ಸೋಮವಾರ, ಅಕ್ಟೋಬರ್ 05, 2015

ಇಲ್ಲಮೆ


ನೀನು ಇಲ್ಲಿಲ್ಲವೆಂದರು
ನೀನು ಅಲ್ಲಿಲ್ಲವೆಂದರು
ನೀನು ಎಲ್ಲಿಯೂ ಇಲ್ಲವೆಂದರು
ಇಲ್ಲಮೆಯಲ್ಲಿ ಇರುವೆಯೆಂದು
ಅಲ್ಲಮನು ಉಲಿದು ಎಲ್ಲರ ಬಾಯ್ಹೊಲಿದ ಕಾಣಾ ಮತ್ತಿತಾಳಯ್ಯ

ಗುರುವಾರ, ಅಕ್ಟೋಬರ್ 01, 2015

ಕೂರ್ ಬಲ್ಲಾತನ್

ಎಲ್ಲರಿವ ಕೂರ್ ಬಲ್ಲಾತನ್
ಅಲ್ಲದುವ ಕಿರು ಮಾಳ್ಪೊಡೆ
ಬೆಲ್ಲವು ಜಾರಿ ಬಚ್ಚಲೊಳಿದ್ದಂತೆ ಮತ್ತಿತಾಳಯ್ಯ
-

ಕೂರ್ = ಚೂಪು ( ಸೂಕ್ಶ್ಮ)

ಸೋಮವಾರ, ಜೂನ್ 01, 2015

ಸೂಳ್ನುಡಿಯ ಚಳವಳಿಯೇ ಮೊದಲ ತನ್ಮದಿಪು ಚಳವಳಿ

ಈಗಾಗಲೇ ಗೊತ್ತಿರುವಂತೆ ತಮಿಳುನಾಡಿನಲ್ಲಿ ಇಪ್ಪತ್ತನೇ ನೂರೇಡಿನಲ್ಲಿ ನಡೆದ ಚಳವಳಿಯನ್ನೇ ಮೊದಲ ’ತನ್ಮದಿಪು ಚಳವಳಿ’(Self-respect Movement) ಎಂದು ಬಗೆಯಲಾಗಿದೆ. ಅಲ್ಲದೆ, ತನ್ಮದಿಪು ಚಳವಳಿಯನ್ನು ಬರೀ ತಮಿಳುನಾಡಿಗೆ ತಳುಕು ಹಾಕಲಾಗುತ್ತದೆ. ಇದನ್ನು ದ್ರಾವಿಡ ಚಳವಳಿಯ ಒಂದು ಬಾಗವಾಗಿ ನೋಡಲಾಗುತ್ತದೆ. ಆದರೆ ಇದಕ್ಕೂ ಮುಂಚೆಯೇ ಕನ್ನಡನಾಡಿನಲ್ಲಿ ’ತನ್ಮದಿಪು ಚಳವಳಿ’ ನಡೆದಿತ್ತೆಂಬುದನ್ನು ಹೆಚ್ಚಿನ ಕೂಡಣದರಿಗರು ಗಮನಿಸಿದಂತಿಲ್ಲ. ಅಂದರೆ ಹನ್ನೆರಡನೇ ನೂರೇಡಿನಲ್ಲಿ ನಡೆದ ’ಸೂಳ್ನುಡಿ ಚಳವಳಿ’(ವಚನ ಚಳವಳಿ) ಯನ್ನು ಒಂದು ತನ್ಮದಿಪಿನ ಚಳವಳಿಯಾಗಿ ಬಗೆದ ಸೀಳುನೋಟಗಳು ಸಿಗುವುದಿಲ್ಲ.

ತಮಿಳುನಾಡಿನಲ್ಲಿ ಜರುಗಿದ ತನ್ಮದಿಪು ಚಳವಳಿಯ ಮುಕ್ಯ ಗುರಿಗಳಲ್ಲಿ ತಮಿಳು ಕೂಡಣದಲ್ಲಿ ಎಲ್ಲರನ್ನು ಸಮಾನರನ್ನಾಗಿ ಕಾಣುವುದು, ವ್ಯಕ್ತಿಯ ಹುಟ್ಟಿನಿಂದ ಏರ‍್ಪಟ್ಟ ಮೇಲು-ಕೀಳುಗಳನ್ನು ತೊಡೆದು ಹಾಕಿ ಸಾಮಾನ್ಯ ಮಂದಿಯನ್ನೂ ಚಿಂತನೆಗೆ ಒಡ್ಡಿ ಅವರವರ ಅರಿವಿಗೆ ತಕ್ಕಂತೆ ಬಾಳಲು ಅನುವು ಮಾಡಿಕೊಡುವುದೇ ಆಗಿತ್ತು. ತನ್ಮದಿಪು ಚಳವಳಿಯ ಮುಂದಾಳಾಗಿದ್ದ ಕನ್ನಡಿಗ ಪೆರಿಯಾರ್ ಅವರು ಈ ಚಳವಳಿಯನ್ನು ’ಅರಿವು ವಿಡುದಲಯ್ ಇಯಕ್ಕಂ’(ಅರಿವು ಬಿಡುಗಡೆಯ ಚಳವಳಿ) ಎಂದು ಕರೆದರು. ಪೆರಿಯಾರ್ ಅವರಿಗೆ ಗಾಂದಿ-ನೆಹರು ನಂಬಿದ್ದ ರಾಜಕೀಯ ಬಿಡುಗಡೆ(ಸ್ವರಾಜ್) ಗಿಂತ ’ಅರಿವಿನ ಬಿಡುಗಡೆ’ಯೇ ಮುಕ್ಯವಾಗಿತ್ತು. ಪ್ರತಿಯೊಬ್ಬ ಮನುಶ್ಯನು ತನ್ನ ಅರಿವನ್ನು ಬಳಸಿಕೊಂಡು ಕೂಡಣದಲ್ಲಿ ಗವ್ರವದಿಂದ ಬಾಳ್ವೆ ಮಾಡುವಂತಾಗಬೇಕೆಂಬುದೇ ಅವರ ಬಯಕೆಯಾಗಿತ್ತು. ತಮಿಳರ ಮದುವೆಗಳಿಂದ ಹಾರುವರನ್ನು ಮತ್ತು ಅವರು ಹೇಳುವ ಸಂಸ್ಕ್ರುತ ಮಂತ್ರಗಳನ್ನು ತೆಗೆದುಹಾಕಲಾಯಿತು. ಇದಲ್ಲದೆ ಬೇರೆ ಬೇರೆ ಜಾತಿಯ ಗಂಡು-ಹೆಣ್ಣುಗಳಿಗೆ ಮದುವೆ ಮಾಡಿಕೊಳ್ಳಲು ಪ್ರೋತ್ಸಾಹ ನೀಡಲಾಯಿತು. ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ, ಹೀಗೆ ಎಲ್ಲ ತೆರನಾದ ಅಸಮಾನತೆಯನ್ನು ತೊಡೆದು ಹಾಕುವುದೇ ಈ ಚಳವಳಿಯ ಅಡಿಕಟ್ಟಲೆಗಳಾದವು. ಮಂದಿಯಲ್ಲಿ ಎಚ್ಚರಿಕೆ ಮೂಡಿಸಲು ತಮಿಳು ನುಡಿಯನ್ನು ಚೆನ್ನಾಗಿ ಬಳಸಿಕೊಳ್ಳಲಾಯಿತೆಂಬುದನ್ನು ಇಲ್ಲಿ ಗಮನಿಸಬಹುದು.

ಈಗ ಕನ್ನಡನಾಡಿನ ಹನ್ನೆರಡನೇ ನೂರೇಡಿಗೆ ಬರೋಣ. ಆಗ ನಡೆದ ಸೂಳ್ನುಡಿಯ ಚಳವಳಿ ಕನ್ನಡದ ಕೂಡಣದಲ್ಲಿ ಒಂದು ದೊಡ್ಡ ಅರಿವಿನ ಅಲೆಯನ್ನು ಎಬ್ಬಿಸಿತು. ಈ ಚಳವಳಿಯಲ್ಲಿ ಮುಕ್ಯವಾಗಿ ಸಂಸ್ಕ್ರುತ ಮತ್ತು ಸಂಸ್ಕ್ರುತದ ಸಾಹಿತ್ಯ ಪರಂಪರೆಯನ್ನು ದಿಕ್ಕರಿಸಿ ಕನ್ನಡದ್ದೇ ಆದ ’ಸೂಳ್ನುಡಿ’ ಬರಹಗಳನ್ನು ಮಾಡಲಾಯಿತು. ಇದರ ಮೂಲಕ ಹೊಸದೊಂದು ’ಸೂಳ್ನುಡಿಯ ವಾಡಿಕೆ’ಯನ್ನು ಹುಟ್ಟು ಹಾಕಲಾಯಿತು. ಅನುಬವ ಮಂಟಪವನ್ನು ಏರ‍್ಪಡಿಸಿ ಅದರ ಮೂಲಕ ಗಂಡು-ಹೆಣ್ಣು, ಉಳ್ಳವ-ಇಲ್ಲದವ, ಮೇಲ್ಜಾತಿ-ಕೀಳ್ಜಾತಿ ಎಂದೆಣಿಸದೇ ಎಲ್ಲರಿಗೂ ತಮ್ಮ ತಮ್ಮ ಅನಿಸಿಕೆಗಳನ್ನು ಹೇಳುವ ಮತ್ತು ಚರ‍್ಚಿಸುವ ಅವಕಾಶವನ್ನು ಮಾಡಿಕೊಡಲಾಯಿತು. ಹಾಗಾಗಿ ಅನುಬವ ಮಂಟಪವು ಹೊಸಗಾಲದ ಮಂದಿಯಾಳ್ವಿಕೆಯ ಗುಣಲಕ್ಶಣಗಳನ್ನು ಹೊಂದಿತ್ತು ಎಂದು ಹೇಳಬಹುದು. ಜಾತಿಯೇರ‍್ಪಾಟಿನಿಂದ ಉಂಟಾದ ಮೇಲು-ಕೀಳನ್ನು ತೊಡೆದು ಹಾಕಲು ಬೇರೆ ಬೇರೆ ಜಾತಿಯ ಹೆಣ್ಣು-ಗಂಡುಗಳ ಮದುವೆಗೆ ಅನುವು ಮಾಡಿಕೊಡಲಾಯಿತು. ದೇಗುಲ ಸಂಸ್ಕ್ರುತಿಯನ್ನು ದಿಕ್ಕರಿಸಿ ’ದೇಹವನ್ನೇ ದೇಗುಲ’ವನ್ನಾಗಿ ಮಾಡಿ ಪ್ರತಿಯೊಬ್ಬ ಮನುಶ್ಯನ ತನ್ಮದಿಪನ್ನು(ಆತ್ಮಗವ್ರವ) ಎತ್ತಿ ಹಿಡಿಯಲಾಯಿತು. ದಾಸೋಹವನ್ನು ವಾಡಿಕೆಗೆ ತಂದು ಉಳ್ಳವ-ಇಲ್ಲದವರ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲಾಯಿತು. ಅರಿವೇ ಗುರು, ಮಾತೆಂಬುದು ಜ್ಯೋತಿರ‍್ಲಿಂಗ ಎಂಬ ನುಡಿಗಟ್ಟುಗಳು ಮೊಳಗಿದವು.

ಹೀಗೆ ಸೂಳ್ನುಡಿಗಳನ್ನು ಅಡಿಗಲ್ಲಾಗಿ ನಿಲ್ಲಿಸಿ ಕಟ್ಟಿದ ಚಳವಳಿ ಕೂಡಣದ, ತನ್ನರಿಮೆಯ ಮತ್ತು ಹಣಕಾಸಿನ ಸುದಾರಣೆಗಳನ್ನು ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ತಂದು ಸಮಾನತೆಯ ಕೂಡಣವನ್ನು ಕಟ್ಟುವೆಡೆಗೆ ಹೆಜ್ಜೆ ಇಟ್ಟಿತು.
ಹಾಗಾಗಿ, ಹತ್ತು-ಹಲವು ಬಗೆಗಳಲ್ಲಿ ತಮಿಳುನಾಡಿನ ’ತನ್ಮದಿಪು ಚಳವಳಿ’ ಕನ್ನಡನಾಡಿನ ’ಸೂಳ್ನುಡಿ ಚಳವಳಿ’ಯನ್ನೇ ಹೋಲುತ್ತದೆಯಲ್ಲದೆ ನೇರವಾಗಿ ಇಲ್ಲವೆ ನೇರವಲ್ಲದ ತೆರದಲ್ಲಿ ಸೂಳ್ನುಡಿ ಚಳವಳಿಯ  ಪ್ರಬಾವಕ್ಕೆ ಒಳಗಾಗಿದೆಯೆಂಬುದನ್ನು ಮನಗಾಣಬಹುದು.  ಆದರೆ ಈ ಎರಡು ಚಳವಳಿಗಳಲ್ಲಿ ವ್ಯತ್ಯಾಸಗಳೂ ಇದ್ದವು ಎಂಬುದನ್ನು ಗಮನಿಸಬೇಕಾಗುತ್ತದೆ. ಸೂಳ್ನುಡಿಯ ಚಳವಳಿಯು ಎಲ್ಲರನ್ನು ಒಳಗೊಳ್ಳುವ ಮತ್ತು ಎಲ್ಲ ಜಾತಿಯ ಜನರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಚಳವಳಿಯಾಗಿತ್ತು. ಆದರೆ ತಮಿಳುನಾಡಿನ ಚಳವಳಿ ಒಂದು ಹಂತದಲ್ಲಿ ಹಾರುವರನ್ನು ವಿರೋದಿಸುವ ಚಳವಳಿಯಾಗಿ ಮಾರ‍್ಪಟ್ಟಿತು. ಆದರೆ ಕನ್ನಡನಾಡಿನಲ್ಲಿ ಹೀಗಾಗಲಿಲ್ಲ ಎಂಬುದನ್ನು ಗಮನಿಸಬಹುದು.

ತೀರಮೆಗಳು
ಸಾಮಾನ್ಯವಾಗಿ ವಚನ ಚಳವಳಿಯನ್ನು ಕೇವಲ ಲಿಂಗಾಯಿತ/ವೀರಶಯ್ವಕ್ಕೆ ತಳುಕು ಹಾಕಲಾಗುತ್ತದೆ. ಆದರೆ ವಚನ ಚಳವಳಿಯು ಇದನ್ನು ಮೀರಿ ಬೆಳೆದಿತ್ತು ಬದಲಾಗಿ ಹೊಸದೊಂದು ಕೂಡಣವನ್ನು ಕಟ್ಟಿಕೊಳ್ಳುವೆಡೆಗೆ ನಡೆದಿತ್ತು ಎಂಬುದನ್ನು ಮನಗಾಣಬೇಕಾಗಿದೆ.  ಕನ್ನಡನಾಡಿನ ಸೂಳ್ನುಡಿಯ ಚಳವಳಿಯು ತೆಂಕಣದ ಅರಿವಿನ ಮರುಹುಟ್ಟಿಗೆ(renaissance) ಮುನ್ನುಡಿ ಬರೆಯಿತು ಎಂದರೆ ತಪ್ಪಾಗಲಾರದು. ಕೂಡಣದರಿಗರು ಮತ್ತು ಸೀಳ್ನೋಟಗಾರರು ’ಸೂಳ್ನುಡಿ ಚಳವಳಿ’ ಮತ್ತು ’ತನ್ಮದಿಪು ಚಳವಳಿ’ಗಳನ್ನು ಹೋಲಿಸಿ ಹೆಚ್ಚು ಹೆಚ್ಚು ಮರು ಓದಿಗೆ ಒಳಪಡಿಸಬೇಕಾಗಿದೆ. ಇದರಿಂದ ಹೊರಬರುವ ತೀರಮೆಗಳು ತೆಂಕಣದ ನಾಡಿನ ಕೂಡಣಗಳಲ್ಲಿ ಹೊಸ ಹೊಳಹುಗಳಿಗೆ ದಿಕ್ಕು ತೋರಬಲ್ಲವಾಗಿವೆ.
(ಮಾಹಿತಿ ಸೆಲೆ: http://en.wikipedia.org/wiki/Self-Respect_Movement)


ಭಾನುವಾರ, ಮಾರ್ಚ್ 24, 2013

Why 'Simpallaag Ond Love story' is a hit?

Everybody is talking about the Simpallaag Ond Love Story's (SOLS) success and generally reasons attributed for its sucess are youthfulness, dialogues etc etc. But these are the reasons at the surface level, I think there are much deeper reasons for the 'resounding success' of SOLS.

    There is a glaring absence of the 'nation state' (or its machinaries like courts, police, law, army and central government) in the storyline of the movie, however the private organisation like FM Radio channel is very much part of the movie. On the one hand one would wonder how one can weave a story like this and still be successful, on the other hand does this mean that the Kannadigas liked the way 'nation state' is portrayed in SOLS? Story line completely ignores the 'nation state' - Does it means that there is a strong disapproval of 'nation state' from Kannadigas?  The story revolves within Karnataka and never goes outside. The moment the character (one of the shade in protagonist's character) starts thinking of leaving Karnataka by applying for passport(which represents the nation state), that's the end of character in the movie!! . Viewers don't even come to know happens to that character in the movie eventually.

For all these questions, the answer would be 'yes' because the current political scenario in Karnataka justifies the 'strong disapproval' sentiments of Kannadigas towards 'nation state'. Central government hasn't helped Karnataka in the recent Kaveri issue neither did it give importance in the railways budget.  Incidentally, at the same time Karnataka is witnessing the rise of Regional Political parties to fulfill the aspirations of Kannadigas and Karnataka. This is in consistent with sucess of SOLS. The movie doesn't go out of Karnataka even in the song sequences and hence its trying to paint a Kannada world either devoid of 'nation state' or its complete absence and this has been applauded by Kannadigas emptatically with the commercial success of the movie.

