್ಲ ಯಾಕಂದರೆ ಅದು ಹೆಚ್ಚು ಮಂದಿಯ ಬದುಕಿನಲ್ಲಿ ಅದು ಅಶ್ಟು ಬಳಕೆಗೆ ಬರುವುದಿಲ್ಲ.

"ಕಾರಣಾಂತರದಿಂದ ಸಂಸ್ಕ್ರುತ ಹೆಚ್ಚು ಕಲಿಯಲು ಆಗಲಿಲ್ಲ. ಆಗಿದ್ದರೆ ಇನ್ನಶ್ಟು ಉತ್ತಮವಾಗಿ ಬರೆಯುತ್ತಿದ್ದೆ"
ಸದ್ಯ...ಇವರು ಸಂಸ್ಕ್ರುತ ಹೆಚ್ಚು ಕಲಿಯದೇ ಇದ್ದುದು ಒಳ್ಳೆಯದೇ ಆಯಿತು. ಇಲ್ಲ ಅಂದರೆ ಹಾಸನದ ಆಡುಗನ್ನಡ ಸೊಂಪಾಗಿ ಬಳಕೆಯಾಗಿರುವ ’ ನಾಯಿನೆರಳು’, ’ಗ್ರುಹಬಂಗ’ , ’ಜಲಪಾತ’ ಎಂಬ ಕಾದಂಬರಿಗಳು ಅಶ್ಟು ಮಂದಿಯೊಲವನ್ನು ಗಳಿಸುತ್ತಿರಲಿಲ್ಲ. ಒಂದು ವೇಳೆ ಬೈರಪ್ಪನವರು ಇದನ್ನೆಲ್ಲ ಹೆಚ್ಚು ಸಂಸ್ಕ್ರುತ ಬೆರೆತ ಕನ್ನಡದಲ್ಲಿ ಬರೆದಿದ್ದರೆ ಶತಾವದಾನಿ ರಾ.ಗಣೇಶ್ ಅವರು ಎಶ್ಟು ಜನರನ್ನು ತಲುಪಿದ್ದಾರೊ ಅಶ್ಟೆ ಕಡಿಮೆ ಮಂದಿಯನ್ನು ಬೈರಪ್ಪನವರು ತಲುಪಿರುತ್ತಿದ್ದರು.

ಮಂಗಳವಾರ, ಡಿಸೆಂಬರ್ 20, 2011

ಕನ್ನಡಿಗರು ಹಿಂದಿಯನ್ನು(ಸಂವಹನ ಬಾಶೆಯಾಗಿಯೂ ಕೂಡ) ಯಾಕೆ ಒಪ್ಪಬಾರದು?

ಮೊನ್ನೆ ಕನ್ನಡ ಪ್ರಭದಲ್ಲಿ ಚಂದ್ರಶೇಖರ ಕಂಬಾರರ ಬಗೆಗೆ ಮೂಡಿ ಬಂದ ವರದಿಯೊಂದರ ಬಗ್ಗೆ ನನ್ನ ಪ್ರತಿಕ್ರಿಯೆ:-

"ಬಾರತೀಯರು, ರಾಶ್ಟ್ರೀ ಯ ವಿಷಯಗಳು ಬಂದಾಗ ಹಿಂದಿ ಬಳಸಬೇಕು ಎಂಬುದು"-
ಹೀಗೆ ಹೇಳುವುದರಿಂದ ರಾಷ್ಟ್ರೀಯ ವಿಷಯಗಳನ್ನು ಕನ್ನಡದಲ್ಲಿ ಹೇಳಲಾಗದು ಎಂಬ ಕೀಳರಿಮೆಯನ್ನು ನಾವೇ ಕನ್ನಡದಲ್ಲಿ ಬಿತ್ತಿದಂತಾಗುವುದಿಲ್ಲವೆ? ಭಾರತದಲ್ಲಿದ್ದು, ಕನ್ನಡಿರಾಗಿದ್ದುಕೊಂಡು ಮತ್ತು ಕನ್ನಡದ ಹಿರಿಮೆಯನ್ನು ಬಲ್ಲ ಕನ್ನಡಿಗರು ಹಿಂದಿಯಲ್ಲಿ ಸಂವಹನ ಮಾಡುವುದು ಇಂಗ್ಲಿಶಿನಲ್ಲಿ ಸಂವಹನ ಮಾಡಿದಶ್ಟೆ ಕ್ರುತ್ರಿಮ ಮತ್ತು ಕೀಳ್ತನವಾಗುವುದಿಲ್ಲವೆ?. ಯಾವ ತರದಲ್ಲಿ ನೋಡಿದರೂ ಕನ್ನಡಕ್ಕಿಂತ ಹಿಂದಿ ಮಿಗಿಲಲ್ಲ. ಯಾವುದೇ ವಿಶಯವಲ್ಲಾಗಲಿ ಇಂತಹ ನುಡಿಯನ್ನು ಬಳಸಬೇಕೆಂದು ಹೇಳುವುದು ಮಂದಿಯಾಳ್ವಿಕೆಯ ಬಯಕೆಗಳಿಗೆ ವಿರೋಧವಾಗಿದೆ.

ಇನ್ನು ಶ್ರೀ ಸಿದ್ದಲಿಂಗ ಪಟ್ಟಣಶೆಟ್ಟಿಯವರು ಮುಂದೆ ಹೋಗಿ ಕನ್ನಡ ಸಾಹಿತ್ಯದ ಪ್ರಚಾರಕ್ಕೆ ಕನ್ನಡಿಗರು ಹಿಂದಿಯನ್ನು ಸಂವಹನ ಭಾಷೆಯಾಗಿ ಸ್ವೀಕರಿಸಲೇಬೆಕು ಎಂದು ಹೇಳಿದ್ದಾರೆ. ಹಿಂದಿಗೂ ಹಲವು ಜ್ಞಾನಪೀಠ ಪ್ರಶಸ್ತಿಗಳು ಸಿಕ್ಕಿವೆ. ಹಿಂದಿ ಸಾಹಿತ್ಯದ ಪ್ರಚಾರಕ್ಕಾಗಿ ಹಿಂದಿಗರು ಕನ್ನಡ ಕಲಿಯುತ್ತಿದಾರೆಯೆ? ನಾವೇ ಏಕೆ ಹಿಂದಿ ಕಲಿಯಬೇಕು? ಇಶ್ಟಕ್ಕೂ ಇಂತಹ ಸಾಹಿತ್ಯ ಪ್ರಚಾರಕ್ಕಾಗಿ ಹಿಂದಿ ಕಲಿಯಬೇಕಿರುವ ಕನ್ನಡಿಗರ ಎಣಿಕೆ ಎಶ್ಟಿರಬೇಕು? ತೀರ ಕಡಿಮೆ ಜನಕ್ಕೆ ಬೇಕಾದ ಈ ಅವಶ್ಯಕತೆಗೆ ಇಡೀ ಕನ್ನಡಿಗರೇ ಏಕೆ ಹಿಂದಿಯನ್ನು ಸ್ವೀಕರಿಸಬೇಕು? ಒಂದು ವೇಳೆ ಹೀಗೆ ಸ್ವೀಕರಿಸಿದರೆ ಕನ್ನಡಿಗರಿಗೆ ಮತ್ತು ಕನ್ನಡಕ್ಕೆ ಇದರಿಂದ ಆಗುವ ತೊಂದರೆಗಳ ಬಗ್ಗೆ ಇವರು ಚಿಂತಿಸಿದ್ದಾರೆಯೆ?

ಈ ಎಲ್ಲ ಕೇಳ್ವಿಗಳಿಗೆ ಉತ್ತರ ಹುಡುಕಲು ಹೊರಟಾಗ ಸಿಗುವುದು ಈ ಉತ್ತರಗಳು
* ೦.೦೧% ಮಂದಿಗೆ ಬೇಕಾದ ಈ ಸಾಹಿತ್ಯದ ಅನುವಾದದ ಕೆಲಸಕ್ಕೆ ಎಲ್ಲ ಕನ್ನಡಿಗರು ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪುವುದು ಎಂದೂ ವೈಗ್ನಾಕವಲ್ಲ.
* ಈ ರೀತಿ ಸಂವಹನ ಬಾಶೆಯಾಗಿ ಹಿಂದಿ ನುಸುಳಿದರೆ ಇದರಿಂದ ಕನ್ನಡಕ್ಕೆ, ಕನ್ನಡಿಗರಿಗೆ ಮುಂದೆ ಅಪಾಯ ಕಾದಿದೆ. ಯಾಕಂದರೆ ಹಿಂದಿಯನ್ನು ಕನ್ನಡಿಗರು ಒಪ್ಪಿದರೆ ಇದು ತಂಡತಂಡವಾಗಿ ಹಿಂದಿಗರ ವಲಸೆಗೆ ಕಾರಣವಾಗಿ
ಕನ್ನಡಿಗರ ತಮ್ಮ ನಾಡಿನಲ್ಲೇ ತಬ್ಬಲಿಗಳಾಗಬಹುದು.
* ಈವತ್ತಿಗೂ ಉತ್ತರಬಾರತದಲ್ಲಿ ದಕ್ಶಿಣ ಬಾಶೆಗಳನ್ನು ಕಲಿಸಲಾಗುತ್ತಿಲ್ಲ. ಎಶ್ಟೊ ಉತ್ತರ ಬಾರತೀಯರಿಗೆ ದಕ್ಶಿಣ ಬಾಶೆಗಳ ಪರಿಚಯವೇ ಇಲ್ಲ. ನಾವೇ(ಕನ್ನಡಿಗರೇ) ಯಾಕೆ ಮೇಲೆ ಬಿದ್ದು ಹಿಂದಿ ಕಲಿತು ಅವರಿಗೆ (ಹಿಂದಿಗರಿಗೆ) ಅನುಕೂಲ ಮಾಡಿಕೊಡಬೇಕು.
* ಹಿಂದಿಯನ್ನು ಸಂವಹನ ಬಾಶೆಯಾಗಿ ಒಪ್ಪಿದರೆ ಕರ್ನಾಟಕದಲ್ಲಿ ಹಿಂದಿಗರು ಬಂದು "ನಿಮಗೆ ಹೇಗಿದ್ದರೂ ಹಿಂದಿ ಗೊತ್ತಿದೆಯಲ್ಲ, ಕರ್ನಾಟಕದಲ್ಲೂ ಹಿಂದಿಯಲ್ಲೇ ಮಾತನಾಡಿ" ಅಂದರೆ ಮುಗೀತು. ಅಲ್ಲಿಗೆ ಕನ್ನಡ, ಕರ್ನಾಟಕ ಅಳಿದು ಹಿಂದಿ ನಾಡಾಗುವುದರಲ್ಲಿ ಎರಡು ಮಾತಿಲ್ಲ.

