ಹಸುಳೆ ಬಿಸಿಲ ಮಸಕದಿಂದ ಹೊಸ ತಾವರೆಯ ಎಸಳ್ ಮಿಸುಪ
ಅಸದಳಂ ಹಸೆಯೊಳ್ ಎಸೆವ ಸರಸತಿಯ ಅಡಿಗಳಿಗೆ ತಲೆದುಡುಗೆಯೆನ್ ಎ
ಹೆಸರ್ ಪಡೆವ ಬಿಜ್ಜೆವಳದಿಂ ಸಮೆದ ಕಾವನ ಗೆಲ್ಲಂ ಮೆಱೆಯುತಿರ್ಪುದು
- ಆಂಡಯ್ಯ
Rough translation to English :-
Shining Petals of Lotus basking in Sunlight of dawn ,
Stands the most beautiful Goddess Saraswati',
I put my cap to her feet, with my power of knowledge,
time tested "Kaavana Gellan"(Victory of Kaava) glitters forever
- Aandayya
ಮಂಗಳವಾರ, ಏಪ್ರಿಲ್ 12, 2011
ಮಂಗಳವಾರ, ಮಾರ್ಚ್ 22, 2011
ಆಂಡಯ್ಯನ ಕಬ್ಬಿಗರ ಕಾವನ್-ಇದರಲ್ಲಿ ಬಳಕೆಯಾಗಿರುವ ಅಣ್ಣೆಗನ್ನಡ ಪದಗಳು
ಮಿಳಿರ್ = flourish, prosper = ಏಳಿಗೆ, ಬಲ
ಜಗುೞ್ (ಜಗುಳ್) = slip, move off, slip, drop down,= ಜಾರು,
ಚೂಟಿ = ಸೂಟಿ = quick,smart
ನೀರಾ = Handsome Man
ನೀರೆ = beautiful woman, ಕಡುನೀಱೆ ( most beautiful woman)
ಪೊಣೆ = bond, bail
ಸುಸಿಲ್ = sexual embrace
ಸುಂದು = to lie down, repose, sleep
ಕಣ್ಮಲರ್ = ಕಣ್+ಮಲರ್ = ಕಣ್+ಹೂವು = ಹೂವಿನಂತ ಕಣ್ಣುಗಳು,
ಪೊಣರ್ = union
ದುಗುಲ = ನೆಯ್ದ ರೇಶಿಮೆ, woven silk, or fine cloth
ಅೞವೆ = mouth of a river in which the tide ebbs and flows, bar ( ತುಳು: ಅಲುವೆ )
ಸೇಸೆ = ಅಕ್ಶತೆ
ಮೇಲೂರ್ = ಸ್ವರ್ಗ
ಸಿರಿವೆಣ್ = ಲಕುಮಿ
ಬೆಂಚೆ = ಚಿಕ್ಕ ಕೊಳ
ಓವು = to take care of, protect
ಇರ್ಕೆವನೆ =ವಾಸದ ಮನೆ
ಪಗಲಾಣ್ಮ = ನೇಸರ, ಸೂರ್ಯ, sun
ಪಾಂಗು = ರೀತಿ
ಮಸಕ = passion, vehement emotion
ಮುನ್ನೀರ್ = ಕಡಲು
ಜಗುೞ್ (ಜಗುಳ್) = slip, move off, slip, drop down,= ಜಾರು,
ಚೂಟಿ = ಸೂಟಿ = quick,smart
ನೀರಾ = Handsome Man
ನೀರೆ = beautiful woman, ಕಡುನೀಱೆ ( most beautiful woman)
ಪೊಣೆ = bond, bail
ಸುಸಿಲ್ = sexual embrace
ಸುಂದು = to lie down, repose, sleep
ಕಣ್ಮಲರ್ = ಕಣ್+ಮಲರ್ = ಕಣ್+ಹೂವು = ಹೂವಿನಂತ ಕಣ್ಣುಗಳು,
ಪೊಣರ್ = union
ದುಗುಲ = ನೆಯ್ದ ರೇಶಿಮೆ, woven silk, or fine cloth
ಅೞವೆ = mouth of a river in which the tide ebbs and flows, bar ( ತುಳು: ಅಲುವೆ )
ಸೇಸೆ = ಅಕ್ಶತೆ
ಮೇಲೂರ್ = ಸ್ವರ್ಗ
ಸಿರಿವೆಣ್ = ಲಕುಮಿ
ಬೆಂಚೆ = ಚಿಕ್ಕ ಕೊಳ
ಓವು = to take care of, protect
ಇರ್ಕೆವನೆ =ವಾಸದ ಮನೆ
ಪಗಲಾಣ್ಮ = ನೇಸರ, ಸೂರ್ಯ, sun
ಪಾಂಗು = ರೀತಿ
ಮಸಕ = passion, vehement emotion
ಮುನ್ನೀರ್ = ಕಡಲು
ಮಂಗಳವಾರ, ಮಾರ್ಚ್ 15, 2011
ಯಾವ ಬಾಶೆಯೂ ಕೊಲೆಗಡುಕ ಅಲ್ಲ
ಶ್ರೀ ಜಿ.ವೆಂಕಟಸುಬ್ಬಯ್ಯನವರು ಪದೆ ಪದೆ ಇಂಗ್ಲಿಶ್ ’ಕೊಲೆಗಡುಕ’(ಇವತ್ತಿನ, ೧೫-೩-೨೦೧೧ ವರದಿಯ ಕೊಂಡಿ) ಭಾಷೆ ಎಂದು ಹೇಳುತ್ತಿರುವುದು ಸರಿಯಲ್ಲ. ಯಾಕಂದರೆ:-
ದಿಟವಾಗಲೂ ಯಾವುದೇ ನುಡಿ ತನ್ನಿಂತಾನೆ ಕೊಲೆಗಡುಕ ಬಾಶೆ ಆಗುವುದಿಲ್ಲ. ಈವೊತ್ತು ಇಂಗ್ಲಿಶಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿರುವುದು ಕೇವಲ ಆ ಬಾಶೆಯಿಂದಲ್ಲ ಬದಲಾಗಿ ಅದರ ಮೂಲಕ ಹುಟ್ಟುತ್ತಿರುವ ಹೊಸ ಹೊಸ ಅರಿವಿನ ಪ್ರಕಾರಗಳಿಂದ.
ಇಂದು ಅರಿಮೆ ಮತ್ತು ಹೊಚ್ಚ ಹೊಸ ತಂತ್ರದರಿಮೆಗಳು ಹೆಚ್ಚಿನವು ಇಂಗ್ಲಿಶಿನಲ್ಲಿವೆ, ಹಾಗಾಗಿ ಈ ಆದುನಿಕ ಯುಗದಲ್ಲಿ ಇಂಗ್ಲಿಶ್ ಕಲಿತರೆ ಸುಲಬವಾಗಿ ಕೆಲಸ ಸಿಗುತ್ತದೆ ಮತ್ತು ಅದರಿಂದ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು. ಇದೊಂದೆ ಅಲ್ಲದೆ ಕೆಲವರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಇಂಗ್ಲಿಶ್ ಬಾಶೆ ಗೊತ್ತಿರುವವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೊಗಳಿಕೆ ದೊರೆಯುತ್ತಿದೆ. ನಾವು ನಮ್ಮ ಕನ್ನಡ ನುಡಿಯಲ್ಲಿ ಇವತ್ತಿನ ಜಗತ್ತಿಗೆ ಬೇಕಾದ ಹೊಸ ಹೊಸ ಅರಿವಿನ ಪ್ರಕಾರಗಳನ್ನು ಹುಟ್ಟು ಹಾಕದೆ ಇನ್ನು ಸಾಹಿತ್ಯ ಮತ್ತು ಕವನಕ್ಕೆ ಕನ್ನಡವನ್ನು ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ. ಹಾಗಾಗಿ ಇಂಗ್ಲಿಶ್ ನಮ್ಮ ಬದುಕಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಾ ಇದೆ. ಇದಕ್ಕಿರುವ ಉಪಾಯವೆಂದರೆ ಕನ್ನಡವನ್ನು ತಂತ್ರಗ್ನಾನದ ಮತ್ತು ಮಾರುಕಟ್ಟೆಯ ನುಡಿಯಾಗಿ ನಾವು ಬೆಳಸಬೇಕಾಗಿದೆ. ಹೊಸ ಜಗತ್ತಿನ ’ಬೇಕು’(ಅಗತ್ಯ)ಗಳಿಗೆ ನಾವು ಕನ್ನಡವನ್ನು ಅಣಿಗೊಳಿಸದೆ ಬರಿ ಇಂಗ್ಲಿಶನ್ನು ದೂರುವುದು ಸರಿಯಲ್ಲ. ನಾವು ಮಾಡಿದ ತಪ್ಪುಗಳಿಗೆಲ್ಲಾ ಇಂಗ್ಲಿಶನ್ನು ಹೊಣೆಯಾಗಿಸಿ ಅದರ ಮೇಲೆ ಗೂಬೆ ಕೂರಿಸುವುದು ಯಾವ ರೀತಿಯಲ್ಲೂ ಒಪ್ಪತಕ್ಕದ್ದಲ್ಲ.
[ಇದೇ ಬರಹ ಓಲೆಯಾಗಿ ೧೮ ಮಾರ್ಚ್ ೨೦೧೧ ಪ್ರಜಾವಾಣಿಯ ’ವಾಚಕರವಾಣಿ’ಯಲ್ಲಿ ಬಂದಿದೆ]
ದಿಟವಾಗಲೂ ಯಾವುದೇ ನುಡಿ ತನ್ನಿಂತಾನೆ ಕೊಲೆಗಡುಕ ಬಾಶೆ ಆಗುವುದಿಲ್ಲ. ಈವೊತ್ತು ಇಂಗ್ಲಿಶಿಗೆ ಹೆಚ್ಚಿನ ಗೌರವ, ಮನ್ನಣೆ ಸಿಗುತ್ತಿರುವುದು ಕೇವಲ ಆ ಬಾಶೆಯಿಂದಲ್ಲ ಬದಲಾಗಿ ಅದರ ಮೂಲಕ ಹುಟ್ಟುತ್ತಿರುವ ಹೊಸ ಹೊಸ ಅರಿವಿನ ಪ್ರಕಾರಗಳಿಂದ.
ಇಂದು ಅರಿಮೆ ಮತ್ತು ಹೊಚ್ಚ ಹೊಸ ತಂತ್ರದರಿಮೆಗಳು ಹೆಚ್ಚಿನವು ಇಂಗ್ಲಿಶಿನಲ್ಲಿವೆ, ಹಾಗಾಗಿ ಈ ಆದುನಿಕ ಯುಗದಲ್ಲಿ ಇಂಗ್ಲಿಶ್ ಕಲಿತರೆ ಸುಲಬವಾಗಿ ಕೆಲಸ ಸಿಗುತ್ತದೆ ಮತ್ತು ಅದರಿಂದ ಗುಣಮಟ್ಟದ ಬದುಕನ್ನು ಕಟ್ಟಿಕೊಳ್ಳಬಹುದು. ಇದೊಂದೆ ಅಲ್ಲದೆ ಕೆಲವರಲ್ಲಿರುವ ತಪ್ಪು ತಿಳುವಳಿಕೆಯಿಂದಾಗಿ ಇಂಗ್ಲಿಶ್ ಬಾಶೆ ಗೊತ್ತಿರುವವರಿಗೆ ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಹೊಗಳಿಕೆ ದೊರೆಯುತ್ತಿದೆ. ನಾವು ನಮ್ಮ ಕನ್ನಡ ನುಡಿಯಲ್ಲಿ ಇವತ್ತಿನ ಜಗತ್ತಿಗೆ ಬೇಕಾದ ಹೊಸ ಹೊಸ ಅರಿವಿನ ಪ್ರಕಾರಗಳನ್ನು ಹುಟ್ಟು ಹಾಕದೆ ಇನ್ನು ಸಾಹಿತ್ಯ ಮತ್ತು ಕವನಕ್ಕೆ ಕನ್ನಡವನ್ನು ಸೀಮಿತಗೊಳಿಸಿ ತಪ್ಪು ಮಾಡುತ್ತಿದ್ದೇವೆ. ಹಾಗಾಗಿ ಇಂಗ್ಲಿಶ್ ನಮ್ಮ ಬದುಕಿನಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತಾ ಇದೆ. ಇದಕ್ಕಿರುವ ಉಪಾಯವೆಂದರೆ ಕನ್ನಡವನ್ನು ತಂತ್ರಗ್ನಾನದ ಮತ್ತು ಮಾರುಕಟ್ಟೆಯ ನುಡಿಯಾಗಿ ನಾವು ಬೆಳಸಬೇಕಾಗಿದೆ. ಹೊಸ ಜಗತ್ತಿನ ’ಬೇಕು’(ಅಗತ್ಯ)ಗಳಿಗೆ ನಾವು ಕನ್ನಡವನ್ನು ಅಣಿಗೊಳಿಸದೆ ಬರಿ ಇಂಗ್ಲಿಶನ್ನು ದೂರುವುದು ಸರಿಯಲ್ಲ. ನಾವು ಮಾಡಿದ ತಪ್ಪುಗಳಿಗೆಲ್ಲಾ ಇಂಗ್ಲಿಶನ್ನು ಹೊಣೆಯಾಗಿಸಿ ಅದರ ಮೇಲೆ ಗೂಬೆ ಕೂರಿಸುವುದು ಯಾವ ರೀತಿಯಲ್ಲೂ ಒಪ್ಪತಕ್ಕದ್ದಲ್ಲ.
[ಇದೇ ಬರಹ ಓಲೆಯಾಗಿ ೧೮ ಮಾರ್ಚ್ ೨೦೧೧ ಪ್ರಜಾವಾಣಿಯ ’ವಾಚಕರವಾಣಿ’ಯಲ್ಲಿ ಬಂದಿದೆ]
ಮಿಂಬಲೆ
internet ಎಂಬ ಪದಕ್ಕೆ ಈಗ ಕನ್ನಡದಲ್ಲಿ ಬಳಕೆಯಲ್ಲಿರುವ ಪದ ’ಅಂತರ್ಜಾಲ’/ಅಂತರಜಾಲ. ಇದು ಸಂಸ್ಕ್ರುತ ಪದ.ಅದರ ಬದಲು ಕನ್ನಡದ್ದೇ ಆದ ’ಮಿಂಬಲೆ’ ಎಂಬ ಪದ ಬಳಸಬಹುದು. ಈಗಾಗಲೆ ಅದನ್ನ ಕೆಲವರು ಬಳಸುತ್ತಿದ್ದಾರೆ.