 ----
NOTE: It wouldn't have been possible to do the above analysis had I not read this book of MK Raghavendra
http://ybhava.blogspot.in/2011/10/review-of-book-bipolar-identiy-region.html

ಶನಿವಾರ, ಫೆಬ್ರವರಿ 16, 2013

ಹುರುಳರಿಮೆಯ ಕಣ್ಣಿನಲ್ಲಿ ಕನ್ನಡದ ಒಟ್ಟುಗಳು

ಸಾಮಾನ್ಯವಾಗಿ ಕನ್ನಡದ ಒಟ್ಟುಗಳು ಬೇರೆ ಪದಗಳೊಂದಿಗೆ ಹೇಗೆ ಸೇರಿಕೆ ಆಗುತ್ತದೆ ಎಂಬುದನ್ನು ವಿವರಿಸಲಾಗುತ್ತದೆ. ಅಂದರೆ ಆ ಒಟ್ಟುಗಳು ಈಗಾಗಲೆ ಹೆಸರು ಪದದೊಂದಿಗೋ, ಎಸಕಪದದೊಂದಿಗೋ ಸೇರುವ ಒಲವುಗಳ ಬಗ್ಗೆ ಹೇಳಲಾಗುತ್ತದೆ. ಹೀಗೆ ಸೊಲ್ಲರಿಮೆಯ ಮೂಲಕ ಬೇರೆ ಪದಗಳೊಂದಿಗೆ ಒಟ್ಟುಗಳ ಸೇರಿಕೆಯನ್ನು ವಿವರಿಸಲಾಗುತ್ತದೆ. ಆದರೆ ಈ ವಿವರಣೆ ಹೊಸ ಪದಗಳನ್ನು ಕಟ್ಟುವಾಗ ಯಾವ ಯಾವ ಕುಳ್ಳಿಹ(ಸಂದರ್ಬ)ಗಳಲ್ಲಿ ಯಾವ ಯಾವ ಒಟ್ಟನ್ನು ಬಳಸಬೇಕು ಎಂಬುದರ ಬಗೆಗಿರುವ ಗೊಂದಲವನ್ನು ಕಡಿಮೆ ಮಾಡುವುದಿಲ್ಲ. ಹಾಗಾಗಿ ಹೊಸ ಪದಗಳನ್ನು ಕಟ್ಟುವ ಕೆಲಸ ತೊಡಕಾಗಿಯೇ ಉಳಿಯುತ್ತದೆ.

ಹಾಗಾಗಿ ಹೊಸ ಪದಗಳನ್ನು ಕಟ್ಟುವಾಗ ಒಟ್ಟುಗಳ ಬಳಕೆಯಲ್ಲಿನ ಗೊಂದಲವನ್ನು ಇಲ್ಲದಂತೆ ಮಾಡಲು ಹುರುಳರಿಮೆಯ ಮೊರೆ ಹೋದರೆ ಕಡಿಮೆ ಮಾಡಬಹುದೆಂದು ತೋರುತ್ತದೆ. ಇಲ್ಲಿ ಹುರುಳರಿಮೆಯ ಜೊತೆ ಜೊತೆಗೆ ಕಟ್ಟುತ್ತಿರುವ ಪದದ ಬಳಕೆಯ ಕುಳ್ಳಿಹ(ಸಂದರ್ಬ)ವನ್ನು ಗಮನದಲ್ಲಿಟ್ಟುಕೊಂಡರೆ ಹೊಸದಾಗಿ ಕಟ್ಟುವ ಪದ ಹೆಚ್ಚು ಮಂದಿ ಬಳಸತಕ್ಕುದಾಗುತ್ತದೆ.

ಇಲ್ಲಿ ’ಗಾರ’ ಮತ್ತು ’ಇಗ’ ಎಂಬ ಒಟ್ಟುಗಳನ್ನು ಎತ್ತುಗೆಯಾಗಿ ಬಳಸಲಾಗಿದೆ. ಕನ್ನಡದಲ್ಲಿ ಈಗಾಗಲೆ ’ಗಾರ’ ಎಂಬ ಪದ ಹೇಗೆ ಬಳಕೆಯಲ್ಲಿದೆ ಮತ್ತು ಯಾವ ಯಾವ ಕುಳ್ಳಿಹಗಳಲ್ಲಿ ಬಳಸಲಾಗುತ್ತದೆ ಎಂಬುದನ್ನು ಗಮನಿಸಿ ಈ ತೀರ್ಮೆಗಳಿಗೆ ಬರಲಾಗಿದೆ.

ಹೆಸರು ಪದದೊಂದಿಗೆ 'ಗಾರ' ಎಂಬುದನ್ನು ಬಳಸಲು
೧. ಹೆಸರು ಪದಕ್ಕೆ ಸಂಬಂದಿಸಿದ ಎಸಕವನ್ನು ಮತ್ತೆ ಮತ್ತೆ ಮಾಡುತ್ತಿರಬೇಕು (ಮರುಕಳಿಕೆ-repeatability)
೨. ಹೆಸರು ಪದಕ್ಕೆ ಸಂಬಂದಿಸಿದ ಎಸಕದ ಪರಿಚೆ ಒಂದೇ ತರನಾಗಿರಬೇಕು ( ಒಮ್ಮಿಕೆ-consistency)
೩. ಎಸಕದಲ್ಲಿ ಪಳಗಿಕೆ ಹೊಂದಿರಬೇಕು (ಪಳಗಿಕೆ-experience)
೪. ಕೂಡಣದಲ್ಲಿ ಹೆಸರು ಪದಕ್ಕೆ ಸಂಬಂದಿಸಿದ ಎಸಕವು ಒಂದು ಕಸುಬು/ದುಡಿಮೆಯಾಗಿ ತನ್ನ ಇರ್ಕೆಯನ್ನು(ಸ್ತಾನವನ್ನು) ಪಡೆದಿರಬೇಕು.(ಕಸುಬು-proffession)
ಮೇಲಿನ ನಾಲ್ಕೂ ಬೊಟ್ಟುಗಳಲ್ಲಿ ಯಾವುದಾದರೊಂದು ಇಲ್ಲವೆ ಎಲ್ಲವೂ ಒಪ್ಪುವ ತರದಲ್ಲಿದ್ದಾಗ ’ಗಾರ’ಎಂಬ ಒಟ್ಟನ್ನು ಬಳಸಲು ಬರುತ್ತದೆ.

ಎತ್ತುಗೆಗೆ :-
 ೧. ಹೂಗಾರ, ಜಲಗಾರ, ಮಣೆಗಾರ(ಮಣಿಹಗಾರ),ಬಳೆಗಾರ - ಈ ಎತ್ತುಗೆಗಳಲ್ಲಿ ಮೇಲಿನ ನಾಲ್ಕೂ ಬೊಟ್ಟುಗಳು ಒಪ್ಪುತ್ತವೆ ಅಂದರೆ ಇಲ್ಲಿ ಹೂಗಾರಿಕೆ, ಜಲಗಾರಿಕೆ, ಮಣೆಗಾರಿಕೆ, ಬಳಗಾರಿಕೆ ಎಂಬುದು ಕೂಡಣದಲ್ಲಿ  ಒಂದೊಂದು ಕಸುಬುಗಳಾಗಿ(ದುಡಿಮೆಗಳಾಗಿ) ತಮ್ಮ ಇರ್ಕೆಗಳನ್ನು ಪಡೆದಿವೆ.
 ೨. ಮಾತುಗಾರ, ಕೆಲಸಗಾರ, ಚಲಗಾರ - ಈ ಎತ್ತುಗೆಗಳಲ್ಲಿ ಮೊದಲ ಮೂರು ಬೊಟ್ಟುಗಳು ಒಪ್ಪುತ್ತವೆ ಆದರೆ ನಾಲ್ಕನೆಯದು ಒಪ್ಪುವುದಿಲ್ಲ ಯಾಕಂದರೆ ಮಾತುಗಾರಿಕೆ,ಕೆಲಸಗಾರಿಕೆ, ಚಲಗಾರಿಕೆ ಇವು ಒಂದೊಂದು ನಿರ್ದಿಶ್ಟ ಕಸುಬು(ದುಡಿಮೆ)ಗಳಾಗಿ ಇರ್ಕೆಗಳನ್ನು ಪಡೆದಿಲ್ಲ ಬದಲಾಗಿ ಯಾವುದೇ ಆಳಿನ ಪರಿಚೆಗಳನ್ನು(character) ಬಣ್ಣಿಸಲು ಈ ಪದಗಳನ್ನು ಬಳಸಲಾಗುತ್ತದೆ.

ಇದಕ್ಕೆ ಹೊರತಾಗಿ ಗಾಣಿಗ, ಲೆಕ್ಕಿಗ, ಉಪ್ಪಲಿಗ, 'ಬಡಿಗ'(>ಬಡಗಿ) ಎಂಬ ಕಸುಬುಗಳೂ ಇವೆ. ಕಸುಬುಗಳಿಗೂ ನಂಟಿರುವ ಪದಗಳಾದರೂ ’ಗಾರ’ ಎಂಬ ಒಟ್ಟನ್ನು ಬಳಸಲಾಗಿಲ್ಲ, ಬದಲಾಗಿ ’ಇಗ’ಎಂಬ ಪದವನ್ನು ಬಳಸಲಾಗಿದೆ.
ಈಗ ’ಇಗ’ ಎಂಬ ಒಟ್ಟಿನ ಬಳಕೆಯ ಎತ್ತುಗೆಗಳ ನೆರವಿನಿಂದ ಬಗ್ಗೆ ನೋಡೋಣ
ಅಡಿಗ     (a man of seller's caste)
ಹಾವಾಡಿಗ  (a man of snake catcher's caste)
ಕನ್ನಡಿಗ   (a man of Kannada country)
ಗವರಿಗ (a man of the basket- and mat-maker caste)
ಸಾಲಿಗ  (a weaver caste)
ಸೋಲಿಗ ( soliga tribe)
ಪರಳಿಗ  ( paramour)
ಮಾವುಲಿಗ ( hunter tribe)
ಮಾದಿಗ    ( cobbler, chuckler)
ಆಡಿಗ      ( ಅಲೆಮಾರಿ, ನಟ)
ಈಡಿಗ     ( man of the toddy-drawers caste)
ಅಂಬಿಗ   ( man who rows a boat, boatman caste)
ಅಗಸಿಗ   ( washerman caste)
ಅಳವಿಗ   (friend)
ಒಕ್ಕಲಿಗ   (husbandman, farmer)
ಕಬ್ಬಿಲಿಗ   (boatman, fisherman)
ಕಾಡಿಗ     (a troublesome man)
ಕೇಡಿಗ     (one who ruins or is ruined)
ಕೊಬ್ಬಿಗ    (a proud man)
ಚನ್ನಿಗ       a handsome, fine man
ಸಾಲಿಗ      a debtor, creditor
ತೋಟಿಗ (ತೋಟಗಾರ)  a gardener
ನಾಡಿಗ  (village superintendent in the service of a smārta guru)
ಪದುಳಿಗ ( a happy man)
ಹಾದರಿಗ (adulterer)
ಹೊರಬಿಗ  (stranger, alien )
ಹೆಣ್ಣಿಗ       (impotent man, coward)
ಮಬ್ಬಿಗ    (a creature of darkness), Asura or Rākṣasa
ಮೊದಲಿಗ   (a chief, headman)
ಬೇಂಟಿಗ( ಬೇಟೆಗಾರ)  (hunter)

ಆದರೆ 'ಇಗ', ಎಂಬುದು ಹೆಸರು ಪದದೊಂದಿಗೆ ಎಸಕದ 'ಆಗು'ವಿಕೆಗೆ ಸಂಬಂದಿಸಿದೆ. ಇಲ್ಲಿ ಮತ್ತೆ ಮತ್ತೆ ಮಾಡುವಿಕೆಯು ಕಡ್ಡಾಯವಾಗಿ ಬೇಕಾಗಿಲ್ಲ. ಕನ್ನಡ+ಇಗ= ಕನ್ನಡಿಗ (ಇಲ್ಲಿ ಕನ್ನಡಿಗ ಎಂಬುವಲ್ಲಿ ಕನ್ನಡಿಗನಾಗಿ 'ಹುಟ್ಟು'ವ ಆಗುವಿಕೆ ಇದೆ. ಆದರೆ ಇದುವರೆವಿಗೂ ಕನ್ನಡಗಾರ ಎಂಬ ಬಳಕೆ ಆಗಿಲ್ಲ.

ಮೇಲೆ ಗಾಣಿಗ, ಲೆಕ್ಕಿಗ, ಉಪ್ಪಲಿಗ ಎಂಬುವಲ್ಲಿ ಕೂಡ 'ಕುಲ ಕಸುಬಿ'ನ ನೆರಳು ಕಾಣುತ್ತದೆ. ಇವತ್ತು 'ಗಾಣಿಗ',ಒಕ್ಕಲಿಗ ಕೆಲಸವನ್ನು ಮಾಡದೇ ಇರುವವರಿಗೂ 'ಗಾಣಿಗ', ಒಕ್ಕಲಿಗ ಎಂದು ಗುರುತಿಸುವುದು ಅವರ ಗಾಣಿಗ ಹುಟ್ಟಿನಿಂದಲೇ ಹೊರತು ಗಾಣಿಗತನಕ್ಕೆ ಸಂಬಂದಿಸಿದ ಮಾಡುವಿಕೆಯಿಂದಲ್ಲ. ಕೆಲವು ಎತ್ತುಗೆಗಳಲ್ಲಿ ಗಾರ ಮತ್ತು ಇಗ ಎಂಬ ಎರಡೂ ಒಟ್ಟುಗಳು ಬಳಕೆಯಲ್ಲಿವೆ. ಎತ್ತುಗೆಗೆ: ತೋಟಿಗ-ತೋಟಗಾರ, ಬೇಂಟಿಗ-ಬೇಟೆಗಾರ
ಮೊದಮೊದಲು ಮಾಡುಗತನದ ಕಾರಣದಿಂದ’ಗಾರ’ದಿಂದಲೇ ಸುರುವಾದ ಪದಗಳು ಆಮೇಲೆ ಹುಟ್ಟಿನ ಆಗುವಿಕೆಯಿಂದಾಗಿ’ಇಗ’ಕ್ಕೆ ಮಾರ್ಪಾಟಾಗಿವೆ ಎಂದು ಹೇಳಬಹುದು. ಅದಕ್ಕೆ ಮೇಲಿನ ಎತ್ತುಗೆಗಳೇ ಕಯ್ಗನ್ನಡಿ ಹಿಡಿದಂತೆ ತೋರುತ್ತಿದೆ. ಹಾಗಾಗಿ ಇಗ ಮತ್ತು ಗಾರ ಎಂಬ ಒಟ್ಟುಗಳು ಆಗುವಿಕೆ ಮತ್ತು ಮಾಡುವಿಕೆಗಳ ಮೇಲೆ ನಿಂತಿದೆ ಎಂದು ಹೇಳಬಹುದು

ಶನಿವಾರ, ಜನವರಿ 26, 2013

ಮಂದಿಯಾಳ್ವಿಕೆಗೆ ಏಕೆ ಬೆಲೆ ಕೊಡಬೇಕು?

ಹೊಸಗಾಲದ ಮಾನವನ ಕಂಡುಕೊಳ್ಳುವಿಕೆಗಳಲ್ಲಿ ಬಲು ಅರಿದಾದುದು ಈ ಮಂದಿಯಾಳ್ವಿಕೆ. ಹಲವಾರು ವರುಶಗಳಿಂದ ಮಾನವನು ಪರಿಸರದ ಕಟ್ಟಲೆಯನ್ನೇ ಒಪ್ಪಿಕೊಂಡು ತನ್ನ ಬದುಕನ್ನು ಸಾಗಿಸುತ್ತಿದ್ದ. ಆಮೇಲೆ ಕಾರಣಾಂತರಗಳಿಂದ ಅರಸರಾಳ್ವಿಕೆಯನ್ನು ಒಪ್ಪಿಕೊಳ್ಳಬೇಕಾಯಿತು. ಈಗ ಮಂದಿಯಾಳ್ವಿಕೆಯ ಹೊತ್ತು ಬಂದು ನಿಂತಿದೆ. ಹಾಗಾದರೆ ಪರಿಸರದ ಕಟ್ಟಲೆ, ಅರಸರ ಕಟ್ಟಲೆ ಇವನ್ನೆಲ್ಲ ತೊರೆದು ಮಂದಿಯಾಳ್ವಿಕೆಗೇ ಯಾಕೆ ಮಾನವ ಬಂದು ನಿಂತಿದ್ದಾನೆ? ಮಂದಿಯಾಳ್ವಿಕೆಗೂ ಮುಂಚೆ ಇದ್ದ ಏರ್ಪಾಟುಗಳಲ್ಲಿ ಇದ್ದ ಕೊರತೆಗಳೇನು ಎಂಬುದನ್ನು ಇಲ್ಲಿ ಅರಿತುಕೊಳ್ಳಬೇಕಾಗುತ್ತದೆ.
     ಮಾನವನನ್ನೇ ಎತ್ತುಗೆಯಾಗಿ ತೆಗೆದುಕೊಂಡರೆ, ಪರಿಸರದ ಕಟ್ಟಲೆಯಲ್ಲಿ ಸಾಟಿತನ ಇಲ್ಲವಾಗಿದೆ ಯಾಕಂದರೆ ಕೆಲವರು ಹುಟ್ಟಿನಿಂದಲೇ ಒಳ್ಳೆಯ ಮಯ್ ಕಟ್ಟನ್ನು ಪಡೆದುಕೊಂಡಿರುತ್ತಾರೆ; ಕೆಲವರು ಪಡೆದುಕೊಂಡಿರುವುದಿಲ್ಲ. ಇನ್ನು ಕೆಲವರು ಹುಟ್ಟಿನಿಂದಲೇ ಹೆಚ್ಚು ಬುದ್ದಿಶಕ್ತಿಯನ್ನು ಇಲ್ಲವೆ ಸಿರಿತನವನ್ನು ಹೊಂದಿರುತ್ತಾರೆ. ಹಾಗಾಗಿ ಮಯ್ಕಟ್ಟನ್ನು ಹೊಂದಿರುವವರು ಇಲ್ಲವೆ ಬುದ್ದಿಶಕ್ತಿಯನ್ನು ಹೊಂದಿರುವವರು ಇಲ್ಲದಿರುವವರಗಿಂತ ಮುಂದಿರುತ್ತಾರೆ. ಹಾಗಾಗಿ ಪರಿಸರದ ಕಟ್ಟಲೆಯಲ್ಲಿ ಒಬ್ಬರು ಇನ್ನೊಬ್ಬರ ಮೇಲೆ ದಬ್ಬಾಳಿಕೆ ನಡೆಸಬಹುದಾಗಿದೆ ಅಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಬದುಕಬೇಕಾಗುತ್ತದೆ. ಪರಿಸರದ ಕಟ್ಟಲೆಯಲ್ಲಿ ಇಲ್ಲವೆ ಅರಸರ ಆಳ್ವಿಕೆಯಲ್ಲಿ ಇದು ಎಶ್ಟರ ಮಟ್ಟಿಗೆ ಹೋಗಿತ್ತೆಂದರೆ ಇಲ್ಲದವರು ಇರುವವರ ಅಡಿಯಾಳಾಗಿ ಇರುವುದೇ ಅವರ ದರ್ಮ ಎಂದು ಹೇಳಲಾಗುತ್ತಿತ್ತು!! ಹಾಗಾಗಿ ಇಲ್ಲದವರ ಪಾಡು ಹೇಳತೀರದಾಗಿತ್ತು.