ಕನ್ನಡಿಗರೆಲ್ಲರೂ ಹಿಂದಿಯನ್ನು(ಸಂವಹನಕ್ಕೆ)ಒಪ್ಪಬೇಕೆನ್ನುವುದು ಕನ್ನಡ ವಿರೋದಿ ನಿಲುವಲ್ಲದೆ ಮಂದಿಯಾಳ್ವಿಕೆಯ ವಿರೋಧಿ ನಿಲುವು ಕೂಡ ಎಂಬುದನ್ನು ಮಹನೀಯರು ಕನ್ನಡಿಗರು ಇನ್ನಾದರೂ ಅರಿಯಲಿ.

ಶನಿವಾರ, ಡಿಸೆಂಬರ್ 03, 2011

ಲಿಪಿ ಸರಳಿಸುವಿಕೆ - ಬಿಡಿ ೨




ಹೋದ ಭಾನುವಾರ(27 ನವೆಂಬರ್ 2011) ಸಾಪ್ತಾಹಿಕ ಲವಲvk ಯಲ್ಲಿ ಪ್ರಕಟಾವಾದ ಡಾ ಉದಯರವಿ ಶಾಸ್ತ್ರಿ ಅವರ ಬರಹಕ್ಕೆ ಪ್ರತಿಕ್ರಿಯೆ -

ಬರಹಗಾರರು ’ಇಂದಿನಿಂದ ಋ ಎಂಬ ಅಕ್ಷರವನ್ನು ಶಾಲೆಗಳಲ್ಲಿ ಬೋದಿಸಬಾರದು, ಪಠ್ಯದಲ್ಲಿ ಸೇರಿಸಬಾರದು’ ಎಂಬಂತಹ ಆಜ್ಞೆಗಳನ್ನು ಹೊರಡಿಸಲು ಬರುವುದಿಲ್ಲ’ ಎಂದು ಹೇಳುತ್ತಾರೆ.ಆದರೆ ಈಗ ಇರುವ ಹೊಸಗನ್ನಡದ ಅಕ್ಷರಮಾಲೆಯಲ್ಲಿ ಇಂತಿಶ್ಟೆ ಅಕ್ಷರಗಳು ಇರಬೇಕು. ಅದರಲ್ಲಿ ಇಶ್ಟೆ ಸ್ವರಗಳು, ಇಶ್ಟೆ ವ್ಯಂಜನಗಳು ಇರಬೇಕು ಎಂದು ಸೆಲವು/ಆಜ್ಞೆ ಹೊರಡಿಸಿದವರು ಯಾರು? ಹಳೆಗನ್ನಡದಲ್ಲಿರದ ’ಋ’, ’ಷ’ ಎಂಬ ಅಕ್ಷರಗಳನ್ನು ಹೊಸಗನ್ನಡಕ್ಕೆ ’ಯಾವುದೊ ಒಂದು ದಿನ’ ಆಜ್ಞೆ ಹೊರಡಿಸರಲೇ ಬೇಕಲ್ಲವೆ? ಹೊರಡಿಸಿದ್ದಾರೆ. ಅಂದ ಮೇಲೆ ಮಹಾಪ್ರಾಣ, ಋ, ಷ, ಃ - ಇವುಗಳನ್ನು ಕನ್ನಡ ಬರಹದಿಂದ ಕೈ ಬಿಡಿಲಾಗಿದೆ ಎಂದು ಆಜ್ಞೆ ಯಾಕೆ ಹೊರಡಿಸಲು ಬರುವುದಿಲ್ಲ ಎಂದು ಉದಯರವಿಯವರೇ ತಿಳಿಸಬೇಕು.
ದಿಟವಾಗಲೂ ಯಾವುದೇ ನುಡಿಗೆ ಆಗಲಿ ಯಾವುದೊ ಒಂದು ಕಾಲಗಟ್ಟದಲ್ಲಿ ಎಶ್ಟು ಅಕ್ಷರಗಳು ಆ ನುಡಿಗೆ ಬೇಕು. ಅದರ ರೂಪುರೇಶೆಗಳೇನು ಎಂದು ನಿಗದಿಪಡಿಸಲೇಬೇಕಾಗುತ್ತದೆ. ಇದು ಎಲ್ಲ ನುಡಿಗಳಲ್ಲೂ ನಡೆಯುತ್ತದೆ. ಪ್ರೆಂಚಿಗೆ ಅಕೆಡಿಮಿಯ ಪ್ರಾಂಕ್ ಇದೆ, ಬೇರೆ ಬೇರೆ ಭಾಷೆಗಳಿಗೆ ಅವುಗಳದೇ ಆದ ಭಾಷಾ ಸಂಬಂಧಿಸಿದ ಸಂಸ್ಥೆಗಳಿವೆ. ಆದರೆ ಆ ನುಡಿಯ ಮಾತು ಇಲ್ಲವೆ ಉಲಿಕೆಯರಿಮೆಯನ್ನು ಬಿಡಿಯರಸಿ ಒಂದು ಬರಹವನ್ನು ಸಿದ್ದಪಡಿಸಿದರೆ ಅದು(ಲಿಪಿ) ವೈಜ್ಞಾನಿಕವಾಗಿರುತ್ತದೆ. ಅಲ್ಲದೆ ಅಂತಹ ಬರಹ ಆ ನುಡಿಯಾಡುವ ಮಂದಿಗೆ ಹೆಚ್ಚು ಬಳಕೆಗೆ ಬರುತ್ತದೆ.