ಅದೇನೆಂದರೆ
ಮಿನ್+ಬಲೆ = ಮಿಂಬಲೆ
ಯಾಕಂದ್ರೆ
ಮಿನ್ ಎಂಬ ಪದದಿಂದ ಮಿಂ-ಚು, ಮಿನು-ಗು (ಮಿನ್ ಅಂದರೆ ಹೊಳೆಯುವುದು ಎಂಬ ತಿರುಳಿದೆ)
ಕೆನ್ ಎಂಬ ಪದದಿಂದ ಕೆಂ-ಚು (ಕೆನ್ ಅಂದರೆ ಕೆಂಪು)
ಹೆಣೆ ಎಂಬ ಪದದಿಂದ ಹೆಂ-ಚು (ಹೆಂಚುಗಳು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದಲೇ ಅದಕ್ಕೆ ಆ ಪದ ಹುಟ್ಟಿರುವುದು)
ಕೀರ್ ಎಂಬ ಪದದಿಂದ್ ಕಿರ್-ಚು=ಕಿಚ್ಚು (ಬೆಂಕಿ) ಬಳಕೆ: ಕಡ್ಡಿ ಕೀರಿ ಒಲೆ ಹಚ್ಚಿದಳು
ಅದೇನೆಂದರೆ
ಮಿನ್+ಬಲೆ = ಮಿಂಬಲೆ
ಯಾಕಂದ್ರೆ
ಮಿನ್ ಎಂಬ ಪದದಿಂದ ಮಿಂ-ಚು, ಮಿನು-ಗು (ಮಿನ್ ಅಂದರೆ ಹೊಳೆಯುವುದು ಎಂಬ ತಿರುಳಿದೆ)
ಕೆನ್ ಎಂಬ ಪದದಿಂದ ಕೆಂ-ಚು (ಕೆನ್ ಅಂದರೆ ಕೆಂಪು)
ಹೆಣೆ ಎಂಬ ಪದದಿಂದ ಹೆಂ-ಚು (ಹೆಂಚುಗಳು ಒಂದಕ್ಕೊಂದು ಹೆಣೆದುಕೊಂಡಿರುವುದರಿಂದಲೇ ಅದಕ್ಕೆ ಆ ಪದ ಹುಟ್ಟಿರುವುದು)
ಕೀರ್ ಎಂಬ ಪದದಿಂದ್ ಕಿರ್-ಚು=ಕಿಚ್ಚು (ಬೆಂಕಿ) ಬಳಕೆ: ಕಡ್ಡಿ ಕೀರಿ ಒಲೆ ಹಚ್ಚಿದಳು
ತುಳುವಿನ ಕೆಲವು ನಿಬ್ಬರಗಳು
ತುಳುವಿನ ಕೆಲವು ನಿಬ್ಬರಗಳು:-
ತುಳುನಾಡಿನಲ್ಲಿ ಸೇಡಿಯಾಪು ಎಂಬ ಊರಿದೆ ಅನ್ಸುತ್ತೆ ( ’ಸೇಡಿಯಾಪು ಕೃಷ್ಣಬಟ್ಟ’ರು ಹೆಸರಿನಲ್ಲಿರುವಂತೆ)
ಸೇಡಿಯಾಪು = ಸೇಡಿ+ಕಾಪು = ಜೇಡಿ+ಕಾಪು ಅಂದರೆ ಜೇಡಿ ಮಣ್ಣಿನಿಂದ ಮಾಡಿದ ಕಾವಲು/ತಡೆ.
ಇಲ್ಲಿ ಪದಗಳ ಸೇರಿಕೆಯಾದ ಮೇಲೆ ’ಕ’ ಕಾರ ’ಯ’ಕಾರ ವಾಗಿರುವುದನ್ನ ಗಮನಿಸಿ. ಇದು ತುಳುವಿನ ನಿಬ್ಬರ.
ಕನ್ನಡದ ಸೇರಿಕೆ ಕಟ್ಟಿನ ಪ್ರಕಾರ ಅದು ಸೇಡಿಗಾಪು ಆಗಬೇಕಿತ್ತು.
ಅದೇ ತರ ತುಳುವಿನಲ್ಲಿ ಮಳೆ(ರೆ)+ಕಾಲ => ಮರ್ಯಾಲ ಆಗುತ್ತೆ ಹೊರತು ಮಳೆಗಾಲ ಆಗಲ್ಲ.
ತುಳು ಗೊತ್ತಿರುವವರು ಈ ತರ ಹೆಚ್ಚಿನ ಪದಗಳು ಗೊತ್ತಿದ್ದರೆ ತಿಳಿಸಿ
ತುಳುನಾಡಿನಲ್ಲಿ ಸೇಡಿಯಾಪು ಎಂಬ ಊರಿದೆ ಅನ್ಸುತ್ತೆ ( ’ಸೇಡಿಯಾಪು ಕೃಷ್ಣಬಟ್ಟ’ರು ಹೆಸರಿನಲ್ಲಿರುವಂತೆ)
ಸೇಡಿಯಾಪು = ಸೇಡಿ+ಕಾಪು = ಜೇಡಿ+ಕಾಪು ಅಂದರೆ ಜೇಡಿ ಮಣ್ಣಿನಿಂದ ಮಾಡಿದ ಕಾವಲು/ತಡೆ.
ಇಲ್ಲಿ ಪದಗಳ ಸೇರಿಕೆಯಾದ ಮೇಲೆ ’ಕ’ ಕಾರ ’ಯ’ಕಾರ ವಾಗಿರುವುದನ್ನ ಗಮನಿಸಿ. ಇದು ತುಳುವಿನ ನಿಬ್ಬರ.
ಕನ್ನಡದ ಸೇರಿಕೆ ಕಟ್ಟಿನ ಪ್ರಕಾರ ಅದು ಸೇಡಿಗಾಪು ಆಗಬೇಕಿತ್ತು.
ಅದೇ ತರ ತುಳುವಿನಲ್ಲಿ ಮಳೆ(ರೆ)+ಕಾಲ => ಮರ್ಯಾಲ ಆಗುತ್ತೆ ಹೊರತು ಮಳೆಗಾಲ ಆಗಲ್ಲ.
ತುಳು ಗೊತ್ತಿರುವವರು ಈ ತರ ಹೆಚ್ಚಿನ ಪದಗಳು ಗೊತ್ತಿದ್ದರೆ ತಿಳಿಸಿ
ಭಾನುವಾರ, ಮಾರ್ಚ್ 06, 2011
ಮರುಸೊಳ್ಳು/ಮರುಸೊಡರು ಅಂದರೇನು?
’ಮರ್ಸೊಳ್ಳು’, ’ಮರುಸೊಳ್ಳು’, ’ಮರುಸೊಡರು’ ಎಂಬ ಪದ ನಮ್ಮ ಕಡೆ ( ಮಯ್ಸೂರ್, ಮಂಡ್ಯ, ಚಾ.ನಗರ) ಬಳಕೆಯಲ್ಲಿದೆ.
ಮೊದಲೆಲ್ಲ ಮದುವೆ, ಹೆಸರಿಡುವುದು,ತೊಟ್ಟಿಲು ತರುವುದು ಮತ್ತಿತರ ಒಳ್ಳೆ ಕೆಲಸಗಳನ್ನು ಮನೆಯಲ್ಲೇ ನಡೆಸಲಾಗುತ್ತಿತ್ತು. ಆಗ ಮನೆಯಲ್ಲೇ ಆ ಹಬ್ಬದ ಇಲ್ಲವೆ ಒಳ್ಳೆಯ ಕೆಲಸದ ಹಗಲಿನಲ್ಲೂ ’ಸೊಡರು’/ದೀಪವನ್ನು (ಇದನ್ನು ದೀಪಾಲೆ ಕಂಬ ಅಂತನೂ ಹೇಳುತ್ತಾರೆ)ಹಚ್ಚಲಾಗುತ್ತಿತ್ತು.
ಒಳ್ಳೆ ದಿನದ(ಮದುವೆ ಇಲ್ಲವೆ ಹೆಸರಿಡುವುದು ಇಲ್ಲವೆ ತೊಟ್ಟಿಲು ತರುವುದು) ಮರುದಿನ ಕೆಲವು ಕಟ್ಟುಪಾಡುಗಳನ್ನು ನಮ್ಮ ಹಳ್ಳಿಯ ಮಂದಿ ಪಾಲಿಸುತ್ತಾರೆ. ಅವುಗಳಲ್ಲಿ
೧. ಆ ಒಳ್ಳೆಯ ಕೆಲಸದ ಮುಕ್ಯವಾದ ವ್ಯಕ್ತಿಗಳು ಅಂದರೆ ಮದುಮಕ್ಕಳು
೨. ತೊಟ್ಟಿಲು ತಂದ ಹಬ್ಬವಾದರೆ ಆ ಮಗುವು
’ಮರುಸೊಡರ’ನ್ನು ನೋಡಬಾರದು ಎಂಬ ನಂಬಿಕೆ ಇದೆ. ಅಂದರೆ ಸೊಡರು ಹಚ್ಚಿದ ದಿನದ ಮಾರನೆ ದಿನ ಆ ಸೊಡರು ಹಚ್ಚಿದ ಮನೆಯಲ್ಲಿ ಇರಬಾರದು ಅಂತ. ಹಾಗಾಗಿ ’ಮರುಸೊಡರು ನಾಳು’/ ಮರುಸೊಳ್ಳು/ಮರ್ಸೊಳ್ಳು ಎಂಬ ಪದ ಬಳಕೆಯಲ್ಲಿದೆ.
ಮೊದಲೆಲ್ಲ ಮದುವೆ, ಹೆಸರಿಡುವುದು,ತೊಟ್ಟಿಲು ತರುವುದು ಮತ್ತಿತರ ಒಳ್ಳೆ ಕೆಲಸಗಳನ್ನು ಮನೆಯಲ್ಲೇ ನಡೆಸಲಾಗುತ್ತಿತ್ತು. ಆಗ ಮನೆಯಲ್ಲೇ ಆ ಹಬ್ಬದ ಇಲ್ಲವೆ ಒಳ್ಳೆಯ ಕೆಲಸದ ಹಗಲಿನಲ್ಲೂ ’ಸೊಡರು’/ದೀಪವನ್ನು (ಇದನ್ನು ದೀಪಾಲೆ ಕಂಬ ಅಂತನೂ ಹೇಳುತ್ತಾರೆ)ಹಚ್ಚಲಾಗುತ್ತಿತ್ತು.
ಒಳ್ಳೆ ದಿನದ(ಮದುವೆ ಇಲ್ಲವೆ ಹೆಸರಿಡುವುದು ಇಲ್ಲವೆ ತೊಟ್ಟಿಲು ತರುವುದು) ಮರುದಿನ ಕೆಲವು ಕಟ್ಟುಪಾಡುಗಳನ್ನು ನಮ್ಮ ಹಳ್ಳಿಯ ಮಂದಿ ಪಾಲಿಸುತ್ತಾರೆ. ಅವುಗಳಲ್ಲಿ
೧. ಆ ಒಳ್ಳೆಯ ಕೆಲಸದ ಮುಕ್ಯವಾದ ವ್ಯಕ್ತಿಗಳು ಅಂದರೆ ಮದುಮಕ್ಕಳು
೨. ತೊಟ್ಟಿಲು ತಂದ ಹಬ್ಬವಾದರೆ ಆ ಮಗುವು
’ಮರುಸೊಡರ’ನ್ನು ನೋಡಬಾರದು ಎಂಬ ನಂಬಿಕೆ ಇದೆ. ಅಂದರೆ ಸೊಡರು ಹಚ್ಚಿದ ದಿನದ ಮಾರನೆ ದಿನ ಆ ಸೊಡರು ಹಚ್ಚಿದ ಮನೆಯಲ್ಲಿ ಇರಬಾರದು ಅಂತ. ಹಾಗಾಗಿ ’ಮರುಸೊಡರು ನಾಳು’/ ಮರುಸೊಳ್ಳು/ಮರ್ಸೊಳ್ಳು ಎಂಬ ಪದ ಬಳಕೆಯಲ್ಲಿದೆ.
ಈವೊತ್ತಿನ ಸಾಪ್ತಾಹಿಕ ಪುರವಣಿಯಲ್ಲಿರುವ ತಪ್ಪುಗಳು/ಗೊಂದಲಗಳು
ಈವೊತ್ತಿನ((೬-೩-೨೦೧೧) ಸಾಪ್ತಾಹಿಕ ಪುರವಣಿಯಲ್ಲಿ ಬಂದಿರುವ ಬರಹಗಳಲ್ಲಿ ಆಗಿರುವ ತಪ್ಪುಗಳು ಮತ್ತು ಗೊಂದಲಗಳು ಎತ್ತಿ ತೋರಿಸುವ ಪ್ರಯತ್ನವನ್ನು ನಾನು ಮಾಡಿದ್ದೇನೆ.
ಯು.ಬಿ.ಪವನಜ ಅವರ ಬರಹ(ನಮ್ಮ ಭಾಷೆಗೆ e ಭಾಷ್ಯ)ದಲ್ಲಿ " ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ."
ಮೊದಲಿಗೆ, ಇಲ್ಲಿ ’ಪ್ರಪ್ರಥಮ’ ಎಂಬ ಪದದ ಬಳಕೆಯೇ ತಪ್ಪು ಯಾಕಂದರೆ ’ಪ್ರಥಮ’ ಇದು ಸಂಸ್ಕೃತ ಮೂಲದ ಪದ. ಕನ್ನಡದಲ್ಲಿ ಇರುವ ಪದಬಳಕೆಗಳಾದ ’ಮೊತ್ತಮೊದಲು’, ’ತುತ್ತತುದಿ’, ’ಕಟ್ಟಕಡೆ’ ಇವುಗಳಲ್ಲಿರುವ ಮೊದಲು, ಕಡೆ, ತುದಿ ಇವೆಲ್ಲ ಕನ್ನಡ ಬೇರಿನ ಪದಗಳು ಅದರ ನಿರುಕ್ತವನ್ನು ಹೀಗೆ ಬಿಡಿಸಬಹುದು.
ಮೊದಲು + ಮೊದಲು = ಮೊದಮೊದಲು ( ಇದನ್ನೇ ಒತ್ತಿ ಹೇಳಬೇಕಾದರೆ) => ಮೊತ್-ಮೊದಲು= ಮೊತ್ತಮೊದಲು. ಇಲ್ಲಿ ’ದ್’(ಕೊರಲಿಸಿದ)ಕ್ಕೆ ಬದಲಾಗಿ ಅದೇ ಗುಂಪಿನ ’ತ್’(ಕೊರಲಿಸದ) ಅಕ್ಷರವು ಬಂದಿದೆ. ಇದು ಕನ್ನಡದ್ದೇ ಆದ ಪದಗಳಿಗೆ ಒಗ್ಗುವ ಪದಬಳಕೆ. ಆದರೆ ಈ ಚಳಕ ಸಂಸ್ಕೃತ ಪದಗಳಾದ ’ಪ್ರಥಮ’ ಎಂಬುದಕ್ಕೆ ಒಗ್ಗುವುದಿಲ್ಲ. ಒಂದು ವೇಳೆ ಅದನ್ನ ಬಳಸಿದರೆ ಕನ್ನಡವೂ ಅಲ್ಲದ ಸಂಸ್ಕೃತವೂ ಅಲ್ಲದ ’ಎಡಬಿಡಂಗಿ’/’ತ್ರಿಶಂಕು’ ಪದಗಳೆಂದು ಕರೆಯಬೇಕಾಗುತ್ತದೆ.
ಎರಡನೆಯದಾಗಿ, ಇಲ್ಲಿ ’ವೈಙ್ಞಾನಿಕ ವಿಂಗಡಣೆ’ ಅಂದರೆ ಏನು ಎಂಬುದನ್ನ ಬರಹಗಾರರು ಹೇಳಿಲ್ಲ. ವೈಙ್ಞಾನಿಕವಾಗಿ ನೋಡಿದರೆ ಪಾಣಿನಿಯು ಬರೆದಿರುವ ವ್ಯಾಕರಣದಲ್ಲಿ ಲಿಂಗ ನಿರ್ಧರಿಸುವ ವಿಧಾನ ಸರಿಯಿಲ್ಲ. ದಾರಾ( ಹೆಂಡತಿ) ಎಂಬ ಪದ ’ಪುಲ್ಲಿಂಗ’ ಎಂದು ಹೇಳಲಾಗಿದೆ. (dara (p. 115) [ 2. dârá ] m. (gnly.) pl. wife: dârân pra kri, marry a wife). ಇದೇ ರೀತಿ ಸಂಸ್ಕೃತದ ವ್ಯಾಕರಣದಲ್ಲಿ ಆಗಿರುವ ಎಡವಟ್ಟುಗಳು ಹಲವಿವೆ. ಯಾವ ರೀತಿಯಲ್ಲಿ ಇದು ವೈಙ್ಞಾನಿಕ ?
