ಭಾನುವಾರ, ಜೂನ್ 06, 2010

ನವಿರು ನವಿರಾದ ನಸುಗೆಂಪು ಗುಲಾಬಿ



ನಸುಗೆಂಪು ಗುಲಾಬಿಯ ಮೇಲಿನ ನೀರಿನ ಹನಿಮುತ್ತುಗಳು ಎಳೆನೇಸರನ ಬೆಳಕಿನೊಂದಿಗೆ ಸೇರಿ ಒಂದು ಹೊಸ ಹುರುಪನ್ನು ನೀಡುತ್ತಿರುವುದಂತು ದಿಟ.
ಚೆಂದ,ಚೆನ್ನ,ನಲಿವು ಅಂದರೆ ಇದೇ ಇರಬೇಕು.

ಶನಿವಾರ, ಜೂನ್ 05, 2010

ಈ ಹೂವಿನ ಹೆಸರೇನು ?/ what is the name of this flower?

ನಿಂಬೆ/ಇಲಿಮಿಂಚಿ ಹೂವು



http://dsal1.uchicago.edu/cgi-bin/philologic/getobject.pl?c.0:1:840.burrow
Ka. ilimiñci lemon

ಕೆಸವಿನ ಎಲೆ



ಇದನ್ನ ಬಳಸಿ ಪತ್ರೊಡೆ ಮಾಡುತ್ತಾರೆ.

http://dsal1.uchicago.edu/cgi-bin/philologic/getobject.pl?c.0:1:2012.burrow
Ka. kēsave, kē̆su, kesa, kesavu taro, Colocasia antiquorum

Skt. kemuka-, kecuka-, kevūka, kacu-, kacvī-

ದೇವಗಣಗಿಲೆ ಮೇಣ್ ದೇವ ಕಣಗಿಲೆ ಹೂವು ಮತ್ತು ಎಲೆ



ದೇವ ಗಣಗಿಲೆ ಕಣಗಿಲೆ ಜಾತಿಯಲ್ಲೇ ಮೇಲ್ಮಟ್ಟದ್ದು ಅನ್ಸುತ್ತೆ. ಈ ಹೂವು ಪಿಂಕು,ಬಿಳಿ ಮತ್ತು ಹಳದಿ ಬಣ್ಣಗಳಿಂದ ಕೂಡಿದೆಯಲ್ಲದೆ ಒಳ್ಳೆ ಸುವಾಸನೆ ಕೂಡ ಇದೆ.

ಸಂಸ್ಕ್ರುತದಲ್ಲಿ ಕರ್ಣಿಕಾರ, ಕರವೀರ,
Fragrant Oleander
in English
Nerium odorum is the Botanical Name

ಇದು ಕನ್ನಡ ನಾಡಿನಲ್ಲಿ ತುಂಬ ಹೆಚ್ಚು ಕಂಡು ಬರುತ್ತದೆ ಅನ್ಸುತ್ತೆ. ಅದಕ್ಕೆ ಇರಬೇಕು ಇದಕ್ಕೆ ಕನ್ನಡದಲ್ಲಿ ಹಲವು ಹೆಸರುಗಳಿವೆ :-
ಬರೊ,ಎಮನೊ ನುಡಿಗಂಟಿನಿಂದ
http://dsal1.uchicago.edu/cgi-bin/philologic/getobject.pl?c.0:1:1169.burrow
Ka. kaṇagil, kaṇagila, kaṇagala, kaṇagile, kaṇalige, kaṇigal, kaṇiginu, kaṇigil, kaṇigila, kaṇigili, kaṇigile, kaṇegile, gaṇigalu, gaṇigilu, gannēṟale

ಕುಂಬಳಕಾಯಿ ಬಳ್ಳಿ ಮತ್ತು ಹೂವು



ಸಿಹಿಗುಂಬಳನೋ, ಬೂದುಗುಂಬಳನೋ ಗೊತ್ತಿಲ್ಲ :)

ಶುಕ್ರವಾರ, ಜೂನ್ 04, 2010

ಗಗನಚುಕ್ಕಿಯ ಹರಿವು, ಚಿಮ್ಮು

ಸತ್ತೇಗಾಲದ ಸೇತುವೆ, ಕಾವೇರಿ ಮತ್ತು ಮಗ್ಗುಲಲ್ಲೇ ಬೆಟ್ಟ

ಗಗನಚುಕ್ಕಿ ಗುಂಡಿಯಲ್ಲಿ ಚಿಮ್ಮುವ ಹನಿ

ಬುಧವಾರ, ಜೂನ್ 02, 2010

ಸಂತ ಕ್ಲಾರದ ಹಕ್ಕಿ



ಇದು ಪಾರಿವಾಳದ ಜಾತಿಗೆ ಸೇರಿದ ಹಕ್ಕಿ ಇರಬಹುದು. ಕ್ಯಾಲಿಪೋರ್ನಿಯಾದ ಸಂತ ಕ್ಲಾರದಲ್ಲಿ ನೋಡಿದ್ದು

ಮೇ ಹೂವು ( May Flower)