     ಮೇಲಿನಿಂದ ತಿಳಿಯುವುದೇನೆಂದರೆ ಪರಿಸರದಾಳ್ವಿಕೆಯಾಗಲಿ , ಅರಸರಾಳ್ವಿಕೆಯಾಗಲಿ ತುಂಬು ಸಾಟಿತನಕ್ಕೆ ಇಂಬು ಕೊಡುವುದಿಲ್ಲ. ಇದೇ ಈ ಏರ್ಪಾಟುಗಳ ಬಲು ದೊಡ್ಡ ಕೊರತೆ. ತುಂಬು ಸಾಟಿತನವಿಲ್ಲದಿದ್ದರೆ ಅಲ್ಲಿ ಇಲ್ಲದವರು ಗವ್ರವದ ಬದುಕನ್ನು ಬಾಳಲಾಗುವುದಿಲ್ಲ. ಹಾಗಾದರೆ ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡುವುದೇ ಎಂಬ ಕೇಳ್ವಿಯು ಮುಂದೆ ಬರುವುದು. ಮಂದಿಯಾಳ್ವಿಕೆ ತುಂಬು ಸಾಟಿತನವನ್ನು ನೀಡದಿದ್ದರು ಆ ಕಡೆಗೆ ಒಂದು ದೊಡ್ಡ ಹೆಜ್ಜೆಯನ್ನು ಇಡುತ್ತದೆ. ಆ ಹೆಜ್ಜೆಯ ನೆರವಿನಿಂದ ಮಂದಿಯಾಳ್ವಿಕೆಯೆಂಬ ಏರ್ಪಾಟನ್ನು ಸರಿಪಡಿಸಿಕೊಳ್ಳುತ್ತಾ ತುಂಬು ಸಾಟಿತನವನ್ನು ಪಡೆಯುವುದು ಹೊಸಗಾಲದ ಮಾನವನ ಮೇಲಿರುವ ಹೊಣೆಯಾಗಿದೆ. ಹಾಗಾಗಿ ಮಾನವ ಸಾಟಿತನವನ್ನು ಅರಸುತ್ತಾ ಇಂದು ಮಂದಿಯಾಳ್ವಿಕೆಯ ಹೊಸ್ತಿಲಲ್ಲಿ ಬಂದು ನಿಂತಿದ್ದಾನೆ. ಹೀಗೆ ಮಂದಿಯಾಳ್ವಿಕೆಗೆ ಬಂದು ನಿಂತಿರುವುದನ್ನು ನೋಡಿದರೆ ಮಾನವ ಹೆಚ್ಚು ಹೆಚ್ಚು ಮಾನವೀಯತೆಯನ್ನು ಮಯ್ಗೂಡಿಸಿಕೊಳ್ಳಬೇಕೆಂಬ ಹುರುಪು ತೋರುತ್ತಿದ್ದಾನೆ ಎಂದು ತಿಳಿಯಬಹುದು.

 ಮಂದಿಯಾಳ್ವಿಕೆಯಿಂದ ಎಲ್ಲ ಬಗೆಯ ಮನುಶ್ಯರಿಗೂ ಸಮನಾದ ಗಳಿಕೆಯಿದೆ. ಅವುಗಳೇನೆಂದರೆ
   ೧. ಹುಟ್ಟಿನಿಂದ ಏನೇ ಪಡೆದುಕೊಂಡರೂ ಎಲ್ಲರಿಗೂ ಒಂದೇ ಮಟ್ಟದ ಸಾಟಿತನ
   ೨. ಮಂದಿಯೊಲವಿಗೆ ಮನ್ನಣೆ
   ೩. ಹಲತನಕ್ಕೆ ಮನ್ನಣೆ ಮತ್ತು ಅವುಗಳ ನಡುವೆ ಹೊಂದಾಣಿಕೆಗೆ ಒತ್ತು
   ೪. ಎಲ್ಲರಿಗೂ ಬೇರು ಮಟ್ಟದ ಈಳಿಗೆ(ಸ್ವಾತಂತ್ರ್ಯ) ಮತ್ತು ಹಕ್ಕುಗಳು ಎತ್ತುಗೆಗೆ: ಯಾವ ಹೆದರಿಕೆಯಿಲ್ಲದೆ ಮಾತನಾಡುವ ಹಕ್ಕು
   ೫. ಯಾರೇ ಆದರೂ ನೆಮ್ಮದಿಯ ಮೂಲಕ ಮಂದಿಯ ಒಳಿತಿಗೆ ಕೂಡಣದಲ್ಲಿ ಮರ್ಪಾಟುಗಳನ್ನು ತರಬಹುದಾದ ಹಕ್ಕು

ಮಂದಿಯಾಳ್ವಿಕೆ ಹಿಂದಿದ್ದ ಏರ್ಪಾಟುಗಳಲ್ಲಿರುವ ಕೊರತೆಯನ್ನು ನೀಗಿಸುವ ಬರವಸೆಯನ್ನು ತೋರುತ್ತದೆ. ಮಂದಿಯಾಳ್ವಿಕೆಗಿಂತ ಚೆನ್ನಾಗಿರುವ ಏರ್ಪಾಟು ಸದ್ಯಕ್ಕಂತು ಕಾಣುತ್ತಿಲ್ಲ. ಮಂದಿಯಾಳ್ವಿಕೆಯ ಏರ್ಪಾಟನ್ನು ಗಟ್ಟಿಗೊಳಿಸುವುದರ ಮೂಲಕ ಎಲ್ಲರ ಹಿತವನ್ನು ಕಾಪಾಡಬಹುದಾಗಿದೆ. ಹಾಗಾಗಿ ಮಂದಿಯಾಳ್ವಿಕೆಗೆ ಬೆಲೆ ಕೊಡಬೇಕು ಮತ್ತು ಮಂದಿಯಾಳ್ವಿಕೆ ಎಂದರೆ ಅಯ್ದು ವರುಶಕ್ಕೊಮ್ಮೆ ವೋಟು ಕೊಟ್ಟು ಸುಮ್ಮನೆ ಕೂತುಕೊಳ್ಳುವುದಲ್ಲ, ಬದಲಾಗಿ ಮಂದಿಯಾಳ್ವಿಕೆಯ ಚಿಂತನೆಗಳನ್ನು ತಮ್ಮ ದಯ್ನಂದಿನ ಕೆಲಸಗಳಲ್ಲಿ ಜಾರಿಗೆ ತರಬೇಕು.

ಹೆಚ್ಚಿನ ಓದಿಗೆ ಈ ಕೆಳಗಿನ ಹೊತ್ತಗೆಯನ್ನು ಓದಬಹುದು:-
  Democracy: 80 Questions and Answers  - David Beetham & Kevin Boyle, National Book Trust, India

ಗುರುವಾರ, ಜನವರಿ 24, 2013

ಕನ್ನಡದ್ದೇ ಆದ ಪದಗಳನ್ನು ಏಕೆ ಕಟ್ಟಬೇಕು ?

     ಇತ್ತೀಚೆಗೆ ನಡೆದ ಒಂದು ಒಸಗೆಯಲ್ಲಿ ಸುದ್ದಿಯಾಳೊಬ್ಬರು ಮಾತಾಡುತ್ತಾ ಕನ್ನಡ ಸಾಹಿತ್ಯವನ್ನು ಹೆಚ್ಚು ಮಂದಿ ಅದರಲ್ಲೂ ಹಳ್ಳಿಯ ಮಂದಿ ಓದಿಲ್ಲ ಇಲ್ಲವೆ ಓದುತ್ತಿಲ್ಲ, ಆದರೂ ಅವರು ಕನ್ನಡವನ್ನೇ ಉಸಿರಾಗಿಸಿಕೊಂಡವರು, ಕನ್ನಡದಲ್ಲೇ ದುಡಿಮೆ ಮತ್ತು ಬದುಕನ್ನು ಕಟ್ಟಿಕೊಂಡವರು ಎಂದು ಹೇಳಿದರು. ಇಂತಹ ದಿಟಗನ್ನಡಿಗರಿಂದ ಕನ್ನಡ ಸಾಹಿತ್ಯ ದೂರವಾದುದು ಏಕೆ ಎಂಬ ಕೇಳ್ವಿ ನನ್ನನ್ನು ಆಗ ಕಾಡಿತು. ಹೆಚ್ಚಿನ ಮಂದಿಗೆ ಅನ್ನಿಸುವಂತೆ ಹಳ್ಳಿಗರು ಎಂದರೆ ಅಕ್ಶರ ಗೊತ್ತಿಲ್ಲದವರು ಇಲ್ಲವೆ ತಿಳಿವಳಿಕೆ ಇಲ್ಲದವರು, ಅವರ ಅರಿವಿಗೆ ಕನ್ನಡ ಸಾಹಿತ್ಯ ಎಟುಕಲಾರದು ಅಂತ ನನಗೆ ಅನ್ನಿಸಲಿಲ್ಲ. ಬದಲಾಗಿ ಕನ್ನಡ ಸಾಹಿತ್ಯದಲ್ಲೇ ಕೊರತೆ ಇಲ್ಲವೆ ತೊಡಕಿರಬೇಕೆಂದು ನನಗನ್ನಿಸಿತು. ಇದನ್ನು ಇನ್ನೂ ಆಳವಾಗಿ ಬಿಡಿನೋಟಕ್ಕೆ ಒಳಪಡಿಸಿದಾಗ ಈ ಅನಿಸಿಕೆ ದಿಟವೆಂದು ನಿಕ್ಕಿಯಾಯಿತು.

     ಇವತ್ತಿನ ಇಲ್ಲವೆ ಹೊಸಗನ್ನಡದ ಹೊತ್ತಿನಲ್ಲಿ ಉಂಟಾದ ಸಾಹಿತ್ಯ ತೊಡಕು ತೊಡಕಾದ ಪದಗಳನ್ನು ಬಳಸುತ್ತಿರುವುದರಿಂದ ಅದು ಸಾಮಾನ್ಯ ಕನ್ನಡಿಗನಿಗೆ ದೂರವಾಗಿಯೇ ಉಳಿದಿದೆ. ಬರಹದಲ್ಲಿ ಸಂಸ್ಕ್ರುತದ ಪದಗಳ ಬಳಕೆ ಎಲ್ಲೆ ಮೀರಿದೆ. ಎಶ್ಟರ ಮಟ್ಟಿಗೆ ಅಂದರೆ ಹೆಚ್ಚಿನ ಕನ್ನಡಿಗರಿಗೆ ಸಾಹಿತ್ಯ ಎಂಬ ಪದದ ಹುರುಳೇ ತಿಳಿದಿಲ್ಲ,  ಆದರೆ ಇದು ಕನ್ನಡಿಗರ ತಪ್ಪಲ್ಲ ಬದಲಾಗಿ ಇಂತಹ ತಿಳಿಯದ ಸಂಸ್ಕ್ರುತದ ಪದಗಳನ್ನು ಬಳಕೆಗೆ ತಂದವರದೇ ತಪ್ಪು. ಬರವಣಿಗೆ, ನಲ್ಬರಹ ಎಂಬ ಸುಲಬವಾದ ಪದಗಳಿರುವಾಗ ಬೇಡದಿದ್ದರೂ ಈ ರೀತಿ ಸಂಸ್ಕ್ರುತ ಪದಗಳ ಬಳಕೆ ಕನ್ನಡದ ಬರಹಗಳನ್ನು ಕಬ್ಬಿಣದ ಕಡಲೆಯನ್ನಾಗಿಸಿದೆ. ಹಾಗಾಗಿ ಸಲೀಸಾದ ಕನ್ನಡದ್ದೇ ಆದ ಪದಗಳನ್ನು ಕಟ್ಟಬೇಕಾಗಿದೆ. ಅವನ್ನು ಹೆಚ್ಚು ಹೆಚ್ಚು ಬರಹಗಳಲ್ಲಿ ಬಳಸಬೇಕಾಗಿದೆ. ಇಂತಹ ಬರಹಗಳನ್ನು ಹೆಚ್ಚಿನ ಮಂದಿಗೆ ತಲುಪಿಸಬೇಕಾಗಿದೆ. ಯಾವುದೇ ಬರಹಗಾರನಿಗೆ ತನ್ನ ಬರಹವು ಹೆಚ್ಚು ಹೆಚ್ಚು ಮಂದಿ ತಲುಪಬೇಕೆಂಬ ಗುರಿ ಇರುತ್ತದೆ ಏಕೆಂದರೆ ಆ ಬರಹದಲ್ಲಿ ಹೇಳಿರುವ ವಿಶಯಗಳನ್ನು ಹೆಚ್ಚಿನ ಮಂದಿಗೆ ತಿಳಿಸಬೇಕಾಗಿರುತ್ತದೆ. ಸುದ್ದಿಹಾಳೆಗಳನ್ನು ನಡೆಸುವವರ ಗುರಿಯೂ ಕೂಡ ಹೆಚ್ಚಿನ ಮಂದಿಗೆ ಬರಹಗಳ ಮೂಲಕ ಸುದ್ದಿಯನ್ನು ಮುಟ್ಟಿಸುವುದು, ತಮ್ಮ ಸುತ್ತಮುತ್ತ ಆಗುತ್ತಿರುವ ಆಗುಹಗಳ ಬಗ್ಗೆ ಮಂದಿಯಲ್ಲಿ ಅರಿವನ್ನು ಮೂಡಿಸುವುದೇ ಆಗಿದೆ. ಹಾಗಾಗಿ ಆದಶ್ಟೂ ಬರಹಗಳು ಸಲೀಸಾಗಿ ಓದುವಂತೆಯೂ, ತಿಳಿಯುವಂತೆಯೂ ಇರಬೇಕಾಗುತ್ತದೆ. ಇದಕ್ಕೆ ಕನ್ನಡದ್ದೇ ಆದ ಪದಕಟ್ಟಣೆ ನೆರವಿಗೆ ಬರುತ್ತದೆ.
ಪದಕಟ್ಟಣೆಯ ಗುರಿಗಳು:
     ಮೊದಲಿಗೆ, ಕನ್ನಡದ್ದೇ ಆದ ಪದಕಟ್ಟಣೆಯ ಗುರಿಯು ಇಂತಹ ಒಂದು ಕಟ್ಟಣೆಯ ಸಾದ್ಯತೆಯನ್ನು ತೋರಿಸಿಕೊಡುವುದೇ ಆಗಿದೆ. ಇವತ್ತಿನ ದಿನಗಳಲ್ಲಿ ಹೆಚ್ಚಾಗಿ ಓದಿಕೊಂಡವರು, ದೊಡ್ಡ ದೊಡ್ಡ ಬರಹಗಾರರು ಕೂಡ ಇಂಗ್ಲಿಶಿನಲ್ಲಿರುವ ಅರಿಮೆಯ ಹಲವು ಪದಗಳಿಗೆ ಕನ್ನಡದ್ದೇ ಆದ ಪದಗಳನ್ನು ಕಟ್ಟಲು ಆಗುವುದೇ ಇಲ್ಲವೆಂದು ನಂಬಿದ್ದಾರೆ. ಈ ನಂಬಿಕೆಯನ್ನು ಪದ ಕಟ್ಟುವುದರ ಮೂಲಕ ಹುಸಿಗೊಳಿಸಬೇಕಾಗಿದೆ.  ಇಲ್ಲಿಯವರೆಗೆ ಪದ ಕಟ್ಟಣೆ ದೊಡ್ಡ ಮಟ್ಟದಲ್ಲಿ ಆಗದಿರುವುದಕ್ಕೆ ಕಾರಣ ಕನ್ನಡ ನುಡಿಯಲ್ಲಿರುವ ಕೊರತೆಯಲ್ಲ, ಬದಲಾಗಿ ಕನ್ನಡಿಗರಲ್ಲಿರುವ ಕನ್ನಡದ ಬಗೆಗಿನ ಅರಿವಿನ ಕೊರತೆ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ.  ಕನ್ನಡದಲ್ಲಿ ಹೆಚ್ಚು ಹೆಚ್ಚು ಅರಿಮೆಯ ಪದಗಳು ಉಂಟಾದರೆ ಅದನ್ನು ಬಳಸಿಕೊಂಡು ಹೆಚ್ಚು ಹೆಚ್ಚು ಅರಿಮೆಯ ಬರಹಗಳನ್ನು ಬರೆಯಲು ಬರುತ್ತದೆ. ಒಟ್ಟಿನಲ್ಲಿ ಹೊಸ ಹೊಸ ಅರಿಮೆಗಳನ್ನು ಈ ಮೂಲಕ ಕನ್ನಡಕ್ಕೆ ತರಬಹುದಾಗಿದೆ.
     ಎರಡನೆಯದಾಗಿ, ಯಾವುದೇ ನುಡಿಯ ಮೇಲ್ಮೆಗಳಲ್ಲಿ ಅರಿದಾದುದು ಆ ನುಡಿಯ ಪದಸಿರಿ ಎಂದು ಹೇಳಬಹುದು. ಈ ಪದಸಿರಿಯು ಹೆಚ್ಚು ಹೆಚ್ಚು ಕನ್ನಡದ್ದೇ ಆದರೆ ಕನ್ನಡ ಕನ್ನಡವಾಗಿಯೇ ಉಳಿಯುತ್ತದೆ. ಕನ್ನಡವು ಕನ್ನಡವಾಗಿಯೇ ಉಳಿದರೆ ಕನ್ನಡಿಗರಲ್ಲಿ ಉಳಿದ ಬಾರತೀಯರಿಗಿಂತ ತಾವು ಬೇರೆ ಮತ್ತು ತಮ್ಮ ನುಡಿ ಬೇರೆ ಎಂಬ ಅರಿವು ಬಲವಾಗುತ್ತದೆ. ಈ ಅರಿವು ಆಳ್ಮೆಯ(ರಾಜಕೀಯ) ಅಂಗಳದಲ್ಲಿ ನೆಲೆ ನಿಂತರೆ ಕನ್ನಡ, ಕರ್ನಾಟಕ ಮತ್ತು ಕನ್ನಡಿಗ ಹೆಚ್ಚು ಗಟ್ಟಿಯಾಗಬಹುದಾಗಿದೆ. ಈ ಗಟ್ಟಿತನದಿಂದ ಕನ್ನಡಿಗರು ತಮ್ಮ ಹಕ್ಕು, ತಮ್ಮ ಈಳಿಗೆ ಮತ್ತು ತಮ್ಮತನವನ್ನು ಉಳಿಸಿ ಬೆಳೆಸಿಕೊಳ್ಳಬಹುದಾಗಿದೆ. ಯಾವ ಜನಾಂಗ ತನ್ನತನವನ್ನು ಬಿಟ್ಟುಕೊಡುವುದಿಲ್ಲವೊ ಆ ಜನಾಂಗ ಕೆಚ್ಚಿನ(ಸ್ವಾಬಿಮಾನದ) ಬದುಕನ್ನು ಕಟ್ಟಿಕೊಳ್ಳಬಹುದಾಗಿದೆ. ಈ ಕೆಚ್ಚಿನ ಬದುಕಿನಿಂದ ಕನ್ನಡಿಗರು ಹೆಚ್ಚಿನದನ್ನು ಸಾದಿಸಲು ಬರುತ್ತದೆ.
     ಕೊನೆಯದಾಗಿ, ಹೊಸದಾಗಿ ಕಟ್ಟಿದ ಪದಗಳನ್ನು ಮಂದಿಯ ಮುಂದಿಡಲು ಮತ್ತು ಅದನ್ನು ಬಳಕೆಗೆ ತರಲು ಸುದ್ದಿಹಾಳೆಗಳು ನೆರವೀಯಬಲ್ಲುವು. ಇಂತಹ ಹೊಸ ಆರಯ್ಕೆಗಳಿಗೆ(ಪ್ರಯೋಗಗಳಿಗೆ) ಸುದ್ದಿಹಾಳೆಗಳು ಬೆಂಬಲ ಕೊಡುವುದರಿಂದ ಪದ ಕಟ್ಟುವವರಿಗೆ ಹುರುಪು ತುಂಬಿದಂತಾಗುತ್ತದೆ. ಪದ ಕಟ್ಟುವವರು ಮತ್ತು ಪದ ಬಳೆಕೆ ಮಾಡುವವರ ನಡುವೆ ಸುದ್ದಿಹಾಳೆಯು ಕೊಂಡಿಯಂತೆ ಕೆಲಸ ಮಾಡಬಹುದಾಗಿದೆ. ಇದರಿಂದ ಕನ್ನಡದ ಕಸುವನ್ನು ಇನ್ನು ಚೆನ್ನಾಗಿ ದುಡಿಸಿಕೊಳ್ಳಲು ಬರುತ್ತದೆ. ಇದರಿಂದ ಹೆಚ್ಚಿನ ಮಂದಿಯ ಅರಿವಿನ ಮಟ್ಟ ಮೇಲೇರುತ್ತದೆ. ಮೇಲ್ಮಟ್ಟದ ಅರಿವನ್ನು ಹೊಂದಿರುವ ಕೂಡಣದ ಏಳಿಗೆ ತಾನಾಗಿಯೇ ಆಗುತ್ತದೆ.