ಹಾಗಾಗಿ ಆಯ ಭಾಷೆಯ ವ್ಯಾಕರಣ ಆ ಭಾಷೆಯ ಮಟ್ಟಿಗೆ ಸರಿಯಿರಬಹುದು. ಆದ್ದರಿಂದ ’ಒಂದು ಭಾಷೆಯನ್ನು ವೈಙ್ಜಾನಿಕವಾಗಿ ವಿಂಗಡಿಸುವ ಸೂತ್ರವನ್ನು ಯಾವುದೇ ಭಾಷೆಗೆ ಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ’ ಎಂದು ಹೇಳುವುದು ತಪ್ಪಾಗುತ್ತದೆ ಮತ್ತು ಹಲವು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ.
ಮೂರನಯದಾಗಿ, "ಆತನಿಗೆ ‘ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ’ ಎಂಬ ಹೆಸರೂ ಇದೆ. "
ಪಾಣಿನಿಗೆ Natural Language Processing ಎಂದರೇನು ಎಂಬುದೇ ಗೊತ್ತಿರಲಿಲ್ಲ. ಇತ್ತೀಚೆಗೆ ಸುಮಾರು ೧೯೫೦ ರ ದಶಕದಲ್ಲಿ ಈ ಅರಿಮೆಯು ಅಂಬೆಗಾಲಿಡುತ್ತಿದ್ದುದನ್ನು ನಾವು wiki (http://en.wikipedia.org/wiki/Natural_language_processing) ಯಿಂದ ತಿಳಿದುಕೊಳ್ಳಬಹುದು. ಬರಹಗಾರರು ಹೇಗೆ ಪಾಣಿನಿಯನ್ನು ’ಸಂಸ್ಕರಣೆ ಕ್ಷೇತ್ರದ ಜನಕ’ ಎಂದು ಹೇಳಿದ್ದಾರೊ ತಿಳಿಯದು. ಇದಕ್ಕೆ ಅವರು ತಕ್ಕ ಪುರಾವೆಗಳನ್ನು ನೀಡಿಲ್ಲ.
ಇನ್ನು ಡಾ ಎ. ಸತ್ಯನಾರಾಯಣ ಅವರ ’ ಕನ್ನಡೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ಎಂಬ ತಲೆಬರಹದಲ್ಲಿರುವ ’ಕನ್ನಡೀಕರಣ’ ಎಂಬ ಪದವೂ ತ್ರಿಶಂಕು/ಎಡಬಿಡಂಗಿ ಪದವಾಗಿದೆ.
ಕನ್ನಡ (ಕನ್ನಡದ್ದೇ ಆದ ಪದ) + ಕರಣ (ಸಂಸ್ಕೃತದ್ದೇ ಆದ ಪದ) => ಕನ್ನಡೀಕರಣ ಹೇಗೆ ಆಗುತ್ತದೆ? ಇದು ಯಾವ ಸಂಧಿ ಯಾರಿಗೆ ಗೊತ್ತು? ಇದರ ಬದಲು ಕನ್ನಡ+ಇಸು = ಕನ್ನಡಯಿಸು => ಕನ್ನಡಯ್ಸು=>ಕನ್ನಡಸು ಎಂಬ ಕನ್ನಡಕ್ಕೆ ಒಗ್ಗುವ ಪದವನ್ನು ಬಳಸಬಹುದು.
ಇದೇ ರೀತಿ ಇನ್ನೊಂದು ಪದ ಈಗಾಗಲೆ ಕನ್ನಡದಲ್ಲಿ ಬಳಕೆಯಲ್ಲಿದೆ , ಉದಾ: ಸೊಗ+ಇಸು = ಸೊಗಯಿಸು = ಸೊಗಸು
ಯು.ಬಿ.ಪವನಜ ಅವರ ಬರಹ(ನಮ್ಮ ಭಾಷೆಗೆ e ಭಾಷ್ಯ)ದಲ್ಲಿ " ಒಂದು ಭಾಷೆಯನ್ನು ವೈಜ್ಞಾನಿಕವಾಗಿ ವಿಂಗಡಿಸುವ ಸೂತ್ರವನ್ನು ಪ್ರಪಂಚದ ಯಾವುದೇ ಭಾಷೆಗೆ ಪ್ರಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ."
ಮೊದಲಿಗೆ, ಇಲ್ಲಿ ’ಪ್ರಪ್ರಥಮ’ ಎಂಬ ಪದದ ಬಳಕೆಯೇ ತಪ್ಪು ಯಾಕಂದರೆ ’ಪ್ರಥಮ’ ಇದು ಸಂಸ್ಕೃತ ಮೂಲದ ಪದ. ಕನ್ನಡದಲ್ಲಿ ಇರುವ ಪದಬಳಕೆಗಳಾದ ’ಮೊತ್ತಮೊದಲು’, ’ತುತ್ತತುದಿ’, ’ಕಟ್ಟಕಡೆ’ ಇವುಗಳಲ್ಲಿರುವ ಮೊದಲು, ಕಡೆ, ತುದಿ ಇವೆಲ್ಲ ಕನ್ನಡ ಬೇರಿನ ಪದಗಳು ಅದರ ನಿರುಕ್ತವನ್ನು ಹೀಗೆ ಬಿಡಿಸಬಹುದು.
ಮೊದಲು + ಮೊದಲು = ಮೊದಮೊದಲು ( ಇದನ್ನೇ ಒತ್ತಿ ಹೇಳಬೇಕಾದರೆ) => ಮೊತ್-ಮೊದಲು= ಮೊತ್ತಮೊದಲು. ಇಲ್ಲಿ ’ದ್’(ಕೊರಲಿಸಿದ)ಕ್ಕೆ ಬದಲಾಗಿ ಅದೇ ಗುಂಪಿನ ’ತ್’(ಕೊರಲಿಸದ) ಅಕ್ಷರವು ಬಂದಿದೆ. ಇದು ಕನ್ನಡದ್ದೇ ಆದ ಪದಗಳಿಗೆ ಒಗ್ಗುವ ಪದಬಳಕೆ. ಆದರೆ ಈ ಚಳಕ ಸಂಸ್ಕೃತ ಪದಗಳಾದ ’ಪ್ರಥಮ’ ಎಂಬುದಕ್ಕೆ ಒಗ್ಗುವುದಿಲ್ಲ. ಒಂದು ವೇಳೆ ಅದನ್ನ ಬಳಸಿದರೆ ಕನ್ನಡವೂ ಅಲ್ಲದ ಸಂಸ್ಕೃತವೂ ಅಲ್ಲದ ’ಎಡಬಿಡಂಗಿ’/’ತ್ರಿಶಂಕು’ ಪದಗಳೆಂದು ಕರೆಯಬೇಕಾಗುತ್ತದೆ.
ಎರಡನೆಯದಾಗಿ, ಇಲ್ಲಿ ’ವೈಙ್ಞಾನಿಕ ವಿಂಗಡಣೆ’ ಅಂದರೆ ಏನು ಎಂಬುದನ್ನ ಬರಹಗಾರರು ಹೇಳಿಲ್ಲ. ವೈಙ್ಞಾನಿಕವಾಗಿ ನೋಡಿದರೆ ಪಾಣಿನಿಯು ಬರೆದಿರುವ ವ್ಯಾಕರಣದಲ್ಲಿ ಲಿಂಗ ನಿರ್ಧರಿಸುವ ವಿಧಾನ ಸರಿಯಿಲ್ಲ. ದಾರಾ( ಹೆಂಡತಿ) ಎಂಬ ಪದ ’ಪುಲ್ಲಿಂಗ’ ಎಂದು ಹೇಳಲಾಗಿದೆ. (dara (p. 115) [ 2. dârá ] m. (gnly.) pl. wife: dârân pra kri, marry a wife). ಇದೇ ರೀತಿ ಸಂಸ್ಕೃತದ ವ್ಯಾಕರಣದಲ್ಲಿ ಆಗಿರುವ ಎಡವಟ್ಟುಗಳು ಹಲವಿವೆ. ಯಾವ ರೀತಿಯಲ್ಲಿ ಇದು ವೈಙ್ಞಾನಿಕ ?
ಹಾಗಾಗಿ ಆಯ ಭಾಷೆಯ ವ್ಯಾಕರಣ ಆ ಭಾಷೆಯ ಮಟ್ಟಿಗೆ ಸರಿಯಿರಬಹುದು. ಆದ್ದರಿಂದ ’ಒಂದು ಭಾಷೆಯನ್ನು ವೈಙ್ಜಾನಿಕವಾಗಿ ವಿಂಗಡಿಸುವ ಸೂತ್ರವನ್ನು ಯಾವುದೇ ಭಾಷೆಗೆ ಪ್ರಥಮ ಬಾರಿಗೆ ನಿರ್ಮಿಸಿದವನು ಪಾಣಿನಿ’ ಎಂದು ಹೇಳುವುದು ತಪ್ಪಾಗುತ್ತದೆ ಮತ್ತು ಹಲವು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ.
ಮೂರನಯದಾಗಿ, "ಆತನಿಗೆ ‘ಸಹಜಭಾಷಾ ಸಂಸ್ಕರಣೆ ಕ್ಷೇತ್ರದ ಜನಕ’ ಎಂಬ ಹೆಸರೂ ಇದೆ. "
ಪಾಣಿನಿಗೆ Natural Language Processing ಎಂದರೇನು ಎಂಬುದೇ ಗೊತ್ತಿರಲಿಲ್ಲ. ಇತ್ತೀಚೆಗೆ ಸುಮಾರು ೧೯೫೦ ರ ದಶಕದಲ್ಲಿ ಈ ಅರಿಮೆಯು ಅಂಬೆಗಾಲಿಡುತ್ತಿದ್ದುದನ್ನು ನಾವು wiki (http://en.wikipedia.org/wiki/Natural_language_processing) ಯಿಂದ ತಿಳಿದುಕೊಳ್ಳಬಹುದು. ಬರಹಗಾರರು ಹೇಗೆ ಪಾಣಿನಿಯನ್ನು ’ಸಂಸ್ಕರಣೆ ಕ್ಷೇತ್ರದ ಜನಕ’ ಎಂದು ಹೇಳಿದ್ದಾರೊ ತಿಳಿಯದು. ಇದಕ್ಕೆ ಅವರು ತಕ್ಕ ಪುರಾವೆಗಳನ್ನು ನೀಡಿಲ್ಲ.
ಇನ್ನು ಡಾ ಎ. ಸತ್ಯನಾರಾಯಣ ಅವರ ’ ಕನ್ನಡೀಕರಣ: ಆಗಿರುವುದೇನು? ಆಗಬೇಕಿರುವುದೇನು?’ ಎಂಬ ತಲೆಬರಹದಲ್ಲಿರುವ ’ಕನ್ನಡೀಕರಣ’ ಎಂಬ ಪದವೂ ತ್ರಿಶಂಕು/ಎಡಬಿಡಂಗಿ ಪದವಾಗಿದೆ.
ಕನ್ನಡ (ಕನ್ನಡದ್ದೇ ಆದ ಪದ) + ಕರಣ (ಸಂಸ್ಕೃತದ್ದೇ ಆದ ಪದ) => ಕನ್ನಡೀಕರಣ ಹೇಗೆ ಆಗುತ್ತದೆ? ಇದು ಯಾವ ಸಂಧಿ ಯಾರಿಗೆ ಗೊತ್ತು? ಇದರ ಬದಲು ಕನ್ನಡ+ಇಸು = ಕನ್ನಡಯಿಸು => ಕನ್ನಡಯ್ಸು=>ಕನ್ನಡಸು ಎಂಬ ಕನ್ನಡಕ್ಕೆ ಒಗ್ಗುವ ಪದವನ್ನು ಬಳಸಬಹುದು.
ಇದೇ ರೀತಿ ಇನ್ನೊಂದು ಪದ ಈಗಾಗಲೆ ಕನ್ನಡದಲ್ಲಿ ಬಳಕೆಯಲ್ಲಿದೆ , ಉದಾ: ಸೊಗ+ಇಸು = ಸೊಗಯಿಸು = ಸೊಗಸು
ಅನಂತ ಮೂರ್ತಿಯವರ ’ಅನುಸಂಧಾನ’ಕ್ಕೆ ಮಾರುಲಿ
ಮಾನ್ಯ ಶ್ರೀ ಅನಂತ ಮೂರ್ತಿಯವರು ಇತ್ತೀಚೆಗೆ ನಡೆದ ರಾಜ್ಯಸಬೆಯ ಚುನಾವಣೆಯಲ್ಲಿ ಕೆ.ಮರುಳಸಿದ್ದಪ್ಪನವರು ಸ್ಪರ್ದಿಸಿದುದನ್ನು ಸೆಕ್ಯುಲರ್ ಮಚ್ಚೆ, ಮಂಕುಬೂದಿ, ಚೇಶ್ಟೆ ಅಂತ ಪ್ರಜಾವಾಣಿಯ ’ಅನುಸಂಧಾನ’ ಎಂಬ ಅಂಕಣದಲ್ಲಿ ಹೀಗಳೆದಿದ್ದಾರೆ
ಆದರೆ ಕೆ.ಮರುಳಸಿದ್ದಪ್ಪನವರು ಒಬ್ಬ ಪಕ್ಶೇತರ ಅಭ್ಯರ್ತಿಯಾಗಿ ಸ್ಪರ್ದಿಸಿದ್ದರೆ ಹೊರತು ಕಾಂಗ್ರೆಸ್-ಜೆಡಿಎಸ್ ಪಕ್ಶಗಳಿಂದಲ್ಲ ಎಂಬುದನ್ನ ನಾವು ಗಮನಿಸಬೇಕು. ಅಲ್ಲದೆ ಒಕ್ಕೂಟ ವ್ಯವಸ್ತೆಯನ್ನು ಒಪ್ಪಿರುವ ನಾವು ರಾಜ್ಯಸಭೆಗೆ ಆಯ್ಕೆಯಾಗುವವರು
ಆಯ ರಾಜ್ಯದವರೇ ಆದ ಬುದ್ದಿ ಜೀವಿಗಳು ಇಲ್ಲವೆ ಆಯ ರಾಜ್ಯದ ನುಡಿ, ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತವರು ಅಯ್ಕೆ ಆಗಿ ಬರಲಿ ಎಂಬುದು ಪ್ರಜಾಪ್ರಬುತ್ವದ ಸಿದ್ದಾಂತ ಮತ್ತು ಸಂವಿದಾನದ ಆಶಯ ಕೂಡ ಆಗಿರುವಾಗ ಮರುಳಸಿದ್ದಪ್ಪನವರು ಕಣಕ್ಕೆ ಇಳಿದದ್ದು ಸಮರ್ತನೀಯ. ರಾಶ್ಟ್ರೀಯ ಪಕ್ಶಗಳು ಒಕ್ಕೂಟ ವ್ಯವಸ್ತೆಯ ಆಶಯ ಮತ್ತು ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದಾಗ ಅದನ್ನು ವಿರೋದಿಸಿ ಮರುಳಸಿದ್ದಪ್ಪನವರು ಸೈದ್ದಾಂತಿಕ ನೆಲೆಯಲ್ಲಿ ಸ್ಪರ್ಧಿಸಿದರೆ ಹೊರತು ಚೇಶ್ಟೆಗಾಗಿ ಅಲ್ಲ. ಇಲ್ಲಿ ಸೋಲು-ಗೆಲುವು ಮುಕ್ಯವಲ್ಲ ಒಕ್ಕೂಟ ವ್ಯವಸ್ತೆಯ ಸೈದ್ದಾಂತಿಕ ನಿಲುವುಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರೀಯ ಪಕ್ಷಗಳ ’ಪ್ರಾದೇಶಿಕ ಆಶಯ’ಗಳ ವಿರೋಧಿ ನಿಲುವನ್ನು ಖಂಡಿಸುವ ವಿದಾನವಾಗಿ ಮರುಳಸಿದ್ದಪ್ಪನವರ ಸ್ಪರ್ಧೆಯನ್ನು ನಾವು ನೋಡಬೇಕಾಗುತ್ತದೆ. ಶಾಸಕರು ಕೂಡ ’ಮೊದಲು’ ಕನ್ನಡಿಗರೇ ಅಲ್ಲವೆ, ಆಮೇಲೆ ತಾನೆ ಬಿಜೆಪಿ ಇಲ್ಲವೆ ಕಾಂಗ್ರೆಸ್ಸಿನ ಪಕ್ಷದವರು; ಹಾಗಾಗಿ ’ಆತ್ಮಸಾಕ್ಶಿ’ ಆದಾರಿತ ವೋಟುಗಳನ್ನು ಕೇಳುವುದು ಕೆಟ್ಟ ರಾಜಕಾರಣವಾಗಲ್ಲ, ಅಲ್ಲದೆ ಇನ್ನೂ ’ಪ್ರಾದೇಶಿಕ ಆಶಯ’ದ ಮೇಲೆ ನಿಂತ ರಾಜಕಾರಣವಾಗಿ ಪ್ರಜಾಪ್ರಬುತ್ವದ ಮತ್ತು ಒಕ್ಕೂಟ ವ್ಯವಸ್ತೆಯ ಮೌಲ್ಯಗಳನ್ನು ಹೆಚ್ಚು ಗಟ್ಟಿಗೊಳಿಸುತ್ತದೆ.