ಇದರ ನಿಬ್ಬರವೇನೆಂದರೆ ವರುಶಕ್ಕೆ ಒಮ್ಮೆ ಮಾತ್ರ ಅಂದರೆ ಬರೀ ಮೇ ತಿಂಗಳಲ್ಲಿ ಅರಳುವ ಹೂವು


ಒಲವ ಹಕ್ಕಿ





ಕೆಂಪು ದಾಸವಾಳ(ಗೋಗಿ)

ಚಿತ್ರದುರ್ಗದ ಬಂಡೆಗಳ ಅಂಚಿನ ಡೊಂಕು

ಚಿತ್ರದುರ್ಗದ ಕೋಟೆಯ ಒಂದು ಗೋಡೆ



ಆದರೆ ಪೋಟೊ ತೆಗೆಯುವಾಗ ಕ್ಯಾಮೆರ ಬಗ್ಗಿಸಿದ್ದಿರಿಂದ ಪಿರಮಿಡ್ ತರ ಕಾಣ್ತಾ ಇದೆ.

ಚಿತ್ರದುರ್ಗ ಕೋಟೆಯ ಹೆಬ್ಬಾಗಿಲು

ಚಿತ್ರದುರ್ಗದಲ್ಲಿ ಬಂಡೆಗಳ ನಡುವೆ ಮರ

ಶನಿವಾರ, ಮೇ 29, 2010

ಅಂಕು-ಡೊಂಕಾದ ಇಳಿಜಾರು ದಾರಿ

ಬಾನಿಗೆ ಏಣಿ ?

ಗೋಪಾಲಸ್ವಾಮಿಯ ಬೆಟ್ಟದ ಹಸಿರು ಗುಡ್ಡ

ಬಂಡಿಪುರ ಕಾಡಿನ ಬಗ್ಗೆ ಅರಿಮೆಗಳು

ಬಂಡಿಪುರದಲ್ಲಿ ಆನೆ, ಹಿಂಬದಿಯಲ್ಲಿ ಪೊದೆ

ಈ ಹೂವಿನ ಹೆಸರೇನು ( What is the name of this flower) ?- ಇಕ್ಸೋರ ಕೊಕಿನಿಯಾ



ಹೆಚ್ಚಿನ ಅರಿಮೆಗೆ ಇಲ್ಲಿ ಚಿಟುಕಿಸಿ

ನಸುಗೆಂಪು(ಪಿಂಕ್) ದಾಸವಾಳ (ಗೋಗಿ)



Ka. gōgi Deckanee hemp, Hibiscus cannabinus. Te. gō̃gu, gōnu id.; gōṅgūra leaves of H. cannabinus. DED(S) 1813

ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಚಿಟುಕಿಸಿ

ಎತ್ತರದ ಕಟ್ಟಡ v/s ಹಸಿರಿನ ಮರ

ಕದ್ರಾ ಅಣೆಕಟ್ಟಿನ ಹಿನ್ನೀರು

ಮರ, ಬಾನು ಮತ್ತು ಜೆಟ್ಟಿನ ಹಾದಿ

ಐಹೊಳೆಯಲ್ಲಿರುವ ಶಿವನ ಗುಡಿಯ ಮೇಲಿರುವ ಕೆತ್ತನೆ

ಐಹೊಳೆಯ ದ್ರಾವಿಡ ಶೈಲಿಯ(South Indian) ಗುಡಿ

ಸಿಂಗಾಪುರದಲ್ಲಿ ಹೊತ್ತು ಮುಳುಗುತ್ತಿರುವುದು

ಇದು ಯಾವ ಹೂವು ಹೇಳುವಿರಾ? --- ಮಳೆ ಲಿಲಿ






ಇದರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಲ್ಲಿ ಚಿಟುಕಿಸಿ

ಶುಕ್ರವಾರ, ಮೇ 28, 2010

ಪಣಂಬೂರಿನ ಕರೆಯಲ್ಲಿ ಹೊತ್ತು ಮುಳುಗುತ್ತಿರುವುದು

ಪಣಂಬೂರಿನಲ್ಲಿ ನೇಸರನು ಮುಳುಗುತ್ತಿರುವುದು

ಮೋಡವೆಂಬ ಮಬ್ಬಿಗ ನೇಸರನೆಂಬ ಬೆಂಕಿಚೆಂಡನ್ನು ನುಂಗುತ್ತಿರುವುದು

ಬಾದಾಮಿಯ ಹತ್ತಿರವಿರುವ ಬನಶಂಕರಿ ಗುಡಿಯ ಗೋಪುರ

ಬಾದಾಮಿಯ ಹತ್ತಿರವೆ ಸಿಕ್ಕ ಸೂರ್ಯಕಾಂತಿ(ನೇಸರ್ಗದಿರ) ಹೂವು

ಬಾದಾಮಿಯ ಗವಿಗಳ ನಡುವೆ ಇರುವ ಕೆರೆ

ಬಾದಾಮಿಯ ಗವಿಗಳು ಬಾನಿನ ಹಿನ್ನಲೆಯಲ್ಲಿ

ಐಹೊಳೆಯ ದುರ್ಗದ ಗುಡಿ

ಕೂಡಲಸಂಗಮದ ಚೆಲುವಿನ ನೋಟ

ಬುಧವಾರ, ಫೆಬ್ರವರಿ 17, 2010

ನಯಸೇನನ ಸಲೀಸಾದ ಸಾಲುಗಳು

ನಯಸೇನನ ಸಲೀಸಾದ ಸಾಲುಗಳು- ಬಿಡಿ ೩ - ಕೆಡುನುಡಿವ ಕಬ್ಬಿಗರು
ಕಬ್ಬಿಗರು ನಯಸೇನ ಧರ್ಮಾಮೃತಂ ದರ್ಮಾಮ್ರುತಂ ಮಡಕೆ ಅಡಕಿಲ

ನಯಸೇನ ಒಂದು ಕ್ರುತಿಯ ಬಗ್ಗೆ ಕೆಡುನುಡಿವವರ ಬಗ್ಗೆ ಒಳೆ ಅಬಿಪ್ರಾಯ ಮೂಡಿಸಿದ್ದಾನೆ. ಕೆಡುನುಡಿವವರಿಂದಲೇ ಒಂದು ಕ್ರುತಿಯ ಓರೆ-ಕೋರೆಗಳು ಬೆಳಕಿಗೆ ಬರುತ್ತವೆ ಎಂಬುದು ಅವನ ನಂಬುಗೆಯಾಗಿರಬಹುದು.

ಅಡಕಿಲ ಮಡಕೆಗಳಂ ಸ
ಯ್ತಿಡಲಱಿವುವೆ ನಾಯ್ಗಳೊಡೆವುವಲ್ಲದೆ ಕ್ರುತಿಯಂ
ಕಿಡೆನುಡಿವರಲ್ಲದೇಂ ಜಡ
ರೊಡಂಬಡಲ್ತಿದ್ದಿನುಡಿಯಬಲ್ಲರೆ ಕವಿವೋಲ್

ಬಿಡಿಸಿದರೆ,
ಅಡಕಿಲ ಮಡಕೆಗಳಂ ಸಯ್ತ್ ಇಡಲ್ ಅಱಿವುವೆ ನಾಯ್ ಗಳ್ ಒಡೆವುವು ಅಲ್ಲದೆ ಕ್ರುತಿಯಂ ಕಿಡೆನುಡಿವರಲ್ಲದೇಂ ಜಡರ್ ಒಡಂಬಡಲ್ ತಿದ್ದಿ ನುಡಿಯಬಲ್ಲರೆ ಕವಿವೋಲ್

ಹೇಗೆ ನಾಯಿಗಳಿಗೆ ಒಂದರಮೇಲೊಂದರಂತೆ ಮಡಕೆಗಳನ್ನು ಸರಿಯಾಗಿಡಲ್ ಗೊತ್ತಿಲ್ಲದೆ ಅವುಗಳನ್ನು ಒಡೆಯುತ್ತವೊ ಹಾಗೆ ಕ್ರುತಿಯ ಬಗ್ಗೆ ಕೆಟ್ಟ ಮಾತುಗಳಾಡುವವರಲ್ಲದೆ ಜಡರು(ಹೆಚ್ಚು ಮಾತನಾಡದವರು, ಸುಮ್ಮನೆ ಇರುವವರು,ಎಲ್ಲದಕ್ಕೂ ಒಪ್ಪುಗೆ ಸೂಚಿಸುವವರು) ಒಡೆಯಬಲ್ಲರೆ (ತಿದ್ದಿ ನುಡಿಯಬಲ್ಲರೆ)?
ನಾಯಿಗಳಿಂದಲೆ ಮಡಕೆ ಎಶ್ಟು ಗಟ್ಟಿ ಅಂತ ಗೊತ್ತಾಗುವುದು ಹಾಗೆ ಕಿಡುನುಡಿವುವರಿಂದಲೇ ಕ್ರುತಿಯ ಬಗ್ಗೆ ದಿಟವಾದ ಒಳ್ಳೆ ವಿಮರ್ಶೆ ಬರುವುದು.