ಪದಪಟ್ಟಿ
 ಒಸಗೆ - occasion
 ಆರಯ್ಕೆ - experiment
 ಅರಿದು - important
 ಕೆಚ್ಚು   - pride
 ಸುದ್ದಿಯಾಳು - press reporter
 ಆಳ್ಮೆ - politics

ಬುಧವಾರ, ಜನವರಿ 23, 2013

ಕನ್ನಡ, ಇರ್ನುಡಿತನ ಮತ್ತು ಕೂಡಣ

ಇತ್ತೀಚಿನ ದಿನಗಳಲ್ಲಿ ಮಂದಿಯ ಇರ್ನುಡಿತನದಲ್ಲಿರುವ  ಹೆಚ್ಚುಗಾರಿಕೆಯ ಬಗ್ಗೆ ಮಾತನಾಡಲಾಗುತ್ತಿದೆ ಯಾಕಂದರೆ ಇರ್ನುಡಿತನದಿಂದ ಮಂದಿಯ ಅರಿವಿನ ಮತ್ತು ಕಲಿಯುವ ಚಳಕಗಳ ಮೇಲೆ ಒಳ್ಳೆಯ ಪರಿಣಾಮಗಳಾಗುತ್ತವೆ ಎಂಬುದನ್ನು ಅರಕೆಗಳ ಮೂಲಕ ತೋರಿಸಿಕೊಡಲಾಗಿದೆ. ಹಾಗಾಗಿ ಇರ್ನುಡಿತನವು ಕಲಿಯುವ ಮಕ್ಕಳಿಗೆ ಒಳ್ಳೆಯದು ಎಂದು ತೀರ್ಮಾನಿಸಲಾಗಿದೆ. ಮಿಂಬಲೆಯಲ್ಲಿ ಹುಡುಕಿದರೆ ಇದರ ಬಗ್ಗೆ ಹೆಚ್ಚಿನ ತಿಳಿವು ಸಿಗುತ್ತದೆ.

      ಆದರೆ ದಿಟವಾಗಲೂ ಯಾವುದೇ ಒಂದು ಕೂಡಣದಲ್ಲಿ ಸಂಪೂರ್ಣವಾಗಿ ಇರ್ನುಡಿತನದ ಪರಿಸರವು ಇರುವುದಿಲ್ಲ. ಒಂದು ಕೂಡಣದಲ್ಲಿ ಅಂದರೆ ಕನ್ನಡದಂತಹ(ಕರ್ನಾಟಕದಂತಹ) ಕೂಡಣದಲ್ಲಿ ಎಲ್ಲರೂ ಇರ್ನುಡಿಗರಾಗಿರುವುದಿಲ್ಲ. ಹಾಗೆ ಎಲ್ಲರೂ ಇರ್ನುಡಿಗರಾಗಬೇಕೆಂದು ನಾವು ಬಯಸುವುದು ಕೂಡ ತಪ್ಪಾಗುತ್ತದೆ ಯಾಕಂದರೆ ಯಾರೇ ಆದರೂ ಇರ್ನುಡಿಗರಾಗಬೇಕಾದರೆ ಎರಡನೇ ನುಡಿಯ ಪರಿಸರ ಬೇಕಾಗುತ್ತದೆ. ಎಲ್ಲರಿಗೂ ಇರ್ನುಡಿಯ ಪರಿಸರ ಇರುವುದಿಲ್ಲ. ಒಂದು ಊಹೆಯ ಪ್ರಕಾರ ಕನ್ನಡದಲ್ಲಿ ಇರ್ನುಡಿತನವು ಹೀಗೆ ಇರಬಹುದು.

ಕನ್ನಡದ ಕೂಡಣ

ಚಿತ್ರದಲ್ಲಿ ಕಾಣುವಂತೆ ಕನ್ನಡದ ಕೂಡಣವನ್ನು ಎರಡು ಪದರಗಳಲ್ಲಿ ತೋರಿಸಲಾಗಿದೆ. ಹೊರಪದರದಲ್ಲಿ ಇರ್ನುಡಿತನವಿದೆ ಅಂದರೆ ಕನ್ನಡಿಗರಲ್ಲಿ ಕೆಲವು ಮಂದಿ ಮಾತ್ರ ಕನ್ನಡ ಮತ್ತು ಇಂಗ್ಲಿಶ್ ನುಡಿಗಳಲ್ಲಿ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ನುಡಿಚಳಕವನ್ನು ಹೊಂದಿದ್ದಾರೆ. ಆದರೆ ಹಲವು ಮಂದಿ ಇನ್ನು ಒರ್ನುಡಿಗರಾಗಿಯೇ ಉಳಿದಿದ್ದಾರೆ. ಇಲ್ಲಿ ಒರ್ನುಡಿಗರ(ಕನ್ನಡವೊಂದನ್ನೇ ಓದಿ, ಬರೆದು, ಮಾತನಾಡಬಲ್ಲವರು) ಮತ್ತು ಇರ್ನುಡಿಗರ(ಕನ್ನಡ ಮತ್ತು ಇಂಗ್ಲಿಶ್ ಎರಡನ್ನೂ ಓದಿ, ಬರೆದು, ಮಾತನಾಡಬಲ್ಲವರು)ಎಣಿಕೆ ಎಶ್ಟೆಶ್ಟಿದೆ ಎಂದು ನಿಶ್ಚಿತವಾಗಿ ಹೇಳಲಾಗದಿದ್ದರೂ  ಒರ್ನುಡಿಗರ ಎಣಿಕೆ ಇರ್ನುಡಿಗರ ಎಣಿಕೆಗಿಂತ ತುಂಬ ಹೆಚ್ಚಿದೆ ಎಂದು ನಿಶ್ಚಿತವಾಗಿ ಹೇಳಬಹುದು. ಕನ್ನಡದ ಕೂಡಣದಲ್ಲಿ ಇನ್ನು ಹಲವು ನುಡಿಗಳು (ತುಳು, ಕೊಂಕಣಿ ಇತರೆ) ಇದ್ದರೂ ಕರ್ನಾಟಕದಲ್ಲಿ ಕಲಿಕೆಯ ಒಯ್ಯುಗೆಯಾಗಿ ಹೆಚ್ಚಾಗಿ ಕನ್ನಡ ಮತ್ತು ಅದನ್ನು ಬಿಟ್ಟರೆ ಇಂಗ್ಲಿಶ್ ನುಡಿಯನ್ನು ಬಳಸಲಾಗುತ್ತಿದೆ. ಹಾಗಾಗಿ ಈ ಬರಹದಲ್ಲಿ ಕನ್ನಡ ಮತ್ತು ಇಂಗ್ಲಿಶ್ ಎರಡು ನುಡಿಗಳನ್ನು ಮಾತ್ರ ಪರಿಗಣಿಸಲಾಗಿದೆ. 
        ಮೇಲೆ ತೋರಿಸಿದಂತೆ ಕನ್ನಡದ ಕೂಡಣದಲ್ಲಿ ಇರ್ನುಡಿತನದ ಒತ್ತರ ಕಡಿಮೆ ಇರುವಾಗ ಹೆಚ್ಚಿನ ಕನ್ನಡಿಗರ (ಒರ್ನುಡಿಗರ) ಅರಿಮೆ ಮತ್ತು ಚಳಕಗಳು ಮೇಲ್ಮೆಯನ್ನು ಪಡೆಯಲಾರದು ಎಂದು ಹೇಳುವವರು ಇದ್ದಾರೆ. ಅದು ದಿಟವಾದರೆ ಕನ್ನಡದ ಕೂಡಣವನ್ನು ಒಮ್ಮಿಂದೊಮ್ಮೆಗೆ ಇರ್ನುಡಿತನದೆಡೆಗೆ ಕೊಂಡೊಯ್ಯಬೇಕೆ? ಇದಕ್ಕೆ ಬಗೆಹರಿಕೆಗಳೇನು?  ಎಂಬ ಕೇಳ್ವಿಯು ನಮ್ಮ ಮುಂದೆ ಬರುತ್ತದೆ.
       ಎಲ್ಲ ಕಡೆಗಳಿಂದ ಅಳೆದು, ತೂಗಿ ನೋಡಿದರೂ ಎಲ್ಲ ಕನ್ನಡಿಗರು ಸಂಪೂರ್ಣವಾಗಿ ಒರ್ನುಡಿಗರಾಗಿಯೇ ಉಳಿಯಬೇಕಾಗಿಲ್ಲ ಇಲ್ಲವೆ ಎಲ್ಲರೂ ಇರ್ನುಡಿಗರಾಗಬೇಕಾಗಿಯೂ ಇಲ್ಲ ಯಾಕಂದರೆ ಎರಡೂ ಕೂಡ ವಿರುದ್ದ ದಿಕ್ಕಿನಲ್ಲಿ ವಿಪರೀತ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುತ್ತವೆಯತ್ತ ಹೊರತು ಒಂದು ಸಮನ್ವಯ ಸ್ತಿತಿಯತ್ತ ನಮ್ಮನ್ನು ಕೊಂಡೊಯ್ಯುವುದಿಲ್ಲ. ಈ ಸಮನ್ವಯ ಸ್ತಿತಿಯಿಂದ ಮಾತ್ರ ಕೂಡಣದ ಏಳಿಗೆ ಸಾದ್ಯ ಎಂಬುದನ್ನು ಇಲ್ಲಿ ಮನಗಾಣಬಹುದಾಗಿದೆ.
       ಹಾಗಾದರೆ ಇಂತಹ ಸಮನ್ವಯ ಸ್ತಿತಿಯತ್ತ ಕನ್ನಡದ ಕೂಡಣವನ್ನು ಕೊಂಡೂಯ್ಯುವುದು ಹೇಗೆ? - ಇದಕ್ಕೆ ಉತ್ತರ ಹೀಗಿದೆ- ಕನ್ನಡದ ಕೂಡಣವನ್ನು ಒಂದು ಸಮನ್ವಯ ಸ್ತಿತಿಯತ್ತ ಕೊಂಡೊಯ್ಯಲು ಒರ್ನುಡಿಗರ ಏಳಿಗೆಗೆ ಬೇಕಾದ ಎಲ್ಲ ಅರಿಮೆಗಳು ಕನ್ನಡದಲ್ಲಿಯೇ ದೊರಯುವಂತಾಗಬೇಕು ಯಾಕಂದರೆ ಒರ್ನುಡಿಗರ ಕಲಿಕೆಯು ಕನ್ನಡದಲ್ಲಿಯೇ ಆಗುತ್ತಿರುತ್ತದೆ. ಒರ್ನುಡಿಗರಿಗೆ ಕನ್ನಡದಲ್ಲಿ ಕಲಿಕೆ ಆದರೇನೆ ಅವರ ಕಲಿಕೆ ಚೆನ್ನಾಗಿ ನಡೆಯಬಲ್ಲುದು. ಕನ್ನಡದಲ್ಲೇ ಎಲ್ಲ ಅರಿಮೆಗಳು ದೊರೆಯಬೇಕಾದರೆ ಇರ್ನುಡಿಗರ ಮೇಲೆ ಕೆಲವು ಹೊಣೆಗಾರಿಕೆಗಳು ಬೀಳುತ್ತವೆ. ಇರ್ನುಡಿಗರು ತಮ್ಮ ಚಳಕಗಳನ್ನು ಬಳಸಿಕೊಂಡು ಇಂಗ್ಲಿಶಿನಲ್ಲಿರುವ ಎಲ್ಲ ಅರಿಮೆಗಳನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ತೊಡಗಬೇಕಾಗುತ್ತದೆ. ಇದನ್ನು ಒರ್ನುಡಿಗರು ಬಳಸಿಕೊಂಡು ತಮ್ಮ ಅರಿವನ್ನು ಮತ್ತು ಮಾಡುಗತನವನ್ನು ಹೆಚ್ಚಿಸಿಕೊಂಡು ಅದನ್ನು ಕಲಿಕೆಯಲ್ಲಿ ಮತ್ತು ದುಡಿಮೆಯಲ್ಲಿ ಬಳಸಿಕೊಳ್ಳಬಹುದು. ಇದಲ್ಲದೆ ಒರ್ನುಡಿಗರು ತಮ್ಮ ಕಲಿಕೆಯಲ್ಲಿ ಇಲ್ಲವೆ ದುಡಿಮೆಯಲ್ಲಿ ಪಡೆದ ’ಕಂಡುಕೊಳ್ಳುವಿಕೆ’ಗಳನ್ನು ಪ್ರಪಂಚಕ್ಕೆ ಮುಟ್ಟಿಸಲು ಇರ್ನುಡಿಗರ ನೆರವನ್ನು ಪಡೆದುಕೊಳ್ಳಬಹುದು. ಹೀಗೆ ಅವರು ತಮ್ಮ ಒರ್ನುಡಿತನವನ್ನು ಉಳಿಸಿಕೊಂಡು  ಇರ್ನುಡಿತನದ ಇಲ್ಲದಿರುವ ಕೊರತೆಯನ್ನು ನೀಗಿಸಿಕೊಳ್ಳಬಹುದು. ಇದು ಚೆನ್ನಾಗಿ ನಡೆಯಲು ಇರ್ನುಡಿಗರ ಮತ್ತು ಒರ್ನುಡಿಗರ ನಡುವೆ ಪಾಲುದಾರಿಕೆ ಏರ್ಪಡಬೇಕಾಗುತ್ತದೆ. ಸರ್ಕಾರದವರು ಇಲ್ಲವೆ ಕಾಸಗಿ ಸಂಗ/ಸಂಸ್ತೆಗಳು ಈ ಪಾಲುದಾರಿಕೆ ಏರ್ಪಡುವಂತೆ ನೋಡಿಕೊಳ್ಳಬೇಕಾಗುತ್ತದೆ. ಈ ಪಾಲುದಾರಿಕೆಯು ಕನ್ನಡದ ಕೂಡಣದ ಒಳಗೆಯೇ ನಡೆಯುವುದರಿಂದ ಇದು ಪರಿಣಾಮಕಾರಿಯಾಗಬಲ್ಲುದು ಯಾಕಂದರೆ ಕನ್ನಡದ ಕೂಡಣದ ಒಳಗೆಯೇ ಒಗ್ಗಟ್ಟನ್ನು ಸಾದಿಸುವುದು ಅಶ್ಟು ಕಶ್ಟವಲ್ಲ. ಕನ್ನಡದ ಕೂಡಣವನ್ನು ಹಿಡಿದಿಟ್ಟಿರುವುದು ’ಕನ್ನಡ’ ನುಡಿಯೇ ಅಲ್ಲವೆ?
      ಒರ್ನುಡಿತನವೂ ಬೇಕು , ಇರ್ನುಡಿತನವೂ ಬೇಕು ಆದರೆ ಒರ್ನುಡಿತನಕ್ಕೆ ಇಂಬು ಕೊಡುವಂತೆ ಇರ್ನುಡಿತನ ಇರಬೇಕೇ ಹೊರತು ಒರ್ನುಡಿತನವನ್ನು ನುಂಗಿಹಾಕುವ ಇರ್ನುಡಿತನವು ಕಂಡಿತ ಕನ್ನಡದ ಕೂಡಣಕ್ಕೆ ಬೇಡ ಅಂದರೆ ಕನ್ನಡವನ್ನು ನುಂಗಿ ಹಾಕುವಶ್ಟರ ಮಟ್ಟಿಗೆ ಇಂಗ್ಲಿಶಿನ ಅವಶ್ಯಕತೆ ಕನ್ನಡದ ಕೂಡಣಕ್ಕಿಲ್ಲ.