ಇನ್ನು ಮುಂದಾದರೂ ರಾಶ್ಟ್ರೀಯ ಪಕ್ಶಗಳು ರಾಜ್ಯಸಬೆಗೆ ಅಭ್ಯರ್ತಿಗಳನ್ನು ಆರಿಸುವಾಗ ಎಚ್ಚರದಿಂದಿರಲಿ ಮತ್ತು ಒಕ್ಕೂಟ ವ್ಯವಸ್ತೆಗೆ ಬದ್ದವಾಗಿರಲಿ ಎನ್ನುವ ಎಚ್ಚರವನ್ನ ಮರುಳಸಿದ್ದಪ್ಪನವರು ಸ್ಪರ್ದಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.
ಆದರೆ ಕೆ.ಮರುಳಸಿದ್ದಪ್ಪನವರು ಒಬ್ಬ ಪಕ್ಶೇತರ ಅಭ್ಯರ್ತಿಯಾಗಿ ಸ್ಪರ್ದಿಸಿದ್ದರೆ ಹೊರತು ಕಾಂಗ್ರೆಸ್-ಜೆಡಿಎಸ್ ಪಕ್ಶಗಳಿಂದಲ್ಲ ಎಂಬುದನ್ನ ನಾವು ಗಮನಿಸಬೇಕು. ಅಲ್ಲದೆ ಒಕ್ಕೂಟ ವ್ಯವಸ್ತೆಯನ್ನು ಒಪ್ಪಿರುವ ನಾವು ರಾಜ್ಯಸಭೆಗೆ ಆಯ್ಕೆಯಾಗುವವರು
ಆಯ ರಾಜ್ಯದವರೇ ಆದ ಬುದ್ದಿ ಜೀವಿಗಳು ಇಲ್ಲವೆ ಆಯ ರಾಜ್ಯದ ನುಡಿ, ಸಂಸ್ಕೃತಿ ಮತ್ತು ಸಮಸ್ಯೆಗಳನ್ನು ಚೆನ್ನಾಗಿ ಅರಿತವರು ಅಯ್ಕೆ ಆಗಿ ಬರಲಿ ಎಂಬುದು ಪ್ರಜಾಪ್ರಬುತ್ವದ ಸಿದ್ದಾಂತ ಮತ್ತು ಸಂವಿದಾನದ ಆಶಯ ಕೂಡ ಆಗಿರುವಾಗ ಮರುಳಸಿದ್ದಪ್ಪನವರು ಕಣಕ್ಕೆ ಇಳಿದದ್ದು ಸಮರ್ತನೀಯ. ರಾಶ್ಟ್ರೀಯ ಪಕ್ಶಗಳು ಒಕ್ಕೂಟ ವ್ಯವಸ್ತೆಯ ಆಶಯ ಮತ್ತು ಸಿದ್ದಾಂತಗಳಿಗೆ ವಿರುದ್ಧವಾಗಿ ನಡೆದಾಗ ಅದನ್ನು ವಿರೋದಿಸಿ ಮರುಳಸಿದ್ದಪ್ಪನವರು ಸೈದ್ದಾಂತಿಕ ನೆಲೆಯಲ್ಲಿ ಸ್ಪರ್ಧಿಸಿದರೆ ಹೊರತು ಚೇಶ್ಟೆಗಾಗಿ ಅಲ್ಲ. ಇಲ್ಲಿ ಸೋಲು-ಗೆಲುವು ಮುಕ್ಯವಲ್ಲ ಒಕ್ಕೂಟ ವ್ಯವಸ್ತೆಯ ಸೈದ್ದಾಂತಿಕ ನಿಲುವುಗಳನ್ನು ಎತ್ತಿ ಹಿಡಿಯುವ ಮತ್ತು ರಾಷ್ಟ್ರೀಯ ಪಕ್ಷಗಳ ’ಪ್ರಾದೇಶಿಕ ಆಶಯ’ಗಳ ವಿರೋಧಿ ನಿಲುವನ್ನು ಖಂಡಿಸುವ ವಿದಾನವಾಗಿ ಮರುಳಸಿದ್ದಪ್ಪನವರ ಸ್ಪರ್ಧೆಯನ್ನು ನಾವು ನೋಡಬೇಕಾಗುತ್ತದೆ. ಶಾಸಕರು ಕೂಡ ’ಮೊದಲು’ ಕನ್ನಡಿಗರೇ ಅಲ್ಲವೆ, ಆಮೇಲೆ ತಾನೆ ಬಿಜೆಪಿ ಇಲ್ಲವೆ ಕಾಂಗ್ರೆಸ್ಸಿನ ಪಕ್ಷದವರು; ಹಾಗಾಗಿ ’ಆತ್ಮಸಾಕ್ಶಿ’ ಆದಾರಿತ ವೋಟುಗಳನ್ನು ಕೇಳುವುದು ಕೆಟ್ಟ ರಾಜಕಾರಣವಾಗಲ್ಲ, ಅಲ್ಲದೆ ಇನ್ನೂ ’ಪ್ರಾದೇಶಿಕ ಆಶಯ’ದ ಮೇಲೆ ನಿಂತ ರಾಜಕಾರಣವಾಗಿ ಪ್ರಜಾಪ್ರಬುತ್ವದ ಮತ್ತು ಒಕ್ಕೂಟ ವ್ಯವಸ್ತೆಯ ಮೌಲ್ಯಗಳನ್ನು ಹೆಚ್ಚು ಗಟ್ಟಿಗೊಳಿಸುತ್ತದೆ.
ಇನ್ನು ಮುಂದಾದರೂ ರಾಶ್ಟ್ರೀಯ ಪಕ್ಶಗಳು ರಾಜ್ಯಸಬೆಗೆ ಅಭ್ಯರ್ತಿಗಳನ್ನು ಆರಿಸುವಾಗ ಎಚ್ಚರದಿಂದಿರಲಿ ಮತ್ತು ಒಕ್ಕೂಟ ವ್ಯವಸ್ತೆಗೆ ಬದ್ದವಾಗಿರಲಿ ಎನ್ನುವ ಎಚ್ಚರವನ್ನ ಮರುಳಸಿದ್ದಪ್ಪನವರು ಸ್ಪರ್ದಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಬಹುದು.
’ಪಡೆ’ದದ್ದು ಸಾಕು ಇನ್ಮೇಲೆ ’ಕೊಡೋ’ಣ
’ಇನ್ಪೋಸಿಸ್’ ಕಟ್ಟಿದ ಶ್ರೀ ನಾರಾಯಣ ಮೂರ್ತಿಯವರನ್ನು ’ವಿಶ್ವ ಕನ್ನಡ ಸಮ್ಮೇಳನ’ವನ್ನು ಉದ್ಘಾಟಕರನ್ನಾಗಿಸಿದ ವಿಷಯವನ್ನು ಇತ್ತೀಚೆಗೆ ತೀವ್ರ ಚರ್ಚೆಗೆ ಒಡ್ದಲಾಗಿದೆ. ಇದರ ಬಗ್ಗೆ ಒಂದೆರಡು ಮಾತು. ಮೂರ್ತಿಯವರು ಜಾಗತೀಕರಣದಿಂದಾಗುವ ಹೊಸ ಸಾಧ್ಯತೆಗಳನ್ನು ಚೆನ್ನಾಗಿ ಬಳಸಿಕೊಂಡು ಅರಿವಿನ ಮೇಲೆ(knowledge based) ಕಂಪನಿಗಳನ್ನ ಕಟ್ಟಿಜನರ ಹಣಕಾಸಿನ ಮಟ್ಟವನ್ನ ಹೆಚ್ಚಿಸಬಹುದೆಂದೂ ಅದರ ಮೂಲಕ ಬದುಕಿನ ಮಟ್ಟವನ್ನು ಸುಧಾರಿಸಬಹುದೆಂದು ತೋರಿಸಿಕೊಟ್ಟವರಲ್ಲಿ ಪ್ರಮುಖರು. ಇದಕ್ಕಾಗಿ ಅವರು ಅಬಿನಂದನಾರ್ಹರಲ್ಲದೆ ಇತರರಿಗೂ ಸ್ಪೂರ್ತಿಯ ಸೆಲೆಯಾಗಬಲ್ಲವರು. ಇದರಿಂದಾಗಿಯೇ ಮೂರ್ತಿಯವರು ಜಾಗತೀಕರಣದಿಂದ ಏನೆಲ್ಲ ’ಪಡೆ’ದು(ಇಂಗ್ಲಿಶ್, ಸಾಪ್ಟ್ ವೇರ್, ತಾಂತ್ರಿಕತೆ ಬಗೆಗಿನ ಅರಿವು ಇತ್ಯಾದಿ) ಕೊಳ್ಳಬಹುದೆಂದು ಚೆನ್ನಾಗಿ ತೋರಿಸಿಕೊಟ್ಟರು. ಈಗಲೂ ಹೆಚ್ಚಿನ ಜನರೂ ಜಾಗತೀಕರಣದಿಂದ ಆಗುವ ಬಳಕೆ ಇದೊಂದೆ ಅಂದರೆ ’ಪಡೆ’ಯುವುದೊಂದೇ ಎಂದು ತಿಳಿದಿದ್ದಾರೆ. ಅಂದರೆ ಇಂಗ್ಲಿಶಿನಿಂದಲೇ ನಮ್ಮ ಏಳಿಗೆ ಇಲ್ಲದಿದ್ದರೆ ನಾವು ಏಳಿಗೆ ಹೊಂದಲಾರೆವು ಎಂಬುದನ್ನ ’ಪಡೆ’ಯುವ ಗುಂಪಿನವರು ತಿಳಿದಿರುವಂತಿದೆ. ಆದರೆ ಜಾಗತೀಕರಣದಲ್ಲಿ ’ಕೊಡು’ವುದಕ್ಕೂ ಅಶ್ಟೆ ಅವಕಾಶಗಳಿವೆ ಎಂಬುದನ್ನ ನಾವು ಹೆಚ್ಚಾಗಿ ಗುರುತಿಸಿಲ್ಲ. ಇವತ್ತಿಗೂ ಜರ್ಮನಿ, ಜಪಾನ್ ಮತ್ತು ಇಸ್ರೇಲ ದೇಶಗಳು ತಮ್ಮಲ್ಲಿರುವ ಅರಿವನ್ನು ಇಂಗ್ಲಿಶಿನ ನೆರವಿಲ್ಲದೆ ತಮ್ಮ ತಮ್ಮ ತಾಯ್ನುಡಿಗಳ ಮೂಲಕ ಕಲಿತು
ಹೆಚ್ಚಿಸಿಕೊಂಡು ಇಡೀ ಪ್ರಪಂಚಕ್ಕೆ ಹೊಸ ಹೊಸ ಉತ್ಪನ್ನಗಳನ್ನ ’ಕೊಟ್ಟು’ ತಾಂತ್ರಿಕ ಹೆಚ್ಚುಗಾರಿಕೆಯನ್ನು ತೋರುತ್ತಿವೆ. ನಾವು (ಬಾರತ) ಇನ್ನು ಜಾಗತೀಕರಣದಿಂದ ’ಪಡೆ’ದುಕೊಳ್ಳುವುದರಲ್ಲಿ ಇದ್ದೀವೆಯೆ ಹೊರತು ’ಕೊಡು’ವುದಕ್ಕೆ ಮನಸ್ಸು ಮಾಡಿಲ್ಲ. ಹಾಗಾಗಿ ಮೂರ್ತಿಯವರು ಸಮ್ಮೇಳನದ ಉದ್ಗಾಟನೆ ಮಾಡುವ ನೆಪದಲ್ಲಾದರೂ ಸಾರ್ವಜನಿಕ ವಲಯದಲ್ಲಿ ಜಾಗತೀಕರಣಕ್ಕೆ ’ಕೊಡು’ವುದರ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಲಿ ಬಯಸುತ್ತೇನೆ
ಹೆಚ್ಚಿಸಿಕೊಂಡು ಇಡೀ ಪ್ರಪಂಚಕ್ಕೆ ಹೊಸ ಹೊಸ ಉತ್ಪನ್ನಗಳನ್ನ ’ಕೊಟ್ಟು’ ತಾಂತ್ರಿಕ ಹೆಚ್ಚುಗಾರಿಕೆಯನ್ನು ತೋರುತ್ತಿವೆ. ನಾವು (ಬಾರತ) ಇನ್ನು ಜಾಗತೀಕರಣದಿಂದ ’ಪಡೆ’ದುಕೊಳ್ಳುವುದರಲ್ಲಿ ಇದ್ದೀವೆಯೆ ಹೊರತು ’ಕೊಡು’ವುದಕ್ಕೆ ಮನಸ್ಸು ಮಾಡಿಲ್ಲ. ಹಾಗಾಗಿ ಮೂರ್ತಿಯವರು ಸಮ್ಮೇಳನದ ಉದ್ಗಾಟನೆ ಮಾಡುವ ನೆಪದಲ್ಲಾದರೂ ಸಾರ್ವಜನಿಕ ವಲಯದಲ್ಲಿ ಜಾಗತೀಕರಣಕ್ಕೆ ’ಕೊಡು’ವುದರ ಬಗ್ಗೆ ಹೆಚ್ಚು ಚರ್ಚೆಗಳು ನಡೆಯಲಿ ಬಯಸುತ್ತೇನೆ
ಗುರುವಾರ, ಫೆಬ್ರವರಿ 10, 2011
ಒಂಬತ್ತು(೯) ಅನ್ನುವುದು ಏತಕ್ಕೆ?