ಅಡಕಿಲ = ಒಂದರ ಮೇಲೊಂದರಂತೆ
ಒಡಂಬಡು = ಒಪ್ಪು, ಅಂಗೀಕರಿಸು

ಯಾಕೊ ಮೇಲಿನ ಬಿಡಿಸಿಕೆ ಅಶ್ಟು ಸರಿಯಾಗಿಲ್ಲ ಅನ್ಸುತ್ತೆ...:(

---------------------------------
ನಯಸೇನನ ಸಲೀಸಾದ ಸಾಲುಗಳು- ಬಿಡಿ ೪ - ಸಹಜಮಿಲ್ಲದಾತನ ಕಬ್ಬಂ

ನಯಸೇನ ಕಬ್ಬಕ್ಕೆ ಸಹಜತನ ಯಾಕಿರಬೇಕು ಎಂಬುದನ್ನ ಒತ್ತಿ ಹೇಳಲು ಮಳೆ ನೀರು ಮತ್ತು ಪನ್ನೀರು(ಪೊಯ್ನೀರ್) ಎಂಬ ಉಪಮೆಗಳನ್ನು ಬಳಸಿಕೊಂಡು ಚೆನ್ನಾಗಿ ಬಣ್ಣಿಸಿದ್ದಾನೆ. ಸಕ್ಕತ್

ಮೞೆಯಿಲ್ಲದೆ ಪೊಯ್ನೀರಿಂ
ಬೆಳಗುಮೆ ಧರೆ ಮಱುಗಿ ಕುದಿದು ಶಾಸ್ತ್ರದ ಬಲದಿಂ
ದಳಿಪಿಂ ಪೇೞ್ವೊಡಮದು ಕೋ
ಮಳಮಕ್ಕುಮೆ ಸಹಜಮಿಲ್ಲದಾತನ ಕಬ್ಬಂ

ಹೇಗೆ ಮಳೆಯಿಲ್ಲದೆ ಉರಿದು/ಬಿಸಿಯಾಗಿರುವ ದರೆ(ಬುವಿ)ಬರೀ ಎರಚಿದ ನೀರಿನಿಂದ ತಣ್ಣಗಾಗುವುದಿಲ್ಲವೊ ಹಾಗೆ ಕೇವಲ ಶಾಸ್ತ್ರಬಲದ ಚಟಕ್ಕೆ ಬಿದ್ದು(ಎರಚಿದ ನೀರಿನಂತೆ) ಸಹಜತನವನ್ನು(ಮಳೆ) ಕಳೆದುಕೊಂಡ ಕಬ್ಬಿಗನ ಕಬ್ಬ ಕೋಮಳವಾಗುವುದಿಲ್ಲ
ಒಟ್ಟಿನಲ್ಲಿ ಕಬ್ಬಕ್ಕೆ ಸಹಜತನ ಬಲು ಮುಕ್ಯ.

ಮೞೆ = ಮಳೆ
ಪೊಯ್ನೀರ್ = ಎರಚುವ ನೀರು, ಎರಗಿದ ನೀರು
ಮಱುಗಿ = ಉರಿದು, ಬಿಸಿಯಾಗು
ಅಳಿಪಿಂ = ಚಟಕ್ಕೆ ಬಿದ್ದು ಬಯಸು, ನಲ್ಮೆಗೆ ಒಳಗಾಗು