ಪದಪಟ್ಟಿ
ಒರ್ನುಡಿತನ - Monolingualism
ಇರ್ನುಡಿತನ - Bilingualism
ಒಯ್ಯುಗೆ      - Medium
ಮಿಂಬಲೆ     - Internet
ಕೂಡಣ      - Society

ಶುಕ್ರವಾರ, ಜನವರಿ 18, 2013

’ವ್’ ಮುಚ್ಚುಲಿಯ ಬೀಳುವಿಕೆ


ಆಡುಗನ್ನಡದಲ್ಲಿ ’ವ’ ಇಂದ ಸುರುವಾಗುವ ಪದಗಳಲ್ಲಿ ಒಂದು ಉಲಿಯೊಲವನ್ನು ಗಮನಿಸಿಬಹುದು. ಇಲ್ಲಿ ’ವ’ಇಂದ ಸುರುವಾಗುವ ಕೆಲವು ಪದಗಳನ್ನು ಕೊಡಲಾಗಿದೆ.

ಬರಹಗನ್ನಡ  ಆಡುಗನ್ನಡ              ಬಿಡಿಸಿಕೆ
ವಿರೋದ         ಇರೋದ              ವ್+ಇ           (’ವ್’ ಬೀಳುವಿಕೆ ಆಗಿದೆ)
 ವೀರ             ಈರ                   ವ್+ಈ             (’ವ್’ ಬೀಳುವಿಕೆ ಆಗಿದೆ)
 ವೆಟ್ಟೆ             ಎಟ್ಟೆ(ಯೆಟ್ಟೆ)            ವ್+ಎ           ( ’ವ್’ ಬೀಳುವಿಕೆ ಆಗಿದೆ)
(Heat)     
 ವೆಂಕಟ         ಎಂಕಟ(ಯಂಕಟ)       ವ್+ಎ         (’ವ್’ ಬೀಳುವಿಕೆ ಆಗಿದೆ)
ವೇಶ             ಏಸ(ಯಾಸ)            ವ್+ಏ           (’ವ್’ ಬೀಳುವಿಕೆ ಆಗಿದೆ)

ಈ ಮೇಲಿನ ಪದಗಳಲ್ಲಿನ ಬಿಡಿಸಿಕೆ ನೋಡಿದಾಗ ’ವ್’ ಎಂಬ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ ಸೇರಿ ವಿ, ವೀ, ವೆ, ವೇ ಎಂಬ ’ಉಲಿಕಂತೆ’ಗಳುಂಟಾಗಿದೆ. ಹಾಗಾಗಿ ’ವ್’ಬೀಳುವಿಕೆಗೂ ಮತ್ತು ಅದರ ಮುಂದಿರುವ ತೆರೆಯುಲಿಗೂ ನಂಟಿದೆ ಎಂದು ಹೇಳಬಹುದು.

ಉಲಿಯೊಲವಿನ ಹೇಳಿಕೆ: 
       "ಯಾವಾಗ ’ವ್’ ಮುಚ್ಚುಲಿಯು ’ಯ್’ ಗುಂಪಿನ ತೆರೆಯುಲಿಯೊಂದಿಗೆ(ಇ, ಈ, ಎ, ಏ) ಸೇರಿಕೆಯಾಗುವುದೋ ಆಗ ಆಡುಗನ್ನಡದಲ್ಲಿ ’ವ್’ ಮುಚ್ಚುಲಿಯು ಬಿದ್ದು ಹೋಗುತ್ತದೆ’

ಬರಹಗನ್ನಡ     ಆಡುಗನ್ನಡ           ಬಿಡಿಸಿಕೆ
೧ ವರಸೆ           ವರಸೆ                  ವ್+ಅ        (’ವ್’ ಬೀಳುವಿಕೆ ಆಗಿಲ್ಲ)
೨ ವಾಲು           ಓಲು                   ವ್+ಆ        (’ವ್’ ಬೀಳುವಿಕೆ ಆಗಿಲ್ಲ)
೩ ವೊಲ್           ಒಲ್                   ವ್+ಒ        (’ವ್’ ಬೀಳುವಿಕೆ ಆಗಿಲ್ಲ)
೪ ವೋಮ         ಓಮ                   ವ್+ಓ        (’ವ್’ ಬೀಳುವಿಕೆ ಆಗಿಲ್ಲ)
 (weed)

ಮೇಲಿನ ’ವ್’ ಎಂಬ ಮುಚ್ಚುಲಿಯು ’ವ್’ ಗುಂಪಿನ ತೆರೆಯುಲಿಗಳೊಂದಿಗೆ(ಅ,ಆ,ಒ,ಓ) ಸೇರಿಕೆಯಾಗಿ ಉಲಿಕಂತೆಗಳುಂಟಾಗಿವೆ.

೩, ೪ ರಲ್ಲಿ  ವೊ->ಒ, ವೋ->ಓ ಎಂಬ ಎತ್ತುಗೆಯನ್ನು ನೋಡಿದಾಗ ಅಲ್ಲಿ ’ವ್’ಮುಚ್ಚುಲಿಯ ಬೀಳುವಿಕೆಯಾಗಿರುವಂತೆ ಕಂಡರೂ ಅಲ್ಲಿ ದಿಟವಾಗಲೂ ಬೀಳುವಿಕೆಯಾಗಿಲ್ಲ. ಬದಲಾಗಿ  ಒ ಮತ್ತು ಓ ’ವ್’ ಗುಂಪಿನ ತೆರೆಯುಲಿಗಳೇ ಆಗಿರುವುದರಿಂದ ಒಂದರ ಬದಲು ಬೇರೊಂದು(ಒ<->ವ, ಓ<->ವೋ(ವಾ)) ಬದಲಾಗುವುದು ಇತರ ಕನ್ನಡದ ಪದಗಳಲ್ಲೂ ಕಾಣಬಹುದು

ಓಟ <->ವಾಟ
ಒತ್ತು <->ವತ್ತು (ವೊತ್ತು)
ಓಲೆ <->ವಾಲೆ

ತಿರುಳು:  ಕನ್ನಡ ಉಲಿಯೊಲವನ್ನು ಗುರುತಿಸುವ ಮತ್ತು ಅದರ ಬಗ್ಗೆ ಬಿಡಿನೋಟಗಳನ್ನು ಬರೆದಿಡಬೇಕಾಗಿದೆ. ಅಂತಹ ಮೊಗಸಿನಲ್ಲಿ ಈ ಮೇಲಿನ ’ವ್’ ಮುಚ್ಚುಲಿಯ ಬೀಳುವಿಕೆಯನ್ನು ವಿವರಿಸಲಾಗಿದೆ.

ಬುಧವಾರ, ಅಕ್ಟೋಬರ್ 24, 2012

ಹೊಸಗನ್ನಡದಲ್ಲಿ ಮೂಗುಲಿಯ ಬೀಳುವಿಕೆ

ಯಾವುದೆ ಪದದಲ್ಲಿ ಎರಡನೇ ಮುಚ್ಚುಲಿಯಾಗಿ ಮೂಗುಲಿ ಬಂದಿದ್ದರೆ ಮತ್ತು ಅದಕ್ಕೆ ಮುನ್ನ ಉದ್ದ ತೆರೆಯುಲಿ ಇದ್ದರೆ ಆಗ ಹೊಸಗನ್ನಡದಲ್ಲಿ ಆ ಮೂಗುಲಿ ಬಿದ್ದು ಹೋಗಿದೆ. ಅಂದರೆ ’ಮುಉತೆಮೂಮುತೆ’ ಮಾದರಿಯ ಪದಗಳಲ್ಲಿ ಮೂಗುಲಿ ಬಿದ್ದು ಹೋಗಿದೆ. ಅಂದರೆ ಅದು ’ಮುಉತೆಮುತೆಮಾದರಿಯ ಪದವಾಗಿ ಮಾರ್ಪಾಡಾಗಿದೆ

ಮು= ಮುಚ್ಚುಲಿ(ವ್ಯಂಜನ, consonant)
ಉತೆ = ಉದ್ದ ತೆರೆಯುಲಿ(ದೀರ್ಗ ಸ್ವರ, long vowel)
ಮೂ= ಮೂಗುಲಿ (ಅನುನಾಸಿಕ, nasal)

ಎತ್ತುಗೆಗಳು:-
ಮುಉತೆಮೂಮುತೆ                     => ಮುಉತೆಮುತೆ
೧. ಸೋಂಕು = ಸ್+ಓ+೦+ಕ್+ಉ => ಸೋಕು
೨. ನಾಂಟು = ನ್+ಆ+ಣ್+ಟ್+ಉ => ನಾಟು
೩. ನಾಂಚು = ನ್+ಆ+ಣ್+ಚ್+ಉ => ನಾಚು
೪. ನಾಂದು = ನ್+ಆ+ನ್+ದ್+ಉ => ನಾದು
೫. ನೂಂಕು = ನ್+ಊ+೦+ಕ್+ಉ => ನೂಕು
೬. ದಾಂಟು = ದ್+ಆ+ಣ್+ಟ್+ಉ => ದಾಟು
೭. ದೂಂಟು = ದ್+ಊ+ಣ್+ಟ್+ಉ=> ದೂಟು , ದೂಡು
೮. ಮೀಂಟು = ಮ್+ಈ+ಣ್+ಟ್+ಉ=> ಮೀಟು
೯. ಮೂಂಗ = ಮ್+ಊ+೦+ಗ್+ಅ => ಮೂಗ
೧೦. ತಾಂಗು = ತ್+ಆ+೦+ಗ್+ಉ => ತಾಗು

ಆದರೆ ಮೂಗುಲಿಯನ್ನು ಬಿಡುವ ಮಾರ್ಪಾಡಿಗೆ ಒಳಗಾಗದ ಪದಗಳು ಹೊಸಗನ್ನಡದಲ್ಲಿ ಅಶ್ಟು ದಿನಬಳಕೆಗೆ ಬರದೇ ಹೋಯಿತು.

ಎತ್ತುಗೆಗೆ:

೧. ನೋಂಪು(ವ್ರತ) = ನ್+ಓ+ಮ್+ಪ್+ಉ.... ಹೆಚ್ಚು ಬಳಕೆಯಲ್ಲಿದ್ದರೆ ಇದೂ ಕೂಡ ನೋಪು ಆಗುತ್ತಿತ್ತೇನೊ ?!
೨. ಮಾಂಜು(heal) = ಮ್+ಆ+೦+ಜ್+ಉ
೩. ಪಾಂಗು (manner, form, shape, likeness)
೪. ಪಾಂಬೆ, ಪಾಣ್ಬೆ (ಕುಣಿತಗಾರ್ತಿ)

ಬುಧವಾರ, ಅಕ್ಟೋಬರ್ 17, 2012

ಲಿಪಿ ಸುದಾರಣೆಯ ಗುರಿಗಳು ಮತ್ತು ಜಾರಿಗೆ ತರುವುದು

ಲಿಪಿ ಸುದಾರಣೆಯ ಗುರಿಗಳು :-

೧. ಮಹಾಪ್ರಾಣವನ್ನು ಇಲ್ಲಗೊಳಿಸುವುದಲ್ಲ. ಬದಲಾಗಿ ಕನ್ನಡ ಸಮಾಜದಲ್ಲಿ ಬಿತ್ತಲಾದ ಮಹಾಪ್ರಾಣದ ಬಗೆಗಿನ 'ಸುಳ್ಳು ಮೇಲರಿಮೆ'ಯನ್ನು ಹೋಗಲಾಡಿಸುವುದು. ಅದಕ್ಕಾಗಿ ಹೆಚ್ಚು ಹೆಚ್ಚು ಬರಹಗಳು ಮಹಾಪ್ರಾಣವಿಲ್ಲದೇ ಬರಬೇಕಾಗಿದೆ. ಅದಕ್ಕಾಗಿ ಹೆಚ್ಚು ಹೆಚ್ಚು ಮಂದಿಯು ಮಹಾಪ್ರಾಣ ಇಲ್ಲದೆ ಬರೆಯಬೇಕಾಗಿದೆ. ಏಕೆ ಹಾಗೆ ಬರೆಯಬೇಕು ಎಂಬುದರ ಬಗ್ಗೆ ಈಗಾಗಲೆ ಶಂಕರಬಟ್ಟರ ಹೊತ್ತಿಗೆಗಳಲ್ಲಿ ಮತ್ತು ಈ ಮಿಂಬರಹದಲ್ಲೂ ಕೂಡ ಹೇಳಲಾಗಿದೆ. 
 
೨. (೧) ರಲ್ಲಿ ಹೇಳಿರುವುದು ಷ, ವಿಸರ್ಗ(ಃ) ಗಳಿಗೂ ಒಪ್ಪುವುದು 
 
೩. ೧ ಮತ್ತು ೨ ಮಾಡುವುದರಿಂದ ೯೦% ಕನ್ನಡಿಗರಲ್ಲಿ ನಾವು ಕೀಳರಿಮೆಯನ್ನು ಹೋಗಲಾಡಿಸಬಹುದು. ಅಲ್ಲದೆ ಇವರನ್ನು ಹೆಚ್ಚು ಹೆಚ್ಚು ಬರಹದೆಡೆಗೆ ಸೆಳೆಯಬಹುದು. ಬರಹದ ಕಡೆಗೆ ಸೆಳೆದಾಗ ಅವರೇ ಮುಂದೆ ಚಿಂತನೆಯನ್ನು ಮಾಡಬಲ್ಲವರಾಗುತ್ತಾರೆ. ಚಿಂತನೆಯಿಂದ ಅವರು ತಮ್ಮ ಏಳಿಗೆಯ ದಾರಿಯನ್ನು ಕಂಡುಕೊಳ್ಳಬಲ್ಲರು. ಲಿಪಿಸುದಾರಣೆಯಿಂದ ಬರಹ ಗೊತ್ತಿಲ್ಲದವರ ಇಲ್ಲವೆ ಬರಹದಿಂದ ದೂರವುಳಿದವರ ಇಲ್ಲವೆ ಬರಹವನ್ನು ಚೆನ್ನಾಗಿ ತಿಳಿಯದವರಲ್ಲಿ ಒಂದು ದೊಡ್ಡ ಮಟ್ಟದ ಮಾರ್ಪಾಡು ಅಗಬಲ್ಲುದು ಎಂಬುದೇ ಇಲ್ಲಿ ಮುಕ್ಯ ಗುರಿ. ಹಲಜನರ ಏಳಿಗೆಯೇ ಮಂದಿಯಾಳ್ವಿಕೆಯ ಮುಕ್ಯ ಗುರಿ.
 
ಲಿಪಿಸುದಾರಣೆಯನ್ನು ಜಾರಿಗೆ ತರುವುದರ ಬಗ್ಗೆ:-
 
೧.ಲಿಪಿಸುದಾರಣೆಗೆ ತರುವುದು ತುಂಬ ಸುಲಬವಾಗಿದೆ ಯಾಕಂದರೆ ಇಲ್ಲಿ ಆಗಬೇಕಿರುವುದು ಬರಿಗೆಗಳನ್ನು ಬಿಡಬೇಕಾಗಿರುವುದು. ಇಲ್ಲಿ ಹೊಸದಾಗಿ ಕಲಿಯುವುದು ಏನೂ ಇಲ್ಲ. ಆಗಬೇಕಿರುವುದೆಲ್ಲ ಬರೀ ಬರಿಗೆಗಳನ್ನು ಬರಹದಿಂದ ಬಿಡಬೇಕಾಗಿರುವುದು. 
 