ಒನ್(ದು)+ಪತ್ತು = ಒಂಬತ್ತು (ಅಂದರೆ ೧೦ಕ್ಕೆ ೧ ಕಡಿಮೆ. ಕೆಲವರು ತಪ್ಪಾಗಿ ’ಒಂಭತ್ತು’ ಎಂದು ಉಲಿಯುತ್ತಾರೆ. !!)
’ಒನ್’ ಪದದಲ್ಲಿರುವ ’ನ್’ ಮೂಗಿಲಿಯಾಗಿರುವುದರಿಂದ ’ಪತ್ತು’ ಪದದಲ್ಲಿರುವ ’ಪ’ -> ’ಬ’ ಆಗುತ್ತದೆ. ಇದು ಕನ್ನಡದ ಕಟ್ಟಳೆ.
ಪತ್ತು +ಒಂದು(10+1) = ಪತ್+ಒಂದು=> ಪನ್+ಒಂದು= ಪನ್ನೊಂದು (ಪತ್ ಪದದಲ್ಲಿ ’ತ’ಕಾರಕ್ಕೆ ’ನ’ಕಾರ ಆದೇಶವಾಗಿ ಬಂದು ’ಪನ್’ ಅಂತಾಗಿದೆ).
ಒಂದು ವೇಳೆ ಅಲ್ಲಿ ಮೂಗುಲಿ ಇಲ್ಲದಿದ್ದರೆ ಅದು ’ಪ್’->’ವ್’ ಆಗುತ್ತದೆ. ಎತ್ತುಗೆಗೆ: ಬೆರೆಸಿದ+ಪೋಲ್= ಬೆರೆಸಿದವೋಲ್
’ಒನ್’ ಪದದಲ್ಲಿರುವ ’ನ್’ ಮೂಗಿಲಿಯಾಗಿರುವುದರಿಂದ ’ಪತ್ತು’ ಪದದಲ್ಲಿರುವ ’ಪ’ -> ’ಬ’ ಆಗುತ್ತದೆ. ಇದು ಕನ್ನಡದ ಕಟ್ಟಳೆ.
ಪತ್ತು +ಒಂದು(10+1) = ಪತ್+ಒಂದು=> ಪನ್+ಒಂದು= ಪನ್ನೊಂದು (ಪತ್ ಪದದಲ್ಲಿ ’ತ’ಕಾರಕ್ಕೆ ’ನ’ಕಾರ ಆದೇಶವಾಗಿ ಬಂದು ’ಪನ್’ ಅಂತಾಗಿದೆ).
ಒಂದು ವೇಳೆ ಅಲ್ಲಿ ಮೂಗುಲಿ ಇಲ್ಲದಿದ್ದರೆ ಅದು ’ಪ್’->’ವ್’ ಆಗುತ್ತದೆ. ಎತ್ತುಗೆಗೆ: ಬೆರೆಸಿದ+ಪೋಲ್= ಬೆರೆಸಿದವೋಲ್
ಕನ್ನಡದ ಕಟ್ಟಳೆಯ ಪ್ರಕಾರ ಎಲ್ಲೆಲ್ಲಿ ’ೞ’ ಬರಬೇಕು?
ಉತ್ತರ: ಅದರ ಮುಂದೆ ’ಲ್’ಕಾರ ಇದ್ದರೆ ಅಲ್ಲೆಲ್ಲ ’ೞ’ಕಾರ ಬರುತ್ತೆ.
ಎತ್ತುಗೆಗಾಗಿ:-
ಅೞಲ್ =cry
ಕೞಲ್, ಕೞಲೆ( anklet)
ಕೞಲ್ = buttermilk
ಕೞಲ್ = two or three of the upper joints of a sugar-cane that are insipid.
ಕೊೞಲ್ = flute
ತೊೞಲ್ = go around, suffering
ನೆೞಲ್ = ನೆರಳು,shade
ಪೊೞಲ್ = ಹೊಳಲು, town,city
ಬೞಲ್ = ಸುಸ್ತು, tired
ಬಿೞಿಲ್ = ಒಂದು ಗಿಡದ ಹೆಸರು
ಬೀೞಲ್ = ಊಡೆ = root that grows downwards from the branches of a banyan and other trees, pendent root; ūḍe pendent root of a banyan tree
ಉೞಲ್(ಉೞುವಿಕೆ)
ಏೞಲ್(ಏಳಿಗೆ)
ಮೞಲ್(ಮೞ್ಗಣ್) the eyes to become dim
ಆದರೆ ಇದಕ್ಕೆ ಹೊರತಾದ ಪದಗಳು ಇವೆ:
ಅಳಿಲ್
ಮಳಲ್
References: ಎಮನೊ ಮತ್ತು ಬರೊಅವರ ದ್ರಾವಿಡ ನುಡಿಗಂಟು (http://dsal.uchicago.edu/cgi-bin/philologic/search3advanced?dbname=burrow&query=bir%CC%A4al&matchtype=exact&display=utf8)
ಎತ್ತುಗೆಗಾಗಿ:-
ಅೞಲ್ =cry
ಕೞಲ್, ಕೞಲೆ( anklet)
ಕೞಲ್ = buttermilk
ಕೞಲ್ = two or three of the upper joints of a sugar-cane that are insipid.
ಕೊೞಲ್ = flute
ತೊೞಲ್ = go around, suffering
ನೆೞಲ್ = ನೆರಳು,shade
ಪೊೞಲ್ = ಹೊಳಲು, town,city
ಬೞಲ್ = ಸುಸ್ತು, tired
ಬಿೞಿಲ್ = ಒಂದು ಗಿಡದ ಹೆಸರು
ಬೀೞಲ್ = ಊಡೆ = root that grows downwards from the branches of a banyan and other trees, pendent root; ūḍe pendent root of a banyan tree
ಉೞಲ್(ಉೞುವಿಕೆ)
ಏೞಲ್(ಏಳಿಗೆ)
ಮೞಲ್(ಮೞ್ಗಣ್) the eyes to become dim
ಆದರೆ ಇದಕ್ಕೆ ಹೊರತಾದ ಪದಗಳು ಇವೆ:
ಅಳಿಲ್
ಮಳಲ್
References: ಎಮನೊ ಮತ್ತು ಬರೊಅವರ ದ್ರಾವಿಡ ನುಡಿಗಂಟು (http://dsal.uchicago.edu/cgi-bin/philologic/search3advanced?dbname=burrow&query=bir%CC%A4al&matchtype=exact&display=utf8)
ಬುಧವಾರ, ಫೆಬ್ರವರಿ 09, 2011
ಮೊಗೇರ/ಮೊಗವೀರ ಅಂದರೆ ಏನು?
ಮೊಗೆ = ನೀರನ್ನು ಒಂದು ಹಿಡಿಯಲ್ಲಿ/ಚೆಂಬಿನಲ್ಲಿ ಕೊಳದಿಂದಲೊ, ಹೊಳೆಯಿಂದಲೊ, ಕಡಲಿನಿಂದಲೊ ತೆಗೆದುಕೊಳ್ಳುವುದು.
ಎಮನೊ ಮತ್ತು ಬರೊ ನುಡಿಗಂಟಿನಿಂದ:-
Ka. moge to take water with a vessel out of a pond, tank or stream for one's use, ladle out (any fluid with a small vessel out of a larger one), scoop, bale; n. state of (water) being sufficient to be taken (out of a pond, etc.);
ಹೀಗೆ ಮೊಗೆದು ಮೀನನ್ನು ಹಿಡಿಯಬಹುದು. ಹಾಗಾಗಿ ಮೀನುಗಾರರಿಗೆ ಮೊಗೆಯುವವರು=>ಮೊಗೆಯರು => ಮೊಗೇರರು ಎಂಬ ಹೆಸರು ಬಂದಿದೆ. ಮೊಗೇರ/ಮೊಗವೀರ ಎಂಬ ಜಾತಿಯು ಕರ್ನಾಟಕದ ಕರಾವಳಿಯಲ್ಲಿದೆ.
ಎಮನೊ ಮತ್ತು ಬರೊ ನುಡಿಗಂಟಿನಿಂದ:-
Ka. moge to take water with a vessel out of a pond, tank or stream for one's use, ladle out (any fluid with a small vessel out of a larger one), scoop, bale; n. state of (water) being sufficient to be taken (out of a pond, etc.);
ಹೀಗೆ ಮೊಗೆದು ಮೀನನ್ನು ಹಿಡಿಯಬಹುದು. ಹಾಗಾಗಿ ಮೀನುಗಾರರಿಗೆ ಮೊಗೆಯುವವರು=>ಮೊಗೆಯರು => ಮೊಗೇರರು ಎಂಬ ಹೆಸರು ಬಂದಿದೆ. ಮೊಗೇರ/ಮೊಗವೀರ ಎಂಬ ಜಾತಿಯು ಕರ್ನಾಟಕದ ಕರಾವಳಿಯಲ್ಲಿದೆ.
ಮುಂಬಯ್ ಅಂದರೆ ಏನು?
ಮುನ್+ ಪಾಯ್ = ಮುಂಬಾಯ್ = ಮುಂಬಯ್
ಪಾಯ್= ಹಾಯ್ = ತೇಲ್ (sail), ಬಳಕೆ : ಹಾಯಿದೋಣಿ
ತೇಲುವುದಕ್ಕೆ ಮುಂಚೆ ಸಿಗುವ ತಾವು(ಜಾಗ) -ಮುಂಬಯ್
ಪಾಯ್= ಹಾಯ್ = ತೇಲ್ (sail), ಬಳಕೆ : ಹಾಯಿದೋಣಿ
ತೇಲುವುದಕ್ಕೆ ಮುಂಚೆ ಸಿಗುವ ತಾವು(ಜಾಗ) -ಮುಂಬಯ್
ಬರ್ತನ ಪದಗೊಳ್
ಬರ್ತನ ಪದಗೊಳ್!
ಕಾಪಿ ಕನ್ನಡ ಕಯ್ಯಿಡದೋಳ್
ಅಂದ್ರೆ ಬರ್ತಂಗ್ ಪ್ರಾಣ
ಲೋಟಾನ್ ಎತ್ತ್ ಕುಡ್ಬುಟ್ಟಂದ್ರೆ
ತಕ್ಕೊ! ಪದಗೊಳ್ ಬಾಣ :)
---
ರತ್ನನ ಪದಗಳ್ ಒಂದು ಪದ್ಯದ ಅಣುಕುಪದ್ಯEdit
ಕಾಪಿ ಕನ್ನಡ ಕಯ್ಯಿಡದೋಳ್
ಅಂದ್ರೆ ಬರ್ತಂಗ್ ಪ್ರಾಣ
ಲೋಟಾನ್ ಎತ್ತ್ ಕುಡ್ಬುಟ್ಟಂದ್ರೆ
ತಕ್ಕೊ! ಪದಗೊಳ್ ಬಾಣ :)
---
ರತ್ನನ ಪದಗಳ್ ಒಂದು ಪದ್ಯದ ಅಣುಕುಪದ್ಯEdit
ಹೊಳಲು ಅಂತ ಯಾಕೆ ಬಂತು?
ಪೊಳಲ್ = ಹೊಳಲ್ = ಪುರ( city)= ನಗರ, ಇದನ್ನ ಈ ರೀತಿ ಪೊೞೆ+ಅಲ್=>ಪೊೞೆಯಲ್=>ಹೊಳೆಯಲ್(ಹೊಸಗನ್ನಡ)=> ಹೊಳಲ್ ಅಂದ್ರೆ ಹೊಳೆ ಹತ್ರ, ಹೊಳೆಯಲ್ಲಿ, ಮೊದಲೆಲ್ಲ ಹೊಳೆಯ ದಡದಲ್ಲಿ/ಹತ್ತಿರ ನಗರಗಳು ಹುಟ್ಟಿಕೊಳ್ಳುತ್ತಿದ್ದವು. ಯಾಕಂದರೆ ಹೊಳೆಯ ನೀರಿಂದನೇ ಬದುಕು/ದುಡಿಮೆ/ನಡಾವಳಿ ನಡೀತಾ ಇತ್ತು. ಎತ್ತುಗೆಗೆ ನೈಲ್,ಗಂಗೆ,ಕಾವೇರಿ(ಶ್ರೀರಂಗಪಟ್ಟಣ)
ಇನ್ನೊಂದು ವಿಶೇಶ ಅಂದ್ರೆ ಚಾಲುಕ್ಯರು ಬಾದಾಮಿಯಲ್ಲಿ ಕಲ್ಗುಡಿ, ಕೋಟೆಗಳನ್ನು ಕಟ್ಟಿಸಿದರೂ ಪಟ್ಟ ಮಾಡ್ಕೊಳ್ಳಕೆ ಕಿಸುವೊಳಲಿಗೆ(ಪಟ್ಟದ ಕಲ್ಲಿಗೆ) ಬರಬೇಕಾಗಿತ್ತು ಯಾಕಂದ್ರೆ ಅಲ್ಲೇ ಮಲಪ್ರಬೆ(?)ಹರಿಯೋದು. ಹಾಗಾಗಿ ಬಾದಾಮಿ ಎಂದು ಹೊಳಲಾಗಲಿಲ್ಲ. ಕಿಸುವೊಳಲು ಹೊಳಲಾಗಿಯೇ ಉಳಿಯಿತು.
ದ್ರಾವಿಡ ನುಡಿಗಂಟಿನಿಂದ
Ka. por̤e river
Ka. por̤al town, city.
ಇನ್ನೊಂದು ವಿಶೇಶ ಅಂದ್ರೆ ಚಾಲುಕ್ಯರು ಬಾದಾಮಿಯಲ್ಲಿ ಕಲ್ಗುಡಿ, ಕೋಟೆಗಳನ್ನು ಕಟ್ಟಿಸಿದರೂ ಪಟ್ಟ ಮಾಡ್ಕೊಳ್ಳಕೆ ಕಿಸುವೊಳಲಿಗೆ(ಪಟ್ಟದ ಕಲ್ಲಿಗೆ) ಬರಬೇಕಾಗಿತ್ತು ಯಾಕಂದ್ರೆ ಅಲ್ಲೇ ಮಲಪ್ರಬೆ(?)ಹರಿಯೋದು. ಹಾಗಾಗಿ ಬಾದಾಮಿ ಎಂದು ಹೊಳಲಾಗಲಿಲ್ಲ. ಕಿಸುವೊಳಲು ಹೊಳಲಾಗಿಯೇ ಉಳಿಯಿತು.
ದ್ರಾವಿಡ ನುಡಿಗಂಟಿನಿಂದ
Ka. por̤e river
Ka. por̤al town, city.
ಮಂಗಳವಾರ, ಜನವರಿ 04, 2011
’ಕೊಂಕಣ’ ಕನ್ನಡದ ಪದವೇ?
ಇತ್ತೀಚೆಗೆ ಗೋವಾದ ಮಂತ್ರಿಯೊಬ್ಬರು ಕಾರವಾರದ ಕೆಲವು ಬಾಗಗಳನ್ನ ಗೋವಾಗೆ ಸೇರಿಸ್ಬೇಕು ಅಂತ ಹೇಳಿಕೆ ಕೊಟ್ಟಿದ್ರು.
ಆದರೆ ’ಗೋವೆ’ಯೇ ಕನ್ನಡದ ಹೆಸರು ಆಗಿರುವಾಗ ಅದನ್ನ ಕರ್ನಾಟಕಕ್ಕೆ ಸೇರಿಸ್ಬೇಕು ಅಂತ ನಾವು ಹೇಳ್ಬೋದು...
ಹೇಗೆ?