ಗಮನಿಕೆ:
೧) ಈಗಲೂ ನಾವು ಮದುವೆ ಮನೆಗಳಿಗೆ ಹೋದರೆ ಬಾಗಿಲಲ್ಲಿ ಪನ್ನೀರನ್ನು ಎರಚುವ ವಾಡಿಕೆಯಿದೆ. ಅದು ದಿಟವಾಗಲೂ ಪೊಯ್ನೀರ್ ಅಂದರೆ 'ಎರಗುವ ನೀರು'. ಮಾತಿನಲ್ಲಿ ಪೊಯ್ನೀರ್ => ಪನ್ನೀರ್ ಆಗಿದೆ.
೨) ಅಳಿಪು = ಕೂರ್, ಪ್ರೀತಿ, ನಲ್ಮೆ ,ಈ ಹಿಂದೆ 'ಅಳಿಯ' ಪದದ ಬಗ್ಗೆ ಹೇಳಿದ್ದಾಗ ಇದರ ಬಗ್ಗೆ ಹೇಳಿದ್ದೆ.
೩) ಮಱುಗಿ - ಇದನ್ನು ಕವಿರಾಜಮಾರ್ಗದಲ್ಲಿ ಕೂಡ ಬಳಸಲಾಗಿದೆ
ಕವಿರಾಜಮಾರ್ಗ ಬಿಡಿ-೧ , ೫೮ ನೇ ಪದ್ಯ
ತಱಿಸಂದಾ ಸಕ್ಕದಮುಮ
ನಱಿಯದೆ ಕನ್ನಡಮುಮಂ ಸಮಾಸೋಕ್ತಿಗಳೊಳ್
ಕುಱಿತು ಬೆರೆಸಿದೊಡೆ ವಿರಸಂ
ಮಱುಗುವ ಪಾಲ್ಗಳೆಯ ಪನಿಗಳಂ ಬೆರೆಸಿದವೋಲ್

೪)



ಉಪ್ಪಿಲ್ಲದೆ ಕೇಳೊಕ್ಕಳ
ತುಪ್ಪವನೆಱೆದುಣ್ಬೆನೆಂಬೊಡುಂಬುಣಿಸೇಂ ಸ್ವಾ
ದಪ್ಪುದೆ ಸಹಜಂ ತನಗಿನಿ
ಸಪ್ಪೊಡಮಿಲ್ಲದನ ಕವಿತೆ ರುಚಿವಡೆದಪುದೇ

ಇದಿಲ್ಲದ ಇದುಂ
--------
ಕಂಪಿಲ್ಲದ ತುಪ್ಪಮುಂ
ಪೆಂಪಿಲ್ಲದ ಪ್ರಬುತ್ವಮುಂ
ಸ್ನೇಹಮಿಲ್ಲದ ಕೋಡುಂ
ಮೋಹಮಿಲ್ಲದ ಬಾೞುಂ
ಬಕುತಿಯಿಲ್ಲದ ಕೊಂಡಾಟಮುಂ
ಶಕುತಿಯಿಲ್ಲದ ಸೆಣಸುಂ
ಕೋಡಿಲ್ಲದ ಸಿರಿಯುಂ
ನಾಡಿಲ್ಲದರಸುಂ
ಪಲವಿಲ್ಲದ ತೋಟಮುಂ
ಕುಲಮಿಲ್ಲದ ಮಹಿಮೆಯುಂ
ಬಟ್ಟೆಯಿಲ್ಲದ ಪಯಣಮುಂ
ಪಟ್ಟಣಮಿಲ್ಲದ ರಾಜ್ಯಮುಂ
ಕಿಚ್ಚಿಲ್ಲದಡುಗೆಯುಂ
ನೆಚ್ಚಿಲ್ಲದ ಪೆಂಡತಿಯುಂ
ದಯೆಯಿಲ್ಲದ ನೆಗೞ್ತೆಯುಂ
ನಯಮಿಲ್ಲದ ಸೇವೆಯುಂ
ಬಂಡಮಿಲ್ಲದಂಗಡಿಯುಂ
ಗಂಡನಿಲ್ಲದ ಸತಿಯುಂ
ಮೊದಲಿಲ್ಲದ ಪರದುಂ
ಮದಮಿಲ್ಲದಾನೆಯುಂ
ನೀರಿಲ್ಲದೂರುಂ
ಕೇರಿಲ್ಲದ ಮನೆಯುಂ
ಶ್ರುತಮಿಲ್ಲದ ತಪಮುಂ
ತುಪ್ಪವಿಲ್ಲದೂಟಮುಂ
ಸಮಱಿದರುಸನಮಿಲ್ಲದ ದಾನಮುಂ ತಪಮುಂ ಜಪಮುಂ ದರ್ಮಮುಮೊಪ್ಪಲಾರ್ಕುಮೆ?