೨.  ಕೆಲವರಲ್ಲಿ ಲಿಪಿಸುದಾರಣೆಯನ್ನು ಬಿಟ್ಟು ಪದಕಟ್ಟಣೆಯನ್ನು ಮಾಡಬಹುದು ಎಂಬ ನಿಲುವು ಇದೆ. ಪದಕಟ್ಟಣೆ ಆಗಬೇಕಾಗಿರುವುದು ಅರಿಮೆಯ ಪದಗಳಿಗೆ ಮತ್ತು ಯಾವುದೇ ಹೊರನುಡಿಯ ಪದವಿರಲಿ ಈಗಾಗಲೆ ಕನ್ನಡಿಗರ ನಾಲಿಗೆಯು ಅದನ್ನು ಕನ್ನಡಕ್ಕೆ ಹೇಗೆ ಒಗ್ಗಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಹೊಸಗಾಲದ ಅರಿಮೆಯ ನೆಲೆಯಲ್ಲಿ ಪದಕಟ್ಟಣೆ ಇಲ್ಲವೆ ಕನ್ನಡದ್ದೇ ಆದ ಪದಗಳನ್ನು ಉಂಟು ಮಾಡುವ ಕೆಲಸ ಕೆಲವೇ ಕನ್ನಡಿಗರಿಂದ ಅಗಬೇಕಾಗಿದೆ. ಇದರಲ್ಲಿ ಎಲ್ಲ ಕನ್ನಡಿಗರೂ ಕೊಡುಗೆಯನ್ನು ನೀಡಲಾರರು. ಉಳಿದ ಕನ್ನಡಿಗರು ಆ ಪದಗಳ ಬಳಕೆದಾರರು ಆಗಲು ಮಾತ್ರ ಸಾದ್ಯ ಆದರೆ ಲಿಪಿಸುದಾರಣೆ ಎಂಬುದು ಎಲ್ಲ ಕನ್ನಡಿಗರನ್ನು ನೇರವಾಗಿ ತಲುಪುವುದು. 'ಹೊಸಬರಹ'ದಲ್ಲಿ ಬರೆಯುವಾಗ ಹೆಚ್ಚು ಮಂದಿಗೆ ಒಂದು ತೆರನಾದ ಸರಪಳಿಯಿಂದ ಬಿಡಿಸಿದಂತೆ ಆಗುವುದು. ಹಾಗಾಗಿ, ಹೆಚ್ಚಿನ ಮಂದಿಯ ಒಳಿತನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಇಲ್ಲಿ ಲಿಪಿಸುದಾರಣೆಯೇ ಮುಕ್ಯವಾಗಿ ಮತ್ತು ಬೇಗ ನಡೆಯಬೇಕಿರುವ ಕೆಲಸ ಎಂದು ನಮಗೆ ತಿಳಿಯುತ್ತದೆ. 

ಲಿಪಿ ಸುದಾರಣೆ ಎಂಬುದು ಸೊಲ್ಲರಿಮೆ ಇಲ್ಲವೆ ನುಡಿಯರಿಮೆಯಿಂದ ಬಂದ ಕಂಡುಕೊಳ್ಳುವಿಕೆಯಲ್ಲ, ಬದಲಾಗಿ ಕೂಡಣದರಿಮೆ( Sociology)ಯಿಂದ ದೊರೆತ ಕಂಡುಕೊಳ್ಳುವಿಕೆ. ಹಾಗಾಗಿ ಕೂಡಣವು (ಸಮಾಜವು) ಲಿಪಿ ಸುದಾರಣೆಯನ್ನು ಒಪ್ಪಿದರೆ ಆ ಕೂಡಣಕ್ಕೇ ಒಳಿತು.

ಶುಕ್ರವಾರ, ಅಕ್ಟೋಬರ್ 12, 2012

ಹಿಂಗೇರಿಯ ಹುಡುಗರ ಹಾಡು


ಇದು ಇಂಗ್ಲಿಶಿನ ಹಿಂಗೇರಿಯ ಹುಡುಗರ(Backstreet boys) ಹಾಡು. ಇದರ ಬೇರು ಇಂಗ್ಲಿಶ್ ಹಾಡು ಇಲ್ಲಿದೆ

ಒಂಟಿತನವೆಂದರೆ ಏನಂತ ತೋರೆನಗೆ
   ಒಡೆದ ಗುಂಡಿಗೆಗೆ ಹಲವು ಒರೆಗಳು
     ಈ ಕೆನ್ನೊಲವಿನಲ್ಲಿ ನೋಡಲಾರೆ
             ಉಸಿರಾಡಲಾರೆ
ಬಾ ನನ್ನೊಂದಿಗೆ ನಡೆ, ನೋಡೋಣ
ಇರುಳಿನ ಸೊಡರುಗಳು ಬಲುಬೇಗನೆ
  ಅಗುವವೇ ನೇಸರನ ಕದಿರುಗಳು
            ನನ್ನ ತಣಿಸಲು
ನಿನ್ನೆಲ್ಲ ಬಯಕೆಗಳು ಈಡೇರುವವು
       ಅಂತ ಅವು ಹೇಳುತಿವೆ

ಒಂಟಿತನವೆಂದರೆ ಏನಂತ ಹೇಳು ನನಗೆ
    ಈ ಅನಿಸಿನಲ್ಲೇ ನಡೆಯಲೇ?
 ನೀನಿರುವೆಡೆ ನಾನೇಕೆ ಇರಲಾರೆ
 ಎನ್ನೆದೆಯಲೇನೊ ಕಳೆದುಹೋಗಿದೆ.

ಕೊನೆಗೊಳ್ಳದೀ ಬದುಕು ಸಾಗುತ್ತಿರುವುದು
ಕಲ್ಲುಗಳ ಕಣ್ಣು ಗಮನಿಸುತ್ತಿದೆ ತಿರುವುಗಳ
ಎವೆಯಿಕ್ಕದ ನೋಡುತ್ತಿದೆ ಹೇಳದೆ ಏನನ್ನೂ
ಕೊನೆಯಿಲ್ಲದ ಒಲವಿಗೆ ತಪ್ಪರಿವಿನ ದಾರಿಗಳು
            ಅಂಕೆಯಿಲ್ಲ ಈ ಬಾಳಿಗೆ
        ನೀ ಎನ್ನ ಜೊತೆಗಿರುವಿಯಾ?
    ನಿನ್ನೆಲ್ಲ ಬಯಕೆಗಳು ಈಡೇರುವವು
           ಅಂತ ಅವು ಹೇಳುತಿವೆ

ಎನ್ನ ತನ್ಮೆಯೆದೆ ಮಯ್ ಒಪ್ಪಿಸಲು
       ಎಲ್ಲಿಗೂ ಓಡಲಾರೆ
   ಹೋಗುವುದಕ್ಕೆ ಊರಿಲ್ಲ
ನಿನಗೆ ತಿಳಿಯದ ನಾನ್ ಹೇಗೆ
          ಅನುಬವಿಸಲಿ

ಎನ್ನೆದೆಯಿಂದ ಕಳೆದುಹೋದೆ ಎಲ್ಲಿಗೆ
    ಅಲ್ಲಿಗೇಕೆ ಬರಲಾರೆ ನಾನು

ಮಂಗಳವಾರ, ಅಕ್ಟೋಬರ್ 09, 2012

ಲಿಪಿ ಸುದಾರಣೆ ಮತ್ತು ಕೂಡಣದಲ್ಲಿ ಸಾಟಿತನ (equality in Society)

                                     
ಹಿರಿಯ ನುಡಿಯರಿಗರಾದ ಡಾ| ಡಿ.ಎನ್.ಶಂಕರಬಟ್ಟರ ’ಕನ್ನಡ ಲಿಪಿ ಸುದಾರಣೆ’ಯ ಬಗ್ಗೆ ಚರ್ಚೆಗಳು ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ನುಡಿಯರಿಮೆಯ,ಸೊಲ್ಲರಿಮೆಯ ಮತ್ತು ಕೂಡಣದರಿಮೆಯ ಹಲವು ಕಾರಣಗಳನ್ನು ಕೊಟ್ಟು ಅವರು ಈಗಿರುವ ಕನ್ನಡದ ಲಿಪಿಯಲ್ಲಿರುವ ಮಹಾಪ್ರಾಣಗಳು, ಐ, ಔ, ವಿಸರ್ಗ(ಅಃ) ಮತ್ತು ಷ ಎಂಬ ಬರಿಗೆಗಳು ಬೇಕಾಗಿಲ್ಲವೆಂದು, ಅವನ್ನು ಕಯ್ಬಿಡುವುದೇ ಕನ್ನಡಕ್ಕೆ ಸರಿಯಾದ ದಾರಿ ಎಂದು ಹೇಳಿದ್ದಾರೆ. ಕೂಡಣದರಿಮೆಯ(sociology) ಕಣ್ಣಿನಿಂದ ನೋಡಿದರೆ ಇದು ಇನ್ನು ಹೆಚ್ಚು ಹೆಚ್ಚು ಸರಿಯೆನಿಸುತ್ತದೆ ಯಾಕಂದರೆ ಹೆಚ್ಚಿನ ಮಂದಿಯ ನಾಲಿಗೆಯಲ್ಲಿ ಈ ಮೇಲಿನ ಬರಿಗೆಗಳು ಬರುವುದೇ ಇಲ್ಲ. ಮಂದಿಯಾಳ್ವಿಕೆಯ ಪರ್ವಕಾಲದಲ್ಲಿರುವಾಗ ಹೆಚ್ಚಿನ ಮಂದಿಗೆ ತಕ್ಕಂತೆ ಕೂಡಣದಲ್ಲಿ ಕಲಿಕೆ, ಕೆಲಸ ಮತ್ತು ಕಟ್ಟಲೆಗಳು ಎಂಬ ಇನ್ನಿತರ ಏರ್ಪಾಟುಗಳು ಇರಬೇಕು. ಇದರಲ್ಲಿ ಬಲು ಮುಕ್ಯವಾದುದೇ ಕಲಿಕೆ. ಕಲಿಕೆ ಅಂದರೆ ನುಡಿಗಿರುವ ಬರಹವನ್ನು ಕಲಿಯುವುದು ಮತ್ತು ಆ ಬರಹದ ಮೂಲಕ ಅರಿಮೆಗಳನ್ನು ಪಡೆಯುವುದು. ಈ ಅರಿಮೆಗಳೇ ಮುಂದೆ ಮಂದಿಯ ದುಡಿಮೆಯಲ್ಲಿ ಬಳಕೆಗೆ ಬರುತ್ತದೆ. ದುಡಿಮೆಯಿಂದ ಏಳಿಗೆ ಹೊಂದಬೇಕಾದರೆ ಕಲಿಕೆಯು ಚೆನ್ನಾಗಿ ನಡೆದಿರಬೇಕು.

         ಬಾರತದ ಅರುಬರಹದ(constitution) ಮೊದಲಲ್ಲೇ ಇರುವ ಮುಕ್ಯ ಅಂಶಗಳಲ್ಲಿ ಕೂಡಣದ ಸಾಟಿತನವೂ(social equality; The preamble of India constitution contains the phrase: “Equality- social political and economic) ಒಂದು. ಕೂಡಣದಲ್ಲಿ ಸಾಟಿತನವಿದ್ದರೆ ಅದು ಆಳ್ಮೆ(politics) ಮತ್ತು ಹಣಕಾಸಿನ(economic) ನೆಲೆಗಳಲ್ಲಿ ಸಾಟಿತನ ಮೂಡುವುದಕ್ಕೆ ನೆರವಾಗುತ್ತದೆ. ಹಾಗಾಗಿ ಕೂಡಣದಲ್ಲಿಯ ಸಾಟಿತನವೇ ತಳಮಟ್ಟದ ಸಾಟಿತನ ಎಂದು ಹೇಳಲಡ್ಡಿಯಿಲ್ಲ. ಹಾಗಾದರೆ ಕೂಡಣದಲ್ಲಿ ಸಾಟಿತನವನ್ನು ತರುವುದು ಹೇಗೆ ಎಂಬ ಕೇಳ್ವಿ ಬರುವುದು ಸಹಜ. ಕೂಡಣದಲ್ಲಿ ಸಾಟಿತನ ಮೊಳಕೆಯಲ್ಲಿಯೇ ಬರುವಂತೆ ಮಾಡುವುದರಲ್ಲಿ ಮುಕ್ಯವಾದುದು ಕಲಿಕೆ ಇಲ್ಲವೆ ಕಲಿಕೆಯೇರ್ಪಾಟು. ಯಾವ ನಾಡಿನ ಕಲಿಕೆಯೇರ್ಪಾಟಿನಲ್ಲಿ ಎಲ್ಲ ಮಕ್ಕಳಿಗೆ ಒಂದೇ ತೆರನಾದ ಮತ್ತು ಒಂದೇ ಮಟ್ಟದ ಅಂದರೆ ಮೇಲುಕೀಳು ಇಲ್ಲದ ಕಲಿಕೆಯೇರ್ಪಾಟಿಗೆ ಅವಕಾಶವಿರುತ್ತದೆಯೋ ಅಲ್ಲಿ ತಾನಾಗಿಯೇ ಸಾಟಿತನ ಮೂಡುತ್ತದೆ. ಕಲಿಕೆ ಮಾಡಲು ಬರುವ ಮಕ್ಕಳು ಬೇರೆ ಬೇರೆ ಕೂಡಣದ, ಹಣಕಾಸಿನ ಹಿನ್ನಲೆಯಿಂದ ಬಂದವರಾಗಿರುತ್ತಾರೆ. ಬೇರೆ ಬೇರೆ ಪರಿಸರದಲ್ಲಿ ಬೆಳೆದ ಮಕ್ಕಳು ಬೆರೆಯುವ ತಾಣವೇ ಕಲಿಕೆಮನೆ (school). ಇಂತಹ ಕಲಿಕೆಮನೆಗಳಲ್ಲಿ ಎಲ್ಲ ಬಗೆಯ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಲಿಕೆಯೇರ್ಪಾಟು ರೂಪಿಸಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಹೇಗಿರುತ್ತದೆ, ಅವರ ಒಳನುಡಿಯು(dialect) ಎಂತಹುದು, ಅವರ ಒಳನುಡಿಗೂ ಬರಹದ ನುಡಿಗೂ(written Language) ಎಂತಹ ನಂಟುಗಳಿವೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಮಕ್ಕಳ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತಿದ್ದರೆ ಮಕ್ಕಳ ಕಲಿಕೆಯು ಚೆನ್ನಾಗಿಯು ಮತ್ತು ಬೇಗನೆ ಆಗುತ್ತದೆ, ಮಕ್ಕಳಲ್ಲಿ ಕುರಿಪು(concept)ಗಳನ್ನು ಹಿಡಿಯುವ ಮತ್ತು ಅದನ್ನು ಅರಿತುಕೊಳ್ಳುವ ಅಳವು ಹೆಚ್ಚುತ್ತದೆ. ಹಾಗಾದರೆ ಮನೆಯ ಪರಿಸರ ಮತ್ತು ಕಲಿಕೆಮನೆಯ ಪರಿಸರ ಒಂದಕ್ಕೊಂದು ಇಂಬು ಕೊಡುವಂತೆ ಮಾಡುವ ಬಗೆ ಹೇಗೆ ಎಂಬ ಕೇಳ್ವಿ ತಾನಾಗಿಯೇ ಏಳುತ್ತದೆ. ಇದಕ್ಕೆ ನುಡಿಯರಿಮೆಯ ಇಲ್ಲವೆ ಸೊಲ್ಲರಿಮೆಯ ಮೊರೆ ಹೋಗಬೇಕಾಗುತ್ತದೆ. ಈ ಅರಿಮೆಗಳಿಂದ ದೊರೆಯುವ ಕಂಡುಕೊಳ್ಳುವಿಕೆಗಳನ್ನು ಕಲಿಕೆಯಲ್ಲಿ ಮತ್ತು ಕಲಿಕೆಮನೆಗಳಲ್ಲಿ ಒರೆಗೆ ಹಚ್ಚಬಹುದು. ಹೀಗೆ ಒರೆಗೆ ಹಚ್ಚಿದಾಗ ಮಕ್ಕಳ ಕಲಿಕೆಯ ಮೇಲಾಗುವ ಒಳ್ಳೆಯ ಪರಿಣಾಮಗಳನ್ನು ಗಮನಿಸಬಹುದು. ಇಂತಹ ಒಂದು ಕಂಡುಕೊಳ್ಳುವಿಕೆಯೇ ’ಲಿಪಿ ಸುದಾರಣೆ’.