ಕನ್ನಡದಲ್ಲಿ(ಮತ್ತು ಇತರ ದ್ರಾವಿಡ ನುಡಿಗಳಲ್ಲಿ) ಕೊಂಕ, ಕೊಂಕು, ಕೊಕ್ಕೆ, ಕೊಂಡ(ಕುಂದ) ಎಂಬ ಪದಗಳಿವೆ. ಅದರಲ್ಲಿ ಕೊಂಕ ಅನ್ನುವ ಪದಕ್ಕೆ ವಕ್ರ, ಡೊಂಕ ಅಂತಲೂ ಕೊಂಡ/ಕುಂದ ಅನ್ನುವ ಪದಕ್ಕೆ ಬೆಟ್ಟ ಅನ್ನುವ ಅರ್ಥಗಳುವೆ.
Ka. kokki, kokke crookedness, perverseness, a crook, bend, hook; kogga, kokkari, koṅga, koṅgari crookedness; koṅki a hook, fish-hook, angle; koṅku to be bent, get crooked, curved, distorted, deformed, or curled, become perverse, untrue, etc.; n. (also koṅgu) state of being bent, crooked, etc.; koṅkisu to make crooked
Ka. koṇḍa,kunda hill, mountain
ನಮ್ಮ ತೆಂಕುಭಾರತದ ಪಡುವಲ ತೀರದುದ್ದಕ್ಕೂ ಇರುವ ಅಂಕು ಡೊಂಕಾದ ಬೆಟ್ಟಗಳ ಉದ್ದ ಸಾಲಿನಲ್ಲಿರುವ ನಾಡೇ ’ಕೊಂಕ್’ಣ. ತೆಂಕಲ್, ಬಡಗಲ್, ಪಡುವಲ್, ಮೂಡಲ್ ಇವುಗಳು ತೆಂಕಣ, ಬಡಗಣ, ಪಡುವಣ, ಮೂಡಣ ಆದ ಹಾಗೆ ಕೊಂಕಲ್ -> ಕೊಂಕಣ ಆಗಿರಬಹುದು.
ಕೊಂಕಣ (ಸಂಸ್ಕೃತೀಕರಿಸಿದರೆ)-> ಕೋಂಕಣ (ಕೊರಲಿಸದ -> ಕೊರಲಿಸಿದ)-> ಗೋಂಕಣ (ಪ್ರಾಕ್ರುತದಲ್ಲಾಗುವ ಮೊಟಕಿಸುವಿಕೆ)--> ಗೋಂ -> ಗೋಮ್ -> ಗೋಮೆ(ಮ->ವ) -> ಗೋವೆ -> ಗೋವಾ
ಇನ್ನು ಕರ್ನಾಟಕದ ಉತ್ತರಕನ್ನಡದಲ್ಲಿರುವ ಗೋಕರ್ಣದಲ್ಲಿರುವ ’ರ’ಕಾರ ತೆಗೆದುಹಾಕಿದರೆ ಗೋಕಣ - ಇದಕ್ಕು ಮೇಲೆ ಹೇಳಿರುವ ’ಪದವುಟ್ಟು’ ಒಪ್ಪುತ್ತದೆ.
[ ಸೇಡಿಯಾಪು ಕ್ರುಶ್ಣಬಟ್ಟರವರ ’ಶಬ್ದಾರ್ಥಕೋಶ’ ದಿಂದ ಇಲ್ಲಿ ಕೆಲವು ಅಂಶಗಳನ್ನು ಹಾಕಿದ್ದೇನೆ.]
ಆದರೆ ’ಗೋವೆ’ಯೇ ಕನ್ನಡದ ಹೆಸರು ಆಗಿರುವಾಗ ಅದನ್ನ ಕರ್ನಾಟಕಕ್ಕೆ ಸೇರಿಸ್ಬೇಕು ಅಂತ ನಾವು ಹೇಳ್ಬೋದು...
ಹೇಗೆ?
ಕನ್ನಡದಲ್ಲಿ(ಮತ್ತು ಇತರ ದ್ರಾವಿಡ ನುಡಿಗಳಲ್ಲಿ) ಕೊಂಕ, ಕೊಂಕು, ಕೊಕ್ಕೆ, ಕೊಂಡ(ಕುಂದ) ಎಂಬ ಪದಗಳಿವೆ. ಅದರಲ್ಲಿ ಕೊಂಕ ಅನ್ನುವ ಪದಕ್ಕೆ ವಕ್ರ, ಡೊಂಕ ಅಂತಲೂ ಕೊಂಡ/ಕುಂದ ಅನ್ನುವ ಪದಕ್ಕೆ ಬೆಟ್ಟ ಅನ್ನುವ ಅರ್ಥಗಳುವೆ.
Ka. kokki, kokke crookedness, perverseness, a crook, bend, hook; kogga, kokkari, koṅga, koṅgari crookedness; koṅki a hook, fish-hook, angle; koṅku to be bent, get crooked, curved, distorted, deformed, or curled, become perverse, untrue, etc.; n. (also koṅgu) state of being bent, crooked, etc.; koṅkisu to make crooked
Ka. koṇḍa,kunda hill, mountain
ನಮ್ಮ ತೆಂಕುಭಾರತದ ಪಡುವಲ ತೀರದುದ್ದಕ್ಕೂ ಇರುವ ಅಂಕು ಡೊಂಕಾದ ಬೆಟ್ಟಗಳ ಉದ್ದ ಸಾಲಿನಲ್ಲಿರುವ ನಾಡೇ ’ಕೊಂಕ್’ಣ. ತೆಂಕಲ್, ಬಡಗಲ್, ಪಡುವಲ್, ಮೂಡಲ್ ಇವುಗಳು ತೆಂಕಣ, ಬಡಗಣ, ಪಡುವಣ, ಮೂಡಣ ಆದ ಹಾಗೆ ಕೊಂಕಲ್ -> ಕೊಂಕಣ ಆಗಿರಬಹುದು.
ಕೊಂಕಣ (ಸಂಸ್ಕೃತೀಕರಿಸಿದರೆ)-> ಕೋಂಕಣ (ಕೊರಲಿಸದ -> ಕೊರಲಿಸಿದ)-> ಗೋಂಕಣ (ಪ್ರಾಕ್ರುತದಲ್ಲಾಗುವ ಮೊಟಕಿಸುವಿಕೆ)--> ಗೋಂ -> ಗೋಮ್ -> ಗೋಮೆ(ಮ->ವ) -> ಗೋವೆ -> ಗೋವಾ
ಇನ್ನು ಕರ್ನಾಟಕದ ಉತ್ತರಕನ್ನಡದಲ್ಲಿರುವ ಗೋಕರ್ಣದಲ್ಲಿರುವ ’ರ’ಕಾರ ತೆಗೆದುಹಾಕಿದರೆ ಗೋಕಣ - ಇದಕ್ಕು ಮೇಲೆ ಹೇಳಿರುವ ’ಪದವುಟ್ಟು’ ಒಪ್ಪುತ್ತದೆ.
[ ಸೇಡಿಯಾಪು ಕ್ರುಶ್ಣಬಟ್ಟರವರ ’ಶಬ್ದಾರ್ಥಕೋಶ’ ದಿಂದ ಇಲ್ಲಿ ಕೆಲವು ಅಂಶಗಳನ್ನು ಹಾಕಿದ್ದೇನೆ.]
ಭಾನುವಾರ, ಜನವರಿ 02, 2011
ಸಲ್ಮೊಱೆ(ಸಲ್ಮೊರೆ) ಅಂದ್ರೇನು?
ಸಲ್ಮೊಱೆ (ಸಲ್+ಮೊಱೆ) - ?
ನಮ್ಮ ಕಡೆ ಈ ಪದ ಬಳಕೆಯಲ್ಲಿದೆ....ಹಿಂದಿನಿಂದಲೂ, ಹೆಣ್ಣು ಮದುವೆಯಾಗುವಾಗ ಈಗಿರುವ ಸಂಬಂಧದ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ಸಂಬಂಧದವರ ಜೊತೆ ಮದುವೆಯಾಗುವ ಪ್ರಸಂಗ ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಅನಲೈಸ್ ಮಾಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.
ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂಧ/ಒಪ್ಪತಕ್ಕ ಸಂಬಂಧ ಅಂತ ಅರ್ಥ.
( Ka. moṟe a turn, time, (K.2) propriety, virtue; relationship)
’ಮೊಱೆ’ಯ ಬಳಕೆಗಳು
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.
ನಮ್ಮ ಕಡೆ ಈ ಪದ ಬಳಕೆಯಲ್ಲಿದೆ....ಹಿಂದಿನಿಂದಲೂ, ಹೆಣ್ಣು ಮದುವೆಯಾಗುವಾಗ ಈಗಿರುವ ಸಂಬಂಧದ ಒಳಗೆ ಅಂದರೆ ಸೋದರ ಮಾವನನ್ನೊ ಇಲ್ಲವೆ ಸೋದರಮಾವನ/ಸೋದರತ್ತೆ ಮಗನನ್ನೊ ಮದುಯಾಗುವುದುಂಟು. ಇದಕ್ಕೆ ’ಸಲ್ಮೊರೆ ಸರಿಯಾಗಿದೆ’ ಅಂತ ಹೇಳ್ತಾರೆ ಅಂದರೆ ಅವರಲ್ಲಿ ಅಣ್ಣ-ತಂಗಿಯ ಸಂಬಂಧವಿಲ್ಲ ಗಂಡ-ಹೆಂಡಿರಾಗಬಹುದು ಅಂತ ಅರ್ಥ. ಆದರೆ ಹೆಣ್ಣಿಗೆ/ಗಂಡಿಗೆ ದೂರದ ಸಂಬಂಧದವರ ಜೊತೆ ಮದುವೆಯಾಗುವ ಪ್ರಸಂಗ ಒದಗಿ ಬಂದಾಗ ಇದು ಗೋಜಲಾಗುವುದರಿಂದ ಇದನ್ನ ದೊಡ್ಡವರು ಸರಿಯಾಗಿ ಅನಲೈಸ್ ಮಾಡಿ ಆಮೇಲೆ ’ಸಲ್ಮೊರೆ’ ಸರಿಯಾಗಿದಿಯೊ ಇಲ್ಲವೊ ಅಂತ ಹೇಳ್ತಾರೆ.
ಸಲ್ಲುವ ’ಮೊಱೆ’ಯೇ ಸಲ್ಮೊಱೆ. ಅಂದರೆ ’ಸಲ್ಲುವ ನಂಟು’/ಸಲ್ಲುವ ಸಂಬಂಧ/ಒಪ್ಪತಕ್ಕ ಸಂಬಂಧ ಅಂತ ಅರ್ಥ.
( Ka. moṟe a turn, time, (K.2) propriety, virtue; relationship)
’ಮೊಱೆ’ಯ ಬಳಕೆಗಳು
೧. ಅವನು ಮೊಱೆಯಲ್ಲಿ ನನಗೆ ಮೊಮ್ಮಗನಾದರೂ ನನಗಿಂತ ಹೆಚ್ಚು ಬುದ್ದಿವಂತ.
೨. ನಮ್ಮ ಮೊಱೆಯವರಲ್ಲೇ ನಮ್ಮನ್ನು ಕಂಡರೆ ಹೆಚ್ಚು ಹೊಟ್ಟೆಕಿಚ್ಚು.
ಕನ್ನಡ-ತುಳು
ಕನ್ನಡ ತುಳು ಮತ್ತು ತಮಿಳಿನಲ್ಲಿ (ಱ್ ಅಕ್ಕರ ಕೊನೆಯಲ್ಲಿ ಬರುವಾಗ)ಆಗುವ ಬದಲಾವಣೆಗಳು.
ಕನ್ನಡ - ತಮಿಳು - ತುಳು
-------------------------------------------------
ಒನ್ದು - ಒನ್ಱು - ಒಂಜಿ
ಮೂಱು - ಮೂನ್ಱು - ಮೂಜಿ
ಆಱು - ಆಱು - ಆಜಿ
ತೊಱೆ -ತುಱೈ - ತುದೆ
ನೂಱು - ನೂಱು - ನೂದು
ಮಱೆ - ಮಱ - ಮದೆ
ತಮಿಳಿನಲ್ಲಿ ’ಱ್’ ಇದ್ದ ಕಡೆ ಹೆಚ್ಚು ಕಡೆ ಕನ್ನಡದಲ್ಲೂ ಹಾಗೆ ಇದೆ. ಆದರೆ ಕೆಲವು ಕಡೆ ತುಳುವಿನ ತರ ’ದ್’ ಬಂದಿದೆ. ಆದರೆ ತುಳುವಿನಲ್ಲಿ ’ಱ್’ ಕಾರದ ಬದಲು ’ದ್’ ಇಲ್ಲವೆ ’ಜ್’ ಬರುತ್ತದೆ.
’ಒನ್-ಱು’ ಕನ್ನಡದಲ್ಲಿ ’ಒಱು’(ಮೂಱು ತರ) ಆಗಬೇಕಿತ್ತು ಆದರೆ ಒನ್-ದು ಆಗಿರುವುದು ತುಳಿವಿನ ನಿಯಮ ಪಾಲಿಸಿದಂತೆ ಇದೆ. ಆದ್ದರಿಂದ ತುಳುವಿನ ಒರೆಕಟ್ಟುಗಳನ್ನು ನಾವು ಹೆಚ್ಚು ಆಳವಾಗಿ ಓದಬೇಕಾಗಿದೆ. ಇದರಿಂದ ಕನ್ನಡದ ಹಲವು ಒರೆಕಟ್ಟುವಿಕೆಗಳ ಒಳಗುಟ್ಟುಗಳು ಬಯಲಾಗಬಹುದು
ಕನ್ನಡ - ತಮಿಳು - ತುಳು
-------------------------------------------------
ಒನ್ದು - ಒನ್ಱು - ಒಂಜಿ
ಮೂಱು - ಮೂನ್ಱು - ಮೂಜಿ
ಆಱು - ಆಱು - ಆಜಿ
ತೊಱೆ -ತುಱೈ - ತುದೆ
ನೂಱು - ನೂಱು - ನೂದು
ಮಱೆ - ಮಱ - ಮದೆ
ತಮಿಳಿನಲ್ಲಿ ’ಱ್’ ಇದ್ದ ಕಡೆ ಹೆಚ್ಚು ಕಡೆ ಕನ್ನಡದಲ್ಲೂ ಹಾಗೆ ಇದೆ. ಆದರೆ ಕೆಲವು ಕಡೆ ತುಳುವಿನ ತರ ’ದ್’ ಬಂದಿದೆ. ಆದರೆ ತುಳುವಿನಲ್ಲಿ ’ಱ್’ ಕಾರದ ಬದಲು ’ದ್’ ಇಲ್ಲವೆ ’ಜ್’ ಬರುತ್ತದೆ.
’ಒನ್-ಱು’ ಕನ್ನಡದಲ್ಲಿ ’ಒಱು’(ಮೂಱು ತರ) ಆಗಬೇಕಿತ್ತು ಆದರೆ ಒನ್-ದು ಆಗಿರುವುದು ತುಳಿವಿನ ನಿಯಮ ಪಾಲಿಸಿದಂತೆ ಇದೆ. ಆದ್ದರಿಂದ ತುಳುವಿನ ಒರೆಕಟ್ಟುಗಳನ್ನು ನಾವು ಹೆಚ್ಚು ಆಳವಾಗಿ ಓದಬೇಕಾಗಿದೆ. ಇದರಿಂದ ಕನ್ನಡದ ಹಲವು ಒರೆಕಟ್ಟುವಿಕೆಗಳ ಒಳಗುಟ್ಟುಗಳು ಬಯಲಾಗಬಹುದು
ಭಾನುವಾರ, ಡಿಸೆಂಬರ್ 26, 2010
ಆಂಜನೇಯನ /ಅಂಜಿನಯ್ಯನ ಕತೆ
ಇತ್ತೀಚೆಗೆ ನಾನು ಕಂಡುಕೊಂಡ ಒಂದು ಸಂಗತಿ:=
ಕೇಳ್ವೆ: ’ಆಂಜನೇಯ’ನ ವ್ಯುತ್ಪತ್ತಿ ಹೇಗೆ ಹೇಳುವುದು?