ಇನ್ನು ಲಿಪಿ ಸರಳಿಸುವಿಕೆಯನ್ನು ’ಪ್ರಿಸ್ಕ್ರಿಪ್ಟಿವ್’ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ ದಿಟವಾಗಲು ನೋಡಿದರೆ ಲಿಪಿ ಸರಳಿಸುವಿಕೆ ಒಂದು ’ಡಿಸ್ಕ್ರಿಪ್ಟಿವ್’ ಪ್ರಯತ್ನವೇ ಹೊರತು ಪ್ರಿಸ್ಕ್ರಿಪ್ಟಿವ್ ಆಗಲಾರದು ಯಾಕಂದರೆ ಈಗಿರುವ ಬರಹದಲ್ಲಿರುವ ’ಷ’,ಮಹಾಪ್ರಾಣ, ಃ, ಋ ಇವುಗಳೆಲ್ಲ ಕನ್ನಡದ ಮಾತಿನಲ್ಲಿಲ್ಲ. ಆದರೂ ಅಕ್ಷರಮಾಲೆಯನ್ನು ಸಿದ್ದಪಡಿಸುವಾಗ ಇದನ್ನು ’ಪ್ರಿಸ್ಕ್ರಿಪ್ಟಿವ್’ ಆಗಿ ಹೇರಲಾಯಿತು. ಅಂದರೆ ಸಂಸ್ಕೃತದಲ್ಲಿರುವ ಋ, ಷ ಮತ್ತು ಮಹಾಪ್ರಾಣ ಕನ್ನಡದ್ದಲ್ಲಿರಲೇಬೇಕು ಎಂಬ ತಪ್ಪು ತಿಳುವಳಿಕೆಯೇ ಇದಕ್ಕೆ ಕಾರಣ. ಆದರೆ ಇದರಿಂದ ಕನ್ನಡ ಬರಹದಲ್ಲಿ ಗೊಂದಲ ಉಂಟಾಗಿದೆ. ಇದಕ್ಕೆ ಲಿಪಿ ಸರಳಿಸುವಿಕೆ ಬೇಕು. ಇನ್ನು ಗಣಿತದ ಲೆಕ್ಕಕ್ಕೆ ಅನುಗುಣವಾಗಿ ಕನ್ನಡ ಅಕ್ಷರಗಳಿರಬೇಕೆ? ಕಡಿಮೆ ಅಕ್ಷರಗಳು ಇಲ್ಲವೆ ಹೆಚ್ಚು ಅಕ್ಷರಗಳಿರಬೇಕು ಎನ್ನುವ ವಾದ ಸರಿಯಿಲ್ಲ. ಇದರಿಂದ ಕನ್ನಡ ಬರಹವನ್ನು ನಿರ್ದರಿಸಲಾಗುವುದಿಲ್ಲ. ನಿರ್ದರಿಸಲೂ ಬಾರದು. ಕನ್ನಡ ಉಲಿಕೆಯರಿಮೆಯೇ (phonetics) ಕನ್ನಡ ಬರಹಕ್ಕೆ ಅಡಿಪಾಯವಾಗಬೇಕು.
’ಭಾಷೆಗೆ ತನ್ನದೇ ಆದ ಧಾರಣ ಶಕ್ತಿ ಇರುತ್ತದೆ..ಅದು ತಾನಾಗಿಯೇ ಸ್ವೀಕಾರ -ತಿರಸ್ಕಾರಗಳನ್ನು ನಿರ್ದರಿಸುತ್ತದೆ" ಎಂದು ಅವರು ಹೇಳಿದ್ದಾರೆ. ಇದು ಅವರು ಭಾಷೆಯನ್ನು ಮಾತು ಎಂಬ ಅರ್ಥದಲ್ಲಿ ಹೇಳಿದ್ದರೆ ಸರಿ. ಆದರೆ ಭಾಷೆ ಎಂದರೆ ಬರಹ ಎಂಬ ಅರ್ಥವೂ ಇರುವುದರಿಂದ ಅದಕ್ಕೆ ಈ ಮೇಲಿನ ಹೇಳಿಕೆ ಹೊಂದುವುದಿಲ್ಲ. ಯಾವುದೇ ಭಾಷೆಗೆ ಒಂದು ಬರಹವನ್ನು ನಿರ್ಧರಿಸುವುದು/ನಿಗದಿಪಡಿಸುವುದು ಒಂದು ಗುಂಪೇ. ಈಗಿರುವ ಕನ್ನಡಕ್ಕೆ ಬರಹವನ್ನು ನಿಗದಿಪಡಿಸಿದ್ದು ಒಂದು ಗುಂಪೇ. ನಡುಗನ್ನಡ ಬರಹದಲ್ಲಿ ’ಱ’/ೞ ಎಂಬ ಅಕ್ಶರಗಳನ್ನು ಮೊದಲು ಬಿಟ್ಟಿದ್ದು ಹರಿಹರನೊಬ್ಬನೇ. ಆದರೆ ಮಾತಿನಲ್ಲಾಗುವ ಬದಲಾವಣೆಗೆ ಕಡಿವಾಣ ಹಾಕಲಾಗುವುದಿಲ್ಲ. ಸಾಮಾನ್ಯ ಮಂದಿಗೆ ಸಂಸ್ಕ್ರುತಜನ್ಯ ಮತ್ತು ಕನ್ನಡದ್ದೇ ಆದ ಪದಗಳಲ್ಲಿರುವ ಬೇರೆತನ ಗುರುತಿಸಲಾಗುವುದಿಲ್ಲ ಎಂದು ಅವರು ಹೇಳುತ್ತಾರೆ. ಆದರೆ ಸಂಸ್ಕ್ರುತಜನ್ಯ ಪದಗಳು ಸಂಸ್ಕ್ರುತದಲ್ಲಿರುವ ಹಾಗೆ ನಮ್ಮ ಕನ್ನಡ ಮಾತಿನಲ್ಲಿರುವುದಿಲ್ಲ. ಉದಾಹರಣೆಗೆ ಸಂಸ್ಕೃತದ ಮಹಾಪ್ರಾಣಗಳು ಕನ್ನಡಿಗರ ಮಾತಿನಲ್ಲಿ ಅಲ್ಪಪ್ರಾಣವಾಗುತ್ತದೆ. ಇದು ಕನ್ನಡದ ಮಾತಿನ ಹರಿವು.
ಕೊನೆಗೆ, ಕನ್ನಡದ ಒಳನುಡಿಗಳು ಕನ್ನಡವನ್ನು ಒಡೆಯುತ್ತವೆ ಎಂಬ ಅಭಿಪ್ರಾಯದಲ್ಲಿ ಅವರು ಹೇಳಿದ್ದಾರೆ. ಒಳನುಡಿಗಳಲ್ಲಿ ಬೇರೆತನವಿರುವುದು ಕೊರತೆಯಲ್ಲ ಇಲ್ಲವೆ ತಪ್ಪಲ್ಲ. ಇದೇ ಕಾರಣ ಒಡ್ಡಿ ಕನ್ನಡದ ಒಳನುಡಿಗಳಿಂದ ದೂರ ಸರಿಯುವುದು ಕೂಡ ಸರಿಯಿಲ್ಲ. ಎಲ್ಲ ಒಳನುಡಿಗಳಿಗೂ ಕಾಮನ್ ಆಗಿರುವ ಒಂದು ಕನ್ನಡ(ಬರಹಗನ್ನಡ) ನುಡಿ ಇದ್ದೇ ಇರುತ್ತದೆ. ಇದೆ. ಅದು ಕೆಲವರಿಗೆ ಹತ್ತಿರವಿರಬಹುದು ಕೆಲವರಿಗೆ ಸೊಲ್ಪ ದೂರವಿರಬಹುದು. ಆದರೆ ಸಂಸ್ಕೃತದ ಹಾಗೆ ಇಲ್ಲವೆ ಇಂಗ್ಲಿಶಿನ ಹಾಗೆ ತುಂಬ ದೂರವಿಲ್ಲ..... ನಮ್ಮ ನಮ್ಮ ಕನ್ನಡಗಳಲ್ಲಿ ಬೇರೆತನವಿದೆಯೆಂದು ತೀರ ದೂರದಲ್ಲಿರುವ ಸಂಸ್ಕೃತದ ಇಲ್ಲವೆ ಇಂಗ್ಲಿಶಿನ ಸೊಲ್ಲರಿಮೆ/ವ್ಯಾಕರಣವನ್ನು ಹೇರುವುದು ಎಶ್ಟು ಸರಿ? ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡದಲ್ಲಿ ಮಾತಾಡಿದರೆ ಅರ್ಥವಾಗುತ್ತದೆ. ಆದರೆ ಸಂಸ್ಕೃತದಲ್ಲಿ ಮಾತಾಡಿದರೆ ಮೈಸೂರಿನವರಿಗಾಗಲಿ , ಹುಬ್ಬಳ್ಳಿಯವರಿಗಾಗಲಿ ಅರ್ಥವಾಗುವುದೇ ಇಲ್ಲ. ಮೈಸೂರಿನವರಿಗೆ ಹುಬ್ಬಳ್ಳಿಯ ಕನ್ನಡ ಸಂಸ್ಕೃತಕ್ಕಿಂತ ಹತ್ತಿರವಿದೆ. ಹಾಗಾಗಿ ’ಕಾಮನ್’ ಆಗಿರುವ ಕನ್ನಡವನ್ನು ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳಿಗೆ ಒಗ್ಗಿಸುವುದೇ ನಮಗಿರುವ ದಾರಿ. ಅದಕ್ಕೆ ಹೆಚ್ಚು ಹೆಚ್ಚು ಕನ್ನಡದ ಒಳನುಡಿಗಳ ಸಂಶೋಧನೆ ಮತ್ತು ಓದು ನಡೆಯಬೇಕಿದೆ. ಈ ಸಂಶೋಧನೆಗಳಿಂದ ಕಲೆ ಹಾಕಿದ ಅರಿವನ್ನು ಮಕ್ಕಳ ಕಲಿಸುವಾಗ ಬಳಸಿಕೊಳ್ಳಬಹುದು. ಇದರಿಂದ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
ಮಾತಿನಲ್ಲಾಗುವ ಬದಲಾವಣೆಗೆ ಯಾರ ಹಿಡಿತವೂ ಇಲ್ಲ. ಆದರೆ ಬರಹದಲ್ಲಾಗುವ ಬದಲಾವಣೆಗೆ ಹಿಡಿತವಿದ್ದೇ ಇರುತ್ತದೆ. ಈಗ ಬಳಸುತ್ತಿರುವ ಬರಹಕ್ಕೂ ಒಂದು ಕಾಲಗಟ್ಟದಲ್ಲಿ ’ಲಿಪಿ’ಯನ್ನು ಯಾರೊ ಒಬ್ಬರು ಇಲ್ಲವೆ ಒಂದು ಚಿಕ್ಕ ಗುಂಪೇ ನಿರ್ದರಿಸಿದೆ.

ಭಾನುವಾರ, ನವೆಂಬರ್ 27, 2011

ಕನ್ನಡ ಲಿಪಿ ಸರಳಿಸುವಿಕೆ - ಒಂದು ಪ್ರತಿಕ್ರಿಯೆ



ವಿಜಯ ಕರ್ನಾಟಕದಲ್ಲಿ ೨೦ ನವೆಂಬರ್ ೨೦೧೧ ರಂದು ಪ್ರಕಟವಾದ ಶ್ರೀ ಎಮ್.ಆರ್.ಪಿ. ರವಿಕಿರಣ್ ಅವರ ’ಲಿಪಿ ಸರಳೀಕರಣ: ಅತಿರೇಕದ ಮುನ್ಸೂಚನೆ’(ಅದರ ಪ್ರತಿ ಈ ಮಿಂಚೆಯೊಂದಿಗೆ ಅಂಟಿಸಲಾಗಿದೆ) ಈ ಬರಹಕ್ಕೆ ಪ್ರತಿಕ್ರಿಯೆ.