         ಲಿಪಿ ಸುದಾರಣೆ ಮಾಡುವುದರಿಂದ ಕೂಡಣದಲ್ಲಿರುವ ಹೆಚ್ಚಿನ ಮಂದಿಗೆ ಅನುಕೂಲವಾಗಲಿದೆ. ಹೆಚ್ಚಿನ ಮಂದಿಯ ಓದಿನಲ್ಲಿ(reading) ಇರದ ಬರಿಗೆಗಳನ್ನು (ಯಾವ ಬರಿಗೆಗಳು ಎಂಬುದನ್ನು ಮೇಲೆ ತಿಳಿಸಲಾಗಿದೆ) ಕಯ್ಬಿಡುವುದರಿಂದ ಕಲಿಕೆಯು ಸುಲಬಗೊಳ್ಳುತ್ತದೆ. ಮಕ್ಕಳು ಬೇಡದಿರುವ ಈ ಬರಿಗೆಗಳನ್ನು ಕಲಿಯುವ ಬದಲು ಆ ಹೊತ್ತನ್ನು ಕುರಿಪು(concept or subject) ಗಳನ್ನು ಕಲಿಯಲು ಬಳಸಿಕೊಳ್ಳಬಹುದು. ಕಲಿಕೆಯ ಬೇರುಮಟ್ಟದ ಗುರಿಯೇ ಕುರಿಪುಗಳನ್ನು ಇಲ್ಲವೆ ಅರಿಮೆಗಳನ್ನು ತಿಳಿದುಕೊಳ್ಳುವುದು. ಬರಹವೆಂಬುದು ಅರಿಮೆಯನ್ನು ಪಡೆಯಲು ಸಾದನವಶ್ಟೆ ಹಾಗಾಗಿ ಬರಹವನ್ನು ಕಲಿತುಕೊಳ್ಳಲು ಹೆಚ್ಚು ಹೊತ್ತನ್ನು ಕಳೆದಶ್ಟು ಕಲಿಕೆಯು ಕುಂಟಿತವಾಗುವುದು. ಇದರಿಂದ ತಿಳಿಯುವುದೇನೆಂದರೆ ಆದಶ್ಟು ಬರಹ(ಲಿಪಿ)ವೆಂಬುದು ಸುಲಬವಾಗಿದ್ದರೆ ಒಳ್ಳೆಯದು.

         ಲಿಪಿಸುದಾರಣೆ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೇರಿಸುವುದರಲ್ಲಿ ನೆರವಾಗುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ. ಅದರಲ್ಲೂ ಸಂಸ್ಕ್ರುತದ ಇಲ್ಲವೆ ಇಂಗ್ಲಿಶ್ ಪರಿಸರವನ್ನು ಹೊಂದಿರದ ಮಕ್ಕಳಿಗೆ ಲಿಪಿಸುದಾರಣೆ ಎಂಬುದು ಒಂದು ವರದಾನವಂತಿದೆ. ಇಂದಿಗೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಮಕ್ಕಳು ಕನ್ನಡದ ಒಯ್ಯುಗೆ(medium)ಯಲ್ಲಿಯೇ ಓದುತ್ತಿದ್ದಾರೆ. ಅಂದರೆ ಈ ಲಿಪಿಸುದಾರಣೆ ತರುವುದರಿಂದ ಹೆಚ್ಚಿನ ಕನ್ನಡ ಮಕ್ಕಳ ಕಲಿಕೆಯನ್ನು ಮೇಲೆತ್ತಬಹುದು. ಲಿಪಿ ಸುದಾರಣೆ ತರುವುದರಿಂದ ಎಲ್ಲ ಮಕ್ಕಳಿಗೂ ಅರಿಮೆಯನ್ನು ಪಡೆಯುವಲ್ಲಿ ಸಮಾನ ಅವಕಾಶವನ್ನು ಕೊಟ್ಟಂತಾಗುತ್ತದೆ. ಈಗಿರುವ ಸಿಕ್ಕಲುಬರಹವು ಆಗ ತಡೆಗೋಡೆಯಾಗಿ ನಿಲ್ಲುವುದಿಲ್ಲ. ಎಲ್ಲರಿಗೂ ಅರಿಮೆಯನ್ನು ಪಡೆಯುವ ಸಮಾನ ಅವಕಾಶವನ್ನು ನೀಡುವುದೇ ಮಂದಿಯಾಳ್ವಿಕೆಯ ಇಲ್ಲವೆ ಅರುಬರಹದ ಗುರಿಗಳಲ್ಲಿ ಮುಕ್ಯವಾದುದು. ಮಂದಿಯಾಳ್ವಿಕೆಯ ಏರ್ಪಾಟೂಗಳು ಹೆಚ್ಚು ಹೆಚ್ಚು ಬರಹದ ಮೇಲೆ ನಿಂತಿರುವ ಕಾರಣದಿಂದ, ಬರಹ ಗೊತ್ತಿಲದವರಿಗೆ ಬದುಕುವುದೇ ಕಶ್ಟವಾಗುವ ಈ ಹೊಸಗಾಲದಲ್ಲಿ ಲಿಪಿ ಸುದಾರಣೆ ಮಾಡುವುದರಿಂದ ನಿಕ್ಕಿಯಾಗಿ ಕೂಡಣದಲ್ಲಿ ಸಾಟಿತನವನ್ನು ತರಬಹುದು, ಆಗಲೆ ಮಂದಿಯಾಳ್ವಿಕೆಗೂ ಒಂದು ಬೆಲೆ ಬರುವುದು.

ಹೊಸ ಪದಗಳ ಪಟ್ಟಿ:-
ಕೂಡಣ - Society
ನುಡಿಯರಿಮೆ - Linguistics
ಸೊಲ್ಲರಿಮೆ - Grammar
ಕೂಡಣದರಿಮೆ - Sociology
ಅರುಬರಹ - Written Constitution(of a Nation)
ಒಯ್ಯುಗೆ - Medium
ಮಂದಿಯಾಳ್ವಿಕೆ - Democracy
ಆಳ್ಮೆ - Politics
ಹಣಕಾಸು - Economics
ಒಳನುಡಿ - Dialect
ಬರಹದ ನುಡಿ - Written Language
ಕುರಿಪು - Concept /Subject.
ಕಲಿಕೆಮನೆ - School 

Photo Courtesy: UWIC

ಭಾನುವಾರ, ಅಕ್ಟೋಬರ್ 07, 2012

ಮಂಟೇಸ್ವಾಮಿ ಕತೆ ಮತ್ತು ಕರ್ನಾಟಕದ ಒಗ್ಗಟ್ಟು

ಕರ್ನಾಟಕ ಜಾನಪದದ ತವರೂರು ಎಂಬುದನ್ನು ಎಲ್ಲರು ಬಲ್ಲವರೇ. ಈ ಜಾನಪದದಲ್ಲಿ ನಡೆಸುವ ಹುಡುಕಾಟಗಳು ಕರ್ನಾಟಕದ ದಿಟವಾದ ನಡವಳಿಯನ್ನು ಮತ್ತು ಕರ್ನಾಟಕದ ಹಲಮಂದಿಯ ಬದುಕಿನ ಬಗೆಯನ್ನು ಅರಿಯಲು ನೆರವೀಯಬಲ್ಲುದು. ತೆಂಕು ಕರ್ನಾಟಕದಲ್ಲಿ ಹೆಚ್ಚು ಮಂದಿಯೊಲವು ಗಳಿಸಿರುವುದು ಮಲೆಯ ಮಾದಪ್ಪ ಮತ್ತು ಮಂಟೇಸ್ವಾಮಿ ಎಂಬ ಜನಪದ ದೇವರುಗಳು. ಇವರಿಬ್ಬರು ಬುಡಕಟ್ಟಿನ ಜನಗಳು ಇರುವ ತಾವಿನಲ್ಲೇ ನೆಲೆಯೂರಿದರು ಎಂಬುದು ಗಮನಿಸಬೇಕಾದುದು. ಈ ಮಂಟೇಸ್ವಾಮಿಯವರ ಬಗ್ಗೆ ಹಲವು ಹೊತ್ತಿಗೆಗಳನ್ನು ಓದುತ್ತಿದ್ದಾಗ ಮಂಟೇಸ್ವಾಮಿಯವರು ದೂರದ ಬೀದರಿನ ಕಲ್ಯಾಣದಿಂದ ಬಂದವರೆಂದೂ ಮತ್ತು ಮಂಡ್ಯ, ಮಯ್ಸೂರು ಮತ್ತು ಚಾಮರಾಜ ನಗರ ಜಿಲ್ಲೆಗಳ ದಲಿತರು, ಉಪ್ಪಾಲಿಗರು, ಗವ್ಡರು, ಲಿಂಗಾಯತರು ಮತ್ತು ಅರಸುಗಳು ಮೊದಲಾಂತೆ ಎಲ್ಲ ಜಾತಿಯ ಜನರ ಒಲವನ್ನು ಗಳಿಸಿ ’ದರೆಗೆ ದೊಡ್ಡವರು’ ಆದರು ಎಂಬುದು ತಿಳಿಯುತ್ತದೆ. 
       ಇಶ್ಟಾದರೂ ಮಂಟೇಸ್ವಾಮಿ ಜನಪದರ ಎಣಿಕೆಯ(ಊಹೆಯ) ದೇವನೊ ಇಲ್ಲವೊ ಹಿನ್ನಡವಳಿಯಲ್ಲಿ ದಿಟವಾಗಿ ಹಾದು ಬಂದವನೊ ಎಂಬುದನ್ನು ನಿಕ್ಕಿಯಾಗಿ ಯಾರು ಹೇಳುವುದಿಲ್ಲ. ಆದರೆ ಕೆಲವರು ಈತನ ಕಾಲ ೧೬ನೇ ನೂರೇಡು ಇರಬಹುದೆಂದು ಹೇಳಿದ್ದಾರೆ. ಅದು ದಿಟವೊ ಅಲ್ಲವೊ ಅದು ಇಲ್ಲಿ ಮುಕ್ಯವಲ್ಲ ಯಾಕಂದರೆ ಅದು ಬರೀ ಜನಪದೀಯವಾಗಿದ್ದರೂ ತೆಂಕು ಕರ್ನಾಟಕದಲ್ಲಿ ಮಂಟೇಸ್ವಾಮಿಯ ಕತೆ ಹೇಳುವವರಿಗೆ ಅಂದರೆ ನೀಲಗಾರರಿಗೆ(ನೀಲಗಾರರು ಇಂತಹ ಒಂದು ಬುಡಕಟ್ಟಿನವರು - ಇವರ ಕೆಲಸವೇ ಮಂಟೇಸ್ವಾಮಿ ಕತೆಯನ್ನು ಹಾಡುವುದು) ದೂರದ ಕಲ್ಯಾಣದ ಬಗ್ಗೆ ಹೇಗೆ ಗೊತ್ತಿತ್ತು? ಅದೂ ಅಲ್ಲದೆ ಅಶ್ಟು ದೂರದ ಕಲ್ಯಾಣವನ್ನೇ ಏಕೆ ಆಯ್ದುಕೊಂಡರು ಎಂಬುದು ಒಂದು ಗಳಿಗೆ ಸೋಜಿಗದಂತೆ ತೋರುವುದು. ಆದರೆ ಕಲ್ಯಾಣ ಎಂಬುದು ಬರೀ ಒಂದು ಊರಾಗಿ ಕನ್ನಡಿಗರಲ್ಲಿ ಉಳಿದಿಲ್ಲ ಅದೊಂದು ಸಿಡಿದೇಳುವಿಕೆಯ ನಡುವಣ( centre of Revolution)ವೆಂದೇ ಕನ್ನಡದ ಕೂಡಣದಲ್ಲಿ ಅಚ್ಚೊತ್ತಾಗಿದೆ. ಹಾಗಾಗಿ ಈ ಕನ್ನಡ ನೆಲದಲ್ಲಿ ತುಳಿತಕ್ಕೊಳಗಾದವರು ಎಲ್ಲೆ ಇರಲಿ ಅವರಿಗೆ ಕಲ್ಯಾಣ ಒಂದು ಬಯಕೆಬೆಟ್ಟವಾಗಿ ಕಾಣುತ್ತದೆ. ಕಲ್ಯಾಣ ಎಂದರೆ ಬಸವಣ್ಣ, ಕಲ್ಯಾಣ ಎಂದರೆ ಶರಣರು, ಕಲ್ಯಾಣ ಎಂದರೆ ವಚನ ಚಳುವಳಿ ಎಂಬುದು ಕನ್ನಡ ನಾಡಿನ ಮಂದಿಬಗೆಯಲ್ಲಿ ಅಚ್ಚೊತ್ತಿದೆ. ಹಾಗಾಗಿ ಇಲ್ಲಿ ಜನಪದೀಯರಿಗೆ ಕಲ್ಯಾಣದೊಂದಿಗೆ ತಳುಕು ಹಾಕಿಕೊಳ್ಳುವ ಕಡುಬಯಕೆ ಕಾಡುತ್ತದೆ. ಆ ಕಡುಬಯಕೆಯ ಕಡಲಿನಿಂದ ಎದ್ದು ಬಂದ ಹೊಸ ಅಲೆಯೇ ಈ ಮಂಟೇಸ್ವಾಮಿ ಎಂಬ ಜನಪದ ದೇವರು. 
        ಚಿಕ್ಕದಾಗಿ ಹೇಳುವುದಾದರೆ ಮಂಟೇಸ್ವಾಮಿ ಮತ್ತು ಅಲ್ಲಮಪ್ರಬು ಕಲ್ಯಾಣಕ್ಕೆ ಹೋಗಿ ಅಲ್ಲಿ ಬಸವಣ್ಣನ ’ಇಶ್ಟಲಿಂಗ’ ಚಳುವಳಿಯಲ್ಲಿರುವ ಪೊಳ್ಳುತನ ಇಲ್ಲವೆ ಇಶ್ಟಲಿಂಗವೂ ಕದಲಿಕೆಯನ್ನು(ಜಂಗಮತನವನ್ನು) ಕಳೆದುಕೊಳ್ಳುತ್ತಿರುವ ಒಂದು ಆಚರಣೆ ಎಂದು ಎಚ್ಚರಿಸುವುದೇ ಈ ಕತೆಯ ಒಂದು ಮುಕ್ಯ ಅಂಶ. ಕರ್ನಾಟಕದ ಒಗ್ಗಟ್ಟಿನ ಕಣ್ಣಿನಿಂದ ಮಂಟೇಸ್ವಾಮಿಯ ಕತೆಯನ್ನು ನೋಡಿದಾಗ ಇದು ತೆಂಕು ಕರ್ನಾಟಕದ ಜನಪದಕ್ಕೂ ಮತ್ತು ಇವತ್ತಿನ ಬಡಗು ಕರ್ನಾಟಕದ ತುತ್ತತುದಿಯಲ್ಲಿರುವ ಕಲ್ಯಾಣಕ್ಕೂ ಇರುವ ನಂಟನ್ನು ಎತ್ತಿ ಹಿಡಿಯುತ್ತದೆ. ತೆಂಕು ಕರ್ನಾಟಕದ ತುದಿಯಲ್ಲಿರುವ ಮಂಡ್ಯ/ಚಾಮರಾಜನಗದಲ್ಲಿರುವ ಜನಪದ ಹಾಡುಗಾರನಿಗೆ ಬಡಗು ಕರ್ನಾಟಕದ ಕಲ್ಯಾಣದ ಬಗ್ಗೆ ಅಶ್ಟು ಮಾಹಿತಿ ತಿಳಿದದ್ದಾದರೂ ಹೇಗೆ? ಅದೂ ಆ ಕಾಲದಲ್ಲಿ ಅಂದರೆ ಅರುಹು ಮತ್ತು ಸಾರಿಗೆ ಅಶ್ಟು ಬೆಳೆದಿಲ್ಲದ ಆ ಕಾಲದಲ್ಲಿ. ಅದಕ್ಕೇ ಕಾರಣವೇ ಕನ್ನಡ ನುಡಿ ಅಂದರೆ ಕನ್ನಡ ನುಡಿಯಲ್ಲಿ ಹೇಳಲಾದ ’ವಚನಗಳು’(ಆಮೇಲೆ ಇದನ್ನು ಬರಹ ರೂಪಕ್ಕೆ ಇಳಿಸಲಾಯಿತು)ಎಂದರ್ತ. ಹೇಗೆ ಕೂಡಣದ(ಸಮಾಜದ) ಕಟ್ಟ ಕಡೆಯ ಆಳಿಗೂ ವಚನಗಳು ಮುಟ್ಟಿತ್ತು ಎಂಬುದನ್ನು ಇದು ತೋರಿಸುತ್ತದೆ. ಅಲ್ಲದೆ ಈ ಕನ್ನಡದ ವಚನಗಳು ದೂರದ ಬೀದರಿನ ಕಲ್ಯಾಣವನ್ನು ಮತ್ತು ಚಾಮರಾಜನಗರದ ಕೊಳ್ಳೇಗಾಲವನ್ನು ಹತ್ತಿರ ತರುವ ಇಲ್ಲವೆ ಬೆಸೆಯುವ ಕೆಲಸವನ್ನು ಮಾಡಿತು ಎಂಬುದನ್ನು ಇದರಿಂದ ತಿಳಿಯಬಹುದು. ಹೇಗೆ ಒಂದು ನುಡಿಯು, ನೆಲದಳತೆಯಲ್ಲಿ ದೂರ ದೂರ ಇದ್ದ ಊರುಗಳನ್ನು ಮತ್ತು ಆ ಊರುಗಳ ಜನರನ್ನು ನಡವಳಿಯ ನೆಲೆಯಲಿ ಒಂದುಗೂಡಿಸುತ್ತದೆ ಎಂಬುದು ಇದರಿಂದ ತಿಳಿಯುತ್ತದೆ. ನುಡಿಗೂ ಮತ್ತು ನಡವಳಿಗೂ ಒಂದಕ್ಕೊಂದು ಬಿಡಿಸಿಕೊಳ್ಳಲಾರದಶ್ಟು ಹೆಣೆದುಕೊಂಡಿವೆ ಎಂಬ ಈ ಮಾತನ್ನು ಮಂಟೇಸ್ವಾಮಿಯ ಕತೆಯು ಒತ್ತಿ ಒತ್ತಿ ಹೇಳಿ ನಮಗೆ ಮನದಟ್ಟು ಮಾಡಿಸುತ್ತದೆ.

ಗುರುವಾರ, ಸೆಪ್ಟೆಂಬರ್ 20, 2012

Number plates, Majority and Democracy


                                                  (Photo Courtesy: Hariprasad Holla)
There was a discussion about the Kannada Number Plates for the vehicles in Karnataka.There were some arguments against it and for it. This made me to think further and deeper.