ಉತ್ತರ: ಆಂಜನೇಯ ಅನ್ನುವುದು ಕರ್ನಾಟಕದಲ್ಲಿ ಹೆಚ್ಚು ಕೇಳಿ ಬರುವ ಪದ. ಬೇರೆ ಕಡೆ ಬಜರಂಗ ಬಲಿ, ಹನುಮಾನ್ ಅಂತೆಲ್ಲ ಹೇಳ್ತಾರೆ... ಆದರೆ ಕರ್ನಾಟಕದಲ್ಲಿ ಆಂಜನೇಯನೇ ಯಾಕೆ? ಸಂಸ್ಕ್ರುತದ ಪ್ರಕಾರ anjaneya (p. 038) [ âñganeya ] m. son of Añganâ, Ha numat.
(http://dsal.uchicago.edu/cgi-bin/romadict.pl?query=anjaneya&display=simple&table=macdonell)
ಇದಕ್ಕೆ ಕನ್ನಡದ ವ್ಯುತ್ಪತ್ತಿ ಹೇಳಬಹುದು:-
ನಮ್ಮ ಕನ್ನಡಿಗರಲ್ಲಿ (ನಾನು ಚಿಕ್ಕಂದಿನಲ್ಲಿ ಕಂಡ ಹಾಗೆಯೇ) ಇರುವ ಒಂದು ನಂಬಿಕೆ ಇದೆ (ಮೂಡ ನಂಬಿಕೆ ಅಂತ ಕೆಲವರ ಅನ್ನಬಹುದು....ಇರಲಿ) ...ಮಕ್ಕಳಿಗೆ ಹುಶಾರ ತಪ್ಪಿದ್ರೆ(ಜ್ವರ ಬಂದರೆ) ’ಓಹ್ ಅವನು ಹೆದರಿಕೊಂಡಿದ್ದಾನೆ ಮೈಸೂರಿನಲ್ಲಿರುವ ಕೋಟೆ ಆಂಜನೇಯನಗುಡಿಗೆ ಕರ್ಕಂಡ್ ಹೋಗಿ ಎಲ್ಲಾ ಸರಿಯಾಗುತ್ತೆ’ ಅಂತ ಹಿರಿಯರು ಅದರಲ್ಲೂ ಹೆಂಗಸರು ಅಂತಿದ್ರು...ಹೀಗೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಈ ರೀತಿಯ ನಂಬಿಕೆ ಇದೆ/ಇರಬಹ್ದು. ಅಂದರೆ ’ಅಂಜಿಕೆ’/’ಅಂಜು’ - ಇದನ್ನು ಹೋಗಲಾಡಿಸುವನೇ ಅಂಜಿನ+ ಅಯ್ಯ = ಅಂಜಿನಯ್ಯ ಈಗ ಇದನ್ನೇ ಸಕ್ಕದಿಸಿದರೆ ’ಆಂಜನೇಯ’ ಆಗಿರಬಹುದು ಅಂತ ನನ್ನ ಎಣಿಕೆ.
ಹಾಗೆಯೇ ಶಿವನಿಗೆ ...ನಂಜಿನ ಅಯ್ಯ => ನಂಜಯ್ಯ ( ನಂಜುಂಡೇಶ್ವರ) ಅಂತಾರೆ ..ನಂಜನಗೂಡಿನಲ್ಲಿ ನಂಜಯ್ಯನ ಗುಡಿ ಇದೆ.
ಕೊಸರು: ಈಗಲೂ ಬೆಂಗಳೂರಿನಲ್ಲಿ ’ಗಾಳಿ’ ಆಂಜನೇಯನ ಗುಡಿ ಇದೆ.
ಕೇಳ್ವೆ: ’ಆಂಜನೇಯ’ನ ವ್ಯುತ್ಪತ್ತಿ ಹೇಗೆ ಹೇಳುವುದು?
ಉತ್ತರ: ಆಂಜನೇಯ ಅನ್ನುವುದು ಕರ್ನಾಟಕದಲ್ಲಿ ಹೆಚ್ಚು ಕೇಳಿ ಬರುವ ಪದ. ಬೇರೆ ಕಡೆ ಬಜರಂಗ ಬಲಿ, ಹನುಮಾನ್ ಅಂತೆಲ್ಲ ಹೇಳ್ತಾರೆ... ಆದರೆ ಕರ್ನಾಟಕದಲ್ಲಿ ಆಂಜನೇಯನೇ ಯಾಕೆ? ಸಂಸ್ಕ್ರುತದ ಪ್ರಕಾರ anjaneya (p. 038) [ âñganeya ] m. son of Añganâ, Ha numat.
(http://dsal.uchicago.edu/cgi-bin/romadict.pl?query=anjaneya&display=simple&table=macdonell)
ಇದಕ್ಕೆ ಕನ್ನಡದ ವ್ಯುತ್ಪತ್ತಿ ಹೇಳಬಹುದು:-
ನಮ್ಮ ಕನ್ನಡಿಗರಲ್ಲಿ (ನಾನು ಚಿಕ್ಕಂದಿನಲ್ಲಿ ಕಂಡ ಹಾಗೆಯೇ) ಇರುವ ಒಂದು ನಂಬಿಕೆ ಇದೆ (ಮೂಡ ನಂಬಿಕೆ ಅಂತ ಕೆಲವರ ಅನ್ನಬಹುದು....ಇರಲಿ) ...ಮಕ್ಕಳಿಗೆ ಹುಶಾರ ತಪ್ಪಿದ್ರೆ(ಜ್ವರ ಬಂದರೆ) ’ಓಹ್ ಅವನು ಹೆದರಿಕೊಂಡಿದ್ದಾನೆ ಮೈಸೂರಿನಲ್ಲಿರುವ ಕೋಟೆ ಆಂಜನೇಯನಗುಡಿಗೆ ಕರ್ಕಂಡ್ ಹೋಗಿ ಎಲ್ಲಾ ಸರಿಯಾಗುತ್ತೆ’ ಅಂತ ಹಿರಿಯರು ಅದರಲ್ಲೂ ಹೆಂಗಸರು ಅಂತಿದ್ರು...ಹೀಗೆ ಕರ್ನಾಟಕದ ಬೇರೆ ಬೇರೆ ಊರುಗಳಲ್ಲಿ ಈ ರೀತಿಯ ನಂಬಿಕೆ ಇದೆ/ಇರಬಹ್ದು. ಅಂದರೆ ’ಅಂಜಿಕೆ’/’ಅಂಜು’ - ಇದನ್ನು ಹೋಗಲಾಡಿಸುವನೇ ಅಂಜಿನ+ ಅಯ್ಯ = ಅಂಜಿನಯ್ಯ ಈಗ ಇದನ್ನೇ ಸಕ್ಕದಿಸಿದರೆ ’ಆಂಜನೇಯ’ ಆಗಿರಬಹುದು ಅಂತ ನನ್ನ ಎಣಿಕೆ.
ಹಾಗೆಯೇ ಶಿವನಿಗೆ ...ನಂಜಿನ ಅಯ್ಯ => ನಂಜಯ್ಯ ( ನಂಜುಂಡೇಶ್ವರ) ಅಂತಾರೆ ..ನಂಜನಗೂಡಿನಲ್ಲಿ ನಂಜಯ್ಯನ ಗುಡಿ ಇದೆ.
ಕೊಸರು: ಈಗಲೂ ಬೆಂಗಳೂರಿನಲ್ಲಿ ’ಗಾಳಿ’ ಆಂಜನೇಯನ ಗುಡಿ ಇದೆ.
ಶನಿವಾರ, ಡಿಸೆಂಬರ್ 25, 2010
ಕಂನಡ
ಶಂ.ಬಾ.ಜೋಶಿಯವರು ಕನ್ನಡ ಪದದ ಬಗ್ಗೆ ಮಾತಾಡುತ್ತ....ಕನ್ನರು,ಕಣ್ಣರು ನುಡಿ ಕಂನುಡಿ, ನಾಡು ಕಂನಾಡು/ಕಂನಡ ಅಂತ ಹೇಳಿದ್ದಾರೆ. ಅಲ್ಲದೆ ಕಂನಡ ಎಂಬುದನ್ನ ಹೆಚ್ಚು ಸರಿಯಾಗಿ ತಮಿಳಿನಲ್ಲಿ ಬರೆಯಬಹುದು ಯಾಕಂದರೆ ತಮಿಳಿನಲ್ಲಿ ’ಣ’, ’ನ’ ನಡುವೆ ಇರುವ್ ಇನ್ನೊಂದ್ ’ನ’(கன்னட) ಕಾರ ಇದೆ. ಇಲ್ಲಿ ’ண்’ ಎಂಬ ’ನ’ಕಾರ ’ಕಂನಡ’ದಲ್ಲಿರುವ ’ಂ’ಗಿಂತ ಸೊಲ್ಪ ಬೇರೆ ತರದ ಉಲಿಕೆEdit
Hamsanandi ! - ಮೇಲಿನ ಟಿಪ್ಪಣಿಯಲ್ಲಿ ಹಲವು ತಪ್ಪುಗಳಿವೆ, ಮತ್ತು ಕನ್ನಡ ಅನ್ನುವ ಪದವನ್ನು ತಮಿಳು ಲಿಪಿಯಲ್ಲಿ (ಕನ್ನಡಕ್ಕಿಂತ) ಸರಿಯಾಗಿ ಬರೆಯಬಹುದು (ಅದು ಸರಿಯೇ ಇದ್ದರೆ, ನನಗೆ ಸರಿ ಕಂಡಿಲ್ಲ), ಎಂದು ತಿಳಿಸಿ ಹೇಳುತ್ತಿಲ್ಲ.
೧) ತಮಿಳಿನಲ್ಲಿ ಎರಡು ’ನ’ ಕಾರಗಳು ಬರವಣಿಗೆಯಲ್ಲಿದ್ದರೂ, ಅವುಗಳ ಉಚ್ಚಾರಣೆಯಲ್ಲಿ ಯಾವ ಬದಲಾವಣೆಯೂ ಇಲ್ಲ.
೨) ಈ ಎರಡು ’ನ’ ಕಾರಗಳು (ன ಮತ್ತು ந ) ಇವೆರಡೂ, ಒಂದು ಪದದಲ್ಲಿ ನ-ಕಾರ ಎಲ್ಲಿ ಬಂದಿದೆ ಅನ್ನುವುದರ ಮೇಲೆ ನಿಂತಿರುತ್ತವೆ. (ಹಿಂದೆ ಇದಕ್ಕೆ ಬೇರೆ ಕಾರಣಗಳಿದ್ದಿರಬಹುದು, ಉಚ್ಚಾರವೂ ಬೇರೆಯಾಗೇ ಇದ್ದಿರಬಹುದು - ಆದರೆ ಇಂದಿನ ತಮಿಳಿನಲ್ಲಿ ಇಲ್ಲ); ಪದವೊಂದರ ಮೊದಲು ಬರುವ ನ-ಕಾರವು ಯಾವಾಗಲೂ ந ಆಗಿದ್ದು, ನಡುವೆ ಬರುವ ನ ಕಾರಗಳು ன ಮತ್ತು ந ಈ ಎರಡೂ ಆಗಿರಬಹುದು (ಹೆಚ್ಚಾಗಿ ன ಬರುತ್ತೆ). ಯಾವ ಕಡೆ ந, ಯಾವ ಕಡೆ ன ಅನ್ನುವುದು ಸುಮಾರು ರೂಢಿಯಿಂದ ಬರುತ್ತೆ. ಉದಾ: ನಂದನಂ -> ನನ್ದನಮ್ ಈ ಪದವನ್ನ ತಮಿಳಿನಲ್ಲಿ நந்தனம் ಹೀಗೆ ಬರೆಯಲಾಗುತ್ತೆ.
೩) ண் ಅನ್ನುವುದು ನ ಕಾರವೇ ಅಲ್ಲ, ಣ ಕಾರ.
ಇನ್ನೊಂದು ಸಂಗತಿ ಎಂದರೆ ತಮಿಳಿನ ಕೆಲವು ಒಳನುಡಿಗಳಲ್ಲಿ, ಆರ್ಕಾಟು, ಚೆನ್ನೈ ಮೊದಲಾದ ಉತ್ತರ ಭಾಗಗಳಲ್ಲಿ (ನನ್ನ ಅನುಭವಕ್ಕೆ ಬಂದಂತೆ) ನ ಮತ್ತು ಣ ಕಾರಗಳನ್ನ ಒಮ್ಮೊಮ್ಮೆ ಅದಲು ಬದಲಿಸಿ ಹೇಳುವುದೂ (ಉದಾ: ಮನ್ನನ್ <-> ಮಣ್ಣನ್, ಕಣ್ಣನ್ <--> ಕನ್ನನ್ ) ಮತ್ತು ಅದರ ಕಾಗುಣಿತವನ್ನು ಹೇಳುವಾಗ ಅದನ್ನು ಹೆಸರಿಸಲು ಮೂರು ಸುಳಿ ನ, ಎರಡು ಸುಳಿ ನ ಎಂದು ಹೇಳುವುದುಂಟು.
Bharath Kumar - ಹಂಸಾನಂದಿ....ನನಗೆ ನೆನಪಿದ್ದಶ್ಟು ಇಲ್ಲಿ ಹಾಕಿದ್ದೇನೆ...ನಿಮ್ಮ ಕಮೆಂಟ್ ನೋಡಿದ ಮೇಲೆ ಗೊಂದಲವಾಗಿದೆ.ಇವತ್ ಮತ್ತೆ ಶಂ.ಬಾ..ಹೊತ್ತಗೆ ನೋಡಿ ಅಲ್ಲಿರುವುದನ್ನು ಇಲ್ಲಿ ಹಾಕುತ್ತೇನೆ
Bharath Kumar - ಚಾ.ನಗದರಲ್ಲೂ ...’ನ’ಕಾರಕ್ಕೆ ’ಣ’ಕಾರ ಬಳಸ್ತಾರೆ.... ಬನ್ನಿ ಬದಲು ಬಣ್ಣಿ.....ಪುನ(ಪುನಃ) ಬದಲು ’ಪುಣವಿ’( ಅಂದ್ರೆ ಮತ್ತೆ),
Bharath Kumar - @hamsanandi....ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೮ನೇ ಪುಟದಲ್ಲಿ ಹೀಗಿದೆ.