ಮೊದಲಿಗೆ, ರವಿಕಿರಣ್ ಅವರೇ ಹೇಳುವಂತೆ ಅವರಿಗೆ ನುಡಿಯ ಬಗೆಗಿನ ಹುರುಪು, ಆಸಕ್ತಿ ತೀರ ಇತ್ತೀಚಿನದು. ಆದ್ದರಿಂದ ಅವರ ಬರಹದಲ್ಲಿ ತಾನಾಗಿಯೇ ಆಗಿರುವ ಹಲವು ತಪ್ಪುಗಳನ್ನು ಎತ್ತಿ ತೋರಬೇಕಾಗಿದೆ.
ಇದಲ್ಲದೆ ಅವರು ತಮ್ಮ ವಾದಗಳನ್ನು ಸಮರ್ಥಿಸಿಕೊಳ್ಳಲು ಯಾವ ನುಡಿಯರಿಗರ/ಭಾಷಾವಿಜ್ಞಾನಿಗಳ ಯಾವ ಕೆಲಸವನ್ನು ಉದಾಹರಿಸಿಲ್ಲ. ಇದರಿಂದಲೇ ಗೊತ್ತಾಗುವುದು ಅವರು ತಮ್ಮದೇ ಲೋಕದಲ್ಲಿ ಓಡಾಡುತ್ತಿದ್ದಾರೆ ಅಂತ.
ಇರಲಿ, ಕನ್ನಡದಲಿ ಲಿಪಿ ಸರಳಿಸುವಿಕೆಗೆ ತಮಿಳಿನ ’ಮಾದರಿ’ಯಾಗಿ ತೆಗೆದುಕೊಳ್ಳಲಾಗುವುದಿಲ್ಲ. ಲಿಪಿ ಸರಳ ಮಾಡಬೇಕೆನ್ನುವವರು ಕೂಡ ಅದನ್ನು ಯಾರೂ ಮಾದರಿಯಾಗಿ ತೆಗೆದುಕೊಂಡಿಲ್ಲ. ಯಾವುದೇ ಲಿಪಿ ಸರಳಿಸುವಿಕೆ ಆ ನುಡಿಯಾಡುವ ಮಂದಿಯ ’ಉಲಿಕೆ’ಯ ಓದಿನ ಮೇಲೆ ನಿಂತಿರುತ್ತದೆ. ಉಲಿಕೆಯಲ್ಲಿಲ್ಲದ/ಉಚ್ಚಾರಣೆಯಲ್ಲಿಲ್ಲದ ಆದರೆ ಬರವಣಿಗೆಯಲ್ಲಿರುವ ಅಕ್ಷರಗಳು ಹೊರೆಯಾಗುತ್ತದೆ. ಯಾಕಂದರೆ ಆ ನುಡಿಯಾಡುವವರು ಅದನ್ನು ಮಾತಿನಲ್ಲಿ ಎಂದು ಬಳಸುವುದೇ ಇಲ್ಲ. ಮೊದಲು ಹೊರೆಯಾಗಿ ಇದು ಕಂಡರೂ ಮುಂದೆ ಇದು ಹಲವು ಗೊಂದಲಕ್ಕೆಡೆ ಮಾಡುತ್ತವೆ. ಉದಾಹರಣೆಗೆ: ಕನ್ನಡಿಗರಲ್ಲಿ ಹೆಚ್ಚಿನವರು ಮಹಾಪ್ರಾಣ ಮತ್ತು ಅಲ್ಪಪ್ರಾಣವನ್ನು ತಮ್ಮ ಉಲಿಕೆಯಲ್ಲಿರುವ ಬೇರೆತನವನ್ನು ತೋರಿಸುವುದಿಲ್ಲ. ಆದ್ದರಿಂದ ಅವರ ಬರವಣಿಗೆಯಲ್ಲಿ ’ತಪ್ಪು’ಗಳು ಕಂಡುಬರುತ್ತದೆ. ಇದರಿಂದ ಹೆಚ್ಚಿನ ಕನ್ನಡಿಗರಿಗೆ ಇಂದಿನ ಬರಹವು ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಚೆನ್ನಾಗಿ ಮಾತು ಬಲ್ಲವರನ್ನು ಕೂಡ ’ಓಲೆ ಬರೆಯಿರಿ’ ಎಂದು ಹೇಳಿದಾಗ ದಿಗಿಲಿಗೆ ಒಳಗಾಗುತ್ತಾರೆ. ಇದಕ್ಕೆ ಈಗಿನ ಕನ್ನಡ ಬರಹದಲ್ಲಿರುವ ಹಲವು ಗೊಂದಲಗಳು ಮುಖ್ಯ ಕಾರಣ.

ಇನ್ನು ರವಿಕಿರಣ್ ಅವರು ಹೇಳುತ್ತಾರೆ: " ಸನ್ನಿಧಿ, ಮಂಟಪ, ಕೃಪಾನಿಧಿ, ಸೂರ್ಯ, ಸುಧಾ - ಇವುಗಳನ್ನು ಕನ್ನಡದಲ್ಲಿ ಹೇಗೆ ಉಚ್ಚರಿಸುತ್ತೇವೆಯೋ ಹಾಗೆ ಬರೆಯುತ್ತೇವೆ" - ಈ ವಾಕ್ಯದಲ್ಲಿ ತಪ್ಪಿದೆ. ದಿಟವಾಗಲೂ ಕನ್ನಡಿಗರೂ ಇದನ್ನು ಉಚ್ಚರಿಸುವುದು ಸನ್ನಿದಿ , ಮಣ್ಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ ಅಂತ. ಹಾಗಾಗಿ ನಾವು ಉಚ್ಚರಿಸಿದಂತೆ ಕನ್ನಡದಲ್ಲಿ ಬರೆಯುತ್ತಿಲ್ಲ. ಆದರೆ ಈ ತೊಂದರೆಯಿರುವುದು ಸಂಸ್ಕೃತ ಪದಗಳಿಗೆ ಮಾತ್ರ. ಕೆಲವು ಕಡೆ ಹೊರತುಪಡಿಸಿ ಕನ್ನಡದಲ್ಲಿ ಕನ್ನಡದ್ದೇ ಆದ ಪದಗಳನ್ನು ಉಚ್ಚರಿಸಿದಂತೆ ಬರೆಯಲಾಗುತ್ತಿದೆ. ಉದಾಹರಣೆಗೆ ಕನ್ನಡದಲ್ಲಿ ಅನುನಾಸಿಕಗಳನ್ನು ’೦’ ಗುರುತಿಸುವ ಅಭ್ಯಾಸ ಮೊದಲಿನಿಂದಲೂ ನಡೆದುಬಂದಿದೆ. ’ಗಣ್ಡ’ ಎಂದು ಉಲಿದರೂ ’ಗಂಡ’ ಎಂದೇ ಬರೆಯುವುದು. ’ಮಞ್ಚ’ ಎಂದು ಉಲಿದರೂ ’ಮಂಚ’ ಎಂದೇ ಬರೆಯುವುದು. ಆದರೆ ಇಲ್ಲಿ ಉಚ್ಚರಿಸದಂತೆ ಬರೆಯದಿರುವುದು, ಬರವಣಿಗೆಯನ್ನು ಸುಲಭ ಮಾಡುವುದೇ ಗುರಿಯಾಗಿದೆ. ಆದರೆ ಮಹಾಪ್ರಾಣಗಳು(ಖ,ಘ,ಛ,ಝ,ಠ,ಢ,ಥ,ಧ,ಫ,ಭ) ಮತ್ತು ಷ, ಃ, ಇವುಗಳು ಉಲಿಕೆಯಿಲ್ಲಿಲ್ಲದಿದ್ದರೂ ಅದನ್ನು ಬರವಣಿಗೆಯಲ್ಲಿ ಇಟ್ಟಿಕೊಂಡಿರುವುದೇಕೆ ಎಂಬ ಕೇಳ್ವಿ ಹಾಕಿಕೊಂಡರೆ, ಆಗ ತಿಳಿಯುವುದು ಇದು ಸಂಸ್ಕೃತ ಪದಗಳನ್ನು ಎರಡು ಸಾವಿರ ವರ್ಷಗಳ ಹಿಂದೆ ಹೇಗೆ ಬರೆಯಲಾಗುತ್ತಿತ್ತೊ ಅದನ್ನ ಹಾಗೆ ಉಳಿಸಿಕೊಳ್ಳಲು ಕನ್ನಡದ ಬರೆವಣಿಗೆಯ ಮೇಲೆ ಹೇರಿರುವ ಬೇಕಿಲ್ಲದ ಕಟ್ಟಲೆ ಎಂದು.