----
ತಿರಿದಾಕೂಳಂ ನೀರೊಳ್
ಗರಗರನಪ್ಪಂತು ಕರ್ಚಿ ಮೇಣುಂಡಪರೋ
ಪರಿಯೊಳ್ ಮೇಣ್ಮಿಂದಪರೋ
ಮರುಳೀತಂ ಶ್ರವಣರಾವ ತಪಂ ಕಂಡರ್

ಬೇಡಂ ಮಾಣಿಕಮೊಂದಂ
ಕಾಡೊಳ್ ಕಂಡೊರ್ಮೆ ಮೆಲ್ದು ಪಗಿನಲ್ಲೆಂದೀ
ಡಾಡಿದನೆಂಬೀ ನಾಣ್ಣುಡಿ
ನಾಡೆಯುಮೆಸೆದಪುದು ದುರಿತವಶದಿಂದಿವನೊಳ್

ಬಿಡಿಸದರೆ,

ಬೇಡಂ ಮಾಣಿಕಮ್ ಒಂದಂ
ಕಾಡೊಳ್ ಕಂಡ್ ಒರ್ಮೆ ಮೆಲ್ದು ಪಗಿನಲ್ ಎಂದ್
ಈಡಾಡಿದನ್ ಎಂಬ್ ಈ ನಾಣ್ಣುಡಿ
ನಾಡೆಯುಮ್ ಎಸೆದಪುದು ದುರಿತವಶದಿಂದ್ ಇವನೊಳ್

ಪಗಿನ= ಅಂಟು,ರಸ
ಈಡಾಡಿದನ್ = ಬಿಸಾಡಿದನ್
ನಾಡೆಯುಮ್ = ಹೆಚ್ಚಾಗೆ
ಎಸೆದಪುದು = ಕಂಡು ಬರುವುದು.

ಬಿತ್ತರದಿಂ ಕುರುಡಂ ಕ
ಣ್ಬೆತ್ತಂತಿರೆ ರಾಗಮೊದವೆ ಬೆಲೆವೆಣ್ ಪೆಣ್ಣಂ
ಪೆತ್ತಂತಿರೆ ಪಾರ್ವಂ ಮ
ಣ್ಬೆತ್ತಂತಿರೆ ಪಿರಿದು ಸಂತಸಂ ಮಿಗೆ ಮನದೊಳ್

ಎಲ್ಲರಿಗೂ ಗೊತ್ತಿರುವಂತೆ,
ಕುರುಡನೊಬ್ಬನಿಗೆ ಕಣ್ ಬಂದರೆ
ಬೆಲೆವೆಣ್ ಪೆಣ್ಣಂ ಹೆತ್ತಿದರೆ (???)
ಹಾರುವ ಮಣ್ಬೆತ್ತಂತಿರೆ ( ????)
ಅದು ಹಿರಿದಾದ ವಿಶೇಶವಾದ ಸಂತಸ

ಬಾೞೆಯ ಕರ್ಜೂರದ ಕಿ
ತ್ತೀಳೆಯ ಕಂಮರದ ರಂಜಿಪಿಮ್ಮಾವಿನ ಪೇ
ರೀಳೆಯ ನಾರಂಗದ ಕಂ
ಚೀಳೆಯ ತನಿವಣ್ಣನಿಕ್ಕೆ ಮೇಲ್ದಾದರದಿಂ

ತನಿ= ಒಳ್ಳೆಯ, ಚೆನ್ನಾದ
ತನಿವಣ್ಣು = ಒಳ್ಳೆಯ ಹಣ್ಣುಗಳು
ಕಿತ್ತೀಳೆ = ಕಿತ್ತಳೆ
ಕಂಚೀಳೆ = ?
ಕಂಮರ = ?
ಪೇರೀಳೆ = ?
ರಂಜಿಪಿಮ್ = ರಂಜಿಸಿ

ಕುಂದದಿನಿಸಂ ಮನಕೆ ಬಂದುಣಿಸನುಂಡು ಪದ
ಪಿಂದೆ ಪೆಱತೇಂ ಕೆಱೆಗೆ ಪೋಗಿ ತಿಳಿನೀರಂ
ಮಿಂದು ಬಿಡದೂರೊಳಗಣೊಂದುಲಿವ ಮಾತುಗಳ
ದಂದುಗದೊಳಾರ್ತೆಸಗಿ ಕೂರ್ತಿರದೆ ನಿಚ್ಚಂ

ನಸುಗುನ್ನಿ ಮುಟ್ಟದಂತಿರೆ
ಬಸಮಲ್ಲದೆ ತಿಂಬ ಮೆಯ್ಯ ತಿನಿಸಿಂಗಂ ಸಯ್
ರಿಸಲಾರದೆರಡು ಕಯ್ಯಿಂ
ಮಸೈಗಿ ಮನಂಗೆಟ್ಟು ಮರುಳವೊಲ್ತುಱಿಸುತ್ತುಂ


ನಯಸೇನನ ಸಲೀಸಾದ ಸಾಲುಗಳು - ಬಿಡಿ ೮ - ಕೆಟ್ಟವರ/ಸಿತಗರ ಒಡನಾಟ

ಕೆಟ್ಟವರ ಒಡನಾಟವನ್ನು ಬಲ್ ಚೆನ್ನಾಗಿ ಹೋಲಿಕೆಗಳ ಮೂಲಕ ಬಣ್ಣಿಸಿದ್ದಾನೆ.