     Today by and large we see 'English only' number plates in Karnataka and very few Kannada only number plates and very very few Kannada and English number plates. However Kannada is the majority Language of Karnataka and English is understood by only small number of people. There was an argument that Kannada number plates doesn't make practical sense. However the question is, for whome it impractical is unanswered; for what percentage of people its impractical its unanswered.
All over the world we have democracy built *primarily* based on welfare of Majority. One of the fundamental philosohpical principle of true democracy is to facilitate
'maximum comfort for maximum number of people'.
     This should be guiding force for any nation or state in pursuit of true democracy. So coming back to Karnataka, Kannada is the preferred language of the majority of the people in Karnataka, becuase people feel comfort in that langauge. Similarly Tamil in Tamil Nadu and Telugu in Andhra Pradesh and so on. So if we say we are true democracy we can't dismember/ignore/discount the majority and impose minority language on the majority.
     Kannadigas living in Karnataka are the natives(permanent)of this state and the majority of them who are born here, who grow up here and who die here. Minority immigrants will definitely miss one of these that is to say either they wouldn't be born here or they wouldn't grow here or they wouldn't die here. So, It does a lot of practical sense to build the system, be it political, economical for the natives i.e Kannadigas in Karnataka , Tamils in Tamil Naadu and Telugus in Andhra Pradesh and so on. It would be foolish/impractical if we try to build the systems for the minority immigrants because there is always an element of 'uncertainity' attached with immigrants. So one cannot waste the systems on minority immigrants. So more practical scenario would be for the immigrants to mingle with majority natives. Its only in the best interest of immigrants ot learn the language of natives because immigrants are in minority for the foreseeable future in Karnataka.

    It would be disastrous to see a Kannadigas becoming minority in Karnataka and Tamils becoming minority in Tamil Naadu and so on. It defeats the whole purpose of the carving out 'Linguistic States' during the formation fo Indian Nation. The idea behind carving out the Linguistic States would be not just to preserve the Linguistic, Cultural diversity of India but also even strengthen it because that is only the way to go forward. That is the true democracy. That is only the way to uphold the true humanity and humanitarian values.

   Not allowing Kannada Number(name) Plates in Karnataka, Not allowing Tamil number(name) plates in Tamil Nadu and Not allowing Telugu number(name) plates in Andhra Pradesh is truely 'Undemoratic' and it is fundamentally against the spirit and intentions of democracy and democratic values. 

ಶನಿವಾರ, ಸೆಪ್ಟೆಂಬರ್ 15, 2012

ಆಡುನುಡಿಯ ಬೇರ್ಮೆಗಳು

ಈ ನಂಜನಗೂಡು, ಗುಂಡ್ಲುಪೇಟೆ, ಚಾಮರಾಜನಗರ, ಮಳವಳ್ಳಿ, ಮದ್ದೂರು ತಾಲ್ಲೂಕಿನ ಹಳ್ಳಿಗಳಲ್ಲಿ ಪದದ ಕೊನೆಯಲ್ಲಿ ಬರುವ "ಳ’ ಕಾರ ಬಿದ್ದು ಹೋಗಿದೆ.

ತಿಂಗಳು => ತಿಂಗ ( ಇತ್ತೀಚೆಗೆ ಕಂಡುಕೊಂಡಿದ್ದು ಇದೇ ರೀತಿ ದೂರದ ’ಕೊಡಗು ನುಡಿಯಲ್ಲೂ ತಿಂಗ ಅನ್ನುತ್ತಾರೆ ಅಂತ DED ನೋಡಿದ ಮೇಲೆ ತಿಳಿಯಿತು - Koḍ. tiŋga month.)

ಅವಳು => ಅವ ( ಹಾಗಾಗಿ ಅವನು ಎಂಬುದು ’ಅಂವ’/ಅಮ ಆಗುತ್ತದೆ)
ಬಂದಳು => ಬಂದ ( ಹಾಗಾಗಿ ಬಂದನು ಎಂಬುದು ಬಂದಂ, ಇಲ್ಲಿ ’ದಂ’ ಒಂದು ದ+ವಿಚಿತ್ರ ಮೂಗುಲಿ)
ಮಗಳು => ಮಗ ( ಹಾಗಾಗಿ ಮಗ ಎಂಬುದು ಮಗಂ, ಇಲ್ಲಿ ’ಗಂ’ ಎಂಬುದು ಗ+ವಿಚಿತ್ರ ಮೂಗುಲಿ)
ಹೋದಳು => ವಾದ ( ಹಾಗಾಗಿ ಹೋದನು ಎಂಬುದು ವಾದಂ, ಇಲ್ಲಿ ’ದಂ’ ಎಂಬುದು ದ+ವಿಚಿತ್ರ ಮೂಗುಲಿ)

ಆದರೆ ಇದು ಕೆಲವು ಕಡೆ ಆಗಿಲ್ಲ. ಅಂದರೆ ’ಳ’ಕಾರದ ಮುಂಚೆ ’ರ’ಕಾರ ಬಂದಿದ್ದರೆ ಅಲ್ಲಿ ’ರ’ಕಾರವು ಬಿದ್ದು ಹೋಗಿ ಇಮ್ಮಡಿ "ಳ"ಕಾರವಾಗಿದೆ

ಹೊರಳು => ವೊಳ್ಳು/ಒಳ್ಳು ( ಹೊರಳು ನಾಮಪದ (<ದೇ. ಪೊರಳು) ತಿರುವು, ಬಾಗು ಬದಲಾವಣೆ ಒಂದು ಬಗೆಯ ತಿರುಗುವ ಯಂತ್ರ)
ನೆರಳು => ನೆಳ್ಳು
ಕರಳು => ಕಳ್ಳು
ಉರುಳು => ಉಳ್ಳು
ತರಳು => ತಳ್ಳು
ಅರಳು => ಅಳ್ಳು/ಅಳ್
ಬೆರಳು => ಬೆಳ್ಳು

ಭಾನುವಾರ, ಸೆಪ್ಟೆಂಬರ್ 02, 2012

ಆಟದ ಒರೆಗಳು

ಚಿಕ್ಕವರಿದ್ದಾಗ ಹಲವು ಆಟಗಳನ್ನು ಆಡುತ್ತಿದ್ದಾಗ ಬಳಸುತ್ತಿದ್ದ ಒರೆಗಳು:-

೧. ಪೇಂದ (< ಪೇರಿಸಿಂದ) - ಸಮತಟ್ಟಾದ ನೆಲದ(ಮಣ್ಣಿನ) ಮೇಲೆ ಒಂದು ನಾಲ್ವದಿ ಆಕಾರದಲ್ಲಿ ಒಂದು ’ಪೇಂದ’ವನ್ನು ಬರೆದು ಅದರ ನಡುವಿನಲ್ಲಿ ಪೇರಿಸಿದ ಹಾಗೆ ಗೋಲಿಗಳನ್ನು ಇರಿಸಿಬೇಕು. ಇವೆಲ್ಲ ಸೇರಿ ಒಟ್ಟಿನಲ್ಲಿ ಅದನ್ನು ’ಪೇಂದ’ ಎನ್ನಲಾಗುತ್ತದೆ. ಪಾಪೆ ನೋಡಿ.

೨. ತೀಕು - ಗೋಲಿ ಆಟದಲ್ಲಿ ಸೋತವರು ಒಂದು ಕಯ್ಯನ್ನು ಬೆನ್ನ ಮೇಲೆ ಹಾಕಿ ಇನ್ನೊಂದು ಕಯ್ಯನ್ನು ಮುಶ್ಟಿಯಂತೆ ಮಾಡಿ ನೆಲದ ಮೇಲಿರುವ ಗೋಲಿಯನ್ನು ತೀಡಬೇಕು/ತಳ್ಳಬೇಕು.ಇದನ್ನೇ ’ತೀಕು’/ತೀಕಿಸುವುದು ಎನ್ನುತ್ತಾರೆ.

೩. ತುದಾಂಡಲ್(< ತುಪ್+ದಾಂಡಲ್??) - ದಾಂಡ್ಲನ್ನು ಕೆಳಗೆ ಹಾಕಿ ಅಳೆಯುವಾಗ ಹೇಳುವ ಒರೆ.

೪. ಉಡೀಸ್(< ಉಡಾಯಿಸು= ಹಾರಿಸು= ಚದುರಿಸು) - ಬಳಕೆ : ಕಾಲಿ ಪೇಂದ ಉಡೀಸ್ !!!! - ಮೇಲೆ ಹೇಳಿದ ಪೇಂದದಲ್ಲಿ ಇರುವ ಗೋಲಿಗಳನ್ನು ಚದುರಿಸಿ ಆ ನಾಲ್ವದಿಯ ಆಚೆಗೆ ಅಟ್ಟಿಸಿದಾಗ ಹೇಳುವ ಒರೆ.

೫. ಗಿಲ್ಲಿ(<ಕಿರುಲಿ) = ಚಿನ್ನಿ (<ಚಿಕ್ಕ) - ಬಳಕೆ: ಗಿಲ್ಲಿ-ದಾಂಡು ಆಡೋಣ ಬಾ

೬. ಗುನ್ನ (<ಗುಳಿ) - ಬಳಕೆ: ಅವನ ಬುಗುರಿಗೆ ಚೆನ್ನಾಗಿ ಗುನ್ನ ಹೊಡೆದೆವು

೭. ಇಂತಿ ( < ಹಿಂತಿ= ಹಿಂದಿರುವ ಗೋಲಿ) - ಬಳಕೆ: ವೊಡೆ ಇಂತಿ !

೮. ಮುಂತಿ( < ಮುಂತಿ= ಮುಂದಿರುವ ಗೋಲಿ) - ಬಳಕೆ: ವೊಡೆ ಮುಂತಿ!

ಬುಧವಾರ, ಆಗಸ್ಟ್ 15, 2012

ಕನ್ನಡದ ತೆರೆಯುಲಿಗಳ ಗುಂಪಿಸುವಿಕೆ


ಕನ್ನಡದ ತೆರೆಯುಲಿಗಳನ್ನು ಹೀಗೆ ಗುಂಪಿಸಬಹುದು:-
ಗುಂಪು: ಇ, ಎ(ಗಿಡ್ಡ); ಈ, ಏ (ಉದ್ದ)
ಗುಂಪು : ಅ, ಉ, ಒ(ಗಿಡ್ಡ); ಆ, ಊ, ಓ(ಉದ್ದ)

ಹೀಗೆ ಗುಂಪಿಸಲು ದೂಸರೇನೆಂದರೆ ಸೇರಿಕೆಯಾಗುವಾಗ ಅವುಗಳಗಿರುವ ಗುಣ.

ಯ ಗುಂಪು:-
ಸೇರಿಕೆಯಾಗುವೆಡೆ ಇ,ಎ ತೆರೆಯುಲಿಗಳು ’’ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ಬಂಡಿ+ಅಲ್ಲಿ = ಬಂಡಿಲ್ಲಿ (ಬಂಡಿವಲ್ಲಿ ಆಗಲ್ಲ) - ಇಲ್ಲಿ ’ಬಂಡಿ’ ಎಂಬುದನ್ನು ’ಬಂಡ್+ಇ’ ಎಂದು ಬಿಡಿಸಿದಾಗ ಅಲ್ಲಿರುವ ’ಇ’ ಕಾರ ಕಾಣಿಸುತ್ತದೆ.
ಬಂಡೆ+ಅನ್ನು = ಬಂಡೆನ್ನು ( ಬಂಡೆವನ್ನು ಆಗಲ್ಲ) - ಇಲ್ಲಿ ’ಬಂಡೆ’ ಎಂಬುದನ್ನು ’ಬಂಡ್+ಎ’ ಎಂದು ಬಿಡಿಸಿದಾಗ ಅಲ್ಲಿರುವ ’ಎ’ಕಾರ ಕಾಣಿಸುತ್ತದೆ.

ವ ಗುಂಪು:-
ಸೇರಿಕೆಯಾಗುವೆಡೆ ಅ,ಉ ತೆರೆಯುಲಿಗಳು ಕಾರಕ್ಕೆ ತಮ್ಮ ಒಲವನ್ನು ತೋರಿಸುತ್ತವೆ
ದನ+ಅನ್ನು = ದನವನ್ನು (ದನಯನ್ನು ಆಗಲ್ಲ) - ಇಲ್ಲಿ ದನಎಂಬುದನ್ನು ದನ್+ಎಂದು ಬಿಡಿಸಿದಾಗ ಅಲ್ಲಿರುವ ಕಾರ ಕಾಣಿಸುತ್ತದೆ.
ಕರು+ಅನ್ನು = ಕರುವನ್ನು (ಕರುಯನ್ನು ಆಗಲ್ಲ) - ಇಲ್ಲಿ ಬಂಡೆಎಂಬುದನ್ನು ಕರ್+ಎಂದು ಬಿಡಿಸಿದಾಗ ಅಲ್ಲಿರುವ ಕಾರ ಕಾಣಿಸುತ್ತದೆ.
ಕನ್ನಡದಲ್ಲಿ ಉದ್ದ ತೆರೆಯುಲಿಗಳಿಂದ ಕೊನೆಯಾಗುವ ಪದಗಳು ಕಡಿಮೆ ಎನ್ನಬಹುದು. ಇದ್ದರು ಅವುಗಳೊಂದಿಗೆ ಬೇರೆ ಪದಗಳು ಸೇರಿಕೆಯಾಗದೆ ಹಾಗೆ ಉಳಿಯುತ್ತವೆ. ಅದಕ್ಕಾಗಿ ಇಲ್ಲಿ ಅಂತಹ ಎತ್ತುಗೆಗಳನ್ನು ಕೊಟ್ಟಿಲ್ಲ/ಕೊಡಲಾಗುವುದಿಲ್ಲ.

ಇನ್ನೊ ಒ ಇಲ್ಲವೆ ಓ ಕಾರದಲ್ಲಿ ಕೊನೆಗೊಳ್ಳುವ ಪದಗಳು ಕಡಿಮೆ. ಆದರೆ ನಾವು ಆಡುನುಡಿಯ ಒಲವನ್ನು ಇಲ್ಲಿ ಗಮನಿಸಬಹುದು. ’ಒ’ ಇಲ್ಲವೆ ’ಓ’ಕಾರಗಳು ಕೂಡ ಆಡುಮಾತಿನಲ್ಲಿ ’ವ’ಕಾರಕ್ಕೆ ಮಾರ್ಪಾಟಾಗುವ ಒಲವನ್ನು ತೋರಿಸುತ್ತವೆ.
ಒತ್ತು <-> ವತ್ತು
ಒಪ್ಪು <-> ವಪ್ಪು
ಒರಟ <-> ವರಟ
ಓಲಗ <-> ವಾಲಗ
ಓಟ <-> ವಾಟ
ಓಲೆ <-> ವಾಲೆ

ಶುಕ್ರವಾರ, ಆಗಸ್ಟ್ 10, 2012

ಎರಡನೇ ಉಲಿಕಂತೆಯ ತೆರೆಯುಲಿಯ ಬಗ್ಗೆ



ಕನ್ನಡದ ಮೂರು ಬರಿಗೆಗಳ/ಉಲಿಕಂತೆಗಳ ಪದಗಳಲ್ಲಿ ಎರಡನೆ ಉಲಿಕಂತೆಯಲ್ಲಿರುವ ತೆರೆಯುಲಿಯು ಅಶ್ಟು ಮುಕ್ಯವಲ್ಲ ಅಂದರೆ

ಬಟ್ಟಲು = ಬಟ್ಟಿಲು ( ಟ್+ಟ್+ಇ)
ಮೆಟ್ಟಿಲು = ಮೆಟ್ಟಲು ( ಟ್+ಟ್+ಇ)
ಬಾಗಿಲು = ಬಾಗಲು ( ಗ್+ಇ)

ಕಾರಣ: ದಿಟವಾಗಲೂ ಈ ಎರಡನೇ ಬರಿಗೆ/ಉಲಿಕಂತೆಯಲ್ಲಿರುವ ತೆರೆಯುಲಿಯನ್ನು ನಾವು ಆಡುಮಾತಿನಲ್ಲಿ ಉಲಿಯುವುದೇ ಇಲ್ಲ.

ಬಟ್-ಲು = ಬಟ್ಲು
ಬಾಗ್-ಲು =ಬಾಗ್ಲು
ಊದ್-ಲು = ಊದ್ಲು

ಕೆಲವು ಕಡೆ ಎರಡನೇ ಉಲಿಕಂತೆಯನ್ನೇ(ತೆರೆಯುಲಿ+ಮುಚ್ಚುಲಿ) ಉಲಿಯುವುದೇ ಇಲ್ಲ.

'ರ್+ಅ' ಬಿದ್ದುಹೋಗಿದೆ.

ನೆರಳು = ನೆಳ್ಳು
ಹೊರಳು = ವೊಳ್ಳು
ನರಳು = ನಳ್ಳು
ಕರುಳು = ಕಳ್ಳು

ಹೀಗೆ ಇನ್ನು ಬೇರೆ ಬೇರೆ ಎತ್ತುಗೆಗಳು
ಮೆಂತೆಯ => ಮೆಂತ್ಯ

ತಿರುಳು:-
ಎರಡನೇ ಉಲಿಕಂತೆಯ ತೆರೆಯುಲಿಯೇ ಮಾತಿನಲ್ಲಿ ಬಿದ್ದು ಹೋಗುವಾಗ ಯಾವ ತೆರೆಯುಲಿ
ಅಲ್ಲಿ ಇದ್ದರೇನು? ಹಾಗಾಗಿಯೇ ಎರಡನೇ ಉಲಿಕಂತೆಯಲ್ಲಿರುವ ತೆರೆಯುಲಿ ಅಶ್ಟು ಅರಿದು ಅಲ್ಲ.

ಗಮನಿಸಿ: ಕೆಲವು ಕಡೆ ಮುಚ್ಚುಲಿಯು ಮಾತಿನಲ್ಲಿ ಬಿದ್ದು ಹೋಗುತ್ತದೆ