ಇನ್ನು " ೧. ತಮಿಳಿನಲ್ಲಿ ಮಹಾಪ್ರಾಣ ಬಿಟ್ಟರು. ನಾವು ಅದನ್ನೂ ಬಿಡಬಹುದು" ಎಂಬುದು ಹೇಗೆ ಹೇಳಿದರೊ ತಿಳಿದಿಲ್ಲ. ಕನ್ನಡದಲ್ಲೇ(ಮಾತಿನ) ಆಗಲಿ, ತಮಿಳಿನಲ್ಲೇ ಆಗಲಿ ಎಂದೂ ಮಹಾಪ್ರಾಣ ಇರಲಿಲ್ಲ, ಇನ್ನು ಬಿಡುವುದೆಲ್ಲಿಂದ ಬಂತು? ಇಲ್ಲಿ ಬರಹಗಾರರು ’ಮಾತು ಮತ್ತು ಬರಹ’ ನಡುವೆ ತುಂಬ ಗೊಂದಲಗೊಂಡಿದ್ದಾರೆ ಎನ್ನುವುದು ತಿಳಿಯದೇ ಇರದು. ಒಂದು ನುಡಿ/ಭಾಷೆಯೆಂದರೆ ಅದನ್ನ ’ಮಾತು’ ಎಂಬ ಅರ್ಥದಲ್ಲಿ ತೆಗೆದುಕೊಳ್ಳುವುದು ಸರಿ ಎಂದು ನುಡಿಯರಿಗರು ಹೇಳುತ್ತಾರೆ. ಮಾತಿಗೆ ಹೋಲಿಸಿದರೆ ’ಬರಹ’ ತೀರ ಇತ್ತೀಚಿನದು. ಅಲ್ಲದೆ ಮಾತಿಗಿರುವ ಸ್ವಾಭಾವಿಕತೆ ಬರಹಕ್ಕೆ ಇಲ್ಲ. ಬರಹ ಎಂದಿಗೂ ಕೃತಕ. ಹಾಗಾಗಿ ಒಂದು ನುಡಿಯನ್ನು ಚೆನ್ನಾಗಿ ಅರಿಯಬೇಕಿದ್ದರೆ ’ಮಾತಿನ’ ಬಗ್ಗೆ ಸಂಶೋಧನೆಗಳನ್ನು ಮಾಡಬೇಕಾಗುತ್ತದೆ. ಈ ಮಾತಿನ ಬಗೆಗಿನ ಸಂಶೋಧನೆಯಿಂದ ಹೊರ ಹೊಮ್ಮಿರುವುದೇ ಕನ್ನಡ ’ಲಿಪಿಕ್ರಾಂತಿ’ ಇಲ್ಲವೆ ’ಲಿಪಿ ಸರಳಿಸುವಿಕೆ’. ಲಿಪಿ ಸುದಾರಣೆ ಮಾಡಿದರೆ ಇವರು ಕೊಟ್ಟಿರುವ ಪದಗಳನ್ನು ಹೀಗೆ ಬರೆಯಬಹುದು :- ಸನ್ನಿದಿ, ಮಂಟಪ, ಕ್ರುಪಾನಿದಿ, ಸೂರ್-ಯ(ರ ಗೆ ಯ ಒತ್ತು), ಸುದಾ’. ಅದ್ದರಿಂದ ಇದು ಮಾತಿಗೆ ಹೆಚ್ಚು ಹತ್ತಿರವಾಗಿದೆಯಲ್ಲದೆ ಕೃತಕತೆಯು ಮಾಯವಾಗಿದೆ. ’೦’ ಅನ್ನು ಹೇಗೆ ಉಲಿಯಬೇಕೆಂಬುದು ಅದರ ಮುಂದಿನ ಅಕ್ಷರ ನಿರ್ಧರಿಸಿರುವುದರಿಂದ ಎಲ್ಲ ಅನುನಾಸಿಕ/ಮೂಗುಲಿಗಳಿಗೆ (ಪದದ ಮೊದಲು ಬರದಿದ್ದರೆ) ಅದನ್ನು ಬಳಸಲಾಗುತ್ತಿದೆ. (ಗಣ್ಡ = ಗಂಡ, ಹೆಞ್ಚು= ಹೆಂಚು, ಶಙ್ಕರ=ಶಂಕರ). ಈ ಸೊನ್ನೆಯನ್ನು (೦) ಹಾಗೆ ಉಳಿಸಿಕೊಳ್ಳಬೇಕೆಂದು ನುಡಿಯರಿಗರು ಹೇಳುತ್ತಾರೆ ಯಾಕಂದರೆ ಇದರಿಂದ ಕನ್ನಡ ಬರಹ ಸುಲಬವಾಗಿದೆ.
ಹಾಗೇನೆ ಮಹಾಪ್ರಾಣಗಳನ್ನು , ಷ, ಃ, ಇವುಗಳನ್ನು ಕೂಡ ಬಿಡಬಹುದು. ಇದರಿಂದ ಕನ್ನಡ ಬರಹ ಹೆಚ್ಚು ಸುಲಬ ಮತ್ತು ಗೊಂದಲರಹಿತವಾಗುತ್ತದೆ.


ಒತ್ತಕ್ಷರದ ಬಗ್ಗೆ ’ಲಿಪಿ ಸರಳಿಸುವಿಕೆ’ಯನ್ನು ಹಿಂದೆ ಬಿ.ಎಮ್.ಶ್ರೀಯವರು ಮೊದಲು ’ಕನ್ನಡ ಬಾವುಟ’ ಎಂಬ ಪುಸ್ತಕದಲ್ಲಿ ಬರೆದಿದ್ದರು. ಅದರ ಗುರಿ ಪುಸ್ತಕಗಳನ್ನು ’ಅಚ್ಚು’ ಮಾಡುವುದನ್ನು ಸುಲಬಗೊಳಿಸುವುದಲ್ಲದೇ ಬೇರೆ ಏನೂ ಇರಲಿಲ್ಲ. ಆದರೆ ಈಗ ಕಂಪ್ಯೂಟರ್ ಮತ್ತು ಪ್ರಿಂಟರ್ ತುಂಬ ಮುಂದುವರೆದಿರುವುದರಿಂದ ಆ ತೊಂದರೆಗಳಾವುವು ಇಲ್ಲ. ಹಾಗಾಗಿ ಒತ್ತಕ್ಷರಗಳನ್ನು ಉಳಿಸಿಕೊಳ್ಳುವುದಕ್ಕೇ ಯಾವುದೇ ಅಡ್ಡಿಯಿಲ್ಲ.

ಇನ್ನು ಕನ್ನಡ ತಮಿಳಿನಿಂದ ಬೇರ್ಪಟ್ಟು ಸಂಸ್ಕೃತದ ಕಡೆಗೆ ಹೋಗಿದೆ ಎನ್ನುವುದಕ್ಕೆ ಬರಹಗಾರರು ಯಾವುದೇ ಉಲಿಕೆಯರಿಮೆ(phonetics), ನುಡಿಯರಿಮೆ(Linguistics) ಮತ್ತು ಸೊಲ್ಲರಿಮೆ(grammar)ಗಳ ಪುರಾವೆಗಳನ್ನು ಒದಗಿಸಿಲ್ಲ. ಕೇವಲ ಕನ್ನಡ ಬರಹಗಳಲ್ಲಿ ಸಂಸ್ಕೃತ ಪದಗಳನ್ನು ಎರವಲು ಪಡೆದುದನ್ನು ನೋಡಿ ಹಾಗೆ ಅವರು ತಿಳಿದುಕೊಂಡಂತಿದೆ. ಮೊದಲೇ ಹೇಳಿದಂತೆ ಯಾವುದೇ ನುಡಿ/ಭಾಷೆಗೆ ’ಮಾತೇ’ ಆಧಾರ. ಹಾಗೆ ನೋಡಿದರೆ ಕನ್ನಡದ ಸೊಲ್ಲರಿಮೆ/ವ್ಯಾಕರಣ ಸಂಸ್ಕ್ರುತಕ್ಕಿಂತ ತಮಿಳಿಗೆ ಹತ್ತಿರವಾಗಿದೆ.

ಇಂಗ್ಲಿಶಿನಲ್ಲಿರುವ ’ಸ್ಪೆಲ್ಲಿಂಗ್’ ತೊಡಕು ಇಂದು ಆಳವಾಗಿ ಹಲವರನ್ನು ಕಾಡುತ್ತಿದೆ. ಅಮೆರಿಕಾದಲ್ಲಿ ಸ್ಪೆಲ್ಲಿಂಗ್ ಸಮಸ್ಯೆಯನ್ನು ಕಡಿಮೆ ಮಾಡಲು ಹಲವು ಸಂಶೋದನೆಗಳನ್ನು ಮಾಡಲಾಗುತ್ತಿದೆ. ಇವತ್ತು ಇಂಗ್ಲಿಶನ್ನು ಚೆನ್ನಾಗಿ ಓದಲು, ಬರೆಯಲು ಬೇಕೆಂದರೆ ಸುಮಾರು ೧೩೦೦೦ ಪದಗಳ ಸ್ಪೆಲ್ಲಿಂಗನ್ನು ನೆನಪಿಟ್ಟುಕೊಳ್ಳಬೇಕಾಗುತ್ತದೆ ಆದರೆ ಫಿನ್ನಿಶ್(Finnish) ನುಡಿಯನ್ನು ಕಲಿಯಲು ಒಂದೇ ಒಂದು ಸ್ಪೆಲ್ಲಿಂಗ್ ನೆನಪಿಟ್ಟುಕೊಳ್ಳಬೇಕಾಗಿಲ್ಲ. ಅಶ್ಟು ಚೆನ್ನಾಗಿ ಫಿನ್ನಿಶ್ ಬರಹವನ್ನು ಮಾಡಲಾಗಿದೆ. ಈ ಕಾರಣದಿಂದ ಪಿನ್ ಲ್ಯಾಂಡಿನಲ್ಲಿ ಜಗತ್ತಿನಲ್ಲೇ ಅತ್ಯುತ್ತಮವಾದ ’ಕಲಿಕೆ ವ್ಯವಸ್ಥೆ’ ಇದೆ. ರಾಜಕೀಯ, ಸಾಮಾಜಿಕ ಕಾರಣಗಳಿಂದ ಇಂಗ್ಲಿಶ್ ಬರಹ ಇಂದು ಹೆಚ್ಚು ಚಲಾವಣೆಯಲ್ಲಿರುವ ನುಡಿಯಾಗಿದ್ದರೂ ಅದರ ಬರಹ ವೈಜ್ಞಾನಿಕವಾಗಿಲ್ಲ ಎಂದು ಇದರಿಂದ ತಿಳಿಯಬಹುದು.