"...ನ ಮತ್ತು ಣ ಗಳೆರಡಕ್ಕೊ ತಮ್ಮ ಹಕ್ಕನ್ನು ಹೇಳಲು ಅವಕಾಶವಿರುವ ಬೇರೊಂದು ಅಕ್ಶರವು ಮೊದಲು ಆ ಸ್ಥಳದಲ್ಲಿರಬೇಕು. ಹಾಗಾದರೆ ಆ ಅಕ್ಶರವು ಯಾವುದು? ತಮಿಳಿನ ನೆರವಿನಿಂದ ಇದನ್ನು ಗೊತ್ತುಪಡಿಸಬಹುದಾಗಿದೆ. ತಮಿಳಿನಲ್ಲಿ ನ ಮತ್ತು ಣ ಗಳ ಹೊರತು ಇನ್ನೂ ಒಂದು ಅನುನಾಸಿಕಾಕ್ಶರವುಂಟು. ಅವರು ಅದನ್ನು ன ಹೀಗೆ ಬರೆದು ತೋರಿಸುವರು. ಇದನ್ನು ಹೇಗೆ ಉಚ್ಚರಿಸುವರೆಂದು ಕೇಳಲು ಉಭಯಭಾಷಾವಿಶಾರದರಾದ ಪ್ರೊ. ಚೆನ್ನಕೇಶವ ಅಯ್ಯಂಗಾರ್ಯರು ನಕಾರದಂತೆ ಎಂದು ತಿಳಿಸಿದರು. ಸ್ಪಶ್ಟವಾಗಿ ಅಲ್ಲದ್ದಿದ್ದರೂ ன ದ ಒಲವು ಣ ಕಾರದ ಕಡೆಗೂ ಕೆಲಮಟ್ಟಿಗೆ ಇರಬೇಕೆಂದು ಸಂದೇಹ. ನನಗೆ ಇನ್ನು ಇದೇ ಸಂದೇಹ. ಉಚ್ಚಾರದಲ್ಲಿ ಹೆಚ್ಚು ಕಡಿಮೆ ಇಲ್ಲದಿದ್ದರೆ ನ-ಣಗಳಿರುವಾಗ ಮತ್ತೆ ன் ಕಾರದ ಅವಶ್ಯಕವೇನು? ನ ಮತ್ತು ಣ ಕಾರಗಳಿಂದ ತೋರಿಸಲು ಆಗದ ಆವುದೊ ಒಂದು ವಿಶಿಷ್ಟ ಉಚ್ಚಾರವನ್ನು ಸೂಚಿಸುವುದಕ್ಕಾಗಿಯೆ ன் ಕಾರವು ತಲೆದೋರಿರಬೇಕಲ್ಲವೆ? ಹಳೆಗನ್ನಡದ ಱ ಮತ್ತು ೞ ಕಣ್ಮರೆಯಾದಂತೆ ಇಂದು ನ,ಣ ಮತ್ತು ன ಕಾರಗಳಿಲ್ಲಿದ್ದ ಸೂಕ್ಶ್ಮ ಉಚ್ಚಾರ ಬೇಧವು ಮರೆತುಹೋಗರಬೇಕು.
Bharath Kumar - ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೯ನೇ ಪುಟದಲ್ಲಿ ಹೀಗಿದೆ
"..ತಮಿಳಿನಲ್ಲಿಯ ன் ಅವರ್ಗೀಯ ನ ಕಾರವು ಶಬ್ದದ ಆದಿಯಲ್ಲಿ ಬರುವುದಿಲ್ಲ. ಆದುದರಿಂದ ಕನ್ನಡದೊಳಗಿನ ಬಿಂದುವಂತೆ(ಂ) ತಮಿಳ ನಕಾರದ ಉಚ್ಚಾರವೂ ಇರಬೇಕೆಂದನಿಸುತ್ತಿದೆ. ಏಕೆಂದರೆ, ಬಿಂದುವು ಶಬ್ದದ ಆರಂಬದಲ್ಲಿ ಬರುವುದೇ ಸಾಧ್ಯವಿಲ್ಲ. ಇನ್ನೂ ಒಂದು ವಿಶೇಶ. ಹಲವೆಡೆಗಳಲ್ಲಿ ತಮಿಳಿನಲ್ಲಿಯೂ ಶಬ್ದದ ಕೊನೆಗೆ ’ನ್’ ಎಂಬುದು ಯಾವುದೊಂದು ಅಕ್ಶರಕ್ಕೆ ಆದೇಶವಾಗಿ ಬರುವುದುಂಟು. ಆದುದರಿಂದ, ಕಂನಡ-ಕಂನಾಡು ಇದರೊಳಗಿನ ಪೂರ್ವಪದವಾದ ಕನ್-ಕನ್ನ ಎಂಬ ಜನಾಂಗವಾಚಕ ಶಬ್ದದ ಕೊನೆಯ ಅಕ್ಶರವು ಯಾವುದಾದರೂ ಒಂದು ಅಕ್ಶರಕ್ಕೆ ಆದೇಶವಾಗಿ ಬಂದಿರಬಹುದೆ? "
ಅವರ ಪ್ರಕಾರ ಸದ್ಯಕ್ಕೆ ’ಕನ್ನಡ’ ತಪ್ಪು ...ಆದರೆ ಕಂನಡ = கன்னட ಎರಡೂ ಸರಿ
ಕನ್ನಡದ "ಂ’ = ತಮಿಳಿನ ன்
Hamsanandi ! - ಮೇಲಿನ ಟಿಪ್ಪಣಿಯಲ್ಲಿ ಹಲವು ತಪ್ಪುಗಳಿವೆ, ಮತ್ತು ಕನ್ನಡ ಅನ್ನುವ ಪದವನ್ನು ತಮಿಳು ಲಿಪಿಯಲ್ಲಿ (ಕನ್ನಡಕ್ಕಿಂತ) ಸರಿಯಾಗಿ ಬರೆಯಬಹುದು (ಅದು ಸರಿಯೇ ಇದ್ದರೆ, ನನಗೆ ಸರಿ ಕಂಡಿಲ್ಲ), ಎಂದು ತಿಳಿಸಿ ಹೇಳುತ್ತಿಲ್ಲ.
೧) ತಮಿಳಿನಲ್ಲಿ ಎರಡು ’ನ’ ಕಾರಗಳು ಬರವಣಿಗೆಯಲ್ಲಿದ್ದರೂ, ಅವುಗಳ ಉಚ್ಚಾರಣೆಯಲ್ಲಿ ಯಾವ ಬದಲಾವಣೆಯೂ ಇಲ್ಲ.
೨) ಈ ಎರಡು ’ನ’ ಕಾರಗಳು (ன ಮತ್ತು ந ) ಇವೆರಡೂ, ಒಂದು ಪದದಲ್ಲಿ ನ-ಕಾರ ಎಲ್ಲಿ ಬಂದಿದೆ ಅನ್ನುವುದರ ಮೇಲೆ ನಿಂತಿರುತ್ತವೆ. (ಹಿಂದೆ ಇದಕ್ಕೆ ಬೇರೆ ಕಾರಣಗಳಿದ್ದಿರಬಹುದು, ಉಚ್ಚಾರವೂ ಬೇರೆಯಾಗೇ ಇದ್ದಿರಬಹುದು - ಆದರೆ ಇಂದಿನ ತಮಿಳಿನಲ್ಲಿ ಇಲ್ಲ); ಪದವೊಂದರ ಮೊದಲು ಬರುವ ನ-ಕಾರವು ಯಾವಾಗಲೂ ந ಆಗಿದ್ದು, ನಡುವೆ ಬರುವ ನ ಕಾರಗಳು ன ಮತ್ತು ந ಈ ಎರಡೂ ಆಗಿರಬಹುದು (ಹೆಚ್ಚಾಗಿ ன ಬರುತ್ತೆ). ಯಾವ ಕಡೆ ந, ಯಾವ ಕಡೆ ன ಅನ್ನುವುದು ಸುಮಾರು ರೂಢಿಯಿಂದ ಬರುತ್ತೆ. ಉದಾ: ನಂದನಂ -> ನನ್ದನಮ್ ಈ ಪದವನ್ನ ತಮಿಳಿನಲ್ಲಿ நந்தனம் ಹೀಗೆ ಬರೆಯಲಾಗುತ್ತೆ.
೩) ண் ಅನ್ನುವುದು ನ ಕಾರವೇ ಅಲ್ಲ, ಣ ಕಾರ.
ಇನ್ನೊಂದು ಸಂಗತಿ ಎಂದರೆ ತಮಿಳಿನ ಕೆಲವು ಒಳನುಡಿಗಳಲ್ಲಿ, ಆರ್ಕಾಟು, ಚೆನ್ನೈ ಮೊದಲಾದ ಉತ್ತರ ಭಾಗಗಳಲ್ಲಿ (ನನ್ನ ಅನುಭವಕ್ಕೆ ಬಂದಂತೆ) ನ ಮತ್ತು ಣ ಕಾರಗಳನ್ನ ಒಮ್ಮೊಮ್ಮೆ ಅದಲು ಬದಲಿಸಿ ಹೇಳುವುದೂ (ಉದಾ: ಮನ್ನನ್ <-> ಮಣ್ಣನ್, ಕಣ್ಣನ್ <--> ಕನ್ನನ್ ) ಮತ್ತು ಅದರ ಕಾಗುಣಿತವನ್ನು ಹೇಳುವಾಗ ಅದನ್ನು ಹೆಸರಿಸಲು ಮೂರು ಸುಳಿ ನ, ಎರಡು ಸುಳಿ ನ ಎಂದು ಹೇಳುವುದುಂಟು.
Bharath Kumar - ಹಂಸಾನಂದಿ....ನನಗೆ ನೆನಪಿದ್ದಶ್ಟು ಇಲ್ಲಿ ಹಾಕಿದ್ದೇನೆ...ನಿಮ್ಮ ಕಮೆಂಟ್ ನೋಡಿದ ಮೇಲೆ ಗೊಂದಲವಾಗಿದೆ.ಇವತ್ ಮತ್ತೆ ಶಂ.ಬಾ..ಹೊತ್ತಗೆ ನೋಡಿ ಅಲ್ಲಿರುವುದನ್ನು ಇಲ್ಲಿ ಹಾಕುತ್ತೇನೆ
Bharath Kumar - ಚಾ.ನಗದರಲ್ಲೂ ...’ನ’ಕಾರಕ್ಕೆ ’ಣ’ಕಾರ ಬಳಸ್ತಾರೆ.... ಬನ್ನಿ ಬದಲು ಬಣ್ಣಿ.....ಪುನ(ಪುನಃ) ಬದಲು ’ಪುಣವಿ’( ಅಂದ್ರೆ ಮತ್ತೆ),
Bharath Kumar - @hamsanandi....ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೮ನೇ ಪುಟದಲ್ಲಿ ಹೀಗಿದೆ.
"...ನ ಮತ್ತು ಣ ಗಳೆರಡಕ್ಕೊ ತಮ್ಮ ಹಕ್ಕನ್ನು ಹೇಳಲು ಅವಕಾಶವಿರುವ ಬೇರೊಂದು ಅಕ್ಶರವು ಮೊದಲು ಆ ಸ್ಥಳದಲ್ಲಿರಬೇಕು. ಹಾಗಾದರೆ ಆ ಅಕ್ಶರವು ಯಾವುದು? ತಮಿಳಿನ ನೆರವಿನಿಂದ ಇದನ್ನು ಗೊತ್ತುಪಡಿಸಬಹುದಾಗಿದೆ. ತಮಿಳಿನಲ್ಲಿ ನ ಮತ್ತು ಣ ಗಳ ಹೊರತು ಇನ್ನೂ ಒಂದು ಅನುನಾಸಿಕಾಕ್ಶರವುಂಟು. ಅವರು ಅದನ್ನು ன ಹೀಗೆ ಬರೆದು ತೋರಿಸುವರು. ಇದನ್ನು ಹೇಗೆ ಉಚ್ಚರಿಸುವರೆಂದು ಕೇಳಲು ಉಭಯಭಾಷಾವಿಶಾರದರಾದ ಪ್ರೊ. ಚೆನ್ನಕೇಶವ ಅಯ್ಯಂಗಾರ್ಯರು ನಕಾರದಂತೆ ಎಂದು ತಿಳಿಸಿದರು. ಸ್ಪಶ್ಟವಾಗಿ ಅಲ್ಲದ್ದಿದ್ದರೂ ன ದ ಒಲವು ಣ ಕಾರದ ಕಡೆಗೂ ಕೆಲಮಟ್ಟಿಗೆ ಇರಬೇಕೆಂದು ಸಂದೇಹ. ನನಗೆ ಇನ್ನು ಇದೇ ಸಂದೇಹ. ಉಚ್ಚಾರದಲ್ಲಿ ಹೆಚ್ಚು ಕಡಿಮೆ ಇಲ್ಲದಿದ್ದರೆ ನ-ಣಗಳಿರುವಾಗ ಮತ್ತೆ ன் ಕಾರದ ಅವಶ್ಯಕವೇನು? ನ ಮತ್ತು ಣ ಕಾರಗಳಿಂದ ತೋರಿಸಲು ಆಗದ ಆವುದೊ ಒಂದು ವಿಶಿಷ್ಟ ಉಚ್ಚಾರವನ್ನು ಸೂಚಿಸುವುದಕ್ಕಾಗಿಯೆ ன் ಕಾರವು ತಲೆದೋರಿರಬೇಕಲ್ಲವೆ? ಹಳೆಗನ್ನಡದ ಱ ಮತ್ತು ೞ ಕಣ್ಮರೆಯಾದಂತೆ ಇಂದು ನ,ಣ ಮತ್ತು ன ಕಾರಗಳಿಲ್ಲಿದ್ದ ಸೂಕ್ಶ್ಮ ಉಚ್ಚಾರ ಬೇಧವು ಮರೆತುಹೋಗರಬೇಕು.
Bharath Kumar - ಶಂ.ಬಾ. ಅವರ ಕನ್ನಡದ ನೆಲೆ ಎಂಬ ಹೊತ್ತಗೆಯ ೬೯ನೇ ಪುಟದಲ್ಲಿ ಹೀಗಿದೆ
"..ತಮಿಳಿನಲ್ಲಿಯ ன் ಅವರ್ಗೀಯ ನ ಕಾರವು ಶಬ್ದದ ಆದಿಯಲ್ಲಿ ಬರುವುದಿಲ್ಲ. ಆದುದರಿಂದ ಕನ್ನಡದೊಳಗಿನ ಬಿಂದುವಂತೆ(ಂ) ತಮಿಳ ನಕಾರದ ಉಚ್ಚಾರವೂ ಇರಬೇಕೆಂದನಿಸುತ್ತಿದೆ. ಏಕೆಂದರೆ, ಬಿಂದುವು ಶಬ್ದದ ಆರಂಬದಲ್ಲಿ ಬರುವುದೇ ಸಾಧ್ಯವಿಲ್ಲ. ಇನ್ನೂ ಒಂದು ವಿಶೇಶ. ಹಲವೆಡೆಗಳಲ್ಲಿ ತಮಿಳಿನಲ್ಲಿಯೂ ಶಬ್ದದ ಕೊನೆಗೆ ’ನ್’ ಎಂಬುದು ಯಾವುದೊಂದು ಅಕ್ಶರಕ್ಕೆ ಆದೇಶವಾಗಿ ಬರುವುದುಂಟು. ಆದುದರಿಂದ, ಕಂನಡ-ಕಂನಾಡು ಇದರೊಳಗಿನ ಪೂರ್ವಪದವಾದ ಕನ್-ಕನ್ನ ಎಂಬ ಜನಾಂಗವಾಚಕ ಶಬ್ದದ ಕೊನೆಯ ಅಕ್ಶರವು ಯಾವುದಾದರೂ ಒಂದು ಅಕ್ಶರಕ್ಕೆ ಆದೇಶವಾಗಿ ಬಂದಿರಬಹುದೆ? "
ಅವರ ಪ್ರಕಾರ ಸದ್ಯಕ್ಕೆ ’ಕನ್ನಡ’ ತಪ್ಪು ...ಆದರೆ ಕಂನಡ = கன்னட ಎರಡೂ ಸರಿ
ಕನ್ನಡದ "ಂ’ = ತಮಿಳಿನ ன்
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)