ಮೊದಲಿಂ ಪಂದಿಗಳೊಡನಾ
ಡಿದ ಕಱುವುಂ ಪಂದಿಯಂತೆ ಪೇಲಂ ತಿಂಗೆಂ
ಬುದು ನಾಣ್ಣುಡಿ ತಾನದು ತ
ಪ್ಪದು ಸಿತಗರ ಕೂಟದಿಂದೆ ಕೆಡದವರೊಳರೇ

ತಿರುಳು: ಹೇಗೆ ಮೊದಲಿಂದಲೂ ಹಂದಿಗಳೊಡನೆ ಆಡಿದ ಕರುವು(ಹಸುವಿನ) ಹಂದಿಯಂತೆ ಹೇಲನ್ನು ತಿನ್ನುವುದು ಹಾಗೆ ಕೆಟ್ಟವರೊಡನೆ(ಸಿತಗರೊಡನೆ) ಇದ್ದವರು ಕೆಡದೆ ಇರುವರೆ?

ಆರಯ್ದು ನೋಡೆ ತೊಱೆಗಳ
ನೀರುಂ ವಾರಿದಿಯ ನೀರ ಪೊರ್ದುಗೆಯಿಂದಂ
ಸಾರಂಗೆಟ್ಟುಪ್ಪಪ್ಪವೊ
ಲಾರುಂ ದುರ್ಜನ ಕೂಟದಿಂದಂ ಕೆಡರೇ

ತಿರುಳು: ಹೇಗೆ ತೊರೆಗಳ ನೀರು ಕಡಲ ನೀರ ಸೇರಿಕೆಯಿಂದ ಉಪ್ಪಾಗುವುದೊ ಹಾಗೆ ಹುಡುಕಿ ನೋಡಿದರೂ ಕೂಡ ಕೆಟ್ಟವರ ಕೂಟದಿಂದ ಕೆಡದೇ ಇರುವವರು ಸಿಗರು.

ಕಡುತಣ್ಪು ಕೆಟ್ಟು ಕಿಚ್ಚಿನೊ
ಳೊಡಗೂಡಿದ ನೀರ್ ಬಳಿಕ್ಕೆ ತೀವ್ರತೆಯಿಂ ಕಯ್
ಸುಡುವಂತೆ ನೋಡೆ ದುರ್ಜನ
ರೊಡಗೂಡಿದ ಮಾನಿಸರ್ಗೆ ಸದ್ಗುಣಮುಂಟೇ

ತಿರುಳು : ಕಡು ತಣ್ಣಗಿರುವ ನೀರು ಬೆಂಕಿಯಿಂದ ಕಾದ ಬಳಿಕ ಕಯ್ ಸುಡುವಂತಾಗುತ್ತದೊ ಹಾಗೆ ದುರ್ಜನರ ಒಡಗೂಡಿದ ಮಾನಿಸರಲ್ಲಿ ಸದ್ಗುಣವಿರಲು ಉಂಟೇ/ಸಾದ್ಯವೆ?


ಪೇಲಂ= ಹೇಲು
ಸಿತಗ = ಕೆಟ್ಟವ, ಜಾರ, ದುಶ್ಟ
ಆರಯ್ದು = ಹುಡುಕಿ, ಅನ್ವೇಶಿಸಿ
ತಣ್ಪು = ತಣ್ಣನೆಯ
ಪೊರ್ದುಗೆ = ಹೊದ್ದುಗೆ, ಹೊದ್ಕೆ,ಸೇರಿಕೆ , ಕೂಟ
ಬಳಿಕ್ಕೆ = ಬಳಿಕ

ಇಲ್ಲಿ ನಯಸೇನ 'ಕೆಟ್ಟು' ಒರೆಯನ್ನು ಚೆನ್ನಾಗಿ ಬಳಸಿದ್ದಾನೆ.
ಕೆಟ್ಟು = ಬಿಟ್ಟು, ಸಾರಂಗೆಟ್ಟು= ಸಾರವನ್ನು ಬಿಟ್ಟು