ಕೊನೆಗೆ ಬರಹಗಾರರು ಕನ್ನಡವನ್ನು ಬಲಪಡಿಸಬೇಕೆಂದು ಹೇಳುತ್ತಾರೆ ಅಲ್ಲದೆ ಲಿಪಿ ಸರಳಗೊಳಿಸುವುದರಿಂದ ’ಘನ’ವಾದುದನ್ನು ಕಳೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಹೇಗೆ ಬಲಪಡಿಸುವುದು ಎಂದು ಹೇಳುವುದಿಲ್ಲ. ಈಗಾಗಲೆ ಕನ್ನಡ ಬಲವಾಗಿದ್ದರೆ ಯಾಕೆ ಕನ್ನಡದಲ್ಲಿ ಹೊಸ ಅರಿವುಗಳು, ಹೊಸ ತಂತ್ರಜ್ಞಾನಗಳು ಹುಟ್ಟುತ್ತಿಲ್ಲ ? ಯಾವ ’ಘನ’ವನ್ನು ಕಳೆದುಕೊಳ್ಳುತ್ತೇವೆ ಎಂದು ಅವರು ಹೇಳುವುದಿಲ್ಲ. ಕನ್ನಡವನ್ನು ಬಲಪಡಿಸುವುದು ಅಂದರೆ ಕನ್ನಡದ್ದೇ ಸೊಗಡನ್ನು ಬಲಪಡಿಸುವುದು. ಕನ್ನಡದ್ದೇ ಆದ ಸೊಲ್ಲರಿಮೆಯನ್ನು/ವ್ಯಾಕರಣವನ್ನು ಗಮನಿಸಿವುದು ಮತ್ತು ಅದಕ್ಕೆ ಇಂಬು ಕೊಡುವುದು , ಹೊಸ ಹೊತ್ತಿಗೆ ಬೇಕಾದ ಕನ್ನಡದ್ದೇ ಆದ ಪದಗಳನ್ನುಂಟು ಮಾಡುವುದು ಅದರಿಂದ ಕಲಿಕೆಯನ್ನು ಇನ್ನು ಹೆಚ್ಚು ಚೆನ್ನಾಗಿ ಮಾಡುವುದು. ಕಲಿಕೆ ಚೆನ್ನಾಗಿ ಆದಾಗ ಜನರಿಗೂ ಕೂಡ ಹೊಸದನ್ನು ಸಾಧಿಸುವುದಕ್ಕಾಗುತ್ತದೆ. ಇದರಿಂದ ನಾಡ ಏಳಿಗೆ ಆಗುವುದರಲ್ಲಿ ಎರಡು ಮಾತಿಲ್ಲ.

ಗುರುವಾರ, ನವೆಂಬರ್ 17, 2011

ಬೈರಪ್ಪನವರು ಮತ್ತು ಪೊಳ್ಳು ಮಾತುಗಳು

ಬೈರಪ್ಪನವರ ಜೊತೆ ಮಾತುಕತೆಯನ್ನು ನೆನ್ನೆಯ(೧೬ ನೇ ನವೆಂಬರ್ ೨೦೧೧) ಕನ್ನಡಪ್ರಬದಲ್ಲಿ ಬಂದಿದೆ - ಇದರ ಬಗ್ಗೆ ಎರಡು ಮಾತು.

ಮೊದಲಿಗೆ, ಬೈರಪ್ಪನವರ ಕಾದಂಬರಿಗಳನ್ನು(ನಾಯಿನೆರಳು, ಜಲಪಾತ.) ಮೆಚ್ಚಿಕೊಂಡವರಲ್ಲಿ ನಾನೂ ಒಬ್ಬ. ಆದರೆ ಈ ಮೇಲಿನ ಮಾತುಕತೆಯಲ್ಲಿ ಅವರ ನಿಲುವುಗಳಲ್ಲಿರುವ ಪೊಳ್ಳುತನದ ಬಗ್ಗೆ ನಾನು ಹೇಳಲೇಬೇಕಿದೆ.

ಕೇಳ್ವಿ.೫ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದಾರೆ.- "ವಿಶಯ ಎಶ್ಟೆ ಗಾಡವಾಗಿರಲಿ ಬಾಶೆಯು ಬಾರವಾಗಿರುವುದು ನನಗೆ ಸೇರುವುದಿಲ್ಲ. ಶಬ್ದಗಳು ಕವಿಯನ್ನು ಸುತ್ತುವರೆದು ನನ್ನನ್ನು ಪ್ರಯೋಗಿಸು ಎಂದು ಓಲಿಡುತ್ತವೆ ಎಂದು ನಾನು ಕಾಲೇಜು ಓದುವಾಗ ಒಬ್ಬ ಕನ್ನಡ ಅದ್ಯಾಪಕರು ಪದೇ ಪದೇ ಹೇಳುತ್ತಿದ್ದರು..ನನಗೆ ಎಂದು ಹಾಗೆ ಆಗಿಲ್ಲ" - ಇಲ್ಲಿ ಹೀಗೆ ಹೇಳುವ ಬೈರಪ್ಪನವರು

ಕೇಳ್ವಿ ೧೪ ಕ್ಕೆ ಉತ್ತರಿಸುವಾಗ ಹೀಗೆ ಹೇಳಿದ್ದರೆ - "ಪಾರಿಬಾಶಿಕ ಶಬ್ದಗಳ ಕೈಪಿಡಿಯನ್ನು ಸಿದ್ದಪಡಿಸುವ ಒಮ್ದು ಸಮಿತಿಯಲ್ಲಿ ನಾನು ಸದಸ್ಯನಾಗಿದ್ದೆ. oxy+gen(=ಜನಕ). hydro(ನೀರು)+gen(ಜನಕ) - ಹೀಗೆ ಶಾಸ್ತ್ರ ಮತ್ತು ವಿಜ್ಞಾನದ ಪರಿಬಾಶೆಗಳು ಬಾರತದ ಎಲ್ಲ ಬಾಶೆಗಳಲ್ಲೂ ಬಹುತೇಕ ಒಂದೇ ಆಗಿರುವುದನ್ನು ಗಮನಿಸಿ. ಇಲ್ಲಿ ಬಾಶೆಗಳು ಸಾದ್ಯವಾದಶ್ಟು ಈ ಶಬ್ದಗಳನ್ನೇ ಇಟ್ಟುಕೊಳ್ಳಬೇಕು. ಇದರಿಂದ ಒಂದು ಬಾಶೆಯಲ್ಲಿ ಬರೆದ ವಿಗ್ನಾನ ಮತ್ತು ಶಾಸ್ತ್ರ ಗ್ರಂತಗಳನ್ನು ಇತರ ಬಾಶೆಗಳಿಗೆ ಅನುವಾದಿಸುವುದು ಸುಲಬವಾಗುತ್ತದೆ"

೫ ಮತ್ತು ೧೪ ರಲ್ಲಿರುವ ತನ್ನೆದುರನ್ನು(contradiction) ಯಾರು ಬೇಕಾದರೂ ಸುಳುವಾಗಿ ಗುರುತಿಸುಬಹುದು. ’೫’ರಲ್ಲಿ ಬಾಶೆ ಸರಳವಾಗಿರಬೇಕು ಮತ್ತು ಸರಳ ಬಾಶೆಯಲ್ಲಿ ಗಾಡವಾದ ವಿಚಾರವನ್ನು ತಿಳಿಸಬೇಕು ಎಂದು ಹೇಳುವ ಬೈರಪ್ಪ ’೧೫’ರಲ್ಲಿ ಬೇರೆ ಬಾಶೆಗೆ ಅನುವಾದ ಮಾಡಲು ಸುಲಬ ಮಾಡಲು ಸಂಸ್ಕ್ರುತದ ಕಟಿಣ ಪದಗಳಿಗೆ ಮೊರೆ ಹೋಗಬೇಕು ಎನ್ನುತ್ತಾರೆ. ಬೈರಪ್ಪನವರೆ, ನೀವು ನಿಮ್ಮ ಕಾದಂಬರಿಗಳಲ್ಲಿ ಹೀಗೆ ಯಾಕೆ ಮಾಡಲಿಲ್ಲ... ನೀವು ಹೆಚ್ಚು ಸಂಸ್ಕ್ರುತದ ಪದಗಳನ್ನು ಬಳಸಿದ್ದರೆ ಅದನ್ನು ಇತರ ಬಾಶೆಗಳಿಗೆ ಅನುವಾದ ಮಾಡುವುದು ಸುಳುವಾಗುತ್ತಿರಲಿಲ್ಲವೆ? ಹಾಸನದ ಆಡುನುಡಿಯನ್ನು ಯಾಕೆ ಹೆಚ್ಚು ಬಳಸಿದ್ದೀರಿ. ? ಇದು ನಿಮ್ಮ ಇಬ್ಬಂದಿತನವಲ್ಲವೆ?
ಯಾವುದೇ ನುಡಿಯಲ್ಲಿ ಪಾರಿಬಾಶಿಕ ಪದಗಳನ್ನು ಉಂಟು ಮಾಡುವಾಗ ಆಯ ನುಡಿ ಆಡುವ ಮಂದಿಗೆ ಸುಲಬವಾಗಿ ತಿಳಿಯುವಂತೆ ಪದವನ್ನು ಉಂಟು ಮಾಡಬೇಕು. ಇದರಿಂದ ಆ ನುಡಿಜನಾಂಗವು ಕಲಿಕೆಯಲ್ಲಿ ಮುನ್ನಡೆಯಬಹುದು. ಅದನ್ನು ಬಿಟ್ಟು ಬೇರೆ ಯಾವುದೋ ಬಾಶೆಗೆ ಅನುವಾದ ಮಾಡಲು ಅನುವಾಗುವಂತೆ ಪಾರಿಬಾಶಿಕ ಉಂಟುಮಾಡುವುದು ಎಶ್ಟು ಸರಿ? ಪಾರಿಬಾಶಿಕ ಪದಗಳ ಮೊದಲ ಗುರಿ ಆ ನುಡಿಜನಾಂಗಕ್ಕೆ ಯಾವುದೇ ಕಲಿಕೆಯನ್ನು ಸುಲಬಗೊಳಿಸುವುದು ಮತ್ತು ಕಲಿಕೆಯಲ್ಲಿ ಮುನ್ನಡೆಯುವಂತೆ ಮಾಡುವುದೇ ಆಗಿರಬೇಕು. ಹಾಗಾಗಿ ಆಯ ನುಡಿಯಲ್ಲಿರುವ ಸರಳ ಪದಗಳನ್ನು ಬಳಸಿ ಪಾರಿಬಾಶಿಕ ಪದನೆರಕೆಯನ್ನು ಕಟ್ಟಬೇಕು.

"ಕೇಳ್ವಿ ೧೪. ಈ ಹೊತ್ತು ಪ್ರಾದೇಶಿಕ ಭಾಶೆಗಳ, ಪ್ರಾಂತಗಳ ಮತ್ತು ಸಂಸ್ಕ್ರುತಿಗಳ ಬಗ್ಗೆ ಮಾತನಾಡುವುದು ಮನೋವೈಶಾಲ್ಯದ ಲಕ್ಶಣವೆನಿಸಿದೆ. ಆದರೆ, ಬಾರತದ ಬಗೆಗೆ ಮಾತನಾಡುವುದು ಸಂಕುಚಿತತೆ ಎನಿಸಿದೆ.ಏಕೆ?"
ಮತ್ತೆ ಕೇಳ್ವಿ೧೫ ಕ್ಕೆ ಹೀಗೆ ಉತ್ತರಿಸಿದ್ದಾರೆ:-

ಮೊದಲಿಗೆ ಈ ಕೇಳ್ವಿಯಲ್ಲೇ ಎಡವಟ್ಟಾಗಿದೆ. ಪ್ರಾದೇಶಿಕ ಬಾಶೆ ಎಂದರೇನು. ಬಾರತದ ಬಗೆಗೆ ಮಾತನಾಡುವುದು ಎಂದರೇನು. ಎರಡು ಬೇರೆ ಬೇರೆ ಹೇಗೆ? ನನಗೆ ಬಾರತ ಅಂದರೆ ಕರ್ನಾಟಕ; ನಾನು ಕನ್ನಡಿಗನಾಗಿರುವುದರಿಂದಲೇ ನಾನು ಬಾರತೀಯ. ಎರಡು ಬೇರೆ ಬೇರೆ ಅಲ್ಲ. ಕೇಳ್ವಿಯಲ್ಲಿ ಕನ್ನಡಿಗ ಮತ್ತು ಬಾರತೀಯ ಎಂಬುದನ್ನು ಬೇರೆ ಬೇರೆಯಾಗಿ ನೋಡುವ ಹುನ್ನಾರ ಅಡಗಿದೆ. ಅಲ್ಲದೆ ಈ ಕೇಳ್ವಿಯಲ್ಲಿ ’ಬಾರತೀಯತೆ ಮೇಲು ಕನ್ನಡತನ ಕೀಳು’ ಎನ್ನುವುದನ್ನು ಸೂಚ್ಯವಾಗಿ ಹೇಳುವಂತೆ ತೋರುತ್ತಿದೆ.

ಸರಿ ಈ ಕೇಳ್ವಿಗೆ ಬೈರಪ್ಪನವರು ಕೊಡುವ ಉತ್ತರದ ಬಗ್ಗೆ ನೋಡೋಣ. ಅವರು ಹೇಳುತ್ತಾರೆ:-
"ಈ ಬಾವನೆ ಪ್ರದಾನವಾಗಿ ಡಿಎಮ್ಕೆಯದು. ಅವರಿಂದ ಕರ್ನಾಟಕದ ಕೆಲವು ಅಕಾಡೆಮಿಕ್ ವಲಯಕ್ಕೆ ಹಬ್ಬಿದೆ. ಇದು ಮಹಾರಾಶ್ಟ್ರದಲ್ಲಿಲ್ಲ. ಗುಜರಾತಿನಲ್ಲಿಲ್ಲ. ಪಂಜಾಬಿನಲ್ಲಿಲ್ಲ. ನಾನು ತಿಳಿದಂತೆ ಆಂದ್ರದಲ್ಲಿಲ್ಲ. ಕರ್ನಾಟದಲ್ಲಿ ಯಾಕೆ ಬೆಳೆದಿದೆ. ಹಿಂದಿಯವರ ಪ್ರಾಬಲ್ಯ, ತಮಿಳು, ಮಲೆಯಾಳಗಳ ಒತ್ತುವರಿ ಕಾರಣವೆ."
ಇಲ್ಲಿ ಬೈರಪ್ಪನವರ ಅರಿಯಮಿಕೆ(ignorance) ಎದ್ದು ಕಾಣುತ್ತಿದೆ. ಪಂಜಾಬ್, ಆಂದ್ರದಲ್ಲಿ ಮೊದಲಿನಿಂದಲೂ ಆ ರಾಜ್ಯಗಳ ’ಪ್ರಾದೇಶಿಕ ಪಕ್ಶಗಳು’(ತೆಲುಗು ದೇಶಂ, ಅಕಾಲಿದಳ) ಹಿಂದಿನಿಂದಲೂ ಬಲವಾಗಿಯೇ ಇವೆ. ಅಲ್ಲದೇ ಪಂಜಾಬಿಗರು ’ಕಲಿಸ್ತಾನ” ಎಂಬ ಬೇರೆಯದೇ ಪಂಜಾಬಿ ದೇಶ ಮಾಡಲು ಹೊರಟಿದ್ದರು ಎಂಬುದನ್ನು ಬೈರಪ್ಪ ಮರೆತರೇಕೆ? ಇನ್ನು ಮಹಾರಾಶ್ಟ್ರದಲ್ಲಿ ’ಹೊರಬರ’ ವಿರುದ್ದ ಮರಾಟಿಗಳ ಕಾದಾಟ ಹೊತ್ತು ಹೊತ್ತಿಗೂ ಹೆಚ್ಚುತ್ತಿದೆ. ಅದಲ್ಲದೆ ’ಮಹಾರಾಶ್ಟ್ರ ನವನಿರ್ಮಾಣ ವೇದಿಕೆ’ ಮಹಾರಾಶ್ಟ್ರ ವಿದಾನಸಬೆಯಲ್ಲಿ ೧೩ಕ್ಕೂ ಹೆಚ್ಚು ಸೀಟುಗಳನ್ನು ಗೆದ್ದಿದ್ದಾರೆ. ಅಲ್ಲದೆ ಬೈರಪ್ಪನವರು ಕವಿರಾಜಮಾರ್ಗ ಓದಿದ್ದರೆ(ಓದೂ ಜಾಣ ಮರೆವು ಇರಬಹುದು) ಹೀಗೆ ಹೇಳುತ್ತಿರಲಿಲ್ಲ. ಕನ್ನಡ ನಾಡು/ದೇಶ ಇರದಿದ್ದರೆ ೯ನೇ ನೂರೇಡಿನ ಕವಿರಾಜಮಾರ್ಗದಲ್ಲೇ ಕನ್ನಡ ನಾಡಿನ ಗಡಿಯನ್ನು ಯಾಕೆ ಗುರುತಿಸಬೇಕಿತ್ತು. ಇದು ತಿರುಳ್ಗನ್ನಡ ನಾಡಿನ ಗಡಿ ಅಂತ ಯಾಕೆ ಹೇಳಬೇಕಿತ್ತು. ೯ ನೇ ಶತಮಾನದಲ್ಲಿ ಯಾವ ಡಿಎಮ್ಕೆ ಇತ್ತು? ಇಲ್ದೇದ್ ಮೇಲೆ ಹೇಗೆ ತಮಿಳುನಾಡಿನಿಂದ ಹಬ್ಬಕ್ಕಾಗುತ್ತೆ?

ಮುಂದುವರೆದೂ ಬೈರಪ್ಪನವರು,
" ಭಾರತವನ್ನು ಒಡೆಯಲು ಬ್ರಿಟಿಶರು ಹುಟ್ಟುಹಾಕಿದ ಸಿದ್ದಾಂತಗಳ ಪರಿಣಾಮವೇ"ಬಾರತ ಅಂತ ಎಲ್ಲಿ ಇತ್ತು ಅದನ್ನ ಒಡೆಯಕ್ಕೆ? ಹಾಗೆ ನೋಡಿದರೆ ಬ್ರಿಟಿಶರೆ ಆಡಳಿತದ ಅನುಕೂಲಕ್ಕೆ ’ಇಂಡಿಯಾ’ ಅಂತ ಒಟ್ಟು ಮಾಡಿದ್ದು. ಅದಕ್ಕೂ ಮೊದಲು ಇದ್ದುದು ಕನ್ನಡ ನಾಡು, ತಮಿಳು ನಾಡು, ತೆಲುಗುನಾಡು ( Kannada Country, Tamil Country, Telugu Country...etc). ಆಯ ನಾಡುಗಳನ್ನು ಆಳಿದವರು ತಮ್ಮವೇ ಆದ ಪಡೆ/ಸೈನ್ಯವನ್ನು ಹೊಂದಿದ್ದರು. ಬ್ರಿಟಿಶರು ಬರುವ ಮುನ್ನ ’ಬಾರತ ಸೇನೆ’ ಅಂತ ಯಾವುದೂ ಇರಲಿಲ್ಲ.