ಮಂಗಳವಾರ, ಡಿಸೆಂಬರ್ 15, 2009

ಮನೆತಿಂಡಿ -ಕನ್ನಡಿಗರ ತಿಂಡಿ



ಬೆಂಗಳೂರಿನಲ್ಲಿ ದೇವೆಗೌಡ ಪೆಟ್ರೋಲ್ ಬಂಕ್ ಮತ್ತು ಕಾಮಾಕ್ಯ ಸಿನಿಮನೆಗಳ ನಡುವೆ ಈ ’ಮನೆತಿಂಡಿ’ ಹೋಟೆಲು ತಲೆಯೆತ್ತಿದೆ.
ಅಪ್ಪಟ ಕನ್ನಡದ/ಕನ್ನಡಿಗರ ತಿನಿಸುಗಳಾದ ಮನೆ ಉಪ್ಪಿಟ್ಟೂ, ಬೆಣ್ಣೆ ತಟ್ಟೆ ಇಡ್ಲಿ, ಗೋಳಿ ಬಜ್ಜಿ, ಮದ್ದೂರ್ ವಡೆ...ಇನ್ನು ಎಶ್ಟೋಂದು ತಿನಿಸುಗಳು ಸಿಗುತ್ತವೆ. ಹೆಸರಹಲಗೆಯನ್ನ ದೊಡ್ಡದಲ್ಲಿ ಬರೀ ’ಕನ್ನಡ’ದಲ್ಲೆ ಹಾಕಿಸಿ(ಪೋಟೋ ಗಮನಿಸಿ) ಮತ್ತು ’ರುಬ್ಬೋಕಲ್ಲ’ನ್ನೇ ಲೋಗೊ ಮಾಡಿಕೊಂಡು ಅಪ್ಪಟ ಕನ್ನಡ ಸಂಸ್ಕ್ರುತಿಯನ್ನ ಈ ಹೋಟೆಲು ಎತ್ತಿ ಹಿಡಿದಿದೆ ಎಂದು ಹೇಳಿದರೆ ತಪ್ಪಲ್ಲ. ನನಗಂತೂ ತುಂಬ ನಲಿವಾಯಿತು.

ಮನೆತಿಂಡಿ ಸವಿದು ನಾಲಿಗೆಗೆ ಬೆಚ್ಚಗೆ ಮಾಡ್ಕೊಳ್ಳಿ. :)

ಸೋಮವಾರ, ನವೆಂಬರ್ 30, 2009

ಬರತೇಶನ ವಚನಗಳು

ಅರಿವು
-----
ಅರಿವೇ ಗುರುವೆಂದರು ಶರಣರು
ತನ್ನರಿವಿಲ್ಲದೆ ನಿನ್ನರಿವಿಲ್ಲದೆ
ಬಾಳಹೊಳೆ ಹರಿಯಬಲ್ಲುದೇ ಹೇಳು ಬರತೇಶ


ಅರಿವೊಳಗೆ ಸುಳಿವನ್ನಿತ್ತು
ಪರಿವೇ ಇಲ್ಲದೆ ಪರದಾಡಿಸಿ
ಮತ್ತದೆ ನಿಲುವುಗಳನ್ನು ಎಡತಾಕಿಸಿ
ಮೊತ್ತ ಸೊನ್ನೆಯಾಯಿತಲ್ಲೊ ಬರತೇಶ

ಉಂಕು
-----
ಉಂಕಿಸಿದೇ ಇರಲಾರೆ
ಅಂಕು-ಡೊಂಕುಗಳು ತಿದ್ದಲಾರೆ
ಉಂಕು,ಡೊಂಕುಗಳ ನಡುವಿನ
ಸೋಂಕಿಗೆ ಸಿಕ್ಕಿಕೊಂಡೆ ಕಾಣಾ ಬರತೇಶ

ಶನಿವಾರ, ನವೆಂಬರ್ 07, 2009

ತೊರೆದು ನೀ...

ತೊರೆದು ನೀ ಹೋಗದಿರು
ಬರಡೆನ್ನ ಒಡಲು ನೀನಿಲ್ಲದೆ
ಬದುಕ ತುದಿ ಕೂಡಲೆ ಮುಟ್ಟುವೆನು
ತದುಕಬೇಡ ಹೀಗೆ ನಿನ್ನ ಎದೆಗೂಡಿಂದ

ಹಲವು ಅಡತಡೆಗಳನ್ನು ದಾಟಿ
ಒಲಿಸಿ ನಿನ್ನ