ಇನ್ನು ಮುಂದೆ ಹೋಗಿ ,
" ನಾವು ಪ್ರಾದೇಶಿಕ ಬೇರನ್ನು ಅರಸಿ ಹೊರಟರೆ ಒಬ್ಬರ ಜೊತೆ ಬೆರೆಯದ ಜಾತಿ, ಉಪಜಾತಿಗಳಲ್ಲಿ ನಿಲ್ಲುತ್ತೇವೆ."
ಸರಿ, ಹಾಗಾದರೆ ’ಪ್ರಾದೇಶಿಕತೆ’ಯಿಂದ ಬಹುದೂರ ಸಾಗೋಣ. ಇಡೀ ಮಾನವರೆಲ್ಲ ಒಂದೇ. ಬಾರತ, ಪಾಕಿಸ್ತಾನ . ಯು ಎಸ್ ಎ ಅಂತ ಬೇರೆ ಬೇರೆ ದೇಶಗಳು ಯಾಕೆ ಬೇಕು ? ಎಲ್ಲರೂ ಒಂದೇ. ಎಲ್ಲವನ್ನು ಒಗ್ಗೂಡಿಸಲು ಆಗುತ್ತದೆಯೆ? ಅದಕ್ಕೆ ನಮ್ಮ ಹಿರಿಯರು ಬಾರತವನ್ನು ನುಡಿಯ ಮೇಲೆ ನಾಡುಗಳನ್ನಾಗಿ ವಿಂಗಡಣೆ ಮಾಡಿದ್ದಾರೆ . ಯಾಕಂದರೆ ನುಡಿಯ ಆದಾರದ ಮೇಲೆ ಪ್ರಪಂಚದಲ್ಲಿ ದೇಶಗಳಾಗಿವೆ. ಜಾತಿಯ ಆದಾರದ ಮೇಲೆ ದೇಶಗಳನ್ನು ಎಲ್ಲೂ ಮಾಡಿಲ್ಲ. ಆಯ ನುಡಿ ಆಯ ನುಡಿಜನಾಂಗದ ಜೀವನಾಡಿಯೇ ಆಗಿದೆ. ಇದರಿಂದಲೇ ಅವರ ಏಳಿಗೆ ಎಂಬುದನ್ನ ಹಲವು (ಯೂರೋಪಿನ)ನಾಡುಗಳನ್ನು ನೋಡಿ ಕಲಿತುಕೊಳ್ಳಬಹುದು.

ಕೊಸರು:-
ತಿಳಿದೊ ತಿಳಿಯದೆಯೋ ಬೈರಪ್ಪನವರು ಹಲವು ಪೊಳ್ಳು ವಾದಗಳನ್ನು ಮುಂದಿಟ್ಟಿದ್ದಾರೆ. ಇನ್ನಾದರೂ ಬೈರಪ್ಪನವರು ಅರಿತು ತಮ್ಮ ದೊಡ್ಡತನಕ್ಕೆ ತಕ್ಕಂತೆ ಮಾತನಾಡಲಿ ಎಂದು ಬಯಸುತ್ತೇನೆ. ಇಶ್ಟಾದರೂ ನಾನು ಅವರ ಕಾದಂಬರಿಯಾದ ’ನಾಯಿ-ನೆರಳು’ನ್ನು ಬಲು ಒಲವಿಂದ ಮೆಚ್ಚಿದ್ದೇನೆ ಯಾಕಂದರೆ ದಿಟವಾಗಲೂ ಬೈರಪ್ಪನವರಿಗೆ ನಮ್ಮ ನುಡಿಯ ಬಲ ಅರಿತುಕೊಂಡಿದ್ದಾರೆ ಅಂತ ಆಗ ನನಗನ್ನಿಸಿತ್ತು. ಆದರೆ ಈಗ ಅದು ಸುಳ್ಳು ಅಂತ ಬೈರಪ್ಪನವರೇ ತೋರಿಸಿಕೊಟ್ಟಿದ್ದಾರೆ. ಬೂಟಾಟಿಕೆಗೋಸ್ಕರ ಹಾಸನದ ಆಡುನುಡಿಯನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ್ದಾರೇನೊ ಅಂತ ಈಗ ಅನ್ನಿಸತೊಡಿಗಿದೆ.

ಭಾನುವಾರ, ಅಕ್ಟೋಬರ್ 02, 2011

A Review of Book: Bipolar Identiy - Region , Nation and Kannada Language Film

A Review of Bipolar Identity - Region , Nation and Kannada Language Film - MK Raghavendra, Oxford University Press, 2011

This is probably the first book in English which analyses the Entire Kannada Cinema and make some significant conclusions applying the perspective of region and nation and their interaction with each other. Author has tried to assess the 'motifs' of the mainly 'popular' Kannada cinema although there is comparatively brief analysis about the 'Parallel'(Art) Cinema. He also seems to be determined to analyse only from the point of view of friction between region and nation, but at times he goes beyond his original intentions which is sort of breaks the monotony which one can experience while reading. The reason that the author has given more importance to the 'popular cinema' is probably because of the fact this genre of the cinema captures the pulse of the constituents of that Region and most likely to have the impact on society. Some of the main conclusions which author has tried to stress is the fact that National(Indian) identity tries to subsume the regional identity and its only proper that Region opposes it. The constituents(populace) of Kannada region tries to register the opposition to Nation State whenever the socio-political conditions are not so favourable to Kannada region, however when the region (or its people) get importance at National level, then Region tries to be loyal with nation state. Author illustrates this point with fact that how Kannada cinema reacts to Growth and Fall of Nijalingappa as national leader of INC to rationalise his conclusions.

Regions v/s Nation:-
Another important thread which Author tries to hang on is the fact that the Mysore Princely state had seen Modernity (thanks to Rajarshi Nalvadi Krishnaraja Wodeyar, Sir M. Vishweshwaraiah and Mirza Ismail) much before India started experiencing the modernity. This was registered in Kannada cinema through various Bond films and 'Kasthuri Nivasa'. 'Kasturi Nivasa' has been dealt with much detail because the author thinks that Rajkumar's role represents the Mysore Modernity(Pigeon Brand) and Rajanand's role, who raises beyond his master(Rajkumar) in the business, represents Indian Modernity(Eagle brand). In the last phase of the movie when the Rajanand tries to give back the 'bungalow' which was once owned by Rajkumar. Rajkumar rejects the offer and prefers to stay in small hut. This is definitely contest between Mysore and India and definitely Mysore(Region) tries to assert its superiority over India(Nation). In another movie Puttanna's 'Nagarahavu', one can notice the Photos of Vishweshwaraiah and Kannada cultural stalwarts in Chamaiah Master's (KS Ashwath) house who represents Mysorean Modernity whereas Photo of Nehru in College Principal's(Loknath) house. Again ultimately in the movie superiority or importance has been given to Mysorean Modernity Indian /Nehruvian Modernity is almost neglected or takes backstage. Author vindicates this point through several illustrations throughout the book.

Bengaluru's Role:-
Though the Kannada cinema industry is located in Bengaluru today, but the confused pereception about Bengaluru maintained in movies from 60's to very recent. Author thinks that its Mysore which is regarded as the true representation of Kannadigas than Bengaluru because of the 'cantonment' effect which it experienced during British rule. In fact in 'Sandhyaraaga', the joint family breaks off when it moves from village to Bengaluru. In 'pattanakke banda patniyaru', Bengaluru is almost projected as lawless space and in the end, sisters goes back to village to join their husbands after bitter experience in Bengaluru.

Kannada Language:-
Author is of the opinion is that 'Brahminical' Kannada actually raises the self esteem of Kannada in movies of 60s to 80s. 'Low Kannada' in 90s actually demeans the self Image of Kannada and Kannadigas. However, thankfully author observes that there was more passion among film makers towards 'realism' in 90s. New breed of film makers wanted to break the 'traditions' and also account of the other sections/communities of society and their dialect, which didn't get enough importance in the big screen in previous decades. Interestingly movies of 2000s' gives importance to 'Tribal'(Jogi) and Dalit(Duniya) as the protagonists and there dialectical Kannada, which is sort of oxymoron considering the onslaught of globalization during this decade. This perhaps points to the fact that, with globalisation there is increasing friction between 'natives' and 'outsiders' and natives trying to reach out to their nativity in a never before manner and scale. This of course is narrated in subtle way in this book rather than in a more pronounced manner.

Shortcomings or Limitations:-
Any kind of study of Kannada cinema cant be completed without giving importance to the role of Dr.Rajkumar and author is no different in his approach. He tries to catch on the popular perception as 'ethical super hero' of Kannada populace. Author goes on to say that Rajkumar was more popular than NTR in AP and also unlike NTR , Rajkumar never entered politics and his exit from the cinemas was gradual rather than abrupt. According to Author, throughout his career Rajkumar represented the characters which represents Regional Modernity/Mysorean Modernity or Regional/Mysorean Values except the dual role in 'Babruvahana' where he represented both Nation(Arjuna) and Region(Babruvahana). Author makes a factual error by saying that the Rajkumar never acted as 'God'(Nation) however the author has correctly recognized that he either plays roles as King(Arjuna) or Demon(Mahishasura, Hiranya Kashyapu). Rajkumar has actually acted as God "Srinivasa/Venkateshwara" in 'Shrinivasa Kalyana' and as God Shiva in 'Shiva meccida Kannappa', however he has played greater number of King/Demon roles than the 'God' roles. What is disappointing as a reader to me is that author misses three important as well as popular cinemas namely 'Kulavadhu', 'Mallammana Pawada' and 'Mayura'. Mayura especially, would have been very important in the wake of the techniques used by author to assess the motifs and milieu of Kannada Region. Also the movies like 'Gandhada Gudi' and 'Immadi pulakeshi' getting very less attention from the author also disappointing, with the former having long lasting impression of Kannada populace. The author never tries to bring in the points like upholding the Kannada culture and Language, which both the above movies vehemently tries to implicate on viewers. There are some of the factual errors in the names of Directors and moveis (V.Somashekhar's Shankar Guru whereas mentioned as K, Somashekar). Sometimes movie name is mentioned as 'Mungaru male' and sometimes 'Mungaru Maley'. There could also some other errors in the names of Directors or Movies. One can also provide the list of movies which either didn't get mentioned in the book or not dealt in detail.

Overall, the author is able to hit upon interesting findings both from viewer's and maker's perspective. There is enough matter in the book which could be useful to the movie makers, sociologists and in general to those who follow Kannada cinema.